Author: roovari

ಮುಂಡಗೋಡ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮುಂಡಗೋಡ ಮತ್ತು ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.) ರಾಜ್ಯ ಸಮಿತಿ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 13 ಜುಲೈ 2025ರಂದು ಮಧ್ಯಾಹ್ನ 2-00 ಗಂಟೆಗೆ ಮುಂಡಗೋಡ ನಿವೃತ್ತ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಗೋಡ ಕ.ಸಾ.ಪ. ಇದರ ಅಧ್ಯಕ್ಷರಾದ ವಸಂತ ಕೊಣಸಾಲಿ ಇವರು ವಹಿಸಲಿದ್ದು, ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ರಾಜ್ಯಾಧ್ಯಕ್ಷರಾದ ಎಸ್.ಡಿ. ಮುಡೆಣ್ಣವರ ಇವರ ಉದ್ಘಾಟಿಸಲಿದ್ದಾರೆ. ‘ಪತ್ರಿಕಾ ರಂಗ ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ಪ್ರಾಧ್ಯಾಪಕರಾದ ಡಾ. ಮಂಜಣ್ಣ ಜಂಗವಾಡ ಇವರು ಉಪನ್ಯಾಸ ನೀಡಲಿದ್ದು, ಎಸ್.ಕೆ. ಬೋರ್ಕರ, ಎಸ್.ಬಿ. ಹೂಗಾರ ಮತ್ತು ಶ್ರೀಮತಿ ನಂದಾ ನರಗುಂದ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Read More

ಕುಶಾಲನಗರ : ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಪುಣ್ಣಿಮೆ ಪೂಜಾ ಕಾರ್ಯಕ್ರಮ, ಶಿವಾನುಭವ ಗೋಷ್ಠಿ ಮತ್ತು ಫ.ಗು‌. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮವು ದಿನಾಂಕ 10 ಜುಲೈ 2025 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ “ಕಾಯಕ ಮಹತ್ವ, ತ್ರಿವಿಧ ದಾಸೋಹ ಪರಿಕಲ್ಪನೆ, ಸಾಮಾಜಿಕ ಸಮಾನತೆ, ಸ್ತ್ರೀ ಸಮಾನತೆ, ದಯೆ ಮತ್ತು ಧರ್ಮದ ಪರಿಕಲ್ಪನೆ, ಅನುಭಾವ, ಸಮ ಸಮಾಜದ ನಿರ್ಮಾಣ ಮೊದಲಾದ ವಿಶ್ವ ಮೌಲಿಕ ಆಶಯಗಳನ್ನು ಶರಣರ ವಚನಗಳಲ್ಲಿ ಕಾಣಬಹುದಾಗಿದೆ. ಬಸವಾದಿ ಶರಣರು ನಡೆ-ನುಡಿ ಒಂದಾಗಿಸಿಕೊಂಡು ಬದುಕಿದವರು. ಕ್ರಿ.ಶ. ಹನ್ನೆರಡನೇ ಶತಮಾನದಲ್ಲಿಯೇ ಕರ್ಮಠತನದ ಸಾಮಾಜಿಕ ವ್ಯವಸ್ಥೆಯ ವರ್ಗ-ಜಾತಿ-ಲಿಂಗ ತಾರತಮ್ಯವನ್ನು ನೇರವಾಗಿ ವಿರೋಧಿಸಿ ಸಮ ಸಮಾಜದ ಮಾನವೀಯ ಮೌಲ್ಯಗಳನ್ನು ಇಡೀ ಜಗತ್ತಿಗೆ ಸಾರಿದರು. ಜನಪರವಾದ ಮತ್ತು ಲೋಕಕಲ್ಯಾಣಕರವಾದ ಚಿಂತನೆಗಳು ಬಸವಾದಿ ಶರಣರ ವಚನಗಳಲ್ಲಿ ಕಂಡುಬರುತ್ತದೆ. ವಚನ ಪಿತಾಮಹ, ವಚನ ಕಮ್ಮಟ, ರಾವ್ ಬಹದ್ದೂರ್, ರಾವ್ ಸಾಹೇಬ್ ಎಂದೇ ಪ್ರಸಿದ್ಧರಾಗಿದ್ದ ಫ.ಗು. ಹಳಕಟ್ಟಿಯವರು ತಮ್ಮ…

Read More

ಶೇವಾಳಿ : ಸಪ್ತಸ್ವರ ಸೇವಾ ಸಂಸ್ಥೆ (ರಿ.) ಶೇವಾಳಿ ಇದರ ವತಿಯಿಂದ ‘ಸುಗ್ಗಿ ಹುಗ್ಗಿ 2025’ ಆನ್ಲೈನ್ ಜಾನಪದ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಿಯಮಗಳು : * ಜಾನಪದ ಹಾಡುಗಳನ್ನೇ ಹಾಡಿ ವಿಡಿಯೋ ಮಾಡಿ ಕಳುಹಿಸಬೇಕು. * ಜಾನಪದ ವಾದ್ಯಗಳನ್ನು ನೀವೇ ಬಳಸಿ ಹಾಡಬಹುದು. * ವಿಡಿಯೋವನ್ನು 8123327419 ಈ ನಂಬರಿಗೆ ವಾಟ್ಸಪ್ ಮುಖಾಂತರ ಕಳುಹಿಸುವುದು. * ವಿಡಿಯೋ ಪ್ರಾರಂಭದಲ್ಲಿ ನಿಮ್ಮ ಹೆಸರು ಮತ್ತು ಊರು ಹೇಳಬೇಕು ಮತ್ತು ಕನ್ನಡದಲ್ಲಿ ಮಾತನಾಡಬೇಕು. * ವಿಡಿಯೋ ಹೊರತಾಗಿ ಅಡಿಯೋಗಳಿಗೆ ಅವಕಾಶವಿಲ್ಲ. * 2ರಿಂದ 3 ನಿಮಿಷ ಕಾಲಾವಕಾಶವಿದೆ. * ಮೊಬೈಲನ್ನು ಅಡ್ಡ ಮಾಡಿ ವಿಡಿಯೋ ಮಾಡಬೇಕು. * ದಿನಾಂಕ 28 ಜುಲೈ 2025ರಿಂದ ವಿಡಿಯೋ ಸ್ವೀಕಾರ ಮಾಡುತ್ತೇವೆ. * ವಯಸ್ಸಿನ ಮಿತಿ ಇರುವುದಿಲ್ಲ. * ವಿಡಿಯೋ ಉತ್ತಮವಾಗಿರಬೇಕು. * ವಿಡಿಯೋ ಕಳುಹಿಸಲು ಕೊನೆಯ ದಿನಾಂಕ 03 ಆಗಸ್ಟ್ 2025 ಮಧ್ಯಾಹ್ನ 12-00 ಗಂಟೆಯವರೆಗೆ. * ಇಬ್ಬರು ನಿರ್ಣಾಯಕರು ಇರುತ್ತಾರೆ. * 25% ವೀವ್ಸ್,…

Read More

ಬೆಂಗಳೂರು : ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ ಇದರ ವತಿಯಿಂದ ‘ಕನ್ನಡ ಸಾಹಿತ್ಯ ಸಂಭ್ರಮ 2025’ ಸಮಾರಂಭವನ್ನು ದಿನಾಂಕ 13 ಜುಲೈ 2025ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ಬನಶಂಕರಿಯಲ್ಲಿರುವ ಜೆ.ಎಸ್.ಎಸ್. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಕಾವ್ಯ ವಾಚನ, ಉಪನ್ಯಾಸ, ಕೃತಿ ಬಿಡುಗಡೆ, ವಿವಿಧ ಕ್ಷೇತ್ರದ ಸಾಧಕರಿಗೆ ‘ಸ್ಟಾರ್ ಆಫ್ ಕರ್ಣಾಟಕ 2025’, ಹಿರಿಯ ಶಿಕ್ಷಕರಿಗೆ ಸದ್ಗುರು ದ್ರೋಣಾಚಾರ್ಯ ಮತ್ತು 30 ಸರಕಾರಿ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

Read More

ತುಮಕೂರು : ತುಮಕೂರಿನ ವೀಚಿ ಸಾಹಿತ್ಯ ಪ್ರತಿಷ್ಠಾನ ಇದರ ವತಿಯಿಂದ ‘ವೀಚಿ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 13 ಜುಲೈ 2025ರಂದು ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ಆರ್.ಟಿ. ನಗರ ರವೀಂದ್ರ ಕಲಾನಿಕೇತನದಲ್ಲಿ ಆಯೋಜಿಸಲಾಗಿದೆ. ವೀಚಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಸ್. ನಾಗಣ್ಣ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮಾನ್ಯ ಸಹಕರ ಸಚಿವರಾದ ಕೆ.ಎನ್. ರಾಜಣ್ಣ ಇವರು ಉದ್ಘಾಟನೆ ಮಾಡಲಿದ್ದಾರೆ. ಶ್ರೀಮತಿ ಸುನಂದಾ ಜಯರಾಂ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಂಸ್ಕೃತಿ ಚಿಂತಕರಾದ ಪ್ರೊ. ಎಸ್.ಜಿ. ಸಿದ್ಧ ರಾಮಯ್ಯ ಇವರು ಆಶಯ ನುಡಿ ಮತ್ತು ಸಾಹಿತಿ ಡಾ. ಬಸವರಾಜ ಸಾದರ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಕತೆಗಾರ ತುಂಬಾಡಿ ರಾಮಯ್ಯ ಮತ್ತು ರಂಗಕರ್ಮಿ ಡಾ. ಬೇಲೂರು ರಘುನಂದನ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀಮತಿ ಪಿ. ಚಂದ್ರಿಕಾ ಇವರ ‘ಮೂವರು ಮಹಮದರು’ ಎಂಬ ಕೃತಿಗೆ ‘ವೀಚಿ ಸಾಹಿತ್ಯ ಪ್ರಶಸ್ತಿ’, ಡಾ. ಗೋವಿಂದರಾಜು ಎಂ. ಕಲ್ಲೂರು ಇವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’…

Read More

ಬೆಂಗಳೂರು : ವಿಜ್ಞಾನ, ರಂಗಭೂಮಿ ಮತ್ತು ಶಿಕ್ಷಣದಲ್ಲಿ ಆಸಕ್ತಿ ಇರುವ ಶಿಕ್ಷಕರಿಗೆ ಉತ್ತಮ ಅವಕಾಶ. ಎನ್.ಸಿ.ಬಿ.ಎಸ್. ಆರ್ಕೈವ್ಸ್ ನಲ್ಲಿರುವ ವಿಜ್ಞಾನ ಸಂಬಂಧಿ ಪತ್ರಗಳು, ಕ್ಷೇತ್ರ ಟಿಪ್ಪಣಿಗಳು ಹಾಗೂ ಮೌಖಿಕ ಇತಿಹಾಸದ ಸಂಗ್ರಹವನ್ನು ಆಧರಿಸಿ ನಾಟಕ ರಚಿಸುವ ವಿಶಿಷ್ಟ ಕಮ್ಮಟವಿದು‌. ಆನ್ಲೈನ್ ಮತ್ತು ಮುಖಾಮುಖಿ ಸಂವಾದದ ಮೂಲಕ ಮೂರು ವಾರಗಳ ಕಾಲ ಈ ಕಮ್ಮಟವನ್ನು ನಡೆಸಲಾಗುವುದು. ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಈ ಅವಕಾಶ‌ವಿದೆ‌. ರಂಗಭೂಮಿಯ ಅನುಭವವಿರುವ ಶಿಕ್ಷಕರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಜುಲೈ 2025. ಅರ್ಜಿ ಸಲ್ಲಿಸಲು ಲಿಂಕ್ : https://docs.google.com/forms/d/1qR4rzHaP27bqDVkv78Z-gCA3vCs2u-0aMFakLC8ohiY/edit ಹೆಚ್ಚಿನ ಮಾಹಿತಿಗೆ : https://archives.ncbs.res.in/node/1007

Read More

ಕುಂದಾಪುರ : ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಉಡುಪಿ ವಲಯ ಸಹಯೋಗದಲ್ಲಿ ಹಿರಿಯಡ್ಕದಲ್ಲಿ ದಿನಾಂಕ 28 ಜೂನ್ 2025ರಂದು ನಡೆದ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಗಂಗೊಳ್ಳಿಯ ಸ್ಯಾಕ್ಸೋಫೋನ್ ಮತ್ತು ಚಿತ್ರಕಲಾ ಬಾಲ ಪ್ರತಿಭೆ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಸಂಜಿತ್ ಎಂ. ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಜಮ್ಮು ಕಾಶ್ಮೀರ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪ್ರಸಾದ್ ಐ.ಎ.ಎಸ್., ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಮಂಜುನಾಥ ಭಟ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಕೇಶ್ ಸಿ., ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಅಶೋಕ್‌ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ, ಕೃಷಿ ಅರ್ಥಶಾಸ್ತ್ರಜ್ಞ ಎನ್‌.ಎಸ್. ಶೆಟ್ಟಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಯೋಗ ನರಸಿಂಹ ಸ್ವಾಮಿ, ಶಾಲಾ ಶಿಕ್ಷಣ ಇಲಾಖೆಯ ನಾಗರಾಜ್‌, ಎಸ್‌.ಡಿ.ಎಂ.ಸಿ.…

Read More

ಸಂಗೀತವು ಒಂದು ಅರ್ಥವಾಗುವ ಭಾಷೆ. ಇದರ ಆಳವನ್ನು ತಿಳಿಯಲು ಒಂದು ಜನ್ಮ ಸಾಲದು. ತಿಳಿಯುವುದು ಅಷ್ಟು ಸುಲಭವೂ ಅಲ್ಲ. ಮನಸ್ಸಿನ ನೋವನ್ನು ದೂರಮಾಡಿ ಮನಸ್ಸಿಗೆ ಮುದ ನೀಡುವ ಶಕ್ತಿ ಇದಕ್ಕಿದೆ. ಜಾತಿ, ಮತ, ಭೇದಭಾವ ಇಲ್ಲದೆ ಅನಾದಿಕಾಲದಿಂದಲೂ ಬತ್ತದೇ ಹರಿದ ಒಂದು ಮಹಾನದಿ ಸಂಗೀತ. ಈ ಮಹಾನದಿಯಲ್ಲಿ ಈಜಿ ಸಾಧನೆ ಮಾಡಿದವರು ಅನೇಕರು. ಇಂಥವರಲ್ಲಿ ನೀಲಮ್ಮ ಕಡಾಂಬಿಯವರು ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮಹಿಳಾ ಸಂಗೀತಗಾರರಲ್ಲಿ ಒಬ್ಬರು. ಸಂಗೀತ ಪರಂಪರೆಯಿಂದ ಬಂದ ನೀಲಮ್ಮ ಕಡಾಂಬಿಯವರ ತಂದೆ ವಿದ್ವಾನ್ ವೆಂಕಟಾಚಾರ್ಯರು ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ವೀಣಾ ವಿದ್ವಾಂಸರಾಗಿದ್ದರು. ತಾಯಿಯೂ ಉತ್ತಮ ವೀಣಾ ವಾದಕಿ, ಸಹೋದರ ಎಂ. ವಿ. ಶ್ರೀನಿವಾಸ್ ಅಯ್ಯಂಗಾರ್ ಅವರೂ ಸಂಗೀತ ವಿದ್ವಾಂಸರು. ನೀಲಮ್ಮನವರಿಗೆ ತಂದೆ ಮತ್ತು ಅಣ್ಣನಿಂದ ಸಂಗೀತ ಹಾಗೂ ವೀಣಾವಾದನದ ಆರಂಭದ ಪಾಠದ ಅಭ್ಯಾಸವಾಯಿತು. ಮುಂದೆ ವಿದ್ವಾನ್ ಲಕ್ಷ್ಮೀನಾರಾಯಣಪ್ಪನವರಲ್ಲಿ ಮತ್ತು ವೀಣಾ ವೆಂಕಟಗಿರಿಯಪ್ಪನವರಲ್ಲಿ ವೀಣಾವಾದನವನ್ನೂ ಹಾಗೂ ಹಾಡುಗಾರಿಕೆಯನ್ನು ಮೈಸೂರು ವಾಸುದೇವಾಚಾರ್ಯರು, ಮೈಸೂರು ಟಿ. ಚೌಡಯ್ಯನವರು,…

Read More

ಉಡುಪಿ : ಯಕ್ಷಗಾನ ಕೇಂದ್ರ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಉಜ್ವಲ್ ಡೆವಲಪರ್ಸ್ ಉಡುಪಿ ಇವರ ಸಹಯೋಗದಲ್ಲಿ ಕೊಡಮಾಡುವ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ 2025ನೇ ಸಾಲಿನ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ವೇಷಧಾರಿ ಶ್ರೀಯುತ ವಿದ್ಯಾಧರ ರಾವ್ ಜಲವಳ್ಳಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ರೂಪಾಯಿ 10,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ದಿನಾಂಕ 19 ಜುಲೈ 2025ರಂದು ಸಂಜೆ ಘಂಟೆ 3.00ಕ್ಕೆ ಉಡುಪಿ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಬಡಗುತಿಟ್ಟಿನ ಕಲಾವಿದರ ಕೂಡುವಿಕೆಯಿಂದ ‘ಕೃಷ್ಣಾರ್ಜುನ ಕಾಳಗ ಹಾಗೂ ರಾಜಾಭದ್ರಸೇನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜಲವಳ್ಳಿ ವಿದ್ಯಾಧರ ರಾವ್ : ಯಕ್ಷರಂಗದ ಡೈನಾಮಿಕ್ ಸ್ಟಾರ್ ಎಂದೇ ಹೆಸರಾದ ಅಭಿನಯ ಚಕ್ರವರ್ತಿ ಬಿರುದಾಂಕಿತ…

Read More

ಕೋಟ : ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ತರಬೇತಿ ಕೇಂದ್ರಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪ್ರಾಯೋಜಿತ ಇಂಟರ್ನೇಷನಲ್ ಎಫೇರ್ಸ್ ವಿಭಾಗದ ಮಣಿಪಾಲ್ ಇಂಟರ್‌ನ್ಯಾಷನಲ್ ಸಮ್ಮರ್ ಸ್ಕೂಲ್ 2025ರ ಆಸ್ಟ್ರೇಲಿಯ, ದುಬೈ, ದೆಹಲಿ, ಉತ್ತರ್ ಪ್ರದೇಶ್, ಬಿಹಾರ್, ಕೇರಳ ಮತ್ತು ಕರ್ನಾಟಕ ಮೂಲದ ಸುಮಾರು 25 ಮಂದಿ ಶಿಬಿರಾರ್ಥಿಗಳು ದಿನಾಂಕ 10 ಜುಲೈ 2025ರಂದು ಭೇಟಿಕೊಟ್ಟರು. ಹತ್ತು ದಿವಸಗಳ ಶಿಬಿರದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳ ಪರಿಚಯ ಕಾರ್ಯಕ್ರಮದ ಅಂಗವಾಗಿ ನಾಡಿನ ಅನೇಕ ಕಡೆ ಸಂದರ್ಶಿಸಿದ ಅವರು ಮಕ್ಕಳ ಮೇಳದ ಯಕ್ಷಗಾನ ತರಬೇತಿ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸುವುದರೊಂದಿಗೆ ನಿರ್ದೇಶಕರೊಡನೆ ಮತ್ತು ಬಾಲ ಕಲಾವಿದರೊಂದಿಗೆ ಸಂವಾದ ನಡೆಸಿದರು. ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀಧರ ಹಂದೆ ಸ್ವತಃ ‘ಚಿತ್ರಾಂಗದೆ’ ಪಾತ್ರವನ್ನು ಅಭಿನಯಿಸಿ, ವಿದ್ಯಾರ್ಥಿಗಳಿಗೆ ಯಕ್ಷಗಾನ ಪರಂಪರೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತಾ “ಮುಂದಿನ ತಲೆಮಾರಿಗೆ ಸಾಂಪ್ರದಾಯಿಕ ಯಕ್ಷಗಾನವನ್ನು ದಾಟಿಸುವುದು ಮಕ್ಕಳ ಮೇಳದ ಸ್ಥಾಪನೆಯ…

Read More