Author: roovari

ಕಾಸರಗೋಡು : ಕಾಸರಗೋಡಿನ ಪ್ರಸಿದ್ಧ ಕಲಾಸಂಸ್ಥೆ ರಂಗಚಿನ್ನಾರಿ (ರಿ) ಇದರ ಸಾರಥ್ಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಾಗೂ ಸ್ಥಳೀಯ ಭಕ್ತಿರಸ ಸಮಿತಿಯ ಸಮರ್ಥ ಸಹಕಾರದೊಂದಿಗೆ ಅಂತರ್ರಾಷ್ಟ್ರೀಯ ಖ್ಯಾತಿಯ ಗಾಯಕ ಶಂಕರ ಶಾನುಭೋಗ್ ಕಳಸ ಇವರ ನೇತೃತ್ವದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬಲು ವಿಜೃಂಭಣೆಯಿಂದ ಜರಗಿದ ಭಕ್ತಿ-ಭಾವಗೀತೆಗಳ ಕಲಿಕಾ ಕಾರ್ಯಾಗಾರದ ಸಮಾರೋಪವು ದಿನಾಂಕ 29 ಸೆಪ್ಟೆಂಬರ್ 2024 ರಂದು ವಿಜೃಂಭಣೆಯಿಂದ ಜರಗಿ, ಕಾರ್ಯಾಗಾರ ಅಭೂತಪೂರ್ವ ಯಶಸ್ವಿಯಲ್ಲಿ ಪರಿಸಮಾಪ್ತಿಗೊಂಡಿತು. ಸಭೆಯಲ್ಲಿ ಸಮಾರೋಪ ಭಾಷಣಗೈದ ಖ್ಯಾತ ಪತ್ರಕರ್ತ ಹಾಗೂ ಅಂಕಣಕಾರರಾದ ಶ್ರೀ ರವೀಂದ್ರ ಜೋಶಿ ಮೈಸೂರು ಇವರು ರಂಗಚಿನ್ನಾರಿ ಹಾಗೂ ಭಕ್ತಿರಸ ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರಲ್ಲದೇ, ಇಂತಹ ಕಾರ್ಯಕ್ರಮಗಳು ದೇಶದ ನಾನಾ ಮೂಲೆಯಲ್ಲಿ ಜರಗಬೇಕು ಎಂಬುದಾಗಿ ಕರೆಯಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಕ್ತಿರಸ ಸಮಿತಿಯ ಕಾರ್ಯಾಧ್ಯಕ್ಷರಾದ ಕಲಾರತ್ನ ಶಂನಾಡಿಗ ಕುಂಬ್ಳೆ ವಹಿಸಿದ್ದರು. ಅತಿಥಿಗಳಾಗಿ ಖ್ಯಾತ ಜಲತರಂಗ ವಾದಕಿ ಶ್ರೀಮತಿ ವಿಜಯಲಕ್ಷ್ಮಿ ಹರಿಪ್ರಕಾಶ್ ಬೆದ್ರಡಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಸಂಕೀರ್ತನಕಾರರೂ, ಭಜನಾಪಟುವೂ…

Read More

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಇದರ ವತಿಯಿಂದ ‘ಕಾರಂತ ಹುಟ್ಟುಹಬ್ಬ’ವನ್ನು ದಿನಾಂಕ 10 ಅಕ್ಟೋಬರ್ 2024ರಂದು ಬೆಳಗ್ಗೆ 9-30 ಗಂಟೆಗೆ ಮಂಗಳೂರಿನ ಕೊಡಿಯಾಲ್ ಗುತ್ತು ರಸ್ತೆ, ಜನತಾ ಡಿಲಕ್ಸ್ ಪತ್ತುಮುಡಿ ಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ. ಜನತಾ ಡಿಲಕ್ಸ್ ಪಾಲುದಾರರಾದ ಪತ್ತುಮುಡಿ ಸೂರ್ಯ ನಾರಾಯಣ ರಾವ್ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ಪುಷ್ಪ ನಮನ ಸಲ್ಲಿಸಲಿರುವರು. ಬಹುಶ್ರುತ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಇವರಿಗೆ ಉಪಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ‘ಕಾರಂತ ಪ್ರಶಸ್ತಿ’ ಪ್ರದಾನ ಮಾಡಲಿರುವರು. ನಾಡೋಜ ಪ್ರೊ. ಕೆ.ಪಿ. ರಾವ್ ಇವರು ಕಾರಂತ ಸಂಸ್ಮರಣೆ ಮಾಡಲಿದ್ದು, ಎಸ್. ಪ್ರದೀಪ ಕುಮಾರ ಕಲ್ಕೂರ ಇವರು ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ಮತ್ತು ಕಾರ್ಡಿನಲ್ಲಿ ಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಗುವುದು.

Read More

ಬೆಂಗಳೂರು : ‘ಅನೇಕಾ ಬೆಂಗಳೂರು’ ಆಯೋಜಿಸುವ ‘ಆಧುನಿಕ ಅಭಿನಯ ಹಾಗೂ ರಂಗಪ್ರಸ್ತುತಿ ಕಾರ್ಯಾಗಾರ’ವು ದಿನಾಂಕ 17 ಅಕ್ಟೋಬರ್ 2024ರಿಂದ ಪ್ರತಿದಿನ ಸಂಜೆ 6-00ರಿಂದ 8-30 ಗಂಟೆ ವರೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ರವೀಂದ್ರ ಕಲಾ ಕ್ಷೇತ್ರದ ಆವರಣ, ಪದ್ದಣ್ಣ ತಾಲೀಮು ಕೊಠಡಿಯಲ್ಲಿ ಆಯೋಜಿಸಲಾಗಿದೆ. 45 ದಿನಗಳ ತನಕ ನಡೆಯುವ ಈ ಕಾರ್ಯಾಗಾರದಲ್ಲಿ ಖ್ಯಾತ ರಂಗನಿರ್ದೇಶಕರಾದ ಶ್ರೀ ಸುರೇಶ ಆನಗಳ್ಳಿ ಹಾಗೂ ಎನ್.ಎಸ್.ಡಿ./ ನೀನಾಸಂ ಪದವೀಧರರು ಮಾರ್ಗದರ್ಶನ ನೀಡಲಿದ್ದಾರೆ. ನೋಂದಾವಣೆಗೆ ಕೊನೆಯ ದಿನಾಂಕ 15 ಅಕ್ಟೋಬರ್ 2024 ಆಗಿದ್ದು, ವಯೋಮಿತಿ 17ರಿಂದ 45 ವರ್ಷದ 10 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶವಿದೆ. ಹೆಚ್ಚಿನ ಮಾಹಿತಿಗಾಗಿ 9448050950 / 8792187637 ನ್ನು ಸಂಪರ್ಕಿಸಿರಿ.

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಅಕ್ಟೋಬರ್ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 07-10-2024, 14-10-2024, 21-10-2024 ಮತ್ತು 28-10-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 07-10-2024ರಂದು ನಡೆಯಲಿರುವು ಸರಣಿ 66ರಲ್ಲಿ ಬೆಂಗಳೂರಿನ ಸುಧನ್ವ ಎಸ್. ಆಚಾರ್ಯ, ದಿನಾಂಕ 14-10-2024ರಂದು ನಡೆಯಲಿರುವು ಸರಣಿ 67ರಲ್ಲಿ ಬೆಂಗಳೂರಿನ ವಿದುಷಿ ಮೇಘ ಸಿ.ಕೆ., ದಿನಾಂಕ 21-10-2024ರಂದು ನಡೆಯಲಿರುವು ಸರಣಿ 68ರಲ್ಲಿ ನೃತ್ಯನಿಕೇತನ ಕೊಡವೂರಿನ ಕಲಾವಿದರಿಂದ ‘ನಾರಸಿಂಹ’ ನೃತ್ಯ ರೂಪಕ ಮತ್ತು ದಿನಾಂಕ 28-10-2024ರಂದು ನಡೆಯಲಿರುವು ಸರಣಿ 69ರಲ್ಲಿ ಕುಮಾರಿ ಮಧುಶ್ರೀ ಕಿದಿಯೂರು ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

Read More

ಬಂಟ್ವಾಳ : ಕರ್ನಾಟಕದ ಸುವರ್ಣ ಸಂಭ್ರಮದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯು ಬಂಟ್ವಾಳ ತಾಲೂಕಿಗೆ ದಿನಾಂಕ 2 ಅಕ್ಟೋಬರ್ 2024ರಂದು ಪ್ರವೇಶಿಸಿದ್ದು, ಬಿ.ಸಿ.ರೋಡ್ ನಲ್ಲಿ ಬಂಟ್ವಾಳ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಿತ ನಾನಾ ಇಲಾಖೆಗಳ ವತಿಯಿಂದ ಗೌರವಪೂರ್ಣವಾಗಿ ಸ್ವಾಗತಿಸಲಾಯಿತು. ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಬಿಂದಿಯಾ ನಾಯಕ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಇವರು, ಕರ್ನಾಟಕದ ಸಾಧಕರು, ಸಂಸ್ಕೃತಿಯ ದೃಶ್ಯಾವಳಿಯನ್ನು ಒಳಗೊಂಡಿರುವ ಸುವರ್ಣ ಕರ್ನಾಟಕ ರಥದಲ್ಲಿರುವ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಈ ಸಂದರ್ಭ ಮಾತನಾಡಿದ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಕರ್ನಾಟಕವೆಂದು ಹೆಸರಾಗಿ ರಾಜ್ಯ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರಥ ಸಾಗುತ್ತಿದ್ದು, ನಮ್ಮ ನೆಲ, ಜಲ, ವಿಚಾರಗಳನ್ನು ಅರಿಯಲು ಇದು ಸಾಧ್ಯವಾಗುತ್ತದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ…

Read More

ತೆಕ್ಕಟ್ಟೆ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಸಿನ್ಸ್ 1999 ಶ್ವೇತಯಾನ-63ರ ಕಾರ್ಯಕ್ರಮದಡಿಯಲ್ಲಿ ನವರಾತ್ರಿ ಸಂದರ್ಭದಲ್ಲಿನ ಕಲಾ ಪ್ರಕಾರ ‘ಹೂವಿನಕೋಲು’ ಅಭಿಯಾನದ ಉದ್ಘಾಟನಾ ಸಮಾರಂಭವು ದಿನಾಂಕ 03 ಅಕ್ಟೋಬರ್ 2024 ರಂದು ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಆನೆಗುಡ್ಡೆ ವಿನಾಯಕ ದೇಗುಲದ ಪ್ರಧಾನ ಅರ್ಚಕರಾದ ಕೃಷ್ಣಾನಂದ ಉಪಾಧ್ಯ ಮಾತನಾಡಿ “ಮಕ್ಕಳ ಕಲಾಸಕ್ತಿಯನ್ನು ಉತ್ತೇಜಿಸುವ ಕಾರ್ಯಕ್ರಮ ಹೂವಿನಕೋಲು. ನಾಡಿನಾದ್ಯಂತ ಹಲವು ವರ್ಷಗಳಿಂದ ಹೂವಿಕೋಲು ತಂಡವನ್ನು ಮನೆ ಮನೆಗಳಿಗೆ ಕೊಂಡೊಯ್ದು ಯಕ್ಷ ಕಲಾ ಪ್ರಕಾರವನ್ನು ಬಿತ್ತರಗೊಳಿಸುವುದರ ಜೊತೆಗೆ ಮಕ್ಕಳನ್ನು ಬೆಳೆಸಿ ನಾಡಿಗೆ ಕೊಡುವ ಕಾಯಕವನ್ನು ಯಶಸ್ವೀ ಕಲಾವೃಂದ ಕೊಮೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ನಾಲ್ಕು ತಂಡಗಳಾಗಿ ಮಾಡಿಕೊಂಡು ಕರಾವಳಿ ಭಾಗದ ಹಲವು ಕಡೆಗಳಲ್ಲಿ ಕರಾವಳಿಯ ಕಂಪನ್ನು ಸೊಗಸಾಗಿ ಮಕ್ಕಳ ಮೂಲಕ ಬಿತ್ತರಿಸುವ ಕಾರ್ಯ ಬೆರಗು ಮೂಡಿಸುವಂತಹುದು.” ಎಂದರು. ಯಶಸ್ವೀ ಕಲಾವೃಂದದ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಮಲ್ಯಾಡಿ ಮಾತನಾಡಿ “ಕಲಾ ಪ್ರಪಂಚದಿಂದ ಮರೆಯಾಗಿದ್ದ ಕಲೆ ಹೂವಿನಕೋಲು. ಈ ಕಲೆಯನ್ನು ಕಳೆದ ಹಲವಾರು…

Read More

ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾ ಗಮಕ ಪರಿಷತ್ ವಿಜಯಪುರ ಇವರ ಸಂಘಟನೆಯಲ್ಲಿ ಏರ್ಪಡಿಸಿದ ‘ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ’ವು ದಿನಾಂಕ 05 ಅಕ್ಟೋಬರ್ 2024ರಂದು ಮುಂಜಾನೆ 11-00 ಗಂಟೆಗೆ ವಿಜಯಪುರದ ವಜ್ರ ಹನುಮಾನ ನಗರ, ಶ್ರೀ ಶಂಕರಮಠದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರದ ಶ್ರೀ ಶಂಕರಮಠದ ಅಧ್ಯಕ್ಷರಾದ ಶ್ರೀ ಮಹೇಶ್ ದೇಶಪಾಂಡೆ ಇವರು ವಹಿಸಲಿದ್ದು, ಶ್ರೀ ಕನಕದಾಸರ ‘ನಳ ದಮಯಂತಿ ಚರಿತ್ರೆ’ ಕಾವ್ಯದಲ್ಲಿ ‘ನಳ ದಮಯಂತಿ ವಿವಾಹ ಸಮಾರಂಭ’ದ ವಾಚನವನ್ನು ಶ್ರೀಮತಿ ಪುಷ್ಪಾ ಕುಲಕರ್ಣಿ ಮತ್ತು ಶ್ರೀಮತಿ ಭೂದೇವಿ ಕುಲಕರ್ಣಿ ಹಾಗೂ ವ್ಯಾಖ್ಯಾನವನ್ನು ಶ್ರೀ ಕಲ್ಯಾಣರಾವ್ ದೇಶಪಾಂಡೆ ಇವರು ನಿರ್ವಹಿಸಲಿರುವರು.

Read More

ಪಿರಿಯಾಪಟ್ಟಣ : ಧಾನ್ ಫೌಂಡೇಶನ್ ನೇತೃತ್ವದ ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟದ ಸಮೂಹ ಮಹಾಸಭೆ ಹಾಗೂ ನಾರಾಯಣ ಹೆಗಡೆಯವರಿಗೆ ಅಭಿನಂದನಾ ಸಮಾರಂಭ ಮತ್ತು ‘ಸಂಘಂ ಶರಣಂ ಗಚ್ಛಾಮಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 21 ಸೆಪ್ಟೆಂಬರ್ 2024ರಂದು ಸಾಯಿ ಸಮುದಾಯ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಗತಿಪರ ಚಿಂತಕಿ ಡಾ. ಶ್ವೇತಾ ಮಡಪ್ಪಾಡಿ ಇವರು ಮಾತನಾಡಿ “ಸಮಾಜದ ಏಳಿಗೆಯಲ್ಲಿ ಪುರುಷರಷ್ಟೇ ಪಾತ್ರ ಮಹಿಳೆಯರದ್ದು ಇದೆ. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕೆ ಧಾನ್ ಫೌಂಡೇಶನ್ ಕೊಡುಗೆ ಶ್ಲಾಘನೀಯ, ಕಳೆದ ಏಳು ವರ್ಷಗಳಿಂದ ಧಾನ್ ಫೌಂಡೇಶನ್ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿ ನಿರ್ಗಮಿಸುತ್ತಿರುವ ಯೋಜನಾ ಕಾರ್ಯ ನಿರ್ವಾಹಕ ನಾರಾಯಣ ಹೆಗಡೆಯವರ ಕೆಲಸ ಇತರರಿಗೆ ಮಾದರಿಯಾಗಿದೆ” ಎಂದರು. ಧಾನ್ ಫೌಂಡೇಶನ್ ಪ್ರಾದೇಶಿಕ ಸಂಯೋಜಕ ಶಂಕರ್ ಪ್ರಸಾದ್ ಮಾತನಾಡಿ “30 ವರ್ಷಗಳಿಂದ 16 ರಾಜ್ಯಗಳಲ್ಲಿ ಧಾನ್ ಫೌಂಡೇಶನ್ ಕರ್ತವ್ಯ ನಿರ್ವಹಿಸುತ್ತಿದ್ದು, ನಾರಾಯಣ ಹೆಗಡೆ ಇವರ ಕೆಲಸ ಒಕ್ಕೂಟದ ಅಭಿವೃದ್ಧಿಗೆ ಬಹಳಷ್ಟು ಸಹಕಾರಿಯಾಗಿತ್ತು. ಸಮಾಜದ ಅಭಿವೃದ್ಧಿಗಾಗಿ…

Read More

ಬೆಂಗಳೂರು : ಯಕ್ಷದೇಗುಲ (ರಿ.) ಬೆಂಗಳೂರು ಅರ್ಪಿಸುವ ‘ರಾಮಾಯಣ ದರ್ಶನ’ ಯಕ್ಷಗಾನ ಉತ್ಸವವನ್ನು ದಿನಾಂಕ 5 ಅಕ್ಟೋಬರ್ 2024ರಂದು ಬೆಂಗಳೂರಿನ ಕೆಂಪೇಗೌಡ ನಗರ, ಉದಯಭಾನು ಕಲಾಸಂಘ ಗವಿಪುರಂ ಇಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಳೆ, ಮಕ್ಕಳ ಯಕ್ಷಗಾನ, ರಾಮಾಯಣ ದರ್ಶನ ನೃತ್ಯ ಸ್ಪರ್ಧೆ, ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಾಲೋಕಮ್ ಮ್ಯಾನೇಜರ್ ಶ್ರೀ ಅನುಭೂತಿ ಶ್ರೀ ವಾತ್ಸವ್ ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಹೆರಂಜಾಲು ಸುಬ್ಬಣ್ಣ ಗಾಣಿಗ ಇವರುಗಳು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪಾರ್ಥಿಸುಬ್ಬ ವಿರಚಿತ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ಮತ್ತು ಪ್ರೊ. ಪವನ್ ಕಿರಣಕೆರೆ ಪರಿಕಲ್ಪನೆಯ ‘ಕೃಷ್ಣಂ ವಂದೇ ಜಗದ್ಗುರುಂ’ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 2-00 ಗಂಟೆಗೆ ಭಾಗವತ ಸುಬ್ರಹ್ಮಣ್ಯ ಹೊಳ್ಳರವರ ನೆನಪಿನಲ್ಲಿ ‘ರಾಮಾಯಣ ದರ್ಶನ ನೃತ್ಯ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದ್ದು, ಸಭಾ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನ್ ದಾಸ್ ಶೆಣೈ…

Read More

ಕಾಸರಗೋಡು : “ಸಂಗೀತವು ಭಗವಂತ ಹಾಗೂ ಭಕ್ತನನ್ನು ಹೆಣೆಯುವ ಮಾಧ್ಯಮ. ಸಂಗೀತದಲ್ಲಿರುವ ಮಾಧುರ್ಯ ಹಾಗೂ ಆ ಕೃತಿಯಲ್ಲಿ ಹುದುಗಿರುವ ಸಾಹಿತ್ಯದ ಸೌಂದರ್ಯವು, ಪವಾಡಸದೃಶವಾಗಿ ಕಾರ್ಯವೆಸಗಿ ಕಲಾವಿದನ ಹಾಗೂ ಕೇಳುಗನ ಮನದಾಳದಲ್ಲಿ ಭಗವಂತನ ಕುರಿತಾದ ಪೂಜ್ಯ ಭಾವನೆಯನ್ನು ಬಿಂಬಿಸುತ್ತದೆ. ಸಂಗೀತಕ್ಕೆ ಮರುಳಾಗದ ಜೀವಿಗಳೇ ಇಲ್ಲ. ಅಂತಹ ಸಂಗೀತವು ಭಕ್ತಿಗೀತೆಯಾಗಿರಬಹುದು, ಭಾವಗೀತೆಯಾಗಿರಬಹುದು, ಜಾನಪದ ಗೀತೆಯಾಗಿರಬಹುದು. ಅದರಲ್ಲಿರುವ ಸಾಹಿತ್ಯ ಹಾಗೂ ಸಂಗೀತಗಳೆರಡೂ ಎರಡು ಕಣ್ಣುಗಳಷ್ಟೇ ಪ್ರಧಾನ, ಅಂತಹ ಗೀತೆಗಳನ್ನು ಸ್ವತಃ ಕಲಿಯುವುದಕ್ಕಿಂತ ಇಂತಹ ಶಿಬಿರಗಳ ಮೂಲಕ ಕಲಿಯುವುದರಿಂದ ಪ್ರಬುದ್ಧತೆ ಹೆಚ್ಚಾಗುತ್ತದೆ.” ಎಂಬುದಾಗಿ ಖ್ಯಾತ ಚಿತ್ರನಟ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ವಿ. ಮನೋಹರರವರು ನುಡಿದರು. ಕಾಸರಗೋಡಿನ ಪ್ರಸಿದ್ಧ ಕಲಾಸಂಸ್ಥೆ ರಂಗಚಿನ್ನಾರಿ (ರಿ) ಇದರ ಸಾರಥ್ಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಾಗೂ ಸ್ಥಳೀಯ ಭಕ್ತಿರಸ ಸಮಿತಿಯ ಸಮರ್ಥ ಸಹಕಾರದಲ್ಲಿ ಅಂತರ್ರಾಷ್ಟ್ರೀಯ ಖ್ಯಾತಿಯ ಗಾಯಕ ಶಂಕರ ಶಾನುಭೋಗ್ ಕಳಸ ಇವರ ನೇತೃತ್ವದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 29 ಸೆಪ್ಟೆಂಬರ್ 2024ರಂದು…

Read More