Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಯಕ್ಷಕಲಾ ಅಕಾಡೆಮಿ (ರಿ.) ಬೆಂಗಳೂರು ಹಾಗೂ ಯಕ್ಷವಾಹಿನಿ (ರಿ.) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀಧರ್ ಡಿ.ಎಸ್. ವಿರಚಿತ ‘ಸತ್ವ ಶೈಥಿಲ್ಯ’ ಎಂಬ ಪ್ರಸಂಗದ ತಾಳಮದ್ದಳೆ ಪ್ರದರ್ಶನವನ್ನು ದಿನಾಂಕ 14 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಯಕ್ಷಕಲಾ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ಕುಮಾರಿ ಚಿತ್ಕಲಾ ತುಂಗ ಮತ್ತು ಶ್ರೀ ರಾಜೇಶ್ ಸಾಗರ ಹಾಗೂ ಮುಮ್ಮೇಳದಲ್ಲಿ ಶ್ರೀ ಶ್ರೀಧರ್ ಡಿ.ಎಸ್., ಶ್ರೀ ಅಜಿತ್ ಕಾರಂತ್, ಶ್ರೀ ಸುಂಕಸಾಳ ಗಣೇಶ್ ಭಟ್ ಮತ್ತು ಶ್ರೀ ರವಿ ಮಡೋಡಿ ಇವರುಗಳು ಸಹಕರಿಸಲಿದ್ದಾರೆ.
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ 6 ಸೆಪ್ಟೆಂಬರ್ 2024ರಂದು ಪುರಭವನದಲ್ಲಿ 2022 ಮತ್ತು 2023ನೇ ಸಾಲಿನ ‘ಗೌರವ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಿತು. ವಿಧಾನಸಭೆ ಸ್ಪೀಕರ್ ಕಾರ್ಯಕ್ರಮದಲ್ಲಿ ಭಾಗವಹಿಸದ ಹಿನ್ನೆಲೆ ಅವರ ಸಂದೇಶ ವಾಚಿಸಲಾಯಿತು. ಅವರ ಸಂದೇಶದಲ್ಲಿ “ಮಂಗಳೂರು ಆಕಾಶವಾಣಿಯಲ್ಲಿ ಬ್ಯಾರಿ ಭಾಷೆ ಕಾರ್ಯಕ್ರಮ ಪ್ರಸಾರವಾಗಬೇಕು, ಶಾಲಾ ಪಠ್ಯಪುಸ್ತಕದಲ್ಲಿ ಬ್ಯಾರಿ ಭಾಷೆ ಅಳವಡಿಸಬೇಕು, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ನೀಡಬೇಕೆಂಬ ಬೇಡಿಕೆ ಇದೆ. ಅಕಾಡೆಮಿ ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ತಾನು ಎಲ್ಲ ರೀತಿಯಲ್ಲೂ ಸಹಕರಿಸಲು ಬದ್ಧನಿದ್ದೇನೆ” ಎಂದು ತಿಳಿಸಿದ್ದಾರೆ. 2022ನೇ ಸಾಲಿನ ಗೌರವ ಪ್ರಶಸ್ತಿಯನ್ನು ಹಂಝತುಲ್ಲಾ ವೈ. ಕುವೇಂಡ ಬೆಂಗಳೂರು, ಮರಿಯಮ್ ಇಸ್ಮಾಯಿಲ್ ಉಳ್ಳಾಲ, ಎಂ.ಜಿ. ಶಾಹುಲ್ ಹಮೀದ್ ಗುರುಪುರ ಹಾಗೂ 2023ನೇ ಸಾಲಿನ ಗೌರವ ಪ್ರಶಸ್ತಿಯನ್ನು ಹಾಜಿ ಟಿ.ಎ. ಆಲಿಯಬ್ಬ ಜೋಕಟ್ಟೆ ಮುಹಮ್ಮದ್ ಶರೀಫ್ ನಿರ್ಮುಂಜೆ, ಅಶ್ರಫ್ ಅಪೋಲೊ ಕಲ್ಲಡ್ಕ ಇವರುಗಳಿಗೆ ಪದ್ಮಶ್ರೀ ಹರೇಕಳ ಹಾಜಬ್ಬ ಇವರು ಪ್ರದಾನಿಸಿದರು. ಮಂಗಳೂರು ವಿಶ್ವವಿದ್ಯಾಲಯ…
ಮೈಸೂರು : ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಕಂಪನಿ ದಿನಾಂಕ 14 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ದಾಶರಥಿ ದೀಕ್ಷಿತ್ ರಚಿಸಿರುವ ಹಾಗೂ ಶ್ರೀಪಾದ ಎಸ್. ನಿರ್ದೇಶನದಲ್ಲಿ ‘ಗಾಂಪರ ಗುಂಪು’ ನಾಟಕವನ್ನು ಪ್ರದರ್ಶಿಸುತ್ತಿದೆ. ಗಾಂಪರ ಗುಂಪು ನಾಟಕದ ಬಗ್ಗೆ : ಹುಟ್ಟಿದಾರಭ್ಯ ಪಾಶ್ಚಾತ್ಯ ಸಂಸ್ಕೃತಿ ಬಗ್ಗೆ ಹೆಚ್ಚುತ್ತಿರುವ ಅನಗತ್ಯ ಅಭಿಮಾನ, ಅನುಕರಣೆ ಮಕ್ಕಳ ತಲೆಯಲ್ಲಿ ಹೇರುತ್ತ, ಪರದೇಶಕ್ಕೆ ಹಾರುವುದೇ ಒಂದು ಘನೂದ್ದೇಶವಾಗಬೇಕ್ವೆಂದು, ಅದನ್ನು ಜಂಬದಿಂದ ಮನೆ ಮಂದಿ ಹತ್ರ ಹೇಳುಕೊಳ್ಳುವುದೇ ದೊಡ್ಡಸ್ತಿಕೆ ಎಂದು ಬೀಗುವ, ಅರೆ ಬರೆ ಬೆಂದ ಕಾಳಿನ ಜನಗಳ ಮದ್ಯ… ನಮ್ಮ ನಾಡಿನ ಮೌಲ್ಯಾಧಾರಿತ ಸಂಸ್ಕೃತಿಯನ್ನು ಹೆಚ್ಚಿಸುವಂತೆ ಮಾಡಿ ಅವರಿಗೆ ತಿಳುವಳಿಕೆ ನೀಡಿ, ತಪ್ಪು ಕಲ್ಪನೆಗಳಿಂದ ಆಗುವ ಅಪಾಯಗಳನ್ನು ತಪ್ಪಿಸಿ ಅವರನ್ನು ನಮ್ಮ ನಾಡಿನ ಸಂಸ್ಕೃತಿಯ ಕುರಿತು ಗೌರವವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದೇಶಗಳನ್ನು ಸಾರುವ ಹಲವಾರು ಅಂಶಗಳನ್ನು ಹೊಂದಿರುವ, ಹಾಸ್ಯ ರೂಪಕದ ನಾಟಕ ‘ಗಾಂಪಾರ ಗುಂಪು’. ‘ಗಾಂಪ’ ಪದಕ್ಕೆ ಒಂದು ವಿಶಿಷ್ಟ ರೂಪವನ್ನು ಕೊಟ್ಟಿದ್ದಾರೆ ಲೇಖಕ…
ಮಂಗಳೂರು : ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತ ರೇಮಂಡ್ ಡಿಕೂನ್ಹಾ ತಾಕೊಡೆಯವರ 15ನೇ ಸಾಹಿತ್ಯ ಕೃತಿ ‘ಆಭರಣಗಳು’ ಕೃತಿ ಅನಾವರಣ ಸಮಾರಂಭವು ದಿನಾಂಕ 2 ಸೆಪ್ಟೆಂಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕ ಪರಿಚಯ ಮಾಡಿದ ಹಿರಿಯ ಶಿಕ್ಷಕಿ ಸಾಹಿತಿ ಚಂದ್ರಕಲಾ ನಂದಾವರ ಇವರು ಮಾತನಾಡಿ “ಸಾಹಿತ್ಯದ ರಚನೆಯಲ್ಲಿ ವಿವಿಧ ಭಾಷೆಗಳು ತುರುಕಿ ಬರುವುದು ಈಗಿನ ಗ್ಲೋಬಲೈಜ್ ನಿಂದ ಸಾಮಾನ್ಯ. ನಾವು ಸಾಹಿತ್ಯದ ಬರವಣಿಗೆ ಮಾಡುವಾಗ ಮೂಲ ಆಂಗ್ಲ ಶಬ್ದ ಬರೆದರೆ ಸರಿಯಾದ ಸಾಂದರ್ಭಿಕ ಅರ್ಥ ಬರಲು ಸುಲಭ ಆದೀತು. ಪತ್ರಕರ್ತರ ಜೀವನ ಮತ್ತು ಸಾಹಿತಿ ಹಾಗೂ ಶಿಕ್ಷಕರ ಜೀವನ ಒಂದು ಪ್ರೆಶರ್ ನಲ್ಲಿ ಈಗ ಇದೆ. ಯಾವುದು ಬರೆಯಬೇಕು, ಹೇಳಬೇಕು, ಕಲಿಸಬೇಕು ಎಂದು ಹೇಳುವ ಒತ್ತಡ ಇಂದಿದೆ. ಪತ್ರಕರ್ತ ರೇಮಂಡ್ ತಮ್ಮ ಕೃತಿಯಲ್ಲಿ ವಾಸ್ತವ ತೆರೆದಿಡುವ ಪ್ರಯತ್ನ ಮಾಡಿದ್ದಾರೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಪುಸ್ತಕ ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್…
ಬೆಂಗಳೂರು : ಕಲಾ ಗಂಗೋತ್ರಿ ಅಭಿನಯಿಸುವ ‘ಮತ್ತೆ ಮುಖ್ಯಮಂತ್ರಿ’ ಎಂಬ ಹೊಸ ರಾಜಕೀಯ ನಾಟಕವು ದಿನಾಂಕ 12 ಸೆಪ್ಟೆಂಬರ್ 2024ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದ ರಂಗ ಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರಧಾನ ಪಾತ್ರದಲ್ಲಿ ಡಾ. ಮುಖ್ಯಮಂತ್ರಿ ಚಂದ್ರು ಅಭಿನಯಿಸಲಿದ್ದು, ಡಾ. ಕೆ.ವೈ. ನಾರಾಯಣ ಸ್ವಾಮಿ ರಚನೆ ಮತ್ತು ಡಾ. ಬಿ.ಎ. ರಾಜಾರಾಂ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9972398931 ಶ್ರೀನಿವಾಸ ಕೈವಾರ ಇವರನ್ನು ಸಂಪರ್ಕಿಸಿರಿ.
ಮೂಡುಬಿದಿರೆ : ಆಳ್ವಾಸ್ ರಂಗತಂಡಕ್ಕೆ (ರೆಪರ್ಟರಿಗೆ) ರಂಗ ಶಿಕ್ಷಣ ಪದವಿ ಪಡೆದಿರುವ 20ರಿಂದ 35 ವರ್ಷ ವಯೋಮಿತಿಯ ನಟ ನಟಿಯರು ಬೇಕಾಗಿದ್ದಾರೆ. ಅಕ್ಟೋಬರ್ 2024ರಿಂದ ಫೆಬ್ರವರಿ 2025ರವರೆಗೆ (5 ತಿಂಗಳು) ರೆಪರ್ಟರಿ ಅವಧಿಯಾಗಿದ್ದು, ಉತ್ತಮ ಊಟ, ವಸತಿ ಜೊತೆಗೆ ಗರಿಷ್ಠ ತಿಂಗಳ ವೇತನ ನೀಡಲಾಗುವುದು. ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಅಭಿನಯಿಸಿದ ನಾಟಕಗಳ ಫೋಟೋಗಳೊಂದಿಗೆ ಸ್ವ-ವಿವರವನ್ನು ಕೂಡಲೇ ಕಳುಹಿಸುವುದು. ಅರ್ಜಿ ತಲುಪಲು ಕೊನೆಯ ದಿನಾಂಕ 20 ಸೆಪ್ಟೆಂಬರ್ 2024. ಅರ್ಜಿ ಕಳುಹಿಸುವ ವಿಳಾಸ ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ -574227 ಅಥವಾ [email protected] ಮೈಲ್ ಮಾಡಿರಿ. ಹೆಚ್ಚಿನ ಮಾಹಿತಿಗಾಗಿ 9448215946 ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜೀವನ್ ರಾಂ ಸುಳ್ಯ ಇವರನ್ನು ಸಂಪರ್ಕಿಸಬಹುದು.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ದಿನಕರ ದೇಸಾಯಿಯವರ 115ನೆಯ ಹುಟ್ಟು ಹಬ್ಬದ ಕಾರ್ಯಕ್ರಮವು ದಿನಾಂಕ 10 ಸೆಪ್ಟೆಂಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ ‘ಚುಟಕ ಬ್ರಹ್ಮ’ ಎಂದೇ ಪ್ರಖ್ಯಾತರಾದ ದಿನಕರ ದೇಸಾಯಿಯವರು ಮಹತ್ವದ ಸಾಹಿತಿ ಮಾತ್ರವಲ್ಲದೆ, ಡಾ. ಶಿವರಾಮ ಕಾರಂತರು ಗುರುತಿಸಿರುವಂತೆ ಏಕವ್ಯಕ್ತಿ ಸೈನ್ಯವಾಗಿ ಉತ್ತರ ಕರ್ನಾಟಕದ ಜನರ ಏಳಿಗೆಗಾಗಿ ದುಡಿದ ಮಹಾನ್ ಧೀಮಂತ ನಾಯಕ. ಸರಳವಾಗಿ ಕಂಡರೂ ಗಹನವಾದ ಜೀವನ ದರ್ಶನವನ್ನು ನೀಡುವುದು ಅವರ ಚುಟುಕಗಳ ವಿಶೇಷ. ಶಾಲಾ ಶಿಕ್ಷಕನ ಮಗನಾಗಿ ಜನಿಸಿದ ದೇಸಾಯಿ ಮುಂದೆ ಬಡವರ ಪಾಲಿಗೆ ಬಂಧುವಾದರು. ಮನೆ, ಮಠ ಇಲ್ಲದೆ ತುತ್ತು ಕೂಳಿಗೂ ಕಷ್ಟಪಡುತ್ತಿದ್ದ ಜನರಿಗೆ ಆಸರೆಯಾದರು. ಪ್ರಸಿದ್ಧ ಬರಹಗಾರರಾದರು. ದಿನಕರರು 1936ರಲ್ಲಿ ಮುಂಬೈನ ಹಡಗು ಕಾರ್ಮಿಕರ ಸಂಘಟನೆಯ ನೇತೃತ್ವ ವಹಿಸಿದ್ದರು. ಅಂಕೋಲದಲ್ಲಿ ‘ಜನಸೇವಕ’ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದು, ಪ್ರಸಿದ್ಧ ಬರಹಗಾರರಾದ ಗೌರೀಶ್ ಕಾಯ್ಕಿಣಿ ಇವರು ಬಹಳ ವರ್ಷ…
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ 58ನೇ ಶ್ರೀ ಗಣೇಶೋತ್ಸವ ಪ್ರಯುಕ್ತ ದಿನಾಂಕ 09 ಸೆಪ್ಟೆಂಬರ್ 2024ನೇ ಸೋಮವಾರ ಶ್ರೀ ದೇವಳದ ವಠಾರದಲ್ಲಿ ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸಮರ ಸೌಗಂಧಿಕಾ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ ಮತ್ತು ಭವ್ಯ ಶ್ರೀ ಕುಲ್ಕುಂದ, ಚೆಂಡೆ, ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್, ಜಯಪ್ರಕಾಶ್ ನಾಕೂರು ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್ (ಧರ್ಮರಾಯ), ಪ್ರೇಮಲತಾ ರಾವ್ (ವೇದವ್ಯಾಸ), ಶುಭಾ ಜೆ.ಸಿ. ಅಡಿಗ (ಭೀಮ), ಜಯಂತಿ ಹೆಬ್ಬಾರ್ (ಹನೂಮಂತ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ), ಹರಿಣಾಕ್ಷಿ ಜೆ. ಶೆಟ್ಟಿ (ಕುಬೇರ), ಶಾರದಾ ಅರಸ್ (ಅರ್ಜುನ), ಭಾರತಿ ರೈ ಅರಿಯಡ್ಕ (ವನಪಾಲಕ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಸಮಿತಿ ಸದಸ್ಯ ಅಶೋಕ್ ಕುಂಬ್ಳೆ ವಂದಿಸಿದರು. ರಂಗನಾಥ ರಾವ್ ಸಹಕರಿಸಿದರು. ಗಣೇಶೋತ್ಸವ ಸಮಿತಿಯ…
ಧಾರವಾಡ: ಗಿರಡ್ಡಿ ಗೋವಿಂದ ರಾಜ ಪ್ರತಿಷ್ಠಾನ ನೀಡುವ ಡಾ. ಗಿರಡ್ಡಿ ಗೋವಿಂದ ರಾಜ ವಿಮರ್ಶಾ ಪ್ರಶಸ್ತಿಗೆ ಪ್ರೊ. ರಾಜೇಂದ್ರ ಚೆನ್ನಿ ಇವರ ‘ಸಾಂಸ್ಕೃತಿಕ ರಾಜಕೀಯ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು ರೂಪಾಯಿ 25 ಸಾವಿರ ನಗದು ಬಹುಮಾನ, ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿಯನ್ನು ದಿನಾಂಕ 22 ಸೆಪ್ಟೆಂಬರ್ 2024ರಂದು ರಂಗಾಯಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.
ಹೂವಿನ ಹಡಗಲಿ : ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ.) ಹೂವಿನ ಹಡಗಲಿ ಇದರ ವತಿಯಿಂದ ‘ಗಾನ ಕೋಗಿಲೆ’ ರಾಷ್ಟ್ರಮಟ್ಟದ ಪ್ರಶಸ್ತಿಗೆ ಹಾಡುಗಳನ್ನು ಆಹ್ವಾನಿಸಲಾಗುತ್ತಿದೆ. 2025ರಲ್ಲಿ ನಡೆಯುವ 5ನೇ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಗಾನ ಕೋಗಿಲೆ ಪ್ರಶಸ್ತಿಗಾಗಿ ತಾವು ಹಾಡಿ ವೀಡಿಯೋ ಮಾಡಿದ ನಾಲ್ಕು ಹಾಡುಗಳನ್ನು ಕಳುಹಿಸಿ. 1. ಭಾವಗೀತೆ (ಕನ್ನಡ ಅಥವಾ ಹಿಂದಿ) 2. ಜಾನಪದ ಗೀತೆ (ಕನ್ನಡ ಅಥವಾ ಹಿಂದಿ) 3. ಚಲನಚಿತ್ರ ಗೀತೆ (ಕನ್ನಡ ಅಥವಾ ಹಿಂದಿ) 4. ರಂಗಗೀತೆ (ಕನ್ನಡ ಅಥವಾ ಹಿಂದಿ) ಈ ಮೇಲಿನಂತೆ ಹಾಡಿ ನಾಲ್ಕು ವೀಡಿಯೋಗಳನ್ನು 9902992912 ಈ ನಂಬರಿಗೆ ಕಳುಹಿಸಿ. ಆಡಿಯೋ ವೀಡಿಯೋ ಸ್ಪಷ್ಟವಾಗಿ ಇರಲಿ. ಯಾವುದೇ ವಯೋಮಾನದವರು ಇರಬಹುದು. ಕರೋಕೆ ಮತ್ತು ಸ್ವಂತವಾದ್ಯ ಬಳಸಬಹುದು. ನಾಲ್ಕು ಹಾಡುಗಳನ್ನು ಕಳುಹಿಸಲು ಕೊನೆಯ ದಿನಾಂಕ 30 ಅಕ್ಟೋಬರ್ 2024.