Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ಅಭಿನಯ ಭಾರತಿ ಧಾರವಾಡ, ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿ.ಬಿ. ಜೋಶಿ ಹಾಗೂ ಕೀರ್ತಿನಾಥ ಕುರ್ತಕೋಟಿ ಇವರ ಸ್ಮರಣಾರ್ಥ ‘ಜಿಬಿ-ಕೀರ್ತಿ ನೆನಪು’ ಎಂಬ ವಿಶೇಷ ದತ್ತಿ ಕಾರ್ಯಕ್ರಮವು ದಿನಾಂಕ 29 ಜುಲೈ 2024ರಂದು ಮನೋಹರ ಗ್ರಂಥ ಮಾಲಾದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಚಿಂತಕ ಶ್ರೀ ಹರ್ಷ ಡಂಬಳ ಇವರು ಮಾತನಾಡಿ “ಮನುಷ್ಯ ಮನುಷ್ಯರ ನಡುವಣ ಆತ್ಮೀಯ ಸಂಬಂಧದ ಮಧುರ ನೆನಪುಗಳು ಜೀವನದ ಅವಿಸ್ಮರಣೀಯ ಕ್ಷಣಗಳಾಗಿ ನಮಗೆ ಬಾಳ ಬುತ್ತಿ ನೀಡಬಲ್ಲವು. ಜಿ.ಬಿ. ಮತ್ತು ಕೀರ್ತಿಯವರ ದೇಹಗಳು ಬೇರೆ ಬೇರೆಯಾದರೂ ಜೀವನದ ದೃಷ್ಟಿಕೋನ ಒಂದೇ, ಯಾರನ್ನೂ ಸಣ್ಣವರಾಗಿ ನೋಡದೇ ತಮ್ಮ ಪ್ರೀತಿ ವಾತ್ಸಲ್ಯದ ಅಮೃತ ಸಿಂಚನ ನೀಡುತ್ತಿದ್ದರು” ಎಂದರು. ಜಿ.ಬಿ. ಜೋಶಿಯವರ 120ನೇ ಹುಟ್ಟುಹಬ್ಬ ಹಾಗೂ ಕೀರ್ತಿನಾಥರ 21ನೆಯ ಪುಣ್ಯತಿಥಿ ಅಂಗವಾಗಿ ಅವರಿರುವರ ಅವಿನಾಭಾವ ಸಂಬಂಧದ ವಿವಿಧ ಮಗ್ಗಲುಗಳನ್ನು ಅವರನ್ನು ಹತ್ತಿರದಿಂದ ಬಲ್ಲ ಆತ್ಮೀಯರು ಹಂಚಿಕೊಂಡರು.…
ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಉಡುಪಿ ಈ ಸಂಸ್ಥೆಯ ರಜತ ಮಹೋತ್ಸವವನ್ನು 01 ಆಗಸ್ಟ್ 2024ರಂದು ಕರ್ನಾಟಕ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಉಡುಪಿಯ ಶಾರದಾ ಮಂಟಪ ರಸ್ತೆಯಲ್ಲಿರುವ ಇನ್ಫೋಸಿಸ್ ಫೌಂಡೇಶನ್ -ಯಕ್ಷಗಾನ ಕಲಾರಂಗದ (ಐ.ವೈ.ಸಿ.) ಸಭಾಂಗಣದಲ್ಲಿ ಸಂಜೆ ಗಂಟೆ 4-45ಕ್ಕೆ ಉದ್ಘಾಟಿಸಲಿದ್ದಾರೆ. ಉಡುಪಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶ್ರೀ ರಾಘವೇಂದ್ರ ಆಚಾರ್ಯರು ಪ್ರಾರ್ಥನಾ ಸ್ತುತಿ ಪ್ರಸ್ತುತ ಪಡಿಸಲಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ‘ಸರಿಗಮ ಭಾರತಿ’ಯು ಕಳೆದ 25 ವರ್ಷಗಳಿಂದ ಮಣಿಪಾಲ, ಉಡುಪಿ ಪರಿಸರದಲ್ಲಿ ನೂರಾರು ಕಿರಿಯ, ಹಿರಿಯ ಸಂಗೀತಾಸಕ್ತರನ್ನು ತರಬೇತುಗೊಳಿಸಿದ್ದಲ್ಲದೆ, ವೇದಿಕೆಯನ್ನು ಕಲ್ಪಿಸಿ ಕೊಡುತ್ತಾ ಸಂಗೀತವನ್ನು ಶ್ರೀಮಂತಗೊಳಿಸುವ ಪ್ರಯತ್ನ ಮಾಡಿದೆ. ತನ್ನ ವೇದಿಕೆಯ ಮೂಲಕ ನಾಡಿನ ಹಾಗೂ ದೇಶದ ಹಲವಾರು ಖ್ಯಾತ ಕಲಾವಿದರ ಸಂಗೀತ ಕಛೇರಿಗಳನ್ನು, ಕಾರ್ಯಾಗಾರಗಳನ್ನು ಹಮ್ಮಿಕೊಂಡು ಬಂದಿದೆ. ಹಿರಿಯ, ಕಿರಿಯ…
ನವದೆಹಲಿ : ದೆಹಲಿ ಕರ್ನಾಟಕ ಸಂಘ (ರಿ.) ಇದರ ವತಿಯಿಂದ ‘ಅಭಿನಂದನಾ ಸಮಾರಂಭ’ವನ್ನು ದಿನಾಂಕ 01 ಆಗಸ್ಟ್ 2024ರಂದು ನವದೆಹಲಿಯ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮ ಬಳಿಕ ಲಾವಣ್ಯ (ರಿ.) ಬೈಂದೂರು ಇವರು ಶ್ರೀ ರಾಜೇಂದ್ರ ಕಾರಂತ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ನಾಯಿ ಕಳೆದಿದೆ’ ಎಂಬ ನಾಟಕ ಪ್ರಸ್ತುತ ಪಡಿಸಲಿದ್ದಾರೆ. ನಾಟಕ : ‘ನಾಯಿ ಕಳೆದಿದೆ’ ಬೆಂಗಳೂರಿನಲ್ಲಿದ್ದುಕೊಂಡೇ ಕಾರ್ಯದೊತ್ತಡದ ನೆಪ ನೀಡಿ ಪ್ರತ್ಯೇಕವಾಗಿ ವಾಸಿಸುವ, ತಂದೆ-ತಾಯಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾಗದ, ವಾರಕ್ಕೊಮ್ಮೆ ಮನೆಗೆ ಬಂದಾಗಲೂ ಲ್ಯಾಪ್ಟಾಪ್, ಮೊಬೈಲ್ನಲ್ಲಿ ಮುಳುಗುವ ಮಕ್ಕಳು, ಬಾಳಿನ ಇಳಿ ಹೊತ್ತಿನಲ್ಲಿರುವ ವೃದ್ಧ ತಂದೆ-ತಾಯಿಯರಲ್ಲಿ ಉಂಟು ಮಾಡುವ ತಲ್ಲಣಗಳು ವೀಕ್ಷಕರ ಮನ ಕರಗುವಂತೆ ಮಾಡುತ್ತವೆ. ಅಮೇರಿಕಾದ ಭವ್ಯ ಬದುಕಿನ ಆಸೆ ಹೊತ್ತು ಅಲ್ಲಿಗೆ ತೆರಳಿದ ಮಗ, ಸೊಸೆ ವೃದ್ಯಾಪ್ಯದಲ್ಲಿ ಆಸರೆಯಾಗಲಿಲ್ಲವಲ್ಲ ಎಂಬ ವೇದನೆ ಒಂದೆಡೆಯಾದರೆ, ಇನ್ನೊಂದೆಡೆ ಅವರು ಬಿಟ್ಟು ಹೋದ ನೆಮ್ಮದಿಯ ಬದುಕಿಗೆ ಮುಳ್ಳಾಗಿ ಕಾಡುವ ನಾಯಿ, ನಾಯಿಯ ಬೊಗಳುವಿಕೆ ವೃದ್ಧರ ಬದುಕನ್ನು ನರಕ…
ಕಾಸರಗೋಡು : ಸಾಹಿತಿ, ಭಾಷಾಂತರಕಾರ, ಸಮಾಜಸೇವಕ ಕೆ.ವಿ. ಕುಮಾರನ್ ಮಾಸ್ತರಿಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವತಿಯಿಂದ ‘ಗುರುನಮನ’ ಹಾಗೂ ‘ಕನ್ನಡ ಭವನ ಅಭಿನಂದನಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ವಿದ್ಯಾನಗರದಲ್ಲಿರುವ ಅವರ ಸ್ವಗೃಹ ಸುಪ್ರಭದಲ್ಲಿ ದಿನಾಂಕ 28 ಜುಲೈ 2024ರಂದು ಜರಗಿತು. ಹಲವು ಕನ್ನಡದ ಕಾದಂಬರಿಗಳನ್ನು ಮಲಯಾಲಕ್ಕೆ ಅನುವಾದಿಸಿದ ಕೆ.ವಿ. ಕುಮಾರನ್ ಇವರಿಗೆ ‘ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಘೋಷಿಸಿದ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಲಾಗಿತ್ತು. ಅಭಿನಂದನೆ ಸ್ಚೀಕರಿಸಿ ಮಾತನಾಡಿದ ಅವರು “ಅನುವಾದದಿಂದ ಅನುಭವ ವಿಸ್ತಾರಗೊಳ್ಳುತ್ತದೆ. ಇತರ ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯವಾಗುತ್ತದೆ. ನಾನು ಕನ್ನಡವನ್ನು ಸ್ವಪರಿಶ್ರಮದಿಂದ ಕರಗತ ಮಾಡಿಕೊಂಡವನು. ಅದು ಕೇವಲ ಒಂದು ಭಾಷೆಯಲ್ಲ ಅದೊಂದು ಉದಾತ್ತವಾದ ಸಂಸ್ಕೃತಿ” ಎಂದರು. ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷರಾಧ ವಾಮನ್ ರಾವ್ ಬೇಕಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪತ್ರಕರ್ತ ಕೆ. ರಾಧಾಕೃಷ್ಣ ಉಳಿಯತ್ತಡ್ಕ ಅಭಿನಂದನಾ ಭಾಷಣಗೈದರು. ಕನ್ನಡ ಸಾಹಿತ್ಯ ಪರಿಷತ್ತಿನ…
ಬಿ.ಸಿ.ರೋಡ್ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ‘ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ’ವು ದಿನಾಂಕ 4 ಆಗಸ್ಟ್ 2024ರಂದು ಪೂರ್ವಾಹ್ನ 10-00 ಗಂಟೆಗೆ ಬಂಟ್ವಾಳ ತಾಲೂಕು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ. ಸಮ್ಮೇಳನವು ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷ ಆದಿರಾಜ ಜೈನ್ ನೇತೃತ್ವದಲ್ಲಿ ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಶ್ರೀ ಜಯಾನಂದ ಪೆರಾಜೆ ಇವರ ಸರ್ವಾಧ್ಯಕ್ಷತೆಯಲ್ಲಿ ಕ.ಚು.ಸಾ.ಪ. ಹುಬ್ಬಳ್ಳಿಯ ರಾಜ್ಯ ಸಂಚಾಲಕರಾದ ಕೃಷ್ಣ ಮೂರ್ತಿ ಕುಲಕರ್ಣಿ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಜನಾರ್ದನ ವಾಸುದೇವ ಭಟ್ ಮೊಗರ್ನಾಡು ಇವರಿಗೆ ‘ಕರ್ನಾಟಕ ಚುಟುಕು ರತ್ನ’ ಪ್ರದಾನ ಮಾಡಿ ಪುರಸ್ಕರಿಸಲಾಗುವುದು. ಸಾಹಿತ್ಯ ವಿಚಾರಗೋಷ್ಠಿ, ಕಾಸರಗೋಡಿನ ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ, ಪರಿಸರ ವೈವಿಧ್ಯ…
ಕುಂದಾಪುರ : ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇವರ ಆಶ್ರಯದಲ್ಲಿ ನಡೆಯುವ ಶಾಲಾ ವಿದ್ಯಾರ್ಥಿಗಳ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 29 ಜುಲೈ 2024ರಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು-ಪಡುಕೆರೆ ಇಲ್ಲಿನ ಸಭಾಂಗಣದಲ್ಲಿ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೀತಾನಂದ ಪೌಂಡೇಶನ್ ಇದರ ಪ್ರವರ್ತಕರಾದ ಆನಂದ ಕುಂದರ್ ಹಾಗೂ ಇತರ ಅಭ್ಯಾಗತರು ದೀಪ ಪ್ರಜ್ವಲನೆಯೊಂದಿಗೆ ಚೆಂಡೆಯನ್ನು ಬಾರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮದಾಸ ನಾಯಕ ಇವರು ಯಕ್ಷಗಾನ ಕಲಿಕೆಯಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಕುರಿತು ಮಾತನಾಡಿ ಶುಭ ಹಾರೈಸಿದರು. ಯಕ್ಷಗಾನ ಕಲಿಕೆಯ ಗುರು ಶ್ರೀ ರಾಘವೇಂದ್ರ ಯಕ್ಷಗಾನದ ಕಲಿಕೆಯ ವಿವಿಧ ಆಯಾಮಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಜಯರಾಮ್ ಶೆಟ್ಟಿ, ವಾಹಿನಿ ಯುವಕ ಮಂಡಲದ ಅಧ್ಯಕ್ಷರಾದ ರಮೇಶ್ ಕುಂದರ್, ಉಪಸ್ಥಿತರಿದ್ದರು. ಪ್ರೌಢಶಾಲಾ ಸಹ ಶಿಕ್ಷಕ ಶ್ರೀಧರ ಶಾಸ್ತ್ರೀ ಸ್ವಾಗತಿಸಿ, ಶ್ರೀಧರ ಶಾಸ್ತ್ರೀ…
ಮಂಗಳೂರು : ಕುಂದಾಪ್ರ ಕನ್ನಡ ಸಂಭ್ರಮಾಚರಣೆಯ ಅಂಗವಾಗಿ 11 ಆಗಸ್ಟ್ 2024ರಂದು ‘ಕುಡ್ಲಂಗಿಪ್ಪಕುಂದಾಪ್ರ’ದವರೆಲ್ಲ ಸೇರಿ ಹಮ್ಮಿಕೊಂಡಿರುವ ‘ವಿಶ್ವ ಕುಂದಾಪ್ರ ದಿನಾಚರಣೆ’ಯ ಪ್ರಯುಕ್ತ ಕುಂದಗನ್ನಡ ಭಾಷೆಯ ಕಥಾ ಸಂಕಲನಕ್ಕೆ ಕಥೆಗಳನ್ನು ಆಹ್ವಾನಿಸಲಾಗಿದೆ. ಸಣ್ಣ ಕಥೆಗಳು ಕುಂದಗನ್ನಡ ಭಾಷೆಯಲ್ಲಿರಬೇಕು, ಕುಂದಾಪ್ರ ಪ್ರದೇಶದ ವಿಚಾರದ ಕಥಾವಸ್ತು ಹೊಂದಿರಬೇಕು. ಕಥೆಯು 1,000 ಪದಗಳಿಗೆ ಸೀಮಿತವಾಗಿರಬೇಕು. ಆಯ್ಕೆಯಾದ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಮೆಚ್ಚುಗೆ ಗಳಿಸಿದ ಕಥೆಗಳಿಗೆ ಬಹುಮಾನವೂ ಇದೆ. ಕಥೆಗಳನ್ನು ನುಡಿಯಲ್ಲಿ ಅಥವಾ ಬರಹದಲ್ಲಿ ಮಾತ್ರವೇ ಟೈಪ್ ಮಾಡಿ ಕಳುಹಿಸಿಕೊಡಬೇಕು. 4 ಆಗಸ್ಟ್ 2024 ಕಥೆ ಕಳುಹಿಸಲು ಕೊನೆಯ ದಿನ. ಕಥೆಯ ಕೊನೆಯಲ್ಲಿ ಬರೆದವರ ಪೂರ್ಣ ಹೆಸರು ಸಹಿತ ವಿಳಾಸ ಮತ್ತು ದೂರವಾಣಿ ಸಂಖ್ಯೆ ನಮೂದಿಸಬೇಕು. ಇಮೇಲ್ ವಿಳಾಸ: [email protected]
ಮಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮತ್ತು ಕಥಾಬಿಂದು ಪ್ರಕಾಶನ ಮಂಗಳೂರು ಇದರ ಸಹಯೋಗದಲ್ಲಿ ‘ಸಾಹಿತ್ಯ ಸುಗ್ಗಿ’ ಕಾರ್ಯಕ್ರಮವು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ‘ಸಾನಿಧ್ಯ’ ಸಭಾಂಗಣದಲ್ಲಿ 27 ಜುಲೈ2024 ರಂದು ನೆರವೇರಿತು. ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಆಲ್ವೇನ್ ಡಿ’ಸೋಜಾ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮಾಹಿತಿ ಮತ್ತು ತಂತ್ರ ಜ್ಞಾನ ಇಂಜಿನಿಯರ್ ಆದ ಶ್ರೀ ಬಿ. ಮಹಾಬಲ ತಿಲಕ ಇವರು ಬಿ. ಸತ್ಯವತಿ ಭಟ್ ಕೊಳ್ಚಪ್ಪು ವಿರಚಿತ ‘ಮತ್ತೆ ನಕ್ಕಳು ಪ್ರಕೃತಿ’ ಕೃತಿ ಬಿಡುಗಡೆ ಗೊಳಿಸಿದರು. ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಹಾಗೂ ಕನ್ನಡ ಭವನ ಪ್ರಕಾಶನದ ಪ್ರಕಾಶಕಿ ಸಂಧ್ಯಾರಾಣಿ ಟೀಚರ್ ಇವರಿಗೆ ಕೃತಿ ಕರ್ತೃ ಬಿ. ಸತ್ಯವತಿ ಭಟ್ ಕೊಳ್ಚಪ್ಪೆ ಕೃತಿಯ ಪ್ರತಿ ನೀಡುವ ಮೂಲಕ ಲೋಕಾರ್ಪಣೆ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ವಸಂತ್ ಕುಮಾರ್ ಪೆರ್ಲ, ಕನ್ನಡ ಪ್ರಾಧ್ಯಾಪಕರಾದ ಡಾ.…
ಬ್ರಹ್ಮಾವರ : ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು 27 ಜುಲೈ2024ರಂದು ನಡೆಯಿತು. ತರಗತಿಯನ್ನು ಉದ್ಘಾಟಿಸಿದ ಪ್ರಸಾಧನ ತಜ್ಞರಾದ ಕೃಷ್ಣಮೂರ್ತಿ ಮಾತನಾಡಿ “ಯಕ್ಷಗಾನ ಕಲಿಕೆಯಿಂದ ಶಿಸ್ತು, ಆತ್ಮವಿಶ್ವಾಸ ಮಾತ್ರವಲ್ಲದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳು ಸದೃಢರಾಗುತ್ತಾರೆ.” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಇದರ ಸದಸ್ಯರಾದ ಗಣೇಶ್ ಬ್ರಹ್ಮಾವರ, ಶಾಲಾ ಹಳೆ ವಿದ್ಯಾರ್ಥಿ ಸಾಗರ್ ಜೋಗಿ, ಗುರುಗಳಾದ ಮಂಜುನಾಥ್ ಐರೋಡಿ, ಶಾಲಾ ಪ್ರಾಂಶುಪಾಲರಾದ ವಂದನೀಯ ಸಿಸ್ಟರ್ ಕನುಕಾ, ಯಕ್ಷಗಾನ ಉಸ್ತುವಾರಿ ಶಿಕ್ಷಕಿ ಅನುರಾಧ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿನಿ ಪ್ರಗತಿ ನಿರೂಪಿಸಿ, ಮಾನ್ವಿ ವಂದನಾರ್ಪಣೆಗೈದರು.
ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ-47’ ಕಾರ್ಯಕ್ರಮದಡಿಯಲ್ಲಿ ಗುರುಪರಂಪರಾ ಸಂಗೀತ ಸಭಾ ಕುಂದಾಪುರ ಇದರ ವಾರ್ಷಿಕ ಕಾರ್ಯಕ್ರಮವು 28 ಜುಲೈ2024ರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಗೀತ ಗುರು ಸತೀಶ್ ಭಟ್ ಮಾಳಕೋಡು ಮಾತನಾಡಿ “ಸಂಗೀತದ ದೀಪ ಜಗತ್ತನ್ನೇ ಬೆಳಗಿವೆ. ಮಾನಸಿಕ ಸಮತೋಲನಕ್ಕಾಗಿ ಸಂಗೀತವು ನೆರವಾಗುತ್ತದೆ. ಸಂಗೀತದ ಬೆಳಕು ಪ್ರಪಂಚದಾದ್ಯಂತ ಪಸರಿಸಲಿ. ಮಾನವನಿಗೆ ಸಂಗೀತವೇ ಉಸಿರಾಗಬೇಕು. ಸಕಲ ಜೀವರಾಶಿಯೂ ಸಂಗೀತವನ್ನು ಆಸ್ವಾದಿಸುತ್ತದೆ.” ಎಂದರು. ಸಂಗೀತ ವಿದುಷಿ ಪ್ರತಿಮಾ ಭಟ್ ಗೋಪಾಡಿ, ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಕಾರ್ಯದರ್ಶಿ ವೆಂಕಟೇಶ ವೈದ್ಯ, ನಾಗರಾಜ ಭಟ್, ವೀಣಾ ನಾಯಕ್, ಕುಮಾರಿ ನೇಹಾ ಹೊಳ್ಳ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗುರುಪರಂಪರಾ ಸಂಗೀತ ಸಭಾ ಶಿಷ್ಯರಿಂದ ಹಿಂದೂಸ್ಥಾನಿ ಸಂಗೀತ ಗಾಯನ ರಂಗದಲ್ಲಿ ಪ್ರಸ್ತುತಿಗೊಂಡಿತು.