Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ರಾಜ್ಯಾದ್ಯಂತ ಸಕ್ರಿಯವಾಗಿರುವ ಸಂಗೀತ-ನೃತ್ಯ ಕಲಾವಿದರ ಪರಿಚಯಾತ್ಮಕ ಪುಸ್ತಕ ಹೊರತರಲು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಿರ್ಧರಿಸಿದೆ. ಈ ವಿಷಯ ತಿಳಿಸಿದ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ಬಹುವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಭರತನಾಟ್ಯ, ಕಥಾಕೀರ್ತನ ಮತ್ತು ಗಮಕ ಪ್ರಕಾರಗಳಲ್ಲಿ ಕಲಾಸೇವೆಯಲ್ಲಿ ತೊಡಗಿರುವ ಹಿರಿಯ ಮತ್ತು ಕಿರಿಯ ಕಲಾವಿದರ ಪರಿಚಯವನ್ನು ‘ನಮ್ಮ ಕಲಾವಿದರು’ ಶೀರ್ಷಿಕೆಯಡಿ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ‘ನಮ್ಮ ಕಲಾವಿದರು’ ಶೀರ್ಷಿಕೆಯಡಿ ಸಂಗ್ರಹಿಸಲಾಗುವ ಎಲ್ಲಾ ಕಲಾಪ್ರಕಾರಗಳ ಕಲಾವಿದರ ಸಮಗ್ರ ಮಾಹಿತಿಯನ್ನು ಡಿಜಿಟಲೀಕರಣ ಮಾಡಿ ಅಕಾಡೆಮಿಯ ವೆಬ್ಸೈಟ್ನಲ್ಲಿ ಆಳವಡಿಸಲಾಗುವುದು. ರಾಜ್ಯದ ಎಲ್ಲೆಡೆ ಕಲಾಸೇವೆ ಮಾಡುತ್ತಿರುವ ಕಲಾವಿದರು ತಮ್ಮ ಸ್ವವಿವರಗಳನ್ನು ಅಕಾಡೆಮಿಯ ವೆಬ್ ಸೈಟ್ ageetanrityaacademykarnataka.gov.in ಅಲ್ಲಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕಳಿಸಬೇಕು ಎಂದು ಕೋರಿದ್ದಾರೆ. ಕಲಾವಿದರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿದಂತೆ ಪಿ. ಶ್ರೀನಿವಾಸಮೂರ್ತಿ (9945194569), ಹಿಂದೂಸ್ತಾನಿ ಸಂಗೀತಕ್ಕೆ ನಿರಂಜನಮೂರ್ತಿ (8277766109), ನೃತ್ಯಕ್ಕಾಗಿ…
ವಿಟ್ಲ : ಮೃತ್ತಿಕಾ ಆರ್ಟ್ ಸ್ಕೂಲ್ ವತಿಯಿಂದ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ‘ಆರ್ಟ್ ಕ್ಯಾಂಪ್’ನ್ನು ವಿಟ್ಲದ ಸ್ಕೂಲ್ ರೋಡ್, ಪ್ರಿಂಟ್ ಪಾಯಿಂಟ್ ಎದುರುಗಡೆ, ರಾಧ ಕೃಪಾ ಕಾಂಪೌಂಡ್, ಶ್ರೀ ವಿದ್ಯಾ ಟ್ಯೂಷನ್ ಸೆಂಟರ್ ಇಲ್ಲಿ ದಿನಾಂಕ 07 ಅಕ್ಟೋಬರ್ 2024ರಿಂದ 10 ಅಕ್ಟೋಬರ್ 2024ರವರೆಗೆ ಪ್ರತಿದಿನ ಬೆಳಗ್ಗೆ 9-00 ಗಂಟೆಯಿಂದ 4-00 ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ. ಹೆಸರು ನೋಂದಾಯಿಸಲು ದಿನಾಂಕ 04 ಅಕ್ಟೋಬರ್ 2024 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 6361183939 ಮತ್ತು 8310814115ನ್ನು ಸಂಪರ್ಕಿಸಿರಿ.
ಮಂಗಳೂರು : ಮಂಗಳೂರಿನ ಲೇಖಕಿಯರ ವಾಚಕಿಯರ ಸಂಘದ ಹಿರಿಯ ಸದಸ್ಯೆ ಬಿ. ಎಂ. ರೋಹಿಣಿಯವರ ಮಾತೃಶ್ರೀಯವರಾದ ದೇವಕಿಯಮ್ಮನವರ ಸ್ಮರಣಾರ್ಥ ಆಯೋಜಿಸಿದ ದತ್ತಿನಿಧಿ ಕಾರ್ಯಕ್ರಮ ‘ಜೀವ -ಭಾವ-ಯಾನ’ ದಿನಾಂಕ 13 ಸೆಪ್ಟೆಂಬರ್ 2024ರ ಶುಕ್ರವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿ ಆಯುಷ್ ಪ್ರೇಂ ಹಾಡಿದ ಕುವೆಂಪು ಅವರ ‘ಮುಚ್ಚುಮರೆಯಿಲ್ಲದೆಯೇ’ ಆಶಯಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲೆಯ ಕನ್ನಡ ಅಧ್ಯಾಪಿಕೆ ಕ್ರಿಸ್ ಎವರ್ಟ್ ಡಿಸೋಜ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲೆಯ ಮುಖ್ಯೋಪಾಧ್ಯಾಯರಾದ ಫಾ. ಜಾನ್ಸನ್ ಪಿಂಟೋ ಎಸ್. ಜೆ. ಮಾತನಾಡಿ ‘’ಜೀವನ ಅಂದರೆ ಬರಿಯ ವಿದ್ಯೆ ಮತ್ತು ನೌಕರಿಯಲ್ಲ. ಓದು ಹಾಗೂ ಜ್ಞಾನದ ಮೂಲ. ಓದಿನ ಜೊತೆ ಬರೆಯುವ ಹವ್ಯಾಸ ಬೆಳೆಸಿಕೊಂಡರೆ ವೈಚಾರಿಕತೆ ಹೆಚ್ಚುತ್ತದೆ.” ಎಂದು ವಿದ್ಯಾರ್ಥಿಗಳಿಗೆ ಓದಿನ ಮಹತ್ವವನ್ನು ತಿಳಿಸಿದರು. ಪ್ರಾಸ್ತಾವಿಕ ಮಾತನಾಡಿದ ದತ್ತಿನಿಧಿಯ ಪೋಷಕರಾದ ಬಿ. ಎಂ. ರೋಹಿಣಿ “ಪ್ರತಿಯೊಬ್ಬನ ಮನಸಿನೊಳಗೆ ರಾಕ್ಷಸನಿದ್ದಾನೆ ಹಾಗೂ ದೇವತೆಯರೂ ಇದ್ದಾರೆ. ಹೃದಯದೊಳಗಿನ ದೇವತೆಯನ್ನು ಜಾಗೃತವಾಗಿರಿಸಿ ರಾಕ್ಷಸನನ್ನು ತುಳಿಯಬೇಕಾದರೆ…
ಮಂಗಳೂರು : ಸಿಂಗಾಪುರದ ಪ್ರತಿಷ್ಟಿತ ಅಂತರ್ ಸಾಂಸ್ಕೃತಿಕ ರಂಗ ಅಧ್ಯಯನ ಸಂಸ್ಥೆಯು (Intercultural Theatre Institute) ಆಯೋಜಿಸುವ ಮೂರು ವರ್ಷಗಳ ವೃತ್ತಿಪರ ನಾಟಕ ತರಬೇತಿಗೆ ಮಂಗಳೂರು ದೇರೇಬೈಲ್ ನಿವಾಸಿ ಮನೀಷ್ ಗೊಡ್ಲಿನ್ ಪಿಂಟೊ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಸಂದರ್ಶನದ ಮುಖಾಂತರ ಈ ಆಯ್ಕೆ ನಡೆದಿದೆ. ಏಶಿಯಾದ ಪ್ರಮುಖ ಸಾಂಪ್ರದಾಯಿಕ ಕಲಾ ಪ್ರಕಾರಗಳಾದ ಜಪಾನಿನ ನೊ ಥಿಯೇಟರ್, ಚೀನಾದ ಬೀಜಿಂಗ್ ಒಪೆರಾ ಮತ್ತು ಥಾಯ್ಚೀ, ಇಂಡೋನೇಶ್ಯಾದ ವಯಾಂಗ್ ವೊಂಗ್, ಭಾರತದ ಕುಡಿಯಾಟ್ಟಂ ಇತ್ಯಾದಿ ಈ ತರಬೇತಿಯಲ್ಲಿ ಒಳಗೊಂಡಿದೆ. ಅದೇ ರೀತಿ ಸಮಕಾಲೀನ ರಂಗಭೂಮಿಯ ಬಗ್ಗೆ ಸಮಗ್ರ ಕಲಿಕೆ ಇರಲಿದ್ದು, ನಟನೆ, ಆಂಗಿಕ ಅಭಿನಯ, ಧ್ವನಿ ನಿಯಂತ್ರಣ, ರಂಗಭೂಮಿಯ ತಾಂತ್ರಿಕತೆಗಳು ಕೂಡಾ ಕಲಿಕೆಯ ಭಾಗವಾಗಿವೆ. ಸಂಸ್ಥೆಯ ತರಬೇತಿಗೆ ಇದುವರೆಗೆ ಕರ್ನಾಟಕದಿಂದ ಆಯ್ಕೆಯಾದ ಮೂರನೇ ರಂಗಕರ್ಮಿ ಮನೀಷ್. ಮನೀಷ್ ಇವರು ಮಾಂಡ್ ಸೊಭಾಣ್ ಪ್ರವರ್ತಿತ ನಾಟಕ ರೆಪರ್ಟರಿ ಕಲಾಕುಲ್ ಇದರ ಹಳೆ ವಿದ್ಯಾರ್ಥಿಯಾಗಿದ್ದು, 2019 ರ ಸಾಲಿನ `ಶ್ರೇಷ್ಟ ಕಲಾ ವಿದ್ಯಾರ್ಥಿ’ ಪ್ರಶಸ್ತಿ ಪಡೆದಿದ್ದರು.…
ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ಸಹಜರಂಗ’ ಇದರ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ‘ರಂಗ ತರಬೇತಿ ಶಿಬಿರ 2024”ದ ಸಮಾರೋಪ ಸಮಾರಂಭವನ್ನು ದಿನಾಂಕ 29 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ಕಿರುರಂಗ ಮಂದಿರ ಕಲಾಮಂದಿರದ ಆವರಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕರಾದ ಪ್ರೊ. ಕಾಳಚೆನ್ನೇಗೌಡರು, ಬೆಂಗಳೂರಿನ ಹಸಿರು ಫೌಂಡೇಶನ್ ಶ್ರೀ ಗಂಗಾಧರ ಹೊನ್ಗಳ್ಳಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಶ್ರೀ ರಾಮು ರಂಗಾಯಣ, ನಿರಂತರ ನಿರ್ದೇಶಕರಾದ ಶ್ರೀ ಸುಗುಣ ಎಂ.ಎಂ. ಇವರುಗಳು ಭಾಗವಹಿಸಲಿರುವರು. ಶಿಬಿರಾರ್ಥಿಗಳೇ ಅಭಿನಯಿಸುತ್ತಿರುವ ಪೂರ್ಣಚಂದ್ರ ತೇಜಸ್ವಿಯವರು ರಚಿಸಿರುವ ಜೀವನ್ ಕುಮಾರ್ ಹೆಗ್ಗೋಡು ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಕೃಷ್ಣೆಗೌಡನ ಆನೆ’ ನಾಟಕ ಪ್ರದರ್ಶನ ನಡೆಯಲಿದೆ.
ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ 13ನೆಯ ವರ್ಷದ ವಾರ್ಷಿಕೋತ್ಸವ ಹಾಗೂ ಹಿಂದುಳಿದ ವರ್ಗದವರಿಗೆ ರಾಜರ್ಷಿ ಕೃಷ್ಣರಾಜ ಒಡೆಯರ್ ಅನುಷ್ಠಾನಕ್ಕೆ ತಂದಿರುವ ಮೀಸಲಾತಿಯ 105ನೆಯ ಸಂಭ್ರಮಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ “ಸೇವಾಭೂಷಣ ಪ್ರಶಸ್ತಿ” ಗೆ ಕೊಡಗು ಜಿಲ್ಲೆಯ ಸಾಹಿತಿ ವೈಲೇಶ ಪಿ. ಎಸ್. ಕೊಡಗು ಆಯ್ಕೆಯಾಗಿದ್ದಾರೆ. ಸಾಹಿತ್ಯ ಮತ್ತು ಸಾಹಿತ್ಯ ಸಂಘಟನೆಯ ಕ್ಷೇತ್ರಗಳ ಸಾಧನೆಯನ್ನು ಗುರುತಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಿನಾಂಕ 28 ಸೆಪ್ಟೆಂಬರ್ 2024ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಎಚ್. ಎಲ್. ಯಮುನಾ ತಿಳಿಸಿದ್ದಾರೆ.
ಬೆಂಗಳೂರು : ಕಲೆ ಮತ್ತು ಸಾಹಿತ್ಯಕ್ಕೆ ಸಮರ್ಪಿತವಾದ ರಾಷ್ಟ್ರೀಯ ಸಂಸ್ಥೆ ‘ಸಂಸ್ಕಾರ ಭಾರತೀ ಕರ್ನಾಟಕ (ನೋಂ.)’ ಇದರ ವತಿಯಿಂದ ‘ಭರತಮುನಿ ಸಂಮಾನ 2024’ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನಾಟ್ಯಶಾಸ್ತ್ರ, ಕಾವ್ಯತತ್ವ ವಿವೇಚನೆಗಷ್ಟೇ ಸೀಮಿತವಾಗಿರದ, ನಾಟಕ ಕಲೆಯ ಸಂಕ್ಷಿಪ್ತ ವಿಶ್ವಕೋಶವೆನ್ನಿಸಿದ ‘ನಾಟ್ಯಶಾಸ್ತ್ರ’ದ ಕರ್ತೃ, ಭಾರತದ ಸುವಿಖ್ಯಾತ ಶಾಸ್ತ್ರಜ್ಞ ಶ್ರೀ ಭರತ ಮುನಿಯು ‘ರಂಗ ಪಿತಾಮಹ’ರೆಂಬುದಾಗಿಯೇ ಸರ್ವವಿದಿತ. ಕಲೆ ಮತ್ತು ಸಾಹಿತ್ಯಕ್ಕೆ ಸಮರ್ಪಿತವಾದ ರಾಷ್ಟ್ರೀಯ ಸಂಸ್ಥೆಯಾದ ಸಂಸ್ಕಾರ ಭಾರತೀ ಕಳೆದ ನಾಲ್ಕು ದಶಕಗಳಿಂದ ಕಲೆಯ ಮೂಲಕ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಭಾರತೀಯ ಮೌಲ್ಯಗಳ ಆಧಾರದ ಮೇಲೆ ಸಾಮಾಜಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡುವ ಮೂಲಕ ಅನೇಕ ಯಶಸ್ಸನ್ನು ಸಾಧಿಸಿದವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಖಿಲ ಭಾರತ ಮಟ್ಟದಲ್ಲಿ ಪ್ರದರ್ಶನ ಕಲೆ ಮತ್ತು ಸಾಹಿತ್ಯದ ವಿಭಾಗಗಳಲ್ಲಿ ಸಾಧನೆ ಮಾಡಿದ ಇಬ್ಬರು ಕಲಾವಿದರಿಗೆ ಭರತಮುನಿ ಸಂಮಾನವನ್ನು ನೀಡಿ ಪುರಸ್ಕರಿಸಲಾಗುವುದು. ಪ್ರಶಸ್ತಿಯು ತಲಾ ಒಂದು ಲಕ್ಷದ ಐವತ್ತೊಂದು ಸಾವಿರ ರೂಪಾಯಿ…
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ 17 ನೇ ವಾರ್ಷಿಕೋತ್ಸವ ಮಂಗಳೂರಿನ ಪುರಭವನದಲ್ಲಿ ದಿನಾಂಕ 26 ಸೆಪ್ಟೆಂಬರ್ 2024 ರಂದು ನಡೆಯಿತು. ಇದರ ಪ್ರಯುಕ್ತ ಆಯೋಜಿಸಿದ ‘ಸ್ವರ ಕುಡ್ಲ ಸೀಸನ್ 6’ ಸಂಗೀತ ಸ್ಪರ್ಧೆಯಲ್ಲಿ ಮಂಗಳೂರಿನ ಆಯೂಷ್ ಪ್ರೇಮ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಸೈಂಟ್ ಅಲೋಶಿಯಸ್, ಕೊಡಿಯಾಲ್ ಬೈಲ್ ಇಲ್ಲಿನ 9ನೆಯ ತರಗತಿಯ ವಿದ್ಯಾರ್ಥಿಯಾದ ಆಯುಷ್ ಪ್ರೇಮ್, ಉಡುಪಿ ಮತ್ತು ದಕ್ಷಿಣ ಕನ್ನಡ ಎರಡೂ ಜಿಲ್ಲೆಗಳಿಂದ ಯಾವುದೇ ವಯೋಮಿತಿ ಇಲ್ಲದ 90 ಮಂದಿ ಸ್ಪರ್ಧಿಗಳಿಂದ ಕೂಡಿದ ಅತೀ ಕಠಿಣ ಸ್ಪರ್ಧೆಯಲ್ಲಿ ವಿಜೇತರಾಗಿರುವುದು ಗಮನಾರ್ಹ ಮತ್ತು ಶ್ಲಾಘನೀಯ. ಇದೇ ಸ್ಪರ್ಧೆಯಲ್ಲಿ ಸ್ನೇಹಿತ್ ಸುರೇಂದ್ರನ್ ಇವರು ರನ್ನರ್ ಅಪ್ ಹಾಗೂ ಮೂರನೇ ಬಹುಮಾನವನ್ನು ಮಹೇಂದ್ರ ಶೆಟ್ಟಿ ಮತ್ತು ಪ್ರಣತಿ ಕೂಳೂರು ಹಂಚಿಕೊಂಡರು. ಒಕ್ಕೂಟದ ಅಧ್ಯಕ್ಷರಾದ ದೀಪಕ್ ರಾಜ್ ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಯಮಿ ಕುಕ್ಕುಂದೂರು ಚಂದ್ರಶೇಖರ ಶೆಟ್ಟಿ ಉದ್ಘಾಟಿಸಿದರು. ದೈಜಿವರ್ಲ್ಡ್ ಮೀಡಿಯಾ ಸ್ಥಾಪಕ ವಾಲ್ಟರ್…
ಬೆಂಗಳೂರು : ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ (ರಿ.) ಇದರ ವತಿಯಿಂದ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಬೆಂಗಳೂರು ಇವರ ಸಹಯೋಗದೊಂದಿಗೆ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರ ಸಹಕಾರದೊಂದಿಗೆ ‘ಹಾಡು ಹೊಸ ಹಾಡು’ ಹೊಸ ಸಂಯೋಜನೆಯ ಭಾವಗೀತೆಗಳ ಗಾಯನ ಸರಣಿ ಕಾರ್ಯಕ್ರಮವನ್ನು ದಿನಾಂಕ 28 ಸೆಪ್ಟೆಂಬರ್ 2024ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯ ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ‘ಸುಗಮ ಸಂಗೀತ’ ಪಠ್ಯಕ್ರಮದ ಕರಡನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಸಮಾರಂಭವು ನಡೆಯಲಿದೆ. ಭಾವಗೀತೆಗಳ ಗಾಯನ ಮತ್ತು ಸಮೂಹ ಗಾಯನಕ್ಕೆ ಪ್ರಮೋದ್ ಕೀಬೋರ್ಡ್, ಸುಧೀರ್ ತಬಲಾ ಮತ್ತು ಪವನ್ ರಿದಂನಲ್ಲಿ ಸಹಕರಿಸಲಿರುವರು.
ಮಂಗಳೂರು : ಯಕ್ಷಗಾನದ ಗುರು ದಂಪತಿ – ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಹಾಗೂ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹೆಸರಿನಲ್ಲಿ ನೀಡಲಾಗುವ 2024ನೇ ಸಾಲಿನ ಪ್ರತಿಷ್ಠಿತ ‘ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ’ಯನ್ನು ಹಿರಿಯ ಯಕ್ಷಗಾನ ಗುರು, ಮದ್ದಳೆಗಾರರಾಗಿರುವ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಗೆ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು ರೂ.10,078/- ನಗದು, ಬಿನ್ನವತ್ತಳೆ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಬೈಪಾಡಿತ್ತಾಯರು ಸ್ಥಾಪಿಸಿರುವ ಡಿ.ಜಿ. ಯಕ್ಷ ಫೌಂಡೇಶನ್ (ರಿ) ಸಹಯೋಗದಲ್ಲಿ ಶಿಷ್ಯವೃಂದದವರು ಏರ್ಪಡಿಸಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಯಕ್ಷಕಲಾ ಪೊಳಲಿಯ ಸಂಪೂರ್ಣ ಸಹಕಾರದೊಂದಿಗೆ ದಿನಾಂಕ 13 ಅಕ್ಟೋಬರ್ 2024ರ ಭಾನುವಾರದಂದು ಮಧ್ಯಾಹ್ನ 2-00 ಗಂಟೆಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಡಿ.ಜಿ. ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ತಿಳಿಸಿರುತ್ತಾರೆ. 2021, 2022 ಹಾಗೂ 2023ರಲ್ಲಿ ಅನುಕ್ರಮವಾಗಿ ಯಕ್ಷಗಾನ ರಂಗದ ದಿಗ್ಗಜ ಹಿಮ್ಮೇಳವಾದಕರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀ ಪೆರುವಾಯಿ ನಾರಾಯಣ ಭಟ್ ಹಾಗೂ ಶ್ರೀ ಮಿಜಾರು ಮೋಹನ ಶೆಟ್ಟಿಗಾರ್ ಇವರುಗಳಿಗೆ…