Author: roovari

ಮಂಗಳೂರು: ದಿನಾಂಕ 04-06-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ವಿದುಷಿ ಶ್ರೀಮತಿ ಬಿ. ಸುಮಂಗಲಾ ರತ್ನಾಕರ್ ರಾವ್ ಇವರ ಭರತನಾಟ್ಯ ಮಾರ್ಗದ ಕನ್ನಡ ನೃತ್ಯಬಂಧಗಳಿಗೆ ಸಂಬಂಧಪಟ್ಟಂತೆ ‘ನೃತ್ಯಕಾವ್ಯ’ ಕೃತಿಯ ಲೋಕಾರ್ಪಣೆ ಹಾಗೂ ಆತನ ಭಾವ ಛಾಯೆಗಳಿಗೆ ಸಂಬಂಧಿಸಿದ ‘ಭಾವಸ್ಥ’ ಎಂಬ ಶೀರ್ಷಿಕೆಯಡಿಯಲ್ಲಿ ನೃತ್ಯಗಳ ಪ್ರದರ್ಶನಗೊಂಡಿತು. ಶ್ರೀ ವಿಜಯಕುಮಾರ್ ಎಸ್‌. ಚೆನ್ನೈ, ಶ್ರೀ ಸಾಗರ್ ಟಿ.ಎಸ್. ತುಮಕೂರು, ಶ್ರೀ ಅನಿಲ್ ಅಯ್ಯ‌ರ್ ಬೆಂಗಳೂರು, ಶ್ರೀ ಬಿ. ದೀಪಕ್ ಕುಮಾರ್‌ ಪುತ್ತೂರು, ಶ್ರೀ ಪ್ರಮೋದ್‌ ಕುಮಾರ್ ಉಳ್ಳಾಲ, ಶ್ರೀ ಸುಜಯ್ ಶ್ಯಾನುಭಾಗ ಹುಬ್ಬಳ್ಳಿ ಈ ಆರೂ ಮಂದಿ ಭರತನಾಟ್ಯ ಕಲಾವಿದರು ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ ಇವರ ಅದ್ಭುತ ಕಂಠಸಿರಿಗೆ, ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ಇವರ ನಟುವಾಂಗ, ಶ್ರೀ ಕೇಶವ ಮೋಹನ ಮೈಸೂರು ಇವರ ವಯೋಲಿನ್ ವಾದನ ಹಾಗೂ ಶ್ರೀ ವಿನಯ್ ನಾಗರಾಜ್ ಬೆಂಗಳೂರು ಇವರ ಮೃದಂಗ ವಾದನ, ಈ ಎಲ್ಲಾ ಹಿಮ್ಮೇಳಕ್ಕೆ ಅದ್ಭುತ ನೃತ್ಯ ಪ್ರದರ್ಶನ ನೀಡಿದ್ದಾರೆ.  ಹಿರಿಯರಾದ ಕರ್ನಾಟಕ…

Read More

ಚಿಕ್ಕಮ್ಮನ ಅಸಡ್ಡೆಗೆ ಗುರಿಯಾದರೂ ಮಲ ಸೋದರಿಯ ಪ್ರೀತಿ ಸ್ನೇಹ ವಿಶ್ವಾಸ ಒಡಹುಟ್ಟಿದವರನ್ನು ಮೀರಿಸುವಂತಿದ್ದ ಕಾರಣದಿಂದ ಸೀತ ಮತ್ತು ಗೀತ ಒಟ್ಟಿಗೆ ವಿದ್ಯಾಭ್ಯಾಸವನ್ನು ನೆರೆಕೆರೆಯ ಮಕ್ಕಳೊಂದಿಗೆ ಬೆರೆಯುತ್ತಾ ಮುಗಿಸಿದರು. ಓದುತ್ತಿರುವಾಗಲೇ ತಮ್ಮ ಆಸಕ್ತಿಯನ್ನು ಹೊರಗೆಡಹಿದ ಟೋಮಿ ಮತ್ತು ರಫೀಕ್‌ರು ತಮ್ಮ ಮನದ ಇಚ್ಛೆಯೊಂದಿಗೆ ತಂದೆ ತಾಯಿಯರ ಆಸೆಗಳನ್ನು ಪೂರೈಸಲು ಶ್ರಮಿಸುತ್ತಿದ್ದರು. ವಯಸ್ಸಿಗೆ ತಕ್ಕಂತೆ ಯಾವುದೇ ಬೇಧ ಭಾವ ಅರಿಯದ ಪುಟ್ಟ ಮಕ್ಕಳು ಹೊಂದಿಕೊಂಡು ಬೆಳೆಯುತ್ತಾರೆ. ಅದಕ್ಕೆ ಪೂರಕವಾದ ವಾತಾವರಣವನ್ನು ಪೋಷಕರು ನಿರ್ಮಿಸಿ ಕೊಡುವ ಪ್ರಯತ್ನ ಮಾಡಿದರು. ಹಣ ಗಳಿಸುವ, ಗುಣ ಬೆಳೆಸಿಕೊಳ್ಳುವ ಮತ್ತು ವಿದ್ಯೆಯ ಮಹತ್ವವನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡುವಲ್ಲಿ ಲೇಖಕಿ ಸಮರ್ಥವಾಗಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಬಡವಾಗುವ ಕೂಸಿನ ಚಿತ್ರಣ ಮತ್ತು ಸಹಪಾಠಿಗಳಿಂದ ತನ್ನ ತಂದೆಯೊಂದಿಗೆ ಮಾತನಾಡಲು ಅವಕಾಶ ಇವೆಲ್ಲವೂ ನೈಜ ಘಟನೆಯೆಂಬಂತೆ ಬಿಂಬಿತವಾಗಿವೆ. ಟೋಮಿಯ ಕಾಲಿಗೆ ಪೆಟ್ಟು ಬಿದ್ದು ಶಾಲೆಗೆ ಹೋಗಲಾಗದ ಪರಿಸ್ಥಿತಿಯು ಉತ್ತಮವಾಗಿ ಮೂಡಿಬಂದಿದೆ. ಆ ಸಂದರ್ಭದಲ್ಲಿ ಗೆಳೆಯರು ನೀಡುವ ಸಹಾಯಹಸ್ತ, ಮಾನಸಿಕ ಧೈರ್ಯ ಮತ್ತು ಪರಸ್ಪರ ಸಹಕಾರವನ್ನು…

Read More

ಬೆಂಗಳೂರು: ಖ್ಯಾತ ಕಲಾವಿದ ಗಣೇಶ್ ಕೃಷ್ಣ ಧಾರೇಶ್ವರ ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ದಿನಾಂಕ 16-06-2023 ರಿಂದ 21-06-2023ರ ವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಪ್ರದರ್ಶನಗೊಂಡಿತು. ಈ ಕಲಾ ಸೃಷ್ಟಿಯ ಬಗ್ಗೆ ನಮಗೆ ಕುತೂಹಲವಿರುವಂತೆಯೇ ಕಲಾವಿದನ ಬಗ್ಗೆಯೂ ಕೂಡ ಸಾಮಾನ್ಯರಲ್ಲಿ ಸಹಜವಾಗಿ ಕುತೂಹಲವಿರುತ್ತದೆ. ಕಲಾವಿದನೂ ಕೂಡ ಒಬ್ಬ ಸೃಷ್ಟಿಕರ್ತನಂತೆಯೇ ಗೋಚರಿಸುತ್ತಾನೆ. ಕಲಾವಿದ ನಿರ್ಮಿಸುವ ಕಲಾಕೃತಿಗಳ ವಿವಿಧ ವಿಸ್ಮಯಗಳನ್ನು ಅವಲೋಕಿಸಿದಾಗ ನೋಡುಗರಿಗೆ ಸಹಜವಾಗಿ ಕುತೂಹಲ ಕೆರಳುಸುವುದರಲ್ಲಿ ಆಶ್ಚರ್ಯವೇನಿಲ್ಲ. ಹೀಗೇ ಇದು ನಮ್ಮ ನಡುವೆಯೇ ಬೆಳೆದ ಕಲಾವಿದನ ಸ್ವರೂಪದ ಬಗ್ಗೆ ಕುತೂಹಲ ಮತ್ತು ಕಲಾಕೃತಿಯ ಬಗ್ಗೆ ಅವಿನಾಭಾವ ಸಂಬಂಧ ಮೂಡುವುದು. ಕಲಾಕೃತಿಗಳಿಗೆ, ದೃಶ್ಯ ಪ್ರಪಂಚಕ್ಕೆ ಹತ್ತಿರವಾದಾಗ  ಅಂತರಂಗದಲ್ಲಿ ಅಲೌಕಿಕ ಆನಂದದ ಅನುಭವವಾಗುವುದು. ಈ ನಿಟ್ಟಿನಲ್ಲಿ ಶ್ರೀ ಗಣೇಶ ಧಾರೇಶ್ವರರ ಕಲಾಕೃತಿಗಳು ನೋಡುಗರನ್ನು ಚಿಂತನೆಗೆ ಹಚ್ಚುವ ಮತ್ತು ಕಲಾಕ್ಷೇತ್ರದ ಮೇಲೆ ಪರಿಣಾಮ ಬೀರುವ ಕಲಾಕೃತಿಗಳಾಗಿ ಗೋಚರಿಸುತ್ತವೆ. ಕಲಾಪ್ರಯೋಗಗಳು ವಿಭಿನ್ನ ರೀತಿಯಲ್ಲಿ ತೆರೆದು ಕೊಳ್ಳುತ್ತಿರುವ ಮತ್ತು ಬದಲಾಗುತ್ತಿರುವ ಒಲವು ನಿಲುವುಗಳ ವೈವಿಧ್ಯತೆಯಿಂದಾಗಿ ಹೊಸ ಅನುಭವಗಳು ಹುಟ್ಟಿಕೊಂಡು…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾರದಾ ಸಂಸ್ಥೆಗಳ ಆಶ್ರಯದಲ್ಲಿ ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರಮವು ದಿನಾಂಕ 16-06-2023ರಂದು ಮಂಗಳೂರಿನ ಶಾರದಾ ವಿದ್ಯಾನಿಲಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ “ಮೊಬೈಲ್ ಹಾಗೂ ಟಿ.ವಿ.ಗಳ ಬಳಕೆಯಿಂದ ಇಂದು ಪುಸ್ತಕ ಓದುವವರು ಕಡಿಮೆಯಾಗಿದ್ದಾರೆ. ಪತ್ರ ಬರೆಯುವುದು ನಿಂತು ಹೋಗಿರುವ ಈ ಸಂದರ್ಭದಲ್ಲಿ ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿಯೊಂದಿಗೆ ಅಭ್ಯಾಸವನ್ನೂ ಬೆಳೆಸಿಕೊಳ್ಳುವಂತೆ ಮಾಡಬೇಕು. ಒಬ್ಬ ಶಿಕ್ಷಕನಾಗಿ, ಭಾರತೀಯನಾಗಿ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ನನಗೆ ಕಾಳಜಿ ಇದೆ” ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ದಯಾನಂದ ರಾಮಚಂದ್ರ ನಾಯಕ್ ಮಾತನಾಡುತ್ತಾ ವಿದ್ಯಾರ್ಥಿಗಳ ಜ್ಞಾನವರ್ಧನೆಯ ಕಾರ್ಯದಲ್ಲಿ ಶ್ರೀ ಬಿ.ಆರ್. ನರಸಿಂಹ ರಾವ್ ರಂಥ ದಾನಿಗಳು ಮುಂದೆ ಬಂದು ಪುಸ್ತಕಗಳನ್ನು ನೀಡಿರುವುದು ಶ್ಲಾಘನೀಯ ಎಂದರು. ಮಂಗಳೂರು ದಕ್ಷಿಣ…

Read More

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರಂಗಸ್ಪಂದನ ಸಂಸ್ಥೆ ಆಯೋಜಿಸಿರುವ ‘ಸಾಂಸ್ಕೃತಿಕ ರಂಗದಿಬ್ಬಣ’ದ ಸರಣಿ ಕಾರ್ಯಕ್ರಮದ ಅಂಗವಾಗಿ ನಗರದ ಪುರಭವನದಲ್ಲಿ ದಿನಾಂಕ 12-06-2023ರಂದು ಸಂಜೆ ಆಯೋಜಿಸಿದ್ದ ‘ಶಿವದೂತೆ ಗುಳಿಗೆ’ ಪೌರಾಣಿಕ ತುಳು ನಾಟಕ ಪ್ರದರ್ಶನದೊಂದಿಗೆ ಉದ್ಘಾಟನಾ ಸಮಾರಂಭ ನಡೆಯಿತು. ಚಾಲನೆ ನೀಡಿದ ಕಟೀಲು ಕ್ಷೇತ್ರದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಮಾತನಾಡಿ “ಕಾಂತಾರ ಚಲನಚಿತ್ರದ ಪ್ರಭಾವದಿಂದ ಅನೇಕರಿಗೆ ಸಿನಿಮಾ ಬಗ್ಗೆ ಆಸಕ್ತಿ ಮೂಡಿದೆ. ಅದೇ ರೀತಿ ಶಿವದೂತೆ ಗುಳಿಗೆ ನಾಟಕವು ರಂಗಭೂಮಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು ನಾಟಕಗಳ ಬಗ್ಗೆ ಆಸಕ್ತಿ ಮೂಡಲು ನೆರವಾಗಿದೆ. ಕರಾವಳಿಯ ದೈವಗಳ ಕುರಿತು ಇಂಥ ನಾಟಕಗಳು ಇನ್ನಷ್ಟು ಪ್ರದರ್ಶನಗೊಳ್ಳಲಿ” ಆಶಿಸಿದರು. “ದೇಶದ ವಿವಿಧ ಕಡೆಗಳಲ್ಲಿ ಸಂಚಲನ ಸೃಷ್ಟಿಸಿದ ತುಳು ನಾಟಕ ಶಿವದೂತೆ ಗುಳಿಗೆ ಸದ್ಯದಲ್ಲೇ ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಪ್ರದರ್ಶನ ಕಾಣಲಿದೆ. ನಾಟಕದ ಮಲಯಾಳಂ ಆವೃತ್ತಿ ದುಬೈಯಲ್ಲಿ, ನಂತರ ಪಾಲಕ್ಕಾಡ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಇಂಗ್ಲಿಷ್‌ನಲ್ಲಿ ನಾಟಕ ಸಿದ್ಧಗೊಳ್ಳುತ್ತಿದ್ದು ಮರಾಠಿಗೂ ಅನುವಾದ…

Read More

ದುಬೈ : ಒಂದು ಕಾಲದಲ್ಲಿ ಆರ್ಥಿಕವಾಗಿ ಬಡತನದ ಬೇಗೆಯಲ್ಲಿ ಬಳಲುತ್ತಿದ್ದ ಯಕ್ಷಗಾನ‌ ಕಲಾವಿದರಿಗೆ ಆಸರೆಯ ದ್ಯೋತಕವಾಗಿ ಯಕ್ಷಧ್ರುವ ಪಟ್ಲ ಪೌಂಡೇಶನ್ ಮೂಲಭೂತ ಸಹಕಾರಗಳನ್ನು ನೀಡುತ್ತಾ ಜನ ಮಾನಸದಲ್ಲಿ ನೆಲೆಗೊಳ್ಳುತ್ತಿರುವ ನಡುವೆ ಈ ಪ್ರೋತ್ಸಾಹಕ ಸಂಘಟನೆಗೆ ಪೋಷಕವಾಗಿ ಹಲವಾರು ದಾನಿಗಳು ತಮ್ಮ ಕೈಲಾದ ಕೊಡುಗೆ ನೀಡುತ್ತಾ ಯಕ್ಷ ಕಲೆಯನ್ನು ಶ್ರೀಮಂತಗೊಳಿಸುತ್ತಿರುವುದು ವರ್ತಮಾನದಲ್ಲಿ ಕಾಣಬಹುದಾಗಿದೆ. ಇದಕ್ಕೊಂದು ಸ್ಪಷ್ಟ ನಿದರ್ಶನ ಎಂಬಂತೆ ಪ್ರಪ್ರಥಮ ಬಾರಿಗೆ ಗಲ್ಫ್ ರಾಷ್ಟ್ರದಲ್ಲಿ ನಡೆದ ವಿಶ್ವ ಪಟ್ಲ ಸಂಭ್ರಮವು ಸಾವಿರಾರು ಯಕ್ಷಾಭಿಮಾನಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಜರುಗಿರುವುದಲ್ಲದೆ ವಿವಿದೆಡೆಯ ಗಣ್ಯರನ್ನು ವಿಶ್ವ ಮಟ್ಟದಲ್ಲಿ ಗುರುತಿಸಿ ಸಂಭ್ರಮಿಸಿರುವುದು ಈ ಬಾರಿ ದುಬೈಯಲ್ಲಿ ನಡೆದ ವಿಶ್ವ ಪಟ್ಲ ಸಂಭ್ರಮದ ಸವಿಶೇಷತೆಯಾಗಿದೆ. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಮತ್ತು ಪಟ್ಲ ಘಟಕ ದುಬೈಯ ಸಹಯೋಗದೊಂದಿಗೆ ಜೂನ್ 11ರಂದು ದುಬೈಯ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಸಭಾಂಗಣದಲ್ಲಿ ಜರಗಿದ ದುಬೈ ‘ಯಕ್ಷೋತ್ಸವ 2023 ಮತ್ತು ವಿಶ್ವ ಪಟ್ಲ ಸಂಭ್ರಮ’ಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿರುವುದಲ್ಲದೆ ವಿವಿಧ ಕೊಡುಗೆ ನೀಡುವ…

Read More

ಮಂಗಳೂರು : ನಮ್ಮ ಕುಡ್ಲದವರು ಪ್ರಸ್ತುತ ಪಡಿಸುವ ವಿದ್ಯಾರ್ಥಿಗಳಿಗೆ ‘ನೃತ್ಯ ಭಜನೆ -2023’ ಸೀಸನ್ -2 ಮೊದಲ ಸುತ್ತಿನ ಸ್ಪರ್ಧೆ ದಿನಾಂಕ :01-07-2023 ಹಾಗೂ 02-07-2023ರಂದು ಮಂಗಳೂರಿನ ಡೊಂಗರಕೇರಿ, ಕೆನರಾ ಗರ್ಲ್ಸ್ ಹೈಸ್ಕೂಲ್, ಸುಧೀಂದ್ರ ಅಡಿಟೋರಿಯಂನಲ್ಲಿ ನಡೆಯಲಿದೆ. ಸ್ಪರ್ಧಾ ನಿಯಮಗಳು: * ನೃತ್ಯ ಮಾಡುತ್ತಾ ಭಜನೆ ಮಾಡಬೇಕು – ಭಾಷೆಗೆ ನಿರ್ಬಂಧವಿಲ್ಲ. * ಶಾಲಾ-ಕಾಲೇಜಿನ ಹಾಗೂ ಸಂಘ ಸಂಸ್ಥೆಗಳ ತಂಡಗಳಿಗೆ ಅವಕಾಶ. (ವಿದ್ಯಾರ್ಥಿಗಳೇ ಆಗಿರಬೇಕು) *18 ವರ್ಷದೊಳಗಿನವರಿಗೆ ಮಾತ್ರ ಅವಕಾಶ. (ಡಿಸೆಂಬರ್ 2023ರಲ್ಲಿ ವಯೋಮಿತಿ 18 ವರ್ಷ ದಾಟಿರಬಾರದು) * ಧ್ವನಿ ಮುದ್ರಿತ ಸಂಗೀತಕ್ಕೆ ಅವಕಾಶವಿಲ್ಲ. * ಮೊದಲ ಸುತ್ತಿನಲ್ಲಿ 10 ನಿಮಿಷಗಳ ಕಾಲಾವಕಾಶ. * ತಂಡದಲ್ಲಿ ಕನಿಷ್ಠ 8, ಗರಿಷ್ಠ 12 ಮಂದಿ ಇರಬೇಕು. * ಹಿಮ್ಮೇಳ, ಮುಮ್ಮೇಳ ಸೇರಿ ಗರಿಷ್ಠ 17 ಮಂದಿ ಇರಬಹುದು. * ಯಾವುದೇ ವಾದ್ಯ – ವಾದನ ಪರಿಕರಗಳನ್ನು ಬಳಸಬಹುದು. * ಬಾಲಕ, ಬಾಲಕಿಯರಿಗೆ ಪ್ರತ್ಯೇಕ ವಿಭಾಗವಿರುವುದಿಲ್ಲ. * ಆಧಾರ್ ಹಾಗೂ ಶಾಲಾ –…

Read More

ಮಂಗಳೂರು : ಶಾಂತಿ ಪ್ರಕಾಶನ ಏರ್ಪಡಿಸುವ ರಾಜ್ಯ ಮಟ್ಟದ ‘ಮಕ್ಕಳ ಕಥಾ ಸ್ಪರ್ಧೆ’ – ಬರವಣಿಗೆ ನಿಮ್ಮದು. ಪ್ರೋತ್ಸಾಹ ನಮ್ಮದು. ಕಥಾ ಸ್ಪರ್ಧೆ ನಿಯಮಗಳು : 1. ಕಥೆಯು ಸ್ವಂತ ರಚನೆಯಾಗಿರಬೇಕು. ಕೃತಿಚೌರ್ಯ ಮತ್ತು ಅನುವಾದಿತ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ. 2. ಕಥೆಯು ಕನ್ನಡದಲ್ಲೇ ಬರೆಯಬೇಕು. 3. ಒಬ್ಬರಿಗೆ ಒಂದೇ ಕಥೆ ಕಳುಹಿಸಲು ಅವಕಾಶ ಹಾಗೂ ಯಾವುದೇ ಕಾವ್ಯನಾಮದಿಂದ (Pen Name) ಕಥೆಯನ್ನು ಬರೆದಿರಬಾರದು. 4. ಕಥೆಯು 600-800 ಪದಗಳ ಮಿತಿಯಲ್ಲಿರಬೇಕು. 5. ಕಥೆಯಲ್ಲಿ ಮಕ್ಕಳಿಗೆ ಅನುಕೂಲವಾಗುವ ಭಾಷೆ, ಶೈಲಿ ಮತ್ತು ಮೌಲ್ಯಗಳಿಗೆ ಆದ್ಯತೆ ಪ್ರಾಶಸ್ತ್ಯ ನೀಡಬೇಕು. 6. ಕಥೆಗಾರರಿಗೆ ಯಾವುದೇ ವಯೋಮಿತಿಯ ನಿರ್ಬಂಧ ಇರುವುದಿಲ್ಲ. 7. ಕಥೆಯು ಹೊಸದಾಗಿರಬೇಕು. ಮಕ್ಕಳ ಕಥೆಯಾಗಿರಬೇಕು. ಯಾವುದೇ ಪತ್ರಿಕೆ, ಪುಸ್ತಕ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರಬಾರದು. 8. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುವುದು. 9. ಕಳುಹಿಸಿಕೊಟ್ಟಿರುವ ಕಥೆಗಳ ಪೂರ್ತಿ ಹಕ್ಕು ಸ್ವಾಮ್ಯ ಆಯೋಜಕರಿಗೆ ಇರುವುದು. 10. ಕಥೆ ಕಳುಹಿಸಲು ಕೊನೆಯ ದಿನಾಂಕ : 2023 ಜೂನ್ 30,…

Read More

ಬದಿಯಡ್ಕ : ನೀರ್ಚಾಲು ಎಂಎಸ್‌ಸಿ ಎಎಲ್‌ಪಿ ಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬದಿಯಡ್ಕ ರಂಗಸಿರಿ ಸಾಂಸ್ಕೃತಿಕ ವೇದಿಕೆ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ದಿನಾಂಕ :11-06-2023 ಭಾನುವಾರ ನಡೆದ ಗ್ರಾಮ ಪರ್ಯಟನೆಯ 4ನೇ ಸರಣಿ ಕಾರ್ಯಕ್ರಮದಲ್ಲಿ ‘ಸಾಮಾಜಿಕ ನೆಲೆಯಲ್ಲಿ ಕನ್ನಡ’ ಎಂಬ ವಿಚಾರದಲ್ಲಿ ಶಿಕ್ಷಕ ಪ್ರದೀಪ್‌ ಕುಮಾರ್ ಶೆಟ್ಟಿ ಬೇಳ ಉಪನ್ಯಾಸ ನೀಡಿದರು. ಅವರು ಮಾತನಾಡುತ್ತಾ “ಕನ್ನಡವನ್ನು ಬೆಳೆಸಬೇಕಾದ ಈ ಪ್ರದೇಶದಲ್ಲಿ ಉಳಿಸಬೇಕಾದ ಪರಿಸ್ಥಿತಿಯಿದೆ. ನಮ್ಮ ಭಾಷೆಯ ಮೇಲೆ ಅನ್ಯ ಭಾಷೆ ಪ್ರಭಾವ ಬಹಳವಾಗಿ ಬೀರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರಿಗೆ ಕೂಡಾ ಕನ್ನಡದ ಭಾಷಾ ಶುದ್ಧತೆ ಉಳಿಸಬೇಕಾದ ಅನಿವಾರ್ಯತೆಯಿದೆ. ಕನ್ನಡ ಮಾಧ್ಯಮದಲ್ಲಿ 1ರಿಂದ 10ನೇ ತರಗತಿಯ ತನಕ ಕಲಿತ ಮಕ್ಕಳಿಗೆ ಕೇರಳ ಹಾಗೂ ಕರ್ನಾಟಕದಲ್ಲಿ ಗರಿಷ್ಠ ಸೌಲಭ್ಯ ದೊರೆಯುತ್ತದೆ. ಭಾಷೆ ಉಳಿದಾಗ ನಮ್ಮ ಸಂಸ್ಕೃತಿಯೂ ಉಳಿಯುತ್ತದೆ. ಕನ್ನಡ ಭಾಷಾ ರಕ್ಷಣೆಯು ಕನ್ನಡಿಗರ ಕರ್ತವ್ಯ, ಭಾಷೆಯ ಕಡಿಮೆ ಬಳಕೆಯಿಂದ ಸಂಸ್ಕೃತಿಯೂ ನಾಶವಾಗುತ್ತದೆ” ಎಂದು…

Read More

ಬೆಂಗಳೂರು : ಶಂಕರ್ ಗಣೇಶ್ ರಚನೆ ಮತ್ತು ನಿರ್ದೇಶನದ ರಂಗಸೌರಭ ಪರಿಕಲ್ಪನೆಯ ‘ಮಾವಿನಗುಡಿ ಕಾಲೋನಿ’ ನಾಟಕವು ದಿನಾಂಕ 20-06-2023ರ ಸಂಜೆ ಬೆಂಗಳೂರಿನ ಜೆ.ಪಿ. ನಗರದ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ಬಗ್ಗೆ : ಜಾಗತೀಕರಣ ಮತ್ತು ಪ್ರಗತಿಯ ಹೆಸರಿನಲ್ಲಿ ನಾಶವಾಗಿ ಹೋದ ಕಾಡುಗಳೆಷ್ಟು, ಹಳ್ಳಿಗಳೆಷ್ಟೋ, ಅಂತೆಯೇ ಎಷ್ಟೋ ನಗರಗಳೂ ಕೂಡ ಈ ಪ್ರಗತಿಯ ಅಬ್ಬರಕ್ಕೆ ಸಿಲುಕಿ ತಮ್ಮ ಸೊಬಗು, ವೈಭವಗಳನ್ನು ಕಳೆದುಕೊಂಡಿವೆ. ಲಗಾಮಿಲ್ಲದ ಹುಚ್ಚು ಕುದುರೆಯಂತೆ ಉದ್ದಗಲಕ್ಕು ಹರಡುತ್ತಿರುವ ವೃದ್ಧಿಯೆಂಬ ಈ ಕುರುಡುತನ, ಒಂದು ರೀತಿಯ ಸಾಂಕ್ರಮಿಕ ಖಾಯಿಲೆಯಂತೆ ಕಾಣುವುದರಲ್ಲಿ ಅನುಮಾನವೇ ಇಲ್ಲ. ಪ್ರಗತಿಯ ಪತಾಕೆ ಹಿಡಿದು ಓಡಾಡುತ್ತಿರುವ ನಗರವಾಸಿಗಳು ತಿರುಗಿ ನೋಡಿದಾಗ, ಹಿಂದೊಂದು ದಿನ ತಾವಿದ್ದ ಜಾಗ ಬದಲಾಗಿರುವುದನ್ನು ಕಂಡಾಗ, ಆಗುವ ಆಶ್ಚರ್ಯ ಒಂದು ಕಡೆಯಾದರೆ ಮತ್ತೊಂದೆಡೆ ಅಘಾತವೂ ಉಂಟಾಗುತ್ತದೆ. ಬದಲಾವಣೆಯೆಂಬುವುದು ನಮ್ಮನ್ನು ಯಾವ ದಿಕ್ಕಿಗೆ ಕರೆದುಕೊಂಡು ಹೋಗುತ್ತಿದೆ ಎಂಬ ಗೊಂದಲಗಳು ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಹೇಗೆ ಕಾಡುಗಳನ್ನು ಮತ್ತು ಹಳ್ಳಿಗಳನ್ನು ಉಳಿಸುವುದು ಅನಿವಾರ್ಯವೋ ಅಂತೆಯೇ ನಗರಗಳನ್ನು ಬೆಳೆಸದೆ ಉಳಿಸಿಕೊಳ್ಳುವುದು ಅನಿವಾರ್ಯ.…

Read More