Author: roovari

ಮಂಗಳೂರು : ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗಣ ಇವುಗಳ ಜಂಟಿ ಆಶ್ರಯದಲ್ಲಿ ‘ಭರತನಾಟ್ಯಂ ಕಾರ್ಯಾಗಾರ’ವನ್ನು ದಿನಾಂಕ 9 ಡಿಸೆಂಬರ್ 2024 ಮತ್ತು 10 ಡಿಸೆಂಬರ್ 2024ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರವನ್ನು ವಿದ್ವಾನ್ ವೈಭವ ಅರೆಕರ್ ಇವರು ನಡೆಸಿಕೊಡಲಿದ್ದು, ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗೆ 9845169506 ಮತ್ತು 9845091838 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಸಹಯೋಗದಲ್ಲಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರ ನೂತನ ಕೃತಿ ‘ಸೀಯನ’ ಚೀಪೆ ಕೋಪೆದ ಪಾಕ ಪದೊಕುಲು ಕವನ ಸಂಕಲನದ  ಲೋಕಾರ್ಪಣೆ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮವು ದಿನಾಂಕ 17 ನವೆಂಬರ್ 2024ರಂದು ಕದ್ರಿ ಶ್ರೀ ಮಂಜುನಾಥ ದೇವಾಲಯದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಹಿರಿಯ ಜಾನಪದ ಸಂಶೋಧಕರಾದ ಪ್ರೊ. ಎ. ವಿ. ನಾವಡ ಮಾತನಾಡಿ “ತುಳು ಭಾಷೆಯಲ್ಲಿ ಬರೆಯುವ ಹೆಚ್ಚಿನ ಲೇಖಕರು ಭಾಷೆಯ ಬಗ್ಗೆ ಗಂಭೀರವಾಗಿ ಯೋಚಿಸುವುದಿಲ್ಲ. ಆದರೆ ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೀಯನ’ ಕೃತಿಯಲ್ಲಿ ವಸ್ತುವೈವಿಧ್ಯತೆಯೊಂದಿಗೆ ಭಾಷೆಯನ್ನು ಸಶಕ್ತವಾಗಿ ಬಳಸಲಾಗಿದೆ. ‘ಸೀಯನ’ ಶೀರ್ಷಿಕೆಯೇ ಅಪ್ಪಟ ತುಳು ದೇಸಿ ಪದ. ಮೂರು ವಿಭಾಗಗಳಲ್ಲಿ ಪ್ರಕಟವಾಗಿರುವ ನೂರಕ್ಕೂ ಹೆಚ್ಚಿನ ಅವರ ಕವಿತೆಗಳಲ್ಲಿ ತುಳು ಬದುಕಿನ ನೈಜ ಚಿತ್ರಣವನ್ನು ವಿವಿಧ ಆಯಾಮಗಳಲ್ಲಿ ಕಟ್ಟಿ ಕೊಡಲಾಗಿದೆ.…

Read More

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಇದರ ವತಿಯಿಂದ ದಿನಾಂಕ 23 ನವೆಂಬರ್ 2024ರಂದು ‘ಓದು-ಸಂವಾದ’ ಕಾರ್ಯಕ್ರಮ ಮತ್ತು ದಿನಾಂಕ 24 ನವೆಂಬರ್ 2024 ರಂದು ಕೃತಿ ಬಿಡುಗಡೆ ಸಮಾರಂಭವು ಮಂಗಳೂರಿನ ಉರ್ವಸ್ಟೋರ್ ಅಶೋಕ ನಗರ ಕಚೇರಿ ಬಳಿಯಿರುವ ಸಾಹಿತ್ಯ ಸದನದಲ್ಲಿ ನಡೆಯಲಿದೆ. ದಿನಾಂಕ 23 ನವೆಂಬರ್ 2024ರಂದು ಅಪರಾಹ್ನ 2-30 ಗಂಟೆಗೆ ನಡೆಯಲಿರುವ ‘ಓದು-ಸಂವಾದ’ ಕಾರ್ಯಕ್ರಮದಲ್ಲಿ ಲೇಖಕಿ ಉಷಾ ಪಿ. ರೈಯವರ ‘ಒಲ್ಲೆನೆನ್ನದಿರು ನಮ್ಮದಲ್ಲದ ನಾಳೆಗಳ’ (ಆತ್ಮಕಥನ ಭಾಗ -2) ಸಂವಾದ ನಡೆಯಲಿದೆ. ಶ್ರೀಮತಿ ವನಜಾಕ್ಷಿ ಉಳ್ಳಾಲ ಇವರು ಆಶಯ ಗೀತೆ ಹಾಗೂ ಶ್ರೀಮತಿ ಕಾತ್ಯಾಯಿನಿ ಭಿಡೆಯವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು, ಕ.ಲೇ.ವಾ. ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ದಿನಾಂಕ 24 ನವೆಂಬರ್ 2024ರಂದು ಅಪರಾಹ್ನ 3-00 ಗಂಟೆಗೆ ನಡೆಯಲಿರುವ ಕೃತಿ ಬಿಡುಗಡೆ ಸಮಾರಂಭದಲ್ಲಿ ಚಂದ್ರಕಲಾ ನಂದಾವರ ಇವರ…

Read More

ಕೇರಳದ ಪ್ರಸಿದ್ಧ ಲೇಖಕರಾದ ವೈಕಂ ಮುಹಮ್ಮದ್ ಬಷೀರ್ ಇವರು ಮಲಯಾಳಂನಲ್ಲಿ ಮುಸ್ಲಿಂ ಸಂವೇದನೆಯನ್ನು ತಂದ ಮೊದಲಿಗರು. ಮುಸ್ಲಿಂ ಸಂಸ್ಕೃತಿಯ ಅನಾವರಣವನ್ನು ಮಾಡುವುದರೊಂದಿಗೆ ತಮ್ಮ ಸಮುದಾಯದವರೂ ಒಳಗೊಂಡಂತೆ ಸಮಾಜದ ವಿವಿಧ ಸ್ತರಗಳಿಗೆ ಸೇರಿದ ಮೂಢರು, ಸೋಗಲಾಡಿ ರಾಜಕಾರಣಿಗಳು, ಹುಸಿ ಕ್ರಾಂತಿಕಾರಿಗಳನ್ನು ಚಿತ್ರಿಸಿದರು. ಎಲ್ಲಾ ಮತಧರ್ಮಗಳಲ್ಲಿರುವ ಒಳಿತನ್ನು ಸ್ವೀಕರಿಸುವುದರೊಂದಿಗೆ ಕೆಡುಕುಗಳನ್ನು ವಿರೋಧಿಸಿದರು. ಎಲ್ಲೂ ರೊಚ್ಚು, ಆವೇಶ ಮತ್ತು ಅಬ್ಬರಗಳಿಲ್ಲ. ಯಾಕೆಂದರೆ ಅವರಲ್ಲಿರುವ ಹಾಸ್ಯ ಪ್ರಜ್ಞೆಯು ಭಾವಾತಿರೇಕ ಮತ್ತು ಅತಿಯಾದ ಆದರ್ಶಗಳಿಗೆ ಕಟ್ಟೆಯನ್ನು ಕಟ್ಟಿತು. ವ್ಯವಸ್ಥೆಯನ್ನು ವಿರೋಧಿಸಿ ಬರೆಯುವಾಗ ಅವರು ಕ್ರಾಂತಿಕಾರಿ ಎನಿಸಿಕೊಳ್ಳದೆ ಮಾನವ ಪ್ರೇಮಿ ಎನಿಸಿಕೊಂಡರು. ಮಾನವೀಯ ಸಂಬಂಧಗಳು ಶಿಥಿಲವೂ ಅಪರಿಚಿತವೂ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ದನಿಗಳು ಅನಿವಾರ್ಯವೂ ಅಪೇಕ್ಷಣೀಯವೂ ಆಗಿವೆ. ಸರಕು ಸಂಸ್ಕೃತಿಯ ಭೌತಿಕ ಸಂಪನ್ನತೆ, ಬೌದ್ಧಿಕ ಹೆಚ್ಚುಗಾರಿಕೆ, ಶುಷ್ಕ ತತ್ವೋಪದೇಶಗಳು ಬದುಕನ್ನು ಆರ್ದಗೊಳಿಸಲಾರವು. ಪ್ರೀತಿ ಎಂಬ ಎರಡಕ್ಷರಗಳೇ ಬದುಕಿನ ತಾರಕ ಮಂತ್ರ ಎನಿಸಬಲ್ಲವು. ಪ್ರೀತಿಯ ತುಡಿತವನ್ನು ಹೊಂದಿದ ಸಾಹಿತ್ಯವು ಸದಾ ಜೀವಂತವಾಗಿರುತ್ತದೆ. ಆದ್ದರಿಂದ ಮೋಹನ ಕುಂಟಾರ್ ಅವರು ವೈಕಂ ಮುಹಮ್ಮದ್…

Read More

ಮಂಗಳೂರು: ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಆಯೋಜಿಸಿದ್ದ 12ನೇ ವರ್ಷದ ನುಡಿ ಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭ 17 ನವೆಂಬರ್ 2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್‌ ಬೋಳಾ‌ರ್ ಮಾತನಾಡಿ “ಕಲೆಯ ಆರಾಧನೆಯಿಂದ ಕಲಾವಿದ ಬೆಳೆಯುತ್ತಾನೆ. ಕಲೆಯೂ ತನ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತದೆ. ಕಲಾರಾಧನೆಯಿಂದ ಯಕ್ಷಗಾನ ಕಲೆ ಹೆಚ್ಚು ಶ್ರೀಮಂತಗೊಳ್ಳಲಿದೆ. ನುರಿತ ಕಲಾವಿದ ತನ್ನ ಪ್ರಾವೀಣ್ಯವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡದೆ ಕಲೆಯ ಶ್ರೀಮಂತಿಕೆ ಹೆಚ್ಚಿಸಲು ನಡೆಸುವ ಪ್ರಯತ್ನಗಳು ಕಲೆಯ ಬೆಳವಣಿಗೆಗೆ ಕಾರಣವಾಗುತ್ತವೆ. ಕಲೆ ತನ್ನ ಬದುಕಿಗೆ ಮೌಲ್ಯ ತಂದುಕೊಟ್ಟಿದೆ ಎಂಬ ವಿನೀತ ಭಾವದಿಂದ ಕಲೆಯನ್ನು ಅರಾಧಿಸುತ್ತ ಹೋದರೆ ಅದು ಇನ್ನಷ್ಟು ಹೆಚ್ಚಿನ ಸಿದ್ಧಿ ಮತ್ತು ಪ್ರಸಿದ್ಧಿ ಸಾಧಿಸಲು ಸಾಧ್ಯ.” ಎಂದರು. ಕರ್ಣಾಟಕ ಬ್ಯಾಂಕ್‌…

Read More

ಮಂಗಳೂರು : ಮಧುರತರಂಗ (ರಿ.), ಮಂಗಳೂರು ದಕ್ಷಿಣ ಕನ್ನಡ ಅರ್ಪಿಸುವ ಜಗದೀಶ್ ಶಿವಪುರ ಇವರ ಗಾಯನ ಜೀವನದ 55ನೇ ವರ್ಷದ ‘ಗಾಯನಜ್ಯೋತಿ’ ಮನರಂಜನಾ ಕಾರ್ಯಕ್ರಮವನ್ನು ದಿನಾಂಕ 22 ನವೆಂಬರ್ 2024ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ಶ್ರೀ ಕೃಷ್ಣ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕದ್ರಿಯ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಧ್ಯಕ್ಷತೆಯಲ್ಲಿ ಶ್ರೀ ವೆಂಕಟೇಶ್ ಹೊಸಬೆಟ್ಟು ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿರುವರು. ಹಿರಿಯ ಕಲಾ ಸಾಹಿತಿ ಶ್ರೀ ಜನಾರ್ದನ ಹೆಚ್. ಹಂದೆ ಕೋಟ ಇವರಿಂದ ಶುಭ ಗಾಯನ ನಡೆಯಲಿದ್ದು, ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು.

Read More

ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ‘ಅಮ್ಮ ಪ್ರಶಸ್ತಿ’ಗೆ 10 ಮಂದಿ ಲೇಖಕರು ಆಯ್ಕೆಯಾಗಿದ್ದಾರೆ. ವಿದ್ಯಾರಶ್ಮಿ ಪೆಲತ್ತಡ್ಕ – ಕರೆ ದಡ, ಡಾ. ಎಚ್.ಎಸ್. ಸತ್ಯನಾರಾಯಣ – ಬಿದಿರ ತಡಿಕೆ, ಪ್ರಭಾವತಿ ದೇಸಾಯಿ – ಸೆರಗಿಗಂಟಿದ ಕಂಪು, ವೀರೇಂದ್ರ ರಾವಿಹಾಳ್ – ಡಂಕಲ್ ಪೇಟೆ, ಪೂರ್ಣಿಮಾ ಮಾಳಗಿಮನಿ – ಮ್ಯಾಜಿಕ್ ಸೌಟು, ದ್ವಾರನಕುಂಟೆ ಪಾತಣ್ಣ – ರಾಣಿ ಅಹಲ್ಯಾಬಾಯಿ ಹೋಳ್ಕರ್, ಗುರುಪ್ರಸಾದ ಕಂಟಲಗೆರೆ – ಅಟ್ರಾಸಿಟಿ, ಡಾ. ಪರ್ವಿನ್ ಸುಲ್ತಾನಾ – ಶರಣರ ನಾಡಿನ ಸೂಫಿ ಮಾರ್ಗ, ಡಾ. ಪ್ರಕಾಶ ಭಟ್ – ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ ಹಾಗೂ ಮಂಜುನಾಥ ಚಾಂದ್ – ಪ್ರಿಯ ಮೀರಾ ಕೃತಿಗಳನ್ನು 24ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲ ರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ಪತ್ರಕರ್ತ-ಲೇಖಕ ಮಹಿಪಾಲ ರೆಡ್ಡಿ ಮುನ್ನೂರ್ ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿರುವ ಈ…

Read More

ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಆಯೋಜಿಸುವ ‘ವಿಶ್ವಕರ್ಮ ಕಲಾ ಸಿಂಚನ 2024’ ಕಾರ್ಯಕ್ರಮವು  ದಿನಾಂಕ 15 ಡಿಸೆಂಬರ್ 2024ರಂದು ಪೂರ್ವಾಹ್ನ 9-00 ಗಂಟೆಯಿಂದ ಮಂಗಳೂರು ರಥಬೀದಿಯ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತಿ ಸಿಂಚನ, ಜ್ಞಾನ ಸಿಂಚನ, ಚಿತ್ರ ಸಿಂಚನ ಮತ್ತು ಪ್ರತಿಭಾ ಸಿಂಚನ ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ವಿಶ್ವಬ್ರಾಹ್ಮಣ ಸಮಾಜ ಬಾಂಧವರಿಗಾಗಿ ಕಲೆ, ಸಂಸ್ಕೃತಿ, ಪರಂಪರೆ, ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಲಿದೆ. ನೋಂದಾವಣೆಗೆ ಕೊನೆಯ ದಿನಾಂಕ 08 ಡಿಸೆಂಬರ್ 2024 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಾವಣೆಗೆ 9482184197 ಸಂಪರ್ಕಿಸಿರಿ. ಸಂಜೆ 5-00 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

Read More

ಬೆಂಗಳೂರು: ಇಂದಿರಾನಗರದ ಎಸ್. ಚನ್ನಪ್ಪ ಪ್ರತಿಷ್ಠಾನವು ಮಕ್ಕಳ ಸಾಹಿತ್ಯ ಕೃತಿಗಳಿಗೆ ಬಹುಮಾನ ನೀಡಲು ನಿರ್ಧರಿಸಿದೆ. ಈ ಸಂಬಂಧ 2024ನೇ ಸಾಲಿನಲ್ಲಿ ಪ್ರಕಟಗೊಂಡ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತರು ಪುಸ್ತಕದ ನಾಲ್ಕು ಪ್ರತಿಗಳನ್ನು ಕಾರ್ಯದರ್ಶಿ, ಎಸ್. ಚನ್ನಪ್ಪ ಪ್ರತಿಷ್ಠಾನ, 333, ಅರ್ಕಾವತಿ ಮೊದಲ ಹಂತ, ಇಂದಿರಾನಗರ, ಬೆಂಗಳೂರು-560038 ಈ ವಿಳಾಸಕ್ಕೆ 15 ಡಿಸೆಂಬ‌ರ್ 2024ರೊಳಗೆ ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9880848716

Read More

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ  ಅಹಲ್ಯಾಬಾಯಿ ಹೋಳ್ಕರ್ ವೇದಿಕೆಯಲ್ಲಿ ನಡೆದ ಎರಡು ದಿನದ ‘ಕನಸುಗಳು-2024’  ಕಾರ್ಯಕ್ರಮದ ಸಮಾರೋಪ ಸಮಾರಂಭ ದಿನಾಂಕ 16 ನವೆಂಬರ್ 2024ರಂದು ನಡೆಯತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ವಿಶ್ವಾಸ್‌ ಶೆಣೈ ಮಾತನಾಡಿ “ಕನಸುಗಳನ್ನು ಎಲ್ಲರೂ ಕಾಣುತ್ತಾರೆ. ಯಶಸ್ಸು ಸಾಧಿಸಲು ಕನಸು ಬೇಕೇ ಬೇಕು, ಆದರೆ ಕನಸು ನನಸಾಗಲು  ಪ್ರಯತ್ನ ಮತ್ತು ಪರಿಶ್ರಮ ಬಹು ಮುಖ್ಯ. ಪೆನ್ಸಿಲ್‌ ತಪ್ಪು ಬರೆದಾಗ ಇರೇಸರ್‌ ಅದನ್ನು ತಿದ್ದಿ ತೀಡುವ ರೀತಿಯಲ್ಲಿ ಅಧ್ಯಾಪಕರು ಮತ್ತು ಪೋಷಕರು ವಿದ್ಯಾರ್ಥಿಗಳನ್ನು ತಿದ್ದಿ, ಗುರಿಯತ್ತ ಚಲಿಸುವಂತೆ ಮಾಡುತ್ತಾರೆ. ಹಾಗಾಗಿ ಕನಸು ನನಸಾದ  ಮೇಲೆ ಸಾಧನೆಯ ಹಾದಿಯಲ್ಲಿ ನಿಮ್ಮ ಜೊತೆಗಿದ್ದವರನ್ನು ಮರೆಯಬಾರದು. ಈ ಕಾಲಘಟ್ಟದಲ್ಲಿ ರಾಷ್ಟ್ರಪ್ರೇಮ ಇರುವ ಯುವಶಕ್ತಿ ದೇಶದ ವಿಕಾಸಕ್ಕೆ ಬೇಕು, ಇಂದು ನಮ್ಮ ದೇಶಕ್ಕೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕ ಸಿಕ್ಕಿದ್ದಾರೆ, ನಾವೂ ಕೂಡಾ ಅವರಂತೆ ರಾಷ್ಟ್ರೀಯತೆ ಬೆಳೆಸಿಕೊಳ್ಳಬೇಕು.” ಎಂದರು. ಇನ್ನೋರ್ವಮುಖ್ಯ ಅತಿಥಿ  ಲೇಬಲ್ ಫ್ಯೂಸ್ ಕಂಪನಿಯ…

Read More