Author: roovari

ಶಿರಸಿ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಕರ್ನಾಟಕ ಇದರ ವತಿಯಿಂದ ‘ಪಂಪ ಕಂಡ ಭಾರತ’ ರಾಜ್ಯ ಸಾಹಿತ್ಯ ಗೋಷ್ಠಿಯನ್ನು ದಿನಾಂಕ 17 ನವೆಂಬರ್ 2024ರಂದು ಬೆಳಿಗ್ಗೆ 8-00 ಗಂಟೆಗೆ ಶಿರಸಿ ತಾಲೂಕು ಬನವಾಸಿಯ ವನವಾಸಿಕ ಯಾತ್ರಿ ನಿವಾಸದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇದರ ಉಪಾಧ್ಯಕ್ಷರಾದ ಶ್ರೀ ಎಸ್.ಜಿ. ಕೋಟಿ ಬಾಗಲಕೋಟ ಇವರು ಉದ್ಘಾಟನೆ ಮಾಡಲಿದ್ದು, ಕನ್ನಡ ವಿದ್ವಾಂಸರು ನಿವೃತ್ತ ಪ್ರಾಂಶುಪಾಲರಾದ ಡಾ. ವಿಷ್ಣು ಭಟ್ಟ ಪಾದೇಕಲ್ಲು ಇವರು ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಪುಟ್ಟು ಕುಲಕರ್ಣಿಯವರ ‘ಶ್ರೀ ಅರವಿಂದರ ಸಾವಿತ್ರಿ’ ಎಂಬ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಅವಧಿ 1ರಲ್ಲಿ ‘ಕರ್ಣಾರ್ಜುನ’ ಮಹಾರಾಣಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಜಗದೀಶ ತುರಗನೂರು ಮೈಸೂರು ಇವರು ‘ವಿಕ್ರಮಾರ್ಜುನ ವಿಜಯದ ಕರ್ಣ’ ಮತ್ತು ಸಾಹಿತ್ಯ ವಿದ್ವಾಂಸರಾದ ಡಾ. ಶ್ರೀಧರ ಹೆಗಡೆ ಬದ್ರಸ್ ಧಾರವಾಡ ಇವರು ‘ಅರಿಕೇಸರಿ ಅರ್ಜುನನಾದ ಬಗೆ’ ಹಾಗೂ ಅವಧಿ…

Read More

ಶಂಭೂರು : ಮಕ್ಕಳ ಕಲಾ ಲೋಕ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇವರ ನೇತೃತ್ವದಲ್ಲಿ ಹಾಗೂ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇದರ ಆಶ್ರಯದಲ್ಲಿ 18ನೇ ವರ್ಷದ ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವು ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 19 ನವೆಂಬರ್ 2024ರಂದು ಜರಗಲಿದೆ. ಮಕ್ಕಳಿಂದಲೇ ಅಧ್ಯಕ್ಷತೆ, ಉದ್ಘಾಟನೆ, ವೇದಿಕೆ ನಿರ್ವಹಣೆಗಳು ನಡೆಯಲಿದ್ದು, ಹಿರಿಯರು ಹಿನ್ನೆಲೆಯಲ್ಲಿ ಅಗತ್ಯ ಬಂದಾಗ ಮಾರ್ಗದರ್ಶನ ಮಾಡುವರು. 18 ವಯೋಮಾನದವರೆಗಿನ ಮಕ್ಕಳು ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬಹುದು. ಯಾವುದೇ ನಿರ್ಬಂಧಗಳಿರುವುದಿಲ್ಲ, ಶಾಲೆಯಿಂದ ಭಾಗವಹಿಸುವ ಮಕ್ಕಳಿಗೆ ಸಂಖ್ಯಾ ಮಿತಿ ಇರುವುದಿಲ್ಲ. ಸ್ಪರ್ಧೆ ಮತ್ತು ಬಹುಮಾನಗಳಿರದ ವಿಶಿಷ್ಟವಾದ ಕಾರ್ಯಕ್ರಮ. ಭಾಗವಹಿಸಿದವರೆಲ್ಲರಿಗೂ ಪ್ರಮಾಣ ಪತ್ರ ಮತ್ತು ಪುಸ್ತಕ ಸ್ಮರಣಿಕೆ ನೀಡಲಾಗುತ್ತದೆ. ಮಕ್ಕಳಿಗೆ ಸಾಹಿತ್ಯ ಮತ್ತು ಕಲೆಗಳಲ್ಲಿ ತೊಡಗಲು ಪ್ರೇರಣೆ ಕೊಡುವ ಮತ್ತು ಹಿಂಜರಿಕೆ, ಸಂಕೋಚ, ಭಯಗಳನ್ನು ತೊಲಗಿಸಲು ‘ಮಕ್ಕಳ ಕಲಾ ಲೋಕ’ ವಿಶೇಷ ಪ್ರಯತ್ನವನ್ನು ಮಾಡುತ್ತದೆ ಎಂದು ಮಕ್ಕಳ ಕಲಾಲೋಕದ ಅಧ್ಯಕ್ಷರಾದ ರಮೇಶ ಎಂ.…

Read More

ಪುತ್ತೂರು : ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಜ್ಯಮಟ್ಟದ “ಕನಸುಗಳು – 2024” ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 15 ನವೆಂಬರ್ 2024ರಂದು ಕಾಲೇಜಿನ ಅಹಲ್ಯಾಬಾಯಿ ಹೋಳ್ಕರ್‌ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಡಾ. ಕೆ. ಎಮ್‌. ಕೃಷ್ಣ ಭಟ್‌ ಮಾತನಾಡಿ “ಕನಸು ಒಂದು ಸುಧೀರ್ಘವಾದ ಪಯಣ. ಕನಸುಗಳಿಲ್ಲದ ಬದುಕು ಅಸಾಧ್ಯ. ಕನಸಿನ ಯಾತ್ರೆಗೆ ಒಂದು ಸ್ಪಷ್ಟವಾದ ದಾರಿ ಇರಬೇಕು. ಕ್ರಮಿಸುವ ಹಾದಿಯಲ್ಲಿ ಬದ್ಧತೆಗಳು ಸೇರಿಕೊಂಡಾಗ ಯಾವ ನಿರ್ಧಾರಗಳು ಸಡಿಲವಾಗಲು ಸಾಧ್ಯವಿಲ್ಲ. ಜೀವನದಲ್ಲಿ ಬರುವ ಪ್ರತಿಕೂಲ ಸಮಸ್ಯೆಗಳು ನಮ್ಮನ್ನು ಯಶಸ್ಸಿನಿಂದ ಹಿಮ್ಮೆಟ್ಟಿಸದಿರಲಿ. ಚುಚ್ಚಬಲ್ಲ ಮುಳ್ಳುಗಳನ್ನು ಕೊಡವಿಕೊಂಡು ಮತ್ತೆ ಹೆಜ್ಜೆಗಳನ್ನು ಇಡುವಲ್ಲಿ ದೃಢನಿರ್ಧಾರದ ಅಗತ್ಯವಿದೆ. ವಿದ್ಯಾರ್ಥಿಗಳು ಕಂಡ ಕನಸಿನ ಸಿದ್ಧತೆ ಮೊಳಕೆ ಒಡೆಯುವಂತಹ ಕಾರ್ಯಕ್ರಮ ಇದಾಗಿದೆ.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಕೃಷ್ಣಪ್ರಸನ್ನ ಕೆ. ಮಾತನಾಡಿ “ಪ್ರತಿಯೊಬ್ಬನ ಕನಸು ನನಸಾಗಲು…

Read More

ಬೆಂಗಳೂರು : ರಂಗರಥ ಅರ್ಪಿಸುವ ಇಂಟರ್ನ್ ಶಿಪ್ 36ರ ಶಿಬಿರಾರ್ಥಿಗಳು ಅಭಿನಯಿಸುವ ಬಿ.ಆರ್. ಲಕ್ಷ್ಮಣ ರಾವ್ ಇವರ ನಗೆ ನಾಟಕ ‘ನಂಗ್ಯಾಕೊ ಡೌಟು’ ದಿನಾಂಕ 17 ನವೆಂಬರ್ 2024ರಂದು ಸಂಜೆ 6-00 ಗಂಟೆಗೆ ಬೆಂಗಳೂರು ಜೆ.ಪಿ.ನಗರದ ವ್ಯೋಮ ಆರ್ಟ್ ಸ್ಪೇಸ್ ಆ್ಯಂಡ್ ಸ್ಟೂಡಿಯೋ ಥಿಯೇಟರ್ ಇಲ್ಲಿ ಪ್ರದರ್ಶನಗೊಳ್ಳಲಿದೆ. 75 ನಿಮಿಷಗಳ ಕನ್ನಡ ನಾಟಕವನ್ನು ಶ್ವೇತಾ ಶ್ರೀನಿವಾಸ್ ಮತ್ತು ಆಸಿಫ್ ಕ್ಷತ್ರಿಯ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 8050157443 ಮತ್ತು 9448276776 ಸಂಪರ್ಕಿಸಿರಿ. ನಮ್ಮ ಬದುಕು ಪ್ರತೀ ಹಂತದಲ್ಲೂ ಡೌಟಲ್ಲೇ ಇರುತ್ತೆ. ಮೂಲಭೂತವಾಗಿ ನಾಳೆ ಇರ್ತೀವಾ ಅನ್ನೋದೇ ಡೌಟು. ಹಾಗಾಗಿ ಈ ನಾಟಕ ಯಾಕೆ ಮಿಸ್ ಮಾಡ್ಕೊಬೇಕು ?!… ಅಲ್ವಾ ???!!!

Read More

ಸುಳ್ಯ : ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಇದರ ವತಿಯಿಂದ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಸುಳ್ಯ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ – ಸಾಹಿತ್ಯ ಸಂಭ್ರಮದ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕನ್ನಡ ಶಿಕ್ಷಕರಿಗೆ ಕಾರ್ಯಾಗಾರವು ದಿನಾಂಕ 09 ನವೆಂಬರ್ 2024ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು. ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ. ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರು ಅಂಬ್ಲಮೊಗರು ಸರಕಾರಿ ಪ್ರೌಢಶಾಲಾ ಸಹಶಿಕ್ಷಕ ಡಾ. ರಾಮಮೂರ್ತಿ ಕೆ., ಬಂಟ್ವಾಳದ ಎಸ್.ವಿ.ಎಸ್. ದೇವಳ ಪ.ಪೂ. ಕಾಲೇಜಿನ ಉಪನ್ಯಾಸಕ ಜಯಾನಂದ ಪೆರಾಜೆ, ಸಜ್ಜನ ಪ್ರತಿಷ್ಠಾನದ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ, ಕ.ಸಾ.ಪ. ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಗೌರವ ಕೋಶಾಧಿಕಾರಿ ದಯಾನಂದ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ.ಸಾ.ಪ. ನಿರ್ದೇಶಕರುಗಳಾದ ಶ್ರೀಮತಿ ರಶ್ಮಿ ಭಟ್ ಪ್ರಾರ್ಥಿಸಿ, ಸಂಕೀರ್ಣ ಚೊಕ್ಕಾಡಿ ಸ್ವಾಗತಿಸಿ, ಶ್ರೀಮತಿ…

Read More

ಉಡುಪಿ : ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು (ರಿ.), ಉಡುಪಿ ಇದರ ವತಿಯಿಂದ ನೆಹರೂ ಜಯಂತಿ ಪ್ರಯುಕ್ತ ‘ಮಕ್ಕಳ ನಾಟಕ ಹಬ್ಬ -2024’ವನ್ನು ದಿನಾಂಕ 17 ನವೆಂಬರ್ 2024ರಂದು ಸಂಜೆ 3-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ರಂಗ ತಜ್ಞರಾದ ಶಶಿಧರ ಭಾರೀಘಾಟ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆರೂರು ಬ್ರಹ್ಮಾವರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ಬಿಂದು ರಕ್ಷಿದಿ ನಿರ್ದೇಶನದಲ್ಲಿ ಪ್ರೀತಂ ಸುಧಾ ರಚನೆಯ ‘ದೆವ್ವ ಮತ್ತು ಪುಟ್ಟ’ ಹಾಗೂ ಸುಧಾ ಆಡುಕಳ ರಚನೆಯ ‘ನಮೆಗೆಷ್ಟು ಭೂಮಿ ಬೇಕು’, ಬ್ರಹ್ಮಾವರದ ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಬಿ.ವಿ. ಕಾರಂತ ರಚನೆಯ ರೋಹಿತ್ ಎಸ್. ಬೈಕಾಡಿ ಇವರ ನಿರ್ದೇಶನದಲ್ಲಿ ‘ಪಂಜರ ಶಾಲೆ’ ಮತ್ತು ನಿಧಿ ಎಸ್. ಶಾಸ್ತ್ರಿ ಕೇರಳ ಇವರ ರಚನೆ ಮತ್ತು ನಿರ್ದೇಶನದಲ್ಲಿ ಕಿನ್ನರ ಮೇಳ ತುಮರಿ ಇವರು ‘ಇರುವೆ ಪುರಾಣ’ ಎಂಬ ನಾಟಕ ಪ್ರದರ್ಶನ ನೀಡಲಿದ್ದಾರೆ.

Read More

ಉಡುಪಿ : ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಶ್ರೀಮತಿ ರುಕ್ಕಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರಕೂರು ಇವರ ಸಹಯೋಗದಲ್ಲಿ ‘ಕನಕ ಜಯಂತಿ – 2024’ ಕಾರ್ಯಕ್ರಮವು ದಿನಾಂಕ 18 ನವೆಂಬರ್ 2024ರಂದು ಬೆಳಿಗ್ಗೆ ಘಂಟೆ 9-45ರಿಂದ ಬಾರಕೂರಿನ ಶ್ರೀಮತಿ ರುಕ್ಕಿಣಿ ಶೆಡ್ತಿ ಸ್ಮಾರಕ ಸ. ಪ್ರ. ದ. ಕಾಲೇಜು ಇದರ ಸಭಾಂಗಣದಲ್ಲಿ ನಡೆಯಲಿದೆ. ಶ್ರೀಮತಿ ರು. ಶೆ. ಸ್ಯಾ. ನ್ಯಾ. ಸ. ಪ್ರ. ದ. ಕಾಲೇಜು ಬಾರಕೂರು ಇದರ ಪ್ರಾಂಶುಪಾಲರಾದ ಡಾ. ಎಸ್. ಭಾಸ್ಕರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಂಗಳೂರು , ಬಿ. ಬಿ. ಎಂ. ಪಿ. ಇದರ ಹೆಚ್ಚುವರಿ ಆಯುಕ್ತರಾದ ಶ್ರೀ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಾಜೇಶ್ ಶ್ಯಾನುಭೋಗ್ ಹಾಗೂ ಬಳಗದವರಿಂದ (ಶ್ರೀ ಪಿ. ಕಾಳಿಂಗ ರಾವ್ ಸ್ಮೃತಿ…

Read More

ಡಾ. ಗೋಪಾಲಕೃಷ್ಣ ಲಕ್ಷ್ಮೀನಾರಾಯಣ ಹೆಗಡೆಯವರ ಕುರಿತಂತೆ ಅಕ್ಷರೀಕರಿಸುವ ಹೊತ್ತಿನಲ್ಲಿ ಭಾವಾಭಿವ್ಯಕ್ತಿಗೆ ಭಾಷೆಯು ಸಾಧನವೆಂಬುದೇ ಸುಳ್ಳೆನಿಸುತ್ತಿದೆ. ಹಾಗಿರುವವರು ಅವರು. ಶಬ್ದಗಳಿಗೆ ನಿಲುಕದವರು, ವಾಕ್ಯಗಳಿಂದ ಕಟ್ಟಿಕೊಡಲಾಗದವರು, ಭಾಷೆಯನ್ನು ಮೀರಿ ಬಲಿತವರು, ಸಾಹಿತ್ಯದ ಮೇರೆಯನ್ನು ದಾಟಿದವರು, ನೂರಕ್ಕೆ ನೂರರಷ್ಟು ಗುರುತ್ವದ ಎತ್ತರದಲ್ಲಿದ್ದವರು. ಲಕ್ಷೋಪಲಕ್ಷ ವಿದ್ಯಾರ್ಥಿಗಳ ಅಂತರಂಗದ ನಿತ್ಯನಂದಾದೀಪವಾಗಿ ಆರಾಧ್ಯರಾಗಿದ್ದವರು. ಯಾರೊಂದಿಗೂ ಹೋಲಿಸಲಾಗದ – ಹೋಲಿಸಲೇ ಬಾರದ, ತನಗೆ ತಾನೇ ಸಾಟಿಯಾದ ಅವರು ಕಲಿಸುವುದಕ್ಕೆಂದೇ ಹುಟ್ಟಿದವರು. ಇಂಥವರ ವಿದ್ಯಾರ್ಥಿಯಾಗಿರುವುದು ಬದುಕಿನ ಬಹುದೊಡ್ಡದಾದ ಭಾಗ್ಯವೆಂದುಕೊಂಡವನು ನಾನು. ಇದಕ್ಕಾಗಿ ಬಿಗುಮಾನದಿಂದ ಬೀಗದೇ, ಧನ್ಯತೆಯಿಂದ ಬಾಗುತ್ತೇನೆ. ನಾನವರ ಸಮ್ಮೋಹಕವಾದ ವರ್ಣಮಯವಾಗಿರುವ ಅನುಪಮ ವ್ಯಕ್ತಿತ್ವವನ್ನು ಕಳೆದ ಮೂರು ದಶಕಗಳಿಂದ ಬೆರಗುಗಣ್ಣಿನಿಂದ ನೋಡುತ್ತಲೇ – ಕಾಣುತ್ತಲೂ ಬಂದವನು. ಉತ್ತರ ಕನ್ನಡದ ವಿದ್ಯಾಕಾಶಿಯೆನಿಸಿದ ಕುಂಭಪುರದ ಪ್ರತಿಷ್ಠಿತ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನೆಲನುಡಿಯ ಬೋಧಕರಾಗಿ ಅವರು ಮೂಡಿಸಿದ ಛಾಪು ಅನನ್ಯವಾದದು. ಅವರದು ಕೇವಲ ತರಗತಿಯಾಗಿರಲಿಲ್ಲ. ಪ್ರತಿ ಪಾಠವೂ ಕನ್ನಡಾಂಬೆಯ ನಿತ್ಯೋತ್ಸವವೇ ಆಗಿರುತ್ತಿತ್ತು. ರನ್ನ, ಬೇಂದ್ರೆ, ಕೇಶಿರಾಜ ಹಾಗೂ ಕಾವ್ಯಮೀಮಾಂಸೆಗಳ ಕುರಿತಂತೆ ಅವರು…

Read More

ಕಾಸರಗೋಡು: ಚಿನ್ಮಯ ವಿದ್ಯಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಿಶು ದಿನಾಚರಣೆಯನ್ನು ದಿನಾಂಕ 14 ನವೆಂಬರ್ 2024 ರಂದು ಆಚರಿಸಲಾಯಿತು. ಇದೇ ಸಂದರ್ಭದಲಿ ಹಿಂದಿ ಸಾಹಿತ್ಯ ಬಿರುದಾಂಕಿತ ಬರಹಗಾರ, ಕೇರಳ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಕೆ. ವಿ. ಕುಮಾರನ್ ಮಾಸ್ಟರ ಇವರನ್ನು ಕೇರಳ ಚಿನ್ಮಯಮಿಷನ್ ಇದರ ಅಧ್ಯಕ್ಷ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಮುಖ್ಯಸ್ಥರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ಶಾಲು ಹೊದಿಸಿ ಸನ್ಮಾನಿಸಿದರು. ಅನಂತರ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಕೆ.ವಿ ಕುಮಾರನ್ ಮಾಸ್ಟರ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಕಿರುಚಲನ ಚಿತ್ರ’ವನ್ನು ಬಿಡುಗಡೆಗೊಳಿಸಲಾಯಿತು. ಅನಂತರ ಶಿಶು ದಿನಾಚರಣೆಯ ಅಂಗವಾಗಿ ಅಧ್ಯಾಪಕ ವೃಂದದವರಿಂದ ಮೂಡಿ ಬಂದ ಸಾಂಸ್ಕೃತಿಕ ಕಾರ್ಯಕ್ರಮವು ವಿದ್ಯಾರ್ಥಿಗಳ ಮನಸ್ಸನ್ನು ಸೂರೆಗೊಂಡಿತು. ಕಾರ್ಯಕ್ರಮದಲ್ಲಿ ಮಾತಾಜಿ ದಿಶಾ ಚೈತನ್ಯ, ಚಿನ್ಮಯ ಮಿಷನ್ ಇದರ ಅಧ್ಯಕ್ಷ ಎ. ಕೆ. ನಾಯರ್, ಕಾರ್ಯಕದರ್ಶಿ ಕೆ. ಬಾಲಚಂದ್ರನ್, ಪ್ರಾಂಶುಪಾಲರಾದ ಸುನಿಲ್ ಕುಮಾರ್ ಕೆ.…

Read More

ಉಡುಪಿ : ನೃತ್ಯನಿಕೇತನ ಕೊಡವೂರು ಅರ್ಪಿಸುವ ‘ಕೃಷ್ಣ ಪ್ರೇಮ’ ಮತ್ತು ‘ವಿಶ್ವ ನೃತ್ಯಪ್ರಭಾ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 19 ನವೆಂಬರ್ 2024ರಂದು ಸಂಜೆ 6-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗ ಇನ್ಫೋಸಿಸ್ ಹಾಲ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ‘ಕೃಷ್ಣ ಪ್ರೇಮ’ ಪ್ರಶಸ್ತಿಯನ್ನು ವಿದುಷಿ ರೂಪಶ್ರೀ ಮಧುಸೂಧನ್ – ನೃತ್ಯ ಸಾಹಿತ್ಯ, ಶ್ರೀ ಮುರಳೀಧರ ಕೆ. ಉಡುಪಿ – ನೃತ್ಯ ವಾದ್ಯ ಸಂಗೀತ, ಶ್ರೀ ರವಿರಾಜ್ ಕುಂಜಿಬೆಟ್ಟು – ನೃತ್ಯ ವರ್ಣಾಲಂಕಾರ, ಶ್ರೀ ಮುರಳೀಧರ ಭಟ್ ಕೊಡವೂರು – ನೃತ್ಯ ಛಾಯಾಗ್ರಹಣ ಹಾಗೂ ‘ವಿಶ್ವ ನೃತ್ಯಪ್ರಭಾ’ ಪ್ರಶಸ್ತಿಯನ್ನು ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಇವರುಗಳಿಗೆ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ‘ನೂಪುರನಿನಾದ’ ನೃತ್ಯ ಪ್ರಸ್ತುತಗೊಳ್ಳಲಿದೆ.

Read More