Author: roovari

ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ, ಆಶ್ರಯದಲ್ಲಿ ಬಡಗು ಯಕ್ಷಗಾನ ಹಿಮ್ಮೇಳ ತರಗತಿಗಳು ಜೂನ್ 4ರಂದು ಆರಂಭಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಿದ್ಧ ಚಂಡೆವಾದಕ ಶಿವಾನಂದ ಕೋಟ ‘ ಕಲಿತ ಸಂಸ್ಥೆಗೆ, ಕಲಿಸಿದ ಗುರುಗಳಿಗೆ ವಿಧೇಯರಾಗಿದ್ದರೆ ಕಲಿತ ಕಲಿಕೆ ಯಶಸ್ಸು ಸಾಧಿಸುತ್ತದೆ. ಗುರುಗಳ ಮುಖೇನ ಕಲಿತ ವಿದ್ಯೆ ರಂಗದಲ್ಲಿ ಕಾಣುತ್ತದೆ, ಮತ್ತು ಶಾಶ್ವತವಾಗಿ ನಿಲ್ಲುತ್ತದೆ ’ ಎಂದು ಹೇಳಿದರು . ಅತಿಥಿಗಳಲ್ಲಿ ಒಬ್ಬರಾದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡುತ್ತಾ ‘ಯಕ್ಷಗಾನ ಎನ್ನುವ ಶಬ್ದವೇ ರೋಮಾಂಚನ ಹುಟ್ಟಿಸುವಂತಹುದು ಶಬ್ದ. ಅಂತರಾಷ್ಟಿçÃಯ ನೆಲೆಯಲ್ಲಿ ಗಮನಿಸಿದರೆ ಪ್ರಪಂಚದ ಎಲ್ಲಾ ಕಲೆಗಳನ್ನು ಮೀರಿಸಬಲ್ಲ ಆಂತರಿಕ ಶಕ್ತಿಯನ್ನು ಹೊಂದಿರತಕ್ಕAತಹ ಕಲೆ ಯಕ್ಷಗಾನ. ಇಂತಹ ಕಲೆ ಕರಾವಳಿಯ, ಮಲೆನಾಡಿನ ಕೆಲವೇ ಮಂದಿಗೆ ಪರಿಚಯವಾಗಿದ್ದು ಹೊಸಬರಿಗೆ ಇನ್ನೂ ತಲುಪಲಿಲ್ಲವೆನ್ನುವುದು ವಿಷಾದನೀಯ. ಇನ್ನು ಯಕ್ಷಗಾನ ಕಲಿಕೆಗಾಗಿ ಬರುವವರು ಸೊನ್ನೆಯಿಂದ ಬರಬೇಕು. ಅಂತಹವರಿಗೆ ಮಾತ್ರ ಕಲಿಕೆ ಸುಲಭ ಸಾಧ್ಯ. ಇತರ ಕಲಿಕಾ ಕೇಂದ್ರಗಳನ್ನು ಗಮನಿಸಿದರೆ ಒಳ್ಳೆಯ ಗುರುಗಳ ವ್ಯವಸ್ಥೆ ಇದೆ. ಇಂತಹ ಗುರುಗಳಿಂದ…

Read More

ಬೆಂಗಳೂರು: ಕಲಾವಿಲಾಸಿ ಬೆಂಗಳೂರು ಪ್ರಸ್ತುತಪಡಿಸುವ ಬೀchi ಯವರ ಅನುಭವಗಳ ವಿಡಂಬನಾ ರೂಪಕ ‘ಮಾನಸ ಪುತ್ರ’ ಇದೇ ಬರುವ ದಿನಾಂಕ 11-06-2023 ರಂದು ಬೆಂಗಳೂರಿನ ಮಲ್ಲತಹಳ್ಳಿಯ ವಿಶ್ವವಿದ್ಯಾಲಯ ಸಮೀಪದ ಕಲಾಗ್ರಾಮದಲ್ಲಿ ನಡೆಯಲಿದೆ. ಬಸವರಾಜ ಎಮ್ಮಿಯವರು ರಚಿಸಿ ನಿರ್ದೇಶಿಸಲಿರುವ ಈ ನಾಟಕಕ್ಕೆ ಸತ್ಯ ರಾಧಾಕೃಷ್ಣ ಸಂಗೀತ ನೀಡಲಿದ್ದಾರೆ. ಬನದೇಶ್ ವಿ ಹಾಗೂ ಮೇಘ ಜೆ ಶೆಟ್ಟಿ ಕಲೆ ಹಾಗೂ ವಿನ್ಯಾಸ ಮಾಡಿದ್ದು ಮುರುಳೀಧರ ಚಿಮ್ಮಲಗಿ ವಸ್ತ್ರವಿನ್ಯಾಸ ಮಾಡಲಿದ್ದಾರೆ. ಸಿದ್ದರಾಮು ಕೆ. ಎಸ್ ಹಾಗೂ ಅಭಿಷೇಕ್ ಚಕ್ರಣ್ಣವರ್ ತಂಡದ ನಿರ್ವಹಣೆ ಮಾಡುತ್ತಿದ್ದು ವಿನೀತ್ ಚಿಮ್ಮಲಗಿಯವರ ಹಿನ್ನೆಲೆ ಸಹಕಾರವಿದೆ . ನಾಟಕದ ಕುರಿತು: “ಮಾನಸ ಪುತ್ರ” ನಾಟಕವು ಹಾಸ್ಯ ಬರಹಗಾರ ಚಿಂತಕ ಬೀಚಿಯವರ ಜೀವನಾಧಾರಿತ ನಾಟಕವಾಗಿರುತ್ತದೆ. ಪ್ರಮುಖವಾಗಿ ಬೀಚಿಯವರ ಆತ್ಮ ಚರಿತ್ರೆ ಹಾಗೂ ಅವರ ಇತರೆ ಸಾಹಿತ್ಯವನ್ನು ಆಧರಿಸಿ ಈ ನಾಟಕವನ್ನು ರಚಿಸಲಾಗಿದ್ದು, ಇಡಿಯಾಗಿ ಹಲವು ಭಾವಗಳುಳ್ಳ ನಾಟಕವು ಸಾಹಿತಿಯ ಬದುಕಿನ ಒಳ ನೋಟವನ್ನು ಪ್ರೇಕ್ಷಕರಿಗೆ ಕೊಡುತ್ತದೆ. ನಾಟಕದ ಪ್ರಮುಖ ಆಕರ ಗ್ರಂಥವಾಗಿರುವ “ನನ್ನ ಭಯಾಗ್ರಫಿ” ಕೃತಿಯು…

Read More

ದಿನೇಶ ಉಪ್ಪೂರರ ಈ ಪುಸ್ತಕ ಯಕ್ಷಗಾನದ ಲೋಕವನ್ನು ಬಲ್ಲವರಿಗೆ ಮತ್ತೆ ಮತ್ತೆ ಮೆಲ್ಲುವ ಕಜ್ಜಾಯ. ಓದಿಗೊಂದು ಹಾಸ್ಯದ ಮೆರಗು, ಮತ್ತೆ ಆಲೋಚಿಸಿದರೆ ಇಣುಕುವ ಲೋಕ ವಿವೇಕ. ಕಲೆಯ ಲೋಕ, ವಿಸ್ಮಯದ ಪ್ರಪಂಚ. ಕಲಾವಿದನನ್ನು ಸಾಮಾನ್ಯನಂತೆ ನಡೆಸಿಕೊಳ್ಳುವುದು ರಸಿಕರಿಗೆ ಒಪ್ಪುವ ಮಾತಲ್ಲ. ಕಲ್ಪನೆ, ಭ್ರಮೆಗಳಿಲ್ಲದಿದ್ದರೆ ಅದ್ಭುತ ರಮ್ಯವಾದ ಕಲೆಯನ್ನು ಅನುಭವಿಸಲಾಗುವುದಿಲ್ಲ.ಕಲಾವಿದನಿಗೂ ಸಹೃದಯನಿಗೂ ಸಮಾನವಾದ ಸಂಭ್ರಮ-ಸಮಸ್ಯೆ ಇದು. ಈ ವಿಸ್ಮಯದ ವಿಭಿನ್ನ ಮಗ್ಗುಲುಗಳು ತೆರೆದುಕೊಂಡಿವೆ ಈ ಪುಸ್ತಕದಲ್ಲಿ. ಬಲ್ಲವರಿಂದೆಲ್ಲ ಸಂಗ್ರಹಿಸಿದ `ಬಲ್ಲಿರೇನಯ್ಯ’ ಲೋಕಸಂಗ್ರಹದ ಹೊಸಪರಿಯಾಗಿದೆ. ಯಕ್ಷಗಾನದ ಕವಿ, ಕಲಾವಿದ, ಅರ್ಥಧಾರಿ, ಸಂಘಟಕ, ಪ್ರೇಕ್ಷಕರೆಲ್ಲರ ಸ್ವಾರಸ್ಯದ ನಡೆನುಡಿಗಳ ವಿವರದ ಗುಚ್ಛ. ಕಲೆ ಸೌಂದರ್ಯವನ್ನು ಸೃಷ್ಟಿಸುತ್ತದೆ. ಸೌಂದರ್ಯ ಆನಂದಕ್ಕೆ ಕಾರಣವಾಗುತ್ತದೆ. ಸಿಟ್ಟು, ದುಃಖ, ಸಮಸ್ಯೆಗಳೆಲ್ಲ ಸೌಂದರ್ಯವಾಗುವ, ರಸವಾಗುವ ಸಾಧ್ಯತೆ ಕಲೆಯಲ್ಲಿ. ಆ ಕಲೆಯೊಡನೆ ಗುರುತಿಸಿಕೊಂಡಿರುವವರ ರಂಗದ ನಡೆಯೊಡನೆ ರಂಗದಾಚೆಯ ನಡೆನುಡಿಗಳಲ್ಲೂ ಸಹೃದಯನಿಗೆ ಸೌಂದರ್ಯಾನುಭವವಾಗುವುದಿದೆಯಲ್ಲ ಅದು ವಿಶೇಷ. ಶಿರೂರು ಫಣಿಯಪ್ಪಯ್ಯನವರಿಗೆ ನಲವತ್ತು ಪ್ರಸಂಗಗಳ ಪದ್ಯಗಳು ಬಾಯಿಪಾಠವಾಗಿದ್ದವು ಎಂದರೆ ಒಂದು ಕಲೆಯ ಸಂಸ್ಕಾರ ಎಷ್ಟು ಎತ್ತರದ್ದು ಎಂದು ಅಚ್ಚರಿಯಾಗುತ್ತದಲ್ಲವೇ! ಕಲೆ…

Read More

ಬೆಂಗಳೂರು : ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯವು 2021ನೇ ಸಾಲಿನ ‘ಸಂಸ್ಕೃತ ಪುರಸ್ಕಾರ’ಕ್ಕೆ ಗ್ರಂಥಗಳನ್ನು ಆಹ್ವಾನಿಸಿದೆ. ಪುರಸ್ಕಾರವು 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಫಲಕವನ್ನು ಒಳಗೊಂಡಿದೆ. 2018ರಿಂದ ಈವರೆಗೆ ಪ್ರಕಟವಾದ ಪುಸ್ತಕಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುವುದು. ಲೇಖಕರು ತಮ್ಮ ಕೃತಿಗಳನ್ನು ಜೂನ್ 28ರೊಳಗೆ ಸಲ್ಲಿಸಬೇಕು. ಗ್ರಂಥಗಳನ್ನು ಉಪ ನಿರ್ದೇಶಕರು, ಪ್ರಸಾರಾಂಗ, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 18 ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ವಿವಿ ಯ ಜಾಲತಾಣ: www.ksu.ac.in ನಲ್ಲಿ ಸಂಸ್ಕೃತ ಗ್ರಂಥ ಪುರಸ್ಕಾರ ಯೋಜನೆಯ ಸಂಪೂರ್ಣ ವಿವರ ಲಭ್ಯವಿದೆ. ರಾಜ್ಯದಲ್ಲಿ ಸಂಸ್ಕೃತ ಸಾಹಿತ್ಯ ರಚನೆ/ ಗ್ರಂಥ ರಚನೆ ಮತ್ತು ಪ್ರಕಾಶನದ ಉದ್ಯಮವು ಬಹಳ ದೀರ್ಘ ಇತಿಹಾಸವನ್ನು ಹೊಂದಿದೆ. ಇಂದಿಗೂ ಅನೇಕ ವಿದ್ವಾಂಸರು ಸಂಸ್ಕೃತ ವಾಙ್ಮಯದ ಗದ್ಯ, ಪದ್ಯ ಇತ್ಯಾದಿ ಪ್ರಕಾರಗಳ ರಚನೆಯಲ್ಲಿ ತೊಡಗಿದ್ದಾರೆ. ಅನೇಕ ಯುವ ಪ್ರತಿಭೆಗಳೂ ಇಂಥ ಗ್ರಂಥ ರಚನೆಯಲ್ಲಿ ತಮ್ಮ ಕೌಶಲ ತೋರಿಸುತ್ತಿದ್ದಾರೆ. ಪ್ರತಿ ವರ್ಷ ಸಂಸ್ಕೃತ ವಾಙ್ಮಯ…

Read More

ಬದಿಯಡ್ಕ : ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಅಡೂರು ಕೊರತಿಮೂಲೆ ಕೃಷ್ಣ ನಿವಾಸದ ಬಾಲಕೃಷ್ಣ ತಂತ್ರಿ ಸ್ಮರಣಾರ್ಥ 2023ನೇ ಸಾಲಿನ ‘ಶಿವಗಿರಿ ಸಾಹಿತ್ಯ ಸ್ಪರ್ಧೆ’ಯನ್ನು ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ನಡೆಯುವ ಈ ಕವನ ಸ್ಪರ್ಧೆಗೆ ಮುಕ್ತ ಅವಕಾಶವಿದ್ದು, ಆಸಕ್ತರು ಕವನ ಕಳುಹಿಸಬಹುದು. ಸ್ಪರ್ಧಿಯ ಸಂಕ್ಷಿಪ್ತ ಪರಿಚಯ, ಸಂಪರ್ಕ ಸಂಖ್ಯೆ ಸಹಿತ ಪೂರ್ಣ ವಿಳಾಸವನ್ನು ಪ್ರತ್ಯೇಕವಾಗಿ ಲಗತ್ತಿಸಿರಬೇಕು. ಆಸಕ್ತರು ಸ್ವರಚಿತ ಕವನವನ್ನು ಅಂಚೆಯ ಮೂಲಕ, ವಿರಾಜ್ ಅಡೂರು, ಕೃಷ್ಣನಿವಾಸ ಮನೆ, ಅಡೂರು ಗ್ರಾಮ, ಉರುಡೂರು ಅಂಚೆ, ಕಾಸರಗೋಡು – 671543 ವಿಳಾಸಕ್ಕೆ ಜೂನ್ 25ರ ಮೊದಲು ತಲುಪುವಂತೆ ಕಳುಹಿಸಬಹುದು.

Read More

ಬೆಂಗಳೂರು : ಬಸವ ಸಮಿತಿ ಬೆಂಗಳೂರು ವತಿಯಿಂದ ದಿನಾಂಕ 24-05-2023ರಂದು ಲಿಂ. ಎಸ್.ಜಿ. ಬಾಳೇಕುಂದ್ರಿಯವರ ಸಂಸ್ಮರಣಾರ್ಥ ವಚನಾಮೃತ ಸಾರದ ಭಕ್ತಿ ಸಂಗೀತ ಕಾರ್ಯಕ್ರಮವು ಬಸವ ಸಮಿತಿಯಲ್ಲಿ ಯಶಸ್ವಿಯಾಗಿ ನೆರವೇರಿತು. ಬಸವ ಸಮಿತಿ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಂಸ್ಮರಣಾ ಕಾರ್ಯಕ್ರಮದಲ್ಲಿ ಎರಡನೇ ಸರ್. ಎಂ.ವಿಶ್ವೇಶ್ವರಯ್ಯ ಎಂದೇ ಖ್ಯಾತರಾದ ಶ್ರೇಷ್ಠ ನೀರಾವರಿ ತಜ್ಞರಾದ ಎಸ್.ಜಿ. ಬಾಳೇಕುಂದ್ರಿರವರ 101ನೇ ಜನ್ಮ ಶತಮಾನೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಬೆಂಗಳೂರಿನ ಪ್ರೊ. ಎಮಿರಿಟಿಸ್ ಜಯದೇವ ಆಸ್ಪತ್ರೆಯ ಖ್ಯಾತ ಮಕ್ಕಳ ಹೃದ್ರೋಗ ತಜ್ಞರಾದ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿಯವರು ಸಂಸ್ಮರಣಾ ನುಡಿಗಳನ್ನಾಡಿದರು. ಭಕ್ತಿ ಗಂಧರ್ವ ವಿದ್ವಾನ್ ಎಂ.ಎಸ್. ದೀಪಕ್ ಅವರು ‘ವಚನಾಮೃತ ಸಾರ’ ಎಂಬ ಬಸವಣ್ಣ ವಚನಗಳನ್ನು ವಿಶೇಷ ಸಂಗೀತ ಕಚೇರಿಯ ಮೂಲಕ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಬಹಳ ಸೊಗಸಾಗಿ ಪ್ರಸ್ತುತಪಡಿಸಿದರು. ಶ್ರೀಯುತ ದೀಪಕ್ ಅವರ ಗುರುಗಳಾದ ಗಾನ ಕಲಾಭೂಷಣ ಡಾ. ವಿದ್ವಾನ್ ಆರ್.ಕೆ. ಪದ್ಮನಾಭ ಅವರು ಕರ್ನಾಟಕ ಸಂಗೀತದಲ್ಲಿ ಮಾತ್ರ ಕೇಳ-ಸಿಗಬಹುದಾದ ಒಂದು…

Read More

ಮೈಸೂರು : ಸಮತಾ ಅಧ್ಯಯನ ಕೇಂದ್ರವು ಆಯೋಜಿಸಿದ್ದ ಡಾ.ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯಮಟ್ಟದ ಕಾವ್ಯ ಮತ್ತು ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ 01-06-2023 ಗುರುವಾರ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಶೋಧಕಿ ಟಿ.ಎನ್. ನಾಗರತ್ನಾ “ಸ್ತ್ರೀಪರ ವಾದ ಬಲವಾಗಿದ್ದ ಕಾಲದಲ್ಲಿ ಮಹಿಳೆಯರ ಹಕ್ಕಿನ ಜೊತೆಗೆ ಅವರ ಕರ್ತವ್ಯದ ಬಗ್ಗೆಯೂ ಎಚ್ಚರಿಸುವ ಮನೋಭಾವ ವಿಜಯಾದಬ್ಬೆ ಅವರಲ್ಲಿತ್ತು. ವಿಜಯಾ ಮಾತು ಕಡಿಮೆಯಾದರೂ ಉತ್ತಮ ನಡವಳಿಕೆ ಹೊಂದಿದ್ದರು. ಜಾತಿ-ಧರ್ಮ ಮೀರಿದ ವ್ಯಕ್ತಿತ್ವ ಅವರದ್ದು. ಅವರ ಸ್ತ್ರೀಪರ ಕಾಳಜಿಯಿಂದ ಸ್ಥಾಪಿತವಾದ ಸಮತಾ ಅಧ್ಯಯನ ಕೇಂದ್ರವು ಹಿಂಜರಿಕೆ ಮನೋಭಾವ ಹೊಂದಿದ್ದ ಅನೇಕರಿಗೆ ದಾರಿದೀಪವಾಗಿ ಕೆಲಸ ಮಾಡಿದೆ” ಎಂದು ಹೇಳಿದರು. ಸಮತಾ ಅಧ್ಯಯನ ಕೇಂದ್ರದ ನಿಕಟಪೂರ್ವ ಅಧ್ಯಕ್ಷೆ ಎಂ.ಎನ್‌. ಸುಮನಾ ಮಾತನಾಡಿ, “ಇದೇ ಮೊದಲ ಬಾರಿಗೆ ಈ ಸಂಸ್ಥೆಯಿಂದ ಅವರ ಹೆಸರಿನಲ್ಲಿ ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಒಟ್ಟು 46 ಲೇಖಕಿಯರಿಂದ ವಿಮರ್ಶೆ ಮತ್ತು ಸಂಶೋಧನಾ ಕೃತಿಗಳು ಬಂದಿದ್ದು, ಇದರಲ್ಲಿ…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭಾವಂತ ಮಹಿಳಾ ಸಾಹಿತಿಗಳಿಗಾಗಿ ಮೀಸಲಿಟ್ಟಿರುವ ʻಪದ್ಮಭೂಷಣ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿʼ ಪ್ರಕಟಿಸಲಾಗಿದೆ.2022 ಹಾಗೂ 2023ನೇ ಸಾಲಿನ ಪ್ರಶಸ್ತಿಗಾಗಿ ಮಹಿಳಾ ಸಾಹಿತಿಗಳ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 15,000(ಹದಿನೈದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪದ್ಮಭೂಷಣ ಡಾ.ಸರೋಜಾದೇವಿ ಅವರು ತಮ್ಮ ಸುಪುತ್ರಿ ಬಿ.ಭುವನೇಶ್ವರಿ ಅವರ ಸ್ಮರಣಾರ್ಥ ಈ ದತ್ತಿ ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. ʻಪದ್ಮಭೂಷಣ ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿʼಯನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡುತ್ತಿರುವ ಮಹಿಳಾ ಸಾಹಿತಿಗಳಿಗಾಗಿಯೇ ಈ ಪ್ರಶಸ್ತಿಯನ್ನು ದತ್ತಿ ದಾನಿಗಳು ಮಿಸಲಿಟ್ಟಿರುತ್ತಾರೆ. ಅದರಂತೆ ಕಳೆದ 26 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ಸಮರ್ಥ ಮಹಿಳಾ ಸಾಹಿತಿಗಳಿಗೆ ನೀಡುತ್ತಾ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿರುವ ಮಹಿಳಾ ಸಾಹಿತಿಯನ್ನು ಗುರುತಿಸಿ ಆಯ್ಕೆ ಮಾಡಿದೆ. ಇದುವರೆಗೆ ರಾಜ್ಯದ 25 ಮಹಿಳಾ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.…

Read More

ತೆಕ್ಕಟ್ಟೆ: ನಿರಂತರವಾಗಿ ಹಲವಾರು ವರ್ಷಗಳಿಂದ ನೆರವೇರಿದ ಬಡಗು ಯಕ್ಷಗಾನ ಹಿಮ್ಮೇಳ ತರಗತಿ ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದದ ನೇತೃತ್ವದಲ್ಲಿ ಈ ವರ್ಷ ಜೂನ್ 4ರ ಭಾನುವಾರದಂದು ಮಧ್ಯಾಹ್ನ 3ರಿಂದ ಪ್ರತೀ ದಿನ ಆರು ತಿಂಗಳುಗಳ ಕಾಲ ನಡೆಯಲಿದೆ. ಪ್ರಸಂಗಕರ್ತರಾದ, ಕಲಾ ಪೋಷಕರಾದ ಮಹಾಬಲ ಹೇರಿಕುದ್ರು ತರಗತಿಯನ್ನು ಉದ್ಘಾಟಿಸಲಿದ್ದು, ಅತಿಥಿಗಳಾಗಿ ಉಪನ್ಯಾಸಕರಾದ ಸುಜಯೀಂದ್ರ ಹಂದೆ, ಯಕ್ಷಗುರುಗಳಾದ ಸೀತಾರಾಮ ಶೆಟ್ಟಿ ಕೋಕೂರು, ಯಕ್ಷ ಸಂಘಟಕರಾದ ಕೋಟ ಸುದರ್ಶನ ಉರಾಳ ಆಗಮಿಸಲಿದ್ದಾರೆ. ಗುರುಗಳಾಗಿ ವಿದ್ವಾನ್ ಗಣಪತಿ ಭಟ್, ಕೂಡ್ಲಿ ದೇವದಾಸ್ ರಾವ್, ಲಂಬೋದರ ಹೆಗಡೆ ನಿಟ್ಟೂರು ಹಾಗೂ ಅತಿಥಿಯಾಗಿ ಪ್ರಾಚಾರ್ಯ ಕೆ.ಪಿ. ಹೆಗಡೆ ತೆಕ್ಕಟ್ಟೆ ಕೇಂದ್ರದ ಗುರುಗಳಾಗಿ ನೇಮಕಗೊಂಡಿರುತ್ತಾರೆ. ಭಾಗವತಿಗೆ, ಚಂಡೆ, ಮದ್ದಲೆ, ಹೆಜ್ಜೆ ತರಗತಿಗೆ ಸೇರಲಿಚ್ಚಿಸುವವರು ಉದ್ಘಾಟನೆಯಲ್ಲಿ ಹಾಜರಿರಬೇಕೆಂದು ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕ:9945947771

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರಕಾಶನ ಸಂಸ್ಥೆಗಳಿಗೆ ಕೊಡಮಾಡುವ 2022 ಹಾಗೂ 2023ನೇ ಸಾಲಿನ ʻಅಂಕಿತ ಪುಸ್ತಕ ಪುರಸ್ಕಾರʼದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಶಸ್ತಿಯು 35,000 (ಮೂವತೈದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನದವರು ಕನ್ನಡ ಪ್ರಕಾಶಕರಿಗಾಗಿ ಈ ದತ್ತಿ ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. ಕನ್ನಡ ಪ್ರಕಾಶಕರಿಗಾಗಿ ಮಿಸಲಿಟ್ಟ ರಾಜ್ಯಮಟ್ಟದ ಈ ಪುರಸ್ಕಾರವನ್ನು ʻವರ್ಷದ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ-ಅಂಕಿತ ಪುಸ್ತಕ ಪುರಸ್ಕಾರʼ ದತ್ತಿ ಹೆಸರಿನಲ್ಲಿ ಪ್ರಶಸ್ತಿಯನ್ನುನೀಡಬೇಕು ಎನ್ನುವುದು ದತ್ತಿ ದಾನಿಗಳ ಆಶಯವಾಗಿದೆ. ಅದರಂತೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ನೀಡುತ್ತ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಪ್ರಕಾಶನ ಕ್ಷೇತ್ರದಲ್ಲಿ ನಿರಂತರ 10 ವರ್ಷಗಳಿಂದ ಚಾಲ್ತಿಯಲ್ಲಿದ್ದು ಕನ್ನಡ ಪುಸ್ತಗಳನ್ನು ಪ್ರಕಟಿಸುವ ಮೂಲಕ ಕನ್ನಡದ ಸೇವೆ ಸಲ್ಲಿಸುತ್ತಿರುವ ಪ್ರಕಾಶನವನ್ನು ಗುರುತಿಸಿ ಅಂಕಿತ ಪುಸ್ತಕ ಪುರಸ್ಕಾರ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಕರೋನಾ…

Read More