Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಅಭಿನಯ ತರಂಗ ಅರ್ಪಿಸುವ ‘ಚಿತ್ರಾ’ ನಾಟಕ ತಂಡದ 75 ವರ್ಷಗಳ ಸಂಭ್ರಮದ ಪ್ರಯುಕ್ತ ‘ಚಿತ್ರಾ – 75’ ಎ.ಎಸ್. ಮೂರ್ತಿಯವರ ಸ್ಮರಣಾರ್ಥ ನಾಟಕ ಸ್ಪರ್ಧೆಯನ್ನು ದಿನಾಂಕ 24ರಿಂದ 30 ಅಕ್ಟೋಬರ್ 2025ರವರೆಗೆ ಸುಚಿತ್ರ ನಾಣಿ – ಭಾನು ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ. ಎ.ಎಸ್. ಮೂರ್ತಿಯವರು ಎಸ್. ರಾಮನಾಥನ್ ಅವರೊಂದಿಗೆ 1951ರಲ್ಲಿ ಪ್ರಾರಂಭಿಸಿದ ‘ಚಿತ್ರಾ’ ತಂಡ ಈಗ 75ಕ್ಕೆ ಕಾಲಿಟ್ಟಿದೆ. ರಂಗಭೂಮಿ ಚಲನಚಿತ್ರಗಳ ಬಗ್ಗೆ ವಿಚಾರ ಸಂಕಿರಣ ಚರ್ಚೆ, ನಾಟಕದ ಓದು, ನಾಟಕ, ಸಂಗೀತ ಕಾರ್ಯಕ್ರಮಗಳನ್ನು ಈಗಲೂ ನಡೆಸುತ್ತಿದೆ. ಅಲ್ಲದೆ ಅನೇಕ ರಂಗ ನಾಟಕಗಳನ್ನಾಡಿದೆ. ಬೀದಿ ನಾಟಕವನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಮಾಡಿದ ಹೆಗ್ಗಳಿಕೆ ‘ಚಿತ್ರಾ’ ತಂಡದ್ದು. ಚಿತ್ರಾ ತನ್ನ 75ನೇ ವರ್ಷದ ಹುಟ್ಟುಹಬ್ಬವನ್ನು ‘ನಾಟಕ ಸ್ಪರ್ಧೆ’ ಏರ್ಪಡಿಸುವ ಮೂಲಕ ಆಚರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ಸ್ಪರ್ಧೆ ಪ್ರತಿವರ್ಷ ನಡೆಯುತ್ತಿದ್ದು, ನಾಟಕದ ಅವಧಿ ಕನಿಷ್ಠ 45 ನಿಮಿಷಗಳು ಗರಿಷ್ಠ 60 ನಿಮಿಷ ಇರಬಹುದು. ಪ್ರವೇಶ ಶುಲ್ಕ ರೂ.2,500/- ಆಗಿದ್ದು, ನೋಂದಾಯಿಸಲು 15…
ಮೈಸೂರು : ಕಲಾಸುರುಚಿ ಮೈಸೂರು ಇದರ ವತಿಯಿಂದ ‘ಸಾಹಿತ್ಯ ಚಾವಡಿ’ ಸಂವಾದ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2025 ಭಾನುವಾರ ಬೆಳಿಗ್ಗೆ ಗಂಟೆ 10-30ಕ್ಕೆ ಮೈಸೂರಿನ ಕುವೆಂಪು ನಗರ, ಚಿತ್ರಭಾನು ರಸ್ತೆ, ನಂ.476, ಸುರುಚಿ ರಂಗಮನೆಯಲ್ಲಿ ಆಯೋಜಿಸಲಾಗಿದೆ. ಸಂವಾದ ಕಾರ್ಯಕ್ರಮದಲ್ಲಿ ‘ಅಂಕಣ ಸಾಹಿತ್ಯ ಸಾಧ್ಯತೆ, ಸವಾಲು ಮತ್ತು ಸಿದ್ಧತೆ’ ಎಂಬ ವಿಷಯದ ಬಗ್ಗೆ ಲೇಖಕ ಎನ್. ರವಿಶಂಕರ್ ಹಾಗೂ ಹಾಗೂ ಕಲಾವಿದೆ ಶ್ರೀಮತಿ ದೀಪಾ ರವಿಶಂಕರ್ ಇವರೊಂದಿಗೆ ಸಂವಾದಕರಾಗಿ ಲೇಖಕಿ ಶ್ರೀಮತಿ ಅಲಕಾ ಕಟ್ಟೆಮನೆ ಮತ್ತು ಲೇಖಕ ಅಜಯ್ ಸ್ವರೂಪ್ ಭಾಗವಹಿಸಲಿದ್ದಾರೆ.
ಮಂಗಳೂರು : ಕೊಂಕಣಿ ಸಾಹಿತ್ಯ ಅಕಾಡೆಮಿಯ ಸ್ಥಾಪನೆಗೆ ದುಡಿದವರಲ್ಲಿ ಪ್ರಮುಖರು, ಕೊಂಕಣಿಯ ಖ್ಯಾತ ಸಂಗೀತರಾರು, ಮಾಂಡ್ ಸೊಭಾಣ್ ಸಂಸ್ಥೆಯ ಗುರಿಕಾರರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ದಿನಾಂಕ 29 ಆಗಸ್ಟ್ 2025ರಂದು ಅಕಾಲಿಕ ಮರಣ ಹೊಂದಿರುತ್ತಾರೆ. ಕೊಂಕಣಿ ಪ್ರದರ್ಶನ ಕಲೆಗಳನ್ನು ಪೋಷಿಸಲು ಮೀಸಲಾಗಿರುವ ಪ್ರಮುಖ ಸಾಂಸ್ಕೃತಿಕ ಸಂಸ್ಥೆಯಾದ ‘ಮಾಂಡ್ ಸೊಭಾಣ್’ (ಸುಂದರ ಕಲಾ ವೇದಿಕೆ) ಹೆಸರಿನ ಸಂಸ್ಥೆಯನ್ನು ಇವರು ಸ್ಥಾಪಿಸಿ, ಕಳೆದ 39 ವರ್ಷಗಳಿಂದ ಮಾತೃಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ. ನಂತರ ಇವರು ‘ಕಲಾಂಗಣ’ ಎಂಬ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿ ಇದು ಕೊಂಕಣಿ ಸಂಪ್ರದಾಯಗಳನ್ನು ಕಲಿಯಲು ಮತ್ತು ಸಂರಕ್ಷಿಸಲು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಹಲವಾರು ಮಹತ್ವಪೂರ್ಣ ಕಾರ್ಯಕ್ರಮಗಳು, ಯಾತ್ರೆ-ತಿರುಗಾಟಗಳು, ಜಾಗೃತಿ ಅಭಿಯಾನಗಳ ಮೂಲಕ ಕೊಂಕಣಿ ಭಾಷೆಯನ್ನು ಬೆಳೆಸುವಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡಿದ್ದರು. ಒಜಾರಿಯೊರವರ ಪ್ರಯತ್ನಗಳು ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟವು. ಅವುಗಳಲ್ಲಿ 1994ರಲ್ಲಿ ‘ಕೊಂಕಣಿ ಕಲಾ ಸಾಮ್ರಾಟ್’ ಎಂಬ ಬಿರುದು ಪಡೆದಿದ್ದು, ಕೊಂಕಣಿ ರತ್ನ, 1993ರಲ್ಲಿ…
ಉಳ್ಳಾಲ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ತುಳು ಹಾಡುಗಳ ಕಲಿಕಾ ಕಾರ್ಯಾಗಾರ, ಹಾಡುಗಳ ಪ್ರಸ್ತುತಿ ‘ಡೆನ್ನ ಡೆನ್ನಾನ – ಪದ ಪನ್ಕನ’ ಕಾರ್ಯಕ್ರಮವು ದಿನಾಂಕ 22 ಆಗಸ್ಟ್ 2025ರಂದು ಸೋಮೇಶ್ವರದ ಆನಂದಾಶ್ರಮ ಪ್ರೌಢ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು ಅಧ್ಯಕ್ಷತೆ ವಹಿಸಿ ಮಾತನಾಡಿ, “ಅಕಾಡೆಮಿ ಕಚೇರಿಯಲ್ಲಿ ‘ತುಳು ಓದುಗ’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಕಾಡೆಮಿಯಲ್ಲಿ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ, ವಿವಿಧ ಸಾಹಿತ್ಯ ಪ್ರಕಾರಗಳು ಸಹಿತ ಸುಮಾರು 5 ಸಾವಿರ ತುಳು ಗ್ರಂಥಗಳ ಭಂಡಾರವಿದೆ. ಇಲ್ಲಿಗೆ ತುಳು ಓದಲು ಬರುವ ವಿದ್ಯಾರ್ಥಿಗಳಿಗೆ ಲಘು ಉಪಹಾರ, ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಶಾಲಾ-ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಕಾಡೆಮಿಗೆ ಕಳುಹಿಸಿ ಕೊಡುವುದರ ಮೂಲಕ ತುಳು ಉಳಿಸುವ ಅಭಿಯಾನಕ್ಕೆ ಕೈಜೋಡಿಸಬೇಕಿದೆ” ಎಂದರು. ಈ ಕಾರ್ಯಕ್ರಮವನ್ನು ಸಿನಿಮಾ, ನಾಟಕ ಕಲಾವಿದೆ ರೂಪಶ್ರೀ ವರ್ಕಾಡಿ ಉದ್ಘಾಟಿಸಿದರು. ಗಾಯಕ ತೋನ್ಸೆ ಪುಷ್ಕಳ ಕುಮಾರ್ ಮತ್ತು ಗಾಯಕಿ ವಾಣಿ ಸಪ್ರೆ…
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರಿನವರಾದ ರಾಘವೇಂದ್ರ ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರು ‘ಲಾಟರಿ ಹುಡುಗ’ (ಕಥಾ ಸಂಕಲನ) ‘ಭೂಮಿ ದುಂಡಗಿದೆ’ (ಹಾಸ್ಯ ವಿಡಂಬನೆಗಳ ಸಂಗ್ರಹ) ಮತ್ತು ‘ನ್ಯಾನೋ ಕಥೆಗಳು’ (ಹನಿಗತೆಗಳ ಸಂಕಲನ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ನ್ಯಾನೋ ಕಥೆಗಳಲ್ಲಿರುವ 208 ಕತೆಗಳ ಪೈಕಿ ಕೆಲವು ರಚನೆಗಳು ಇತ್ತೀಚಿಗೆ ಬಂದ ಹನಿಗತೆಗಳ ಪೈಕಿ ವಿಶಿಷ್ಟವೆನಿಸುತ್ತವೆ. ಕತೆಗಾರರು ತಮ್ಮ ನಾಯಕಿಯನ್ನು ತೆಳ್ಳಗೆ, ಬೆಳ್ಳಗಿನ ಚೆಲುವೆಯರನ್ನಾಗಿ ಚಿತ್ರಿಸುವ ರೂಢಿಯಿದೆ. ಆದರೆ ‘ಒಂದು ಪ್ರೇಮ ಕಥೆ’ಯ ನಾಯಕನು ಮೂಕನೂ, ನಾಯಕಿ ಕಿವುಡಿಯೂ ಆಗಿದ್ದಾಳೆ. ಅಂಥವರ ಮನಸ್ಸಿನಲ್ಲೂ ಪ್ರೀತಿ ಪ್ರೇಮದ ಭಾವನೆಗಳಿರುತ್ತವೆ ಎಂಬುದನ್ನು ಮನಗಾಣಿಸುವಲ್ಲಿ, ಅವರು ಅಂಗವಿಕಲಾದರೂ ಮನಸ್ಸಿಗೆ ವೈಕಲ್ಯವಿಲ್ಲ ಎಂಬುದನ್ನು ಅರಿವಿಗೆ ತರುವುದರಲ್ಲಿ ಕತೆಯ ಹೆಚ್ಚುಗಾರಿಕೆಯಿದೆ. ಪ್ರಿಯಕರನ ಬಗ್ಗೆ ಪ್ರೇಯಸಿಯ ಹೃದಯದಲ್ಲಿ ತುಂಬಿದ ಕಾತರವು ದೇಶಕಾಲ ಪರಿಮಿತವಾದುದಲ್ಲ. ಅದು ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗಿದೆ. ಪ್ರಿಯಕರನ ಏಳಿಗೆಗಾಗಿ ತುಡಿಯುವ ಆಕೆಯ ಹೃದಯವು ಆತನ ಬದುಕು ಚೆನ್ನಾಗಿರುವುದನ್ನು…
ಬಂಟ್ವಾಳ : ಏರ್ಯ ಆಳ್ವ ಫೌಂಡೇಶನ್ ಇದರ ವತಿಯಿಂದ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಸಮಾರಂಭವು ದಿನಾಂಕ 28 ಆಗಸ್ಟ್ 2025ರಂದು ಬಂಟ್ವಾಳದ ಅಮ್ಟಾಡಿಯ ‘ಏರ್ಯ ಬೀಡುವಿನಲ್ಲಿ’ ನಡೆಯಿತು. ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಪತ್ನಿ ಆನಂದಿ ಎಲ್. ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ನಾ. ದಾಮೋದರ ಶೆಟ್ಟಿ ಇವರ ಸಂಪಾದಿತ ‘ಏರ್ಯ ಸಾಹಿತ್ಯ ಮರುಚಿಂತನ’ ಕೃತಿಯನ್ನು ಅನಾವರಣಗೊಳಿಸಿದ ಜಾನಪದ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ್ ರೈ ಮಾತನಾಡುತ್ತಾ “ಸಾಹಿತ್ಯ, ಸಂಸ್ಕೃತಿ, ಸಂಘಟನೆ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಆಳ್ವರ ಬರೆದದ್ದು ಕಡಿಮೆ, ಓದಿದ್ದು ಹೆಚ್ಚು. ಅವರು ಭಾವನಾತ್ಮಕ ಜೀವಿ, ಕವಿ ಹೃದಯಿ. ಅವರ ಬಗ್ಗೆ ಬರೆದಿರುವ ಪುಸ್ತಕದ ತೋರಣ ಹಾಗೂ ಹೂರಣ ಅದ್ಭುತವಾಗಿದೆ” ಎಂದು ಹೇಳಿದರು. ಹಿರಿಯ ಸಾಹಿತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಹಾಗೂ ಡಾ. ನಾ. ದಾಮೋದರ ಶೆಟ್ಟಿಯವರಿಗೆ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ…
ಶಿರಸಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣ ಕಲಾ ಮಂಡಳ (ರಿ.) ಶಿರಸಿ ಇವರ ಸಹಯೋಗದಲ್ಲಿ ಶಿರಸಿಯ ರಂಗಧಾಮ, ನೆಮ್ಮದಿ ಆವರಣ ಸಭಾಂಗಣದಲ್ಲಿ ದಿನಾಂಕ 24 ಆಗಸ್ಟ್ 2025ರಂದು ಕೊಂಕಣಿ ಮಾನ್ಯತಾ ದಿನಾಚರಣೆ- 2025ನ್ನು ಆಚರಿಸಲಾಯಿತು. ವಂ. ಸ್ವಾಮಿ ಪೀಟರ್ ಪಿಂಟೊರವರು ಕೊಂಕಣಿ ಧ್ವಜಾರೋಹಣ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಪ್ರಾಸ್ತಾವಿಕವಾಗಿ ಮಾತಾನಾಡಿ, “ಕೊಂಕಣಿ ಭಾಷೆಗೆ ಮಾನ್ಯತೆ ದೊರೆತ ಬಗ್ಗೆ ಹಾಗೂ ಇದರ ಮಹತ್ವವನ್ನು ವಿವರಿಸಿ, ಭಾಷೆಗಳನ್ನು ಕಲಿಯುವುದರೊಂದಿಗೆ, ಕೊಂಕಣಿ ಭಾಷೆಯನ್ನು ಮರೆಯದೆ, ಕೊಂಕಣಿ ಮಾತಾನಾಡಬೇಕು. ಕೊಂಕಣಿ ಭಾಷೆಗೆ ಗೌರವ ನೀಡಬೇಕು” ಎಂದು ಕರೆಕೊಟ್ಟರು. ಅತಿಥಿ ಗಣ್ಯರನ್ನು ಸ್ವಾಗತಿಸಿ, ಭಾಷಣ ಹಾಗೂ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಕಲಾತಂಡಗಳಿಗೆ ಶುಭಹಾರೈಸಿದರು. ಶಿರಸಿಯ ಡಾನ್ ಬೊಸ್ಕೊ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಸ್ವಾ. ಪೀಟರ್ ಪಿಂಟೊರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಎಲ್ಲರೂ…
ಮಂಗಳೂರು : ಹರಿಕಥಾ ಪರಿಷತ್ (ರಿ) ಮಂಗಳೂರು ಇವರು ಸಂತ ಭದ್ರಗಿರಿ ಅಚ್ಯುತದಾಸರಿಗೆ ಮೂವತ್ತು ವರ್ಷಗಳ ಕಾಲ ತಬ್ಲಾ ಸಾಥ್ ನೀಡಿದ ಪ್ರಸಿದ್ಧ ತಬ್ಲಾವಾದಕರೂ, ವೈದಿಕರೂ, ಕೊಡಿಯಾಲ್ ಬೈಲ್ ಲಕ್ಷ್ಮೀನಾರಾಯಣಿ ದೇವಸ್ಥಾನದ ಪ್ರಧಾನ ಅರ್ಚಕರೂ ಆಗಿದ್ದ ಕೀರ್ತಿಶೇಷ ವಿದ್ವಾನ್ ಎಂ. ಲಕ್ಷ್ಮೀನಾರಾಯಣ ಭಟ್ ಇವರ ಸಂಸ್ಮರಣಾರ್ಥ ಆಯೋಜಿಸುವ ಹರಿಕಥಾ ಸಪ್ತಾಹವು ದಿನಾಂಕ 30 ಆಗಸ್ಟ್ 2025ರಿಂದ 05 ಸೆಪ್ಟೆಂಬರ್ 2025ರ ವರೆಗೆ ಪ್ರತೀದಿನ ಸಂಜೆ ಗಂಟೆ 6ರಿಂದ ಮಂಗಳೂರಿನ ಶರವು ರಸ್ತೆಯಲ್ಲಿರುವ ಶ್ರೀ ರಾಧಾಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ದಿನಾಂಕ 30 ಆಗಸ್ಟ್ 2025ರಂದು ಅಪರಾಹ್ನ ಗಂಟೆ 4.30ಕ್ಕೆ ಯುವಕೀರ್ತನಕಾರೆ ಕು. ಗಾಯತ್ರೀ ಆಚಾರ್ಯ ಕೊಂಡೆವೂರು ಇವರಿಂದ ‘ಕನಕನಿಗೊಲಿದ ಗೋವಿಂದ’ ಹರಿಕಥೆ ನಡೆಯಲಿದ್ದು, ಬಳಿಕ ಹರಿಕಥಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮವನ್ನು ಶ್ರೀರಾಧಾಕೃಷ್ಣ ದೇವಸ್ಥಾನ ಶರವು ರಸ್ತೆ ಮಂಗಳೂರು ಇಲ್ಲಿನ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಎಂ. ನಾರಾಯಣ ಭಟ್…
ಮೂಡುಬಿದಿರೆ : ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗ್ರಂಥಪಾಲಕರ ಸಂಘ ಮತ್ತು ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ ‘ಗ್ರಂಥಾಲಯ ಸೇವೆಗಳ ನಾವಿನ್ಯತೆ ಹಾಗೂ ಪರಿಣಾಮಕಾರಿ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ದಿನಾಂಕ 23 ಆಗಸ್ಟ್ 2025ರ ಶನಿವಾರದಂದು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜರುಗಿತು. ಮಂಗಳೂರು ವಿ.ವಿ. ಕಾಲೇಜಿನ ಡಾ. ಮಾಧವ ಎಂ.ಕೆ. ಮಾತನಾಡಿ “ಗ್ರಂಥಾಲಯ ವಿಭಾಗದಲ್ಲಿ ಕೆಲಸ ಮಾಡುವವರು ಸರಸ್ವತಿಯ ದಾಸೋಹಿಗಳು. ಅವರ ಸೇವೆ ಅಕ್ಷರಶಃ ಮಾನವ ಸಮಾಜದ ಬೆಳಕಿನ ದೀಪ. ಜ್ಞಾನ ಹಂಚುವ ಕರ್ಯದಲ್ಲಿ ತೊಡಗಿರುವ ಅವರು ನಿಜಕ್ಕೂ ಪುಣ್ಯವಂತರು. ಈ ಜಗತ್ತಿನಲ್ಲಿ ಭಗವಂತನು ಮಾನವನಿಗೆ ನೀಡಿರುವ ಅತ್ಯಂತ ಅಮೂಲ್ಯವಾದ ವರವೇ ಸಮಯ. ಧನ, ಪದವಿ, ಸ್ಥಾನಮಾನದಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಸಮಯ ಮಾತ್ರ ಎಲ್ಲರಿಗೂ ಸಮಾನವಾಗಿ ಹಂಚಲ್ಪಟ್ಟಿದೆ. ಈ ಸಮಯವನ್ನು ಹೇಗೆ ಬಳಸುತ್ತೇವೆ ಎಂಬುದರ ಮೇಲೆಯೇ ಜೀವನದ ಸಾಧನೆ ನಿರ್ಧಾರವಾಗುತ್ತದೆ. ಕಲಿಕೆಯ…
ಕಾಸರಗೋಡು : ಕಡಬ ಸಂಸ್ಮರಣಾ ಸಮಿತಿ ರಥಬೀದಿ ಮಂಗಳೂರು ಇದರ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 31 ಆಗಸ್ಟ್ 2025ರಂದು ಅಪರಾಹ್ನ 2-00 ಗಂಟೆಗೆ ಕಾಸರಗೋಡಿನ ಶ್ರೀ ಕ್ಷೇತ್ರ ಎಡನೀರು ಮಠದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಕಡಬ ವಿನಯ ನಾರಾಯಣ ಆಚಾರ್ಯ ಸಂಸ್ಮರಣಾ ಪ್ರಶಸ್ತಿ’ ಪ್ರದಾನ ಹಾಗೂ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಡಬ ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುಂದರ ಆಚಾರ್ಯ ಬೆಳುವಾಯಿ ಇವರು ವಹಿಸಲಿದ್ದು, ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ. ಶ್ಯಾಮ್ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಲಿರುವರು. ಹಿರಿಯ ಭಾಗವತರಾದ ದಿನೇಶ ಅಮ್ಮಣ್ಣಾಯ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಕಲಾವಿದರಾದ ಎಂ.ಕೆ. ರಮೇಶ ಆಚಾರ್ಯ ಇವರು ಸಂಸ್ಮರಣಾ ಭಾಷಣ ಹಾಗೂ ತಾಳಮದ್ದಲೆ ಅರ್ಥಧಾರಿ ವಿಶ್ವೇಶ್ವರ ಭಟ್ ಇವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಸುಪ್ರಸಿದ್ಧ ಕಲಾವಿದರುಗಳಿಂದ ‘ಸುರಭಿಜಾತೆ’ ತಾಳಮದ್ದಲೆ ಮತ್ತು…