Author: roovari

ಕನ್ನಡ ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು ಡಾ. ಜನಾರ್ದನ ಭಟ್ ಅವರದ್ದು. ಕಥೆ, ಕಾದಂಬರಿ, ವಿಮರ್ಶೆ, ಸಾಹಿತ್ಯದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೋಸ್ಕರ ಪರಾಮರ್ಶನ ಗ್ರಂಥಗಳ ರಚನೆ -ಹೀಗೆ ನಿರಂತರವಾಗಿ ಬರೆಯುತ್ತ ವಿದ್ವತ್ ವಲಯದಲ್ಲೂ ಹೆಸರಾದವರು ಅವರು. ಇತ್ತೀಚೆಗೆ ಅವರು ಪ್ರಕಟಿಸಿದ ಬೃಹತ್ ಕೃತಿ ‘ಕನ್ನಡ ಕಾದಂಬರಿ ಮಾಲೆ’ ಅವರ ನೂರನೆಯ ಕೃತಿ. ಅದರ ನಂತರವೂ ಅವರ ಕೃತಿಗಳು ಪ್ರಕಟವಾಗುತ್ತಲೇ ಇವೆ. ‘ಉತ್ತರಾಧಿಕಾರ’ ಜನಾರ್ದನ ಭಟ್ಟರ ಮೊದಲ ಕಾದಂಬರಿ. 205 ಪುಟಗಳ ಈ ಕಾದಂಬರಿಯಲ್ಲಿ ನಾವು ಕಾಣುವುದು ಗ್ರಾಮ ಭಾರತದ ಇಂಚಿಂಚಾದ ಚಿತ್ರಣ. ಕಥೆ ನಡೆಯುವ ಕಾಲ ಇಪ್ಪತ್ತನೇ ಶತಮಾನದ ಆರಂಭದಿಂದ ತೊಡಗಿ ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿಯ ತನಕ. ಕಾದಂಬರಿಯ ವಸ್ತು ಒಂದು ಗ್ರಾಮದಲ್ಲಿ ಮಣ್ಣಿನಲ್ಲಿ ಹೂತುಹೋಗಿ ಜೀರ್ಣಾವಸ್ಥೆಯಲ್ಲಿದ್ದ ಒಂದು ಮಹಾಲಿಂಗೇಶ್ವರನ ಗುಡಿಯ ಜೀರ್ಣೋದ್ಧಾರದ ಕೆಲಸವು ಯಾರ್ಯಾರ ಮುತುವರ್ಜಿಯಿಂದ ಯಾರ್ಯಾರ ಸಹಾಯದಿಂದ ಹೇಗೆ ನಡೆಯುತ್ತದೆ ಅನ್ನುವುದು. ಈ ವಸ್ತು ಅನ್ನುವುದು ಒಂದು ನೆಪ ಮಾತ್ರ. ಗ್ರಾಮದಲ್ಲಿ ಜನರು ಹೇಗೆ ಬದುಕುತ್ತಿದ್ದಾರೆ, ಅವರ ನಂಬಿಕೆಗಳೇನು,…

Read More

ಉಡುಪಿ : ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 12 ಜುಲೈ 2025ರಂದು ಅಪರಾಹ್ನ 4-30 ಗಂಟೆಗೆ ಉಡುಪಿಯ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿ ಇವರ ವಹಿಸಲಿದ್ದು, ಪ್ರವರ್ತಕರಾದ ಪ್ರಮೋದ ಹೆಗಡೆ ಇವರು ಶುಭಾಶಂಸನೆಗೈಯ್ಯಲಿದ್ದಾರೆ. ಹಿರಿಯ ತಾಳಮದ್ದಲೆ ಅರ್ಥಧಾರಿ ಹಾಗೂ ಹವ್ಯಾಸಿ ವೇಷಧಾರಿಗಳಾದ ಡಾ. ಜಿ.ಎಲ್. ಹಗಡೆ ಕುಮಟಾ ಇವರಿಗೆ ‘ಮಟ್ಟಿ ಮುರಳೀಧರ ರಾವ್ ಪ್ರಶಸ್ತಿ’ ಮತ್ತು ಸರ್ಪಂಗಳ ಈಶ್ವರ ಭಟ್ ಸುರತ್ಕಲ್ ಇವರಿಗೆ ‘ಪೆರ್ಲ ಕೃಷ್ಣ ಭಟ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಅಪರಾಹ್ನ 1-30 ಗಂಟೆಗೆ ‘ಕರ್ಣಾರ್ಜುನ’ ಎಂಬ ಪ್ರಸಂಗದ ತಾಳಮದ್ದಲೆ ಜರಗಲಿದೆ.

Read More

ಕರ್ನಾಟಕ ಹವ್ಯಾಸಿ ರಂಗಭೂಮಿಯ ಪ್ರತಿಭಾವಂತ ಕಲಾವಿದ ಮಾತ್ರವಲ್ಲದೆ ಸಾಹಿತ್ಯ ಲೋಕದಲ್ಲಿಯೂ ಪ್ರಮುಖ ಸ್ಥಾನವನ್ನು ಪಡೆದವರು ಆರ್. ಎಸ್. ರಾಜಾರಾಮ್. ಜಿ. ಎಸ್. ರಘುನಾಥ ರಾವ್ ಹಾಗೂ ಶಾರದಾ ಬಾಯಿ ದಂಪತಿಗಳ ಪುತ್ರರಾದ ಇವರು ಬಹುಮುಖ ಪ್ರತಿಭೆಯ ಅಪರೂಪದ ವ್ಯಕ್ತಿ. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಜನಪರ, ವೈಚಾರಿಕ, ವೈಜ್ಞಾನಿಕ ಮಾರ್ಗ ತೋರಿಸಿದ ಹಲವಾರು ಪ್ರಮುಖರಲ್ಲಿ ಇವರೂ ಒಬ್ಬರು. ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಮಾರ್ಕ್ಸ್ ವಾದಿ ಸಾಹಿತ್ಯದ ಬಗ್ಗೆ ಆಕರ್ಷಿತರಾಗಿ, ರೈತ ಕಾರ್ಮಿಕ ಚಳುವಳಿಗಳಲ್ಲಿ ಸ್ವಯಂ ಕಾರ್ಯಕರ್ತರಾಗಿ ದುಡಿದವರು. ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಬಿ. ವಿ. ಕಕ್ಕಿಲಾಯರಿಂದ ಸ್ಪೂರ್ತಿ ಪಡೆದು ನವ ಕರ್ನಾಟಕ ಪ್ರಕಾಶನಕ್ಕೆ 1960ರಲ್ಲಿ ಎಸ್. ಆರ್. ಭಟ್ ಇವರಿಗೆ ಸಹಾಯಕ ನಿರ್ದೇಶಕರಾಗಿ ಸೇರಿದರು. ತಮ್ಮ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಈ ಸಂಸ್ಥೆಯಲ್ಲಿ ದುಡಿದು ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿ ವ್ಯವಸ್ಥಾಪಕ ನಿರ್ದೇಶಕರಾದರು. ಐದು ದಶಕಗಳ ಕಾಲ ಅಲ್ಲಿ ಕೆಲಸ ಮಾಡಿ 2017ರಲ್ಲಿ ನಿರ್ದೇಶಕ ಹುದ್ದೆಯಿಂದ ಹೊರಬಂದರು. ‘ವಿಗಡ ವಿಕ್ರಮರಾಯ’, ‘ಮಂಡೋದರಿ’, ‘ಎಚ್ಚಮನಾಯಕ’, ‘ಟಿಪ್ಪು…

Read More

ಹಂಗಾರಕಟ್ಟೆ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ಸಂಸ್ಕೃತಿ ಸಂಭ್ರಮದಲ್ಲಿ ‘ಯಕ್ಷ ವರ್ಷ’ ಕಾರ್ಯಕ್ರಮದಡಿಯಲ್ಲಿ ಶ್ರೀ ಮಹಿಷಮರ್ದಿನೀ ಯಕ್ಷಕಲಾ ಪ್ರತಿಷ್ಠಾನ (ರಿ.) ಚಾರ-ಹೆಬ್ರಿ ಇವರ ಸಂಯೋಜನೆಯಲ್ಲಿ ಚಾರ ಪ್ರದೀಪ ಹೆಬ್ಬಾರ್ ರಚಿತ “ಉಲೂಪಿ ನಂದನ” ಯಕ್ಷಗಾನ ‘ತಾಳಮದ್ದಲೆ’ಯು ದಿನಾಂಕ 13 ಜುಲೈ 2025ರ ಭಾನುವಾರದಂದು ಸಂಜೆ ಘಂಟೆ 3.00 ರಿಂದ ನಡೆಯಲಿದೆ. ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸರ್ವಶ್ರೀಗಳಾದ ಶಿವಕುಮಾರ ಭಟ್ ಹರಿಹರಪುರ, ದೇವದಾಸ ರಾವ್ ಕೂಡ್ಲಿ, ರಾಮಕೃಷ್ಣ ಮಂದರ್ತಿ, ವೈಕುಂಠ ಹೇರ್ಳೆ ಗುಂಡ್ಮಿ, ಆನಂದ ಭಟ್ ಕೆಕ್ಕಾರ್, ಡಾ. ಶಿವಕುಮಾ‌ರ್ ಅಳಗೋಡು, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಸತೀಶ ಬೇಳಂಜೆ, ಚಾರ ಪ್ರದೀಪ ಹೆಬ್ಬಾರ್ ಭಾಗವಹಿಸಲಿದ್ದಾರೆ.

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಖ್ಯಾತ ಸಾಹಿತಿಗಳಾದ ಜೊ. ಸಾ. ಆಲ್ವಾರಿಸ್‌ರವರು ರಚಿಸಿದ ಕೊಂಕಣಿ ಭಾಷೆಯ ಕನ್ನಡ ಲಿಪಿಯ ಪ್ರಪ್ರಥಮ ಕಾದಂಬರಿ ಪ್ರಕಟವಾಗಿ 75 ವರ್ಷ ತುಂಬುವ ಸಂದರ್ಭದಲ್ಲಿ, ʼಆಂಜೆಲ್-75 ʼ ಶೀರ್ಷಿಕೆಯಡಿ ಕಾರ್ಯಾಗಾರವು ದಿನಾಂಕ 13 ಜುಲೈ 2025ರಂದು ಅಕಾಡೆಮಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ವಹಿಸಿಕೊಳ್ಳಲ್ಲಿದ್ದು, ಮುಖ್ಯ ಅತಿಥಿಯಾಗಿ ಡಾ. ಶಿವರಾಮ ಕಾರಂತ ಟ್ರಸ್ಟಿ ಇದರ ಅಧ್ಯಕ್ಷರಾದ ಡಾ. ಗಣನಾಥ ಎಕ್ಕಾರ್‌, ಕೊಂಕಣಿ ನಾಟಕ ಸಭೆಯ ಅಧ್ಯಕ್ಷರಾದ ವಂ.ರೊಕಿ ಡಿಕುನ್ಹಾ ಹಾಗೂ ಗೌರವ ಅತಿಥಿಗಳಾಗಿ ದಿ. ಜೊ. ಸಾ. ಆಲ್ವಾರಿಸ್‌ ಇವರ ಧರ್ಮಪತ್ನಿ ಶ್ರೀಮತಿ ಮೋನಿಕಾ ಆಲ್ವಾರಿಸ್‌ ಭಾಗವಹಿಸಲಿದ್ದಾರೆ.

Read More

ಹರೇಕಳ : ಹರೇಕಳ ಶ್ರೀರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಯಕ್ಷದ್ರುವ ಪಟ್ಲ ಪೌಂಡೇಶನ್ ವತಿಯಿಂದ ಉಚಿತ ಯಕ್ಷದ್ರುವ ಯಕ್ಷ ಶಿಕ್ಷಣ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 09 ಜುಲೈ 2025ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಡಿಪು ಘಟಕದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರು ಮಾತನಾಡಿ “ಇಂದು ಮಕ್ಕಳು ಮೊಬೈಲ್ ದಾಸರಾಗಿದ್ದಾರೆ ಕಾರಣ ಕೇವಲ ಪಠ್ಯಕ್ಕೆ ಸೀಮಿತವಾದ ಶಿಕ್ಷಣ. ಮಕ್ಕಳಿಗೆ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡಿದಾಗ ಸಮಯವನ್ನು ಕೂಡ ಸದುಪಯೋಗ ಪಡೆಸಿಕೊಳ್ಳುತ್ತಾರೆ. ಇದರಿಂದ ಮನೆಯಲ್ಲಿ ಮೊಬೈಲ್ ಮುಕ್ತ ವಾತಾವರಣ ಸೃಷ್ಟಿಯಾಗುತ್ತದೆ. ಯಕ್ಷಗಾನ ಕಲಿಯುವುದರಿಂದ ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಅಭಿವೃದ್ಧಿಯಾಗುವುದರೊಂದಿಗೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ” ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ವಾಸುದೇವ ಐತಾಳ್ ಮಾತನಾಡಿ “ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇದರಿಂದ ಪಠ್ಯಕ್ಕೂ ಪ್ರಯೋಜನ ಆಗುತ್ತದೆ. ಮಾತ್ರವಲ್ಲದೇ ವಿದ್ಯಾರ್ಥಿಗಳಲ್ಲಿ ನಾಟ್ಯ, ಮಾತುಗಾರಿಕೆ, ಸೃಜನಶೀಲತೆ, ಮುಂತಾದವುಗಳು…

Read More

ಕಾಸರಗೋಡು : ಬ್ರಹ್ಹೈಕ್ಯ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಸ್ಮರಣೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ ಅರ್ಪಿಸುವ ‘ಕೃಷ್ಣ ಸಾರಥ್ಯ ಸ್ವೀಕಾರ’ ಯಕ್ಷಗಾನ ತಾಳಮದ್ದಳೆಯು ದಿನಾಂಕ 11 ಜುಲೈ 2025ರಂದು ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ಸಂಜೆ ಘಂಟೆ 6.00 ರಿಂದ 8.00ರ ವರೆಗೆ ನಡೆಯಲಿದೆ. ಕಾರ್ಯಕ್ರಮದ ಹಿಮ್ಮೇಳದಲ್ಲಿ ಕಾವ್ಯಶ್ರೀ ನಾಯಕ್ ಆಜೇರು, ಅಡೂರು ಲಕ್ಷ್ಮೀನಾರಾಯಣ ರಾವ್ ಲವ ಕುಮಾರ್ ಐಲ ಸಹಕರಿಸಲಿದ್ದು, ಮುಮ್ಮೇಳದಲ್ಲಿ ಹಿರಣ್ಯ ವೆಂಕಟೇಶ್ವರ ಭಟ್, ಉಜಿರೆ ಅಶೋಕ ಭಟ್, ಶೇಣಿ ವೇಣುಗೋಪಾಲ ಭಟ್, ಕೇಕಣಾಜೆ ಕೇಶವ ಭಟ್ ಭಾಗವಹಿಸಲಿದ್ದಾರೆ.

Read More

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪತ್ರಕರ್ತರಿಗೆ ‘ಕನ್ನಡ ಸಾಹಿತ್ಯ’ ಎಂಬ ಹೆಸರಿನಲ್ಲಿ ಮೂರು ದಿನಗಳ ಅಧ್ಯಯನ ಶಿಬಿರವನ್ನು ಆಗಸ್ಟ್ ಮೂರನೇ ವಾರ ಅಥವಾ ಕೊನೆಯ ವಾರದಲ್ಲಿ ನಡೆಸ ನಡೆಸಲು ಉದ್ದೇಶಿಸಿದ್ದು, ಅರ್ಜಿಆಹ್ವಾನಿಸಿದೆ. 20 ರಿಂದ 40 ವರ್ಷ ವಯಸ್ಸಿನ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವವರು, ಪತ್ರಿಕೋದ್ಯಮ ಪದವಿ ಪಡೆದವರು, ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದು. 25 ಜುಲೈ 2025 ಕೊನೆಯ ದಿನಾಂಕವಾಗಿದ್ದು, ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯಆಕಾಡಮಿಯ ಜಾಲತಾಣವಾದ https://sahithyaa cademy.karnataka.gov.in ಇಲ್ಲಿ ಅರ್ಜಿ ನಮೂನೆ, ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ, ಯೂತ್ ರೆಡ್ ಕ್ರಾಸ್ ಸೊಸೈಟಿ, ವೆನ್ ಲಾಕ್ ಆಸ್ಪತ್ರೆ, ನಗರ ಕೇಂದ್ರ ಗ್ರಂಥಾಲಯ, ಕೆ ಎಂ ಸಿ. ಆಸ್ಪತ್ರೆ ಸಹಭಾಗಿತ್ವದಲ್ಲಿ ಪೆನ್ ಲಾಕ್ ಆಸ್ಪತ್ರೆ ಆವರಣ ದಲ್ಲಿ ಸ್ಥಳಾಂತರಗೊಂಡ ಸಮುದಾಯ ವಾಚನಾಲಯ ಮತ್ತು ಗ್ರಂಥಾಲಯದ ಉದ್ಘಾಟನಾ ಸಮಾರಂಭವು ದಿನಾಂಕ 09 ಜುಲೈ 2025ರ ಬುಧವಾರದಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ “ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದು. ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಸಮುದಾಯ ವಾಚನಾಲಯ ರಾಜ್ಯಕ್ಕೆ ಮಾದರಿ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅವರ ಸಹಾಯಕರಿಗೆ, ಸಂದರ್ಶಕರಿಗೆ ಮತ್ತು ನಾರ್ವಜನಿಕರಲ್ಲಿ ನಮಯದ ನಡುವ ಯೋಗ ಮಾಡಲು ಮತ್ತು ಮಾಹಿತಿ ಪಡೆಯಲು ಒಂದು…

Read More

ಮೂಡುಬಿದಿರೆ: ಯಕ್ಷ ಮೇನಕಾ ಮೂಡುಬಿದಿರೆ ಇದರ 17ನೇ ವರ್ಷದ ಕಾರ್ಯಕ್ರಮದಂಗವಾಗಿ ಭಾಗವತ ಪ್ರಫುಲ್ಲಚಂದ್ರ ನೆಲ್ಯಾಡಿ ಇವರಿಗೆ ಸನ್ಮಾನ ಹಾಗೂ ಹಾಸ್ಯಗಾರ ಕಡಬ ದಿನೇಶ ರೈ ಇವರಿಗೆ ಯಕ್ಷ ಪ್ರೋತ್ಸಾಹ ನಿಧಿ ಸಮಾರ್ಪಣಾ ಸಮಾರಂಭವು ದಿನಾಂಕ 29 ಜೂನ್ 2025ರ ರವಿವಾರದಂದು ಮೂಡುಬಿದಿರೆಯ ಪೊನ್ನೆಚಾರಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಕಲಾ ಮಂದಿರದಲ್ಲಿ ನಡೆಯಿತು. ರಂಗಸ್ಥಳ ಮಂಗಳೂರು ಇದರ ಅಧ್ಯಕ್ಷ ಹಾಗೂ ಪ್ರಧಾನ ಪ್ರೋತ್ಸಾಹಕರಾದ ಎಸ್. ಎಲ್. ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಶ್ರೀಪತಿ ಭಟ್ ಮೂಡುಬಿದಿರೆ, ಕೆನರಾ ಬ್ಯಾಂಕ್ ಇದರ ನಿವೃತ್ತ ಅಧಿಕಾರಿ ಎ. ಎಸ್. ಭಟ್ ಮಂಗಳೂರು, ಯಕ್ಷ ಚೈತನ್ಯದ ಅಧ್ಯಕ್ಷರಾದ ಕೃಷ್ಣಮೂರ್ತಿ ಕಟೀಲು, ಭಾಗವತ ಮಾಧವ ಆಚಾರ್ಯ ಸಂಪಿಗೆ, ಪ್ರಗತಿಪರ ಕೃಷಿಕ ರಮೇಶ್ ಭಟ್ ಕೇಂಜೆ, ಪೊನ್ನೆಚಾರಿ ದೇವಳದ ಆನುವಂಶಿಕ ಆಡಳಿತ ಮೊಕೇಸರ ಅಶೋಕ ಕಾಮತ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಯಕ್ಷ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ ಮಾತನಾಡಿ “ಕಲಾ ಸಂಘಟನೆ ಸುಲಭದ…

Read More