Author: roovari

ಸ್ವಿಟ್ಜರ್ಲೆಂಡ್‌ : ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿರುವ ಸ್ಪ್ರಿಹಾ ಅಕಾಡೆಮಿ’ ಆಯೋಜಿಸಿದ್ದ ರಶ್ಮಿತಾ ನಾಯರ್ ಹಾಗೂ ರಾಧಿಕಾ ಶೆಟ್ಟಿ ಇವರ ‘ಮಾನುಷಿ ಆನ್ ಎ ಕ್ವೆಸ್ಟ್’ ಭರತನಾಟ್ಯ ಕಾರ್ಯಕ್ರಮದ ಪ್ರಥಮ ಪ್ರದರ್ಶನ ದಿನಾಂಕ 08 ಮಾರ್ಚ್ 2025 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಜ್ಯೂರಿಚ್‌ನ ನೃತ್ಯಗಾರರು ಮತ್ತು ಕಲಾರಸಿಕರು ಭಾಗವಹಿಸಿದ್ದರು. ನೃತ್ಯ ಪ್ರದರ್ಶನದ ಜೊತೆ ಭರತನಾಟ್ಯದ ಕುರಿತು ಕಾರ್ಯಾಗಾರ ನಡೆಯಿತು. ಇದು ಇವರ ಯುರೋಪ್ ಪ್ರವಾಸ 2025ರ ಯಶಸ್ವಿ ಆರಂಭವಾಗಿದೆ. ಮಾನುಷಿಯ ಮುಂದಿನ ಪ್ರದರ್ಶನ ಹಂಗೇರಿಯ ಬುಡಾಪೆಸ್ಟ್ಇಲ್ಲಿ ನಡೆಯಲಿದೆ.

Read More

ಬೆಂಗಳೂರು : ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇವರು ಹಮ್ಮಿಕೊಂಡಿರುವ ‘ಚಿಗುರು ರಂಗೋತ್ಸವ’ದಲ್ಲಿ ದಿನಾಂಕ 14 ಮಾರ್ಚ್ 2025ರಂದು 3-00 ಮತ್ತು 7-00 ಗಂಟೆಗೆ ಬೆಂಗಳೂರಿನ ಕೋಣನಕುಂಟೆ ಮೆಟ್ರೋ ಸ್ಠೆಷನ್ ಬಳಿಯಿರುವ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇಲ್ಲಿ ಸಂಚಾರಿ ಥಿಯೇಟರ್ ತಂಡದವರು ‘ರೊಶೊಮನ್’ ನಾಟಕ ಪ್ರದರ್ಶನ ನೀಡಲಿದ್ದಾರೆ. ಜಪಾನಿನ ಬರಹಗಾರ ರುನೊಸುಕೆ ಅಕುತಗುವ ಅವರು ರಚಿಸಿದ ಕತೆಗಳನ್ನು ಆಧಾರವಾಗಿಟ್ಟುಕೊಂಡು ಅಕಿರಾ ಕುರುಸಾವಾ ಚಲನಚಿತ್ರವನ್ನಾಗಿಸಿದ ರಶೋಮನ್ ಚಲನಚಿತ್ರವನ್ನು ಆಧರಿಸಿ ಹಿಂದಿ ಲೇಖಕ ರಘುವೀರ್ ಸಹಾಯ್ ಹಿಂದಿ ನಾಟಕವನ್ನು ರಚಿಸಿದ್ದಾರೆ ಮತ್ತು ಅದನ್ನು ಕನ್ನಡಕ್ಕೆ ಎಸ್ ಮಾಲತಿ ಅನುವಾದಿಸಿದ್ದಾರೆ.

Read More

ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇದರ ವತಿಯಿಂದ ರಾಷ್ಟ್ರೀಯ ವೃತ್ತಿ ರಂಗೋತ್ಸವ-2025ರ ಅಂಗವಾಗಿ ಲಾಂಛನ ಬಿಡುಗಡೆ ಹಾಗೂ ಚಿತ್ರಕಲಾ ಶಿಬಿರ ಉದ್ಘಾಟನಾ ಸಮಾರಂಭವು ದಿನಾಂಕ 05 ಮಾರ್ಚ್ 2025ರಂದು ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆಯಿತು. ಈ ಸಮಾರಂಭವನ್ನು ಉದ್ಘಾಟಿಸಿದ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಇವರು ಮಾತನಾಡಿ “ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು 15 ಮಾರ್ಚ್ 2025ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ವೃತ್ತಿ ರಂಗೋತ್ಸವದ ಹಿನ್ನೆಲೆ ದೃಶ್ಯಕಲಾ ಕಾಲೇಜು ವಿದ್ಯಾರ್ಥಿಗಳ ಚಿತ್ರಕಲಾ ಶಿಬಿರ ನಾಟಕೋತ್ಸವಕ್ಕೆ ಮತ್ತಷ್ಟು ಸ್ಫೂರ್ತಿ ತುಂಬುತ್ತಿದೆ. ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಶುರುವಾಗಿ ಆರು ವರ್ಷವಾಗುತ್ತಿದೆ. ಮೊದಲ ಸಲ ಇಲ್ಲಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆಯಾಗುತ್ತಿದೆ. ಕನ್ನಡ, ತಮಿಳು, ತೆಲುಗು ಭಾಷೆಯ ನಾಟಕಗಳು ಪ್ರದರ್ಶನವಾಗಲಿವೆ. ಪ್ರೇಕ್ಷಕರಿಗೆ ಉಚಿತ ಪ್ರವೇಶ ಅವಕಾಶ ಇರುತ್ತದೆ. ಕನ್ನಡ ವೃತ್ತಿ ರಂಗಭೂಮಿಯ ರಾಜಣ್ಣ ಜೇವರ್ಗಿಯವರ ‘ಅಂಗಾರ.. ತಂಗಿ ಬಂಗಾರ’, ತೆಲುಗಿನ ‘ಮಾಯಾ…

Read More

ಮಂಗಳೂರು : ಬೊಂಬಾಟ್ ಬ್ರದರ್ಸ್ ಪ್ರಸ್ತುತ ಪಡಿಸುವ ಕಲಾ ಸಂಗಮ ಕಲಾವಿದರು ಅಭಿನಯಿಸುವ ‘ಛತ್ರಪತಿ ಶಿವಾಜಿ’ ಅದ್ದೂರಿ ತುಳು ಚಾರಿತ್ರಿಕ ನಾಟಕ ಪ್ರದರ್ಶನವನ್ನು ದಿನಾಂಕ 13 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ನಾಟಕಕ್ಕೆ ಶಶಿರಾಜ್ ಕಾವೂರು ಇವರ ಕಥೆ ಸಂಭಾಷಣೆ, ಎ.ಕೆ. ವಿಜಯ್ ಕೋಕಿಲ ಮತ್ತು ಕದ್ರಿ ಮಣಿಕಾಂತ್ ಇವರ ಸಂಗೀತ ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲು ನಿರ್ದೇಶನ ಮಾಡಿರುತ್ತಾರೆ.

Read More

ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕ ಗಮಕ ಕಲಾ ಪರಿಷತ್ತು ಇವುಗಳ ಸಂಯುಕ್ತ ಆಶಯದಲ್ಲಿ ಕುಮಾರವಾಲ್ಮೀಕಿ ರಚಿಸಿದ ತೊರವೆ ರಾಮಾಯಣದ ಆಯೋಧ್ಯಾ ಕಾಂಡದ ‘ಭರತನ ಸೋದರ ಪ್ರೀತಿ’ ಭಾಗದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 08 ಮಾರ್ಚ್ 2025 ಶನಿವಾರದಂದು ಸಂದರ್ಭನಗರದ ಆಶ್ರಮ ರಸ್ತೆಯಲ್ಲಿರುವ 37 ನಂ. ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸಾಂಗವಾಗಿ ನಡೆಯಿತು. ವಿಜಯಪುರ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಶ್ರೀ ಬಿ.ಎಂ. ಪಾಟೀಲರು ಕಾರ್ಯಕ್ರಮ ಆಯೋಜಿಸಿದ್ದರು. “ಭರತನು ತಂದೆ, ತಾಯಿ, ಅಣ್ಣ ಹಾಗೂ ಪ್ರಜೆಗಳನ್ನು ಸಮನಾಗಿ ಪ್ರೀತಿಸುತ್ತಿದ್ದನು. ರಾಮನಿಗೆ ಸಮನಾದ ಶ್ರೇಷ್ಠ ಗುಣಗಳು ಭರತನಲ್ಲಿದ್ದವು. ಹೀಗಾಗಿ ರಾಮಾಯಣವು ಭಾರತದ ಒಂದು ಉನ್ನತ ಕಾವ್ಯವಾಗಿದೆ” ಎಂದು ಹಿರಿಯ ಸಾಹಿತಿ ಶ್ರೀ ಜಂಬುನಾಥ ಕಂಚ್ಯಾಣಿ ತಿಳಿಸಿದರು. ಆರಂಭದಲ್ಲಿ ಗಮಕಿ ಶ್ರೀಮತಿ ಪುಷ್ಪಾ ಕುಲಕರ್ಣಿ ಇವರು ‘ಶ್ರೀ ಜನಕಚಾರಮಣ ವಿಮಲ ಸರೋಜ ಸಂಭವ ಜನಕ… ತೊರವೆಯ ರಾಯ ನರಹರಿ…

Read More

ಉಡುಪಿ : ಹೋಟೆಲ್ ಉದ್ಯಮದಲ್ಲಿ ಇದ್ದುಕೊಂಡು ತನ್ನ 66ರ ಹರೆಯದಲ್ಲೂ ಹದಿನಾರರ ಯುವಕನಂತೆ ತೆಳ್ಳಗೆ ಬೆಳ್ಳಗಿನ ದೇಹ ಪ್ರಕೃತಿಯನ್ನು ಹೊಂದಿರುವ ವ್ಯಕ್ತಿ ಸಾಧನೆಗಳ ಸಾಕಾರ ಮೂರ್ತಿ ಎಂದರೆ ಮೂಗಿನ ಮೇಲೆ ಬೆರಳು ಹೊರಳುತ್ತದೆ ಅಲ್ಲವೇ! ಕಾರಂತ ಎಂಬ ಉಪನಾಮ ಹೊಂದಿದವರು ಹೆಚ್ಚಾಗಿ ಹೀಗೆಯೋ ಏನೋ… ಒಂದಲ್ಲ ಒಂದು ಕ್ಷೇತ್ರದಲ್ಲಿ ಇವರು ಮುಂಚೂಣಿಯಲ್ಲಿ ಇರುವವರು…ಹೀಗೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡ ರಂಗನಟ ನಿರ್ದೇಶಕ ನಮ್ಮ ಗಣೇಶ್ ಕಾರಂತ್. ಅಂದು 1958ರ ಸೆಪ್ಟೆಂಬರ್ ತಿಂಗಳಲ್ಲಿ ಸೇನೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಬೈಂದೂರು ಎಂಬ ಪುಟ್ಟ ಹಳ್ಳಿಯ ಸ್ವರ್ಣ ನೆಲೆಯಲ್ಲಿ ಸುಸಂಸ್ಕೃತ ಮನೆತನವೊಂದರ ಸಣ್ಣ ಗೂಡೊಂದರಲ್ಲಿ ಶಿವರಾಮ ಕಾರಂತ – ಸಾವಿತ್ರಿ ದಂಪತಿಗಳ ಕರುಳ ಕುಡಿಯಾಗಿ ಚಿಗುರೊಡೆದು ಅರಳಿದ ಕಲಾ ಕುಸುಮ ಗಣೇಶ ಕಾರಂತ. ಹಸಿರು ಆಸೆಯ ಕನಸಲ್ಲಿ ಕಳೆದಿತ್ತು, ಕೆಸರ ಮೇಲಣ ಪಯಣ, ಇವರ ಬಾಲ್ಯ ಯವ್ವನದ ಜೀವನ. ಸರೋವರದ ಆಳವನ್ನು ಲೆಕ್ಕಿಸದೆ ಕೆಸರನ್ನು ಕೊಡವಿಕೊಂಡು ನೀರ ಮೇಲೆದ್ದು…

Read More

ಸಾಗರ : ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲೆ, ತಾಲೂಕು, ಹೋಬಳಿ ಸಮಿತಿ ಮತ್ತು ಚೆನ್ನಮ್ಮಾಜಿ ಜಾನಪದ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 6ನೇ ಜಾನಪದ ಸಮ್ಮೇಳನ ದಿನಾಂಕ 09 ಮಾರ್ಚ್ 2025ರ ಭಾನುವಾರದಂದು ಸಾಗರ ತಾಲೂಕಿನ ಆನಂದಪುರ ಸಮೀಪದ ಚನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ “ಮಲೆನಾಡು ಜಾನಪದ ಕ್ಷೇತ್ರಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದು ಅಂತಹ ಸೂಕ್ಷ್ಮ ಜಾನಪದ ಸಂಗತಿಗಳ ದಾಖಲೀಕರಣ ಆಗಬೇಕಿದೆ. ಮೌಖಿಕ ಪರಂಪರೆ ನಮಗೆ ಅಪಾರ ಕೊಡುಗೆ ನೀಡಿದೆ. ನೂರಾರು ವರ್ಷಗಳ ಜಾನಪದ, ಸಾಹಿತ್ಯ ಹಾಗೂ ಮೌಖಿಕ ಪರಂಪರೆಯನ್ನು ದಾಖಲಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಅಂತಹ ಅಮೂಲ್ಯ ಜಾನಪದ ಸಂಪತ್ತನ್ನು ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಿಲ್ಲೆಯಲ್ಲಿ ನಡೆದಿರುವ ಜಾನಪದ ಸಾಹಿತ್ಯ ಪರಂಪರೆ, ಚಳವಳಿಗಳು, ಸಾಹಿತ್ಯ ಕೃಷಿ ಎಲ್ಲವೂ ಇಡೀ ರಾಜ್ಯಕ್ಕೆ ಹೊಸ ದಿಕ್ಕನ್ನು ತೋರಿಸಿವೆ” ಎಂದರು. ಸಮ್ಮೇಳನಾಧ್ಯಕ್ಷ ಟಾಕಪ್ಪ ಬಿ. ಕಣ್ಣೂರು…

Read More

ಉಡುಪಿ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ಸುವರ್ಣ ಪರ್ವ -8ರ ಸರಣಿಯಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ನೆರವಿನೊಂದಿಗೆ ‘ಮಕ್ಕಳ ಯಕ್ಷಗಾನ ರಂಗಭೂಮಿ’ ಒಂದು ದಿನದ ಯಕ್ಷಗಾನ ಗೋಷ್ಠಿಯನ್ನು ದಿನಾಂಕ 16 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮಂಗಳೂರಿನ ಯಕ್ಷಗಾನ ವಿದ್ವಾಂಸರು ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಷಿ ಇವರು ಪ್ರಧಾನ ದಿಕ್ಸೂಚಿ ಭಾಷಣ ಮಾಡಲಿದ್ದು, ಮಕ್ಕಳ ಯಕ್ಷಗಾನ ಕ್ಷೇತ್ರದ ಸಾಧಕರಾದ ಬಿ. ಕೇಶವ ಬಡಾನಿಡಿಯೂರು ಇವರಿಗೆ ‘ಸುವರ್ಣಪರ್ವ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಗುವುದು. 11-00 ಗಂಟೆಗೆ ನಡೆಯಲಿರುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಉಡುಪಿಯ ಯಕ್ಷಗಾನ ಗುರು ವಿದ್ವಾಂಸ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ್ ಇವರು ವಹಿಸಲಿದ್ದು,…

Read More

ಕಲಬುರಗಿ : ವಿಶ್ವರಂಗ (ರಿ.) ಕಲಬುರಗಿ ಇದರ ವತಿಯಿಂದ ‘ಚಿಣ್ಣರ ಮೇಳ 2025’ ಹತ್ತು ಹಲವು ಸೃಜನಾತ್ಮಕ ಚಟುವಟಿಕೆಗಳೊಂದಿಗೆ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 10 ಏಪ್ರಿಲ್ 2025ರಿಂದ 05 ಮೇ 2025ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 4-30 ಗಂಟೆಗೆ ತನಕ ಕಲಬುರಗಿಯ ಜಗತ್, ಲೇಕ್ ರೋಡ್, ಕಾರ್ಪೊರೇಷನ್ ಹತ್ತಿರ, ಎಂ.ಎಂ.ಕೆ. ಕಾಲೇಜ್ ಆಫ್ ವಿಷುವಲ್ ಆರ್ಟ್ ಇಲ್ಲಿ ಆಯೋಜಿಸಲಾಗಿದೆ. ಅನುಭವಿ ರಂಗ ನಿರ್ದೇಶಕ ಡಾ. ವಿಶ್ವರಾಜ್ ಪಾಟೀಲ್ ಇವರ ಸಾರಥ್ಯದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ 5 ರಿಂದ 15 ವರ್ಷದ ಮಕ್ಕಳು ಭಾಗವಹಿಸಬಹುದು. ನಾಟಕ, ಸಂಗೀತ, ನೃತ್ಯ, ಕರಕುಶಲ ಕಲೆ, ಚಿತ್ರಕಲೆ, ಅಜ್ಜಿ ಕಥೆಗಳು, ದೇಸಿ ಸಂತೆ, ವಾದ್ಯ ಮೇಳ, ಮೂಕಾಭಿನಯ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಪ್ರದರ್ಶನ ಮುಂತಾದ ಚಟುವಟಿಕೆಗಳನ್ನು ನಡೆಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 9901495905 ಮತ್ತು 8660926667 ಮತ್ತು 7022220144 ಸಂಖ್ಯೆಗಳನ್ನು ಸಂಪರ್ಕಿಸಿರಿ.

Read More

ಚುಟುಕು ಕವಿ, ಹಾಸ್ಯ ಕವಿ, ಹನಿಗವನಗಳ ಕವಿಗಳೆಂದೇ ಜನಪ್ರಿಯರಾದ ಡುಂಡಿರಾಜ್ ಇಪ್ಪತ್ತಕ್ಕೂ ಮಿಕ್ಕಿ ಹಾಸ್ಯ ನಾಟಕಗಳನ್ನು ಬರೆದಿದ್ದಾರೆಂಬುದು ಅನೇಕರಿಗೆ ತಿಳಿದಿಲ್ಲ. ಅರ್ಧ ಅಥವಾ ಒಂದು ಗಂಟೆಯ ಅವಧಿಯಲ್ಲಿ ರಂಗದ ಮೇಲೆ ಆಡಬಹುದಾದ ಅವರ ಹಲವು ಕಿರುನಾಟಕಗಳನ್ನು ಶಾಲಾ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಅನೇಕ ವರ್ಷಗಳಿಂದ ರಂಗಾಸಕ್ತರು ಆಡುತ್ತಿದ್ದಾರೆ. ಇತ್ತೀಚೆಗೆ ಅವರ ಹೊಸ ಸಂಕಲನ ‘ಹದಿನಾಲ್ಕು ಕಿರು ಹಾಸ್ಯ ನಾಟಕಗಳು’ ಅಂಕಿತ ಪುಸ್ತಕದ ಮೂಲಕ ಹೊರ ಬಂದಿದೆ. ಅವರ ಹನಿಗವನಗಳಂತೆಯೇ ನವಿರಾದ ಹಾಸ್ಯ ಸಂಭಾಷಣೆಗಳಿಂದ ಮತ್ತು ಆಧುನಿಕ ಬದುಕಿನ ಸಂದರ್ಭ-ಸನ್ನಿವೇಶಗಳಿಗೆ ಸಂಬಂಧಿಸಿದ ವಿಚಾರಗಳಿಂದ ತುಂಬಿರುವ ನಾಟಕಗಳು ಇಲ್ಲಿವೆ. ಗಣೇಶೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ದರ್ಶನವೀಯಲು ಬರುವ ಗಣಪನನ್ನು ಅಧುನಿಕ ದೃಷ್ಟಿಕೋನದಿಂದ ಮಾತನಾಡಿಸುತ್ತ ಸಾಮಾಜಿಕ ಸ್ಥಿತಿಗತಿಗಳನ್ನು, ರಾಜಕೀಯದ ಓರೆಕೋರೆಗಳನ್ನು, ಗಣಪನ ಮೂರ್ತಿಗೆ ರಾಸಾಯನಿಕ ಬಣ್ಣಗಳನ್ನು ಬಳಸಿ ಜನರು ಪರಿಸರಕ್ಕೆ ಉಂಟು ಮಾಡುವ ಹಾನಿಗಳನ್ನು ಹಾಸ್ಯ ಮಿಶ್ರಿತ ಮಾತುಗಳಿಂದ ಚಿತ್ರಿಸುವ ನಾಟಕ ‘ಅಸಲಿಯೋ ನಕಲಿಯೋ ?’. ಅನಾರೋಗ್ಯ ಸಮಸ್ಯೆಗೆ ಸರಿಯಾದ ಪರಿಹಾರವನ್ನೇ ನೀಡದ ಟಿ.ವಿ. ಕಾರ್ಯಕ್ರಮ ‘ಅನಾರೊಗ್ಯವೇ…

Read More