Author: roovari

ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಭಾಗವಾಗಿರುವ ‘ಬಹುಭಾಷಾ ಕವಿಗೋಷ್ಠಿ’ಯನ್ನು 2024ನೇ ಸಾಲಿನಲ್ಲಿ ಅಕ್ಟೋಬರ್ 9ರ ಬುಧವಾರದಂದು ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಕವನಗಳನ್ನು ವಾಚನ ಮಾಡಲು ಅಸಕ್ತರಾಗಿರುವ ಕವಿ/ಕವಿಯಿತ್ರಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕವಿ/ ಕವಿಯಿತ್ರಿಯರು ಯಾವುದೇ ಒಂದು ಭಾಷೆಯ ಒಂದು ಕವನವನ್ನು ಸೆಪ್ಟೆಂಬರ್ 23ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ. ಈ ಬಾರಿಯ ಕವಿಗೋಷ್ಠಿಯಲ್ಲಿ ವರ್ಷಂಪ್ರತಿಯಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ಉರ್ದು, ತಮಿಳು, ಮಲೆಯಾಳಂ, ತೆಲುಗು, ಮರಾರಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯ ಕವನಗಳನ್ನು ‘ಕನ್ನಡ’ ಲಿಪಿಯಲ್ಲಿ ಹಾಗೂ ಹಿಂದಿ, ಇಂಗ್ಲೀಷ್ ಕವನವನ್ನು ಅದೇ ಭಾಷೆಯಲ್ಲಿ ಕಳುಹಿಸಿಕೊಡತಕ್ಕದ್ದು. ಕನ್ನಡ ಭಾಷೆಯ ಚುಟುಕು ಕವನ (4 ಸಾಲಿನ ಗರಿಷ್ಠ 4 ಕವನಗಳಿಗೆ ಮಾತ್ರ ಅವಕಾಶ)ಗಳು, ಮಕ್ಕಳ ಕವನ (6ರಿಂದ 12 ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಕವನಗಳನ್ನು…

Read More

ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಶ್ರೀ ಸುಬ್ರಹ್ಮಣ್ಯ ಸಭಾ (ರಿ.) ಇದರ ವತಿಯಿಂದ ಹಬ್ಬಗಳ ಮಹೋತ್ಸವದ ಸಂಭ್ರಮಾಚರಣೆಯ ಸಲುವಾಗಿ ಸಂಗೀತ, ನೃತ್ಯ ಕಾರ್ಯಕ್ರಮವನ್ನು ದಿನಾಂಕ 16 ಸೆಪ್ಟೆಂಬರ್ 2024ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಬಿಜೈ ರಸ್ತೆಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಅತಿಥಿ ಕಲಾವಿದರು ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ವತಿಯಿಂದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರದರ್ಶನ ಫಲಕಗಳ ಅನಾವರಣ, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯರವರ ಜನ್ಮದಿನಾಚರಣೆ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 15 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಭಾ.ಆ.ಸೇ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದರ್ಶನ್ ಪುಟ್ಟಣ್ಣಯ್ಯರವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಮೇಶಚಂದ್ರ ಲಹೋಟಿಯವರು ಮುಖ್ಯ…

Read More

ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇದರ 2024-25ನೇ ಸಾಲಿನ ರಂಗ ಚಟುವಟಿಕೆಗಳ ‘ನಾಂದಿ ಆರಂಭೋತ್ಸವ’ವನ್ನು ದಿನಾಂಕ 15 ಸೆಪ್ಟೆಂಬರ್ 2024ರಂದು ದಾವಣಗೆರೆಯ ಮೆಡಿಕಲ್ ಕಾಲೇಜ್ ಆವರಣ, ಜೆ.ಜೆ.ಎಂ. ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 10-30 ಗಂಟೆಗೆ ‘ವರ್ತಮಾನ ವೃತ್ತಿ ರಂಗಭೂಮಿ : ಬಿಕ್ಕಟ್ಟು ಮತ್ತು ಪರಿಹಾರ’ ಎಂಬ ವಿಷಯದ ಬಗ್ಗೆ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಡಾ. ಪ್ರಕಾಶ ಗರುಡ ಇವರು ‘ನಾಟಕ ಕಂಪನಿ ಪರಂಪರೆ ಮತ್ತು ಪ್ರಯೋಗಶೀಲತೆ’, ಶ್ರೀ ಬಸವರಾಜ ಬೆಂಗೇರಿ ಇವರು ‘ಸಾಹಿತ್ಯ ಮತ್ತು ಸಂಗೀತ’ ಮತ್ತು ಶ್ರೀ ಅರುಣ್ ಸಾಗರ್ ಇವರು ‘ರಂಗ ಪರಿಕರ ಮತ್ತು ರಂಗಸಜ್ಜಿಕೆ” ಎಂಬ ವಿಷಯಗಳ ಬಗ್ಗೆ ಪ್ರಬಂಧ ಮಂಡನೆ ಮಾಡಲಿರುವರು. ಬಳಿಕ ರಂಗ ಗೀತೆಗಳ ಗಾಯನ ನಡೆಯಲಿದೆ. ಸಂಜೆ 4-00 ಗಂಟೆಗೆ ಸಾಣೇಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇವರ ರಂಗ ಸಾನಿಧ್ಯದಲ್ಲಿ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಇವರು ಉದ್ಘಾಟನೆ ಮಾಡಲಿದ್ದಾರೆ. ಶಾಸಕರಾದ ಡಾ. ಶಾಮ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆ ಗೋಣಿಕೊಪ್ಪಲು ಇವರ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ಶ್ರೀಮತಿ ದಿ. ಪುಟ್ಟಮ್ಮ ಮತ್ತು ದಿ. ಹೆಬ್ಬಾಲೆ ನಂಜಾಚಾರ್ ಜ್ಞಾಪಕಾರ್ಥ ದತ್ತಿ ಕಾರ್ಯಕ್ರಮವು ದಿನಾಂಕ 11 ಸೆಪ್ಟೆಂಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ, ಪತ್ರಕರ್ತ ಡಾ. ಜೆ ಸೋಮಣ್ಣ ಇವರು ದತ್ತಿ ಉಪನ್ಯಾಸ ನೀಡುತ್ತಾ “ಹಿಂದಿನ ಕಾಲದ ಎಲ್ಲಾ ದೇವಾಲಯಗಳು ಪ್ರಾಚೀನ ವಿಶೇಷ ಕಟ್ಟಡಗಳು ತಯಾರಾದದ್ದು ವಿಶ್ವಕರ್ಮರಿಂದ. ದ್ವಾರಕ, ಶ್ರೀಲಂಕಾ, ಇಂದ್ರಪ್ರಸ್ಥ ಇವುಗಳೆಲ್ಲದರ ಅರಮನೆಗಳು, ದೇವಾಲಯಗಳ ನಿರ್ಮಾತರು ವಿಶ್ವಕರ್ಮರು. ವಿಶ್ವಕರ್ಮ ಸಮುದಾಯದಲ್ಲಿ ಆಚಾರಿ, ಸಂಚಾರಿ, ಅಕ್ಕಸಾಲಿಗ, ಕಂಚುಗಾರ, ಬಡಗಿ, ಜಾಚಾರ, ಕಲ್ಲುಕುಟಿಗ ಹೀಗೆ ಹತ್ತು ಹಲವು ಪಂಗಡಗಳಿದ್ದು ಅವರೆಲ್ಲರೂ ಕೂಡ ಮರಗೆಲಸ, ಕಲ್ಲು ಕೆಲಸ, ಚಿತ್ರಕಲೆ, ಚಿನ್ನದ ಕೆಲಸ, ಕಬ್ಬಿಣದ ಕೆಲಸ ಇವೆಲ್ಲದರಲ್ಲೂ ಪರಿಣಿತರಾಗಿದ್ದು ಇಂದಿನ ಯಾವುದೇ ಇಂಜಿನಿಯರಿಂಗ್ ತಜ್ಞರಿಗಿಂತಲೂ…

Read More

ಬೆಂಗಳೂರು : ಬೆಂಗಳೂರಿನ ಯಕ್ಷದೇಗುಲ ತಂಡ ಆಯೋಜಿಸಿದ 2ನೇ ಶ್ರೀ ರಾಧಾ ಅಷ್ಟಮಿ ಲಲಿತಕಲಾ ಸಾಂಸ್ಕೃತಿಕ ಉತ್ಸವ ಹಾಗೂ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ಯಕ್ಷದೇಗುಲದ ಮಕ್ಕಳ ತಂಡದಿಂದ `ಕಂಸವಧೆ’ ಯಕ್ಷಗಾನ ಪ್ರದರ್ಶನ ದಿನಾಂಕ 12 ಸೆಪ್ಟೆಂಬರ್ 2024ರಂದು ಬೆಂಗಳೂರಿನ ಮಲ್ಲೇಶ್ವರದ ಸೇವಾ ಸದನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗುರು ಪ್ರಿಯಾಂಕ ಕೆ. ಮೋಹನರಿಗೆ ‘ಗಾಂಧರ್ವಿಕಾ ಪ್ರಶಸ್ತಿ–2024’ ನೀಡಿ ಗೌರವಿಸಲಾಯಿತು. ಬಳಿಕ ನಡೆದ ‘ಕಂಸವಧೆ’ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಹೆಗಡೆ, ಮದ್ದಲೆಯಲ್ಲಿ ಸಂಪತ್ ಕುಮಾರ್, ಚಂಡೆಯಲ್ಲಿ ಕಾರ್ತಿಕ್ ಧಾರೇಶ್ವರರವರು ಭಾಗವಹಿಸಿದರು. ಮುಮ್ಮೇಳದಲ್ಲಿ ಮಕ್ಕಳಾದ ಅನಿಕಾ, ಸರಸ್ವತಿ, ಸುಹಾಸ್ ಹೊಳ್ಳ, ಪ್ರತ್ಯೂಷಾ ಶೆಟ್ಟಿ, ಅನೀಶಾ, ಮಾನ್ಯ, ಶ್ರೀ ಗೌರಿ, ಧನ್ಯ ಮತ್ತು ಶಾಶ್ವತ ಹೊಳ್ಳ ಭಾಗವಹಿಸಿದರು. ರಂಗದ ಹಿಂದೆ ಸುದರ್ಶನ ಉರಾಳ, ಉದಯ ಬೋವಿ ಹಾಗೂ ಶ್ರೀರಾಮ ಹೆಬ್ಬಾರ್ ಸಹಕರಿಸಿದರು.

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ  ‘ಸಿನ್ಸ್ 1999 ಶ್ವೇತಯಾನ-58’ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿರುವ ಆರ್. ವಿ. ಮೆಲೋಡೀಸ್ ಕೋಟೇಶ್ವರ ತಂಡದ ಭಾವಗೀತೆ ಹಾಗೂ ಭಕ್ತಿ ರಸಮಂಜರಿ ಕಾರ್ಯಕ್ರಮವು ದಿನಾಂಕ 12 ಸೆಪ್ಟೆಂಬರ್ 2024ರಂದು ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ದ್ರಾವಿಡ ಬ್ರಾಹ್ಮಣ ಪರಿಷತ್‌ ಇದರ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ವೈದ್ಯ ಮಾತನಾಡಿ “ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತಿರುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ದೇಗುಲದ ಸೋಣೆ ಆರತಿ ಸಂದರ್ಭ ಭಕ್ತಿ ಸುಧೆಯನ್ನು ಹರಿಸಿ ಮನಸ್ಸನ್ನು ಹಗುರಾಗಿಸಿ, ಭಕ್ತಿ ಮಾರ್ಗಕ್ಕೆ ಕೊಂಡೊಯ್ಯುವ ಪರಿಪಾಟ ಆರೋಗ್ಯಕರ ಲಕ್ಷಣ. ಭಕ್ತಿ ಮಾರ್ಗವು ಮನಸ್ಸಿನ ತುಡಿತಗಳನ್ನು, ಜಂಜಾಟಗಳನ್ನು, ನೋವುಗಳನ್ನು ಮರೆಸುತ್ತದೆ. ಭಕ್ತಿ ಮಾರ್ಗದಲ್ಲಿ ಆನಂದವಿದೆ, ತನ್ಮಯತೆಯ ಭಕ್ತಿಯು ಸರ್ವವನ್ನೂ ಸಮತೋಲನದಲ್ಲಿರಿಸುತ್ತದೆ.” ಎಂದರು. ಮಾಜಿ ಜಿಲ್ಲಾ  ಪಂಚಾಯತ್ ಸದಸ್ಯರಾದ ಗಣಪತಿ ಟಿ. ಶ್ರೀಯಾನ್ ಮಾತನ್ನಾಡಿ “ಸಂಸ್ಥೆಯ 25ನೇ ವರ್ಷದ ಕಾರ್ಯಕ್ರಮದ ಉದ್ಘಾಟನೆ ಅವಿಸ್ಮರಣೀಯ. ವರ್ಷಕ್ಕೆ 108 ಕಾರ್ಯಕ್ರಮವನ್ನು…

Read More

ಕೋಟ : ಕೋಟತಟ್ಟು ಗ್ರಾ. ಪಂ. ಇವರು ಡಾ. ಕಾರಂತ ಹುಟ್ಟೂರು ಪ್ರತಿಷ್ಠಾನ ಕೋಟ ಇದರ ಸಹಭಾಗಿತ್ವದಲ್ಲಿ ಕೊಡಮಾಡುವ 2024ನೇ ಸಾಲಿನ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಸಾಹಿತಿ ಪ್ರೊ. ಕೃಷ್ಣ ಗೌಡ ಮೈಸೂರು ಅವರು ಅಯ್ಕೆಯಾಗಿದ್ದಾರೆ. “ಕನ್ನಡ ಮಾತುಗಾರಿಕೆಗೆ ಹೊಸ ನೆಲೆಕಟ್ಟು ಮತ್ತು ಚೌಕಟ್ಟು ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ದಿನಾಂಕ 10 ಅಕ್ಟೋಬರ್ 2024ರ ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನದಂದು ಕೋಟ ಕಾರಂತ ಕಲಾಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.” ಎಂದು ಕಾರಂತ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ತಿಳಿಸಿದ್ದಾರೆ. 19 ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ.

Read More

“ವಿ.ಸೀ. ವೃಷಭೇಂದ್ರ ಸ್ವಾಮಿ ಮುಂತಾಗಿ ಕನ್ನಡದ ಅನೇಕ ಪ್ರಥಮ ವಂದಿತರ ಒಡನಾಟವಿದ್ದು, ದುರ್ಗಾ ಹೈಸ್ಕೂಲು ಅಡೂರು ಮುಳ್ಳೇರಿಯ ದೇಲಂಪಾಡಿ ಬೆಳ್ಳೂರುಗಳಲ್ಲಿ ಮುಖ್ಯೋಪಾಧ್ಯಾಯರಾಗಿದ್ದು ಒಂದುವರೆ ವರ್ಷ ಎ.ಇ.ಓ. ಹುದ್ದೆಯನ್ನು ನಿರ್ವಹಿಸಿದವರು. ಹಳೆ ಕಡತಗಳಿಗೆ ಉತ್ತರ ಕೊಟ್ಟು ಶಾಲಾ ಕಾಂಪೌಂಡ್ ಸರಿಪಡಿಸಿ, ಕಸಕಡ್ಡಿ ಎತ್ತಲಿಕ್ಕೆ ಶ್ರಮದಾನ ಆಯೋಜಿಸಿ ಶಿಕ್ಷಕ ರಕ್ಷಕ ಸಂಘಗಳನ್ನು ಜನಪ್ರಿಯಗೊಳಿಸಿ, ಶಾಲೆಗಳಲ್ಲಿ ನಿಂತೇ ಹೋದಂತಿದ್ದ ವಾರ್ಷಿಕೋತ್ಸವಗಳಿಗೆ ಚಾಲನೆ ಕೊಡಿಸಿದವರು. ಯಕ್ಷಗಾನಾಸಕ್ತಿ ಬಹಳ ಇದ್ದು ತಾಳಮದ್ದಳೆಗಳಿಗೆ ಹಾಜರಾಗುತ್ತಿದ್ದರು. ಪೆರ್ಲ ಕೃಷ್ಣ ಭಟ್ಟ, ಶೇಣಿ ಗೋಪಾಲಕೃಷ್ಣ ಭಟ್ಟ ಮುಂತಾದವರಿಗೆ ಮಾರು ಹೋದವರು. ನಿವೃತ್ತನಾದ ಮೇಲೆ ನಾಲ್ಕನೇ ಬಾರಿಗೆ ಕ.ಸಾ.ಪ. ಕೃಳ ಘಟಕದ ಅಧ್ಯಕ್ಷರಾಗಿ ಒಂಬತ್ತು ಬಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ಹೆಗಲು ಕೊಟ್ಟವರು. ‘ಯಕ್ಷಗಾನದ ಶಕ ಪುರುಷ ಶೇಣಿ’ ಎಂಬ ಅವರೇ ಬರೆದ ಕೃತಿ ಪ್ರಕಟ ಆಗಲಿದೆ. ಎರಡು ಮೂರು ಕವನ ಸಂಕಲನಗಳನ್ನೂ ಕೊಟ್ಟ ಈ ಸಾಹಿತ್ಯ ಪ್ರಿಯ, ತನ್ನ ಮಕ್ಕಳನ್ನು ಓದಿಸಿ ಉತ್ತಮ ಸ್ಥಿತಿಗೆ ತಂದು ಉದ್ಯೋಗಕ್ಕೆ ಹಚ್ಚಿದ್ದಾರೆ. ಎಸ್.ವಿ. ಎಂದಿಗೂ ಎಲ್ಲ…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ಶ್ರೀಮತಿ ಬಿ. ಸರೋಜಮ್ಮ ಪ್ರಾಯೋಜಿತ ಶ್ರೀ ಪುಂಡಲೀಕ ಹಾಲಂಬಿ ದತ್ತಿ ಕಾರ್ಯಕ್ರಮವು ದಿನಾಂಕ 15 ಸೆಪ್ಟೆಂಬರ್ 2024ರಂದು ಸಂಜೆ 4-00 ಗಂಟೆಗೆ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷ ರಾದ ಶ್ರೀ ನೀಲಾವರ ಸುರೇಂದ್ರ ಅಡಿಗ ಇವರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇವರ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಐರೋಡಿ ಗೋವಿಂದಪ್ಪ ಇವರಿಗೆ ‘ಪುಂಡಲೀಕ ಹಾಲಂಬಿ ಪ್ರಶಸ್ತಿ 2024’ಯನ್ನು ಹಿರಿಯ ಪತ್ರಕರ್ತರಾದ ಶ್ರೀ ಎಸ್. ಜನಾರ್ದನ್ ಮರವಂತೆ ಇವರು ಪ್ರದಾನ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್ ಶ್ರೀ ಅಶೋಕ ಆಚಾರ್ಯ ಸಾಯಿಬ್ರಕಟ್ಟೆ ಮತ್ತು ಬಳಗದವರಿಂದ ಭಾವಗಾನ ಕಾರ್ಯಕ್ರಮ ನಡೆಯಲಿದೆ.

Read More