Author: roovari

ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಗ್ರಾಮ ಪಂಚಾಯತ್ ನರಿಮೊಗರು ಇವರ ಸಹಕಾರದೊಂದಿಗೆ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಹೊರನಾಡ ಕನ್ನಡಿಗ ಶ್ರೀ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಪೋಷಕತ್ವದಲ್ಲಿ ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನರಿಮೊಗರು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಸುವ ‘ಗ್ರಾಮ ಸಾಹಿತ್ಯ ಸಂಭ್ರಮ’ ಸರಣಿ-16 ಈ ಕಾರ್ಯಕ್ರಮವು ಶತಸಂಭ್ರಮ ಆಡಿಟೋರಿಯಂ ನರಿಮೊಗರು ಶಾಲೆಯಲ್ಲಿ ದಿನಾಂಕ 24 ಆಗಸ್ಟ್ 2024ರ ಶನಿವಾರ ಬೆಳಿಗ್ಗೆ 9-30 ಗಂಟೆಯಿಂದ ನಡೆಯಲಿದೆ. ಈ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಸರಕಾರಿ ಉ. ಹಿ. ಪ್ರಾ. ಶಾಲೆ ನರಿಮೊಗರು ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಪೂಜಾಶ್ರೀರವರು ವಹಿಸಲಿದ್ದಾರೆ. ಮಧ್ಯಾಹ್ನ 3-00 ಗಂಟೆಗೆ ನಡೆಯುವ ಸಮಾರೋಪ ಭಾಷಣವನ್ನು ಸ. ಹಿ. ಪ್ರಾ. ಶಾಲೆ ಶಾಂತಿಗೋಡು…

Read More

ಅಸ್ಸಾಂ : ಕರಾವಳಿಯ ಯುವ ನೃತ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಮತ್ತು ಕೋಲ್ಕತ್ತಾದ ಯುವ ನೃತ್ಯ ಕಲಾವಿದ, ಮಂಜುನಾಥ್ ಅವರ ನಟುವಾಂಗ ವಿದ್ಯಾರ್ಥಿ ಎನ್. ದೆಬಾಶಿಷ್ ಅವರು ಅಸ್ಸಾಂನ ಲಬ್ಡಿಂಗ್ ಸಿಟಿಯಲ್ಲಿ ದಿನಾಂಕ 12 ಆಗಸ್ಟ್ 2024ರಿಂದ 14 ಆಗಸ್ಟ್ 2024ರವೆರೆಗೆ ನಡೆದ ಕಾರ್ಯಕ್ರಮದಲ್ಲಿ ಒಂದು ಗಂಟೆಗಳ ಕಾಲ ನೃತ್ಯ ಪ್ರದರ್ಶನ ಮತ್ತು ಮೂರು ದಿನಗಳ ಭರತನಾಟ್ಯ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಮಾನಶಾ ಡ್ಯಾನ್ಸ್ ಅಕಾಡೆಮಿಯ ನೃತ್ಯಗುರು ಶ್ರೀಶಿವ ದಾಸ್ ರಿಯಾಂಶ್ ಅವರು ಈ ನೃತ್ಯ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಗುರು ಶಿವ ಅವರ ನೃತ್ಯ ವಿದ್ಯಾರ್ಥಿಗಳ ಜೊತೆಗೆ ಗುವಾಹಟಿ ಹಾಗೂ ಅಸ್ಸಾಂನ ಬೇರೆ ಜಿಲ್ಲೆಗಳ ಸುಮಾರು 58 ನೃತ್ಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಸುಮಾರು 4 ಗಂಟೆಗಳ ಕಾಲದ ನಟುವಾಂಗದ ಮೂಲ ಶಿಕ್ಷಣವನ್ನು ಕೆಲ ನೃತ್ಯಗುರುಗಳು ಮಂಜುನಾಥ್ ಅವರಿಂದ ಕಲಿತುಕೊಂಡರು.

Read More

ಕಾಸರಗೋಡು : ಎಂಭತ್ತರ ಸಂಭ್ರಮದಲ್ಲಿರುವ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಸಂಸ್ಥಾಪಕಾಧ್ಯಕ್ಷ, ಯಕ್ಷಗಾನ ಗುರುಕುಲದ ರೂವಾರಿ, ಕವಿ, ಅರ್ಥಧಾರಿ, ಕೀರಿಕ್ಕಾಡು ಮಾಸ್ತರ್ ಎಂದೇ ಪ್ರಸಿದ್ಧರಾಗಿದ್ದ ವಿಷ್ಣುಭಟ್ಟರ ಸಂಸ್ಮರಣೆಯೊಂದಿಗೆ ನೀಡಲಾಗುತ್ತಿರುವ 2024ರ ಸಾಲಿನ ಪ್ರತಿಷ್ಠಿತ ಕೀರಿಕ್ಕಾಡು ಪ್ರಶಸ್ತಿಗೆ ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟ ಆಯ್ಕೆಯಾಗಿದ್ದಾರೆ. ವಿದ್ವಾನ್ ಉಮಾಕಾಂತ ಭಟ್ಟರು ಖ್ಯಾತ ಯಕ್ಷಗಾನ ಅರ್ಥಧಾರಿಯಾಗಿ, ಪ್ರವಚನಕಾರರಾಗಿ, ಉಪನ್ಯಾಸಕರಾಗಿ ಹಾಗೂ ಕವಿಯಾಗಿ ನಾಡಿನ ಉದ್ದಗಲಗಳಲ್ಲೂ ಪ್ರಸಿದ್ಧರಾದವರು‌‌. ನ್ಯಾಯಶಾಸ್ತ್ರ ಪಂಡಿತರಾಗಿ, ಪ್ರಾಚಾರ್ಯರಾಗಿ ಮೇಲುಕೋಟೆಯ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸುದೀರ್ಘ ಕಾಲ ಸೇವೆಯನ್ನು ಸಲ್ಲಿಸಿದ ಉಮಾಕಾಂತ ಭಟ್ಟರು ಬಹುಮಾನ್ಯರು ಮತ್ತು ಬಹುಶ್ರುತ ವಿದ್ವಾಂಸರು‌. 31 ಆಗಸ್ಟ್ 2024ರಂದು ದಿನಪೂರ್ತಿ ನಡೆಯಲಿರುವ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಎಂಭತ್ತರ ಸಂಭ್ರಮದ ಕಲೋತ್ಸವದಲ್ಲಿ ಪ್ರೊ‌. ಶ್ರೀಪತಿ ಕಲ್ಲೂರಾಯ ಅವರ ಅಧ್ಯಕ್ಷತೆಯಲ್ಲಿ, ಸನ್ಮಾನ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಗೌರವ ಉಪಸ್ಥಿತಿಯೊಂದಿಗೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

Read More

ಸುಳ್ಯ : ವಾಹಿನಿ ಕಲಾ ಸಂಘ ದರ್ಬೆ ಪುತ್ತೂರು ಹಾಗೂ ವಾಹಿನಿ ಕಲಾ ಸಂಘದ ಸುಳ್ಯ ಘಟಕ ಇದರ ಸಹಯೋಗದೊಂದಿಗೆ ‘ವಾಹಿನಿ ಸಾಹಿತ್ಯ ಸೌರಭ 2024’ ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ ಮತ್ತು ಕವಿಗೋಷ್ಠಿ ಕಾರ್ಯಕ್ರಮಗಳನ್ನು ದಿನಾಂಕ 25 ಆಗಸ್ಟ್ 2024ರಂದು ಮುಂಜಾನೆ 9-30 ಗಂಟೆಗೆ ಸುಳ್ಯದ ಬ್ರಾಹ್ಮಣರ ಸಂಘ ಸಭಾಭವನದಲ್ಲಿ ಆಯೋಜಿಸಲಾಗಿದೆ. ಹಿರಿಯ ಸಾಹಿತಿಗಳಾದ ಪ್ರೊ. ವಿ.ಬಿ. ಅರ್ತಿಕಜೆ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸಾಹಿತಿಗಳಾದ ಶ್ರೀಮತಿ ಶಂಕರಿ ಶರ್ಮಾ ಪುತ್ತೂರು ಇವರು ದೀಪ ಪ್ರಜ್ವಲನೆ ಮಾಡಲಿರುವರು. ಮುಖ್ಯ ಶಿಕ್ಷಕಿ ಹಾಗೂ ಸಾಹಿತಿಗಳಾದ ಶ್ರೀಮತಿ ಸಂಧ್ಯಾ ಕುಮಾರ್ ಉಬರಡ್ಕ ಇವರ ‘ನೀಳವೇಣಿ ನೀ ನಾಟ್ಯವಾಡು’ ಎಂಬ ಕಥಾ ಸಂಕಲನ ಕೃತಿಯನ್ನು ಸಾಹಿತಿಗಳಾದ ಶ್ರೀ ಮಧುರ ಕಾನನ ಗಣಪತಿ ಭಟ್ಟ ಇವರು ಲೋಕಾರ್ಪಣೆಗೊಳಿಸಿ ಕೃತಿ ಪರಿಚಯ ಮಾಡಲಿರುವರು. ವಿವಿಧ ಕ್ಷೇತ್ರದ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ನಡೆಯಲಿರುವ ಕವಿಗೋಷ್ಠಿಗೆ ಯುವ ಕವಯತ್ರಿ ಶ್ರೀಮತಿ ಅನುರಾಧ ಶಿವಪ್ರಕಾಶ್…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು 17 ಆಗಸ್ಟ್2024ರಂದು ಕರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ವೇದಾಂತ ಹಾಗೂ ಯೋಗ ಪ್ರವೀಣರಾದ ಡಾ. ಶಶಾಂಕ ಹತ್ವಾರ್ ‘ಮುಂಡಕ ಉಪನಿಷತ್ತು’ ಇದರ ಕುರಿತು ಮಾತನಾಡಿ “ವೇದಜ್ಞಾನದ ಮೂಲ ಸಂಸ್ಕಾರವು ತಂದೆಯಿಂದ ಮಕ್ಕಳಿಗೆ ನಂತರ ಹೆಚ್ಚಿನ ಜ್ಞಾನವು ಗುರುಗಳಿಂದ ಶಿಷ್ಯರಿಗೆ ಪಾರಂಪರಿಕವಾಗಿ ದೊರೆಯುವ ವಿದ್ಯೆಯಾಗಿದೆ. ಮುಂಡಕವು ಜ್ಞಾನಕ್ಕೆ ಸಂಬಂಧಿಸಿದ ಉಪನಿಷತ್ತು ಆಗಿದ್ದು ಇದನ್ನು ಸಂಹಿತಾ ಉಪನಿಷತ್ತು ಎಂಬುದಾಗಿಯೂ ಕರೆಯಲಾಗುತ್ತಿದೆ. ಯಾವುದನ್ನು ತಿಳಿದುಕೊಂಡಾಗ ಎಲ್ಲವನ್ನೂ ತಿಳಿದುಕೊಂಡಂತಾಗುವುದೋ ಅದನ್ನೇ ಪರಾ ವಿದ್ಯೆ, ಬ್ರಹ್ಮಜ್ಞಾನ, ಮೋಕ್ಷ ಎನ್ನಲಾಗುತ್ತದೆ. ನಮ್ಮೊಳಗೆ ಪ್ರತಿಯೊಬ್ಬರಲ್ಲಿಯೂ ಭಗವಂತನ ವಿಶೇಷ ಚೇತನವಿದ್ದು ಸಾಧನೆಯಿಂದ ಆ ಚೈತನ್ಯ ಸ್ವರೂಪದ ಅರಿವಾಗುತ್ತದೆ. ಲೌಕಿಕದಲ್ಲಿದ್ದುಕೊಂಡೇ ಈ ಬ್ರಹ್ಮ ಜ್ಞಾನವನ್ನು ಹೊಂದಬಹುದಾಗಿದೆ. ವೇದಾಂತವು ಸ್ವಂತ ಅಧ್ಯಯನದಿಂದ ಕಲಿಯುವ ವಿದ್ಯೆಯಾಗಿದೆ. ಇದು…

Read More

ಉಡುಪಿ : ಛಾಯಾಚಿತ್ರ ಕಲಾವಿದ ಮುರಳೀಧರ್ ಭಟ್ ಕೊಡವೂರು ಇವರಿಗೆ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ “ವಿಪ್ರ ಛಾಯಾ ಸಾಧಕ ಪ್ರಶಸ್ತಿ”ಪ್ರದಾನ ಸಮಾರಂಭವು 18 ಆಗಸ್ಟ್ 2024 ರಂದು ವಿಪ್ರಶ್ರೀ ಕಲಾ ಭವನ, ಕೊಡವೂರು ಇಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶ್ರೀನಿವಾಸ ತೋಡತ್ತಿಲ್ಲಾಯ, ಸುಬ್ರಹ್ಮಣ್ಯ ಉಪಾಧ್ಯಾಯ, ವಿಪ್ರ ಸೇನಾನಿ ಶ್ರೀ ಗಣೇಶ್ ಅಡಿಗ, ದಿನಕರ ರಾವ್, ಸಂಘದ ಅಧ್ಯಕ್ಷ ಸುರೇಂದ್ರ ಉಪಾಧ್ಯಾಯ, ಗೌರವಾಧ್ಯಕ್ಷರುಗಳಾದ ಗೋವಿಂದ ಐತಾಳ್, ಗುರುರಾಜ್ ರಾವ್, ಕಾರ್ಯದರ್ಶಿ ಪ್ರವೀಣ್ ಬಲ್ಲಾಳ್ , ಕೋಶಾಧಿಕಾರಿ ಚಂದ್ರಶೇಖರ್ ರಾವ್ ಜೊತೆ ಕೋಶಾಧಿಕಾರಿ ಶ್ರೀಧರ ಶರ್ಮ ಹಾಗೂ ಕಲ್ಪನಾ ಭಟ್ ಉಪಸ್ಥಿತರಿದ್ದರು.

Read More

ಮಂಗಳೂರು : ಜನತಾ ಬಜಾರಿನಲ್ಲಿ ತುಳುಕೂಟದ ನೂತನ ಕಟ್ಟಡ ಕೂಟ ಚಾವಡಿಯ ಉದ್ಘಾಟನಾ ಸಮಾರಂಭವು ದಿನಾಂಕ 18 ಆಗಸ್ಟ್ 2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಹೇಮಂತ್ ಗರೋಡಿಯವರು ಮಾತನಾಡಿ  “ತುಳು ಭಾಷಾ ಬೆಳವಣಿಗೆಗೆ ನಾವು ಅಗತ್ಯ ಪ್ರಯತ್ನ ಪಡಬೇಕಾಗಿದೆ. ಅಂತೆಯೇ ಅದನ್ನು ಮುಂದಿನ ಪೀಳಿಗೆಗೆ ತಲುಪಿಸಲು ನಾವು ಮಕ್ಕಳಲ್ಲಿ ತುಳುಕಲಿಕಾ ಸ್ಪೂರ್ತಿಯನ್ನೂ ವೃದ್ಧಿಸಬೇಕಾಗಿದೆ. ಹಾಗಾಗಿ ತುಳುಕೂಟದ ಈ ನೂತನ ಕಟ್ಟಡ ಕೂಟ ಚಾವಡಿ ನಿರಂತರ ಕಲಿಕಾ ಕೇಂದ್ರವಾಗಲಿ” ಎಂದು ಹೇಳಿದರು. ಲೇಖಕಿ – ವಾಗ್ಮಿ, ನಿವೃತ್ತ ಶಿಕ್ಷಕಿ ಕೆ.ಎ. ರೋಹಿಣಿಯವರು “ಮಹಿಳೆಯರು ಕೂಡಾ ತುಳು ಸಾಂಸ್ಕೃತಿಯ ಬಗ್ಗೆ ಎಳೆಯರಿಗೆ ತಿಳಿ ಹೇಳುತ್ತಾ, ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರೆ ತುಳು ಕೂಟದ ಉದ್ದೇಶ ಸಾರ್ಥಕವಾಗುತ್ತದೆ.” ಎಂದು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಸಭಾಧ್ಯಕ್ಷತೆಯನ್ನು ತುಳು ಕೂಟದ ಅಧ್ಯಕ್ಷರಾದ ಮರೋಳಿ ಬಿ. ದಾಮೋದರ ನಿಸರ್ಗ ಇವರು ವಹಿಸಿದ್ದರು. ಚಂದ್ರಶೇಖರ ಸುವರ್ಣ, ನಾರಾಯಣ ಬಿ.ಡಿ., ಹೇಮಾ ನಿಸರ್ಗ, ಪಿ.…

Read More

ಬೆಂಗಳೂರಿನ ‘ಸಾಧನಾ ಡ್ಯಾನ್ಸ್ ಸೆಂಟರ್’ ನೃತ್ಯಶಾಲೆಯ ಹೆಸರಾಂತ ನೃತ್ಯಗುರು ಭಾವನಾ ವೆಂಕಟೇಶ್ವರ ಬದ್ಧತೆ ಮತ್ತು ಪ್ರಯೋಗಶೀಲತೆಗಳಿಗೆ ಹೆಸರಾದವರು. ಸುಮಾರು ಎರಡು ದಶಕಗಳಿಗೂ ಹೆಚ್ಚಿನ ನೃತ್ಯಾನುಭವವುಳ್ಳ ಇವರು ನೃತ್ಯಾಕಾಂಕ್ಷಿಗಳಿಗೆ ಉತ್ತಮ ವಿದ್ಯೆಯನ್ನು ಧಾರೆಯೆರೆಯುತ್ತ ಭರವಸೆಯ ಕಲಾವಿದೆಯರನ್ನು ರೂಪಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತ ಬಂದಿದ್ದಾರೆ. ಗುರು ಭಾವನಾ ಅವರ ನುರಿತ ಗರಡಿಯಲ್ಲಿ ರೂಹು ತಳೆದ ನೃತ್ಯಶಿಲ್ಪ ಧೃತಿ ರಾಮಚಂದ್ರ ಬಹು ಆಸಕ್ತಿಯಿಂದ ಭರತನಾಟ್ಯವನ್ನು ಕಳೆದ ಒಂದು ದಶಕದಿಂದ ಕಲಿಯುತ್ತಿದ್ದಾರೆ. ಶ್ರೀಮತಿ ಕೆ. ಆರ್. ಧನುಜಾ ಮತ್ತು ಎನ್. ರಾಮಚಂದ್ರ ಅವರ ಪುತ್ರಿಯಾದ ಧೃತಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಪರಿಶ್ರಮ ಹೊಂದಿದ್ದು, ಬಹುಮುಖ ಪ್ರತಿಭೆಯಾಗಿ ನಾಡಿನಾದ್ಯಂತ ತನ್ನ ನೃತ್ಯಪ್ರದರ್ಶನಗಳನ್ನು ನೀಡಿದ್ದಾಳೆ. ನೃತ್ಯದ ಹಲವು ಆಯಾಮಗಳನ್ನು ಅಭ್ಯಸಿಸುತ್ತಿರುವ ಧೃತಿ, ತನ್ನ ಪ್ರತಿಭಾ ಪ್ರದರ್ಶನಕ್ಕಾಗಿ 23 ಆಗಸ್ಟ್ 2024ರ ಶುಕ್ರವಾರದಂದು ಸಂಜೆ 5.30 ಕ್ಕೆ ಜಯನಗರದ ‘ವಿವೇಕ ಯುವಪಥ’ ಆಡಿಟೋರಿಯಂ ನಲ್ಲಿ ವಿಧ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಳ್ಳಲಿದ್ದಾರೆ. ಅವರ ಸೊಬಗಿನ ನೃತ್ಯ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ…

Read More

ಧಾರವಾಡ : ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾದವರು ಅನಂತ ಹರಿಹರ ಇವರು. ಅನೇಕ ಯುವ ಕಲಾವಿದರಿಗೆ ಸ್ಫೂರ್ತಿಯನ್ನು ತುಂಬಿದವರು, ವೇದಿಕೆಗಳನ್ನೊದಗಿಸಿದ ಯಶಸ್ವಿ ಸಂಘಟಕ, ಸಂಸ್ಕೃತಿಯ ರಾಯಭಾರಿಯಾಗಿ ಎಲ್ಲರ ಮನದಲ್ಲಿ ವಿಶೇಷ ಛಾಪನ್ನು ಮೂಡಿಸಿದವರು ‘ಧಾರವಾಡ ಸಂಗೀತ’ದ ಪರಿಚಾರಕ ಅನಂತ ಹರಿಹರರಾಗಿದ್ದಾರೆ. ಇವರಿಗೆ ಧಾರವಾಡದ ಯುವ-ಪ್ರಬುದ್ಧ ಕಲಾವಿದರು ಮೂರು ದಿನ ನಡೆಯುವ ಸಂಗೀತೋತ್ಸವದ ಮೂಲಕ ನಮನ ಸಲ್ಲಿಸಲಿದ್ದಾರೆ. ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಪ್ರೇರಿತ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳ ಜಂಟಿಯಾಗಿ ‘ಅನಂತ ಸ್ವರ ನಮನ’ ಮೂರು ದಿನಗಳ ಈ ಸಂಗೀತೋತ್ಸವವನ್ನು ಆಯೋಜಿಸಿವೆ. ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ದಿನಾಂಕ 23-08-2024ರಿಂದ 25-08-2024ರವರೆಗೆ ಪ್ರತಿದಿನ ಸಂಜೆ ಗಾಯನ-ವಾದನಗಳ ನಿನಾದ ರಿಂಗಣಿಸಲಿದೆ. ಈ ಸಂಗೀತೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ, ಬೆಂಗಳೂರಿನ ನಿತೀನ ಢವಳೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಹಾಗೂ ಕ್ಯಾನರಾ…

Read More

ಮಂಗಳೂರು : ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 13 ಆಗಸ್ಟ್ 2024ರಂದು ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ವಿನಮ್ರ ಇಡ್ಕಿದು ಹಾಡಿದ ಕಯ್ಯಾರ ಕಿಞ್ಞಣ್ಣ ರೈಯವರ ಬಹಳ ಪ್ರಸಿದ್ಧ ಗೀತೆ ‘ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ….’ ಎಂಬ ದೇಶಭಕ್ತಿ ಗೀತೆಯನ್ನು ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಇವರು ಬಿಡುಗಡೆಗೊಳಿಸಿದರು. ಅವರು ಮಾತನಾಡಿ “ಕಯ್ಯಾರ ಕಿಞ್ಞಣ್ಣ ರೈ ನಮ್ಮ ನಾಡಿನ ಹೆಮ್ಮೆಯ ಕವಿ. ನಾಡಿನ ಬಗ್ಗೆ ದೇಶದ ಬಗ್ಗೆ ಅಪಾರ ಕಾಳಜಿ ಇದ್ದ ಕವಿ. ಇಂತಹ ಕವಿಯ ದೇಶಭಕ್ತಿ ಗೀತೆಯ ರಚನೆಗಳನ್ನು ಮತ್ತೆ ಮತ್ತೆ ಹೊಸ ಹೊಸ ರೂಪಗಳಲ್ಲಿ ಹಾಡುತ್ತಾ ದೇಶಭಕ್ತಿಯ ಸಂಚಲನವನ್ನು ಉಂಟುಮಾಡುವುದು ಶ್ಲಾಘನೀಯ ಕೆಲಸ. ಇದನ್ನು ನಮ್ಮ ವಿದ್ಯಾರ್ಥಿ ವಿನಮ್ರ ಇಡ್ಕಿದು ಮಾಡಿದ್ದಾನೆ ಎನ್ನುವುದು ಅಭಿಮಾನದ ಸಂಗತಿ” ಎಂದು ನುಡಿದರು. ‘ಏರೊಂದುಂಡು ರಾವೊಂದುಂಡು….’ ತುಳು ದೇಶಭಕ್ತಿ ಗೀತೆಯನ್ನು ಕೆನರಾ ಪಿ.ಯು. ಕಾಲೇಜಿನ ಸಂಚಾಲಕರಾದ ಟಿ. ಗೋಪಾಲಕೃಷ್ಣ ಶೆಣೈಯವರು ಬಿಡುಗಡೆಗೊಳಿಸಿದರು. ಅವರು…

Read More