Author: roovari

ಚನ್ನರಾಯಪಟ್ಟಣ : ಕಲಾವಿದ ಉಮೇಶ್ ತೆಂಕನಹಳ್ಳಿ ಅವರ ಚೊಚ್ಚಲ ಕೃತಿ ‘ಕಪ್ಪು ಹಲ್ಲಿನ ಕಥೆಗಳು’ ಕಾದಂಬರಿ ಲೋಕಾರ್ಪಣೆಯು ದಿನಾಂಕ 12 ಆಗಸ್ಟ್ 2024ರಂದು ಚನ್ನರಾಯಪಟ್ಟಣ ರಾಘವೇಂದ್ರ ಸಾಮಿಲ್ ರಸ್ತೆಯ ರಂಗ ಲೋಕದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಜನಪದ ವಿದ್ವಾಂಸ ಡಾ. ಚಂದ್ರು ಕಾಳೇನಹಳ್ಳಿ “ಸಾಹಿತ್ಯ ರಚನೆ ನಮ್ಮನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ. ಪುಸ್ತಕ ರಚನೆಯಿಂದ ಹಣ ಸಿಗುತ್ತದೆ ಎಂಬುದು ಸುಳ್ಳು. ಇದು ಎಲ್ಲರ ವಿಷಯದಲ್ಲೂ ಒಂದೇ ರೀತಿ ಇರುವುದಿಲ್ಲ. ನಮ್ಮೊಳಗಿನ ತುಡಿತವನ್ನು ಹೊರಹಾಕಲು ಸಾಹಿತ್ಯ ರಚನೆ ನೆರವಾಗುತ್ತದೆ. ಆದ್ದರಿಂದ ನಮ್ಮ ವಿಕಾಸವೂ ಸಾಧ್ಯ, ಆ ಮೂಲಕ ಯಶಸ್ಸು ಗಳಿಸಬಹುದು. ಯಾವುದೇ ಕೃತಿಯು ಪ್ರತಿ ಬಾರಿ ಓದಿದಾಗಲೂ ಹೊಸದೊಂದು ಅನುಭವ ನೀಡಿದರೆ ಅದು ಸಾರ್ಥಕತೆಯಾದಂತೆ. ಉದಯೋನ್ಮುಖ ಲೇಖಕರಿಗೆ ಹಲವು ಸವಾಲುಗಳಿದ್ದು, ಅವುಗಳನ್ನು ಎದುರಿಸಬೇಕಾಗಿದೆ. ಸಾಹಿತ್ಯದ ಓದನ್ನು ಮರೆತಿರುವ ಜನ ಮೊಬೈಲ್ ನೋಡುವುದಕ್ಕೆ ತಮ್ಮ ಸಮಯ ವಿನಿಯೋಗ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ” ಎಂದು ಹೇಳಿದರು. ರಂಗಕರ್ಮಿ ಪ್ರಸಾದ್ ರಕ್ಷಿದಿ ಮಾತನಾಡಿ “ಅಧ್ಯಯನ ಮತ್ತು…

Read More

ಮುಂಬಯಿ : ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಪ್ರಸ್ತುತಿಯಲ್ಲಿ ತ್ರಿರಂಗ ಸಂಗಮ ಮುಂಬಯಿ ಸಂಚಾಲಕತ್ವದಲ್ಲಿ ಮುಂಬಯಿ ಮಹಾನಗರದಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮ ‘ಯಕ್ಷ ಜ್ಞಾನ ಯಾನ’ವನ್ನು ದಿನಾಂಕ 19 ಆಗಸ್ಟ್ 2024ರಿಂದ 22 ಆಗಸ್ಟ್ 2024ರವರೆಗೆ ಮುಂಬಯಿಯಲ್ಲಿ ಆಯೋಜಿಸಲಾಗಿದೆ. ದಿನಾಂಕ 19 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮುಂಬಯಿಯ ಥಾಣೆ (ಪಶ್ಚಿಮ), ಚೆಕ್ ನಾಕಾ ಬಳಿ, ಗೋಪಾಲಾಶ್ರಮದ ಹತ್ತಿರ, ಆರ್ ನೆಸ್ಟ್ ಬ್ಯಾಂಕ್ವೆಟ್ ಹೊಟೇಲಿನಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ವೀರಮಣಿ ಕಾಳಗ’, ದಿನಾಂಕ 20 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮುಂಬಯಿಯ ದತ್ತಾನಿ ಮಾಲ್ 3ನೇ ಮಹಡಿ, ಆರ್ನ ಸ್ವರ್ಣ ಬ್ಯಾಂಕ್ವೆಟ್ ಹಾಲ್ ಇಲ್ಲಿ ಕವಿ ಮೂಲ್ಕಿ ರಾಮಕೃಷ್ಣಯ್ಯ ವಿರಚಿತ ‘ಸುಧನ್ವ ಮೋಕ್ಷ’, ದಿನಾಂಕ 21 ಆಗಸ್ಟ್ 2024ರಂದು ಸಂಜೆ 3-30 ಗಂಟೆಗೆ ಮುಂಬಯಿ ಪಶ್ಚಿಮ, ಬೊರಿವಲಿ, ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಭೀಷ್ಮಾರ್ಜುನ’ ಮತ್ತು ದಿನಾಂಕ 22 ಆಗಸ್ಟ್ 2024ರಂದು ಸಂಜೆ…

Read More

ಮಂಗಳೂರು : ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ (ರಿ.) ಮತ್ತು ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದೊಂದಿಗೆ ದಿನಾಂಕ 15 ಆಗಸ್ಟ್ 2024ರಂದು ಶೇಣಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ‘ಶೇಣಿ ಪ್ರಶಸ್ತಿ-2024’ ಸ್ವೀಕರಿಸಿದ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ಮಾತನಾಡಿ “ಶೇಣಿ ಪ್ರಶಸ್ತಿ ನನ್ನ ಪಾಲಿಗೆ ದೇವರ ಪ್ರಸಾದಕ್ಕೆ ಸಮನಾದುದು. ಈ ಪ್ರಶಸ್ತಿಯ ನಿರೀಕ್ಷೆಯೇ ಇರಲಿಲ್ಲ. ಶೇಣಿ ಗೋಪಾಲಕೃಷ್ಣ ಭಟ್ ಅವರ ಜತೆ ಒಡನಾಟ ಹೊಂದಿ ಕಲಾಮಾತೆಯ ಸೇವೆ ಮಾಡಿದ್ದರಿಂದ ಈ ಪ್ರಶಸ್ತಿ ನನಗೆ ಒಲಿದಿರಬಹುದು. ಆಟ-ಕೂಟಗಳಲ್ಲಿ ಶೇಣಿಯವರು ಇದ್ದರೆ ಸಹಕಲಾವಿದರು ಬಹಳ ಎಚ್ಚರಿಕೆಯಿಂದ ಅರ್ಥ ಹೇಳಬೇಕಿತ್ತು. ಅವರು ಸಹಕಲಾವಿದರ ಜತೆ ಪಾತ್ರಕ್ಕೆ ಒದಗುವ ಬಗೆ ಅಸಾಮಾನ್ಯವಾಗಿತ್ತು. ಹರಿದಾಸರಾಗಿದ್ದ ಅವರಿಂದ ಯಕ್ಷಗಾನದ ಮಾತುಗಾರಿಕೆಯ ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ಲಭಿಸಿದೆ. ಅವರಂಥ ಕಲಾವಿದರು ಇನ್ನಷ್ಟು ಹುಟ್ಟಿಬರಬೇಕು” ಎಂದು ಶೇಣಿ ಜತೆಗಿನ ಒಡನಾಟವನ್ನು ಸ್ಮರಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ…

Read More

ಉಡುಪಿ : ಹಿರಿಯ ಸಾಂಸ್ಕೃತಿಕ ಸಂಘಟಕ ಸುಧಾಕರ ಆಚಾರ್ಯರ ಕಲಾರಾಧನೆಯ ಸಂಯೋಜನೆಯಲ್ಲಿ ಉಡುಪಿಯ ಹೋಟೆಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ದಿನಾಂಕ 15 ಆಗಸ್ಟ್ 2024ರಂದು 34ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಪ್ರಯುಕ್ತ ನಡೆದ ಯಕ್ಷಗಾನ ತಾಳಮದ್ದಳೆ ‘ವೈಕುಂಠ ದರ್ಶನ’ ಮತ್ತು ‘ನಾದ ವೈಕುಂಠ’ ಕಾರ್ಯಕ್ರಮದಲ್ಲಿ ಗಾನ ಚಕ್ರವರ್ತಿ ಎಂ. ದಿನೇಶ ಅಮ್ಮಣ್ಣಾಯ ಭಾಗವತರಿಗೆ ರಜತ ಗೌರವವನ್ನು ಸಮರ್ಪಸಲಾಯಿತು. ಸುಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ಅಮ್ಮಣ್ಣಾಯ ಭಾಗವತರ ಸಾರಥ್ಯದಲ್ಲಿ ಮಾನಿಷಾದ ಪ್ರಸಂಗದ ಆಯ್ದ ಭಾಗವಾಗಿ ‘ವೈಕುಂಠ ದರ್ಶನ’ ತಾಳಮದ್ದಳೆಯ ತರುವಾಯ ನಡೆದ ಅಮ್ಮಣಾಯ ಅಭಿನಂದನಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಶ್ರೀನಿವಾಸ ವೆಂಕಟರಮಣ ಆಸ್ರಣ್ಣ, ಡಾ. ಸಾಯಿ ಗಣೇಶ್, ಭವ್ಯಶ್ರೀ ಕಿದಿಯೂರು, ಸುಧಾಕರ ಆಚಾರ್ಯ, ಅಮಿತಾ ಆಚಾರ್ಯ, ಆಚಾರ್ಯ ಯಾಸ್ಕ, ಮೇಧಿನಿ ಆಚಾರ್ಯ, ಡಾ. ಅಭಿನ್ ದೇವದಾಸ್ ಶ್ರೀಯಾನ್, ಸುಧಾ ದಿನೇಶ್ ಅಮ್ಮಣ್ಣಾಯ, ಕನಿಷ್ಕ್ ಕಿಶನ್ ಹೆಗ್ಡೆ, ಸಮೃದ್ಧ್ ಸೂರ್ಯ ಪ್ರಕಾಶ್ ಉಪಸ್ಥಿತರಿದ್ದರು. ಪ್ರೊ. ಪವನ್ ಕಿರಣಕೆರೆ ನಾದ ನಿರ್ದೇಶನದಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಲಯದ…

Read More

ನೀರ್ಚಾಲು : ಶ್ರೀ ಶಂಕರ ಶರ್ಮ ಕುಳಮರ್ವ ಇವರು ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಮಹಾಕಾವ್ಯ ‘ಉತ್ತರಕಾಂಡ ಕಾವ್ಯಧಾರ’ ಗ್ರಂಥದ ಲೋಕಾರ್ಪಣಾ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಸಹಯೋಗದೊಂದಿಗೆ ದಿನಾಂಕ 18 ಆಗಸ್ಟ್ 2024ರ ಭಾನುವಾರ ಅಪರಾಹ್ನ 2-30 ಗಂಟೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಲಾ ಪ್ರಬಂಧಕರಾದ ಶ್ರೀ ಜಯದೇವ ಖಂಡಿಗೆ ಇವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಹಾಯಕ ಶಿಕ್ಷಕರಾದ ಶ್ರೀಮತಿ ಬಿ. ಶೈಲಜಾ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಮುಖ್ಯ ಅತಿಥಿಗಳಾಗಿದ್ದು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಇವರು ಕೃತಿ ಅವಲೋಕನ ಮಾಡಲಿರುವರು. ವಿಶ್ರಾಂತ…

Read More

ಬಂಟ್ವಾಳ : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ, ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ತಾಳಮದ್ದಳೆ ಕೂಟದ ಅಂಗವಾಗಿ ದಿನಾಂಕ 13 ಆಗಸ್ಟ್ 2024ನೇ ಮಂಗಳವಾರ ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸಮರ ಸೌಗಂಧಿಕಾ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ, ಚೆಂಡೆ ಮತ್ತು ಮದ್ದಳೆಗಳಲ್ಲಿ ಮುರಳೀಧರ ಆಚಾರ್ಯ ನೇರಂಕಿ, ಶ್ರೀ ವತ್ಸ ಸೋಮಯಾಜಿ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ (ಭೀಮ), ಭಾಸ್ಕರ ಬಾರ್ಯ (ಹನೂಮಂತ), ನಾ. ಕಾರಂತ ಪೆರಾಜೆ (ದ್ರೌಪದಿ), ಸುಬ್ಬಪ್ಪ ಕೈಕಂಬ (ಕುಬೇರ) ಸಹಕರಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾಗೇಂದ್ರ ಪೈ ಸ್ವಾಗತಿಸಿ, ವಂದಿಸಿದರು.

Read More

ಪೆರ್ಲ : ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯ ಇಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಿದ  ‘ರಾಷ್ಟ್ರೀಯ ಭಾವೈಕ್ಯತಾ ಕವಿ ಗೋಷ್ಠಿ’ ಕಾರ್ಯಕ್ರಮವು 15 ಆಗಸ್ಟ್ 2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲ್ ಮಾತನಾಡಿ “ಗ್ರಂಥಾಲಯಗಳು ಸಮೃದ್ಧ ಸಮಾಜದ ವಿದ್ಯಾದೇಗುಲಗಳು. ಸಮತಾಭಾವವನ್ನು ಕಟ್ಟಿಕೊಡುವುದರೊಂದಿಗೆ ನಮ್ಮನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ. ಈ ಮೂಲಕ ಶ್ರೇಷ್ಠ ಭಾರತವನ್ನು ಕಟ್ಟಲು ಸಾಧ್ಯವಿದೆ.” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಭಾಗವಹಿಸಿದ್ದರು. ಕವಿಗಳಾದ  ನವ್ಯಾಶ್ರೀ  ಸ್ವರ್ಗ ‘ನೈಜತೆ’,  ಆನಂದ ರೈ ಅಡ್ಕಸ್ಥಳ ‘ದೇಶ ಸೇವೆ’, ಹಿತೇಶ್ ಕುಮಾರ್ ನೀರ್ಚಾಲ್ ‘ರಾಷ್ಟ್ರೀಯತೆ’, ಸುಜಿತ್ ಕುಮಾರ್ ಬೇಕೂರು ‘ಐಕ್ಯತೆ’, ಸುಂದರ ಬಾರಡ್ಕ ‘ಅಂಬೇಡ್ಕರ್ – ಗಾಂಧೀಜಿ’ ಬಾಲಕೃಷ್ಣ ಬೇರಿಕೆ ‘ಆಕ್ರಮಣ’, ಪ್ರಿಯಾ ಬಾಯಾರ್ ‘ಗಾಂಧಿ ತಾತ’, ಕು. ಮನ್ವಿತಾ ‘ಪ್ರಕೃತಿ’,  ಸನ ಎಂ. ಪಿ.  ‘ಭಾರತ ಸೈನ್ಯ’,  ರಿಷಾ ಎಸ್. ‘ಉತ್ಸವ’, ರಾಮ ಪಟ್ಟಾಜೆ ‘ಪೊರಕೆ’ ಹಾಗೂ ವನಜಾಕ್ಷಿ…

Read More

ಮಂಗಳೂರು : ಮಂಗಳೂರಿನ ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ ಇದರ ತ್ರಿಂಶೋತ್ಸವದ ಅಂಗವಾಗಿ ನಡೆಯುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ -8’ ಅಂಗವಾಗಿ ನಾಟ್ಯಾರಾಧನಾ ಕಲಾ ಕೇಂದ್ರದ ಪ್ರೌಢ ಹಂತದ ನೃತ್ಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ “ಪದ್ಮ ಪಲ್ಲವ” ವೈವಿಧ್ಯಮಯ ಭರತನಾಟ್ಯ ಕಾರ್ಯಕ್ರಮವು 18 ಆಗಸ್ಟ್ 2024ರ ಭಾನುವಾರದಂದು ಸಂಜೆ ಘಂಟೆ 4.00 ರಿಂದ 7.30ರವರೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಭವನ ಪುರಭವನದಲ್ಲಿ ಜರುಗಲಿದೆ. ತ್ರಿಂಶೋತ್ಸವದ ಸಹ ಸಮಿತಿಗಳ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಮುಲ್ಕಿ ಸೀಮೆಯ ಅರಸರಾದ ಶ್ರೀ ಎಂ. ದುಗ್ಗಣ್ಣ ಸಾವಂತರು ಉದ್ಘಾಟಿಸಲಿದ್ದು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಯು.ಎ.ಇ ಇಲ್ಲಿನ ಯಕ್ಷಗಾನ ಅಭ್ಯಾಸ ಕೇಂದ್ರದ ಯಕ್ಷ ಗುರುಗಳಾದ ಶ್ರೀ ಡಿ. ಶೇಖರ ಶೆಟ್ಟಿಗಾರ್, ದುಬೈ ಬ್ರಾಹ್ಮಣ ಸಂಘದ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಪ್ರಸಾದ್ ರಾವ್, ಶಾರದಾ ನಾಟ್ಯಾಲಯ ಹೊಸಬೆಟ್ಟು ಇದರ ನಿರ್ದೇಶಕರಾಗಿರುವ ವಿದುಷಿ ಭಾರತೀ ಸುರೇಶ್, ಬಜ್ಪೆ ಅಂಚೆ ಕಚೇರಿಯ ಎಲ್.ಎಸ್.ಜಿ.ಪಿ.ಎ ಶ್ರೀಮತಿ ಶಶಿಕಲಾ ನಿತ್ಯಾನಂದ…

Read More

ಕಲ್ಲಡ್ಕ : ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಯೋಜಿತ ‘ವ್ಯಕ್ತಿತ್ವ ನಿರ್ಮಾಣದಲ್ಲಿ ಸಮಯಪ್ರಜ್ಞೆ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವು 14 ಆಗಸ್ಟ್ 2024ರಂದು ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆ ಮೈಸೂರು ಇದರ ಮುಖ್ಯಸ್ಥರಾದ  ಸ್ವಾಮಿ ಡಾ. ಮಹಾಮೇಧಾನಂದಜೀ ಮಾತನಾಡಿ “ತ್ಯಾಗ ಮತ್ತು ಸೇವೆ ಇವೆರಡು ಉತ್ತಮ ವ್ಯಕ್ತಿತ್ವದ ಎರಡು ಮುಖಗಳು. ಸತ್ಯ ಪರಿಪಾಲನೆ ಹಾಗೂ ಪರೋಪಕಾರ ಇತ್ಯಾದಿ ಮೌಲ್ಯಗಳ ಅಳವಡಿಕೆಯ ಜೊತೆಗೆ ನಿಸ್ವಾರ್ಥಿಯಾಗಿ ಸಮಯ ನಿರ್ವಹಣೆ ಮಾಡುವುದು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಹಾದಿ.” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ  ಡಾ. ಪ್ರಭಾಕರ ಭಟ್ ಭಾರತೀಯ ಸಂಸ್ಕೃತಿಯಲ್ಲಿ ವ್ಯಕ್ತಿತ್ವದ ಮಹತ್ವವನ್ನು ಕೆಲವು ದೃಷ್ಟಾಂತಗಳ ಮೂಲಕ ತಿಳಿಸಿದರು. ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರು ಹೆಗಡೆ,…

Read More

ಮಂಗಳೂರು : ನಮ್ಮ ಕೇದಿಗೆ ಪ್ರತಿಷ್ಠಾನ ಮಂಗಳೂರು ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಇವರ ಸಹಯೋಗದಲ್ಲಿ ಪ್ರಸ್ತಕ ಸಾಲಿನ ‘ಲಕ್ಷ್ಮೀ ಭಾಸ್ಕರ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 17 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ವಿಕ್ರಂ ದತ್ತಾ (ರಾಷ್ಟ್ರ ಸೇವೆ), ಸುಧಾಕರ ರಾವ್ ಪೇಜಾವರ (ಸಮಾಜ ಸೇವೆ), ಸೂರ್ಯ ಆಚಾರ್ ವಿಟ್ಲ (ಚಿತ್ರಕಲೆ), ದಯಾ ಪ್ರಸಾದ್ ಚೀಮುಳ್ಳು (ಕೃಷಿ) ಹಾಗೂ ಎಲ್ಲೂರು ರಾಮಚಂದ್ರ ಭಟ್ (ಯಕ್ಷಗಾನ), ರಾಮಶೇಷ ಶೆಟ್ಟಿ (ಹಿರಿಯ ಸೇನಾನಿ) ಹಾಗೂ ಶ್ರೀ ಮೂಕಾಂಬಿಕಾ ಚೆಂಡೆ ತಂಡದ ಸಹೋದರಾದ ಚಂದ್ರಹಾಸ್ ಕೊಂಚಾಡಿ, ದೇವಿಪ್ರಸಾದ್ ಕೊಂಚಾಡಿ, ಸುನೀಲ್ ಕೊಂಚಾಡಿ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕ್ಯಾ. ಗಣೇಶ್ ಕಾರ್ಣಿಕ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಕೇದಿಗೆ ಪ್ರತಿಷ್ಠಾನ ಮಂಗಳೂರಿನ ಅಧ್ಯಕ್ಷರಾದ ಡಾ. ಕೇದಿಗೆ ಅರವಿಂದ ರಾವ್ ತಿಳಿಸಿದ್ದಾರೆ.

Read More