Author: roovari

ಸಂಗೀತವು ಒಂದು ಅರ್ಥವಾಗುವ ಭಾಷೆ. ಇದರ ಆಳವನ್ನು ತಿಳಿಯಲು ಒಂದು ಜನ್ಮ ಸಾಲದು. ತಿಳಿಯುವುದು ಅಷ್ಟು ಸುಲಭವೂ ಅಲ್ಲ. ಮನಸ್ಸಿನ ನೋವನ್ನು ದೂರಮಾಡಿ ಮನಸ್ಸಿಗೆ ಮುದ ನೀಡುವ ಶಕ್ತಿ ಇದಕ್ಕಿದೆ. ಜಾತಿ, ಮತ, ಭೇದಭಾವ ಇಲ್ಲದೆ ಅನಾದಿಕಾಲದಿಂದಲೂ ಬತ್ತದೇ ಹರಿದ ಒಂದು ಮಹಾನದಿ ಸಂಗೀತ. ಈ ಮಹಾನದಿಯಲ್ಲಿ ಈಜಿ ಸಾಧನೆ ಮಾಡಿದವರು ಅನೇಕರು. ಇಂಥವರಲ್ಲಿ ನೀಲಮ್ಮ ಕಡಾಂಬಿಯವರು ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮಹಿಳಾ ಸಂಗೀತಗಾರರಲ್ಲಿ ಒಬ್ಬರು. ಸಂಗೀತ ಪರಂಪರೆಯಿಂದ ಬಂದ ನೀಲಮ್ಮ ಕಡಾಂಬಿಯವರ ತಂದೆ ವಿದ್ವಾನ್ ವೆಂಕಟಾಚಾರ್ಯರು ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ವೀಣಾ ವಿದ್ವಾಂಸರಾಗಿದ್ದರು. ತಾಯಿಯೂ ಉತ್ತಮ ವೀಣಾ ವಾದಕಿ, ಸಹೋದರ ಎಂ. ವಿ. ಶ್ರೀನಿವಾಸ್ ಅಯ್ಯಂಗಾರ್ ಅವರೂ ಸಂಗೀತ ವಿದ್ವಾಂಸರು. ನೀಲಮ್ಮನವರಿಗೆ ತಂದೆ ಮತ್ತು ಅಣ್ಣನಿಂದ ಸಂಗೀತ ಹಾಗೂ ವೀಣಾವಾದನದ ಆರಂಭದ ಪಾಠದ ಅಭ್ಯಾಸವಾಯಿತು. ಮುಂದೆ ವಿದ್ವಾನ್ ಲಕ್ಷ್ಮೀನಾರಾಯಣಪ್ಪನವರಲ್ಲಿ ಮತ್ತು ವೀಣಾ ವೆಂಕಟಗಿರಿಯಪ್ಪನವರಲ್ಲಿ ವೀಣಾವಾದನವನ್ನೂ ಹಾಗೂ ಹಾಡುಗಾರಿಕೆಯನ್ನು ಮೈಸೂರು ವಾಸುದೇವಾಚಾರ್ಯರು, ಮೈಸೂರು ಟಿ. ಚೌಡಯ್ಯನವರು,…

Read More

ಉಡುಪಿ : ಯಕ್ಷಗಾನ ಕೇಂದ್ರ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಉಜ್ವಲ್ ಡೆವಲಪರ್ಸ್ ಉಡುಪಿ ಇವರ ಸಹಯೋಗದಲ್ಲಿ ಕೊಡಮಾಡುವ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ 2025ನೇ ಸಾಲಿನ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ವೇಷಧಾರಿ ಶ್ರೀಯುತ ವಿದ್ಯಾಧರ ರಾವ್ ಜಲವಳ್ಳಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ರೂಪಾಯಿ 10,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ದಿನಾಂಕ 19 ಜುಲೈ 2025ರಂದು ಸಂಜೆ ಘಂಟೆ 3.00ಕ್ಕೆ ಉಡುಪಿ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಬಡಗುತಿಟ್ಟಿನ ಕಲಾವಿದರ ಕೂಡುವಿಕೆಯಿಂದ ‘ಕೃಷ್ಣಾರ್ಜುನ ಕಾಳಗ ಹಾಗೂ ರಾಜಾಭದ್ರಸೇನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜಲವಳ್ಳಿ ವಿದ್ಯಾಧರ ರಾವ್ : ಯಕ್ಷರಂಗದ ಡೈನಾಮಿಕ್ ಸ್ಟಾರ್ ಎಂದೇ ಹೆಸರಾದ ಅಭಿನಯ ಚಕ್ರವರ್ತಿ ಬಿರುದಾಂಕಿತ…

Read More

ಕೋಟ : ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ತರಬೇತಿ ಕೇಂದ್ರಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪ್ರಾಯೋಜಿತ ಇಂಟರ್ನೇಷನಲ್ ಎಫೇರ್ಸ್ ವಿಭಾಗದ ಮಣಿಪಾಲ್ ಇಂಟರ್‌ನ್ಯಾಷನಲ್ ಸಮ್ಮರ್ ಸ್ಕೂಲ್ 2025ರ ಆಸ್ಟ್ರೇಲಿಯ, ದುಬೈ, ದೆಹಲಿ, ಉತ್ತರ್ ಪ್ರದೇಶ್, ಬಿಹಾರ್, ಕೇರಳ ಮತ್ತು ಕರ್ನಾಟಕ ಮೂಲದ ಸುಮಾರು 25 ಮಂದಿ ಶಿಬಿರಾರ್ಥಿಗಳು ದಿನಾಂಕ 10 ಜುಲೈ 2025ರಂದು ಭೇಟಿಕೊಟ್ಟರು. ಹತ್ತು ದಿವಸಗಳ ಶಿಬಿರದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳ ಪರಿಚಯ ಕಾರ್ಯಕ್ರಮದ ಅಂಗವಾಗಿ ನಾಡಿನ ಅನೇಕ ಕಡೆ ಸಂದರ್ಶಿಸಿದ ಅವರು ಮಕ್ಕಳ ಮೇಳದ ಯಕ್ಷಗಾನ ತರಬೇತಿ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸುವುದರೊಂದಿಗೆ ನಿರ್ದೇಶಕರೊಡನೆ ಮತ್ತು ಬಾಲ ಕಲಾವಿದರೊಂದಿಗೆ ಸಂವಾದ ನಡೆಸಿದರು. ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀಧರ ಹಂದೆ ಸ್ವತಃ ‘ಚಿತ್ರಾಂಗದೆ’ ಪಾತ್ರವನ್ನು ಅಭಿನಯಿಸಿ, ವಿದ್ಯಾರ್ಥಿಗಳಿಗೆ ಯಕ್ಷಗಾನ ಪರಂಪರೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತಾ “ಮುಂದಿನ ತಲೆಮಾರಿಗೆ ಸಾಂಪ್ರದಾಯಿಕ ಯಕ್ಷಗಾನವನ್ನು ದಾಟಿಸುವುದು ಮಕ್ಕಳ ಮೇಳದ ಸ್ಥಾಪನೆಯ…

Read More

ಬೆಂಗಳೂರು : 2025ನೇ ಸಾಲಿನ ‘ಚಿದಾನಂದ ಪ್ರಶಸ್ತಿ’ಯ ಗೌರವಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ, ಹಿರಿಯ ಸಂಶೋಧಕ ಡಾ.ಬಿ. ಎ. ವಿವೇಕ್ ರೈ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯು ವಿದ್ವಾಂಸ ಡಾ. ಎಂ. ಚಿದಾನಂದ ಮೂರ್ತಿ ಅವರ ಹೆಸರಿನಲ್ಲಿ 32 ವರ್ಷಗಳಿಂದ ಪ್ರತಿವರ್ಷ ಸಂಶೋಧಕರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನಲ್ಲಿ ನಡೆಯಲಿದೆ.

Read More

ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ, ಮಂಗಳೂರು ಇದರ 30 ಸಂವತ್ಸರಗಳ ಕಿಂಕಿಣಿ ತ್ರಿಂಶತ್ ಸಂಭ್ರಮದ ಈ ಸಂದರ್ಭದಲ್ಲಿ 18ನೇ ವರ್ಷದ ‘ಗುರು ಪೂರ್ಣಿಮ’ ಗುರುನಮನ – ಮಾತಾ ಪಿತರ ಚರಣ ಪೂಜನ ಕಾರ್ಯಕ್ರಮವು ದಿನಾಂಕ 13 ಜುಲೈ 2025ರ ಭಾನುವಾರದಂದು ಬೆಳಿಗ್ಗೆ ಘಂಟೆ 10.00 ಕ್ಕೆ ಸರಿಯಾಗಿ ಸುರತ್ಕಲ್ ಗಣೇಶಪುರದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಧರ್ಮೇಂದ್ರ ಗಣೇಶಪುರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ವೇ. ಮೂ. ಶ್ರೀ ಸದಾನಂದ ಅಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ‘ಯೋಗ ಚೇತನಾ’ ಮಂಗಳೂರು ಇದರ ನಿರ್ದೇಶಕಿಯಾದ ಶ್ರೀಮತಿ ಚೇತನಾ ಬಡೇಕರ್ ಉಪನ್ಯಾಸ ನೀಡಲಿದ್ದು, ಸಮಾರಂಭದಲ್ಲಿ ಮಂಗಳೂರಿನ ಬಿಜೈಯ ‘ಸನಾತನ ನಾಟ್ಯಾಲಯ’ ಇಲ್ಲಿನ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖ‌ರ್ ಇವರಿಗೆ ‘ಗುರು ನಮನ’ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭರತಾಂಜಲಿ (ರಿ.) ಕೊಟ್ಟಾರ ಸಂಸ್ಥೆಯ ಮ್ಯಾನೇಜಿಂಗ್…

Read More

ಸುಳ್ಯ : ಜಲಶ್ರೀ ಪ್ರತಿಷ್ಠಾನ ಕಡ್ಲಾರು ಹಾಗೂ ಎನ್.ಎ. ಟೈಮ್ಸ್ ಯೂಟ್ಯೂಬ್ ಚಾನಲ್ ಇದರ ಸಂಯುಕ್ತ ಆಶ್ರಯದಲ್ಲಿ ‘ಕವನ ವಾಚನ ವಿಡಿಯೋ ಸ್ಪರ್ಧೆ 2025’ಯನ್ನು ಹಮ್ಮಿಕೊಳ್ಳಲಾಗಿದೆ. ನಿಯಮಗಳು : * ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ : 16 – 45 ವರ್ಷದೊಳಗಿನ ಮತ್ತು 45 ವರ್ಷ ಮೇಲ್ಪಟ್ಟ. * ಕನ್ನಡದಲ್ಲಿನ ಸ್ವರಚಿತ ಕವನವನ್ನು ವಾಚನ ಮಾಡುತ್ತಿರುವಂತಹ ವಿಡಿಯೋವನ್ನು ಮಾಡಿ ಕಳುಹಿಸಿಕೊಡಬೇಕು. * ಯಾವುದೇ ವ್ಯಕ್ತಿ, ಜಾತಿ, ಧರ್ಮ, ಸಮಾಜ, ಸಂಸ್ಥೆ, ಸರ್ಕಾರಗಳಿಗೆ ಸಂಬಂಧಪಟ್ಟಂತೆ ದ್ವೇಷಪೂರಿತ ಕವನಗಳಿಗೆ ಆಸ್ಪದವಿಲ್ಲ. * ತಾವು ವಾಚಿಸುವಂತಹ ಕವನವು ಕನಿಷ್ಠ 20 ಸಾಲುಗಳಿಗಿಂತ ಹೆಚ್ಚಿರಲಿ. * ವಿಡಿಯೋ ರೆಕಾರ್ಡಿಂಗ್ ಮಾಡುವಾಗ ಯಾವುದೇ ಸಂಗೀತವನ್ನು ಬಳಸುವಂತಿಲ್ಲ. * ಕವನ ವಾಚನವು ಸ್ಪಷ್ಟತೆಯಿಂದ ಕೂಡಿರಲಿ. * ತಾವು ವಾಚಿಸುವಂತಹ ಕವನವು ಸಾಮಾಜಿಕ ಜಾಲತಾಣ, ಪತ್ರಿಕೆ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಪ್ರಕಟವಾಗಿರಬಾರದು. * ವಿಡಿಯೋ ಮಾಡುವಾಗ ಲ್ಯಾಂಡ್ ಸ್ಕೇಪ್ ನಲ್ಲಿ ಇರಬೇಕು. (ಅಂದರೆ ಮೊಬೈಲ್ ಅನ್ನು ಅಡ್ಡವಾಗಿ ಹಿಡಿದುಕೊಂಡು ವಿಡಿಯೋ…

Read More

ಕೊಪ್ಪಳ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚುಟುಕು ಸಂಗಮ ಕವಿಗೋಷ್ಠಿ ಹಾಗೂ ಜಾನಪದ ಸಾಹಿತ್ಯದಲ್ಲಿ ಹಾಸ್ಯ ಎನ್ನುವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 06 ಜುಲೈ 2025ರ ಭಾನುವಾರದಂದು ಕೊಪ್ಪಳದ ಗಂಜ್ ಸರ್ಕಲ್ ಹತ್ತಿರವಿರುವ ವಿ. ಹೆಚ್. ಎಂ. ಲಾ ಅಸೋಶಿಯಟ್ಸ್ ಮತ್ತು ಬಾಳಪ್ಪ ಎಸ್ ವೀರಾಪುರ ವಕೀಲರ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯ ಸಿ. ವಿ. ಜಡಿಯವರ್ ಮಾತನಾಡಿ “ಎಲ್ಲಾ ಬಗೆಯ ಸಾಹಿತ್ಯ ಪ್ರಕಾರಗಳಿಗಿಂತ ಮೂಲ ಜಾನಪದ ಸಾಹಿತ್ಯಕ್ಕೆ ಶ್ರೇಷ್ಠತೆ ಇದೆ. ಜಾನಪದ ಸಾಹಿತ್ಯವು ಪ್ರತಿಯೊಬ್ಬರಿಗೂ ತಾಯಿ ಬೇರು ಇದ್ದಂತೆ, ಅದನ್ನು ಪೋಷಿಸಿ ಬೆಳೆಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ, ಇಂದಿನ ಆಧುನಿಕ ಯುಗದಲ್ಲಿ ಮೂಲ ಜಾನಪದ ಕಲಾವಿದರನ್ನು ಕಣೆಗಣಿಸಿ ಜಾನಪದಕ್ಕೆ ತದ್ವಿರುದ್ಧ (ನಕಲಿ )ಜಾನಪದ ಕಲಾವಿದರಿಗೇ ಹೆಚ್ಚಿನ ಪ್ರಮಾಣದಲ್ಲಿ ಮನ್ನಣೆ ದೊರೆಯುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಆಧುನಿಕತೆ ಹೆಸರಿನಲ್ಲಿ ಜಾನಪದ ನಶಿಸುತ್ತಿದೆ, ಇಂದು ಜಾತಿ, ಮತ, ಪಂಥಗಳಿಂದ ಸೌಹಾದ೯ತೆ ಮಾಯವಾಗುತ್ತಿದೆ. ಜನರ…

Read More

ಮಂಗಳೂರು : ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕ ಶ್ರೀನಾಥ್ ಬಸ್ರೂರು ಇವರು ಬರೆದ ‘ಒಮ್ಮೊಮ್ಮೆ ಅನಿಸಿದ್ದು’ ಅಂಕಣ ಬರಹಗಳ ಪುಸ್ತಕವನ್ನು ದಿನಾಂಕ 10 ಜುಲೈ 2025ರಂದು ಮಂಗಳೂರಿನ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಲಾಯಿತು. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪುಟ್ಟಣ ಕುಲಾಲ್ ಪ್ರತಿಸ್ಥಾನದ ಅಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರು, “ಹಲವು ವಿಚಾರಗಳಿಗೆ ತನ್ನೊಳಗಿನ ಚಿಂತನೆಯನ್ನು ಸೇರಿಸಿ ಓದುಗರಿಗೆ ಉಣಬಡಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಲೇಖಕರು ಮಾಡಿದ್ದಾರೆ. ಇದರಲ್ಲಿ ಕಿವಿಮಾತು, ಸರಿ- ತಪ್ಪು, ನ್ಯಾಯ ಅನ್ಯಾಯಗಳ ಬಗ್ಗೆ ತುಲನಾತ್ಮಕ ಚಿಂತನೆ ಇದೆ. ಯುವ ಜನತೆಗೆ ಒಂದಷ್ಟು ಪ್ರೇರಣ ಸಾಹಿತ್ಯ ನೀಡುವಲ್ಲಿ ಇದು ಯಶಸ್ವಿಯಾಗಲಿ” ಎಂದು ತಿಳಿಸಿದರು. ಲೇಖಕ ಶ್ರೀನಾಥ್ ಬಸ್ರೂರು ಮಾತನಾಡಿ, “ಮುಂಜಾವಿನ ನಡಿಗೆ ಸಮಯದಲ್ಲಿ ಒಮ್ಮೊಮ್ಮೆ ಅನಿಸಿದ, ಹಲವೊಮ್ಮೆ ನೆನಪಾದ, ಕೆಲವು ವಿಷಯಗಳನ್ನು ಬರೆದು ಪುಸ್ತಕ ರೂಪದಲ್ಲಿ ಓದುಗರ ಮುಂದೆ ಇಟ್ಟಿದ್ದೇನೆ. ಇದು ಮೊದಲ ಪ್ರಯತ್ನವಾಗಿದ್ದು ಓದುಗರ ಪ್ರೀತಿಯ ಹಾರೈಕೆಯ…

Read More

ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ‘ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನ -3’ ಕನ್ನಡದ ನಡಿಗೆ ಶಾಲೆಯ ಕಡೆಗೆ ಕಾರ್ಯಕ್ರಮವನ್ನು ದಿನಾಂಕ 12 ಜುಲೈ 2025ರಂದು ಬೆಳಿಗ್ಗೆ 10-00 ಗಂಟೆಗೆ ಕಾಸರಗೋಡಿನ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು ಆಡಳಿತ ಸೇವಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಬೆಜಪ್ಪೆ ಇವರ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕರಾದ ಡಾ. ವಾಮನ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್ ಇವರು ಉದ್ಘಾಟನೆ ಮಾಡಲಿದ್ದಾರೆ. ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಮತ್ತು ಸಾಹಿತಿ ವಿರಾಜ್ ಅಡೂರು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

Read More

ಹಂಗಾರಕಟ್ಟೆ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ಸಂಸ್ಕೃತಿ ಸಂಭ್ರಮದಲ್ಲಿ ‘ಯಕ್ಷ ವರ್ಷ’ ಕಾರ್ಯಕ್ರಮದಡಿ ಕಲಾಪೀಠ ಕೋಟ ಸಂಯೋಜನೆಯಲ್ಲಿ ಧ್ವಜಪುರದ ನಾಗಪ್ಪಯ್ಯ ವಿರಚಿತ “ನಳ ದಮಯಂತಿ” ಯಕ್ಷಗಾನ ಪ್ರದರ್ಶನವು ಶ್ರೀ ಕೆ.ನರಸಿಂಹ ತುಂಗ ಇವರ ನಿರ್ದೇಶನದಲ್ಲಿ ದಿನಾಂಕ 15 ಜುಲೈ 2025ರ ಮಂಗಳವಾರ ಸಂಜೆ ಘಂಟೆ 6:00ಕ್ಕೆ ನಡೆಯಲಿದೆ. ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸರ್ವಶ್ರೀಗಳಾದ ಉದಯಕುಮಾರ ಹೊಸಾಳ, ಗಣೇಶ ಶೆಣೈ, ವಾಗ್ವಿಲಾಸ ಭಟ್ಟ, ರಾಘವೇಂದ್ರ ಐತಾಳ, ಅಭಿನವ ತುಂಗ, ಮಹಾಲಕ್ಷ್ಮೀ ಸೋಮಯಾಜಿ, ಅನುಷಾ ಉರಾಳ, ಅನಂತ ನಾವುಡ, ಅನುಪ ಉರಾಳ, ಪುಣ್ಯವತಿ ನಾವುಡ, ಸಾತ್ವಿಕ, ಧನುಶ್ರೀ, ಇಂಚರ, ಲಿಖಿತಾ, ನೂತನ, ಈಶಾನಿ, ತನಿಷಾ, ಮನೋಮಯ್ ಭಾಗವಹಿಸಲಿದ್ದಾರೆ.

Read More