Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ವತಿಯಿಂದ ಶ್ರೀ ಎಡನೀರು ಕ್ಷೇತ್ರದ ಭಾರತೀ ಕಲಾ ಸದನದ ಸಭಾ ಮಂದಿರದಲ್ಲಿ ದಿನಾಂಕ 15 ಮಾರ್ಚ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ ಸಾಹಿತಿ ಪ್ರೊ. ತಾಳ್ತಜೆ ವಸಂತ ಕುಮಾರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿಯವರು ಅಭಿನಂದನ ಭಾಷಣವನ್ನು ಮಾಡುವರು. ಡಾ. ರಮಾನಂದ ಬನಾರಿ ಮತ್ತು ಡಾ. ವಸಂತ ಕುಮಾರ ಪೆರ್ಲ ಇವರ ಸಂಪಾದಿತ ಕೃತಿಗಳಾದ ‘ಕನ್ನಡಿಯಲ್ಲಿ ಕನ್ನಡಿಗ ಸಂಪುಟ 1 ಮತ್ತು 2’ ಲೋಕಾರ್ಪಣೆಗೊಳ್ಳಲಿದ್ದು, ಕತೆಗಾರರು, ವಿಮರ್ಶಕರಾದ ಡಾ. ಸುಭಾಷ್ ಪಟ್ಟಾಜೆ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಆಗಮ ಪೆರ್ಲ ಇವರಿಂದ ಕರ್ನಾಟಕ ಶಾಸ್ತ್ರೀಯ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪಿಟೀಲಿನಲ್ಲಿ ಗೌತಮ ಭಟ್ ಪಿ.ಜಿ.…
ಬೆಂಗಳೂರು : ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೃಷ್ಣಾಪುರ ದೊಡ್ಡಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇದರ ವತಿಯಿಂದ ‘ರೂಪಾಂತರ’ ತಂಡದವರಿಂದ ಸಂತ ಕವಿ ಕನಕದಾಸರ ಅನನ್ಯ ಕಾವ್ಯ ಆಧಾರಿತ ‘ರಾಮಧಾನ್ಯ’ ನಾಟಕ ಪ್ರದರ್ಶನವನ್ನು ದಿನಾಂಕ 11 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಹಂಪಿ ನಗರ ಪಶ್ಚಿಮ ವಲಯ ನಗರ ಕೇಂದ್ರ ಗ್ರಂಥಾಲಯದ ಗ್ರಂಥಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಡಾ. ರಾಮಕೃಷ್ಣ ಮರಾಠೆ ಇವರು ರಚನೆ ಮಾಡಿದ್ದು, ದೇಸಿ ಮೋಹನ್ ಇವರು ಸಂಗೀತ ನೀಡಿದ್ದು, ಕೆ.ಎಸ್.ಡಿ.ಎಲ್. ಚಂದ್ರು ಇವರು ನಿರ್ದೇಶನ ಮಾಡಿರುತ್ತಾರೆ. ರೂಪಾಂತರ…….. ಕಳೆದ ಮೂರುವರೆ ದಶಕಗಳಿಂದ ನಿರಂತರವಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ರಂಗ ತಂಡ. ‘ರೂಪಾಂತರ’ ವಿಶೇಷವಾಗಿ ಕನ್ನಡ ಸಾಹಿತ್ಯ ಲೋಕದ ಮಹತ್ವದ ಲೇಖಕರ ಕಥೆ, ಕಾವ್ಯ, ಆಧಾರಿತ ಕಾದಂಬರಿಗಳ ರಂಗ ಪ್ರಯೋಗಗಳನ್ನು ಈ ನಾಡಿನಾದ್ಯಂತ ಮತ್ತು ಹೊರ ರಾಜ್ಯಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ ಪ್ರೇಕ್ಷಕರ ಮತ್ತು ವಿಮರ್ಷಕರ ಮೆಚ್ಚುಗೆ ಗಳಿಸಿದೆ. ಲಂಕೇಶರ ರೊಟ್ಟಿ, ಮುಸ್ಸಂಜೆ ಕಥಾಪ್ರಸಂಗ, ತೇಜಸ್ವಿಯವರ ಕಿರಗೂರಿನ…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಆಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸಹಯೋಗದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸುರತ್ಕಲ್ ಮೇಲುಸೇತುವೆಯ ತಳಭಾಗದಲ್ಲಿ ಎಂ.ಸಿ.ಎಫ್. – ನಾಗರಿಕ ಸಲಹಾ ಸಮಿತಿ ಸಾಂಸ್ಕತಿಕ ವೇದಿಕೆಯಲ್ಲಿ ನಡೆಯುತ್ತಿರುವ ಸಂಗೀತ ಕಛೇರಿ ಸರಣಿ ಕಾರ್ಯಕ್ರಮದ ಏಳನೇ ವರ್ಷದ ಸಂಭ್ರಮ ‘ಉದಯರಾಗ 60’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 09 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು “ಯುವ ಜನತೆಯಲ್ಲಿ ಪುರಾಣ ಪಜ್ಞೆ ಬೆಳೆಸುವಲ್ಲಿ ಭಕ್ತಿ ಸಂಗೀತ ಪೂರಕವಾಗಿದೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತದಲ್ಲಿದ್ದು ಜನತೆ ಜಾಗೃತರಾಗಬೇಕಾಗಿದೆ” ಎಂದು ನುಡಿದರು. ಹಿರಿಯ ಗಮಕಿ ಎಚ್. ಯಜ್ಞೇಶ ಆಚಾರ್ಯ ಹೊಸಬೆಟ್ಟು ಇವರು ಭಕ್ತಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಹ ಗಾಯನದಲ್ಲಿ ಪವಿತ್ರಾ ಮಯ್ಯ ಸುರತ್ಕಲ್, ವಯಲಿನ್ ನಲ್ಲಿ ಪ್ರಸನ್ನ ಕುಮಾರ್ ಸುರತ್ಕಲ್, ಹಾರ್ಮೋನಿಯಂ…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮುರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪಿ.ಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆ ಮೂರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 07 ಮಾರ್ಚ್ 2025ರಂದು ಮೂರ್ನಾಡಿನ ಪಿ.ಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಿದ ಮೈಸೂರು ಯುವರಾಜ ಕಾಲೇಜಿನ ಉಪನ್ಯಾಸಕಿ ಎಚ್. ನಿವೇದಿತಾ ಇವರು ಮಾತನಾಡಿ “ಕೇವಲ 27 ವರ್ಷ ಬದುಕಿದ ಕೊಡಗಿನ ಗೌರಮ್ಮ ಸಾಹಿತ್ಯ ವಲಯದಲ್ಲಿ ಮೂಡಿಸಿದ ಸಂಚಲನ ಅತ್ಯಾದ್ಭುತವಾದದ್ದು ಮತ್ತು ಅನನ್ಯವಾದದ್ದು. ತಮ್ಮ ಅತಿ ಸಣ್ಣ ಜೀವಿತಾವಧಿಯಲ್ಲಿ ಅವರು 21 ಕಥೆಗಳನ್ನು ಬರೆದರು. ಅದರಲ್ಲಿ ಮಹಿಳಾ ಸ್ವಾತಂತ್ರ್ಯ, ವಿಧವಾ ವಿವಾಹ, ಬಾಲ್ಯ ವಿವಾಹ, ವಿಧವಾ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಅವರು ನೇರವಾಗಿ ಸ್ವಾತಂತ್ರ ಹೋರಾಟಕ್ಕೆ ಇಳಿಯದಿದ್ದರೂ ಗಾಂಧೀಜಿಯವರು 1934ರಲ್ಲಿ ಹರಿಜನೋದ್ಧಾರಕ್ಕಾಗಿ ನಿಧಿ ಸಂಗ್ರಹಿಸಲು ಕರ್ನಾಟಕದಲ್ಲಿ…
ರವಿ ಮಡೋಡಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್, ಪ್ರವೃತ್ತಿಯಿಂದ ಯಕ್ಷಗಾನ ಮತ್ತು ಸಾಹಿತ್ಯ ಪ್ರೇಮಿ. ಯಕ್ಷಗಾನ ನೃತ್ಯ ಹಾಗೂ ಅರ್ಥಗಾರಿಕೆಯಲ್ಲಿ ಪರಿಣತಿ ಹೊಂದಿರುವ ಅವರು, ಯಕ್ಷಗಾನದ ಅಕಾಡಮಿಕ್ ಕಾರ್ಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಅಲ್ಲದೆ, ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭವನ್ನು ತರಲು ನಿರಂತರ ಶ್ರಮಿಸುತ್ತಿದ್ದಾರೆ. ರವಿ ಮಡೋಡಿ ಅವರು ಪರಮೇಶ್ವರಯ್ಯ ಮತ್ತು ಲಕ್ಷ್ಮೀದೇವಿ ದಂಪತಿಯ ಪುತ್ರರಾಗಿದ್ದು, ನವೆಂಬರ್ 5ರಂದು ಜನಿಸಿದರು. ಅವರು Master of Computer Application (MCA), Post Graduate Diploma in Computer Science (PGDCS) ಮತ್ತು DCS ಪದವಿಗಳನ್ನು ಪಡೆದಿದ್ದಾರೆ. ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರಿಗೆ ಶ್ರೀ ಬೇಗಾರ್ ಶಿವಕುಮಾರ್ ಮತ್ತು ಶ್ರೀ ಕೃಷ್ಣಮೂರ್ತಿ ತುಂಗ ಯಕ್ಷಗಾನ ಗುರುಗಳಾಗಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು : ನಮ್ಮ ಪರಿಸರವೇ ಯಕ್ಷಗಾನದ ಆಡುಂಬೊಲವಾಗಿತ್ತು. ವರ್ಷಕ್ಕೆ ಅನೇಕ ಮೆಳಗಳು ಇಲ್ಲಿ ಬಂದು ಪ್ರದರ್ಶನ ನೀಡುತ್ತಾ ಇರುತ್ತಿದ್ದವು. ಬಾಲ್ಯದಲ್ಲಿ,…
ಬಿಳುಮನೆ ರಾಮದಾಸ್ ಒಬ್ಬ ಹಿರಿಯ ಕಥೆ ಕಾದಂಬರಿಕಾರ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿಳುಮನೆಯಲ್ಲಿ 1941 ಮಾರ್ಚ್ 9ರಂದು ಜನಿಸಿದವರು. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ಮೌಲ್ಯಯುತ ಕಾದಂಬರಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ‘ಅನಾವರಣ’ ಎಂಬುದು ನಗರ ಜೀವನದ ಬಗ್ಗೆ ರಾಮದಾಸ್ ಬಿಳುಮನೆಯವರು ಬರೆದ ಚೊಚ್ಚಲ ಕಾದಂಬರಿ. ‘ರೋಜಾ ಪುಸ್ತಕ’ ಇದು ಕಾದಂಬರಿ ಪ್ರಕಾರಕ್ಕೆ ಅವರು ನೀಡಿದ ಅನನ್ಯ ಕೊಡುಗೆ. ಇವರ ಪ್ರಮುಖ ಕಾದಂಬರಿಗಳು ‘ಮರಳಿನ ಮನೆ’, ‘ಕುಂಜ’, ‘ಕರಾವಳಿಯ ಹುಡುಗಿ’, ‘ಲಡಾಯಿ’, ‘ವ್ಯಾಮೋಹ’, ‘ನಂಬಿ ಕೆಟ್ಟವರಿಲ್ಲವೋ’, ‘ಮಲೆಯ ಸಂತ’ ಇತ್ಯಾದಿ. ‘ಪ್ರೇಮ ಪ್ರೇಮ ಪ್ರೇಮ’ ಚಲನಚಿತ್ರ ಇವರ ರಚನೆಯ ‘ತಲೆಮಾರು’ ಕಾದಂಬರಿಯಾಧಾರಿತವಾಗಿದೆ. ‘ಹುಲಿ ಮಾಡಿಸಿದ ಮದುವೆ’ ಇದೊಂದು ಪ್ರಬಂಧ ಸಂಕಲನ. ‘ಹತ್ತಿರ ಬಂದು ದೂರಸರಿದವರು’ ಇವರ ರಚನೆಯ ನಾಟಕ ಕೃತಿ. ಅನುಕರಣೆ ಮಾಡುವ ಕಲೆ ಸಿದ್ಧಿಸಿಕೊಂಡವರು ರಾಮದಾಸ್ ಬೀಳುಮನೆಯವರು. ಎರಡು ಪಾತ್ರಗಳ ಸಂವಾದವನ್ನು ದ್ವಿಪಾತ್ರ ಅಭಿನಯದ ಮೂಲಕ ಸುಂದರವಾಗಿ ನಿರೂಪಿಸುವ ಅನುಕರಣ ಪಟುವಾಗಿದ್ದರು. ಅವರ ಸಾಹಿತ್ಯದಲ್ಲಿ ಬದಲಾವಣೆಗೆ ಒಗ್ಗಿಕೊಂಡ ಮಲೆನಾಡಿನ ಬದುಕಿನ…
ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ವತಿಯಿಂದ ಪೊಂಪೈ ಕಾಲೇಜು ಐಕಳ, ರಾಗ್ರಂಗ್ ಇವೆಂಟ್ಸ್ (ರಿ.) ಮೂಲ್ಕಿ, ಕಿನ್ನಿಗೋಳಿಯ ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಇವುಗಳ ಸಂಯುಕ್ತ ಸಹಯೋಗದಲ್ಲಿ ‘ಜ್ಞಾನಯಾನ’ ಗೀತ ಗಾಯನ ತರಬೇತಿ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ದಿನಾಂಕ 11 ಮಾರ್ಚ್ 2025ರಂದು ಬೆಳಿಗ್ಗೆ 9-30 ಗಂಟೆಗೆ ಪೊಂಪೈ ಕಾಲೇಜಿನ ಪ್ರಾವಿಡೆನ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪೊಂಪೈ ಕಾಲೇಜು ಸಂಚಾಲಕ ವಂದನೀಯ ಒಸ್ವಾಲ್ಡ್ ಮೊಂತೇರೊ ಉದ್ಘಾಟಿಸಲಿದ್ದು, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ ಇವರು ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಕಾಲೇಜು ಪ್ರಾಂಶುಪಾಲ ಡಾ. ಪುರುಷೋತ್ತಮ್ ಕೆ.ವಿ. ಭಾಗವಹಿಸಲಿದ್ದಾರೆ. ಒಕ್ಕೂಟದ ಮಾಜಿ ಅಧ್ಯಕ್ಷ ಗಾಯಕ ರವೀಂದ್ರ ಪ್ರಭು ನೇತೃತ್ವದಲ್ಲಿ ಜರಗುವ ಈ ಕಾರ್ಯಾಗಾರದಲ್ಲಿ…
ಉಡುಪಿ : ಉಡುಪಿಯ ಪಾಡಿಗಾರಿನ ಲಕ್ಷ್ಮೀನರಸಿಂಹ ಉಪಾಧ್ಯ ದಿನಾಂಕ 08 ಮಾರ್ಚ್ 2025ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರಿಗೆ 75 ವರ್ಷ ವಯಸ್ಸಾಗಿತ್ತು. ಉಡುಪಿಯ ವಿದ್ಯಾದಾಯಿನಿ ಯಕ್ಷಗಾನ ಮಂಡಳಿಯಲ್ಲಿ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈದಿದ್ದ ಇವರು, ಖ್ಯಾತ ಕಲಾವಿದ ಪಡ್ರೆ ಚಂದು ಇವರ ಶಿಷ್ಯರಾಗಿದ್ದರು. ಮಲ್ಪೆ ಶಂಕರನಾರಾಯಣ ಮತ್ತು ಕೊಳ್ಯೂರು ರಾಮಚಂದ್ರ ರಾಯರೊಂದಿಗೆ ಸಹವೇಷಧಾರಿಯಾಗಿ ಅನೇಕ ಪಾತ್ರ ನಿರ್ವಹಿಸಿದ್ದರು. ಕುತ್ಯಾಳ ಮೇಳದ ಪ್ರಧಾನ ಸ್ತ್ರೀವೇಷಧಾರಿಯಾಗಿ ವೇಷ ಮಾಡಿದ್ದ ಇವರು, ಬಳಿಕ ವಿವಿಧ ಮೇಳಗಳಲ್ಲಿ ,ಸಂಘಗಳಲ್ಲಿ ಅತಿಥಿ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದರು. ಕೆಮ್ತೂರು ದೊಡ್ಡಣ್ಣ ಶೆಟ್ಟಿ ನಾಟಕ ಮಂಡಳಿಯಲ್ಲಿಯೂ ಸ್ತ್ರೀವೇಷಧಾರಿಯಾಗಿ ಪಾತ್ರ ನಿರ್ವಹಿಸಿದ್ದ ಇವರು ಉಡುಪಿಯ ಗೀತಾಂಜಲಿ ಥಿಯೇಟರ್ ನಲ್ಲಿ ಸಹಾಯಕ ಪ್ರಬಂಧಕರಾಗಿ ಕಾರ್ಯನಿರ್ವಹಿಸಿದ್ದರು. ವೈದಿಕರ ಸಹಾಯಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಶ್ರೀಯುತರು ಪತ್ನಿ, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಮುಳ್ಳೇರಿಯ: ಮುಳ್ಳೇರಿಯಾದ ‘ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಗ್ರಂಥಾಲಯ’ ಆಯೋಜಿಸಿದ ‘ಕಯ್ಯಾರ ಕೃತಿ ಸಂಚಾರ’ ಎಂಬ ಕಾರ್ಯಕ್ರಮ ದಿನಾಂಕ 07 ಮಾರ್ಚ್ 2025 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕತೆಗಾರ ಹಾಗೂ ವಿಮರ್ಶಕರಾದ ಡಾ. ಸುಭಾಷ್ ಪಟ್ಟಾಜೆ ಮಾತನಾಡಿ “ಮುಳ್ಳೇರಿಯ ಕಯ್ಯಾರರ ಕಾವ್ಯದಲ್ಲಿ ವ್ಯಷ್ಟಿ ಪ್ರಜ್ಞೆಯು ಸಮಷ್ಟಿ ಪ್ರಜ್ಞೆಯಾಗಿ ವಿಸ್ತರಿಸಿಕೊಳ್ಳುತ್ತದೆ. ಬಡವ ಬಲ್ಲಿದರೆಲ್ಲರೂ ಒಂದೇ ಎಂಬ ಸಮಾನತೆಯ ತತ್ವವನ್ನು ಸಾರಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿದ ಅವರು ತಮ್ಮ ಕವಿತೆಗಳಲ್ಲಿ ದೇಶಭಕ್ತಿಯನ್ನು ಮುಖ್ಯವಾಗಿಟ್ಟುಕೊಂಡಂತೆ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಗಂಭೀರ ಪರಿಸ್ಥಿತಿಯ ಬಗ್ಗೆ ಕಯ್ಯಾರರು ಹೇಳಿದ ವಿಚಾರಗಳನ್ನು ದೇಶದ ಸಮಸ್ಯೆಗಳ ಹಿನ್ನೆಯಲ್ಲೂ ಪರಿಭಾವಿಸಬಹುದು. ಅವರ ಕವಿತೆಗಳು ಅನುಭವಜನ್ಯವಾಗಿದ್ದು ಪರಿಣಾಮಕಾರಿಯಾಗಿವೆ. ಪ್ರಾದೇಶಿಕ ಸಾಂಸ್ಕೃತಿಕ ಚಿತ್ರಣವನ್ನು ಕೊಡುವುದರೊಂದಿಗೆ ಸಾರ್ವಕಾಲಿಕ ಮೌಲ್ಯಗಳ ಕಡೆಗೆ ಬೆಳಕು ಬೀರುತ್ತದೆ” ಎಂದು ಅಭಿಪ್ರಾಯಪಟ್ಟರು. ಬರಹಗಾರ ರಾಘವನ್ ಬೆಳ್ಳಿಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ರಾಧಕೃಷ್ಣ ಉಳಿಯತ್ತಡ್ಕ ಉದ್ಘಾಟಿಸಿದರು. ಲೇಖಕರಾದ ಸುಂದರ ಬಾರಡ್ಕ,…
ಧಾರವಾಡ : 2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾಪ್ರಶಸ್ತಿಗೆ ಶ್ರೀ ಪ್ರಕಾಶ್ ಪುಟ್ಟಪ್ಪ ಇವರ ‘ಗಾಂಧಿ ಜೋಡಿನ ಮಳಿಗೆ’ ಮತ್ತು ಶ್ರೀ ಮಂಜುನಾಥ್ ಕುಣಿಗಲ್ ಇವರ ‘ದೂರ ದೇಶದ ದೇವರು’ ಕಥಾಸಂಕಲನಗಳ ಹಸ್ತಪ್ರತಿಗಳು ಆಯ್ಕೆಯಾಗಿವೆ. ಈ ಪ್ರಶಸ್ತಿಯು ರೂಪಾಯಿ 20,000 ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ. ಈ ಬಾರಿ 50ಕ್ಕೂ ಅಧಿಕ ಹಸ್ತಪ್ರತಿಗಳು ಬಂದಿದ್ದವು. ಕೊನೆಯ ಹಂತದಲ್ಲಿ ಒಟ್ಟು ಆರು ಹಸ್ತಪ್ರತಿಗಳಿದ್ದವು. ಖ್ಯಾತ ವಿಮರ್ಶಕಿ ಡಾ. ಮಹೇಶ್ವರಿ ಯು. (ಕಾಸರಗೋಡು) ಮತ್ತು ಖ್ಯಾತ ಕಥೆಗಾರ್ತಿ ಶ್ರೀಮತಿ ಮಿತ್ರಾ ವೆಂಕಟರಾಜ್ (ಮುಂಬಯಿ) ಅವರು ತೀರ್ಪುಗಾರರಾಗಿದ್ದರು. ಎಪ್ರಿಲ್ ತಿಂಗಳ ಮೂರನೆಯ ವಾರ ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಕಾಶ್ ಪುಟ್ಟಪ್ಪ ತಮ್ಮ ಚೊಚ್ಚಲ ಕಥಾಸಂಕಲನ ಮತ್ತು ಮಂಜುನಾಥ್ ಕುಣಿಗಲ್ ತಮ್ಮ ಎರಡನೆಯ ಕಥಾಸಂಕಲನಕ್ಕೆ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪಡೆದಿದ್ದಾರೆ.