Subscribe to Updates
Get the latest creative news from FooBar about art, design and business.
Author: roovari
ಬಂಟ್ವಾಳ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ ಸಮಿತಿಯು ಸೀನಿಯರ್ ಚೇಂಬರ್ ಸಹಯೋಗದಲ್ಲಿ ಆಯೋಜಿಸಿದ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮಿಲನದ ಸಮಾರೋಪ ಸಮಾರಂಭ ಹಾಗೂ ಕವಿಗೋಷ್ಠಿಯು 04 ಆಗಸ್ಟ್ 2024ರಂದು ಬಂಟ್ವಾಳ ಜೋಡುಮಾರ್ಗದ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಮಂಗಳೂರಿನ ಮಂಗಳಾ ಆಸ್ಪತ್ರೆ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯ ಹಾಗೂ ಬರಹಗಾರರಾದ ಡಾ. ಸುರೇಶ ನೆಗಳಗುಳಿ ಮಾತನಾಡಿ “ಪರರಿಂದ ಬರೆಯಿಸಿ ಹೆಸರಿಗಾಗಿ ಸಾಹಿತಿಯಾದರೆ ರಸಹೀನ ಕಬ್ಬಿನಂತೆ.” ಎಂದರು. ಚುಟುಕು ಸಾಹಿತ್ಯದ ಸ್ವಾರಸ್ಯದ ಬಗ್ಗೆ ತಿಳಿಸಿಕೊಟ್ಟ ಇವರು ಒಂದೇ ವಿಷಯವನ್ನು ಹೇಗೆ ಬಗೆ ಬಗೆಯ ಸಾಹಿತ್ಯ ಪ್ರಕಾರದಲ್ಲಿ ಬರೆಯಬಹುದು ಎನ್ನುತ್ತಾ ಚುಟುಕು, ರುಬಾಯಿ, ಮುಕ್ತಕ, ತನಗ, ಹಾಯ್ಕು, ಟಂಕಾ ಹಾಗೂ ಹನಿಗವನವಾಗಿ ಒಂದೇ ವಸ್ತುವನ್ನು ವಾಚಿಸಿ ತೋರಿಸಿದರು. ಚುಟುಕು ವಾಚಿಸಿದ ಸುಮಾರು ನಲುವತ್ತಕ್ಕೂ ಅಧಿಕ ವಾಚಕರನ್ನು ಹೆಸರಿಸಿ ಶ್ಲಾಘಿಸಿದರು. ಪರಿಷತ್ತಿನ ದ. ಕ. ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ವಿ. ಬಿ.…
ಉಡುಪಿ : ಹಿರಿಯ ಪತ್ರಕರ್ತ, ದೂರದರ್ಶನ ಉಡುಪಿ ಜಿಲ್ಲಾ ವರದಿಗಾರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ದಿನಾಂಕ 5 ಆಗಸ್ಟ್ 2024ರಂದು ರಾತ್ರಿ ಹೃದಯಾಘಾತದಿಂದ ಕಲ್ಯಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, 2014-17ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು, ಪ್ರಸ್ತುತ ಸಂಘದ ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಉಪಾಧ್ಯಕ್ಷ, ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿರುವ ಇವರು, ಎಸ್.ಕೆ.ಪಿ.ಎ. ಉಡುಪಿ ವಲಯದ ಮಾಜಿ ಅಧ್ಯಕ್ಷರಾಗಿಯೂ, ಉಡುಪಿ ಶ್ರೀಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಸ್ಥಾಪಕ ವಿಶ್ವಸ್ಥರಾಗಿ, ಮಲ್ಪೆ ನಾರಾಯಣ ಗುರು ಸೇವಾದಳ ಅಧ್ಯಕ್ಷರಾಗಿ, ಕಲ್ಮಾಡಿ ಶ್ರೀಬ್ರಹ್ಮಬೈದರ್ಕಳ ಗರಡಿ ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮಂಗಳೂರು : ಭ್ರಾಮರಿ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇದರ ವತಿಯಿಂದ ಏಳನೇ ವರ್ಷದ ‘ಭ್ರಾಮರಿ ಯಕ್ಷ ವೈಭವ 2024’, ಯಕ್ಷ ಛಾಯಾಚಿತ್ರ ಪ್ರದರ್ಶನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ದಿನಾಂಕ 03 ಆಗಸ್ಟ್ 2024ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದವು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಇವರು “ಯಕ್ಷಗಾನದಲ್ಲಿ ಗಾನ ವೈಭವ, ನಾಟ್ಯ ವೈಭವ ಪ್ರಧಾನವಾಗದೇ ಪರಂಪರೆ ಉಳಿಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ಮೇಳದ ಕಲಾವಿದರು ಕನಿಷ್ಠ ವರ್ಷಕ್ಕೊಮ್ಮೆಯಾದರೂ ಸಮಾವೇಶ ನಡೆಸಿ, ಯಕ್ಷಗಾನದ ಪರಂಪರೆ ಉಳಿಸುವ ನಿಟ್ಟಿನಲ್ಲಿ ವಿಚಾರ ವಿಮರ್ಶೆ ನಡೆಸಬೇಕು. ಯಕ್ಷಗಾನ ಕಲಾವಿದರು ಕೇವಲ ಕಲಾವಿದರಲ್ಲ, ಅವರು ಯಕ್ಷಗಾನದ ವಿದ್ವಾಂಸರೂ ಆಗಿದ್ದಾರೆ. ಆಯಾ ವರ್ಷದ ತಿರುಗಾಟದ ಬಗ್ಗೆ ವಿಮರ್ಶೆ ನಡೆದಾಗ ಎಲ್ಲಿ ತಪ್ಪಿದ್ದೇವೆ ಎಂಬುದು ತಿಳಿಯುತ್ತದೆ. ಕಲಾವಿದರು ಪ್ರದರ್ಶನಕ್ಕೆ ಮುನ್ನ ಪರಸ್ಪರ ಸಮಾಲೋಚನೆ ನಡೆಸಿ, ಪರಂಪರೆ ಗಟ್ಟಿಗೊಳಿಸಬೇಕು. ಸಮಾಜಕ್ಕೆ ನೈತಿಕತೆಯನ್ನು ಕಟ್ಟಿಕೊಡುವ ಏಣಿಯಾದ ಯಕ್ಷಗಾನದ ಸಂಕೀರ್ಣ ಪರಂಪರೆ…
ಬೆಂಗಳೂರು : ನಿರ್ಮಾಣ್ ಯಕ್ಷ ಬಳಗ (ರಿ.) ಅರ್ಪಿಸುವ ತಿಂಗಳ ತಿರುಳು ಸರಣಿಯ 19ನೇ ತಾಳಮದ್ದಳೆಯು ಯಕ್ಷಗಾನ ಕಲಾ ಪೋಷಕ ದಿ. ಲಕ್ಷ್ಮೀನಾರಾಯಣಯ್ಯ ಹಲ್ಕೋಡು ಇವರ ಸ್ಮರಣಾರ್ಥ ನಡೆಯಲಿದ್ದು, ಕವಿ ಶ್ರೀಧರ ಡಿ.ಎಸ್. ವಿರಚಿತ ‘ಜನಮೇಜಯ’ ಪ್ರಸಂಗದ ತಾಳಮದ್ದಳೆಯು ದಿನಾಂಕ 10 ಆಗಸ್ಟ್ 2024ರಂದು ಬೆಂಗಳೂರಿನ ಅನ್ನಪೂರ್ಣ ನಿಲಯದಲ್ಲಿ ಪ್ರಸ್ತುತಗೊಳ್ಳಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಬಾಲಕೃಷ್ಣ ಹಿಳ್ಳೋಡಿ ಮತ್ತು ಶ್ರೀ ಗಜಾನನ ಹೆಗಡೆ ಕಲ್ಲಬ್ಬೆ, ಮದ್ದಳೆಯಲ್ಲಿ ಶ್ರೀ ನರಸಿಂಹ ಹೆಗಡೆ ಮೂರೂರು ಮತ್ತು ಶ್ರೀ ಚಿನ್ಮಯ್ ಅಂಬಾರಗೋಡ್ಲು ಹಾಗೂ ಚೆಂಡೆಯಲ್ಲಿ ಶ್ರೀ ಆಗ್ನೇಯ ಭಟ್ ಕ್ಯಾಸನೂರು ಮತ್ತು ಕುಮಾರಿ ಭಾವನ ಹಗೆಡೆ ಮಳಗೀಮನೆ, ಮುಮ್ಮೇಳದಲ್ಲಿ ಶ್ರೀ ರವಿ ಐತುಮನೆ, ಶ್ರೀ ಆದಿತ್ಯ ಸಿ. ಹಲ್ಕೋಡ್, ಶ್ರೀ ಚಂದನ್ ಕಲಾಹಂಸ, ಶ್ರೀ ಮಿತ್ರ ಮಧ್ಯಸ್ಥ ಸಾಗರ ಮತ್ತು ಶ್ರೀ ಅಕ್ಷಯ್ ಹೆಗಡೆ ಹಾರೆಕೊಪ್ಪ ಇವರುಗಳು ಸಹಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಧರ ಡಿ.ಎಸ್. ಇವರು ಸಂಸ್ಮರಣಾ ನುಡಿಗಳನ್ನಾಡಲಿದ್ದಾರೆ.
ಧರ್ಮಸ್ಥಳ : ಗಿನ್ನೆಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ (ರಿ.) ಆಡಳಿತಕ್ಕೊಳಪಟ್ಟ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ 30ನೇ ವರ್ಷದ ‘ಜ್ಞಾನ ದರ್ಶಿನಿ’ ಮತ್ತು ‘ಜ್ಞಾನ ವರ್ಷಿಣಿ’ 2024ನೇ ಸಾಲಿನ ನೈತಿಕ ಮೌಲ್ಯಾಧರಿತ ಪುಸ್ತಕಗಳ ಲೋಕಾರ್ಪಣೆ ಹಾಗೂ 21ನೇ ವರ್ಷದ ರಾಜ್ಯಮಟ್ಟದ ಅಂಚೆ ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭವು ದಿನಾಂಕ 10 ಆಗಸ್ಟ್ 2024ರಂದು ಬೆಳಗ್ಗೆ 10.30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಜರುಗಲಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಹಾವೇರಿ ಶ್ರೀ ಹುಕ್ಕೇರಿಮಠದ ಪರಮ ಪೂಜ್ಯ ಶ್ರೀಮನ್ ನಿರಂಜನ ಪ್ರಣವಸ್ವರೂಪಿ ಸದಾಶಿವ ಮಹಾಸ್ವಾಮೀಜಿ ಕೃತಿಗಳನ್ನು ಬಿಡುಗಡೆಗೊಳಿಸುವರು. ಕನ್ನಡದ ಚಲನಚಿತ್ರ ಸಂಗೀತ ನಿರ್ದೇಶಕ, ಗಾಯಕ ಶ್ರೀ ಅರ್ಜುನ್ ಜನ್ಯ ಅಂಚೆ ಕುಂಚ ವಿಜೇತರನ್ನು ಪುರಸ್ಕರಿಸುವರು. ಶಾಂತಿವನದ ಟ್ರಸ್ಟಿ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್,…
ಉಡುಪಿ : ಖ್ಯಾತ ಭರತನಾಟ್ಯ ಕಲಾವಿದೆಯರಾದ ವಿದುಷಿ ಚೈತ್ರ ಆಚಾರ್ಯ ಮತ್ತು ವಿದುಷಿ ಕು. ವಿದ್ಮಹಿ ಇವರು ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಉಡುಪಿ : ಶ್ರೀ ಚಂದ್ರಶೇಖರ ಆಚಾರ್ಯ ಮತ್ತು ರೂಪಶ್ರೀ ದಂಪತಿಗಳ ಪುತ್ರಿಯಾದ ಚೈತ್ರ ಆಚಾರ್ಯ ಕಳೆದ ಸುಮಾರು ಹದಿನೈದು ವರುಷಗಳಿಂದ ನೃತ್ಯನಿಕೇತನ ಕೊಡವೂರಿನ ಗುರುಗಳಾದ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಶ್ರೀಮತಿ ಮಾನಸಿ ಸುಧೀರ್ ಇವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. 2019ನೇ ಸಾಲಿನಲ್ಲಿ ನಡೆದ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು. ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ತಾನು ಕಲಿತ ನೃತ್ಯ ಸಂಸ್ಥೆಯೊಂದಿಗೆ ಸುಮಾರು 500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ದೇಶದ ಬೇರೆ ಬೇರೆ ಭಾಗಗಳಲ್ಲಿ ನೀಡಿದ್ದು, ಸಂಸ್ಥೆಯ “ನಾರಸಿಂಹ”, “ಶ್ರೀನಿವಾಸ ಕಲ್ಯಾಣ”, “ನಂದಗೋಕುಲ”, “ಶಬರಿ” ಮುಂತಾದ ನೃತ್ಯನಾಟಕಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ತನ್ನ ಸಹೋದರಿ ಚೈತನ್ಯಳೊಂದಿಗೆ ಹಲವಾರು ಕಡೆ ಯುಗಳ ನೃತ್ಯಪ್ರದರ್ಶನ ನೀಡಿರುವುದರೊಂದಿಗೆ ಪ್ರತಿಭಾ ಕಾರಂಜಿ,ಯುವ ಜನೋತ್ಸವ ಮುಂತಾದ ಸ್ಪರ್ಧೆಗಳಲ್ಲಿ…
ಬೆಂಗಳೂರು : ರಂಗ ಸಂಗ, ಭಾರತೀಯ ವಿದ್ಯಾ ಭವನ, ಕಲಾ ಗಂಗೋತ್ರಿ (ರಿ.) ಮತ್ತು ನವ್ಯಚೇತನ ಟ್ರಸ್ಟ್ ಇವರುಗಳ ಸಹೋಯೋಗದಲ್ಲಿ ‘ಡಾ. ಎಚ್.ಕೆ.ಆರ್. 100ರ ನೆನಪು’ ಕಾರ್ಯಕ್ರಮವನ್ನು ದಿನಾಂಕ 8 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಡಾ. ಎಚ್.ಕೆ. ರಂಗನಾಥ ಜನ್ಮ ಶತಮಾನೋತ್ಸವ ವರ್ಷ 2024-25 100ನೆಯ ವರ್ಷದ ಹುಟ್ಟುಹಬ್ಬದ ನೆನಪಿನ ಕಾರ್ಯಕ್ರಮವಾಗಿದೆ. ಖ್ಯಾತ ಕಲಾವಿದರಾದ ವಿದ್ವಾನ್ ಶ್ರೀ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದವರಿಂದ ವಾದ್ಯವೃಂದ, ಆಕಾಶವಾಣಿಯವರಿಂದ ರೂಪಕ ‘ನುಡಿತೇರನೆಳೆದವರು’, ವೇದ ವಿದ್ವಾನ್ ಶ್ರೀ ರಾಜಗೋಪಾಲ ಶರ್ಮ ಇವರಿಂದ ವೇದಘೋಷ ಹಾಗೂ ಪುಷ್ಪ ನಮನ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಶ್ರೀ ಹೆಚ್.ಎನ್. ಸುರೇಶ್ ಇವರಿಂದ ಜನ್ಮ ಶತಮಾನೋತ್ಸವ ವರ್ಷ ಉದ್ಘಾಟನೆ ನಡೆಯಲಿದೆ. ಕಲಾ ಗಂಗೋತ್ರಿ ರಂಗ ತಂಡದವರು ಡಾ. ಎಚ್.ಕೆ. ರಂಗನಾಥ ರಚಿಸಿರುವ ಡಾ. ಬಿ.ವಿ. ರಾಜಾರಾಂ…
ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಘಟಕ ಮತ್ತು ಕಾರ್ಕಳದ ಕುಂದಾಪ್ರದವರು ಆಯೋಜಿಸಿದ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ಯು ದಿನಾಂಕ 5 ಆಗಸ್ಟ್ 2024ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ “ಭಾಷಿಯಲ್ಲ ಬದ್ಕ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಖ್ಯಾತ ಕುಂದಾಪ್ರ ಕನ್ನಡದ ವಾಗ್ಮಿ ಮನುಹಂದಾಡಿಯವರು “ಕುಂದಾಪ್ರ ಕನ್ನಡವೆನ್ನುವುದು ಕೇವಲ ಒಂದು ಭಾಷಾ ಪ್ರಭೇದ ಮಾತ್ರ ಅಲ್ಲ ಅದೊಂದು ಸುಂದರವಾದ ಸಂಸ್ಕೃತಿ, ವೈವಿಧ್ಯಮಯವಾದ ಆಚಾರ-ವಿಚಾರ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ. ಕುಂದಾಪುರದವರು ಪ್ರತಿನಿತ್ಯ ಕೈಮುಗಿಯುವ ದೈವ ದೇವರುಗಳ ಮೂರ್ತಿ ಸಿದ್ಧವಾಗಿರುವುದು ಕಾರ್ಕಳದ ನೆಲ್ಲಿಕಾರಿನ ಕಲ್ಲಿನಿಂದ ಹಾಗಾಗಿ ಕುಂದಾಪ್ರ ಮತ್ತು ಕಾರ್ಕಳದ ನಡುವೆ ಅವಿನಾಭಾವ ಸಂಬಂಧವಿದೆ. ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ಇಷ್ಟು ಪ್ರಚಾರ ಹಾಗೂ ಪ್ರಸಿದ್ಧಿ ಪಡೆಯುವಲ್ಲಿ ಮಾಧ್ಯಮದ ಪಾತ್ರ ಬಹಳ ಇದೆ” ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕ್ವಾರಿ ಸ್ಟೋನ್…
ಉಡುಪಿ : ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಶೀತಲ್ ರಾವ್ ಇವರು ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಪ್ರದೀಪ್ ಕುಮಾರ್ ಹಾಗೂ ಶ್ರೀಮತಿ ಗೀತಾಂಜಲಿ ಇವರ ಸುಪುತ್ರಿಯಾಗಿರುವ ಡಾ. ಶೀತಲ್ ಉಡುಪಿಯ ಎಸ್. ಡಿ. ಎಂ. ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದಿರುತ್ತಾರೆ. ಪ್ರಸ್ತುತ ಕೇರಳದ ಕೊಲ್ಲಂನಲ್ಲಿರುವ ‘ಅಮೃತ ಸ್ಕೂಲ್ ಆಫ್ ಆಯುರ್ವೇದ’ ಇಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಭರತನಾಟ್ಯ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಕಳೆದ ಸುಮಾರು 12 ವರ್ಷಗಳಿಂದ ಭರತನಾಟ್ಯವನ್ನು ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದ ವಿದ್ವತ್ ಪದವಿ ಪೂರ್ತಿಗೊಳಿಸಿರುವ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ಚೇತನಾ ಆಚಾರ್ಯ ಇವರಲ್ಲಿ ಕಲಿತಿದ್ದು, ಜೂನಿಯರ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ನೃತ್ಯ ನಿಕೇತನ ಕೊಡವೂರಿನ ಹಲವಾರು ನೃತ್ಯ ಪ್ರದರ್ಶನಗಳಲ್ಲಿ ಹಾಗೂ ನೃತ್ಯ ನಾಟಕಗಳಲ್ಲಿ ಭಾಗವಹಿಸಿರುತ್ತಾರೆ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆ ‘ಸುದರ್ಶನ ವಿಜಯ’ವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ 5 ಆಗಸ್ಟ್2024 ರಂದು ನಡೆಯಿತು. ಕಾರ್ಯಕ್ರಮದ ಹಿಮ್ಮೇಳದಲ್ಲಿ ಸತೀಶ್ ಇರ್ದೆ , ನಿತೀಶ್ ಎಂಕಣ್ಣಮೂಲೆ , ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಹರಿಯಾಗಿ ಗುಂಡ್ಯಡ್ಕ ಈಶ್ವರ ಭಟ್ ಮಹಾಲಕ್ಷ್ಮಿಯಾಗಿ ಭಾಸ್ಕರ್ ಬಾರ್ಯ, ಸುದರ್ಶನನಾಗಿ ಗುಡ್ಡಪ್ಪ ಬಲ್ಯ, ಶತ್ರುಪ್ರಸೂದನನಾಗಿ ಸುಬ್ಬಪ್ಪ ಕೈಕಂಬ ಮತ್ತು ಮಾಂಬಾಡಿ ವೇಣುಗೋಪಾಲ ಭಟ್ ಹಾಗೂ ದೇವೇಂದ್ರನಾಗಿ ಬಡೆಕ್ಕಿಲ ಚಂದ್ರಶೇಖರ್ ಭಟ್ ಪಾತ್ರ ನಿರ್ವಹಿಸಿದರು. ಟಿ ರಂಗನಾಥ ರಾವ್ ಸಹಕರಿಸಿದರು.