Subscribe to Updates
Get the latest creative news from FooBar about art, design and business.
Author: roovari
ಮುಡಿಪು : ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಿಂದ ನಡೆದ ಬಿತ್ತಿ ದಿನಾಚರಣೆ ಮತ್ತು ಗುಂಡ್ಮಿ ಚಂದ್ರಶೇಖರ ಐತಾಳ್ ನೆನಪಿನ ಬಹುಭಾಷಾ ಕವಿಗೋಷ್ಠಿಯು ದಿನಾಂಕ 05-07-2024ರಂದು ಎಸ್.ವಿ.ಪಿ. ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಬಿತ್ತಿ’ ಗೋಡೆ ಬರಹ ವಾರ್ಷಿಕ ಸಂಪುಟ ಬಿಡುಗಡೆಗೊಳಿಸಿದ ಅಡ್ಯಾರಿನ ಸಹ್ಯಾದ್ರಿಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮತ್ತು ಲೇಖಕಿ ಅಕ್ಷಯ ಆರ್. ಶೆಟ್ಟಿ ಮಾತನಾಡುತ್ತಾ “ಏಕತಾನತೆ ಮತ್ತು ಒತ್ತಡವನ್ನು ನಿವಾರಿಸಲು ಬರವಣೆಗೆ ಸಹಕಾರಿಯಾಗಿದ್ದು, ಆ ಮೂಲಕ ಸಮಾಜದೊಂದಿಗೆ ಸೃಜನಶೀಲ ಸಂವಾದ ನಡೆಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಮಾತನಾಡಿ “ಕನ್ನಡದ ಹಿರಿಯ ಲೇಖಕರನ್ನು ಅಧ್ಯಯನ ಮಾಡುವ ಜೊತೆಗೆ ಸಮಕಾಲೀನ ಬರಹಗಾರರ ಕೃತಿಗಳ ಓದು, ವಿಮರ್ಶೆ ನಡೆಯಬೇಕಿದೆ” ಎಂದರು. ವಿಭಾಗದ ಪ್ರಾಧ್ಯಾಪಕರಾದ ನಾಗಪ್ಪ ಗೌಡ, ಧನಂಜಯ ಕುಂಬ್ಳೆ, ಯಶುಕುಮಾರ್, ‘ಬಿತ್ತಿ’ ಸಂಪಾದಕ ಬ್ರಿಜೇಶ್ ಯು. ಉಳ್ಳಾಲ್ ಭಾಗವಹಿಸಿದ್ದರು. ಕವಿಗೋಷ್ಠಿಯಲ್ಲಿ ಪ್ರತೀಕ್ಷ, ಶಂಕರ್…
ತೆಕ್ಕಟ್ಟೆ : ಕೋಟದ ಯಕ್ಷಾಂತರಂಗ ವ್ಯವಸಾಯೀ ಯಕ್ಷತಂಡ ಮತ್ತು ಡಾ. ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ಇವರ ವತಿಯಿಂದ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 13-07-2024ರಂದು ಸಂಜೆ 4-00 ಗಂಟೆಗೆ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷಾಂತರಂಗ ವ್ಯವಸಾಯೀ ಯಕ್ಷತಂಡ ಇದರ ಅಧ್ಯಕ್ಷರಾದ ಶ್ರೀ ಆನಂದ ಸಿ ಕುಂದರ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ತೆಕ್ಕಟ್ಟೆಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ| ಗಣಪತಿ ಟಿ. ಶ್ರೀಯಾನ್ ಇವರು ಉದ್ಘಾಟನೆ ಮಾಡಲಿರುವರು. ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಕೆ. ತಾರಾನಾಥ ಹೊಳ್ಳ, ತೆಕ್ಕಟ್ಟೆಯ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷರಾದ ಶ್ರೀ ಹೆರಿಯ ಮಾಸ್ಟ್ರು ಮತ್ತು ಯಕ್ಷಾಂತರಂಗ ವ್ಯವಸಾಯೀ ಯಕ್ಷತಂಡ ಇದರ ಕಾರ್ಯಾಧ್ಯಕ್ಷರಾದ ಶ್ರೀ ಸುಬ್ರಾಯ ಆಚಾರ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಯಕ್ಷಾಂತರಂಗ ವ್ಯವಸಾಯೀ ಯಕ್ಷತಂಡವು ‘ಅಂಬೆ’ ಯಕ್ಷಗಾನ ಪ್ರದರ್ಶನ ಪ್ರಸ್ತುತ ಪಡಿಸಲಿದ್ದಾರೆ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ತಿಂಗಳ ಸರಣಿ ತಾಳಮದ್ದಳೆ ಹಾಗೂ ಇತ್ತೀಚೆಗೆ ನಿಧನರಾದ ಯಕ್ಷಗಾನದ ಖ್ಯಾತ ವೇಷಧಾರಿಗಳಾದ ಕುಂಬ್ಳೆ ಶ್ರೀಧರ್ ರಾವ್ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 08-07-2024ರಂದು ಭಾಸ್ಕರ್ ಬಾರ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ದಿವಂಗತರು ಬೆಳೆದು ಬಂದ ದಾರಿ ಅವರ ಸರಳ ಜೀವನ ಕುರಿತಾಗಿ ಸಂಘದ ಸದಸ್ಯರಾದ ಪೂಕಳ ಲಕ್ಷ್ಮೀನಾರಾಯಣ ಭಟ್, ಪಕಳಕುಂಜ ಶ್ಯಾಮ್ ಭಟ್, ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ, ದುಗ್ಗಪ್ಪ ಎನ್., ಶುಭಾ ಜೆ.ಸಿ. ಅಡಿಗ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷ ಪ್ರೇಮಲತಾ ಟಿ. ರಾವ್ ಮಾತಾಡಿ ನುಡಿನಮನ ಸಲ್ಲಿಸಿದರು. ದೇವಳದ ಅರ್ಚಕ ಹರೀಶ್ ಭಟ್, ಪದ್ಮನಾಭ, ಗಣೇಶ್ ಕೇಕುಣ್ಣಾಯ, ಟಿ. ರಂಗನಾಥ ರಾವ್, ಪದ್ಯಾಣ ಶಂಕರನಾರಾಯಣ ಭಟ್, ಆನಂದ ಸವಣೂರು, ಎಲ್.ಎನ್. ಭಟ್, ಮುರಳೀಧರ ಕಲ್ಲೂರಾಯ ಮತ್ತು ನಿತೀಶ್ ಈಶ್ವರಮಂಗಿಲ ಮೊದಲಾದವರು ಉಪಸ್ಥಿತಿತರಿದ್ದರು. ಬಳಿಕ ‘ಭಕ್ತ ಸುಧನ್ವ’…
ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಇದರ ನವೀಕೃತ ‘ಸಾಹಿತ್ಯ ಸದನ’ ಉದ್ಘಾಟನಾ ಸಮಾರಂಭವು ದಿನಾಂಕ 13-07-2024ರಂದು ಮಂಗಳೂರಿನ ಉರ್ವಸ್ಟೋರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕರರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಇವರು ಉದ್ಘಾಟಿಸಲಿದ್ದು, ಸಂಸದರಾದ ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಮಾನ್ಯ ಡಿ. ವೇದವ್ಯಾಸ ಕಾಮತ್, ಕ.ಸಾ.ಪ.ದ ಅಧ್ಯಕ್ಷರಾದ ಡಾ. ಶ್ರೀನಾಥ ಎಂ.ಪಿ., ಎಂ.ಆರ್.ಪಿ.ಎಲ್.ನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕೃಷ್ಣ ಹೆಗ್ಡೆ, ಕಾರ್ಪೊರೇಟರ್ ಶ್ರೀ ಗಣೇಶ ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಹಿರಿಯ ಲೇಖಕರಾದ ಶ್ರೀಮತಿ ಇಂದಿರಾ ಹಾಲಂಬಿ ಮತ್ತು ಹಿರಿಯ ವಾಚಕರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರ ಗೌರವ ಉಪಸ್ಥಿತಿಯಲ್ಲಿ ಪ್ರಾಧ್ಯಾಪಕರಾದ ಡಾ. ಸಬಿತಾ ಬನ್ನಾಡಿ ಯವರು ಮುನ್ನೋಟದ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಕ್ಷತಾ ಬೈಕಾಡಿ ಹಾಗೂ ಕಲಾಶ್ರೀ ವಿದುಷಿ…
ಕೋಟ : ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಾಹಿತ್ಯ ಸಂಘದ ಆಶ್ರಯದಲ್ಲಿ ‘ಸಾಹಿತ್ಯ ಮತ್ತು ಬದುಕು’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 02-07-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್. ಮಾತನಾಡಿ “ಸಾಹಿತ್ಯ ಬೇರೆ ಅಲ್ಲ, ಬದುಕು ಬೇರೆ ಅಲ್ಲ. ಬದುಕಿನ ಪ್ರತಿಬಿಂಬವೇ ಸಾಹಿತ್ಯ. ಒಂಟಿತನ ಎಂಬುದು ಭೂತಗಳ ಆಗರ. ಏಕಾಂತದ ಮನಸ್ಸು ನಮ್ಮನ್ನು ಕೆಟ್ಟ ಕೆಟ್ಟ ಆಲೋಚನೆಗಳಿಗೆ ಕೊಂಡೊಯ್ಯುತ್ತವೆ. ಸಾಹಿತ್ಯವು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಬಲ್ಲ ಶಕ್ತಿ ಹೊಂದಿದೆ. ಮನಸ್ಸಿನ ಕೊಳೆ ದೂರ ಮಾಡಲು ಸಾಹಿತ್ಯದ ಓದು ಮತ್ತು ಆಸಕ್ತಿ ಸುಲಭದ ದಾರಿ. ಪುರಾಣ ಸಾಹಿತ್ಯಗಳನ್ನು ಓದುವುದರ ಮೂಲಕ ನೈತಿಕ ಮೌಲ್ಯವನ್ನು ಪಡೆಯಬಹುದು. ಸಾಹಿತ್ಯಾಧ್ಯಯನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ.” ಎಂದರು. ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ, ಶಿಕ್ಷಕರಾದ ಪ್ರೇಮಾನಂದ ಮತ್ತು ಶಂಭು ಭಟ್ಟರು ಸುಜಯೀಂದ್ರ ಹಂದೆಯವರನ್ನು ಸನ್ಮಾನಿಸಿದರು. ವಿದ್ಯಾರ್ಥಿ…
ಬೆಂಗಳೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ಎಚ್. ಎಸ್. ವೆಂಕಟೇಶ್ಮೂರ್ತಿ ಇವರಿಗೆ 80ರ ಹುಟ್ಟುಹಬ್ಬದ ಅಭಿನಂದನೆ – ಗೀತ ಗೌರವ ಹಾಗೂ ಕವಿ ಚನ್ನವೀರ ಕಣವಿ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 08-07-2024ರ ಭಾನುವಾರದಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇದರ ವಾಡಿಯಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ “ಕನ್ನಡದಲ್ಲಿ ಹಲವು ಸಮನ್ವಯ ಕವಿಗಳಿದ್ದರೆ ಅವರಲ್ಲಿ ಚನ್ನವೀರ ಕಣವಿ ಕೂಡ ಒಬ್ಬರು. ಕನ್ನಡ ಸಾಹಿತ್ಯ ಇಂದಿನವರೆಗೂ ಸಮೃದ್ಧವಾಗಿ ಬೆಳೆಯುತ್ತಾ ಬಂದಿದೆಯಾದರೆ ಅದು ನಮ್ಮ ಕವಿ ಮಹಾಶಯರ ಕೊಡುಗೆ. ಕೆಲವು ಪ್ರಮುಖ ಕವಿಗಳಿಗೆ ಜ್ಞಾನಪೀಠ ಸಿಗಬೇಕಾಗಿತ್ತು. ಎಲ್ಲಾ ಸಂಸ್ಕೃತಿ, ತತ್ತ್ವ ಸಿದ್ಧಾಂತಗಳ ಸಾರವನ್ನು ಹೀರಿಕೊಂಡು ತಮ್ಮ ಕಾಲಗಳಲ್ಲಿ ಒಡಮೂಡಿಸಿದ ಕೀರ್ತಿ ಚನ್ನವೀರ ಕಣವಿ ಅವರಿಗೆ ಸಲ್ಲುತ್ತದೆ. ಕಣವಿ ಅವರ ಒಟ್ಟಾರೆ ಸಾಹಿತ್ಯವನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಅವರು…
ಮಂಗಳೂರು : ಮಂಗಳೂರಿನ ಕೋಡಿಕಲ್ ನಲ್ಲಿರುವ ವಿಪ್ರ ವೇದಿಕೆ (ರಿ.) ಇದರ ದ್ವೈಮಾಸಿಕ ಸಭಾ ಕಾರ್ಯಕ್ರಮವು ದಿನಾಂಕ 07-07-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸುರತ್ಕಲ್ಲಿನ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯ, ಶ್ರೇಷ್ಠ ಗಮಕಿ ಹಾಗೂ ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಲಿರುವ ಗಮಕ ಸಮ್ಮೇಳನದ ಅಧ್ಯಕ್ಷರಾದ ಶ್ರೀ ಯಜ್ಞೇಶ್ ರಾವ್ ಹೊಸಬೆಟ್ಟು ಮಾತನಾಡಿ “ಗಮಕ ಕಲೆಯು ನಮ್ಮ ಭಾರತೀಯ ಕಲೆಗಳಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಹಲವು ರಂಗ ಪ್ರಕಾರಗಳಲ್ಲಿ ಗಮಕವು ಸಾಹಿತ್ಯ, ಸಂಗೀತ, ಶ್ರುತಿ, ರಾಗಗಳ ಮಿಲನದಿಂದ ಉತ್ತಮ ಆರಾಧನಾ ಕಲೆ ಎಂದು ಪ್ರಸಿದ್ಧಿ ಪಡೆದಿದೆ. ಅನೇಕ ಕವಿಗಳ ರಚನೆಯನ್ನು ಹಾಡಿದಾಗ ಆತ್ಮಾನುಭೂತಿ ಮೂಡುತ್ತದೆ.” ಎಂದರು. ಕಾರ್ಯದರ್ಶಿ ದುರ್ಗಾದಾಸ್ ಕಟೀಲ್ ಪ್ರಸ್ತಾವಿಕವಾಗಿ ಮಾತನಾಡಿ, ಶ್ರೀಮತಿ ವಿದ್ಯಾ ರಾವ್ ಸ್ವಾಗತಿಸಿ, ಕೋಶಾಧಿಕಾರಿ ಕಿಶೋರ ಕೃಷ್ಣ ನಿರ್ವಹಿಸಿ, ಮಾಜಿ ಅಧ್ಯಕ್ಷ ಅನೂಪ್ ರಾವ್ ಬಾಗ್ಲೋಡಿ ಕಲಾವಿದರನ್ನು ಗೌರವಿಸಿದರು. ಬಳಿಕ ಯಜ್ಞೇಶ್ ರಾವ್ ಇವರಿಂದ ವಾಚನ ಹಾಗೂ ವರ್ಕಾಡಿ ರವಿ ಅಲೆವೂರಾಯರಿಂದ ‘ಅಕ್ಷಯ ಪಾತ್ರೆ’…
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಸುರತ್ಕಲ್ ಇದರ ವತಿಯಿಂದ ‘ಕರ್ನಾಟಕ ಸಂಗೀತ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ನಿಯಮಗಳು : 1) ವಯಸ್ಸು 15 ವರ್ಷಕ್ಕಿಂತ ಕಡಿಮೆ ಇರಬೇಕು (ದಿನಾಂಕ 17-11-2009ರ ನಂತರ ಜನಿಸಿದವರಾಗಿರಬೇಕು.) 2) ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಸಂಗೀತಾಭ್ಯಾಸಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. 3) ಪ್ರಸ್ತುತಪಡಿಸಲಿರುವ ಕೃತಿಗಳು a) ಒಂದು ವರ್ಣ, b) ಒಂದು ಮಧ್ಯಮ ಕಾಲ ಕೃತಿ, (ಒಂದು ದೇವರ ನಾಮ, d) ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ರಚಿತವಾದ ಕೃತಿಗಳಲ್ಲಿ ಒಂದು ಕೃತಿ (ಆಯ್ಕೆಯಾದ ಸ್ಪರ್ಧಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೃತಿಯನ್ನು on-line ಮೂಲಕ ಕಲಿಯುವ ವ್ಯವಸ್ಥೆ ಮಾಡಲಾಗುವುದು) 4) ಶ್ರುತಿ ಪೆಟ್ಟಿಗೆಯ ವ್ಯವಸ್ಥೆಯನ್ನು ಮಾಡಲಾಗುವುದು. ಪಕ್ಕವಾದ್ಯ ಇರುವುದಿಲ್ಲ. 5) ಮನೋಧರ್ಮ ಸಂಗೀತ ಪ್ರಸ್ತುತಿಗೆ ಅವಕಾರವಿಲ್ಲ. 6) ಸ್ಪರ್ಧಿಸುವ ಇಚ್ಛೆ ಉಳ್ಳವರು ಯಾವುದಾದರೊಂದು ಮಧ್ಯಮಕಾಲ ಕೃತಿಯನ್ನು ದಿನಾಂಕ 21-07-2024ರೊಳಗೆ ವಿಡಿಯೋ ದಾಖಲಿಸಿ [email protected]ಗೆ mail ಮೂಲಕ ಕಳುಹಿಸುವುದು. 7) ಸ್ಪರ್ಧೆಯಲ್ಲಿ ಭಾಗವಹಿಸಲು…
ಸುರತ್ಕಲ್ : ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ ದ.ಕ. ಜಿಲ್ಲೆ, ಕರ್ನಾಟಕ ಗಮಕ ಕಲಾ ಪರಿಷತ್ ಮಂಗಳೂರು ಹಾಗೂ ಗೋವಿಂದ ದಾಸ ಪದವಿ ಪೂರ್ವ ಕಾಲೇಜು ಸುರತ್ಕಲ್ ಸಂಯುಕ್ತಾಶ್ರಯದಲ್ಲಿ ಪಸ್ತುತ ಪಡಿಸುವ ದಕ್ಷಿಣ ಕನ್ನಡ ಜಿಲ್ಲಾ 9ನೇ ‘ಗಮಕ ಕಲಾ ಸಮ್ಮೇಳನ’ವು ದಿನಾಂಕ 13-07-2024ರಂದು ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಗಮಕ ವಿದ್ವಾನ್ ಎಚ್. ಯಜ್ಞೇಶಾಚಾರ್ಯ ವಹಿಸಲಿದ್ದಾರೆ. ಬೆಳಗ್ಗೆ 8-30ಕ್ಕೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡಲಿದ್ದು, ಬೆಳಿಗ್ಗೆ 9.30ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ಎ.ವಿ. ಪ್ರಸನ್ನ ಇವರು ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟನೆ ನೆರವೇರಿಸಲಿದ್ದು, ವೇದಮೂರ್ತಿ ಹರಿನಾರಾಯಣ ದಾಸ ಆಸ್ರಣ್ಣ, ವೇದಮೂರ್ತಿ ರಮಾನಂದ ಭಟ್ ಶುಭಹಾರೈಸಲಿದ್ದಾರೆ. ಶ್ರೀ ಜಯಚಂದ್ರ ಹತ್ವಾರ್, ಡಾ. ಎಂ.ಬಿ. ಪುರಾಣಿಕ್ ಶುಭಾಶಂಸನೆಗೈಯಲಿದ್ದು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು,…
ಪುತ್ತೂರು : ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಶಾಲಾ ಶಿಕ್ಷಣ ಇಲಾಖೆ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಜಂಟಿಯಾಗಿ ದಕ್ಷಿಣ ಕನ್ನಡ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ‘ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ’ಗಳನ್ನು ಆಯೋಜನೆ ಮಾಡಿದ್ದು, ಎರಡೂ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ರೂ.5,000/- ಹಾಗೂ ದ್ವಿತೀಯ ಬಹುಮಾನ ರೂ.3,000/- ನೀಡಲಾಗುತ್ತದೆ. ಭಾಷಣ ಸ್ಪರ್ಧೆಗೆ ‘ಭಾರತೀಯ ಸೈನ್ಯ-ಸಾಧನೆ ಹಾಗೂ ಸಾಮರ್ಥ್ಯ’ ಎಂಬ ವಿಷಯ ನೀಡಲಾಗಿದೆ. ದೇಶಭಕ್ತಿ ಗೀತೆಗೆ ಕನಿಷ್ಟ ಮೂರು ಜನರ ತಂಡ ಹಾಗೂ ಗರಿಷ್ಟ ಐದು ಜನರ ತಂಡ ಭಾಗವಹಿಸಬಹುದಾಗಿದ್ದು, ಎರಡೂ ಸ್ಪರ್ಧೆಗೆ ತಲಾ ಐದು ನಿಮಿಷಗಳ ಸಮಯಾವಕಾಶ ನೀಡಲಾಗಿದೆ. ಒಂದು ಸಂಸ್ಥೆಯಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸುವುದಕ್ಕೆ ಅವಕಾಶವಿದೆ ಹಾಗೂ ಯಾವುದೇ ನೋಂದಾವಣೆ ಶುಲ್ಕ ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ದಿನಾಂಕ 10-07-2024ರ ಒಳಗಾಗಿ ತಮ್ಮ ಹೆಸರನ್ನು…