Subscribe to Updates
Get the latest creative news from FooBar about art, design and business.
Author: roovari
ಜಮಖಂಡಿ: ಚಿತ್ರಕಲಾವಿದ ವಿಜಯ ಗಂಗಪ್ಪ ಸಿಂಧೂರ ಇವರು 28 ಸೆಪ್ಟೆಂಬರ್ 2024ರ ಶನಿವಾರದಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು. 7 ಜೂನ್ 1940 ರಂದು ಬನಹಟ್ಟಿಯಲ್ಲಿ ಜನಿಸಿದ ವಿಜಯ ಸಿಂಧೂರ ಅವರು ಶಾಲಾ ಶಿಕ್ಷಣವನ್ನು ಜಮಖಂಡಿಯಲ್ಲಿ ಪೂರ್ಣಗೊಳಿಸಿದರು. ಕಾಲೇಜು ಶಿಕ್ಷಣವನ್ನು ಮುಂಬೈನ ಜೆ. ಡಿ. ಆರ್ಟ್ ಮತ್ತು ಜೆ. ಜೆ. ಕಲಾಶಾಲೆಯಲ್ಲಿ ಪಡೆದ ಇವರು ಭಿತ್ತಿಚಿತ್ರ ರಚನೆಯ ಬಗ್ಗೆ ಅಧ್ಯಯನ ಮಾಡಿದರು. 1965ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಮತ್ತು ಮದರಾಸಿನ ಕೇಂದ್ರ ಲಲಿತಕಲಾ ಅಕಾಡೆಮಿಯ ವಿಭಾಗೀಯ ಕೇಂದ್ರದ ಸದಸ್ಯರಾಗಿ ಸೇವೆ ಸಲ್ಲಿಸಿದರು. ಬೆಂಗಳೂರಿನ ‘ಮ್ಯಾಕ್ಸ್ ಮುಲ್ಲರ್’ ಕಲಾ ಗ್ಯಾಲರಿ, ಮುಂಬೈನ ‘ತಾಜ್’ ಕಲಾ ಗ್ಯಾಲರಿ, ‘ಜಹಾಂಗೀರ’ ಕಲಾ ಗ್ಯಾಲರಿ, ನವದೆಹಲಿಯ ‘ಧರುಣಿ’ ಕಲಾ ಗ್ಯಾಲರಿಗಳಲ್ಲಿ ಮಾತ್ರವಲ್ಲದೆ ದೇಶ-ವಿದೇಶದ ಕಲಾ ಗ್ಯಾಲರಿಗಳಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ‘ವಿಶ್ವಕನ್ನಡ ಸಮ್ಮೇಳನ’, ‘ಸಾರ್ಕ್ ಸಮ್ಮೇಳನ’, ‘ರಾಷ್ಟ್ರೀಯ ಕಲಾ ಉತ್ಸವ’ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಲ್ಲೂ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ‘ವೆಂಕಟಪ್ಪ ಪ್ರಶಸ್ತಿ’, ‘ರಾಷ್ಟ್ರೀಯ ಲಲಿತ ಅಕಾಡೆಮಿ’…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯು ಪ್ರತೀ ವರ್ಷ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ಗೆ ಈ ವರ್ಷ 30ರ ಹರೆಯ. ಈ ಸಂದರ್ಭದಲ್ಲಿ ಅಪೂರ್ವ ಮತ್ತು ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಸಂಸ್ಕೃತಿ ಪ್ರಿಯರಿಗೆ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದು ‘ಆಳ್ವಾಸ್ ವಿರಾಸತ್-2024’ನ್ನು ಅತ್ಯಂತ ಯಶಸ್ವೀ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. ವಿದ್ಯಾಗಿರಿಯ ಆವರಣದಲ್ಲಿ ನಡೆಯುವ ವಿರಾಸತ್ 2024ರ ಡಿಸೆಂಬರ್ 10 ಮಂಗಳವಾರದಂದು ಪ್ರಾರಂಭವಾಗಿ ಭಾನುವಾರ ಡಿಸೆಂಬರ್ 15ರಂದು ಮುಕ್ತಾಯಗೊಳ್ಳಲಿದೆ. ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳು ಸೇರಿ ಒಟ್ಟು 6 ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು ವೈಭವೋಪೇತವಾಗಿ ಜರುಗಲಿದೆ. ಮೊದಲ 05 ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಹಾರೋತ್ಸವ, ಕರಕುಶಲ ವಸ್ತುಗಳೇ ಮೊದಲಾದ ವಸ್ತು ಪ್ರದರ್ಶನಗಳಿಗೆ ಅವಕಾಶವಿದ್ದು ಕೊನೆಯ ದಿನ 05 ದಶಂಬರ್ 2024ನೇ…
ಬೆಂಗಳೂರು : ರಂಗ ಶಂಕರ ಇಪ್ಪತ್ತು ವರ್ಷ ಪೂರೈಸುತ್ತಿರುವ ಪ್ರಯುಕ್ತ ಅಕ್ಟೋಬರ್ ತಿಂಗಳಲ್ಲಿ ನಾಟಕ ಪ್ರದರ್ಶನ ನೀಡುತ್ತಿದೆ. ರಂಗ ಶಂಕರ ಬೆಂಗಳೂರಿನ ಹೆಸರಾಂತ ರಂಗಭೂಮಿಗಳಲ್ಲಿ ಒಂದು. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಇದು 2004ರಂದು ಪ್ರಾರಂಭವಾಗಿದ್ದು, ಸಂಕೇತ ಟ್ರಸ್ಟಿರವರು ಇದನ್ನು ನಿರ್ವಹಿಸುತ್ತಿದ್ದಾರೆ. 2004ರಲ್ಲಿ ತೆರೆಯಲ್ಪಟ್ಟ ಸಭಾಂಗಣವು ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟರಾಗಿದ್ದ ದಿವಂಗತ ಶಂಕರ್ ನಾಗ್ ನೆನಪಿನಲ್ಲಿ ಅರುಂಧತಿ ನಾಗ್ರಿಂ್ದ ಕಲ್ಪಿತವಾಗಿದೆ. ಎಲ್ಲಾ ಭಾಷೆಗಳಲ್ಲೂ ರಂಗಮಂದಿರವನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ಜಾಗವನ್ನು ಕಡಿಮೆ ದರದಲ್ಲಿ ಬಾಡಿಗೆ ನೀಡುವಲ್ಲಿ ಸ್ವತಃ ಪ್ರಚೋದಿಸುತ್ತದೆ. ಇದು ಕನಿಷ್ಟ “ಒಂದು ದಿನ ಒಂದು ದಿನ” ನೀತಿಯನ್ನು ಅನುಸರಿಸುತ್ತದೆ, ವಾರದಲ್ಲಿ ಆರು ದಿನಗಳು (ಸೋಮವಾರ ಹೊರತುಪಡಿಸಿ). ಅದರ ವಾರ್ಷಿಕ ರಂಗಭೂಮಿ ಉತ್ಸವ ದೇಶದಾದ್ಯಂತದ ನಗರ ನಾಟಕಗಳಿಗೆ ತೆರೆದಿಡುತ್ತದೆ, ಪ್ರೇಕ್ಷಕರನ್ನು ಆಯ್ಕೆ ಮಾಡಲು ಉತ್ತಮ ಪ್ರಚಾರ ನೀಡುತ್ತದೆ. ಪ್ರಾರಂಭದಿಂದಲೂ 2,700ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಲಾಗಿದೆ, ಅವುಗಳಲ್ಲಿ ಹೆಚ್ಚಿನವು ಕನ್ನಡದಲ್ಲಿವೆ, ಆದರೂ ಇನ್ನೂ 20 ಇತರ ಭಾಷೆಗಳಲ್ಲಿ ನಾಟಕಗಳು ನಡೆದಿವೆ. ದಿನಾಂಕ 1…
ಮಂಗಳೂರು: ನಿವೃತ್ತ ಶಿಕ್ಷಕ, ಸಾಹಿತಿ ನುಳಿಯಾಲು ರಘುನಾಥ ರೈ ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 28 ಸೆಪ್ಟೆಂಬರ್ 2024ರ ಶನಿವಾರದ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಬಹುಮುಖ ಪ್ರತಿಭೆಯಾಗಿದ್ದ ಶ್ರೀಯುತರು ಸುಳ್ಯಪದವು ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವರ್ಷ ಕಾಲ ಸೇವೆ ಸಲ್ಲಿಸಿದ್ದರು. 2018ರಲ್ಲಿ ಪುತ್ತೂರಿನಲ್ಲಿ ನಡೆದ ಕರ್ನಾಟಕ ಏಕೀಕರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಆಡಳಿತ ಮಂಡಳಿ ಸದಸ್ಯರಾಗಿ ಹಾಗೂ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ,, ಎನ್. ಎಸ್. ಕಿಲ್ಲೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿರುವುದು ಇವರ ಸಾಧನೆಗೆ ಸಂದ ಗೌರವ. ಶ್ರೀ ಯುತರು ಪತ್ನಿ, ಪುತ್ರ, ಪುತ್ರಿ,ಶಿಶ್ಯರು ಹಾಗೂ ಅಪಾರ ಸಂಖ್ಯೆಯ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.
ಮಂಗಳೂರು : ‘ತುಳುವೆರೆ ಕಲ’ ಇದರ ವತಿಯಿಂದ ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ‘ಪಚ್ಚೆ ಸಿರಿ’ ತುಳು ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 29 ಸೆಪ್ಟೆಂಬರ್ 2024ರ ರವಿವಾರದಂದು ಮಂಗಳೂರಿನ ಲಾಲ್ಬಾಗ್ ನಲ್ಲಿರುವ ಇಂದಿರಾ ಪ್ರಿಯದರ್ಶಿನಿ ವನಿತಾ ಪಾರ್ಕ್ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ಕೆ. ಎಂ. ಹೆಗ್ಡೆ ಮಾತನಾಡಿ “ತುಳುನಾಡಿನ ಜನತೆ ತುಳು ಭಾಷೆಯ ಜತೆ ಇತರ ಭಾಷೆಗಳನ್ನು ಗೌರವಿಸುತ್ತಾರೆ. ಎಲ್ಲ ಜನರನ್ನು ತಮ್ಮವರಂತೆ ನೋಡಿಕೊಳ್ಳುವ ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿಯಾಗಿದೆ.” ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ರೆಡ್ ಕ್ರಾಸ್ ಸೊಸೈಟಿಯ ದ. ಕ. ಜಿಲ್ಲಾ ಘಟಕದ ಚೇರ್ಮನ್ ಸಿ. ಎ. ಶಾಂತಾರಾಮ ಶೆಟ್ಟಿ ಮಾತನಾಡಿ “ತುಳು ಭಾಷೆಗೆ ಸಂಬಂಧಿಸಿದ ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ.” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ‘ತುಳುವೆರೆ ಕಲ’ ಇದರ ಅಧ್ಯಕ್ಷೆಯಾದ ಗೀತಾ ಲಕ್ಷ್ಮೀಶ್…
ಜರ್ಮನಿ : ಅಮೆರಿಕದಲ್ಲಿ 75 ದಿನಗಳ ಯಕ್ಷಯಾನವನ್ನು ಯಶಸ್ವಿಯಾಗಿ ಪೂರೈಸಿ ಯಕ್ಷಗಾನದ ಕೀರ್ತಿಪತಾಕೆಯನ್ನು ವಿದೇಶಗಳಲ್ಲಿ ಹಾರಿಸಿ ಅನೇಕ ದಾಖಲೆಗಳೊಂದಿಗೆ (ಜುಲೈ 27ರಂದು ಕ್ಯಾಲಿಫೋರ್ನಿಯ ರಾಜ್ಯದ ಫೀನಿಕ್ಸ್ ನಗರದಲ್ಲಿ ಹಾಗೂ ಅಗಸ್ಟ್ 18ರಂದು ವಿಸ್ಕಾನ್ಸಿನ್ ರಾಜ್ಯದ ಬ್ರೂಕ್ ಫೀಲ್ಡ್ ನಗರದಲ್ಲಿ ಅಲ್ಲಿನ ಮೇಯರುಗಳಿಂದ ಅಧಿಕೃತವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂಬ ಘೋಷಣೆ) ತಾಯ್ನಾಡಿಗೆ ಮರಳಿದ ಬೆನ್ನಲ್ಲೇ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಇವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಯೂರೋಪ್ ಘಟಕದ ಉದ್ಘಾಟನ ಸಮಾರಂಭವು ದಿನಾಂಕ 3 ಅಕ್ಟೋಬರ್ 2024 ಗುರುವಾರದಂದು ಜರ್ಮನಿಯಲ್ಲಿ ನೆರವೇರಲಿದೆ. ಈ ಮೂಲಕ ಯೂರೋಪ್ ರಾಷ್ಟ್ರದಲ್ಲಿ ಪ್ರಾರಂಭವಾಗುವ ಕರಾವಳಿ ಮೂಲದ ಟ್ರಸ್ಟ್ ಎಂಬ ಹೆಗ್ಗಳಿಕೆ ನಮ್ಮೆಲ್ಲರ ಹೆಮ್ಮೆಯಾಗಲಿದೆ. ಈ ಟ್ರಸ್ಟಿನ ಘಟಕ ಪ್ರಾರಂಭಿಸುವಲ್ಲಿ ಸಹಕರಿಸಿದ ಯೂರೋಪ್ ಘಟಕದ ಅಧ್ಯಕ್ಷರಾದ ಶ್ರೀ ನರೇಂದ್ರ ಶೆಣೈ ಕೊಪ್ಪ, ಕಾರ್ಯದರ್ಶಿಗಳಾದ ಶ್ರೀ ಅಜಿತ್ ಪ್ರಭು ತಲ್ಲೂರು, ಜೊತೆಕಾರ್ಯದರ್ಶಿ ಶ್ರೀ ಅರವಿಂದ ಸುಬ್ರಹ್ಮಣ್ಯ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಪಟ್ಲ ಟ್ರಸ್ಟಿನ ಕೇಂದ್ರೀಯ…
ಬೆಳ್ತಂಗಡಿ : ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಂಡ 50ನೇ ವರ್ಷದ ಪ್ರಯುಕ್ತ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಪಡಿಸಿ ರಾಜ್ಯಾದ್ಯಂತ ಸಂಚರಿಸಲಿರುವ ‘ಸುವರ್ಣ ಸಂಭ್ರಮ ರಥಯಾತ್ರೆ’ ದಿನಾಂಕ 28 ಸೆಪ್ಟೆಂಬರ್ 2024ರಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಉಜಿರೆಯ ಮುಖ್ಯ ವೃತ್ತದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ತಹಶೀಲ್ದಾರ್ ಪೃಥ್ವಿ ಸಾನಿಕಮ್, ಬೆಳ್ತಂಗಡಿ ತಾಲೂಕು ಪಂಚಾಯತ್ ಇ.ಒ. ಭವಾನಿಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರೀಷತ್ತಿನ ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ., ಬೆಳ್ತಂಗಡಿ ತಾಲೂಕು ಕ.ಸಾ.ಪ. ಅಧ್ಯಕ್ಷ ಯದುಪತಿ ಗೌಡ ಇವರು ಭುವನೇಶ್ವರಿ ಪ್ರತಿಮೆಗೆ ಗೌರವ ಸಲ್ಲಿಸಿದರು. ತಾಲೂಕು ಕಂದಾಯ ನಿರೀಕ್ಷಕ ಪ್ರತೀಶ್ ಎಚ್.ಆರ್., ವೇಣೂರು ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಮಿತ್ತಬಾಗಿಲು ಪಿ.ಡಿ.ಒ. ಮೋಹನ ಬಂಗೇರ, ಉಜಿರೆಯ ಕೈಗಾರಿಕೋದ್ಯಮ ಮತ್ತು ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು. ರಥಯಾತ್ರೆಯಲ್ಲಿ ರಾಜ್ಯದ ಕಲೆ, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ…
ಮಂಗಳೂರು: ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ಅಶೋಕನಗರದ ದಂಬೆಲ್ ನಿವಾಸಿ ಪ್ರೊ. ಎಂ. ರಾಘವೇಂದ್ರ ಪ್ರಭು ವಯೋಸಹಜ ಅನಾರೋಗ್ಯದಿಂದ ದಿನಾಂಕ 26 ಸೆಪ್ಟೆಂಬರ್ 2024ರ ಗುರುವಾರ ನಿಧನರಾದರು. ಅವರಿಗೆ 83ವರ್ಷ ವಯಸ್ಸಾಗಿತ್ತು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಇತಿಹಾಸದಲ್ಲಿ ಎಂ. ಎ. ಪದವಿ ಪಡೆದಿದ್ದ ಇವರು ಕೆನರಾ ಕಾಲೇಜಿನಲ್ಲಿ 30 ವರ್ಷ ಪ್ರಾಧ್ಯಾಪಕರಾಗಿದ್ದರು. ಶಿಕ್ಷಣ ಇಲಾಖೆಗಾಗಿ ಇತಿಹಾಸದ ಪಠ್ಯ ಪುಸ್ತಕಗಳನ್ನು ರಚಿಸಿದ್ದ ಇವರ ‘ಅಸಂಗ’ ಸೇರಿದಂತೆ ಹಲವಾರು ಕಥಾ ಸಂಕಲನಗಳು ಪ್ರಕಟವಾಗಿವೆ. ಇವರು ಮಂಗಳೂರಿನ ಥಿಯೋಸಫಿಕಲ್ ಸೊಸೈಟಿ, ರಾಮಕೃಷ್ಣ ಮಠ ಸೇರಿದಂತೆ ದೇಶದ ಹಲವಾರು ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶ್ರೀಯುತರು ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಲತೆಯಂಥ ಸಪೂರ ಮಾಟದ ದೇಹಶ್ರೀ ಹೊಂದಿದ ನೃತ್ಯಚತುರೆ ಧೃತಿ ಶೆಟ್ಟಿ, ಬಿಲ್ಲಿನಂತೆ ಹೇಗೆಂದರೆ ಹಾಗೇ ಬಾಗುವ ಚೈತನ್ಯದ ಸೊಬಗಿನಿಂದ ತನ್ನ ರಂಗಪ್ರವೇಶದಲ್ಲಿ ಪ್ರದರ್ಶಿಸಿದ ಸುಮನೋಹರ ನೃತ್ಯ-ಯೋಗದ ಭಂಗಿಗಳು ಬೆರಗು ಹುಟ್ಟಿಸಿದವು. ದಿನಾಂಕ 08 ಸೆಪ್ಟೆಂಬರ್ 2024ರಂದು ಬಸವೇಶ್ವರ ನಗರದ ಕೆ.ಇ.ಎ. ರಂಗಮಂದಿರದಲ್ಲಿ ‘ಸಾಧನ ಸಂಗಮ’ ನೃತ್ಯಶಾಲೆಯ ಹಿರಿಯಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಶ್ರೀ ಗುರುದ್ವಯರ ಶಿಷ್ಯೆ ಉದಯೋನ್ಮುಖ ಕಲಾವಿದೆ ಧೃತಿ, ಬಹು ಆತ್ಮವಿಶ್ವಾಸ ಹಾಗೂ ಲವಲವಿಕೆಯಿಂದ ತನ್ನ ಭರತನಾಟ್ಯ ನೃತ್ಯ ಪ್ರದರ್ಶಿಸಿದಳು. ಸಾಂಪ್ರದಾಯಕ ‘ಪುಷ್ಪಾಂಜಲಿ’ಯ ನೃತ್ತಾರ್ಪಣೆಯಿಂದ ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದ ನಂತರ ಮುಂದಿನ ‘ಗಣೇಶ ಸ್ತುತಿ’ ವಿಶೇಷವಾಗಿತ್ತು. ಸಾಮಾನ್ಯ ನಿರೂಪಣೆಯ ಗಣಪತಿಯ ವಿಶಿಷ್ಟ ರೂಪ-ಗುಣಗಳನ್ನಷ್ಟೇ ಚಿತ್ರಿಸದೆ, ಮೃದಂಗ ವಿದ್ವಾನ್ ಗುರುಮೂರ್ತಿ ಮತ್ತು ಗಾಯಕ ಬಾಲಸುಬ್ರಮಣ್ಯ ಶರ್ಮ ವಿಶೇಷವಾಗಿ ರಚಿಸಿರುವ ಗಣಪತಿ ಕುರಿತ ಹೊಸ ಪರಿಕಲ್ಪನೆಯ ಸ್ತುತಿಯ ಅರ್ಥ ಸ್ಫುರಿಸುವಂತೆ, ನೀಲಕಂಠನ ವೈಶಿಷ್ಟ್ಯವನ್ನೂ ಸಾಕಾರಗೊಳಿಸಿ, ಧೃತಿ ಚೈತನ್ಯಪೂರ್ಣವಾಗಿ ನರ್ತಿಸಿದಳು. ಗಣಪತಿಯ ಧ್ವನಿ, ಮೋಡಗಳ ಘರ್ಜನೆಯಂತಿದ್ದು, ತನ್ಮೂಲಕ ಅದು ನವಿಲುಗಳ ನರ್ತನಕ್ಕೆ ಅದಮ್ಯ…
ಮೈಸೂರು : ಡಾ. ಶ್ವೇತಾ ಮಡಪ್ಪಾಡಿ ಇವರ ಧ್ವನಿ ಫೌಂಡೇಷನ್ ನ ‘ಸ್ವರ ಕುಟೀರ’ ಎಂಬ ಸಂಗೀತ ನೃತ್ಯ ಸಭಾಂಗಣದ ಉದ್ಘಾಟನಾ ಸಮಾರಂಭವು ಮೈಸೂರಿನ ಸೋಮನಾಥ ನಗರದಲ್ಲಿ ದಿನಾಂಕ 22 ಸೆಪ್ಟೆಂಬರ್ 2024ರಂದು ನಡೆಯಿತು. ಸಭಾಂಗಣವನ್ನು ಉದ್ಘಾಟಿಸಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ ಇವರು ಮಾತನಾಡಿ “ಸಂಗೀತ ಮನುಷ್ಯನ ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸುತ್ತದೆ. ಮನುಷ್ಯ – ಮನುಷ್ಯನ ನಡುವೆ ಸಾಮರಸ್ಯ ತರುತ್ತದೆ. ಸಂಗೀತಕ್ಕೆ ಚಿಕಿತ್ಸಕ ಗುಣವಿದೆ. ಅಂತ ಸಂಗೀತವನ್ನು ಪೋಷಿಸುವ ಕೆಲಸವನ್ನು ಧ್ವನಿ ಫೌಂಡೇಷನ್ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಧ್ವನಿ ಫೌಂಡೇಷನ್ ಮಹಿಳೆಯರ ಶಕ್ತಿಯಾಗಿ, ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡಲಿದೆ ಎಂಬುದು ಬಹಳ ಸಂತೋಷದ ಸಂಗತಿ. ನಮ್ಮ ಸಮಾಜದಲ್ಲಿ ದನಿಯಿಲ್ಲದವರಿಗೆ ಧ್ವನಿ ಫೌಂಡೇಶನ್ ಧ್ವನಿ ತಂದುಕೊಡುವ ಹಾಗಾಗಲಿ. ಮುಂಬರುವ ದಿನದಲ್ಲಿ ಧ್ವನಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವಂತಾಗಲಿ” ಎಂದು ಆಶಿಸಿದರು. ಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಬಿ. ಸುರೇಶ್ ಮಾತನಾಡಿ “ಇಂದು ಸಣ್ಣದಾಗಿ ಆರಂಭವಾಗಿರುವ ಧ್ವನಿಯ ಚಟುವಟಿಕೆಗಳು ಮುಂದೆ ಈ ನಾಡು…