Author: roovari

25 ಮಾರ್ಚ್ 2023, ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಸ್ಮಾರಕ ಗಿಳಿವಿಂಡು ಆವರಣದಲ್ಲಿ ಶನಿವಾರ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ ಆಯೋಜಿಸಿದ್ದ 137ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಗೋವಿಂದ ಪೈಯವರ ವ್ಯಕ್ತಿತ್ವ ಮತ್ತು ಮನೋಭಾವ ಎಂಬ ವಿಷಯದಲ್ಲಿ ಹಂಪಿ ಕನ್ನಡ ವಿವಿಯ ನಿವೃತ ಕನ್ನಡ ಮುಖ್ಯಸ್ಥ ಪ್ರೊ.ಎ.ವಿ. ನಾವಡ ವಿಶೇಷೋಪನ್ಯಾಸ ನೀಡಿ ಮಾತನಾಡುತ್ತಾ ‘ ಕನ್ನಡದ ಪ್ರಥಮ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಯವರ ಒಂದೊಂದು ಕೃತಿಗಳೂ ಅಧ್ಯಯನ ಯೋಗ್ಯವಾಗಿವೆ. ಆದರೆ ಸಾಕಷ್ಟು ಅಧ್ಯಯನ ಈವರೆಗೆ ನಡೆದಿಲ್ಲ. ವಿದ್ವತ್‌ ಮತ್ತು ಸಾಹಿತ್ಯ ಶ್ರೀಮಂತಿಕೆಯಲ್ಲಿ ಗೋವಿಂದ ಪೈಯವರನ್ನು ಮೀರಿಸುವ ಮತ್ತೊಬ್ಬ ವ್ಯಕ್ತಿ ರಾಷ್ಟ್ರದಲ್ಲೇ ಇಲ್ಲ . ಮಂಜೇಶ್ವರ ಪ್ರದೇಶಕ್ಕೆ ಅಂದೊಂದು ಕಾಲದಲ್ಲಿ ಆಗಮಿಸುತ್ತಿದ್ದ ನೂರಾರು ಅಭಿಮಾನಿಗಳು ಎರಡು ಸಾಗರಗಳನ್ನು ನೋಡಿ ಪುಳಕಿತರಾಗುತ್ತಿದ್ದರು. ಒಂದೆಡೆ ಭೋರ್ಗರೆಯುವ ಅರಬ್ಬೀ ಸಮುದ್ರ ಹಾಗೂ ಸಾಗರದಷ್ಟೇ ಜ್ಞಾನ ಕಡಲಾದ ಗೋವಿಂದ ಪೈಯವರು ಇನ್ನೊಂದೆಡೆ. ಅವರು ಕನ್ನಡ ಸಾರಸ್ವತ ಲೋಕದ ಬೆಳಗುವ ನಕ್ಷ ತ್ರವಾಗಿದ್ದರು’ ಎಂದರು. ಕನ್ನಡ ಸಾಹಿತ್ಯ…

Read More

23 ಮಾರ್ಚ್ 2023: ಸಾಹಿತಿ, ಸಂಘಟಕ, ಸ್ವಾತಂತ್ರ್ಯ ಹೋರಾಟಗಾರ ಏರ್ಯ ಲಕ್ಷ್ಮೀನಾರಾಯಣ ಆಳ್ವರು ದಕ್ಷಿಣ ಕನ್ನಡ ಜಿಲ್ಲೆಯ ಮೊಡಂಕಾಪು ಎಂಬ ಊರಿನ ಸಮೀಪವಿರುವ ಏರ್ಯ ಎಂಬಲ್ಲಿ ಮಾವಂತೂರು ಸುಬ್ಬಯ್ಯ ಆಳ್ವ ಮತ್ತು ಸೋಮಕ್ಕ ದಂಪತಿಗಳ ಸುಪುತ್ರನಾಗಿ 19-03-1926ರಂದು ಜನಿಸಿದರು. ತುಳು ಮತ್ತು ಕನ್ನಡ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಧೀಮಂತ. ಇವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ “ಏರ್ಯ ಸಾಹಿತ್ಯ ಸಂಭ್ರಮ” ಏರ್ಯ ಬೀಡಿನಲ್ಲಿ ದಿನಾಂಕ 02-04-2023ರಂದು ಭಾನುವಾರ ಏರ್ಯ ಆಳ್ವ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿದೆ. ಪೂರ್ವಾಹ್ನ 9ರಿಂದ 10 ಗಂಟೆವರೆಗೆ ಉಪಹಾರ. 10ರಿಂದ 10-30 ಡಾ. ಬಿ. ಎ. ವಿವೇಕ ರೈಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 10-30ರಿಂದ 1-00 ಗಂಟೆವರೆಗೆ ಏರ್ಯರ ಮುಖ್ಯ ಕೃತಿಗಳ ವಿಶ್ಲೇಷಣೆ ನಡೆಯಲಿದೆ. ಡಾ. ತಾಳ್ತಜೆ ವಸಂತ ಕುಮಾರ್, ಡಾ. ನಾ.ದಾಮೋದರ ಶೆಟ್ಟಿ, ಪ್ರೊ. ಪಿ.ಕೃಷ್ಣ ಮೂರ್ತಿ, ಡಾ. ಯು.ಮಹೇಶ್ವರಿ, ಡಾ. ತುಕಾರಾಮ್ ಪೂಜಾರಿ, ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, ಡಾ. ಆರ್.ನರಸಿಂಹ ಮೂರ್ತಿ, ಡಾ.…

Read More

25 ಮಾರ್ಚ್ 2023, ಉಡುಪಿ: ರಂಗಭೂಮಿ (ರಿ.) ಉಡುಪಿ, ಎಂ.ಜಿ.ಎಂ. ಕಾಲೇಜು ಉಡುಪಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ “ವಿಶ್ವ ರಂಗಭೂಮಿ ದಿನಾಚರಣೆ-2023″ಯು ದಿನಾಂಕ 27.03.2023, ಸೋಮವಾರ ಸಂಜೆ ಸಮಯ: 5.45ಕ್ಕೆ ನೂತನ ರವೀಂದ್ರ ಮಂಟಪ, ಎಂ.ಜಿ.ಎಂ. ಕಾಲೇಜು ಉಡುಪಿ ಇಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪ್ರೊ. ಜಯಪ್ರಕಾಶ್ ಮಾವಿನಕುಳಿ, ಹಿರಿಯ ನಾಟಕಕಾರರು, ಸಾಹಿತಿ, ರಂಗ ನಿರ್ದೇಶಕರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡಾ. ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ರಂಗಭೂಮಿ (ರಿ.) ಉಡುಪಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ – ಶ್ರೀ ಸಂತೋಷ್ ಕೆ. ಶೆಟ್ಟಿ, ಅಂಗಡಿಗುತ್ತು, ಕಳತ್ತೂರು, ಶ್ರೀ ರಾಮ್ ಶೆಟ್ಟಿ, ರಂಗಕರ್ಮಿ, ಭೂಮಿಕಾ (ರಿ.) ಹಾರಾಡಿ, ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಪ್ರಾಂಶುಪಾಲರು, ಎಂ.ಜಿ.ಎಂ. ಕಾಲೇಜು ಉಡುಪಿ ಇವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೆ.ಪ್ರಭಾಕರ್ ಶೆಟ್ಟಿಗಾರ್, ಪ್ರಭಾಕರ್ ಸೌಂಡ್ಸ್ ಉಡುಪಿ ಮತ್ತು ಶ್ರೀ ಯು.ಎಂ. ಅಸ್ಲಾಮ್ ಹಿರಿಯ ರಂಗನಟ, ರಂಗಭೂಮಿ (ರಿ.) ಉಡುಪಿ ಇವರಿಗೆ “ವಿಶ್ವ ರಂಗಭೂಮಿ” ಪ್ರಶಸ್ತಿಯನ್ನು ನೀಡಿ…

Read More

23 ಮಾರ್ಚ್ 2023, ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಾಯೋಜಕತ್ವದಲ್ಲಿ ತುಳುಕೂಟ ಕುಡ್ಲ ನೀಡುವ “ರತ್ನವರ್ಮ ಹೆಗ್ಗಡೆ ಪ್ರಶಸ್ತಿ 2022–23” ಪ್ರಕಟಿಸಲಾಗಿದೆ. ಅಪ್ರಕಟಿತ ಹೊಸ ನಾಟಕ ಕೃತಿಗೆ ಪ್ರತೀ ವರ್ಷ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿಗಳನ್ನು ಡಾ. ಹೆಗ್ಗಡೆ ಅವರು ತಮ್ಮ ತೀರ್ಥರೂಪರ ನೆನಪಿಗಾಗಿ ಕಳೆದ 46 ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ಪ್ರಶಸ್ತಿ ಮೊತ್ತವು ಕ್ರಮವಾಗಿ ರೂ.10,000, ರೂ.8,000 ಮತ್ತು ರೂ.6,000 ನಗದು ಬಹುಮಾನವಾಗಿರುತ್ತದೆ. ಈ ಕೆಳಗಿನವರು ಈ ಸಲದ ಪ್ರಶಸ್ತಿ ವಿಜೇತರು. ಪ್ರಥಮ: ದೀಪಕ್ ಎಸ್. ಕೋಟ್ಯಾನ್ ಕುತ್ತೆತ್ತೂರು. (ಮಾಯದಪ್ಪೆ ಮಾಯಂದಾಲ್) ದ್ವಿತೀಯ: ಪರಮಾನಂದ ಸಾಲಿಯಾನ್ ಸಸಿಹಿತ್ಲು (ಪುರ್ಸೆ ಬಿರ್ಸೆ ಶ್ರೀ ರಾಮೆ) ತೃತೀಯ: ಅಕ್ಷಯ ಆರ್. ಶೆಟ್ಟಿ, ಪಡಂಗಡಿ (ಪೆರ್ಗ) ವಿಶ್ರಾಂತ ಪತ್ರಕರ್ತ ಮನೋಹರ ಪ್ರಸಾದ್, ತುಳು-ಕನ್ನಡ ಸಾಹಿತಿ ಮುದ್ದು ಮೂಡುಬೆಳ್ಳೆ ಹಾಗೂ ರಂಗಕರ್ಮಿ ವಿ.ಜಿ.ಪಾಲ್ ಇವರು ಪ್ರಶಸ್ತಿ ಪುರಸ್ಕೃತ ಕೃತಿಗಳ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಏಪ್ರಿಲ್ 15ರಂದು ಶ್ರೀ ಮಂಗಳಾದೇವಿ…

Read More

23 ಮಾರ್ಚ್ 2023, ಉಡುಪಿ: ಹಾವಂಜೆಯ ಭಾವನಾ ಕಲಾಶಾಲೆಯ ವಿಂಶತಿ ಸಂಭ್ರಮದ ಈ ಸುಸಂದರ್ಭದಲ್ಲಿ ದೇಶೀಯ ಜನಪದ ಮತ್ತು ಬುಡಕಟ್ಟು ಕಲೆಯ ಪ್ರಚಾರ ಮತ್ತು ಪ್ರೋತ್ಸಾಹಕ್ಕಾಗಿ ಕಲಿಕಾ ಕಾರ್ಯಾಗಾರಗಳನ್ನು ಉಡುಪಿಯ ಬಡಗುಪೇಟೆಯಲ್ಲಿ ಆಯೋಜಿಸಲಾಗುತ್ತಿದೆ. ಭಾರತದಾದಂತ್ಯ ಹರಡಿಕೊಂಡಿರುವ ನಾನಾ ಕಲಾಪ್ರಕಾರಗಳನ್ನು ಉಡುಪಿಗೆ ಪರಿಚಯಿಸುವ ನಿಟ್ಟಿನಲ್ಲಿ ಭಾವನಾ ಫೌಂಡೇಷನ್, ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುವ “ಪಟಚಿತ್ರ” ದಿನಾಂಕ 31 ಮಾರ್ಚ್ 2023 ರಿಂದ 2 ನೇ ಏಪ್ರಿಲ್ 2023ರವರೆಗೆ ನಡೆಯಲಿದೆ. ಪಟಚಿತ್ರವು ಒರಿಸ್ಸಾ, ಪಶ್ಚಿಮ ಬಂಗಾಲ ಹಾಗೂ ಬಾಂಗ್ಲಾದೇಶದ ಕಾಲ ಭಾಗಗಳಲ್ಲಿ ಬಳಕೆಯಲ್ಲಿರುವ ಭಾರತಿಯ ವಿಶಿಷ್ಟ ಸಾಂಪ್ರದಾಯಿಕ ಕಲೆಯಾಗಿದೆ. ಈ ಕಲಾಪ್ರಕಾರದಲ್ಲಿ ಅಭಿವ್ಯಕ್ತಗೊಳ್ಳುವ ಪೌರಾಣಿಕ ನಿರೂಪಣೆಗಳು ಹಾಗೂ ಜಾನಪದೀಯ ಕಥೆಗಳ ಚಿತ್ರಗಳು ಅಂತರಾಷ್ಟ್ರೀಯ ಮುನ್ನಣೆ ಗಳಿಸಿದೆ. ಸಾಮಾನ್ಯವಾಗಿ ರೇಷ್ಮೆ ಮತ್ತು ಹತ್ತಿಯ ಬಟ್ಟೆ ಹಾಗೂ ಮತ್ತು ಕಾಗದಗಳ ಮೇಲೆ ಚಿತ್ರಿಸಲಾಗುವ ಈ ಕಲಾಪ್ರಕಾರವನ್ನು ತಾಳೆಯೋಲೆಯ ಮೇಲೆಯೂ ಗೀರಿ ಮತ್ತು ಕೆತ್ತುವ ಕ್ರಮದಲ್ಲಿ ಕೂಡ ರಚಿಸಲಾಗುತ್ತದೆ. ಇದೊಂದು ಸಾಕಷ್ಟು ವಿವರಣಾತ್ಮಕವಾದ ಸಂಕೀಣ೯ತೆಯಿಂದ ಕೂಡಿದ…

Read More

23 ಮಾರ್ಚ್ 2023, ಪುತ್ತೂರು: 2023 ಮಾರ್ಚ್ 6 ಮತ್ತು 7ನೇ ತಾರೀಕಿನಂದು ದರ್ಬೆಯಲ್ಲಿರುವ ಸಂಸ್ಥೆಯ ”ಶಶಿಶಂಕರ ಸಭಾಂಗಣ”ದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರೆಂಜಿತ್ ಬಾಬು ಹಾಗೂ ಶ್ರೀಮತಿ ವಿಜ್ಞಾ ವಾಸುದೇವನ್ ದಂಪತಿಗಳಿಂದ ಆಸಕ್ತ ನೃತ್ಯ ವಿದ್ಯಾರ್ಥಿಗಳಿಗೆ ಎರಡು ದಿನಗಳ ಭರತನಾಟ್ಯ ಕಾರ್ಯಾಗಾರದ ಆಯೋಜನೆಯನ್ನು ಸಂಸ್ಥೆ ಮಾಡಿತ್ತು. ಈ ಎರಡೂ ದಿನಗಳ ಕಾಲ ಶ್ರೀ ರೆಂಜಿತ್ ಮಾತು ಶ್ರೀಮತಿ ವಿಜ್ಞಾ ದಂಪತಿಗಳು ಶರೀರದ ಸುದೃಢತೆ, ಆರೋಗ್ಯವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಕೆಲವು ಆಸನಗಳು, ವ್ಯಾಯಾಮಗಳು, ಅವುಗಳ ಅಗತ್ಯತೆ, ನೃತ್ಯ ಕಾರ್ಯಕ್ರಮದ ಮೊದಲು ಮತ್ತೆ ನಂತರ ಮಾಡುವ ಅಂಗ ಪ್ರಕ್ರಿಯೆಗಳು ಮತ್ತು ಕಾರ್ಯಕ್ರಮದ ನಂತರ ಶರೀರ ಸುಸ್ಥಿತಿಯಲ್ಲಿಡಲು ಹಾಗೂ ಸಹಜ ಸ್ಥಿತಿಗೆ ಬರಲು ಮಾಡಬೇಕಾದ ಸೆಳೆತಗಳು ಹೇಗೆ ಸಹಾಯಕ ಆಗುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಬಹಳ ಉತ್ತಮ ರೀತಿಯಲ್ಲಿ ಮಾಹಿತಿ ನೀಡಿ ತರಬೇತಿಗೊಳಿಸಿದರು. ಅಡವುಗಳ ಬಹಳಷ್ಟು ತಿದ್ದುಪಡಿಯೊಂದಿಗೆ ಒಂದು ರೀತಿಯ ಶಿಸ್ತು ಬರುವಂತೆ ಮಾಡಿ ಒಂದು ವಿಶಿಷ್ಟ ರೀತಿಯ ಅಲರಿಪು ಮಕ್ಕಳಿಗೆ ಕಲಿಸಿದರು. ಒಂದು…

Read More

23 ಮಾರ್ಚ್ 2023, ಪುತ್ತೂರು: ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ (ರಿ) ಪುತ್ತೂರು ಪ್ರತೀ ವರ್ಷದಂತೆ ಈ ವರ್ಷವೂ ಇದರ ವಾರ್ಷಿಕ ರಾಷ್ಟ್ರೀಯ ನೃತ್ಯೋತ್ಸವ “ನರ್ತನಾವರ್ತನ – 2023” ಮಾರ್ಚ್ 05 ಭಾನುವಾರದಂದು ಸಂಜೆ 5:30ಕ್ಕೆ ಪುತ್ತೂರಿನ ಜೈನ ಭವನದಲ್ಲಿ ನಡೆಯಿತು. ಕರಾವಳಿಯ ಹಿರಿಯ ಗುರುಗಳಾದ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ನಿರ್ದೇಶಕರಾದ ತಮ್ಮ ಶಿಷ್ಯ ದೀಪಕ್ ಕುಮಾರ್ ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಬಗ್ಗೆ ಅತಿಯಾದ ಅಭಿಮಾನ-ಮೆಚ್ಚುಗೆ ವ್ಯಕ್ತ ಪಡಿಸುವುದರೊಂದಿಗೆ ದೀಪಕ್ ಕುಮಾರ್ ಇವರ ಸಾಧನೆಯಲ್ಲಿ ಅವರ ಸಹ ಧರ್ಮಿಣಿ ಶ್ರೀಮತಿ ಪ್ರೀತಿಕಲಾ ದೀಪಕ್ ಸಂಗೀತ ನಿರ್ದೇಶನದೊಂದಿಗೆ ಪತಿಗೆ ಅಪೂರ್ವ ಸಹಕಾರ ನೀಡುವುದರ ಬಗ್ಗೆ ಮತ್ತು ಅಕಾಡೆಮಿಯ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಅಭ್ಯಾಗತರಾಗಿ ಆಗಮಿಸಿದ ಶ್ರೀಯುತ ಗೋಪಾಲಕೃಷ್ಣ ಭಟ್, ಆಡಳಿತ ನಿರ್ದೇಶಕರು ದ್ವಾರಕಾ ಸಮೂಹ ಸಂಸ್ಥೆ ಇವರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ…

Read More

23 ಮಾರ್ಚ್ 2023, ಉಳ್ಳಾಲ: “ಕನ್ನಡ ಭಾಷೆಯನ್ನು ಉಳಿಸುವ ಜೊತೆಗೆ ಅದನ್ನು ನಂಬಿಕೊಂಡಿರುವ ಸಾಂಸ್ಕೃತಿಕ ಬದುಕನ್ನು ಗಂಧದ ಕೊರಡಿನಂತೆ ಉಳಿಸುವ ಕಾರ್ಯ ಸರ್ಕಾರದಿಂದ ಆಗಬೇಕು” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್‌ ಆಳ್ವ ಹೇಳಿದರು. ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳಾ ಸಭಾಂಗಣದಲ್ಲಿ ಉಳ್ಳಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 17-03-2023 ಶುಕ್ರವಾರದಂದು ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಳ್ವರು ಮಾತನಾಡಿದರು. ಅನುವಾದಕಿ ಶ್ಯಾಮಲಾ ಮಾಧವ್ ಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಟಿ. ಖಾದರ್ ಮಾತನಾಡಿ, ‘ಕ್ಷೇತ್ರದ ಅಭಿವೃದ್ಧಿ ಮತ್ತು ಸವಲತ್ತುಗಳಿಗಾಗಿ ಉಳ್ಳಾಲ ತಾಲೂಕು ರಚನೆಗೆ ಆದ್ಯತೆ ನೀಡಲಾಗಿದೆ. ನಮ್ಮ ಭಾಷೆ, ಸಂಸ್ಕೃತಿ ಹಂಚುವ ಕಾರ್ಯಕ್ಕೆ ಸಮ್ಮೇಳನ ಪೂರಕವಾಗಲಿ’ ಎಂದರು. ಉದ್ಘಾಟನೆಯ ನಂತರ ನಡೆದ ವಿಚಾರಗೋಷ್ಠಿಯಲ್ಲಿ ಇಬ್ಬರು ಸಾಹಿತಿಗಳು ಬೇರೆ ಬೇರೆ ವಿಷಯಗಳಲ್ಲಿ ತಮ್ಮ ವಿಚಾರ ಮಂಡಿಸಿದರು. “ಕರಾವಳಿ ಸಾಹಿತ್ಯದಲ್ಲಿ ಸಾಮರಸ್ಯ” ವಿಷಯದ ಬಗ್ಗೆ ಎಸ್.ವಿ.ಪಿ. ಕನ್ನಡ ಅಧ್ಯಯನ…

Read More

23 ಮಾರ್ಚ್ 2023, ಮಂಜೇಶ್ವರ: ಎಂ. ಗೋವಿಂದ ಪೈ ಅವರು ಮಂಗಳೂರಿನ ಸಾಹುಕಾರ ತಿಮ್ಮಪ್ಪ ಪೈ ಮತ್ತು ತಾಯಿ ದೇವಕಿಯಮ್ಮ ಅವರ ಸುಪುತ್ರ. ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ 23, 1882ರಂದು ಜನಿಸಿದರು. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಎಂ. ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಆಯಿತು. ಪದವಿ ಪೂರ್ವ ವಿದ್ಯಾಭ್ಯಾಸ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ನಡೆಯಿತು. ಅವರ ಒಡನಾಡಿಗಳಲ್ಲಿ ಎಂ.ಎನ್.ಕಾಮತ್ ಒಬ್ಬರಾದರೆ, ಅವರಿಗೆ ಪಾಠ ಕಲಿಸಿದ ಗುರುವರ್ಯರಲ್ಲಿ ಕವಿಶಿಷ್ಯ ನಾಮಾಂಕಿತರಾದ ಪಂಜೆ ಮಂಗೇಶರಾಯರೂ ಒಬ್ಬರು. ಬಿ.ಎ ಪದವಿ ಶಿಕ್ಷಣಕ್ಕಾಗಿ 1903-1906ರವರೆಗೆ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕಾಯಿತು. ಅಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರು ಇವರ ಸಹಪಾಠಿಯಾಗಿದ್ದರು. ತಂದೆಯ ಮರಣದಿಂದಾಗಿ ಬಿ.ಎ ಪದವಿ ಪರೀಕ್ಷೆಯ ಮಧ್ಯದಲ್ಲಿಯೇ ಅವರು ಮಂಗಳೂರಿಗೆ ಹಿಂತಿರುಗಬೇಕಾಯಿತು. ಹಿರಿಯ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ವಹಿಸಬೇಕಾಯಿತು. ಬಿ.ಎ ಪದವಿ ಪಡೆಯಲಾಗದಿದ್ದರೂ ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದರು. ಅವರ…

Read More

23 ಮಾರ್ಚ್ 2023, ಮಂಗಳೂರು: “ಸಾಹಿತ್ಯ-ಸಂಸ್ಕೃತಿ ಆಧಾರಿತವಾದ ಚಿಂತನಶೀಲ ಬದುಕು ಹಿನ್ನೆಲೆಗೆ ಸರಿದು ಕೊಳ್ಳುಬಾಕತನದ ಅರ್ಥ ಸಂಸ್ಕೃತಿ ಜೀವನದಲ್ಲಿ ಮುನ್ನೆಲೆಗೆ ಬಂದಿರುವುದೇ ಸಾಮಾಜಿಕವಾದ ಹಲವು ರೋಗಗಳಿಗೆ ಕಾರಣ. ನಮ್ಮ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಬದುಕನ್ನು ಹೊಸ ತಲೆಮಾರಿಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಜ್ಞಾನ ಮತ್ತು ಬುದ್ಧಿಬಲ ಜೀವನದ ಮುನ್ನೆಲೆಯಲ್ಲಿ ಇರಬೇಕಲ್ಲದೆ ಅರ್ಥ ಸಂಸ್ಕೃತಿ ಮತ್ತು ಅದರ ಅನುಯಾಯಿಯಾದ ರಟ್ಟೆಬಲ ಸಮಾಜದಲ್ಲಿ ಮೆರೆಯುವಂತೆ ಆಗಬಾರದು.” ಎಂದು ಕವಿ-ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು. ಮಂಗಳೂರಿನ ಕನ್ನಡ ಬಳಗವು ಮಾರ್ಪಳ್ಳಿ ಪ್ರಕಾಶನ ಹಾಗೂ ಸುಬ್ರಹ್ಮಣ್ಯ ಸಭಾ ಇವುಗಳ ಆಶ್ರಯದಲ್ಲಿ ನಗರದ ಸುಬ್ರಹ್ಮಣ್ಯ ಸದನದಲ್ಲಿ ಏರ್ಪಡಿಸಿದ ಯುಗಾದಿ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಬಳಗದ ಅಧ್ಯಕ್ಷ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಆರ್.ವಾಸುದೇವ ಅವರು ವಹಿಸಿದ್ದರು. “ಹಬ್ಬ ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸುವ ವ್ಯವಸ್ಥೆ ನಮ್ಮಲ್ಲಿ ಬರಬೇಕು. ಸಾಹಿತ್ಯ ಸಂಸ್ಕೃತಿಗಳಿಗೆ ನಮ್ಮ…

Read More