Subscribe to Updates

    Get the latest creative news from FooBar about art, design and business.

    What's Hot

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಖ್ಯಾತ ಚಿತ್ರಕಲಾವಿದ ವಿಜಯ ಗಂಗಪ್ಪ ಸಿಂಧೂರ ನಿಧನ
    Artist

    ಖ್ಯಾತ ಚಿತ್ರಕಲಾವಿದ ವಿಜಯ ಗಂಗಪ್ಪ ಸಿಂಧೂರ ನಿಧನ

    September 30, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಜಮಖಂಡಿ: ಚಿತ್ರಕಲಾವಿದ ವಿಜಯ ಗಂಗಪ್ಪ ಸಿಂಧೂರ ಇವರು 28 ಸೆಪ್ಟೆಂಬರ್ 2024ರ ಶನಿವಾರದಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು.
    7 ಜೂನ್ 1940 ರಂದು ಬನಹಟ್ಟಿಯಲ್ಲಿ ಜನಿಸಿದ ವಿಜಯ ಸಿಂಧೂರ ಅವರು ಶಾಲಾ ಶಿಕ್ಷಣವನ್ನು ಜಮಖಂಡಿಯಲ್ಲಿ ಪೂರ್ಣಗೊಳಿಸಿದರು. ಕಾಲೇಜು ಶಿಕ್ಷಣವನ್ನು ಮುಂಬೈನ ಜೆ. ಡಿ. ಆರ್ಟ್ ಮತ್ತು ಜೆ. ಜೆ. ಕಲಾಶಾಲೆಯಲ್ಲಿ ಪಡೆದ ಇವರು ಭಿತ್ತಿಚಿತ್ರ ರಚನೆಯ ಬಗ್ಗೆ ಅಧ್ಯಯನ ಮಾಡಿದರು. 1965ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಮತ್ತು ಮದರಾಸಿನ ಕೇಂದ್ರ ಲಲಿತಕಲಾ ಅಕಾಡೆಮಿಯ ವಿಭಾಗೀಯ ಕೇಂದ್ರದ ಸದಸ್ಯರಾಗಿ ಸೇವೆ ಸಲ್ಲಿಸಿದರು.
    ಬೆಂಗಳೂರಿನ ‘ಮ್ಯಾಕ್ಸ್‌ ಮುಲ್ಲರ್’ ಕಲಾ ಗ್ಯಾಲರಿ, ಮುಂಬೈನ ‘ತಾಜ್’ ಕಲಾ ಗ್ಯಾಲರಿ, ‘ಜಹಾಂಗೀರ’ ಕಲಾ ಗ್ಯಾಲರಿ, ನವದೆಹಲಿಯ ‘ಧರುಣಿ’ ಕಲಾ ಗ್ಯಾಲರಿಗಳಲ್ಲಿ ಮಾತ್ರವಲ್ಲದೆ ದೇಶ-ವಿದೇಶದ ಕಲಾ ಗ್ಯಾಲರಿಗಳಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ‘ವಿಶ್ವಕನ್ನಡ ಸಮ್ಮೇಳನ’, ‘ಸಾರ್ಕ್ ಸಮ್ಮೇಳನ’, ‘ರಾಷ್ಟ್ರೀಯ ಕಲಾ ಉತ್ಸವ’ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಲ್ಲೂ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
    ‘ವೆಂಕಟಪ್ಪ ಪ್ರಶಸ್ತಿ’, ‘ರಾಷ್ಟ್ರೀಯ ಲಲಿತ ಅಕಾಡೆಮಿ’ ಪ್ರಶಸ್ತಿ , ‘ಕನ್ನಡ ರಾಜ್ಯೋತ್ಸವ’ ಪ್ರಶಸ್ತಿ, ‘ಪಟೇಲ್ ಟ್ರೋಫಿ’, ‘ಆರ್ಟ್ ಸೊಸೈಟಿ ಆಫ್ ಇಂಡಿಯಾ’ ಪ್ರಶಸ್ತಿ , ‘ರಾಜ್ಯ ಲಲಿತಕಲಾ ಅಕಾಡೆಮಿ’ ಪ್ರಶಸ್ತಿ ಹಾಗೂ ‘ಹಾಲಭಾವಿ ಕುಂಚಕಲಾ ತಪಸ್ವಿ’ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಬಂದಿರುವುದು ಇವರ ಕಲಾ ಸೇವೆಗೆ ಸಂದ ಗೌರವ
    ಶ್ರೀಯುತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಕಲಾಭಿಮಾನಿ ಹಾಗೂ ಕಲಾರಾಸಿಕರನ್ನು ಅಗಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Article30ನೇ ವರ್ಷದ ಆಳ್ವಾಸ್ ವಿರಾಸತ್–2024 | ದಶಂಬರ್ 10
    Next Article ‘ಕಾರಂತ ಪ್ರಶಸ್ತಿ’ಗೆ ಬಹುಶ್ರುತ ವಿದ್ವಾಂಸ ಎಂ. ಪ್ರಭಾಕರ ಜೋಶಿ ಆಯ್ಕೆ
    roovari

    Comments are closed.

    Related Posts

    ರಾಜೇಶ್ವರಿ ಕುಡುಪು ಇವರ ‘ಕಲಾಸಂಪದ’ ಪುಸ್ತಕ ಬಿಡುಗಡೆ

    May 17, 2025

    ಸಿಂಧನೂರು ಸತ್ಯಾ ಗಾರ್ಡನ್ ನಲ್ಲಿ 11ನೇ ‘ಮೇ ಸಾಹಿತ್ಯ ಮೇಳ’ | ಮೇ 17 ಮತ್ತು 18

    May 16, 2025

    ಕಯ್ಯಾರರ ಜನ್ಮದಿನ ಸಂಭ್ರಮದಲ್ಲಿ ಭಾಗವಹಿಸಲು ಆಸಕ್ತರಿಗೆ ಆಹ್ವಾನ

    May 16, 2025

    ಪುಸ್ತಕ ವಿಮರ್ಶೆ | ವಿಜಯಲಕ್ಷ್ಮಿ ಶಾನುಭೋಗ್ ಇವರ ‘ವ್ಯೂಹ’ (ಕಥಾಸಂಕಲನ)

    May 15, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.