Author: roovari

31 ಜನವರಿ 2023, ಉಡುಪಿ: ಭಾವನಾ ಫೌಂಡೇಶನ್, ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸಿದ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರವು ಜೋಯ್ ಆಲುಕ್ಕಾಸ್ ಜ್ಯುವೆಲ್ಲರಿಯ ಹಿಂಭಾಗದಲ್ಲಿರುವ 10.03.28, ಬಡಗು ಪೇಟೆಯಲ್ಲಿ ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕರಾಗಿರು ಡಾ. ನಿರಂಜನ್ ಯು.ಸಿ. ಇವರಿಂದ ಉದ್ಘಾಟನೆಗೊಂಡಿತು. ಇಂತಹಾ ದೇಶೀಯ ಕಲೆಗಳ ಉಳಿವು ಮತ್ತು ಅವುಗಳ ಬಗೆಗಿನ ಪ್ರಚಾರ ಪ್ರದರ್ಶನಗಳು ಬಹಳಷ್ಟು ನಡೆಯಬೇಕಿದೆಯಲ್ಲದೇ ಬಡುಗುಪೇಟೆಯ ಮನೆಯೊಂದರಲ್ಲಿ ನಡೆಯುತ್ತಿರುವ ಈ ಕಾರ್ಯಾಗಾರ ಮತ್ತು ಪ್ರದರ್ಶನಗಳು ನಮ್ಮ ಕರಾವಳಿಯ ದೇಶೀಯ ಸೊಗಡನ್ನು ಪ್ರದರ್ಶಿಸುತ್ತದೆ ಎಂಬುದಾಗಿ ಹೇಳಿದರು. ಮುಖ್ಯ ಅತಿಥಿಗಳಾದ ಆರ್ಟಿಸ್‌ಟ್‌ ಫೋರಂ ಅಧ್ಯಕ್ಷ ಹಿರಿಯ ಕಲಾವಿದರಾದ ರಮೇಶ್ ರಾವ್‌ರವರು ಯಾವುದೇ ಅಕಾಡೆಮಿ ಮಾಡಿ ತೋರಿಸದ ಕಾರ್ಯಗಳನ್ನು ಇಂದಿಲ್ಲಿ ಖಾಸಗಿಯಾಗಿ ಪ್ರತಿಷ್ಠಾನವು ಮಾಡುತ್ತಿದೆ. ಕಲೆ ಮತ್ತು ಕಲಾವಿದರೊಂದಿಗಿನ ಭಾವನಾತ್ಮಕ ಸಂಬಂಧವನ್ನು ಬೆಸೆಯಲು ಈ ಕಾರ್ಯಾಗಾರಗಳು ಪರಿಣಾಮಕಾರಿಯಾಗಿದೆಯಲ್ಲದೇ ಸಮಕಾಲೀನ ಕಲಾಕಾರರು ಹಾಗೂ ಜನಪದೀಯ ಕಲಾಕಾರರ ನಡುವಿನ ಕೊಡುಕೊಳ್ಳುವಿಕೆಯ ಬಗೆಗೆ ಇಲ್ಲಿ ಚಿಂತಿಸಲ್ಪಡುತ್ತಿರುವುದು ಬಹು ಮಹತ್ವಪೂರ್ಣವಾದ ವಿಚಾರವೆಂಬುದಾಗಿ ಅಭಿಪ್ರಾಯವಿತ್ತರು.ಸಂಸ್ಕೃತಿ…

Read More

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ (ರಿ.) ಇದರ 2022 – 23 ನೇ ಸಾಲಿನ ಅಬ್ಬಕ್ಕ ಉತ್ಸವವು ದಿನಾಂಕ 04.02.2023, ಶನಿವಾರದಂದು ಉಳ್ಳಾಲ ನಗರಸಭೆಯ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಡೆಯಲಿದೆ. ಆ ಪ್ರಯುಕ್ತ ಆಮಂತ್ರಣ ಪತ್ರಿಕೆಯನ್ನು ಕುತ್ತಾರಿನಲ್ಲಿರುವ ಹೋಟೆಲ್ ವೇಜಿನೇಶನ್ ನಲ್ಲಿ ಶ್ರೀ ಮಂಜಪ್ಪ ಕಾರ್ನವರ್ (ಬಾಲು ಆರ್ಟ್ಸ್) ಇವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ದಿನಕರ ಉಳ್ಳಾಲ ಸ್ವಾಗತಿಸಿ, ಮಾಜಿ ಸಚಿವರು ಮತ್ತು ಸ್ವಾಗತಾಧ್ಯಕ್ಷರಾದ ಶ್ರೀ ಕೆ.ಜಯರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಶ್ರಿಮತಿ ಧನಲಕ್ಷ್ಮೀ ಗಟ್ಟಿಯವ ರು ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಶ್ರೀ ಆನಂದ ಅಸೈಗೊಳಿಯವರು ವಂದಿಸಿದರು. ಗೌರವ ಉಪಾಧ್ಯಕ್ಷರಾದ ಶ್ರೀ ಸದಾನಂದ ಬಂಗೇರ, ಉಪಾಧ್ಯಕ್ಷರಾದ ಯು. ಪಿ. ಆಲಿಯಬ್ಬ ವೇದಿಕೆಯಲ್ಲಿ ಉಪ್ಥಿತರಿದ್ದರು.

Read More

ಶ್ರೀ ಶಾರದಾ ನಾಟ್ಯಾಲಯ, ಕುಳಾಯಿ ಹೊಸಬೆಟ್ಟು, ಕರಾವಳಿಯ ಕೋಗಿಲೆ ಯಾಗಿದ್ದಂತಹ ದಿ.ಶ್ರೀಮತಿ ಶೀಲಾ ದಿವಾಕರ ಇವರ ಸಂಸ್ಮರಣಾ ಕಾರ್ಯಕ್ರಮ “ಗಾನ ಶಾರದೆಗೆ ನಮನ” ಗುರುವಿಗೊಂದು ನಾಟ್ಯ ನಮನ ಕಾರ್ಯಕ್ರಮವು ಗೋವಿಂದ ದಾಸ ಕಾಲೇಜಿನ ಲಲಿತ ಕಲಾ ಸಂಘದ ಸಹಯೋಗದೊಂದಿಗೆ ಅದೇ ಕಾಲೇಜಿನ ಸಭಾಂಗಣದಲ್ಲಿ 26-01-2023 ರಂದು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿಯವರು ವಹಿಸಿಕೊಂಡಿದ್ದರು. ಶೀಲಾ ರವರ ಪತಿಯಾದ ಶ್ರೀ ದಿವಾಕರ್ ಲಕ್ಷ್ಮಣ್, ವಿದ್ವಾನ್ ಶ್ರೀ ಶ್ರೀಧರ್ ಆಚಾರ್ , ವಿದ್ವಾನ್ ಶ್ರೀ ಮಂಜುನಾಥ್ ಎನ್ ಪುತ್ತೂರು, ಶ್ರೀ ಹೆಚ್ ಯು ಅನಂತಯ್ಯ ನವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ನೃತ್ಯ ನಿರ್ದೇಶಕಿ ಸ್ವಾಗತ ವಾಚನ ಮಾಡಿದರು. ಶ್ರೀ ಶ್ರೀಧರ್ ಅಚಾರ್ ಅವರು ನುಡಿ ನಮನಗೈದರು. ವಿದುಷಿ ಸುಮಂಗಲಾ ರತ್ನಾಕರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ನೃತ್ಯ ಸಮರ್ಪಣೆ ಮಾಡಿದರು.

Read More

“Japan is a successful nation today because of its transparency in business and compassion in life. I often visit Japan for business. You will never find punctuality and discipline in any other part of the world, like Japan. I have read the book written by Florine Roche and I fully endorse her views on Japan ” said NRI Entrepreneur and Philanthropist Mr. Michael D Souza. He was speaking at the World Konkani Centre after releasing the Konkani book ‘Udenuchea sureachea kirnnanim fullollem salok – Japan’ by Florine Roche. The book is printed under his ‘Vision Konkani’ programme for the development…

Read More

ದಕ್ಲಕಥಾ ದೇವಿ ಕಾವ್ಯ ,ನಮ್ಮ ಅರಿವಿಗೆ ಸಿಗದ ಯಾವುದೋ ಒಂದು ಲೋಕದ ಅನಾವರಣ .ಕೂಳ್ಗುದಿಯೊಂದನ್ನು ಹೊರ ನಿಂತು ನೋಡುವುದಕ್ಕೂ ,ತಾನೆ ಅನುಭವಿಸುವುದಕ್ಕೂ ಅಂತರವಿದೆ,”ನಾನಾಗಿ ನೋಡು” “ಹೆಣ್ಣಾಗಿ ಹುಟ್ಟಿ ನೋಡು”ಎಂದು ಎಚ್ಚರಿಸುತ್ತಾ ನಮ್ಮ ಅನುಕಂಪದ ಸೋಗಲಾಡಿತನದ ಮುಖವಾಡ ಕಳಚುವ ಧ್ವನಿಯೊಂದು ಪ್ರಸ್ತುತಿಯ ನಂತರವೂ ಕಾಡುತ್ತದೆ .ಕುಡ್ ದ್ರಾ ..ತಿಂದ್ರಾ ..ಮಲಿಕಲಿ ಎಂದು ಅಣಕಿಸುತ್ತದೆ .ದಕ್ಲರು ಯಾರು ? ಎಲ್ಲಿಂದ ಹುಟ್ಟಿದ್ದು ,ಪಾದದಿಂದಲೇ..ಹೊಟ್ಟೆಯಿಂದಲೇ ,ನಾನು ಹುಟ್ಟಿನಿಂದ ಅಸ್ಪೃಶ್ಯ ,ಹೀಗೆ ಪ್ರಶ್ನೆಗಳೇ ಉತ್ತರಗಳಾಗಿ ಪ್ರಜ್ಞೆಯನ್ನು ಕದಡುವ ಕಾವ್ಯದ ಒಳಗೊಂದು ಒಪ್ಪವಾದ ದೇವಿ ಕತೆಯಿದೆ . ದಕ್ಲರಂತಹ ಅದೆಷ್ಟೋ ಅನನ್ಯ ಪರಂಪರೆಗಳ ಪ್ರಾತಿನಿಧಿಕ ಚಿತ್ರವಿದು .ಎಲ್ಲರೂ ಒಂದೇ ಎನ್ನುವ ಘೋಷಣೆಯಡಿಯಲ್ಲಿ ಕಳೆದುಹೋಗಲಿರುವ ಜನಪದರ ಲೋಕವನೊಮ್ಮೆ ಎಲ್ಲರು ನೋಡಲೇಬೇಕು .ಹಾಡು, ಮಾತು, ತಮಟೆ, ನೆರಳು, ಬೆಳಕು, ದೃಶ್ಯಗಳ ಹದವಾದ ಪಾಕ, ವಾಸ್ತವದೊಳಗಿನ ನಾಟಕ, ನಾಟಕದೊಳಗಿನ ನಮ್ಮನ್ನು ಪರಿಚಯಿಸುತ್ತದೆ . ಇನ್ನೇನೋ ಇದೆ ಎನ್ನುವಂತೆ ಕಾಯುವಾಗ ನಾಟಕ ಮುಗಿಯುತ್ತದೆ ,ಪ್ರಜ್ಞೆಯೊಳಗಿಳಿಯುತ್ತದೆ .ವಿಶಿಷ್ಟವಾದ ಪ್ರಯೋಗಕ್ಕೆ ಮೊದಲು ಮಾಡಿದ ಜಂಗಮ ತಂಡದ ನಿರ್ದೇಶಕ…

Read More

ಸೇವಾಂಜಲೀ ಕಲಾಕೇಂದ್ರ ಫರಂಗಿಪೇಟೆಯ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮವೂ ಗುರುಗಳಾದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರ‌ನೇತೃತ್ವದಲ್ಲಿ ಜನವರಿ 22 ರಂದು ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.. ಹಿಮ್ಮೇಳನದಲ್ಲಿ ಹಾಡುಗಾರಿಕೆಯಲ್ಲಿ ಪವಿತ್ರ ಮಯ್ಯ, ಮೃದಂಗ ವಾದಕರಾಗಿ‌ ಚಂದ್ರಶೇಖರ‌ ಗುರುವಾಯನಕೆರೆ, ಕೊಳಲು ವಾದನದಲ್ಲಿ ಸುರೇಂದ್ರ ಕಾಸರಗೋಡು ಸಹಕರಿಸಿದ್ದರು..

Read More

ನಿವೃತ್ತ ಶಿಕ್ಷಕ, ಖ್ಯಾತ ಗಮಕಿ, ನಾಟಕ, ರೂಪಕಗಳ ಸಂಗೀತ ನಿರ್ದೇಶಕ, ಭಾವಗೀತೆಗಳಿಗೆ ಜೀವ ತುಂಬಿದ ಸರದಾರ, ಸರಳ ಸಜ್ಜನಿಕೆಯ ಕಂಚಿನ ಕಂಠದ ಗಾಯಕ ಶ್ರೀ ಚಂದ್ರಶೇಖರ ಕೆದಿಲಾಯರು 24 ಜನವರಿ 2023ರಂದು ಇಹವನ್ನು ತ್ಯಜಿಸಿದ್ದಾರೆ. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಇವರು ಭೇದ ಭಾವವಿಲ್ಲದೆ ಸರ್ವರಿಗೂ ಸಂಗೀತದ ಸ್ವಾದವನ್ನುಣಿಸಿದವರು. ತಮಗೆ ಅರಿವಿಲ್ಲದಂತೆಯೇ ತಮ್ಮ ಸಂಗೀತದ ಮೂಲಕ ಕನ್ನಡ ಭಾಷೆ , ಸಂಸ್ಕೃತಿ ಉಳಿಸಿ, ಮಕ್ಕಳಲ್ಲಿ ದೇಶ ಪ್ರೇಮ ಸ್ಪುರಿಸುವಲ್ಲಿ ಸಹಾಯಕರಾದವರು. “ನೂಲೋಲ್ಯಾಕ ಚೆನ್ನಿ”, “ಅವ್ವ ಹೆಚ್ಚೋ ಅಪ್ಪ ಹೆಚ್ಚೋ “, ಕುಣಿಯೋಣು ಬಾರಾ ಕುಣಿಯೋಣು ಬಾ”, ” ಟೊಂಕದ ಮ್ಯಾಲಾ ಕೈ ಇಟ್ಟು ಕೊಂಡು” ಇತ್ಯಾದಿ ಹಾಡುಗಳಿಂದ ಮಕ್ಕಳ ಮನಸ್ಸನ್ನು ಸೂರೆ ಗೊಂಡವರು. ನೂರಾರು ವಿದ್ಯಾರ್ಥಿ ಶಿಬಿರಗಳಲ್ಲಿ ಪಾಲ್ಗೊಂಡು, ಸಾವಿರಾರು ವಿದ್ಯಾರ್ಥಿಗಳನ್ನು ತಿದ್ದಿ, ಅವರ ಜೀವನಕ್ಕೆ ದೀವಿಗೆಯಾಗಿ ಜೀವನ ಪಾಠ ಕಲಿಸಿದ ಕೆದಿಲಾಯರನ್ನು ಕಳೆದುಕೊಂಡು ಭಾವಗೀತ ಪ್ರಪಂಚ ಬಡವಾಗಿದೆ.

Read More

“ವಚನ ಸಂಭ್ರಮ ಎಂಬುದು ಜ್ಞಾನ ಕೇಂದ್ರಿತ ಸಂಭ್ರಮ ಇದು ಪ್ರದರ್ಶನಕ್ಕೆ ಸೀಮಿತವಾಗದೆ ಕಡಲಾಚೆವರೆಗೂ ಬೆಳೆಯಲಿ” ಎಂದು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ (ರಿ.)ಇದರ ವಾರ್ಷಿಕೋತ್ಸವ ಎಂಟನೇ ವಚನ ಸಂಭ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಸನ್ಮಾನವನ್ನು ಸ್ವೀಕರಿಸಿದ ಪ್ರೊ.ವಿಜಯಾದೇವಿಯವರು ಸಭೆಯನ್ನುದ್ದೇಶಿಸಿ ಹೇಳಿದರು. ಇವರು ಹಿರಿಯ ಸಾಹಿತಿ ಮತ್ತು ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ ವಿಜಯಪುರದ ಎಮಿರೀಟಸ್ ಪ್ರಾಧ್ಯಾಪಕರಾಗಿದ್ದಾರೆ. ದ.ಕ.ಜಿಲ್ಲಾ ಕ. ಸಾ.ಪ., ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ ಎಸ್.ರೇವಣ್ಕರ್ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿ, “ಮಹಿಳೆ ಕುಟುಂಬದ ಸಮಾಜದ ಶಕ್ತಿ. 12ನೇ ಶತಮಾನದಲ್ಲಿ ಸಮಾಜ ತಿದ್ದುವ ಕೆಲಸ ಶರಣೆಯರು ಮಾಡಿದ್ದರೆಂದರೆ ಸಾಧನೆ ಮಾಡಿದರೆ ಮಹಿಳೆಯರು ಏನಾದರೂ ಮಾಡಬಹುದು.” ಎಂದರು. ಮುಖ್ಯ ಅತಿಥಿ ಸ್ಥಾನದಿಂದ ಶ್ರಿಮತಿ ಸುಮಂಗಲ ಮಾತನಾಡಿ “ಎಳವೆಯಲ್ಲಿ ಶಾಲೆಗಳಲ್ಲಿಯೇ ಮಕ್ಕಳಿಗೆ ಆದಷ್ಟು ವಚನಗಳನ್ನು ತಿಳಿಸಿ ಹೇಳುವಂತೆ ಆಗಬೇಕು”ಎಂದರು. ಶ್ರೀಮತಿ ತಬಸುಂ, ವ್ಯವಸ್ಥಾಪಕರು “ಸ್ನೆಹದೀಪ ಆಶ್ರಮ” ಇವ ಸಾಧನೆಗೆ ಇವರನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷೆ ಶ್ರೀಮತಿ ಸುಮಾ ಅರುಣ್ ಮಾನ್ವಿ “12ನೇ…

Read More

Intach Mangaluru Chapter, in collaboration with Art Kanara Trust, released a new illustrated booklet, “Chennu: Mangaluru City Profile,” on Saturday, January 21, 2023, at 5:00 PM at Kodialguthu Centre for Art and Culture, CG Road, Balall Bagh, Mangalore. Akshy Sridhar, Commissioner, Mangaluru City Corporation, released the book in the presence of Subhas Basu, Convener, Intach Mangaluru Chapter, and Niren Jain, Co-convener. Addressing the gathering, Akshy Sridhar said, “It is essential to preserve our heritage and maintain our cultural links. The heritage community should draft a proper working methodology and systematic approach.” He assured them that the City Corporation would extend…

Read More

ಪ್ರಿಯರೇ ಬಳ್ಕೂರು ಯಕ್ಷ ಕುಸುಮ ಟ್ರಸ್ಟ್ ನಲ್ಲಿ ನಡೆದ ಕೃಷ್ಣ ಗಾರುಡಿ ಮತ್ತು ಜಾಂಬವತಿ ಯಕ್ಷಗಾನವನ್ನು ದೀಪ ಬೆಳಗುವ ಮೂಲಕ ರಂಗ ಸಂಗಾತಿಯ ಅಧ್ಯಕ್ಷರಾದ ಶ್ರೀಯುತ ಗೋಪಾಲ ಶೆಟ್ಟಿ ಅವರು ದೀಪ ಬೆಳಗುವ ಮೂಲ ಉದ್ಘಾಟಿಸಿದರು. ನಿಮ್ಮೆಲ್ಲರ ಸಹಕಾರದಿಂದ ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮವು ಯಶ್ವಸಿಯಾಗಿ ಮೂಡಿಬಂದಿದೆ. ತೆಂಕಿನ ನೆಲದಲ್ಲಿ ಬಡಗಿನ ಆಟಕ್ಕೆ ಪ್ರೇಕ್ಷಕರ ಒಲವು ಇದೆ ಎನ್ನುವುದಕ್ಕೆ ಸಾಕ್ಷಿಯಾದ ಪ್ರೇಕ್ಷಕರ ಸಮೂಹವೇ ಸಾಕ್ಷಿ. ತಮಗೆಲ್ಲರಿಗೂ ರಂಗಸ್ಥಳ ಮಂಗಳೂರು, ಭಗವತೀ ದೇವಸ್ಥಾನ ಮತ್ತು ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನದ ಪರವಾಗಿ ಧನ್ಯವಾದಗಳು , ಎಲ್ಲಾ ಗಣ್ಯರು ಸೇರಿದಂತೆ ಹೋಟೇಲ್ ಓಶಿಯನ್ ಪರ್ಲ್ ವೈಸ್ ಪ್ರೆಸಿಡೆಂಟ್ ಶ್ರೀ ಗಿರೀಶ್ ಮತ್ತು ಉತ್ತರ ದಕ್ಷಿಣ ವಿಭಾಗದ ಶಾಸಕರಾದ ಡಿ ವೇದವ್ಯಾಸ್ ಕಾಮತ್ ಅವರು ಆಗಮಿಸಿ ಶುಭ ಹಾರೈಸಿದರು ಶ್ರೀ ಹಳ್ಳಾಡಿ ಜಯರಾಮ್ ಶೆಟ್ಟಿ ಮತ್ತು ಶ್ರೀ ರಂಜಿತ್ ಕುಮಾರ್ ಅವರಿಗೆ ಬಳ್ಕೂರು ಯಕ್ಷ ಕುಸುಮ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.

Read More