Author: roovari

ಸುಳ್ಯ : ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಬೇತಿ ಶಿಬಿರವು ದಿನಾಂಕ 26-11-2023ರಂದು ಉದ್ಘಾಟನೆಗೊಂಡಿತು. ಬಾಳಿಲ ವಿದ್ಯಾಬೋಧಿನಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಶ್ರೀ ವೆಂಕಟೇಶ್ ಕುಮಾರ್ ಇವರು ತರಬೇತಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಯಕ್ಷಗಾನ ಸಮಿತಿ ಅಧ್ಯಕ್ಷರಾದ ಶ್ರೀ ನವೀನ್ ಕುಮಾರ್ ಅರಳಿಕಟ್ಟೆ, ಎಣ್ಮೂರು ಸರಕಾರಿ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ಲಿಂಗಪ್ಪ ಬೆಳ್ಳಾರೆ, ಯಕ್ಷಗಾನ ಗುರುಗಳಾದ ಶ್ರೀ ಬಾಲಕೃಷ್ಣ ನಾಯ‌ರ್ ನೀರಬಿದಿರೆ, ಪೋಷಕರ ಸಮಿತಿಯ ನಾಗಪ್ಪ ಗೌಡ ಪಾಲೆಪ್ಪಾಡಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಾಜೇಶ್ವರಿ ದೊಡ್ದತೋಟ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಸಾನ್ವಿ, ನಿಶಾ, ಅಕ್ಷತಾ ನೆರವೇರಿಸಿದರು. ಉಪಾಧ್ಯಕ್ಷರಾದ ರಾಜೀವಿ ಉದ್ದಂಪಾಡಿ ಸ್ವಾಗತಿಸಿ, ಶ್ರೀಮತಿ ಅಮಿತ ಲಾವಂತಡ್ಕ ಕಾರ್ಯಕ್ರತು ನಿರೂಪಿಸಿದರು. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀಮತಿ ರಾಜೇಶ್ವರಿ ವಂದಿಸಿದರು.

Read More

ಕಾಸರಗೋಡು : ಕಾಸರಗೋಡು ಸಾಂಸ್ಕೃತಿಕ -ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿ ಮತ್ತು ಅದರ ಸಹ ಘಟಕಗಳಾದ ನಾರಿ ಚಿನ್ನಾರಿ, ಸ್ವರ ಚಿನ್ನಾರಿ ಜೊತೆಗೆ ಕಾಸರಗೋಡಿನ ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ 2021ನೇ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ ಪ್ರಶಸ್ತಿಗೆ ಭಾಜನರಾದ ಸುಬ್ರಹ್ಮಣ್ಯ ನಾರಾಯಣ ಬಾಡೂರು (ಬಾನಾಸು) ಅವರಿಗೆ ಹುಟ್ಟೂರ ಗೌರವ ಪ್ರಶಸ್ತಿ ಕಾರ್ಯಕ್ರಮವು ದಿನಾಂಕ 01-12-2023 ರಂದು ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಿತು. ಹುಟ್ಟೂರ ಗೌರವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಮಾತನಾಡಿ “ಕಾಸರಗೋಡಿನ ಕನ್ನಡ ಪರ ಸಂಘಟನೆಗಳು ಕೈ ಜೋಡಿಸಿದರೆ ಕಾಸರಗೋಡಿನ ಕನ್ನಡಿಗರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು. ಸುಬ್ರಹ್ಮಣ್ಯ ಬಾಡೂರು ಅವರ ರಾಷ್ಟ್ರ ಮಟ್ಟದ ಸಾಧನೆ ಕಾಸರಗೋಡಿನ ಕನ್ನಡಿಗರಿಗೆಲ್ಲ ಕೀರ್ತಿ ತಂದಿದೆ.” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ನಟಿಯಾದ ಶಾಸಕಿ ಉಮಾಶ್ರೀ…

Read More

ಮಣಿಪಾಲ : ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ದಿನಾಂಕ 26-11-2023 ಮತ್ತು 27-11-2023ರಂದು 76ನೇ ವಾರ್ಷಿಕ ಭಜನ ಏಕಾಹ ನಡೆಯಿತು. ಮಹಾರಾಷ್ಟ್ರ ಸಿಂಧುದುರ್ಗಾ ಕುಡಾಳ್‌ನ ಶ್ರೀ ಜಗನ್ನಾಥ ಮ್ಯೂಸಿಕ್ ಸ್ಕೂಲ್ ಪಕ್ವಾಜ್ ಅಲಂಕಾರ್ ಮಹೇಶ್ ವಿಟ್ಠಲ್ ಸಾವಂತ್ ಅವರ ನೇತೃತ್ವದ ನೂರು ಮಂದಿ ಕಲಾವಿದರ ತಂಡದಿಂದ ವಿಶೇಷ ಆಕರ್ಷಣೆಯಾಗಿ ಪಕ್ಷಾಜ್-ತಬಲಾ-ಡೋಲಕ್ ಜುಗಲ್‌ ಬಂದಿ ಮತ್ತು ಶತ ಮೃದಂಗ ವಾದನ ‘ಭಜನ ರಂಗ್’ ಕಾರ್ಯಕ್ರಮವನ್ನು ಶ್ರೀ ಪೂರ್ಣಾನಂದ ಸ್ಮೃತಿ ಮಂಟಪದಲ್ಲಿ ಹಿರಿಯರಾದ ಎಸ್.ಕೆ. ಸಾಮಂತ್ ಉದ್ಘಾಟಿಸಿ ಶುಭ ಹಾರೈಸಿದರು. ಆಕಾಶವಾಣಿ ಆಲ್ ಇಂಡಿಯಾ ರೇಡಿಯೋ ಕಲಾವಿದರು, ಪಕ್ವಾಜ್ ವಿಶಾರದರು, ಡೋಲಕ್ ಕಲಾವಿದರು, ತಬಲಾ ವಿಶಾರದರು ಸೇರಿದಂತೆ ವೋಕಲ್, ಹಾರ್ಮೋನಿಯಂ ವಾದಕರನ್ನು ಹೊಂದಿದ ಕಲಾ ತಂಡವು ಚಿಕ್ಕ ವಯಸ್ಸಿನಿಂದ ಹಿಡಿದು ಹಿರಿಯರನ್ನು ಒಳಗೊಂಡಿದೆ. 75 ಮಂದಿ ಪಕ್ವಾಜ್ ಕಲಾವಿದರು, ನಾಲ್ವರು ತಬಲಾ ವಾದಕರು, ಇಬ್ಬರು ಡೋಲಕ್ ವಾದಕರು ಹಾಗೂ ಉಳಿದಂತೆ ಇತರೆ ಪಕ್ಕವಾದ್ಯಗಳೊಂದಿಗೆ ಗಾನ ಸಂಗೀತ ವಿಶಾರದರನ್ನು ಸೇರಿದ ನೂರು ಮಂದಿಯ ತಂಡದಿಂದ ಭಜನ…

Read More

ಸುರತ್ಕಲ್ : “ರಂಗಚಾವಡಿ” ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್‌ ಫೇರ್‌ ಅಸೋಸಿಯೇಶನ್ ಸುರತ್ಕಲ್ ಸಹಯೋಗದೊಂದಿಗೆ ರಂಗಚಾವಡಿ ವರ್ಷದ ಹಬ್ಬ ಹಾಗೂ ರಂಗಚಾವಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 03-12-2023 ರಂದು ಸುರತ್ಕಲ್ಲಿನ  ಬಂಟರ ಭವನದಲ್ಲಿ ಜರುಗಿತು. ಖ್ಯಾತ ರಂಗಕರ್ಮಿ, ನಾಟಕ ರಚನೆಕಾರ-ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ದಂಪತಿಯನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರಿಗೆ ‘ರಂಗಚಾವಡಿ-2023’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉದ್ಘಾಟನೆ ನೆರವೇರಿಸಿ ಮಾತಾಡಿದ ಹೇರಂಬ ಇಂಡಸ್ಟ್ರೀಸ್ ಮುಂಬೈ ಇದರ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಅವರು, “ರಂಗಚಾವಡಿ ಸಂಘಟನೆ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ಶ್ಲಾಘನೀಯ ವಿಚಾರ. ಇಂದು ಸನ್ಮಾನಿಸಲ್ಪಟ್ಟಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಸಾಧನೆ ಹಾಗೂ ಮಹಾ ವ್ಯಕ್ತಿತ್ವ ಮೆಚ್ಚುವಂತದ್ದು. ರಂಗಚಾವಡಿ ಮಂಗಳೂರು ಸಂಸ್ಥೆ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಿದೆ. ಅತ್ಯಂತ ಯೋಗ್ಯ ವ್ಯಕ್ತಿಯನ್ನು ಸನ್ಮಾನಿಸಿರುವುದು ಖುಷಿ ತಂದಿದೆ. ದೇವರು ಕೊಡಿಯಾಲ್ ಬೈಲ್…

Read More

ಮುಡಿಪು : ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ‌ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ‌ ಯಕ್ಷ ಕಲಾವಿದರ ಸ್ವಗತ ‘ಯಕ್ಷಾಯಣ’ ಸರಣಿ ಕಾರ್ಯಕ್ರಮದ ಉದ್ಘಾಟನೆ ಮಂಗಳೂರು ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ದಿನಾಂಕ 01-12-2023ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ “ಕಲಾವಿದನ ಬದುಕು, ಯಕ್ಷಗಾನ ಕಟ್ಟಿಕೊಡುವ ಹಾಗೂ ಅದನ್ನು ಮುಂದಿನ ಪರಂಪರೆಗೆ ದಾಟಿಸುವ ಪ್ರಯತ್ನವನ್ನು ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರವು ದಾಖಲೀಕರಣದ ಮೂಲಕ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಕಲಾವಿದರ ಸ್ವಗತದಿಂದ ಸಾಂಸ್ಕೃತಿಕ ಚರಿತ್ರೆ ಅನಾವರಣಗೊಳ್ಳಲಿದೆ. ಯಕ್ಷಗಾನ ಸ್ಥಳೀಯವಾಗಿ ನಮ್ಮ ಕರಾವಳಿಯಲ್ಲಿ ಹುಟ್ಟಿ ಬೆಳೆದ ಕಲೆಯಾದರೂ ಯಕ್ಷಗಾನ ಅದೊಂದು ರಾಷ್ಟ್ರೀಯ ಕಲೆ. ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿರುವ ಯಕ್ಷಗಾನ ಬೆಳೆಯುವುದಕ್ಕೆ ಅನೇಕ ಕಲಾವಿದರ ಕೊಡುಗೆಯೂ ಇದೆ. ಯಕ್ಷಗಾನ ರಂಗಕ್ಕೆ ಡಾ.ಪ್ರಭಾಕರ ಜೋಶಿಯರ ಕೊಡುಗೆ ಅಪಾರವಾಗಿದ್ದು, ಹಲವು ದಶಕಗಳ ಯಕ್ಷಪಯಣದ…

Read More

ದೇವರನ್ನು ಕಾಣಲು ತಪಸ್ಸು ಮಾಡಬೇಕಾಗಿಲ್ಲ. ಕಾಶಿ, ಕೈಲಾಸ, ಮಂದಿರ, ಬಸದಿ, ದರ್ಗಾಗಳಿಗೆ ಹೋಗಬೇಕಾಗಿಲ್ಲ. “ದಿವ್ಯಾಂಗ ಪ್ರತಿಭೆಗಳಿರುವ ಬಿರುಮಲೆ ಬೆಟ್ಟದಲ್ಲಿ ಇರುವ ‘ಪ್ರಜ್ಞಾಶ್ರಮ’ಕ್ಕೆ ಹೋದರೆ ಸಾಕು. ಅಲ್ಲಿ ದೇವರಂಥ ‘ಪ್ರಜ್ಞೆಯ ಬೆಳಕು’ಗಳಿವೆ. ಡಿಸೆಂಬರ್ 03 ‘ವಿಶ್ವ ವಿಕಲಚೇತನರ ದಿನ’ ನಾವೆಲ್ಲ ಅಂಗಾಂಗ ಸರಿ ಇದ್ದು ಹುಟ್ಟಿದ್ದೇವೆ.. ಆದರೂ ‘ವಿವೇಕ, ಆ-ನಂದದಾ ಬೆಳಕು ಇನ್ನೂ ಬೆಳಗಿಲ್ಲ.’ ಯಾವುದೋ ಕಾರಣದಿಂದ ಭಿನ್ನವಾಗಿ, ತಾಯಿಯ ಗರ್ಭದಿಂದ ಈ ಲೋಕದ ಬೆಳಕು ಕಂಡ ಮಗು, ಕಣ್ಣು, ಕಿವಿ, ಬಾಯಿ ಬಾರದೆ, ನಡೆಯಲು ಕಾಲಿಲ್ಲದೆ…ಬರೆಯಲು-ದುಡಿಯಲು ಕೈಗಳಿಲ್ಲದೆ, ಎಲ್ಲಾ ಇದ್ದು ಪ್ರಜ್ಞೆಯೇ ಇಲ್ಲದ ಮಗುವನ್ನು “ತನಗೆ ವರ ಎಂದು ಕಾಣುವ ತಾಯಿ ಕ್ಷಮಯಾಧರಿತ್ರಿ.” ಒಂದು ಕಾಲದಲ್ಲಿ ಅಂತಹ ಮಕ್ಕಳು ಶಾಪ ಎಂದು ಭಾವಿಸಿ ಕತ್ತಲ ಕೋಣೆಯೊಳಗೆ, ಕೈ-ಕಾಲುಗಳಿಗೆ ಸರಪಳಿಹಾಕಿ ಕೂಡಿಟ್ಟದ್ದೂ ಇದೆ. ಆದರೆ, ಕಾಲ ಬದಲಾಗಿದೆ. ವಿಶ್ವ ಸಂಸ್ಥೆ ಭಿನ್ನ ರೀತಿಯಲ್ಲಿ ಹುಟ್ಟಿದ ಮಗುವೂ ರಾಷ್ಟ್ರದ-ವಿಶ್ವದ ಆಸ್ತಿ ಎಂದು ಪರಿಗಣಿಸಿ, 03-12-1992ರಿಂದ “ವಿಶ್ವ ಅಂಗವಿಕಲರ ದಿನ” (International days of persons…

Read More

ಬೆಂಗಳೂರು : ರಂಗ ವಿಸ್ಮಯ ನಾಟಕ ತಂಡವು ಪ್ರತಿ ಭಾನುವಾರ ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ 18ನೇ ಕ್ರಾಸ್, ಬಸ್ ನಿಲ್ದಾಣದ ಹಿಂಭಾಗ ಮಲ್ಲೇಶ್ವರದ ವಿಸ್ಮಯ ಅಂಗಳದಲ್ಲಿ, ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ಇಡೀ ದಿನ ‘ಅಭಿನಯ ತರಬೇತಿ’ ನೀಡುತ್ತಿದೆ. ಈ ಶಿಕ್ಷಣ ಮುಜುಗರ, ನಾಚಿಕೆ, ಸಂಕೋಚ ಹಾಗೂ ಅಂಜಿಕೆಗಳನ್ನು ಹೋಗಲಾಡಿಸಿ ವಾಕ್ಚಾತುರ್ಯ ಬೆಳೆಸುವುದಲ್ಲದೆ, ಕನ್ನಡ ಭಾಷಾಜ್ಞಾನ, ನೆನಪಿನ ಶಕ್ತಿ ಮತ್ತು ಆಲೋಚನಾ ಮಟ್ಟವನ್ನು ಹೆಚ್ಚಿಸಲಿದೆ. ಇದರೊಂದಿಗೆ, ಅಭಿನಯದ ಎಲ್ಲಾ ಆಯಾಮಗಳಲ್ಲಿ ತರಬೇತಿ ನೀಡಲಾಗುವುದು. ಯಾವುದೇ ವಯಸ್ಸಿನ ಆಸಕ್ತರು ಇದರಲ್ಲಿ ಭಾಗವಹಿಸಬಹುದಾಗಿದೆ. ಇನ್ನಿತರ ವಿವರಗಳಿಗೆ ನಿರ್ದೇಶಕರಾದ ಅ.ನಾ.ರಾವ್ ಜಾದವ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಕರೆಮಾಡಿ ಬನ್ನಿ. ಹಾಗೇ ಇನ್ನಿತರ ಆಸಕ್ತರಿಗೂ ತಿಳಿಸಿ – ಸಂಪರ್ಕ: ಮೊ.9880841290 / 8951656099. ರಂಗ ವಿಸ್ಮಯ : ಹೊಸ ಪ್ರತಿಭೆಗಳನ್ನು ರಂಗಕ್ಕೆ ತರುವ ಸಲುವಾಗಿಯೇ ರಂಗವಿಸ್ಮಯ ಪ್ರತಿ ಭಾನುವಾರ ವಿದ್ಯಾರ್ಥಿಗಳಿಗೆ ಅಭಿನಯ ತರಬೇತಿ ನೀಡುತ್ತಿದೆ. ಭಾಷೆ ಮತ್ತು ಅದರ ಬಳಕೆಗೆ ಹೆಚ್ಚು ಪ್ರಾಶಸ್ತ್ಯ ನೀಡಿ, ಅಭಿನಯದ ವಿವಿಧ…

Read More

ಬಂಟ್ವಾಳ : ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕದ ವತಿಯಿಂದ ವಿಶ್ವಶಾಂತಿಗಾಗಿ ಸಾಮಾಜಿಕ ಸ್ವಚ್ಛತಾ ಅಭಿಯಾನ ಎಂಬ ವಿನೂತನ ಕಾರ್ಯಕ್ರಮ ಬಿ.ಸಿ. ರೋಡಿನ ಕನ್ನಡ ಭವನದಲ್ಲಿ ದಿನಾಂಕ 02-12-2023ರಂದು ಉದ್ಘಾಟನೆಗೊಂಡಿದೆ. ಕುಮಾರ ಶಿವಕುಮಾರ್ ಬೋಳಂತೂರು ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು “ಪರಿಸರ ಸ್ವಚ್ಛತೆಯಂತೆ ಸಾಮಾಜಿಕ ಸ್ವಚ್ಛತೆಯನ್ನೂ ಮಾಡಲೇಬೇಕಾದ ಕಾಲಘಟ್ಟವಿದು. ಪರಸ್ಪರ ಹೊಂದಾಣಿಕೆ, ಸ್ನೇಹ, ಸಹಜೀವನ, ಸಹಕಾರ, ಪ್ರೀತಿ, ಸಮಯ ಪಾಲನೆ ಮುಂತಾದ ಬದುಕಿನ ಅನಿವಾರ್ಯ ಅಂಶಗಳ ಕೊರತೆಯನ್ನು ನೀಗಿ, ಸದ್ಭಾವಪೂರ್ಣ, ಶಾಂತ ಮನಸ್ಕ ಸಮಾಜ ನಿರ್ಮಾಣದಲ್ಲಿ ಸಾಮಾಜಿಕ ಸ್ವಚ್ಛತಾ ಅಭಿಯಾನ ಬೆಂಬಲವಾಗಿ ಕೂಡಿ ಬರಲಿ” ಎಂದರು. ಇದೇ ಸಂದರ್ಭದಲ್ಲಿ ಸಾಹಿತಿ ಭಾಸ್ಕರ ಅಡ್ವಳ ವಿರಚಿತ ‘ಘಮ ಘಮಿಸುವ ಗುಟ್ಟು’ ಎಂಬ ಜೀವನ ಮೌಲ್ಯಗಳ ಚಿಂತನಾ ಕೃತಿಯನ್ನು ಓಜಾಲ ಸ.ಹಿ.ಪ್ರಾ ಶಾಲಾ 7ನೇ ತರಗತಿ ವಿದ್ಯಾರ್ಥಿನಿ, ಎಳೆಯ ಸಾಹಿತಿ ಕುಮಾರಿ ಶ್ರುತಿಕಾ ಬಾಕಿಮಾರು ಅನಾವರಣಗೊಳಿಸಿದರು. ಈ ಕೃತಿಯು ಸಾಮಾಜಿಕ ಸ್ವಚ್ಛತಾ ಅಭಿಯಾನ…

Read More

ಮುಂಬೈ : ಮುಂಬೈ ವಿವಿ ಕನ್ನಡ ವಿಭಾಗ, ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬೈ ಇವರ ಸಂಯುಕ್ತ ಆಯೋಜನೆಯಲ್ಲಿ ಮುಂಬಯಿಯ ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್ಸಿನಲ್ಲಿರುವ ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ. ನಾಯಕ್ ಭವನದಲ್ಲಿ ‘ವ್ಯಾಸರಾಯ ಬಲ್ಲಾಳ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮವು ದಿನಾಂಕ 01-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವ್ಯಾಸರಾಯ ಬಲ್ಲಾಳ ಚೊಚ್ಚಲ ‘ಕಥಾ ಪ್ರಶಸ್ತಿ’ ಸ್ವೀಕರಿಸಿದ ಹಿರಿಯ ಸಾಹಿತಿ ಪ್ರೊ. ಕೃಷ್ಣಮೂರ್ತಿ ಹನೂರ ಅವರು ಅಂದು ‘ಕತೆಗಾರರಾಗಿ ವ್ಯಾಸರಾಯ ಬಲ್ಲಾಳ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. “ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ ಅವರಂತಹ ದೊಡ್ಡ ದೊಡ್ಡ ಲೇಖಕರೆಲ್ಲ ತಮ್ಮ ಬರಹಗಳಲ್ಲಿ ಬದುಕಿನ ಪ್ರಯಾಣದ ಕುರಿತಾಗಿ ನಿರಂತರವಾಗಿ ಬರೆಯುತ್ತಾರೆ. ಬಲ್ಲಾಳರು ತಮ್ಮ ಕೃತಿಗಳಲ್ಲಿ ತಮ್ಮ ತೊಳಲಾಟಗಳನ್ನು, ಪಯಣವನ್ನು, ಅನುಭವಗಳನ್ನು ಬರೆಯುತ್ತಾ ಅದರ ಮೂಲಕ ಓದುಗರನ್ನು ಜಾಗೃತಗೊಳಿಸುವ ಮತ್ತು ಬದುಕಿನ ಪಥದಲ್ಲಿ ಒಳ್ಳೆಯದನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಾರೆ. ಕ್ಷಮಿಸುವುದರಲ್ಲಿಯೇ ಘನತೆ, ದೊಡ್ಡಸ್ತಿಕೆ ಇದೆಯೆಂಬ ಭಾವ ಅವರ ಎಲ್ಲಾ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆಯಲ್ಲಿ ಇರುವ  ಪರಿಷತ್ತಿನ ಕೃಷ್ಣರಾಜ ಮಂದಿರದಲ್ಲಿ ಹಮ್ಮಿಕೊಂಡ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 03-12-2023ರಂದು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಎಲ್ಲ ಧರ್ಮಗಳ ಗುರಿಯೂ ಒಂದೇ. ಕೃಷ್ಣ-ಕ್ರೈಸ್ತರ ವಿಚಾರಗಳಲ್ಲಿ ವ್ಯತಾಸಗಳಿಲ್ಲ. ಅದರಂತೆ ಸಾಹಿತ್ಯಕ್ಕೂ ಯಾವುದೇ ಗಡಿ ಎನ್ನುವುದಿಲ್ಲ. ಕನ್ನಡ ಭಾಷೆಗೆ ಕ್ರೈಸ್ತ ಧರ್ಮದ ಕೊಡುಗೆ ಅಪಾರ. ಕನ್ನಡಕ್ಕೆ ನಿಘಂಟು ಸೇರಿದಂತೆ ಅನೇಕ ಐತಿಹಾಸಿಕ ಕೊಡುಗೆಯನ್ನು ನೀಡುವ ಮೂಲಕ ಭಾಷೆಗೆ ಧರ್ಮ ಅಡ್ಡಿಯಲ್ಲ ಎನ್ನುವುದು ಸ್ಪಷ್ಟ. ಫಾದರ್ ಚೌರಪ್ಪ ಸೆಲ್ವರಾಜ್ ಸಾಹಿತ್ಯಿಕ, ಸಾಂಸ್ಕೃತಿಕ, ಬಳಗದಲ್ಲಿ ‘ಚಸರಾ’ ಎಂದೇ ಪರಿಚಿತರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಸರಾ ಚರ್ಚ್ಗಳಲ್ಲಿ ಕನ್ನಡ ಬಳಕೆ, ಕನ್ನಡಿಗರಿಗೆ ದೊರೆಯಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ಮಾಡಿದವರು. ಕನ್ನಡಪರ ಕಾಳಜಿ ಮತ್ತು ಜನಪರ ಕಾಳಜಿಯಿಂದ ಚಸರಾ ಪ್ರಗತಿಪರ ಹೋರಾಟಗಾರರಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ…

Read More