Subscribe to Updates
Get the latest creative news from FooBar about art, design and business.
Author: roovari
ಕೊಡಗು : ಕುಶಾಲನಗರದ ‘ಕನ್ನಡಸಿರಿ ಸ್ನೇಹ ಬಳಗ’ ಮತ್ತು ‘ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು’ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಗಟ್ಟಿಮೇಳದೊಂದಿಗೆ ‘ಸಾಹಿತ್ಯ ಸಂಭ್ರಮ’ವು ದಿನಾಂಕ 18-02-2024ರಂದು ವಿರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಚಿ. ಸೌ. ಕಾವ್ಯಶ್ರೀ ಮತ್ತು ಚಿ.ರಾ. ರಾಜು ಸಿ. ಇವರ ವಿವಾಹೋತ್ಸವದ ಗಟ್ಟಿಮೇಳದೊಂದಿಗೆ ಗಾಯನ ಗೋಷ್ಠಿ, ಹನಿಗವನದ ಕವಿಗೋಷ್ಠಿ ಮತ್ತು ಖ್ಯಾತ ಸಾಹಿತಿ ಕಿಗ್ಗಾಲು ಎಸ್. ಗಿರೀಶ್ರವರ ‘ಮಾಯವಾದ ಮಾಯಾಂಗನೆ’ ಎಂಬ ಕೃತಿ ಲೋಕಾರ್ಪಣೆ ಇರುತ್ತದೆ. ಕವಿ ಹಾಗೂ ಕವಯತ್ರಿಯರಿಗೆ ತಪ್ಪದೇ ಆರು ಸಾಲಿನ ಹನಿಗವನ (ದಾಂಪತ್ಯ ಕುರಿತು) ಅಥವಾ ನಾಲ್ಕು ಸಾಲಿನ ಒಂದು ಚುಟುಕು ವಾಚನಕ್ಕೆ ಅವಕಾಶ ಇದೆ. ಕವನ ವಾಚನ ಮಾಡಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಗುವುದು.
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ‘ವಿವೇಕವಾಣಿ’ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂವತ್ತೆರಡನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 13-02-2024ರಂದು ಮಂಗಳೂರಿನ ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಸ್ವಾಮಿ ವಿವೇಕಾನಂದರ ನಾಯಕತ್ವ ಮತ್ತು ನಿರ್ವಹಣೆಯ ಪಾಠಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಬೆಂಗಳೂರಿನ ವಿವೇಕಾನಂದ ಯೂತ್ ಮೂವ್ಮೆಂಟ್ ಇದರ ಸಿ. ಇ. ಓ ಕಚೇರಿಯಲ್ಲಿ ವ್ಯವಸ್ಥಾಪಕರಾಗಿರುವ ಶ್ರೀ ಸಂದೀಪ್ ವಸಿಷ್ಠ “ಸ್ವಾಮಿ ವಿವೇಕಾನಂದರ ತತ್ವಗಳಾದ ಸೇವೆ ಮತ್ತು ತ್ಯಾಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಾಯಿ ಭಾರತಿಯ ಪೂಜೆಯನ್ನು ಮಾಡುತ್ತಾ ದೀನರ, ದಲಿತರ ಮತ್ತು ದುಃಖಿಗಳ ಸಮಸ್ಯೆಗಳನ್ನು ಅರಿತುಕೊಳ್ಳುವವರಾಗಬೇಕು. ನಮ್ಮ ಗುರಿಗಳು ಯಾವಾಗಲೂ ಅತೀ ಎತ್ತರದಲ್ಲಿರಬೇಕು ಹಾಗೆ ಆ ಗುರಿಯನ್ನು ತಲುಪುವಲ್ಲಿ ತಾಳ್ಮೆಯಿಂದ ಪರಿಶ್ರಮಿಸಬೇಕು. ನೇತೃತ್ವವನ್ನು ವಹಿಸಿಕೊಳ್ಳುವುದು ಒಂದು ಒಳ್ಳೆಯ ನಾಯಕತ್ವದ ಗುಣ ಮತ್ತು ಸರಿಯಾದ ರೀತಿಯಲ್ಲಿ ಆಯೋಜನೆ ಮಾಡುವುದೇ ನಿರ್ವಹಣೆ.” ಎಂದು ಹೇಳಿದರು. ಎ. ಜೆ. ಇನ್ಸ್ಟಿಟ್ಯೂಟ್ ಆಫ್…
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಮೂಡುಪೆರಂಪಳ್ಳಿ ಶಿವಳ್ಳಿ ಗ್ರಾಮ ಇಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ದಿನಾಂಕ 11-02-2023ನೇ ರವಿವಾರ ‘ಶ್ರೀ ರಾಮ ದರ್ಶನ’ ಎಂಬ ತಾಳಮದ್ದಳೆ ಶ್ರೀ ದೇವಳದ ಪ್ರಾಂಗಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್, ರಾಮ ಪ್ರಕಾಶ್ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ, ಶುಭಾ ಜೆ.ಸಿ. ಅಡಿಗ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವಂತ) ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ), ವಿದ್ಯಾಲಕ್ಷ್ಮಿಆರ್. ಭಟ್ (ಜಾಂಬವತಿ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಹರಿಕೃಷ್ಣ ಶಿವತಾಯ ವಂದಿಸಿದರು. ಈ ಕಾರ್ಯಕ್ರಮವನ್ನು ರಾಜಶ್ರೀ ಶಬರಾಯ, ನಾರಾಯಣ ಶಬರಾಯ ದಂಪತಿಗಳು ಪ್ರಾಯೋಜಿಸಿದರು.
ಮಂಗಳೂರು : ಯಕ್ಷಗಾನ ಕಲಾವಿದ, ಯಕ್ಷಗುರು ವರ್ಕಾಡಿ ಶ್ರೀ ರವಿ ಅಲೆವೂರಾಯರ ಷಷ್ಠ್ಯಬ್ದಿ ಪ್ರಯುಕ್ತ ‘ಅಲೆವೂರಾಯಾಭಿನಂದನಮ್’ ಕಾರ್ಯಕ್ರಮವು ದಿನಾಂಕ 11-02-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿಗಳವರು “ಕಲೆಯ ಮೂಲ ಸ್ವರೂಪದ ಉಳಿಸಿಕೊಳ್ಳುವಿಕೆ ಹಾಗೂ ಬೆಳವಣಿಗೆಗೆ ವರ್ಕಾಡಿ ರವಿ ಅಲೆವೂರಾಯರಂತಹಾ ಕಲಾವಿದರು; ಗುರುಗಳು ಇಂದು ಬೇಕಾಗಿದ್ದಾರೆ. ಎಳೆಯ ಪೀಳಿಗೆಗೆ ಯಕ್ಷಗಾನವನ್ನು ಅದರಂತೆಯೇ ತಲುಪಿಸುವಲ್ಲಿ ಉತ್ತಮ ಯಕ್ಷಗುರುಗಳು ಶ್ರಮಿಸುತ್ತಾರೆ. ಅಂಥವರಲ್ಲಿ ಶ್ರೀಮಠದ ಪ್ರೀತಿಪಾತ್ರ ಶಿಷ್ಯರಾದ ಅಲೆವೂರಾಯರು ಬಹಳ ಮುಂಚೂಣಿಯಲ್ಲಿದ್ದಾರೆ. ಶ್ರೀಮಠದ ಮೇಳದಲ್ಲೂ ಕಲಾವಿದರಾಗಿ ದುಡಿದವರೂ ಆಗಿದ್ದಾರೆ. ಇಂದು ಅವರ ಷಷ್ಠ್ಯಬ್ದಿಯ ಆಚರಣೆಯ ಸಂದರ್ಭದಲ್ಲೂ ವಿವಿಧ ಮಕ್ಕಳ ಮೇಳಗಳನ್ನು ಇಲ್ಲಿಗೆ ಕರೆಸಿ ಪ್ರದರ್ಶನ ನೀಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಆಶೀರ್ವದಿಸಲು ನಾವೂ ಹೆಮ್ಮೆಪಡುತ್ತೇವೆ. ನಾವು ನಂಬಿಕೊಂಡು ಬಂದಿರುವ ಶ್ರೀದಕ್ಷಿಣಾಮೂರ್ತಿ ಸ್ವಾಮಿ ಇವರಿಗೆ ಉತ್ತಮ ಆಯುರಾರೋಗ್ಯ ನೀಡಿ ಅನುಗ್ರಹಿಸಲಿ ಎಂದು ಹೇಳಿದರು. “ಯಕ್ಷಗಾನ ರಂಗಭೂಮಿಯನ್ನು ಬಲವಾಗಿ ನಿಂತು ಬೆಳೆಸುವ…
ಉಡುಪಿ : ಮಾಹೆ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆಶ್ರಯದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ಬರೆದ ಮಾಚಾರು ಗೋಪಾಲ ನಾಯ್ಕ ಹೇಳಿದ ‘ಸಿರಿಸಂಧಿ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 10-02-2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ “ಜಗತ್ತಿನಲ್ಲೇ ಕರ್ನಾಟಕ ಜಾನಪದ ಸಂಸ್ಕೃತಿ ಅದ್ಭುತವಾಗಿದ್ದು, ಚಿನ್ನಪ್ಪ ಗೌಡರು ಬರೆದ ‘ಸಿರಿಸಂಧಿ’ ಕೃತಿಯೂ ತುಳುವ ನಾಡು ಸಹಿತ ರಾಜ್ಯದ ಇತರ ಭಾಗದ ಜಾನಪದಗಳ ಅಧ್ಯಯನಕ್ಕೂ ಮೇಲ್ಪಂಕ್ತಿಯಾಗಿದೆ. ತುಳುನಾಡು ವ್ಯಾಪ್ತಿ ಮಾತ್ರವಲ್ಲದೇ ಮಂಟೇಸ್ವಾಮಿ, ಮಲೆಮಹದೇಶ್ವರ, ಹಾಲುಮತ, ಕೃಷ್ಣಗೊಲ್ಲ ಮೊದಲಾದ ಜಾನಪದಗಳ ಅಧ್ಯಯನಕ್ಕೆ ಇದೊಂದು ಮಾರ್ಗದರ್ಶಿಯಾಗಿದೆ. ಸಿರಿ ಸಾಹಿತ್ಯದ ಬಗ್ಗೆ ನಿರಂತರ ಅಧ್ಯಯನ ಮುಂದುವರಿಯಬೇಕು” ಎಂದು ಹೇಳಿದರು. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, “ಯುವಜನರು ಕಲೆ, ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು” ಎಂದರು. ವಿಮರ್ಶಕ ಡಾ. ಬಿ. ಜನಾರ್ದನ್ ಭಟ್ ಕೃತಿ ಪರಿಚಯಿಸಿದರು.…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾ.ಮಂ. ಕೃಷ್ಣರಾಯರಿಗೆ ದಿ. ಟಿ. ಶ್ರೀನಿವಾಸ್ ಸ್ಮರಣಾರ್ಥ ‘ಶ್ರೀ ಪಿ.ಕೆ. ನಾರಾಯಣ’ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 13-02-2024ರಂದು ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಡಾ. ಮಹೇಶ ಜೋಶಿಯವರು “ಶಾ.ಮಂ. ಕೃಷ್ಣರಾವ್ ಅವರು ಗೋವಾ ಮತ್ತು ಕರ್ನಾಟಕದ ನಡುವಿನ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಿದ್ದಾರೆ. ಸ್ವತ: ತಾವು ಬರೆಯುವುದರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಬರಹಗಾರರನ್ನು ಬೆಳೆಸಿದ್ದಾರೆ ಎಂದು ವಿಶ್ಲೇಷಿಸಿದರು. ಗೋವಾದಲ್ಲಿ ತಾವು ದೂರದರ್ಶನದ ನಿರ್ದೇಶಕರಾಗಿದ್ದಾಗ ಅಲ್ಲಿದ್ದ ನಿರುದ್ವಿಗ್ನ ವಾತಾವರಣವನ್ನು ನೆನಪು ಮಾಡಿಕೊಂಡ ನಾಡೋಜ ಡಾ. ಮಹೇಶ ಜೋಶಿಯವರು ಅಂತಹ ಕಡೆ ಕನ್ನಡವನ್ನು ಕಟ್ಟಿ ಶಾ.ಮಂ. ಕೃಷ್ಣರಾಯರು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಗೋವಾದಲ್ಲಿ ಅವರು ಕನ್ನಡ ಶಾಲೆಗಳನ್ನು ಕಟ್ಟಿದರು, ಸೈಕಲ್ಲಿನಲ್ಲಿ ಮನೆ ಮನೆಗೆ ಹೋಗಿ ಕನ್ನಡ ಪತ್ರಿಕೆಗಳನ್ನು ತಲುಪಿಸಿ ವಾಚನಾಭಿರುಚಿ ಬೆಳೆಸಿದರು. ‘ಗೋವಾ ಕನ್ನಡ ಸಂಘ’, ‘ಗೋಮಾಂತ ಭಾರತಿ’, ‘ಕರ್ನಾಟಕ ಸಂಘ’ಗಳನ್ನು ಕಟ್ಟಿ ಕನ್ನಡಿಗರನ್ನು ಸಂಘಟಿಸಿದರು. ಒಮ್ಮೆ ಗೌರೀಶ ಕಾಯ್ಕಿಣಿಯವರು ಗೋವಾಗೆ…
ಮಂಗಳೂರು : ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ ಮಂಗಳೂರು (ರಿ) ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದಲ್ಲಿ ದಿನಾಂಕ 11-02-2024ರಂದು ಯಕ್ಷಗಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ‘ ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರವನ್ನು ಸ್ವೀಕರಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ 96 ವಯಸ್ಸಿನ ಸೂರಿಕುಮೇರು ಕೆ. ಗೋವಿಂದ ಭಟ್ ಮಾತನಾಡಿ “ಯಕ್ಷರಂಗವು ನನ್ನ ಬದುಕಿಗೆ ಅಭಿಮಾನಿಗಳ ಪ್ರೀತಿ ಮತ್ತು ಹೊಸತನದ ಸ್ಪೂರ್ತಿಯನ್ನು ನೀಡಿದೆ. ಅದು ಮರೆಯಲಾದ ಅವಿಸ್ಮರಣೀ ಕ್ಷಣಗಳು” ಎಂದು ಹೇಳಿದರು. ಇದೇ ಸಂದಂರ್ಭದಲ್ಲಿ ‘ಯಕ್ಷ ಕುಸುಮ ಯುವ ಪುರಸ್ಕಾರ’ವನ್ನು ಯುವ ಕಲಾವಿದ ಸಾತ್ವಿಕ್ ನೆಲ್ಲಿತೀರ್ಥ ಇವರಿಗೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಎಸ್.ಎಸ್. ನಾಯಕ್, ರಂಗಸ್ಥಳ ಮಂಗಳೂರು (ರಿ) ಸಂಸ್ಥೆಯ ಶ್ರೀ ಎಸ್.ಎಲ್. ನಾಯಕ್ ಮತ್ತು ಶ್ರೀ ದಿನೇಶ್ ಪೈ, ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನರೇಂದ್ರ ಎಲ್. ನಾಯಕ್, ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳದ…
ಮಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಮಹಿಳಾ ವೃಂದ ಮಂಗಳೂರು ವತಿಯಿಂದ ‘ಕೊಂಕಣಿ ದಿವಸ ಆಚರಣೆ’ಯು ದಿನಾಂಕ 21-01-2024ರಂದು ಮಂಗಳೂರಿನ ಗೋಕರ್ಣಮಠದ ದ್ವಾರಕಾನಾಥ ಭವನ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ನಂದಗೋಪಾಲ ಶೆಣೈ ಮಾತನಾಡಿ “ಜಿ.ಎಸ್.ಬಿ. ಮಹಿಳಾ ವೃಂದ ತಮ್ಮ ಸಮುದಾಯದ ಮಹಿಳೆಯರನ್ನು ಸಂಘಟನೆ ಮಾಡಿ ನಡೆಸಿಕೊಂಡು ಹೋಗುವ ಕಾರ್ಯ ಶ್ಲಾಘನೀಯ.” ಎಂದರು. ಇದೇ ಸಂದರ್ಭದಲ್ಲಿ ಕೊಂಕಣಿ ಸಮಾಜ ಸೇವಕ ಗಜಾನನ ಪೈ ತೋನ್ಸೆ ಹಾಗೂ ಕೊಂಕಣಿ ಸಾಹಿತಿ ಗೌರಿ ಮೌಲ್ಯ ಇವರನ್ನು ಸಮ್ಮಾನಿಸಲಾಯಿತು. ದಿ. ಸುಧಾ ಆರ್. ಶೆಣೈ ಸ್ಮರಣಾರ್ಥ ಪ್ರಶಸ್ತಿಯನ್ನು ತಾರಾ ಶೆಣೈ ಅವರ ಪರವಾಗಿ ಅವರ ಮಕ್ಕಳು ಸಮ್ಮಾನವನ್ನು ಸ್ವೀಕರಿಸಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಕೊಂಕಣಿ ಭಕ್ತಿಗೀತೆ ಹಾಗೂ ಭಾವಗೀತೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ವಸುಧಾ ಬಾಳಿಗಾ ನಡೆಸಿಕೊಟ್ಟರು. ಅಧ್ಯಕ್ಷೆ ನಯನಾ ರಾವ್ ಸ್ವಾಗತಿಸಿ, ಚಂದ್ರಿಕಾ ಮಲ್ಯ ನಿರೂಪಿಸಿ, ಕಾರ್ಯದರ್ಶಿ ವಿಜಯಲಕ್ಷ್ಮೀ ಕಾಮತ್ ವಂದಿಸಿದರು. ಮರೋಳಿ…
ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಧಮನಿ ಟ್ರಸ್ಟ್ (ರಿ.) ತೆಕ್ಕಟ್ಟೆ ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದೊಂದಿಗೆ ಶ್ರೀಶ ಭಟ್ ಬಳಗದವರಿಂದ ‘ರಂಗ ಸಂಗೀತ ಮತ್ತು ಶೂರ್ಪಣಖಾಯನ’ ನಾಟಕ ಪ್ರದರ್ಶನವು ದಿನಾಂಕ 04-02-2024ರಂದು ನಡೆಯಿತು ಇದೇ ಸಂದರ್ಭದಲ್ಲಿ ‘ಧಮನಿ ಟ್ರಸ್ಟ್’ ಇದರ ಲೋಗೋ ಅನಾವರಣಗೊಂಡಿತು. ಲೋಗೋ ಅನಾವರಣಗೊಳಿಸಿ ಮಾತನಾಡಿದ ಅರೆಹೊಳೆ ಸದಾಶಿವ ರಾವ್ “ಧಮನಿ ಧಮನಿಯಲ್ಲಿ ರಂಗಭೂಮಿಯ ರಕ್ತವನ್ನೇ ಹರಿಸುತ್ತಿರುವ ಶ್ರೀಶ ಅವರು ಹೊಸ ಟ್ರಸ್ಟ್ ಮೂಲಕ ಸಮಾಜಕ್ಕೆ ಬೆಳಕಾಗುವ ನಿಟ್ಟಿನಲ್ಲಿ ಇಂದಿನಿಂದ ನಾಂದಿ ಹಾಡಿದ್ದಾರೆ. ಶ್ರೀಶರ ರಂಗಭೂಮಿಯ ಮೇಲಿನ ಅದಮ್ಯ ಪ್ರೀತಿಗೆ ಮನಸೋಲದವರಿಲ್ಲ. ಅದರಲ್ಲೂ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡುವ ಕನಸನ್ನು ಹೊತ್ತಿರುವುದು ನಿಜಕ್ಕೂ ಶ್ಲಾಘನೀಯ. ಭವಿಷ್ಯಕ್ಕೆ ಕೊಡುಗೆಯಾಗುವ ಮಕ್ಕಳ ಮನಸ್ಸುಗಳೊಂದಿಗೆ ಬೆರೆಯುವ ಕಾಯಕ ನೋರ್ಮಡಿಯಾಗಲಿ.” ಎಂದು ಶುಭಹಾರೈಸಿದರು. ರಂಗ ನಿರ್ದೇಶಕ ಸದಾನಂದ ಬೈಂದೂರು ಮಾತನಾಡಿ “ವಿನಮ್ರ ವಿದ್ಯಾರ್ಥಿಯಾದ ಶ್ರೀಶ ಭಟ್ ಹುಟ್ಟು ಹಾಕಿಕೊಂಡ ಸಂಸ್ಥೆಗೆ ಹಿರಿಯ ಸಂಸ್ಥೆಯ ಸಹಾಯ ಹಸ್ತದ ನೆರವು ಸದಾ ಇರಬೇಕು.…
ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ಆಯೋಜಿಸಿದ ಎರಡು ದಿವಸಗಳ ಉಡುಪ ಸಂಸ್ಮರಣ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ‘ಕಲೋತ್ಸವ-2024’ ಇದರ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 11-02-2024ರ ಭಾನುವಾರದಂದು ಕೋಟದ ಪಟೇಲರ ಮನೆ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿ “ವಿದ್ವತ್ತು ಮತ್ತು ಜ್ಞಾನ ಭಂಡಾರದ ವಿಷಯದಲ್ಲಿ ಯಕ್ಷಗಾನ ಕಲಾವಿದರು ಸ್ನಾತಕೋತ್ತರ ಪದವಿ ಪಡೆದವರಿಗಿಂತ ಎಷ್ಟೋ ಮೇಲು. ಇಂದಿನ ಕೆಲವು ಯಕ್ಷಗಾನ ಪ್ರದರ್ಶನ ಕಂಡಾಗ ಮನಸ್ಸಿಗೆ ನೋವಾಗುತ್ತದೆ. ಕಲೆಯಲ್ಲಿ ಬದಲಾವಣೆ ಬೇಕು, ಆದರೆ ಆ ಬದಲಾವಣೆ ಒಳಿತಿನ ಆಶಯ ಹೊಂದಿರಬೇಕು. ಆ ದಿಸೆಯಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಶ್ರೀಧರ ಹಂದೆಯವರ ಮಕ್ಕಳ ಮೇಳ ಆದರ್ಶದ ಬೀಜ ಬಿತ್ತಿದೆ. ಅದು ಎಲ್ಲರಲ್ಲಿಯೂ ಸಾಕಾರಗೊಳ್ಳಬೇಕು” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅಮೃತೇಶ್ವರಿ ಮೇಳದ ಯಕ್ಷಗಾನ ಕಲಾವಿದ ಕೋಟ ಸುರೇಶ್ ದಂಪತಿಗಳಿಗೆ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಪ್ರದಾನ…