Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317 ಇವರು ಆಯೋಜಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ದಿನಾಂಕ 16 ಮಾರ್ಚ್ 2025ರಂದು ಬೆಂಗಳೂರಿನ ವಿಶ್ವೇಶ್ವರಪುರದಲ್ಲಿರುವ ಮನಂದಿ ನಂಜುಂಡ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದು ಹಮ್-ಯು.ಎನ್. ಉಮೆನ್ ಏಷ್ಯಾ ಪೆಸಿಫಿಕ್ ಲೀಡಿಂಗ್ ಪ್ರಮ್ ದಿ ಪ್ರಂಟ್ ಪುಸ್ತಕದಲ್ಲಿ ಸ್ಥಾನ ಪಡೆದ ಹಾಗೂ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜರಾದ ಯಕ್ಷ ಸಾಧಕಿ ಪ್ರಿಯಾಂಕ ಕೆ. ಮೋಹನ್ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಗವರ್ನರ್ ಲಯನ್ ಎನ್. ಮೋಹನ್ ಕುಮಾರ್, ಲಯನ್ ಪ್ರೇಮ ಮೋಹನ್ ಕುಮಾರ್, ಸೀನಿಯರ್ ಉಪಾಧ್ಯಕ್ಷರಾದ ಶ್ರೀಮತಿ ಉಮಾರೆಡ್ಡಿ, ಮಹಿಳಾ ಸಬಲೀಕರಣಕ್ಕಾಗಿ ಡಿ.ಸಿ. ಲಯನ್ ರಾಜೇಶ್ವರಿ ವಸಂತಯ್ಯ, ಕಾರ್ಯಕ್ರಮದ ಸಂಯೋಜಕಿ ಲಯನ್ ಜ್ಯೋತಿ ಶ್ರೀಹರಿ, ಲಯನ್ ಡಾ. ಜಿ. ಮೋಹನ್, ಲಯನ್ ಶಾರದ ಮೋಹನ್ ಉಪಸ್ಥಿತರಿದ್ದರು.
ಉಡುಪಿ : ಯಕ್ಷಗಾನವನ್ನು ಪ್ರಥಮ ವಿದೇಶಕ್ಕೊಯ್ದ ದಾಖಲೆಯ ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸಂಭ್ರಮದದಲ್ಲಿ ‘ಸುವರ್ಣ ಪರ್ವ- 8 ’ರ ಅಂಗವಾಗಿ ‘ಮಕ್ಕಳ ಯಕ್ಷಗಾನ ರಂಗ ಭೂಮಿ’ ಶೀರ್ಷಿಕೆಯಡಿಯಲ್ಲಿ ಒಂದು ದಿನದ ವಿಚಾರ ಗೋಷ್ಠಿ ಮತ್ತು ಮಕ್ಕಳ ಯಕ್ಷಗಾನ ಪ್ರದರ್ಶನ ದಿನಾಂಕ 16 ಮಾರ್ಚ್ 2025ರ ಆದಿತ್ಯವಾರದಂದು ಕಲಾರಂಗದ ನೂತನ ಐವೈಸಿ ಸಭಾಂಗಣದಲ್ಲಿ ನಡೆಯಿತು. ಉಡುಪಿಯ ಯಕ್ಷಗಾನ ಕಲಾರಂಗದ ಸಹಯೋಗದೊಂದಿಗೆ ನಾಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನದಿಂದ ನಮ್ಮಲ್ಲಿ ಸಂಸ್ಕಾರ ರೂಪುಗೊಳ್ಳುತ್ತದೆ. ಸಂಸ್ಕೃತಿಯ ಉಳಿವು ಸಾಧ್ಯವಾಗುತ್ತದೆ. ಕಲೆಯನ್ನು ಆರಾಧಿಸುತ್ತಾ ಪಾರಂಪರಿಕ ಕಲೆಯನ್ನು ಕಟ್ಟಿಕೊಟ್ಟ ಹಿರಿಯ ಕಲಾವಿದರು ಸದಾ ಸ್ಮರಣೀಯರು. ವಿದ್ಯಾವಂತರ ಪ್ರವೇಶದಿಂದ ಯಕ್ಷಗಾನ ಬೆಳೆದಿದೆ. ಇನ್ನಷ್ಟು ಬೆಳೆಯಬೇಕಾಗಿದೆ. ಬದಲಾವಣೆ ಆರೋಗ್ಯಕರವಾಗಿಬೇಕು. ಯಕ್ಷಗಾನೀಯ ಚೌಕಟ್ಟಿನೊಳಗಿರಬೇಕು. ಆರಾಧನ ಕಲೆಯೊಳಗೆ ಸಿನೆಮಾ, ರಾಜಕೀಯದ ವಿಚಾರ ಸಲ್ಲದು. ಸರಕಾರದ ಅನುದಾನವನ್ನು ಅರ್ಥಪೂರ್ಣವಾಗಿ ವಿನಿಯೋಗಿಸುವಲ್ಲಿ ಯಕ್ಷಗಾನ ಅಕಾಡೆಮಿ ಬದ್ಧವಾಗಿದೆ. ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ…
ಸುರತ್ಕಲ್ : ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ಸಾಧಕ ಕಲಾವಿದರಿಗೆ ಸಮ್ಮಾನ ಸಮಾರಂಭ ದಿನಾಂಕ 15 ಮಾರ್ಚ್ 2025ರ ಶನಿವಾರದಂದು ಸುರತ್ಕಲ್ಲಿನ ಬಂಟರ ಭವನ ವಠಾರದಲ್ಲಿ ಜರಗಿತು. ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಂಕರನಾರಾಯಣ ಭಟ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಗರಿ ಎಂಟರ್ ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್ ಮಾತನಾಡಿ “ಜಾಗತಿಕ ಮಟ್ಟದಲ್ಲಿ ಯಕ್ಷಗಾನ ಪರಂಪರೆಯನ್ನು ಬೆಳಗಿಸಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ ಇವರದ್ದು. ಯಕ್ಷಗಾನದ ಪ್ರಸಿದ್ದ ಹಾಗೂ ಕಲಾವಿದರ ಏಳಿಗೆಗೆ ಶ್ರಮಿಸುತ್ತಿರುವ ಟ್ರಸ್ಟ್ ಜತೆ ಕೈಜೋಡಿಸಿ ಯಕ್ಷಗಾನ ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕು” ಎಂದು ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ “ಟ್ರಸ್ಟ್ ವತಿಯಿಂದ ಮಾಡುತ್ತಿರುವ ಹಲವು ಸಮಾಜಮುಖೀ ಕೆಲಸಗಳಿಗೆ ಯಕ್ಷಗಾನ ಅಭಿಮಾನಿಗಳು ಸಹಕಾರ ನೀಡುತ್ತಿದ್ದಾರೆ” ಎಂದರು. ಸುರತ್ಕಲ್ ಘಟಕದ ಅಧ್ಯಕ್ಷರಾದ ಸುಧಾಕರ ಎಸ್. ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.…
ಮಡಿಕೇರಿ: ಅಮ್ಮತ್ತಿ ಕೊಡವ ಸಮಾಜವು ಸಾಹಿತಿಕ ಹಾಗೂ ಸಾಂಸ್ಕೃತಿಕವಾಗಿ ಸಿಂಗಾರಗೊಳ್ಳುತ್ತಿದ್ದು , 29 ಹಾಗೂ 30 ಮಾರ್ಚ್ 2025ರಂದು ನಡೆಯಲಿರುವ ‘ಕೊಡವ ಬಲ್ಯನಮ್ಮೆ’ಗೆ ಸಕಲ ಸಿದ್ಧತೆಗಳು ಬಿಡುವಿಲ್ಲದೆ ನಡೆಯುತ್ತಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಅಮ್ಮತ್ತಿ ಕೊಡವ ಸಮಾಜದ ಸಹಯೋಗದಲ್ಲಿ ನಡೆಸುತ್ತಿರುವ ‘ಕೊಡವ ಬಲ್ಯನಮ್ಮೆ’ಯು ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಿದ್ದು ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಸಾರಥ್ಯದಲ್ಲಿ ತಯಾರಿಗೊಳ್ಳುತ್ತಿದೆ. ಸಾಂಸ್ಕೃತಿಕ –ಜಾನಪದ ಮೆರವಣಿಗೆ : ಕೊಡವ ಬಲ್ಯನಮ್ಮೆಯ ಮೊದಲ ದಿನ ಬೆಳಗ್ಗೆ 9 ಗಂಟೆಗೆ ಹೊಸೂರು ಜಂಕ್ಷನ್ನಿಂದ ಕೊಡವ ಸಮಾಜದವರೆಗೆ ಕೊಡವ ಸಾಂಸ್ಕೃತಿಕ-ಜಾನಪದ ಮೆರವಣಿಗೆಯನ್ನು ಅಮ್ಮತ್ತಿ ನಾಡಿನ ಹಿರಿಯರು ಹಾಗೂ ಸಮಾಜ ಸೇವಕರಾದ ನೆಲ್ಲಮಕ್ಕಡ ಶಂಭು ಸೋಮಯ್ಯ, ಕಾವಾಡಿಚಂಡ ಯು. ಗಣಪತಿ ಉದ್ಘಾಟಿಸಲಿದ್ದಾರೆ. ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾದ ಐನಂಡ ಪ್ರಕಾಶ್ ಗಣಪತಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯನವರು ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ…
ಮಡಿಕೇರಿ : ಕಲೆ, ಸಾಹಿತ್ಯ, ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕರುನಾಡ ಕನ್ನಡ ಕಲಾ ಸಿರಿ ಬಳಗ ಹಾಗೂ ಎಜಿಎಸ್ ಚಾರಿಟೇಬಲ್ ಟ್ರಸ್ಟ್ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಕೊಡಗಿನ ಪತ್ರಕರ್ತ ಪ್ರಶಾಂತ್. ಟಿ. ಆರ್. ವಿರಚಿತ ‘ಹೊನ್ನಮ್ಮನ ಕನಸು’ ಕಾದಂಬರಿಗೆ ಅತ್ಯುತ್ತಮ ಕಾದಂಬರಿ ಪ್ರಶಸ್ತಿ ಲಭಿಸಿದೆ. ಹಳ್ಳಿಯ ವೃದ್ಧ ಮಹಿಳೆಯೊಬ್ಬಳ ಮಾನಸಿಕ ತೊಳಲಾಟದ ಜೊತೆಗೆ ಸಾಮಾಜಿಕ ಕಳಕಳಿಯೂ ಈ ಕಾದಂಬರಿಯ ಕಥಾ ವಸ್ತುವಾಗಿದೆ. ವಿಶೇಷ ಎಂದರೆ ಈ ಕಾದಂಬರಿಯನ್ನು ಮೆಚ್ಚಿದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ಬೆನ್ನುಡಿ ಬರೆದಿದ್ದಾರೆ. ಪ್ರಶಾಂತ್ ಅವರು ವಿಶ್ವವಾಣಿ ಪತ್ರಿಕೆಯಲ್ಲಿ ಸಿನಿಮಾ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಕೆಲವು ಸಿನಿಮಾಗಳಲ್ಲಿಯೂ ನಟಿಸುವ ಮೂಲಕ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಶಾಂತ್. ಟಿ. ಆರ್.
ದಾವಣಗೆರೆ: ವೃತ್ತಿ ರಂಗಭೂಮಿ ರಂಗಾಯಣವು ‘ರಾಷ್ಟ್ರೀಯ ವೃತ್ತಿ ರಂಗೋತ್ಸವ’ದ ಅಂಗವಾಗಿ ಆಯೋಜಿಸಿದ ವಿಚಾರ ಸಂಕಿರಣ ಕಾರ್ಯಕ್ರಮವು ದಿನಾಂಕ 15 ಮಾರ್ಚ್ 2025ರ ಶನಿವಾರದಂದು ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆಯಿತು. ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಪ್ರತಿಮಾ ಸಭಾದ ಗೌರವಾಧ್ಯಕ್ಷ ಪ್ರೊ. ಎಸ್. ಹಾಲಪ್ಪ ಮಾತನಾಡಿ “ವೃತ್ತಿರಂಗ ಭೂಮಿಯು ಪುನರುತ್ಥಾನಗೊಳ್ಳಬೇಕಿದೆ. ವೃತ್ತಿ ರಂಗಭೂಮಿಯ ಪುನರುತ್ಥಾನ ಹೇಗೆಂದರೆ ಕಂಪನಿ ನಾಟಕಗಳ ಕಲಾವಿದರಿಗೆ ಶಿಸ್ತಿನ ತರಬೇತಿ ಅಗತ್ಯವಿದೆ. ಹವ್ಯಾಸಿ ರಂಗ ಶಾಲೆಗಳ ಹಾಗೆ ವೃತ್ತಿ ರಂಗಭೂಮಿಗೂ ರಂಗಶಾಲೆಯ ಅಗತ್ಯ ಇದೆ. ಇದರಿಂದ ನಾಟಕ ಕಂಪನಿಗಳು ಒಳ್ಳೆಯ ಸದಭಿರುಚಿಯ ನಾಟಕಗಳನ್ನು ಆಡಲು ಸಾಧ್ಯವಾಗುತ್ತದೆ. ನೂರೈವತ್ತು ವರ್ಷಕ್ಕೂ ಅಧಿಕ ಇತಿಹಾಸವಿರುವ ರಂಗಭೂಮಿಗೆ ವರದಾಚಾರ್, ಪೀರ್ ಸಾಹೇಬ್, ಡಾ. ರಾಜಕುಮಾರ್ ಮೊದಲಾದ ಕಲಾವಿದರ ಪರಂಪರೆ ಇದೆ. ಅಂಥ ಕಲಾವಿದರ ಅಭಿನಯವನ್ನು ಗಮನಿಸುತ್ತಾ ಇಂದಿನ ಕಲಾವಿದರು ಬೆಳೆಯಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಚಾರ ಸಂಕಿರಣವು ದಿಕ್ಸೂಚಿ ಆಗಲಿದೆ” ಎಂದರು. ಡಾ. ವಿಶ್ವನಾಥ್ ವಂಶಾಕೃತ ಮಠ ಇವರು ‘ಪರಂಪರೆಯ ಕಣ್ಮರೆ ಬದಲಾಗುತ್ತಿರುವ ವೃತ್ತಿ ರಂಗ…
ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಶ್ರೀಪಾದ ಕೃಷ್ಣ ರೇವಣಕರ್ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2025ರಂದು ಶ್ರೀಪಾದ ಗುಲಾಬಿ ನಿವಾಸದಲ್ಲಿ ನಡೆಯಿತು. ಸಾಮಾಜಿಕ ಕಾರ್ಯಕರ್ತರೂ, ನಿವೃತ್ತ ಅಧ್ಯಾಪಕರೂ ಆದ ಶ್ರೀ ಸುಧಾಕರ ಪೇಜಾವರರವರು ಶ್ರೀಪಾದ ರೇವಣಕರರ ವ್ಯಕ್ತಿತ್ವ ಪರಿಚಯವನ್ನು ಮಾಡಿಕೊಟ್ಟರು. ಸರಳತೆಯ ಬದುಕನ್ನು ಮೈಗೂಡಿಸಿಕೊಂಡು, ಆದರ್ಶ ತಂದೆಯಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕೊಟ್ಟು ಬೆಳೆಸುವುದರೊಂದಿಗೆ, ಅಂಚೆ ಇಲಾಖೆಯಲ್ಲಿ ಅಂಚೆ ಅಣ್ಣನಾಗಿ ಅವರು ಗೈದ ಸೇವೆಯನ್ನೂ ಮನೆಮನಗಳನ್ನು ಬೆಸೆಯುವಂತಹ ಕೈಂಕರ್ಯಗಳನ್ನೂ ಸ್ಮರಿಸಿಕೊಂಡರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಶ್ರೀ ಪುಷ್ಪರಾಜ್ ಅವರು ‘ಗ್ರಾಮೀಣ ಬದುಕು ಶಿಕ್ಷಣ ನೀತಿ’ ಎಂಬ ವಿಷಯದ ಬಗ್ಗೆ ದತ್ತಿ ಉಪನ್ಯಾಸವನ್ನು ನೀಡಿದರು. ಗ್ರಾಮೀಣ ಶಿಕ್ಷಣವು ವಿದ್ಯಾರ್ಥಿಗಳಿಗೆ ಔಪಚಾರಿಕ ಶಿಕ್ಷಣದೊಂದಿಗೆ ಅನೌಪಚಾರಿಕ ಶಿಕ್ಷಣವನ್ನು ನೀಡಿ ಬದುಕಿನ ಯಾವುದೇ ಸವಾಲುಗಳನ್ನು ಎದುರಿಸಲು ಸಮರ್ಥರಾಗುವಂತೆ ಮಾಡುತ್ತದೆ ಎಂಬುದನ್ನು ಹೇಳುತ್ತಾ, ಇಂದು ಗ್ರಾಮೀಣರು ಅದನ್ನು ಬಿಟ್ಟು ನಗರೀಕರಣದೆಡೆಗೆ ಸೆಳೆಯಲ್ಪಟ್ಟು ಸಂಸ್ಕೃತಿ…
ಕನ್ನಡದ ಭರವಸೆಯ ಕಾದಂಬರಿಕಾರರಲ್ಲೊಬ್ಬರಾದ ಎಂ.ಆರ್. ದತ್ತಾತ್ರಿಯವರ ‘ಸರ್ಪಭ್ರಮೆ’ ಕಾದಂಬರಿಯಲ್ಲಿ ಕಥೆಗಾರನೊಬ್ಬ ಜಗತ್ತನ್ನು ಕಾಣುವ ಬಗೆ, ಅದರಿಂದ ಬಾಳಿನ ಸುಖ ದುಃಖಗಳನ್ನು ಸೋಸುವ ರೀತಿಯನ್ನು, ಅದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವ ವಿಧಾನವನ್ನು ತಾತ್ತ್ವಿಕತೆಯ ಹಿನ್ನೆಲೆಯಲ್ಲಿ ವಿವರಿಸುವ ಪ್ರಾಮಾಣಿಕ ಪ್ರಯತ್ನವಿದೆ. ಇದು ಲೌಕಿಕ ಮತ್ತು ಅಲೌಕಿಕ ಅನುಭವಗಳನ್ನು ಸರಿಸಮವಾಗಿ ಬೆಸೆದ ಕೃತಿ. ಕತ್ತಲಲ್ಲಿ ಬಿದ್ದ ಹಗ್ಗವನ್ನು ಹಾವೆಂದು ತಿಳಿದು ಹೆದರುವ ಪ್ರಕ್ರಿಯೆಯನ್ನು ಸರ್ಪಭ್ರಮೆ ಎನ್ನುತ್ತೇವೆ. ಬದುಕಿನ ಹಾದಿಯಲ್ಲಿ ಹಾವಿನಂತಹ ಹಗ್ಗಗಳನ್ನು ಕಂಡು ಉಂಟಾದ ಭ್ರಮೆಯಿಂದ ಕಳಚಿಕೊಂಡು ಮುಂದುವರಿಯಲು ನಮ್ಮೊಳಗಿನ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇದು ತನ್ನನ್ನು ತಾನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿ ತನ್ನನ್ನು ತಾನು ಹುಡುಕಿಕೊಳ್ಳುವ ಪಯಣವೇ ‘ಸರ್ಪಭ್ರಮೆ’ಯ ತಿರುಳು. ಈ ಕಾದಂಬರಿಯ ಕತೆ ಮತ್ತು ನಿರೂಪಣೆಯ ಧಾಟಿಯು ಭಿನ್ನವಾಗಿದೆ. ಕನ್ನಡದಲ್ಲಿ ಈಗಾಗಲೇ ಉತ್ತಮ ಪುರುಷ ನಿರೂಪಣೆಯಲ್ಲಿ ಹಲವಾರು ಕೃತಿಗಳು ಬಂದಿದ್ದರೂ ಸಹ ಈ ಕಾದಂಬರಿಯ ವಸ್ತು ಮತ್ತು ಕಥನ ತಂತ್ರ ವಿಶಿಷ್ಟವಾಗಿದೆ. ಕಂಪ್ಯೂಟರ್ ಇಂಜಿನಿಯರ್ ಆಗಿರುವ ಸಂದೀಪನು ತನ್ನ ಕತೆಯನ್ನು ನಿರೂಪಿಸುತ್ತಾ ತಂದೆಯ…
ಧಾರವಾಡ : ಭಾರತೀಯ ಸಂಗೀತಲೋಕದ ನವೋನ್ವೇಷ, ಸ್ವರಯೋಗಿನಿ ಖ್ಯಾತಿಯ ಪದ್ಮವಿಭೂಷಣ ಡಾ. ಪ್ರಭಾ ಅತ್ರೆ ಸಂಸ್ಮರಣೆಯಲ್ಲಿ ‘ಸ್ವರಯೋಗಿನಿ’ ಸಂಗೀತ ಹಾಗೂ ಭರತನಾಟ್ಯಗಳ ವಿಶೇಷ ಕಾರ್ಯಕ್ರಮವು ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 15 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ. ಪ್ರಭಾ ಅತ್ರೆ ಇವರಿಂದ ರಚಿತ ಬಂದಿಶ್ ಗಳನ್ನು ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕೃತ ಕಲಾವಿದೆ, ಹಿರಿಯ ಗಾಯಕಿ ವಿದುಷಿ ಪದ್ಮಾ ತಳವಲಕರ್ ಇವರು ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ತೇಜಸ್ ಮಾಜಗಾಂವಕರ್ ಹಾಗೂ ಅಮೇಯ ಬಿಚ್ಚು ಹಾರ್ಮೋನಿಯಂನಲ್ಲಿ ಸಾಥ್ ಸಂಗತ್ ಮಾಡಿದರು. ಇನ್ನೊಬ್ಬ ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕೃತ ಹಿರಿಯ ನೃತ್ಯ ಕಲಾವಿದೆ ಡಾ. ಸುಚೇತಾ ಭಿಡೆ-ಚಾಪೇಕರ್ ಮತ್ತು ತಂಡದವರು ‘ನೃತ್ಯ-ಪ್ರಭ’ ಎಂಬ ವಿಶೇಷ ಭರತನಾಟ್ಯವನ್ನು ಪ್ರಸ್ತುತಪಡಿಸಿದರು. ಇವರೊಂದಿಗೆ ಶಿಷ್ಯೆಯರಾದ ಆರುಂಧತಿ ಪಟವರ್ಧನ, ರುಚಾ, ಅನುಜಾ ಹಾಗೂ ಸಾಗರಿಕಾ ನೃತ್ಯ ಪ್ರದರ್ಶಿಸಿದರು.
ಇದು ಸುಮಾರು 70 ವರ್ಷದ ಹಿಂದಿನ ಕಥೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ 04/01/1955. ಆ ದಿನ ಏಕಾದಶಿಯಂತೆ. ಅಂದು ರಾಧೆ ಕೃಷ್ಣ ದಂಪತಿಯರ ಮಡಿಲು ತುಂಬಿದ ಕಂದ, ಸಾಕಿ ಬೆಳೆಸಿದ ಶಿವ ಪಾರ್ವತಿಗೊಲಿದ ಮಕರಂದ. ಅಣ್ಣಿಗೇರಿ ಎಂಬ ನವಲಗುಂದದ ಹಳ್ಳಿಯೊಂದರಲ್ಲಿ ಅರಳಿದ ಅರವಿಂದ ಅಲ್ಲಿಯ ಕುಲೀನ ಮನೆತನ ಕುಲಕರ್ಣಿ ಕುಲದಾನಂದ… ನಮ್ಮ ಅಭಿನಯ ಭಾರತಿಯ ಹೆಮ್ಮೆಯ ರವಿ ರಶ್ಮಿ… ಅರವಿಂದ ಕುಲಕರ್ಣಿ ಧರೆಗಿಳಿದು ಬಂದ ಪರ್ವ ದಿನವಂತೆ. ಮುಂದಿನ ಇವರ ಜೀವನ ಕಥನ ಕೇಳೋಣ. ಹೂ ಹಣ್ಣು ಬಿಡುವ ತರುಲತೆಗಳು ಚಿಗುರುತ್ತಿರುವಾಗಲೇ ಅಗತ್ಯದ ನೀರು ಗೊಬ್ಬರ ಬುಡಕ್ಕೆ ಬಿದ್ದರೆ ಅದು ಫಲ ಭರಿತ ಹೆಮ್ಮರವಾಗಿ ಬೆಳೆದು ದಾರಿ ಹೋಕರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ ಅಲ್ಲವೇ. ಹೌದು ಹೀಗೆಯೇ ನಂದನವನವಾಗಿತ್ತು ಕುಲಕರ್ಣಿಯವರ ಬಾಲ್ಯದ ಜೀವನ. ಎಳವೆಯಲ್ಲಿಯೇ ಸಾಧನೆಗಳ ಮೆಟ್ಟಲೇರಲು ಬೇಕಾದ ಭದ್ರ ಬುನಾದಿ ದೊರೆತದ್ದು ಹುಟ್ಟೂರು ಅಣ್ಣಿಗೇರಿಯ ಸುಂದರ ಪರಿಸರದಲ್ಲಿಯೇ… ಅರವಿಂದರ ಅಕ್ಷರ ಪಯಣ ಪ್ರಾರಂಭವಾದದ್ದೂ ಅಲ್ಲಿಯ ಸರಕಾರಿ ಶಾಲೆಯಲ್ಲಿಯೇ. ಆ ಶಾಲೆ ಅಮೃತೇಶ್ವರ…