Author: roovari

ಮಂಗಳೂರು : ಭಾರತಾಂಜಲಿ ಮಂಗಳೂರು ಇವರು ಪ್ರಸ್ತುತ ಪಡಿಸುವ ಗುರು ಪ್ರತಿಮಾ ಶ್ರೀಧರ್, ಗುರು ಶ್ರೀಧರ್ ಹೊಳ್ಳ ಮತ್ತು ವಿದುಷಿ ಪ್ರಕ್ಷಿಲಾ ಜೈನ್ ಬಿ. ಇವರ ಶಿಷ್ಯೆ ಕುಮಾರಿ ವಿ. ಹರಿಣಿ ಇವರ ‘ಭರತನಾಟ್ಯ ರಂಗಪ್ರವೇಶ’ವು ದಿನಾಂಕ 14 ಜೂನ್ 2025ರಂದು ಸಂಜೆ ಗಂಟೆ 5-15ಕ್ಕೆ ಡಾನ್ ಬೋಸ್ಕೋ ಹಾಲ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಗುರು ಉಳ್ಳಾಲ ಮೋಹನ್ ಕುಮಾರ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಕೃಷ್ಣ ಹೆಗ್ಡೆ ಮಿಯಾರ್, ವಿದುಷಿ ನಯನ ವಿ. ರೈ ಮತ್ತು ಶ್ರೀಮತಿ ಉಷಾ ವರದರಾಜನ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗಂನಲ್ಲಿ ಗುರು ಪ್ರತಿಮಾ ಶ್ರೀಧರ್, ಹಾಡುಗಾರಿಕೆಯಲ್ಲಿ ವಿದ್ವಾನ್ ಸ್ವರಾಗ್ ಮಾಹೆ, ಮೃದಂಗದಲ್ಲಿ ಕಣ್ಣೂರಿನ ವಿದ್ವಾನ್ ಸುರೇಶ್ ಬಾಬು, ವಯೋಲಿನ್ ನಲ್ಲಿ ಉಡುಪಿಯ ವಿದ್ವಾನ್ ಶ್ರೀಧರ್ ಆಚಾರ್ ಪಡಿಗಾರ ಮತ್ತು ಮೊರಸಿಂಗ್ ನಲ್ಲಿ ವಿಟ್ಲದ ವಿದ್ವಾನ್ ಬಾಲಕೃಷ್ಣ ಹೊಸಮಣೆ ಇವರುಗಳು ಸಹಕರಿಸಲಿದ್ದಾರೆ.

Read More

ಉಪ್ಪುಂದ : ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಇದರ ವಾರ್ಷಿಕೋತ್ಸವ -2025ರ ಅಂಗವಾಗಿ ನಾಗೂರು ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ದಿನಾಂಕ 07 ಜೂನ್ 2025ರಂದು ಪ್ರತಿಷ್ಠಾನದ ಗುರುಗಳಾದ ಎ.ಪಿ. ಪಾಠಕ್ ಮತ್ತು ಎನ್.ಜಿ. ಹೆಗಡೆ ಮಾರ್ಗದರ್ಶನದಲ್ಲಿ ಯಕ್ಷಗಾನದ ಕುರಿತ ವಿವಿಧ ಕಾರ್ಯಕ್ರಮಗಳು ನಡೆಯಿತು. ನಾದಾವಧಾನ ವಿದ್ಯಾರ್ಥಿಗಳಿಂದ ಯಕ್ಷಗಾನದ ಆಯ್ದ ಪ್ರಸಂಗಗಳಿಂದ ಯಕ್ಷಗಾನ ಪದ್ಯಗಳ ಪ್ರಸ್ತುತಿ ನಡೆಯಿತು. ಖ್ಯಾತ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ವಾಸುದೇವ ರಂಗಾ ಭಟ್ಟ ಭಾಗವತಿಕೆಯ ಸ್ವರೂಪ ವಿವೇಚನೆ ಕುರಿತು ಮಾತನಾಡಿ, “ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪರಂಪರೆಯನ್ನು ಉಳಿಸಿಕೊಳ್ಳುತ್ತಾ ಯಕ್ಷಗಾನ ಪ್ರದರ್ಶನ, ರಂಗದಲ್ಲಿ ಶ್ರೀಮಂತವಾಗಿ ರಂಗೇರಬೇಕಾದರೆ ಭಾಗವತರ ಹೊಣೆಗಾರಿಕೆ ಮತ್ತು ಸಾಧ್ಯತೆಗಳ ಕುರಿತು ಹಲವು ದೃಷ್ಟಾಂತರಗಳ ಮೂಲಕ ಉದಾಹರಿಸಿ, ಕಲಾವಿದರ ಕಲಿಕೆ ಚೌಕಿಯಲ್ಲಿ ಸಹ ಕಲಾವಿದರೊಂದಿಗೆ ನಡೆಯಬೇಕು” ಎಂದರು. ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ರಾಗ ತಾಳ ಹಾಡಿನ ಮೂಲಕ ವಿವಿಧ ಮಟ್ಟುಗಳ ಪರಿಚಯ ಮಾಡಿಸಿದರು. ಉಮೇಶ್ ಶಾನ್‌ಭಾಗ್ ಉದ್ಘಾಟಿಸಿದರು. ಉಭಯ ತಿಟ್ಟುಗಳ ಅಗ್ರಗಣ್ಯ ಭಾಗವತರಿಂದ ಸಮರ್ಥ ಹಿಮ್ಮೇಳದೊಂದಿಗೆ ಯಕ್ಷ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಮತ್ತು ಮಡಿಕೇರಿ ತಾಲೂಕು ಕ.ಸಾ.ಪ. ಸಂಯುಕ್ತಾಶ್ರಯದಲ್ಲಿ ದಿನಾಂಕ 09 ಜೂನ್ 2025ರಂದು ಮಡಿಕೇರಿಯ ಹೊಟೇಲ್ ರೆಡ್‌ಬ್ರಿಕ್ಸ್ ನ ‘ಸತ್ಕಾರ’ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಬೂಕರ್ ಪ್ರಶಸ್ತಿಗೆ ಪಾತ್ರರಾದ ದೀಪಾ ಭಾಸ್ತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪಾ ಭಾಸ್ತಿಯವರನ್ನು ಸನ್ಮಾನಿಸಿದ ಹಾಸನ ಜಿಲ್ಲೆಯವರಾದ ಕವಿ ಮತ್ತು ಅನುವಾದಕಿ ಜ.ನಾ. ತೇಜಶ್ರೀ ಮಾತನಾಡಿ “ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿಯವರು ತಮ್ಮ ‘ಹಾರ್ಟ್ ಲ್ಯಾಂಪ್’ ಅನುವಾದ ಕೃತಿಯ ಮೂಲಕ, ಸಾಂಪ್ರದಾಯಿಕವಾದ ಅನುವಾದದ ಚೌಕಟ್ಟುಗಳನ್ನು ಮೀರಿ, ಸೃಜನಾತ್ಮಕವಾದ ಅನುವಾದದ ಹೊಸ ಪಥವನ್ನು ಸೃಷ್ಟಿಸಿದ್ದಾರೆ. ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿ ‘ಎದೆಯ ಹಣತೆ’ಯನ್ನು ಹಾರ್ಟ್ ಲ್ಯಾಂಪ್ ಆಗಿ ಅನುವಾದಿಸಿದ ದೀಪಾ ಭಾಸ್ತಿಯವರು, ಕನ್ನಡದಿಂದ ಇಂಗ್ಲೀಷ್‌ಗೆ ಮಾಡಿರುವ ಅನುವಾದದಲ್ಲಿ ‘ಕನ್ನಡದ ಭಾಷಾ ಸೌಂದರ್ಯವನ್ನು, ಚೆಲುವನ್ನು’ ಹಾಗೆಯೇ ಕಾಯ್ದುಕೊಂಡಿದ್ದಾರೆ. ಇಂಗ್ಲೀಷ್ ಭಾಷೆಗೆ ಅನುವಾದಿತ ಕೃತಿಗಳು…

Read More

ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಕಳೆದ 16 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ ಪೂರ್ಣ ಪ್ರಮಾಣದ ರಂಗಶಿಕ್ಷಣವನ್ನು ನೀಡುವ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ಚವಿದ್ಯಾಲಯದ ಮಾನ್ಯತೆ ಪಡೆದಿದೆ. ಪ್ರತಿವರ್ಷ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೊಮೊ ಕೋರ್ಸನ್ನು ನಡೆಸುವ ಈ ಸಂಸ್ಥೆಯು ಪ್ರಸ್ತುತ 2025-26ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 2025-26ನೇ ಸಾಲಿನ ಈ ರಂಗತರಬೇತಿ ಕೋರ್ಸ್ಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಮತ್ತು 28 ವರ್ಷಗಳು ತುಂಬಿರದ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೋರ್ಸಿನ ಒಂದು ವರ್ಷದ ವ್ಯಾಸಂಗ ಅವಧಿಯಲ್ಲಿ ಊಟ, ವಸತಿ ಹಾಗೂ ಪಠ್ಯ ಸಾಮಗ್ರಿಗಳ ವೆಚ್ಚಗಳನ್ನು ನಿಯಮಾನುಸಾರ ವಿದ್ಯಾರ್ಥಿ ವೇತನದಲ್ಲಿ ಭರಿಸಲಾಗುವುದು. ಭಾರತೀಯ…

Read More

ಮೈಸೂರು : ವಾಸ್ಪ್ ಥಿಯೇಟರ್ ಪ್ರಸ್ತುತ ಪಡಿಸುವ ವಿನಯ್ ಶಾಸ್ತ್ರೀ ಇವರ ನಿರ್ದೇಶನದಲ್ಲಿ ‘ಹೀಗಾದ್ರೆ ಹೇಗೆ ?’ ಟಿ. ಸುನಂದಮ್ಮರವರ ನಗೆ ಬರಹಗಳ ಆಧಾರಿತ ನಾಟಕ ಪ್ರದರ್ಶನವನ್ನು ದಿನಾಂಕ 15 ಜೂನ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮುರಳಿ 9742119911 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಸಾಲಿಗ್ರಾಮ : ಕಳೆದ ಐವತ್ತೆರಡು ವರ್ಷಗಳಿಂದ ಯಕ್ಷಗಾನಕ್ಕೆ ಗಣನೀಯ ಪ್ರಮಾಣದಲ್ಲಿ ಕಲಾವಿದರನ್ನು ನೀಡಿದ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರ ಇದರ ವತಿಯಿಂದ ಈ ವರ್ಷದ ಹಿಮ್ಮೇಳ (ಮದ್ದಲೆ, ಚೆಂಡೆ, ಭಾಗವತಿಗೆ) ಮತ್ತು ಮುಮ್ಮೇಳ (ಯಕ್ಷಗಾನ ಹೆಜ್ಜೆ, ಅಭಿನಯ) ತರಗತಿಯನ್ನು ದಿನಾಂಕ 14 ಜೂನ್ 2025ರಂದು ಸಂಜೆ ಗಂಟೆ 4-30ಕ್ಕೆ ಪ್ರಾರಂಬಿಸುತ್ತಿದೆ. ಪ್ರಾಚಾರ್ಯ ಸದಾನಂದ ಐತಾಳ ನಿರ್ದೇಶನದಲ್ಲಿ ಸದಾನಂದ ರಂಗ ಮಂಟಪ, ಗುಂಡ್ಮಿ, ಸಾಲಿಗ್ರಾಮದಲ್ಲಿ ನಡೆಯುವ ಈ ತರಗತಿಗೆ ಸೇರಲಿಚ್ಚಿಸುವವರು ಹೆಚ್ಚಿನ ವಿಚಾರಗಳಿಗೆ ಕಾರ್ಯದರ್ಶಿ 9880605610 ಮುಖಾಂತರ ಸಂಪರ್ಕಿಸಲು ಕೋರಲಾಗಿದೆ.

Read More

ತೆಕ್ಕಟ್ಟೆ: ಪಟ್ಲ ದಶಮ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಬಡಗು ತಿಟ್ಟು ಯುವ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಯಕ್ಷ ನುಡಿಸಿರಿ ಬಳಗಕ್ಕೆ ಸನ್ಮಾನ ಕಾರ್ಯಕ್ರಮ ದಿನಾಂಕ 11 ಜೂನ್ 2025 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಸಮಾರಂಭದಲ್ಲಿ ಯಕ್ಷ ನುಡಿಸಿರಿ ಬಳಗದ ಎಲ್ಲಾ ಕಲಾವಿದರನ್ನು ಗೌರವಿಸಿದ ಯಶಸ್ವೀ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ ಮಾತನಾಡಿ “ಯಕ್ಷ ನುಡಿಸಿರಿ ಬಳಗದ ಸದಸ್ಯರು ನಿರಂತರವಾಗಿ ಯಶಸ್ವೀ ಕಲಾವೃಂದದ ವೇದಿಕೆಯಲ್ಲಿ ಅಭ್ಯಾಸ ನಡೆಸಿ ಬಹುಮಾನವನ್ನು ಪಡೆದಿರುವುದು ನಮ್ಮ ಸಂಸ್ಥೆಗೆ ಗೌರವದ ಸಂಗತಿ. ನಿರಂತರ ಕಲಾ ಮನಸ್ಸಿನಿಂದ ತೊಡಗಿಕೊಂಡು ಅನೇಕ ಕಲಾವಿದರನ್ನು ರಂಗದಲ್ಲಿ ವೈಭವೀಕರಿಸಿದ ಯಕ್ಷ ನುಡಿಸಿರಿ ಸಂಸ್ಥೆ ಪಟ್ಲ ದಶಮ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಬಡಗು ತಿಟ್ಟು ಯುವ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದದ್ದು ನಮಗೂ ಸಂಭ್ರಮ” ಎಂದರು. ಸಂಸ್ಥೆಯ ಮುಖ್ಯಸ್ಥ ಡಾ. ಜಗದೀಶ್ ಶೆಟ್ಟಿ ಮಾತನಾಡಿ “ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಂಸ್ಥೆಗೆ ಎಲ್ಲಾ ಕಲಾವಿದರಿಗೂ ಬರುವುದು ಅನುಕೂಲವಾಯಿತು. ಕಲೆಯನ್ನೇ ತಪಸ್ಸಿನಂತೆ ಆರಾಧಿಸುತ್ತಿರುವ ಯಶಸ್ವೀ…

Read More

ಸುರಿಯೋ ಸುರಿಯೋ ಜೋರಾಗಿ ಮಳೆರಾಯ ತೊಳೆಯೋ ತೊಳೆಯೋ ಜಗದ ಸಕಲ ಕೊಳೆಯ ಬೆಳೆಯೋ ಬೆಳೆಯೋ ಹೊಲಗದ್ದೆಯಲಿ ಬೆಳೆಯ ಕಳೆಯೋ ಕಳೆಯೋ ಜೀವರಾಶಿಯ ಹಸಿವೆಯ ಮುಂಗಾರು ಮಳೆ ಬಂದಿದೆ ಇಳಿಯು ತಂಪಾಗಿದೆ ಚಿಗುರಿ ನಲಿದಾಡುತಾ ಗಿಡಮರಗಳು ಓಲಾಡಿದೆ ಹಸಿರಿನ ಅಲಂಕಾರದಿ ಬುವಿಯು ಕಂಗೊಳಿಸಿದೆ ತರು ಲತೆಗಳಲ್ಲಿ ಹೂವರಳಿ ಶೃಂಗಾರಗೊಂಡಿದೆ ವರುಣನ ಆರ್ಭಟವು ನೀರಿನ ತೊರೆಯ ಹರಿಸಿದೆ ನೀಲಿ ಸಾಗರವು ಮೈತುಂಬಿ ಭೋರ್ಗೆರೆಯುತಿದೆ ಗಿಡಮರಗಳು ಚಿಗುರಿ ನಿಂತು ಅವನಿ ಹಸಿರಾಗಿದೆ ಕೃಷಿಕನ ಜೀವನದಿ ಹೊಸ ಪುಟವೊಂದು ತೆರೆದಿದೆ ಮಳೆ ಚಳಿ ಬೇಸಿಗೆ ಮೂರು ಕಾಲಗಳ ಸೂತ್ರವು ಜಗದ ಋತುಚಕ್ರ ನಿಯಮಗಳ ಮುಖ್ಯ ಪಾತ್ರವು ಕಾಲ ಕಾಲಕ್ಕೂ ಅದರದ್ದೇ ಆದ ಪ್ರತ್ಯೇಕತೆ ಇಹುದು ಸಮಾನಾಗಿ ಹೊಂದಿಕೊಂಡು ಜಗವ ನಡೆಸುವುದು ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ

Read More

ಬೆಂಗಳೂರು : ಅಡವಿ ಫೌಂಡೇಷನ್ (ರಿ.) ರಾಮನಗರ ಮತ್ತು ರಂಗವರ್ಣ (ರಿ.) ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸುವ 10 ದಿನಗಳ ‘ಅಭಿನಯ ಕಾರ್ಯಾಗಾರ’ವನ್ನು ದಿನಾಂಕ 20 ಜೂನ್ 2025ರಿಂದ 29 ಜೂನ್ 2025ರವರೆಗೆ ಸಂಜೆ ಗಂಟೆ 5-00ರಿಂದ 8-00ರ ತನಕ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. 16 ವರ್ಷ ಮೇಲ್ಪಟ್ಟ 20 ಜನರಿಗೆ ಮಾತ್ರ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ 9110281200 ಮತ್ತು 8296432026 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 129’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 14 ಜೂನ್ 2025ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದುಷಿ ಶಿಲ್ಪಾ ನಂಜಪ್ಪ ಇವರು ಕೊಡವ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಸಂಶೋಧನೆ ಆಧಾರಿತ ಭರತನಾಟ್ಯ ಪ್ರದರ್ಶನ ನೀಡಲಿದ್ದು, ಪುತ್ತೂರಿನ ಉದ್ಯಮಿ ಏಳ್ತಿಮಾರ್ ವಿಜಯಲಕ್ಷ್ಮೀ ಶೆಣೈ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.

Read More