Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಮಂಡ್ಯ ರಮೇಶ್ ನೇತೃತ್ವದ ‘ನಟನ ಮೈಸೂರು’ ಆಯೋಜಿಸುವ ‘ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರ 2025’ ದಿನಾಂಕ 11 ಏಪ್ರಿಲ್ 2025 ರಿಂದ 04 ಮೇ 2025ರ ವರೆಗೆ ಬೆಳಿಗ್ಗೆ ಘಂಟೆ 10.00 ರಿಂದ ಸಂಜೆ 5.00ರ ವರೆಗೆ ಮೈಸೂರಿನ ದಟ್ಟಗಳ್ಳಿಯ ಸುಪ್ರೀಮ್ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ. ಈ ಶಿಬಿರವು ಕಡ್ಡಾಯವಾಗಿ 08 ರಿಂದ 14ವರ್ಷದ ಮಕ್ಕಳಿಗಾಗಿದ್ದು, ಪ್ರವೇಶ ಪ್ರಕ್ರಿಯೆ 30 ಮಾರ್ಚ್ 2025ರಂದು ಬೆಳಿಗ್ಗೆ ಘಂಟೆ 10.00 ರಿಂದ ಮಧ್ಯಾಹ್ನ 1.30ರ ವರೆಗೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಆಸಕ್ತ ಪೋಷಕರು ಅರ್ಜಿ ಪಡೆದು ತಕ್ಷಣ ಅಲ್ಲಿಯೇ ಪ್ರವೇಶ ಪ್ರಕ್ರಿಯೆ ಪೂರೈಸಬೇಕು. ಅಭ್ಯರ್ಥಿಯ ಆಧಾರ್ ಕಾರ್ಡ್ ಪ್ರತಿ ಮತ್ತು ಭಾವಚಿತ್ರ ಲಗತ್ತಿಸುವುದು ಕಡ್ಡಾಯ. ಮೊದಲು ಬಂದವರಿಗೆ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327, 9845595505.
ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಜಿಲ್ಲಾ ಗಮಕ ಕಲಾ ಪರಿಷತ್ತು, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ‘ಗಮಕ-ವಾಚನ-ವ್ಯಾಖ್ಯಾನ’ ಕಾರ್ಯಕ್ರಮವು ದಿನಾಂಕ 08 ಮಾರ್ಚ್ 2025ರ ಶನಿವಾರದಂದು ವಿಜಯಪುರದ ಗುಮಾಸ್ತೆ ಕಾಲನಿ, ಆಶ್ರಮ ರಸ್ತೆ, ಸ್ಟಾರ್ ಲೈಟ್ ಪಿಲ್ಲರ ಹತ್ತಿರವಿರುವ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ-37 ಇಲ್ಲಿ ಬೆಳಿಗ್ಗೆ ಘಂಟೆ 10.00 ರಿಂದ ನಡೆಯಲಿಯಿದೆ. ಸ.ಕ.ಗ.ಮ.ಹಿ.ಪ್ರಾ.ಶಾಲೆ ನಂ-37 ಇದರ ಮುಖ್ಯಾಧ್ಯಾಪಕಿಯಾದ ಶ್ರೀಮತಿ ಶೋಭಾ.ಎಸ್.ನಾಯಿಕ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಕುಮಾರ ವಾಲ್ಮೀಕಿ ಕೃತ ತೊರವೆ ರಾಮಾಯಣ’ದ ‘ಭರತನ ಬಂಧುಪ್ರೇಮ’ ಪ್ರಸಂಗವನ್ನು ಶ್ರೀಮತಿ ಪುಷ್ಪಾ ಕುಲಕರ್ಣಿ ಗಮಕ ವಾಚನ ಮಾಡಲಿದ್ದು, ಗಮಕ ವಾಗ್ದೇವಿ ಪ್ರಶಸ್ತಿ ಪುರಸ್ಕೃತ ಶ್ರೀ ಕಲ್ಯಾಣರಾವ ದೇಶಪಾಂಡೆ ಗಮಕ ವ್ಯಾಖ್ಯಾನ ಗೈಯ್ಯಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಪುರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರು ಹಾಗೂ ಮಕ್ಕಳ ಸಾಹಿತಿಗಳಾ ಶ್ರೀ ಜಂಬುನಾಥ ಕಂಚ್ಯಾಣಿ…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ರಿ. ಕೊಮೆ ತಕ್ಕಟ್ಟೆ ಆಶ್ರಯದಲ್ಲಿ ಯಕ್ಷದೇಗುಲ (ರಿ.) ಬೆಂಗಳೂರು ಹಾಗೂ ಸ್ಕ್ಯಾಚ್ ಸಂಸ್ಥೆಯ ಸಹಯೋಗದಲ್ಲಿ ‘ಯಕ್ಷತಂತ್ರ ನೃತ್ಯ ಜ್ಞಾನ’ ಎನ್ನುವ ಕಾರ್ಯಕ್ರಮ ದಿನಾಂಕ 01 ಮಾರ್ಚ್ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡಿ “ಅಧುನಿಕ ತಂತ್ರಜ್ಞಾನ ಎನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೀವನದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡ ಹಾಗೆಯೇ ಕಲೆಯಲ್ಲಿಯೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಕಾಲಕ್ಕಿದೆ. ಬದಲಾಗುತ್ತಿರುವಂತಹ ಈ ಕಾಲಘಟ್ಟದಲ್ಲಿ ಅನೇಕ ತಂತ್ರಜ್ಞಾನಗಳ ಜೊತೆ ಕಲೆ ಬೆಳೆಯಬೇಕಾಗಿದೆ, ಉಳಿಯಬೇಕಾಗಿದೆ. ಬಯಲಿನಲ್ಲೇ ಯಕ್ಷಗಾನ ಕಲಿಯುವಂತಹ ಕಾಲಘಟ್ಟದಿಂದ ಗುರುಗಳ ಮುಖೇನ ಅಭ್ಯಾಸ ಮಾಡುವಂತಹ ಸ್ಥಿತಿಗೆ ಒಳಗಾದಂತಹ ಸಂದರ್ಭದಲ್ಲಿ ಇದೀಗ ಸ್ಕ್ಯಾಚ್ ಸಂಸ್ಥೆಗಳ ಮೂಲಕ ತಂತ್ರಜ್ಞಾನವನ್ನು ಪಡೆಯುವ ಪ್ರಯತ್ನ ನಡೆಯುತ್ತಿದೆ. ಯಕ್ಷದೇಗುಲದಂತಹ ಪ್ರಸಿದ್ಧ ಸಂಸ್ಥೆಯು ಸ್ಕ್ಯಾಚ್ ಸಂಸ್ಥೆಯನ್ನು ಪರಿಚಯಿಸುತ್ತಾ ಯಶಸ್ವೀ ಕಲಾವೃಂದದ ಕಲಾವಿದರುಗಳಿಗೆ ಗುರುವಿಲ್ಲದೇ ಹೇಗೆ ಕಲಿಕೆ ಸಾಧ್ಯ ಎನ್ನುವುದನ್ನು ತೋರಿಸುವ ಪ್ರಿಯಾಂಕ ಕೆ. ಮೋಹನ್ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ.”…
ಮಂಜೇಶ್ವರದ ಕೋಳ್ಯೂರಿನಲ್ಲಿ ಹುಟ್ಟಿ, ಕಾರ್ಕಳದ ಕಾಂತಾವರದಲ್ಲಿ ಜನಪ್ರಿಯ ವೈದ್ಯರಾಗಿ ಇಪ್ಪತ್ತೈದಕ್ಕೂ ಹೆಚ್ಚು ಕಾದಂಬರಿಗಳು, ಹಲವಾರು ಕತೆ ಮತ್ತು ಕವನ ಸಂಕಲನಗಳನ್ನು ಪ್ರಕಟಿಸುವುದರೊಂದಿಗೆ ಸಾಹಿತ್ಯ ಸಂಘಟಕರಾಗಿಯೂ ಹೆಸರುವಾಸಿಯಾಗಿರುವ ಡಾ. ನಾ. ಮೊಗಸಾಲೆಯವರ ಇತ್ತೀಚಿನ ಕೃತಿ ‘ಕೊಪ್ಪರಿಗೆ ಮನೆ’. ಇದರಲ್ಲಿ 1870ರಿಂದ 1930ನೇ ಇಸವಿಯೊಳಗಿನ ಮಂಜೇಶ್ವರ ಪರಿಸರವನ್ನು ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಚರಿತ್ರೆ ಮುಚ್ಚಿಹಾಕಿದ ನಮ್ಮ ಹಿರೀಕರ ಸಚ್ಚರಿತ್ರೆಗಳು ಇಲ್ಲಿ ಅಡಗಿವೆ. ನಮ್ಮ ಪೂರ್ವಜರು ದುಷ್ಟರೆಂದೂ, ಹಿಂಸಕರೆಂದೂ ಹೇಳುವ ಸುಳ್ಳು ಸುದ್ದಿಗೆ ಈ ಕೃತಿ ಸಡ್ಡು ಹೊಡೆದಿದೆ. ಹಿಂದಿನ ಕಾಲದಲ್ಲಿ ಪಟೇಲಿಕೆ ನೋಡುವ ಹತ್ತಾರು ಮನೆತನಗಳಿದ್ದುವು. ಮಣ್ಣಿನ ಸಂಸ್ಕೃತಿಯಾದ ಅಳಿಯಕಟ್ಟು ಹಾಗೂ ಮಕ್ಕಳ ಕಟ್ಟು ರೂಢಿಯಲ್ಲಿತ್ತು. ಎಲ್ಲೆಲ್ಲೂ ಕಾಡು. ಅಲ್ಲಲ್ಲಿ ಸಾಹಸದಿಂದ ನಿರ್ಮಿಸಿದ ಕೃಷಿ ಭೂಮಿ. ಅಂಥ ಪರಿಸರದಲ್ಲಿ ಹೆಸರಾಂತ ಕೊಪ್ಪರಿಗೆ ಮನೆ. ಕ್ರೂರ ಪ್ರಾಣಿಗಳಿಂದ ರಕ್ಷಣೆಗಾಗಿಯೇ ಮನೆಗಳಿಗೆ ಆ ಗಾತ್ರವಿತ್ತು. ಪುಟ್ಟ ತಗ್ಗಾದ ದಿಡ್ಡಿ ಬಾಗಿಲು, ಒಳಮುಖಿ ಕೋಣೆಗಳು, ಹತ್ತಿರ ಹರಿಯುವ ನೀರ ಸೆಲೆ. ಅಂಥ ಮನೆತನದ ಶಂಕರಭಟ್ಟ ಮತ್ತು ಮಡದಿ ಗಂಗಮ್ಮ.…
ಕುಶಾಲನಗರ : ಕೊಡಗು ಜಿಲ್ಲಾ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಸಾಹಿತ್ಯ ಮಂಥನ’ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದ ರಾಜ್ “ಸಂಸ್ಕೃತ ಭಾಷೆ ದೇವರ ಭಾಷೆ, ಜನರ ಭಾಷೆ ಹಾಗೂ ಶ್ರೀಮಂತರ ಭಾಷೆಯಾಗಿತ್ತು. ಜನಸಾಮಾನ್ಯರಿಗೆ ಸಂಸ್ಕೃತ ಭಾಷೆ ಕಬ್ಬಿಣದ ಕಡಲೆಯಾಗಿತ್ತು. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಉಳಿಸಲು ಹಾಗೂ ಬೆಳೆಸಲು ‘ವಿಕ್ರಮಾರ್ಜುನ ವಿಜಯ’ ಹಾಗೂ ‘ಆದಿ ಪುರಾಣ’ ಗ್ರಂಥಗಳನ್ನು ಬರೆದ ಪಂಪ ಮಹಾಕವಿ ಕನ್ನಡ ಭಾಷೆಗೆ ಶ್ರೇಷ್ಠತೆಯನ್ನು ತಂದು ಕೊಟ್ಟ ಮೇರು ಕವಿ. ಇಂದು ಕನ್ನಡ ಮಾತನಾಡಿದರೆ ಕೀಳರಿಮೆ, ಇಂಗ್ಲೀಷ್ ಮಾತನಾಡಿದರೆ ಹಿರಿಮೆ ಎಂದು ಬೀಗುತ್ತಿರುವ ಪರಿಸ್ಥಿತಿ. ಅಂದು ಪಂಪನ ಕಾಲಘಟ್ಟದಲ್ಲಿ ಇದ್ದುದರಿಂದ ಮೇಲ್ವರ್ಗದ ಮಂದಿ ಅಂದು ಸಂಸ್ಕೃತ ಭಾಷೆಯನ್ನು ವೈಭವೀಕರಿಸಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದರಿಂದಾಗಿ ಪಂಪ ಮಹಾಕವಿ ಮೈಕೊಡವಿ ನಿಂತು ಕನ್ನಡ ಸಾಹಿತ್ಯಕ್ಕೆ ಅಪಾರ ಶ್ರೀಮಂತಿಕೆ ತಂದು…
ಬದಿಯಡ್ಕ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ವತಿಯಿಂದ ದಿನಾಂಕ 01 ಮಾರ್ಚ್ 2025ರಂದು ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ‘ದತ್ತಿ ಉಪನ್ಯಾಸ ಮತ್ತು ಕವಿ ಕಾವ್ಯ ಸಂವಾದ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ‘ಎಂ.ಕೆ. ಜಿನಚಂದ್ರನ್ ದತ್ತಿ ಉಪನ್ಯಾಸ’ದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ’ ಎಂಬ ವಿಷಯದ ಕುರಿತು ಮಾತನಾಡಿದ ಖ್ಯಾತ ವಾಗ್ಮಿ ಶ್ರೀಮತಿ ಆಯಿಶಾ ಪೆರ್ಲ “ಕನ್ನಡ ಸಾಹಿತ್ಯಕ್ಕೆ ಜೈನಕವಿಗಳು ನೀಡಿದ ಕೊಡುಗೆ ಅಪಾರ. ಹತ್ತನೇ ಶತಮಾನದ ಜೈನ ಕವಿಗಳು ತಮ್ಮ ಗ್ರಂಥಗಳಲ್ಲಿ ಒಂದನ್ನು ಧರ್ಮಕ್ಕೂ ಇನ್ನೊಂದನ್ನು ಲೌಕಿಕಕ್ಕೂ ಮೀಸಲಾಗಿರಿಸಿದ್ದಾರೆ. ಲೌಕಿಕ ಕಾವ್ಯಗಳಲ್ಲಿ ಪಂಪ, ರನ್ನ, ಪೊನ್ನರು ತಮ್ಮ ಆಶ್ರಯದಾತ ಅರಸರನ್ನು ಪುರಾಣ ಪುರುಷರನ್ನಾಗಿ ಕಲ್ಪಿಸಿಕೊಂಡು ಕಾವ್ಯನಾಯಕರನ್ನಾಗಿ ಮೆರೆಸಿದ್ದಾರೆ. ಆಡಳಿತ ವರ್ಗ ಮತ್ತು ಸಾಹಿತ್ಯ ಯಾವುದೇ ಪೂರ್ವಾಗ್ರಹ ಮತ್ತು ಆಮಿಷಗಳಿಗೆ ಒಳಗಾಗದೆ ಸಾಮರಸ್ಯದಿಂದ ಬೆರೆತು ಕಾರ್ಯನಿರ್ವಹಿಸಿದರೆ ಕಲೆ ಸಂಸ್ಕೃತಿಗಳ ಅಭಿವೃಧ್ಧಿ ಸಾಧ್ಯ. ಪಂಪಯುಗದಲ್ಲಿ ಕಾವ್ಯ ಸೃಷ್ಟಿಯನ್ನು ಮಾಡಿದವರ ಕೃತಿಗಳಲ್ಲಿ ಶೌರ್ಯ ಮತ್ತು ಸಂಸ್ಕೃತಿ ಸ್ಥಾಯಿಯಾಗಿತ್ತು. ಈ ಮನೋಭಾವವನ್ನು…
ಕೋಟ : ಸುವಿಕಾ ಸಾಂಸ್ಕೃತಿಕ ಸಂಘಟನೆ ಕೋಟ ಇದರ ವತಿಯಿಂದ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ (ರಿ.) ಕೋಟ ಇವರ ಸಹಯೋಗದೊಂದಿಗೆ ಉಪನ್ಯಾಸಕ ಹೆಚ್. ಸುಜಯೀಂದ್ರ ಹಂದೆಯವರ ಸಂಪಾದಿತ ಕವನ ಸಂಕಲನ ‘ನನೆ ಮೊಗ್ಗು’ ಅನಾವರಣ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿಯನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಕೋಟ ಕಾರಂತ ಥೀಂ ಪಾರ್ಕ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕೋಟತಟ್ಟು ಪಂಚಾಯತ್ ಇವರ ಅಧ್ಯಕ್ಷರಾದ ಕೆ. ಸತೀಶ್ ಕುಂದರ್ ಬಾರಿಕೆರೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಕವಿ ಸುಮನ ಹೇರ್ಳೆ ಇವರು ಕೃತಿ ಅನಾವರಣಗೊಳಿಸಲಿದ್ದು, ಉಡುಪಿಯ ದೇಶ ವಿದೇಶಗಳ ಫಾರ್ಮಾಸುಟಿಕಲ್ ಸಂಸ್ಥೆಗಳ ಗುಣ ಮಟ್ಟ ನಿಯಂತ್ರಣ ಸಲಹೆಗಾರರಾದ ಡಾ. ವೆಂಕಟ ಕೃಷ್ಣ ಕೆ. ಇವರು ನಮ್ಮೊಂದಿಗೆ ಭಾಗವಹಿಸಲಿದ್ದಾರೆ. ಬಳಿಕ ಉಡುಪಿಯ ನೇತ್ರ ಜ್ಯೋತಿ ಇನ್ ಸ್ಟ್ಯೂಟ್…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯ ಪ್ರಯುಕ್ತ ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ಭೀಷ್ಮಾರ್ಜುನ’ ಆಖ್ಯಾನವು ದಿನಾಂಕ 01 ಮಾರ್ಚ್ 2025ರಂದು ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ತಾರಾನಾಥ ಸವಣೂರು, ಪರೀಕ್ಷಿತ್ ಹಂದ್ರಟ್ಟ, ಶರಣ್ಯ ನೆತ್ತರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಗುಂಡ್ಯಡ್ಕ ಈಶ್ವರ ಭಟ್ ಮತ್ತು ಗುಡ್ಡಪ್ಪ ಬಲ್ಯ (ಭೀಷ್ಮ), ಹರಿಣಾಕ್ಷಿ ಜೆ ಶೆಟ್ಟಿ (ಅರ್ಜುನ), ಅಚ್ಯುತ ಪಾಂಗಣ್ಣಾಯ (ಅಭಿಮನ್ಯು) ಸಹಕರಿಸಿದರು. ಶ್ರೀಮತಿ ಮತ್ತು ಶ್ರೀ ದುಗ್ಗಪ್ಪ ಯನ್. ಕಾರ್ಯಕ್ರಮ ಪ್ರಾಯೋಜಿಸಿದ್ದರು.
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಹಾಗೂ ಬನಾರಿ ಕೀರಿಕ್ಕಾಡು ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಆಶ್ರಯದಲ್ಲಿ ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ದಿನಾಂಕ 02 ಮಾರ್ಚ್ 2025ರಂದು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬದುಕು- ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣೆ ಭಾಷಣ ಮಾಡಿದ ನಿವೃತ್ತ ಮುಖ್ಯ ಶಿಕ್ಷಕ ಡಿ. ರಾಮಣ್ಣ ಮಾಸ್ಟರ್ “ಯಕ್ಷಗಾನದಲ್ಲಿ ಪ್ರಸಂಗದ ಜತೆಗೆ ಪ್ರಸಂಗಕರ್ತರ ಹೆಸರನ್ನೂ ಹೇಳಬೇಕು. ಇದು ಕೃತಿಕಾರರರಿಗೆ ಹಾಗೂ ಅವರ ಪರಿಶ್ರಮಕ್ಕೆ ನೀಡುವ ಗೌರವ. ಯಕ್ಷಗಾನದ ಪುನಶ್ಚೇತನಕ್ಕೆ ವಿಷ್ಣು ಭಟ್ಟರು ಮಹತ್ವದ ಕೊಡುಗೆ ನೀಡಿದ್ದಾರೆ. ಊರಿನ ಜನರ ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆಗೆ ನಾಂದಿ ಹಾಡಿದರು. ಅವರು ಸ್ಥಾಪಿಸಿದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘಕ್ಕೆ ಗಾಢ ಇತಿಹಾಸ ಇದೆ” ಎಂದು ಹೇಳಿದರು.…
ಕನ್ನಡ ಸಾಹಿತ್ಯವನ್ನು ಜನಮುಖಿ ಮಾಡಿದ ಮೊದಲಿಗರಲ್ಲಿ ಚಿರಸ್ಮರಣೀಯ ನಿರಂಜನ ಒಬ್ಬರು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ನವೋದಯದಿಂದ ಸತ್ಯೋತ್ತರ ಯುಗದ ದಲಿತ-ಬಂಡಾಯ ಸಾಹಿತ್ಯದವರೆಗಿನ ಅಕ್ಷರ ಕೃಷಿಯನ್ನು ಗಮನಿಸುವಾಗ ಒಂದು ಹೆಸರು ನೆನಪಾಗಲೇಬೇಕೆಂದರೆ ಅದು ‘ನಿರಂಜನ’ ಎಂದೇ ಗುರುತಿಸಲ್ಪಡುವ ಕುಳಕುಂದ ಶಿವರಾಯರು. ಸ್ವಾತಂತ್ರ್ಯೋತ್ತರ ಭಾರತದ ಕನ್ನಡ ಸಾಹಿತ್ಯ ಲೋಕದಲ್ಲಿ ಆರಂಭದ ದಿನಗಳಿಂದಲೂ ವ್ಯವಸ್ಥಿತವಾಗಿ ರೂಪುಗೊಂಡಿರುವ ‘ಸಾಹಿತ್ಯ ಕೂಟ’ದ ಒಂದು ಬೌದ್ಧಿಕ ಪರಂಪರೆಯಲ್ಲಿ ಸಾಹಿತ್ಯ ಪರಿಚಾರಕರೂ ಸಹ ತತ್ವ, ಸಿದ್ಧಾಂತ ಮತ್ತು ಸಾಮಾಜಿಕ ಅಸ್ಮಿತೆಗಳ ಚೌಕಟ್ಟಿನೊಳಗೆ ಬಂಧಿಸಲ್ಪಟ್ಟಿರುವುದನ್ನು ವಿಷಾದದಿಂದಲೇ ಗುರುತಿಸಬೇಕಿದೆ. ಕಳೆದ ಐದು ದಶಕಗಳಲ್ಲಿ ಜಾತಿ ಅಸ್ಮಿತೆಯೂ ಇದರ ಒಂದು ಭಾಗವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಕೂಟ ವ್ಯವಸ್ಥೆಯ ಒಂದು ಭಾಗವಾಗಿಯೇ ಕನ್ನಡದ ವಿಮರ್ಶಾ ಲೋಕವೂ ಸಹ ತನ್ನದೇ ಆದ ಬೇಲಿಗಳನ್ನು ನಿರ್ಮಿಸಿಕೊಂಡಿರುವುದೂ ಸತ್ಯ. ನವೋದಯ, ನವ್ಯ, ಬಂಡಾಯ-ದಲಿತ ಇತ್ಯಾದಿಗಳ ವರ್ಗೀಕರಣದ ನಡುವೆ ಪ್ರಧಾನವಾಗಿ ಕೇಳಿಬರದ ಒಂದು ಸಾಹಿತ್ಯ ಪ್ರಕಾರ ಎಂದರೆ ಪ್ರಗತಿಶೀಲ ಸಾಹಿತ್ಯ. ಆದರೂ ಒಂದು ಚಳುವಳಿಯ ರೂಪದ ಪ್ರಗತಿಶೀಲ ಸಾಹಿತ್ಯ ಕೆಲವೇ ಸಾಹಿತಿಗಳ ಮೂಲಕ…