Author: roovari

ಪುತ್ತೂರು : ತುಳುಕೂಟೊ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ‘ತುಳುವೆರೆ ಮೇಳೊ – 2024’ ಹಾಗೂ ‘ತೆನೆಸ್ ಮೇಳೊ’ ದಿನಾಂಕ 02-03-2024 ಮತ್ತು 03-03-2024ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 02-03-2024ರಂದು ಅಪರಾಹ್ನ 2 ಗಂಟೆಗೆ ‘ತೆನೆಸ್ ಮೇಳೊ’ದಲ್ಲಿ ಬೇರೊದ ಕಲ ಉದಿಪನವನ್ನು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ, ಮೂಡಾಯಿ ತೆನೆಸ್‌ದ ಕಲವನ್ನು ವೈದ್ಯ ಡಾ. ಸುರೇಶ್ ಪುತ್ತೂರಾಯ ಹಾಗೂ ಪಡ್ಡಾಯಿ ತೆನೆಸ್‌ದ ಕಲವನ್ನು ಉದ್ಯಮಿ ಅಭಿಜಿತ್ ಶೆಟ್ಟಿ ಉದಿಪನ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರೂಪೇಶ ರೈ ಅಲಿಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಿತ್ತಳಿಕೆ ಸೂರ್ಯನಾಥ ಆಳ್ವ, ಜನ್ಮ ಫೌಂಡೇಶನ್‌ನ ಡಾ. ಹರ್ಷ ಕುಮಾರ್ ರೈ ಮಾಡಾವು ಭಾಗವಹಿಸಲಿದ್ದಾರೆ. ಸವಣೂರು ಕೆ. ಸೀತಾರಾಮ ರೈ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಪರಾಹ್ನ 3.30ರಿಂದ ‘ತುಳು ಪದ ನಲಿಕೆ’, 5.30ರಿಂದ ಪುರುಷರಕಟ್ಟೆ ಗುರುಕುಲ ಕಲಾ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆ ಪಾರ್ತಿಸುಬ್ಬ ವಿರಚಿತ ರಾಮಾಯಣದ ‘ಉಂಗುರ ಸಂಧಿ’ ತಾಳಮದ್ದಳೆಯು ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನ, ಭಾರತಿ ನಗರ‌ ಬನ್ನೂರು ಇಲ್ಲಿ ದಿನಾಂಕ 27-02-2024ರಂದು ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಮತ್ತು ಮಾ. ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಭಾಸ್ಕರ್ ಬಾರ್ಯ), ಲಕ್ಷ್ಮಣ (ಚಂದ್ರಶೇಖರ್ ಭಟ್ ಬಡೆಕ್ಕಿಲ), ಸುಗ್ರೀವ (ದಿವಾಕರ ಆಚಾರ್ಯ ಗೇರುಕಟ್ಟೆ), ತಾರೆ (ಕು೦ಬ್ಳೆ ಶ್ರೀಧರ್ ರಾವ್), ಜಾಂಬವ (ಗುಡ್ಡಪ್ಪ ಬಲ್ಯ), ಸಂಪಾತಿ (ಶುಭಾ ಅಡಿಗ), ಸುಷೇಣ (ಹರಿಣಾಕ್ಷಿ ಜೆ. ಶೆಟ್ಟಿ), ಶಿವ (ಪ್ರೇಮಲತಾ ರಾವ್), ಕಣ್ವಮಹರ್ಷಿ (ಭಾರತಿ ಜಯರಾಮ್), ಹನೂಮಂತ (ಮನೋರಮಾ ಜಿ. ಭಟ್), ಅಂಗದ (ಲಕ್ಷ್ಮಿ ವಿ.ಜಿ. ಭಟ್) ಮತ್ತು ಸ್ವಯಂಪ್ರಭೆ (ಭಾರತಿ ರೈ ಅರಿಯಡ್ಕ) ಸಹಕರಿಸಿದರು. ಟಿ. ರಂಗನಾಥ ಸ್ವಾಗತಿಸಿ, ರಾಜ್ ಗೋಪಾಲ್ ಭಟ್…

Read More

ಮಂಗಳೂರು : ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಲಾದ 32ನೇ ವರ್ಷದ ‘ಯಕ್ಷೋತ್ಸವ’ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭವು ದಿನಾಂಕ 25-02-2024ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಯಕ್ಷಗಾನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಆಡಳಿತಾತ್ಮಕ ಸದಸ್ಯ ಶ್ಯಾಮ್ ಭಟ್ ಇವರು ಮಾತನಾಡುತ್ತಾ “ವಿದ್ಯಾವಂತ ಸಮಾಜ ಯಕ್ಷಗಾನ ಕ್ಷೇತ್ರದತ್ತ ಒಲವು ಹೊಂದಿರುವುದು ಉತ್ತಮ ವಿಚಾರ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಲೆ ಉಳಿಸಲು ಮುಂದಾಗಿರುವುದು ಅವುಗಳ ಶ್ರೀಮಂತಿಕೆಯನ್ನು ವಿವರಿಸುತ್ತಿದ್ದು. ವಿದ್ಯಾರ್ಥಿಗಳ ಕಲಾ ಜೀವನ ಯಶಸ್ವಿಯಾಗಲಿ. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಮುಂದುವರಿಸಲಾಗದವರು ಯಕ್ಷಗಾನ ಕ್ಷೇತ್ರವನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಇಂದು ಚಿತ್ರಣವೇ ಬದಲಾಗಿದ್ದು, ವಿದ್ಯಾವಂತರು ಯಕ್ಷಗಾನದಲ್ಲಿ ಹೆಚ್ಚು ಭಾಗವಹಿಸುತ್ತಿರುವುದು ಕಲೆಯ ಬೆಳವಣಿಗೆಗೆ ಪೂರಕ. ಮೂವತ್ತೆರಡು ವರ್ಷಗಳ ಹಿಂದೆಯೇ ಯಕ್ಷಗಾನ ಸ್ಪರ್ಧೆಯನ್ನು ಆರಂಭಿಸಿರುವುದು ಸಂಸ್ಥೆಗೆ ಹಿರಿಮೆ ತಂದಿದೆ. ಎಲ್ಲಾ ತಂಡಗಳು ಒಂದೇ ಪ್ರಸಂಗವನ್ನು ಪ್ರದರ್ಶಿಸಿರುವ…

Read More

ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ‘ಕನ್ನಡ ಸಾಹಿತ್ಯೋತ್ಸವ’ ಮತ್ತು ನೂತನ ಕೃತಿಗಳ ಬಿಡುಗಡೆ ಸಮಾರಂಭವು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ದಿನಾಂಕ 25-02-2024ರಂದು ಯಶಸ್ವಿಯಾಗಿ, ಅವಿಸ್ಮರಣೀಯ ರೀತಿಯಲ್ಲಿ ನಡೆಯಿತು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಉದ್ಘಾಟಿಸಿ ಶುಭ ಹಾರೈಸಿದರು. ರತ್ನಾ ಟಿ.ಕೆ. ಭಟ್ ಅವರ ರಾಘವೇಂದ್ರ ಚರಿತ್ರೆ (ಮೊದಲ ಕೃತಿ), ಹೊನ್ನ ರಶ್ಮಿ (ಕವನಗಳು), ಹನಿ ಹನಿಗಳ ನಡುವೆ (ಹಾಯ್ಕು, ಟಂಕಾ, ಅಬಾಬಿ, ಚುಟುಕು, ರುಬಾಯಿ, ಶಿಶುಗೀತೆ ಮತ್ತು ಮಿನಿ ಕವನಗಳು), ಮುಂಜಾವಿನ ಧ್ವನಿ (ಗಝಲ್ ಗಳು), ವಚನ ಬಿಂದು (ಆಧುನಿಕ ವಚನಗಳು) ಎಂಬ ಐದು ಕೃತಿಗಳು ಮತ್ತು ಹಾ.ಮ. ಸತೀಶರ ಕೊನೆಯ ನಿಲ್ದಾಣ (ಕವನಗಳು), ಪ್ರಕೃತಿ ಪ್ರೀತಿ ಬದುಕು (ಗಝಲ್ ಗಳು) ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಕೃತಿಗಳು. ‘ಕೊನೆಯ ನಿಲ್ದಾಣ’ ಹಾ.ಮ. ಸತೀಶರ ಹತ್ತನೇ ಕೃತಿಯಾಗಿರುವುದು ಒಂದು ವಿಶೇಷ. ‘ಪ್ರಕೃತಿ ಪ್ರೀತಿ ಬದುಕು’ ಹನ್ನೊಂದನೇ ಕೃತಿ. ಮೂಡಬಿದ್ರೆಯ ಹಿರಿಯ ಉದ್ಯಮಿ ಶ್ರೀಪತಿ…

Read More

ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 25-02-2024ರಂದು ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ಯುವ ಕವಯತ್ರಿ ಪ್ರಿಯಾ ಸುಳ್ಯರವರ ‘ಬಾಳಿಗೆ ಬೆಳಕು’ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದ ನ್ಯಾಯವಾದಿಗಳಾದ ಶ್ರೀ ಭಾಸ್ಕರ್ ಕೋಡಿಂಬಾಳ ಅವರು “ಸಾಹಿತ್ಯ ಎನ್ನುವುದು ನಮ್ಮನ್ನ ಬೆಸೆಯುವಂತದ್ದು, ಸಾಹಿತಿಗಳು ಬರೆದಂತೆ ನಡೆಯುವ ಗುಣ ಹೊಂದಿರುವವರಾಗಿದ್ದಲ್ಲಿ ಸ್ವಚ್ಛ ಸಮಾಜದ ನಿರ್ಮಾಣ ಸಾಧ್ಯ” ಎಂದು ಕೃತಿಕಾರರನ್ನು ಅಭಿನಂದಿಸಿದರು. ವಿಶೇಷ ಆಹ್ವಾನಿತರಾದ ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ವಸಂತಶೆಟ್ಟಿ ಬೆಳ್ಳಾರೆ ಅವರು ಮಾತನಾಡಿ “ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಿರಿಯ ಕಿರಿಯ ಸಾಹಿತಿಗಳನ್ನು ಒಗ್ಗೂಡಿಸಿ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅಭಿನಂದನೀಯ” ಎನ್ನುತ್ತಾ  ಕೃತಿಕಾರರಾದ ಪ್ರಿಯಾ ಸುಳ್ಯ ಅವರನ್ನು ಅಭಿನಂದಿಸಿದರು. ರಾಜಧಾನಿ ದೆಹಲಿಯಲ್ಲಿ ಕನ್ನಡ ಡಿಂಡಿಮವನ್ನು ಮೊಳಗಿಸಿದ ಹಾಗೂ ಕನ್ನಡ ಪರ ಸೇವೆಗಾಗಿ…

Read More

ಮಂಗಳೂರು : ಭಿನ್ನ ಸಾಮರ್ಥ್ಯದ ಮಕ್ಕಳ ಸಂಸ್ಥೆಯಾದ ‘ಸಾನಿಧ್ಯ’ ಆಯೋಜಿಸುತ್ತಿರುವ ಎರಡು ದಿನಗಳ ‘ವಿಷನ್ -2024’ ಹಾಗೂ ‘ಸಾನಿಧ್ಯ ಉತ್ಸವ’ ಕಾರ್ಯಕ್ರಮವು ದಿನಾಂಕ 09-03-2024 ಮತ್ತು 10-03-2024 ರಂದು ಮಂಗಳೂರಿನ ಕದ್ರಿ ಉದ್ಯಾನದ ವೇದಿಕೆಯಲ್ಲಿ ನಡೆಯಲಿದೆ. ದಿನಾಂಕ 09-03-2024ರ ಶನಿವಾರದಂದು ಸಂಜೆ ಘಂಟೆ 05.30ಕ್ಕೆ ಸರಿಯಾಗಿ ಸಾನಿಧ್ಯ ವಿಶೇಷ ಮಕ್ಕಳು ತರಬೇತಿದಾರರ ನೆರವಿನಿಂದ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ‘ವಿಷನ್ -2024’ ಉದ್ಘಾಟನೆಗೊಳ್ಳಲಿದ್ದು,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕರಾಗಿರುವ ಶ್ರೀಯುತ ಎ. ಉಸ್ಮಾನ್ ಹಾಗೂ ಸಮಾಜ ಸೇವಕಿ ಶ್ರೀಮತಿ ರೂಪಕಲಾ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದಿನಾಂಕ 10-03-2024ರ ಆದಿತ್ಯವಾರದಂದು ನಡೆಯಲಿರುವ ‘ಸಾನಿಧ್ಯ ಉತ್ಸವ’ವನ್ನು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾಗಿರುವ ವೇದಮೂರ್ತಿ ಶ್ರೀ ಕೆ. ಕಮಲಾದೇವಿ ಪ್ರಸಾದ ಅಸ್ರಣ್ಣನವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್. ಎಸ್. ಶೆಟ್ಟಿ ಆಂಡ್ ಕಂ. ಮುಂಬೈ ಇದರ ಆಡಳಿತ ನಿರ್ದೇಶಕ ಹಾಗೂ  ಲೆಕ್ಕ ಪರಿಶೋಧಕರಾಗಿರುವ…

Read More

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡುತ್ತಿರುವ ‘ಮಲಬಾರ್ ವಿಶ್ವರಂಗ ಪುರಸ್ಕಾರ 2024ಕ್ಕೆ ‘ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ  ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ. ನಾಟಕ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಆರ್. ಎಲ್. ಭಟ್ ಉಡುಪಿ ಇವರಿಗೆ, ರಂಗ ನಿರ್ದೇಶಕರಾದ  ಕೆ. ವಿ. ರಾಘವೇಂದ್ರ ಐತಾಳ್ ಮುಂಬೈ, ರಂಗ ಸಂಘಟಕರಾದ ಕಜೆ ರಾಮಚಂದ್ರ ಭಟ್, ರಂಗ ಸಂಘಟಕರು ಹಾಗೂ ನಿರ್ದೇಶಕರಾದ ಎಸ್. ವಿ. ರಮೇಶ್ ಬೇಗಾರ್ ಹಾಗೂ ರಂಗ ನಟಿಯಾದ ಸುಜಾತ ಶೆಟ್ಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರಿಗೆ  ದಿನಾಂಕ 26-03-2024 ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವರಂಗ ಪುರಸ್ಕಾರ-2024’ ಪ್ರಧಾನ ಮಾಡಲಾಗುವುದು ಎಂದು ಮಲಬಾರ್ ವಿಶ್ವರಂಗ ಪುರಸ್ಕಾರ ಸಮಿತಿಯ ಸಂಚಾಲಕರಾದ ರಾಜೇಶ್ ಭಟ್ ಪಣಿಯಾಡಿ ತಿಳಿಸಿರುತ್ತಾರೆ.…

Read More

ಉಡುಪಿ : ಉಡುಪಿಯ ಅಜ್ಜರ ಕಾಡಿನಲ್ಲಿರುವ ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 3ನೇ ದಿನದ ಕಾರ್ಯಕ್ರಮವು ದಿನಾಂಕ 27-02-2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ “ರಂಗ ಚಟುವಟಿಕೆಗಳು ಉತ್ಸವಗಳಾಗದೇ ಚಳವಳಿಗಳಾಗಬೇಕು. ಇಲ್ಲದೇ ಇದ್ದರೆ ಮನೋರಂಜನೆಗೆ ಸೀಮಿತವಾಗುತ್ತವೆ ಹೊರತು ಬೇರೇನನ್ನೂ ಹೇಳಲಾರವು. ರಂಗಚಟುವಟಿಕೆಗಳ ದೊಡ್ಡ ಕೇಂದ್ರವಾದ ಉಡುಪಿಯಲ್ಲಿ ಅನೇಕ ರಂಗಸಂಸ್ಥೆಗಳಿವೆ. ನಿರಂತರ ರಂಗ ಕಾರ್ಯಕ್ರಮಗಳಾಗುತ್ತಿರುತ್ತವೆ. ಆದರೆ, ಪರಸ್ಪರ ಕೊಡುಕೊಳ್ಳುವಿಕೆ ಇಲ್ಲದೇ ಸಂಸ್ಥೆಗಳು ದ್ವೀಪಗಳಾಗುತ್ತಿವೆ. ಇಲ್ಲಿ ರಂಗಚಳವಳಿಯಾಗದೇ ಇರಲು ಇದೂ ಕೂಡಾ ಕಾರಣ ಎಂದು ವಿಶ್ಲೇಷಿಸಿ ಕಲಾವಿದರಲ್ಲಿ, ಸಂಘಟಕರಲ್ಲಿ ಸಾಂಸ್ಕೃತಿಕ, ಸಾಮಾಜಿಕ ಬದ್ಧತೆ ಇರಬೇಕು. ವ್ಯವಸ್ಥೆಗೆ ಪ್ರಭುತ್ವಕ್ಕೆ ಪ್ರತಿರೋಧವಾಗಿ ರಂಗಭೂಮಿ ಹುಟ್ಟಿದೆ. ಆದರೆ ಇಂದು ಪ್ರಭುತ್ವದೊಂದಿಗೆ ಹೊಂದಾಣಿಕೆ, ರಾಜಿ ಮಾಡಿಕೊಂಡು ಪ್ರದರ್ಶನಗಳು ನಡೆಯುತ್ತಿವೆ. ಧರ್ಮ, ದೇವರು, ಭಾಷೆ ಹೀಗೆ ಎಲ್ಲವೂ ರಾಜಕೀಯ ಪ್ರಪಗಾಂಡದ ಟೂಲ್ ಆಗಿ ಬಳಕೆಯಾಗುತ್ತಿರುವ ಈ ಹೊತ್ತಿನಲ್ಲಿ ರಂಗಭೂಮಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು…

Read More

ಮೈಸೂರು : ಜಿ. ಪಿ. ಐ. ಇ. ಆರ್.  ರಂಗತಂಡದ 30ನೇ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 27-03-2024 ರಿಂದ 31-03-2024ರ ವರೆಗೆ ನಡೆಯಲಿರುವ ರಾಷ್ಟ್ರೀಯ ರಂಗೋತ್ಸವ ಮೈಸೂರಿನಲ್ಲಿ ನಡೆಯಲಿದ್ದು, ಇದರ ಬಿತ್ತಿಪತ್ರ(ಪೋಸ್ಟರ್) ಬಿಡುಗಡೆ ಕಾರ್ಯಕ್ರಮವು ದಿನಾಂಕ 25-02-2024 ರಂದು ಮೈಸೂರಿನ ರಂಗಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಡೆಯಿತು. ಮಂಟೇಸ್ವಾಮಿ ಕಥಾಪ್ರಸಂಗ ನಾಟಕ ಪ್ರದರ್ಶನದ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಶ್ರೀ ಸಿ. ಬಸವಲಿಂಗಯ್ಯ ಹಾಗೂ ಜಾನಪದ ಕಲಾವಿದರಾದ ಡಾ.ಮೈಸೂರು ಗುರುರಾಜ್ ಅವರು ಬಿತ್ತಿಪತ್ರ ಬಿಡುಗಡೆ ಗೊಳಿಸಿ ಶುಭಹಾರೈಸಿದರು. ಹಿರಿಯ ರಂಗಕರ್ಮಿ ಮೈಮ್ ರಮೇಶ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಚಾಲಕ ಎಂ. ಪಿ. ಹರಿದತ್ತ, ರಾಜೇಶ್ ತಲಕಾಡು, ಕೇಶವಮೂರ್ತಿ,  ಲೋಹಿತ್, ಚೇತನ್ ರಾವ್, ಸಂಜೈಮೋಹನ್, ಅಬ್ದುಲ್ ಕರೀಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Read More

ತೆಕ್ಕಟ್ಟೆ : ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಯ ಸಹಕಾರದೊಂದಿಗೆ ತೆಕ್ಕಟ್ಟೆ ಕೊಮೆಯ ಯಶಸ್ವೀ ಕಲಾವೃಂದದ “ಸಿನ್ಸ್ 1999 ಶ್ವೇತಯಾನ”ದ ಶ್ವೇತ ಸಂಜೆ-2ರ ಕಾರ್ಯಕ್ರಮವು ಕೊಮೆಯ ಹೆಗ್ಡೆಕೆರೆ ಬೊಬ್ಬರ್ಯ ದೈವಸ್ಥಾನದಲ್ಲಿ ದಿನಾಂಕ 24-02-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಡಯೆಟ್ ಉಡುಪಿಯ ಹಿರಿಯ ಉಪನ್ಯಾಸಕರಾದ ಶ್ರೀ ಯೋಗ ನರಸಿಂಹಸ್ವಾಮಿ ಇವರು ರಸರಂಗ ಕೋಟ ಸಂಸ್ಥೆಯ ಕಲಾವಿದರನ್ನು ಗೌರವಿಸಿ ಸಭೆಯನ್ನುದ್ದೇಶಿಸಿ ಮಾತನ್ನಾಡುತ್ತಾ “ಶಿಕ್ಷಣವೆನ್ನುವುದು ಪ್ರತಿಯೊಬ್ಬರ ಹಕ್ಕು. ಸಂಪೂರ್ಣ ಸಾಕ್ಷರತೆಯ ಉದ್ದೇಶವಾಗಿರಿಸಿಕೊಂಡು ಸರಕಾರ ಸಾರುತ್ತಿರುವ ಶಿಕ್ಷಣದೊಳಗಿನ ಸಾರ ಎಲ್ಲರನ್ನೂ ತಲುಪಬೇಕೆಂದಾದರೆ ಸಾರ್ವತ್ರಿಕವಾದ ಶ್ರಮ ಬೇಕಾಗುತ್ತದೆ. ನವಭಾರತ ಆಯೋಜಿಸಲ್ಪಟ್ಟಿದ್ದ ನವಭಾರತ ಸಾಕ್ಷರತಾ ಕಾರ್ಯಕ್ರಮವನ್ನು ಎಲ್ಲರೂ ಯಶಸ್ವಿಗೊಳಿಸಬೇಕು” ಎಂದು ಹೇಳಿದರು. 25ನೇ ರಜತ ಸಂಭ್ರಮವನ್ನು ಆಚರಿಸಿಕೊಂಡ ಸಂಸ್ಥೆಯ ವಾರಾಂತ್ಯದ ಕಾರ್ಯಕ್ರಮವು ವಿಭಿನ್ನ ಕಲಾ ಪ್ರಕಾರದೊಂದಿಗೆ ಸಂಪನ್ನಗೊಳ್ಳುವುದರೊಂದಿಗೆ ವಿವಿಧ ಕಲಾವಿದರ ಕಾರ್ಯಕ್ರಮವು ಸಂಸ್ಥೆಯ ವೇದಿಕೆಯಲ್ಲಿ ವಿಭಿನ್ನ ಪರಿಕಲ್ಪನೆಯಲ್ಲಿ ಪ್ರಸ್ತುತಿಗೊಳ್ಳಲಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ ಹೇಳಿದರು. ಸಿನ್ಸ್ 1999 ಶ್ವೇತಯಾನ ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಹಾಗೂ…

Read More