Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಖ್ಯಾತ ವಿಮರ್ಶಕ ಪ್ರೊ. ವಿ.ಎಂ. ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಖ್ಯಾತ ವಿಮರ್ಶಕ ಡಾ. ಎ. ಮೋಹನ್ ಕುಂಟಾರ್ ಅವರ ‘ಸ್ವಗತ ಮತ್ತು ಸಂವಾದ ವಿಮರ್ಶಾಕೃತಿಯು 2023ರ ಸಾಲಿಗೆ ಆಯ್ಕೆಯಾಗಿದೆಯೆಂದು ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯನ್ನು ದಿನಾಂಕ 27-05-2024ರಂದು ಎಂ.ಜಿ.ಎಂ ಕಾಲೇಜಿನಲ್ಲಿ ನಡೆಯಲಿರುವ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುವುದು. ಕನ್ನಡದಲ್ಲಿ ಎಂ. ಎ., ಎಂ. ಫಿಲ್, ಪಿ. ಎಚ್. ಡಿ. ಪದವಿಯನ್ನು ಹೊಂದಿರುವ ಡಾ. ಎ. ಮೋಹನ್ ಕುಂಟಾರ್ ಮಲೆಯಾಳಂ ಮತ್ತು ತಮಿಳು ಭಾಷೆಯಲ್ಲಿ ಸರ್ಟಿಫಿಕೇಟ್ ಹಾಗೂ ತೆಲುಗಿನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇಲ್ಲಿನ ಭಾಷಾಂತರ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಉದ್ಯೋಗಕ್ಕೆ ಸೇರಿ ಉಪನ್ಯಾಸಕರಾಗಿ, ಪ್ರವಾಚಕರಾಗಿ ಪ್ರಸ್ತುತ ಭಾಷಾಂತರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರು ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. 15…
ಕೋಟ : ಕೇಂದ್ರ ಲಲಿತ ಕಲಾ ಅಕಾಡೆಮಿಯಿಂದ ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತರಾದ ಕೋಟ ಹಂದಟ್ಟಿನ ಎಚ್. ಜಿ. ಗಣೇಶ್ ಉರಾಳರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ‘ಆಧುನಿಕ ಭಾರತೀಯ ಶಿಲ್ಪ ಕಲೆಯಲ್ಲಿ ಅಭಿವ್ಯಕ್ತಿತ ಗ್ರಾಮ್ಯ ರೂಪಾಕಾರಗಳ ಪುನರಭಿವ್ಯಕ್ತಿ’ ಎಂಬ ವಿಷಯಕ್ಕೆ ಸಂಬಂಧಿಸಿ ಮಂಡಿಸಿದ ಪಿ. ಎಚ್. ಡಿ. ಪ್ರೌಢ ಪ್ರಬಂಧಕ್ಕೆ ಶಿಲ್ಪಕಲಾ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಕೋಟದ ಯಕ್ಷಗಾನ ಮತ್ತು ನಾಟಕ ಪ್ರಸಾಧನ ತಜ್ಞ ಎಚ್. ಗೋವಿಂದ ಉರಾಳ ಮತ್ತು ನಾಗರತ್ನ ದಂಪತಿಗಳ ಪುತ್ರರಾದ ಇವರು ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡಮಿಯಲ್ಲಿ ‘ಸ್ವರ್ಣ ಪದಕ’ದೊಂದಿಗೆ ಶಿಲ್ಪ ಕಲಾ ಸ್ನಾತಕ ಪದವಿಯನ್ನು ಪಡೆದು, ಮುಂದೆ ಗುಜರಾತಿನ ವಡೋದರದ ‘ದಿ ಮಹಾರಾಜ ಸಯಾಜಿ ರಾವ್ ವಿಶ್ವ ವಿದ್ಯಾನಿಲಯ’ದಲ್ಲಿ ಶಿಲ್ಪ ಕಲಾ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಇದೀಗ ಮಣಿಪಾಲದ ಮಾಹೆಯಲ್ಲಿ ‘ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್’ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಂಭವಿ ಗಿಳಿಯಾರು ಶಾಲೆ,…
ಪುತ್ತೂರು : ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರ ವಿವೇಕಾನಂದ ಕಾಲೇಜು ಪುತ್ತೂರು ಇವರು ಕೊಡಮಾಡುವ ಶ್ರೀ ನಿರಂಜನ ಪ್ರಶಸ್ತಿ 2023 ಹಾಗೂ ಶ್ರೀ ಸಿದ್ಧಮೂಲೆ ಶಂಕರನಾರಾಯಣ ಭಟ್ಟರು ಸ್ಥಾಪಿಸಿ ವಿದ್ವಾಂಸರಿಗೆ ನೀಡುವ ಶ್ರೀ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 09-05-2024ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಶ್ರೀ ನಿರಂಜನ ಪ್ರಶಸ್ತಿ 2023ರನ್ನು ಹಿರಿಯ ಸಾಹಿತಿಗಳಾದ ಪ್ರೊ. ಶ್ರೀ ವಿ. ಬಿ. ಅರ್ತಿಕಜೆಯವರಿಗೆ ಹಾಗೂ ಶ್ರೀ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನಕ್ಕೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಶ್ರೀ ನಿರಂಜನ ವಾನಳ್ಳಿ ಮತ್ತು ಬೆಟ್ಪಂಪಾಡಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ವರದರಾಜ ಚಂದ್ರಗಿರಿಯವರು ಅಭಿನಂದನಾ ಮಾತುಗಳನ್ನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೃಷ್ಣ ಭಟ್, ವಿವೇಕಾನಂದ ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ, ಕಾರ್ಯದರ್ಶಿಗಳಾದ ಮುರಳಿ ಕೃಷ್ಣ…
ಪುತ್ತೂರು : ಹಿರಿಯ ಸಾಹಿತಿಗಳಾದ ದಿವಂಗತ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ ಶ್ರದ್ಧಾಂಜಲಿ ಸಭೆಯು ದಿನಾಂಕ 09-05-2024 ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು. ನಿವೃತ್ತ ಶಿಕ್ಷಕರಾದ ಶ್ರೀಧರ್ ರೈ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಬಿ. ಪುರಂದರ ಭಟ್, ಡಾ. ವರದರಾಜ ಚಂದ್ರಗಿರಿ, ನಾರಾಯಣ ರೈ ಕುಕ್ಕುವಳ್ಳಿ, ವಿಜಯಕುಮಾರ್, ಬಿ. ವಿ. ಸೂರ್ಯನಾರಾಯಣ, ಬಿ. ಐತಪ್ಪ ನಾಯ್ಕ ಮುಂತಾದವರು ದಿ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರೊಂದಿಗಿನ ಒಡನಾಟದ ಅನುಭವವನ್ನು ಹಂಚಿ ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರೊ. ದತ್ತಾತ್ರೇಯ ರಾವ್ ಇವರು ರಾಮಕೃಷ್ಣ ಆಚಾರ್ ಅವರು ರಚಿಸಿದ ತುಳು ಕವಿತೆಯೊಂದನ್ನು ಹಾಡಿ ವಿಶೇಷವಾಗಿ ನುಡಿ ನಮನ ಸಲ್ಲಿಸಿದರು. ಶ್ರೀಮತಿ ಶಾಂತ ಪುತ್ತೂರು, ರಂಗನಾಥ್ ರಾವ್, ಸಂತೋಷ್ ಕುಮಾರ್, ಸೂರ್ಯ ನಾರಾಯಣ ಶರ್ಮಾ, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು. ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್…
ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ ತೃತೀಯ ಬಿ. ಸಿ. ಎ. ವಿದ್ಯಾರ್ಥಿನಿ ದಿವ್ಯಶ್ರೀ ಕೆ. ಎನ್. ಭಟ್ ಇವರು ಸಪ್ನ ಬುಕ್ ಹೌಸ್ ಬೆಂಗಳೂರು 2002ರಲ್ಲಿ ಮುದ್ರಿಸಿದ ಟಿ. ಆರ್. ಅನಂತರಾಮು ಇವರ ‘ಶಕ್ತಿ ಸಾರಥಿ ರಾಷ್ಟ್ರಪತಿ ಅಬ್ದುಲ್ ಕಲಾಂ’ ಎಂಬ ಪುಸ್ತಕವನ್ನು ಪರಿಚಯಿಸಿದರು. 120 ಪುಟಗಳ ಈ ಪುಸ್ತಕವು ಹದಿನಾಲ್ಕು ಲೇಖನಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಬಾನಾಡಿಗಳಂತೆ ಬಾನಿನಲ್ಲಿ ಹಾರಬೇಕೆಂದು ಬಯಸಿದ ಹುಡುಗ ಮುಂದೆ ತಂತ್ರಜ್ಞಾನದಿಂದ ನಮ್ಮ ಆಕಾಶವನ್ನು ಆಳಿದ ಕಥೆ, ನಮ್ಮ ಪ್ರಜಾಪ್ರಭುತ್ವದ ರಥಕ್ಕೇ ಸಾರಥಿಯಾದ ಕಥೆ, ಸೋಲನ್ನು ಅರಗಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಂಡ ಮಹಾನ್ ವ್ಯಕ್ತಿಯ ಜೀವನ ಚಿತ್ರಣ ಸುಂದರವಾಗಿ ಮೂಡಿಬಂದಿವೆ ಎಂದರು. ಅಬ್ದುಲ್ ಕಲಾಂರವರು ತಮಿಳುನಾಡಿನ ರಾಮೇಶ್ವರಂನಲ್ಲಿ, 15-10-1937ರಂದು ಜನಿಸಿದರು. ತಂದೆ ಜೈನುಲಾಬ್ದಿನ್ ಮರಕಯಾರ್, ತಾಯಿ ಆಶಿಯಮ್ಮ. ಕಲಾಂ ಏಳು ಮಕ್ಕಳಲ್ಲಿ ಕೊನೆಯವರು. ತಂದೆ ದೋಣಿಗಳ ಮಾಲೀಕರಷ್ಟೇ ಅಲ್ಲ,…
ನಿಡ್ಲೆ : ಸ್ಪೂರ್ತಿದಾಯಕ ಮತ್ತು ಕಲಿಕೆಗೆ ಅವಕಾಶ ಮಾಡಿಕೊಡುವ ಕರುಂಬಿತ್ತಿಲ್ ಶಿಬಿರವು ದಿನಾಂಕ 15-05-2024ರಿಂದ 19-05-2024ರವರೆಗೆ ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿರುವ ಕರುಂಬಿತ್ತಿಲ್ ಮನೆಯಲ್ಲಿ ನಡೆಯಲಿದೆ. ದಿನಾಂಕ 15-05-2024ರಂದು ಬೆಳಗ್ಗೆ 9-30ಕ್ಕೆ ಶ್ರೀ ಡಿ.ಬಿ. ಪ್ರಕಾಶ್ ದೇವಾಡಿಗ, ಶ್ರೀ ಧರ್ಮಸ್ಥಳ ಗೋಪಾಲ ದೇವಾಡಿಗ ಮತ್ತು ಶ್ರೀ ನಿತ್ಯಾನಂದ ದೇವಾಡಿಗ ಇವರಿಂದ ಮಂಗಳ ವಾದ್ಯ ಪ್ರಸ್ತುತಿಗೊಳ್ಳಲಿದೆ. 10-30 ಗಂಟೆಗೆ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪದಾಂಗಳವರು ಇವರಿಂದ ಉದ್ಘಾಟನೆ ನಡೆಯಲಿದೆ. ವಿದ್ವಾನ್ ಉದಯಕುಮಾರ್ ಸರಳತಾಯ ಇವರಿಂದ ಪ್ರವಚನ ಮತ್ತು ಅಮೇರಿಕಾದ ಮೃದಂಗ ವಾದಕರಾದ ಡಾ. ರಮೇಶ್ ಶ್ರೀನಿವಾಸನ್ ಇವರಿಂದ ವಿಶೇಷ ಸಂಗೀತ ಮೇಳ ಜರುಗಲಿದೆ. ಸಂಜೆ ಗಂಟೆ 4-00ರಿಂದ ಶ್ರೀಮತಿ ಇಂದಿರಾ ಕಡಂಬಿಯವರಿಂದ ಪ್ರಸ್ತುತಗೊಳ್ಳಲಿರುವ ಭರತನಾಟ್ಯ ಪ್ರದರ್ಶನಕ್ಕೆ ಹಾಡುಗಾರಿಕೆಯಲ್ಲಿ ಶ್ರೀ ಟಿ.ವಿ. ರಾಮ್ ಪ್ರಸಾದ್, ಶ್ರೀ ವಿಠಲ್ ರಂಗನ್ ಮತ್ತು ಶ್ರೀ ಎಂ.ಎಸ್. ವರದನ್ ಮತ್ತು ಶ್ರೀ ಪಯ್ಯನೂರ್ ಗೋವಿಂದಪ್ರಸಾದ್ ಸಹಕರಿಸಲಿದ್ದಾರೆ. 7-00 ಗಂಟೆಗೆ ಶ್ರೀ ವಿಷ್ಣು ಆರ್. ಮತ್ತು ತಂಡದವರಿಂದ ನವತಾರ್…
ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನ ದಿನಾಚರಣೆಯು ಕಾಸರಗೋಡಿನಲ್ಲಿರುವ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ದಿನಾಂಕ 05-05-2024ರಂದು ನಡೆಯಿತು. ಹಿರಿಯ ಸಾಹಿತಿ ವೈ. ಸತ್ಯನಾರಾಯಣ ಕಾಸರಗೋಡು ಇವರು ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ “ಕನ್ನಡಿಗರನ್ನು ಬೆಸೆಯುವಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾದುದು” ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು. ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆಯ ಮುಖ್ಯ ಶಿಕ್ಷಕ ರಾಜಾರಾಮ ರಾವ್ ಇವರು ‘ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳೆದು ಬಂದ ದಾರಿ, ಜನಸಾಮಾನ್ಯರನ್ನು ತನ್ನತ್ತ ಸೆಳೆದ ಬಗೆಯನ್ನು ವಿವರಿಸಿ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಪರಿಷತ್ ವಹಿಸಿದ ಪಾತ್ರ ಮಹತ್ತರವಾದುದು ಎಂದು ಅವರು ಹೇಳಿದರು. ಮೀಯಪದವು ಹೈಯರ್…
ಮೈಸೂರು : ನಟನ ರಂಗಶಾಲೆ ವತಿಯಿಂದ ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿಯ ‘ರಂಗಭೂಮಿ ಡಿಪ್ಲೊಮಾ 2024-25’ ತರಗತಿಯು ಪ್ರತಿದಿನ ಸಂಜೆ ಗಂಟೆ 5-30ರಿಂದ ರಾತ್ರಿ ಗಂಟೆ 9-00ರವರೆಗೆ ನಡೆಯಲಿದೆ. 16ರಿಂದ 30 ವರ್ಷ ವಯೋಮಿತಿಯ ಅರ್ಹ ಅಭ್ಯರ್ಥಿಗಳು ನಟನ ರಂಗಶಾಲೆಯ ಕಛೇರಿಯಲ್ಲಿ ಅಥವಾ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಅರ್ಜಿ ಶುಲ್ಕದೊಂದಿಗೆ ನೇರವಾಗಿ ಅಥವಾ ಅಂಚೆಯ ಮುಖಾಂತರ ಕಛೇರಿಗೆ ತಲುಪಿಸತಕ್ಕದ್ದು. ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಸಂದರ್ಶನದಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು. ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ (ಆಡಿಷನ್)ವು ನಟನ ರಂಗಶಾಲೆಯಲ್ಲಿ ದಿನಾಂಕ 19-05-2024ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 01ರವರೆಗೆ ನಡೆಯಲಿದೆ. ವೆಬ್ಸೈಟ್ : www.natanamysuru.org ವಿಳಾಸ: ನಟನ ರಂಗಶಾಲೆ, ರಾಮಕೃಷ್ಣ ನಗರ ‘ಕೆ’ ಬ್ಲಾಕ್, ಮೈಸೂರು -570022 ಪ್ರವೇಶ ಶುಲ್ಕ ಮತ್ತು ಇತರ ಮಾಹಿತಿಗಳಿಗಾಗಿ ಸಂಪರ್ಕಿಸಿ : 7259537777, 9480468327
ಐವತ್ತರ ದಶಕದಲ್ಲಿ ಕನ್ನಡ ನವೋದಯ ಕಾವ್ಯವು ತನ್ನ ಸತ್ವವನ್ನು ಬಹುಮಟ್ಟಿಗೆ ಕಳೆದುಕೊಂಡಿದ್ದು ಕಾವ್ಯದಲ್ಲಿ ಏಕತಾನತೆ ಕಂಡುಬರತೊಡಗಿತ್ತು. ನಿಸರ್ಗ ಸೌಂದರ್ಯ, ಆದರ್ಶ ಪ್ರೇಮ, ದೇಶಭಕ್ತಿ ಮೊದಲಾದ ಆಶಯಗಳು ಬೇಂದ್ರೆ, ಕುವೆಂಪು, ಪು.ತಿ.ನ. ಇವರೆಲ್ಲರ ಹಾದಿಯಲ್ಲೇ ಪುನರುಕ್ತವಾಗುತ್ತಿದ್ದವು. ಕಾವ್ಯವು ತನ್ನ ಸಿದ್ಧ ಭಾಷೆಯಲ್ಲಿ ಆರಾಧನೆ-ಸಮರ್ಪಣ ಭಾವವನ್ನು ಬಿಟ್ಟು ಬೇರೆ ಯಾವ ಅನುಭವದ ವ್ಯಾಖ್ಯಾನಕ್ಕೂ ಎಡೆಗೊಡುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರು ಹೊಸ ಕಾವ್ಯಭಾಷೆಯ ಮೂಲಕ ಹೊಸ ಅನುಭವ, ಭಾವನೆಗಳನ್ನು ವ್ಯಕ್ತಪಡಿಸತೊಡಗಿದರು. ನವೋದಯ ಕಾವ್ಯಕ್ಕೆ ಪ್ರತಿಕ್ರಿಯೆಯಾಗಿ ಬಂದ ನವ್ಯ ಕಾವ್ಯವು ಕ್ರಮೇಣ ಕನ್ನಡ ನಾಡಿನಾದ್ಯಂತ ಹಬ್ಬಿತು. ಕೇರಳದ ಭಾಗವಾಗಿರುವ ಕಾಸರಗೋಡಿನಲ್ಲಿ ನವ್ಯ ಸಾಹಿತ್ಯವನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ಕಾವ್ಯ ರಚನೆಯನ್ನು ಮಾಡಿದವರ ಪೈಕಿ ಎಂ. ಗಂಗಾಧರ ಭಟ್ಟರೂ ಒಬ್ಬರು. ಅವರ ‘ನೆರಳು’ (1967) ಸಂಕಲನದಲ್ಲಿ ಎಲ್ಲ ಉದಯೋನ್ಮುಖ ಕವಿಗಳಲ್ಲಿರುವಂತೆ ನೋವು, ಹತಾಶೆ, ಹಟ ಮತ್ತು ಪ್ರತಿಭಟನೆಗಳಿವೆ. ಕಾವ್ಯದ ವಿನ್ಯಾಸದಲ್ಲಿ ಭಿನ್ನತೆಯನ್ನು ತರಬಯಸುವ ತುಡಿತವಿದೆ. ನವ್ಯ ಸಾಹಿತ್ಯವನ್ನು ಪ್ರಭಾವಿಸಿದ ಭ್ರಮ ನಿರಸನ, ಯಾಂತ್ರಿಕ ಜೀವನ, ಮೌಲ್ಯಗಳ ಅಳಿವು,…
ಬೆಂಗಳೂರು : ರಂಗಮಂಡಲ (ರಿ.) ಬೆಂಗಳೂರು ಮತ್ತು ಸಿವಗಂಗ ಟ್ರಸ್ಟ್ (ರಿ.) ಇದರ ವತಿಯಿಂದ ಹಮ್ಮಿಕೊಂಡಿದ್ದ ‘ಬಣ್ಣದ ಬೇಸಿಗೆ’ ಮಕ್ಕಳ ರಂಗ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 12-05-2024ರಂದು ಸಂಜೆ 6-00 ಗಂಟೆಗೆ ಸಿವಗಂಗ ರಂಗಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ, ನಮ್ಮ ಕನ್ನಡಿಗರ ವಿಜಯಸೇನೆ ಇದರ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಎಸ್., ಸರ್ ಎಂ. ವಿ. ಬಡಾವಣೆಯ ಅಧ್ಯಕ್ಷರಾದ ಶ್ರೀ ರಮೇಶ್ ಎನ್. ಮತ್ತು ಚಲನಚಿತ್ರ ಕಲಾವಿದ ಹಾಗೂ ಸಂಗೀತ ನಿರ್ದೇಶಕರಾದ ಶ್ರೀ ಪ್ರಶಾಂತ ಸಿದ್ಧಿಯವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ಮಲ ನಾದನ್ ಅವರು ನಿರ್ದೇಶನದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ‘ನನ್ನ ಗೋಪಾಲ’ ಮಕ್ಕಳ ನಾಟಕದ ಪ್ರದರ್ಶನ ನಡೆಯಲಿದೆ. ಈ ನಾಟಕದ ರಂಗ ವಿನ್ಯಾಸ ಭೀಮೇಶ್ ಕೆ. ಮತ್ತು ಕಲಾವಿನ್ಯಾಸ ಮಧು ಆರ್ಯ ಇವರು ಮಾಡಿದ್ದು, ಸಂಗೀತ ನಿರ್ದೇಶನ ಪ್ರಶಾಂತ್ ಸಿದ್ಧಿ ಮತ್ತು ಪ್ರಸಾದನದಲ್ಲಿ ಎಸ್. ಮೋಹನ್ ಕುಮಾರ್ ಸಹಕರಿಸಲಿದ್ದಾರೆ.