Author: roovari

ಕಾಸರಗೋಡು : ಕರಂದಕ್ಕಾಡು ಪದ್ಮಗಿರಿಯಲ್ಲಿರುವ ರಂಗ ಚಿನ್ನಾರಿ ಕಾಸರಗೋಡು (ರಿ.) ಇದರ ಘಟಕಗಳಾದ ನಾರಿ ಚಿನ್ನಾರಿ (ಮಹಿಳಾ ಘಟಕ) ಸ್ವರ ಚಿನ್ನಾರಿ (ಸಂಗೀತ ಘಟಕ) ನೇತೃತ್ವದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸುಬ್ರಹ್ಮಣ್ಯ ಬಾಡೂರು (ಬಾನಾಸು) ಇವರಿಗೆ ಹುಟ್ಟೂರ ಗೌರವ ಕಾರ್ಯಕ್ರಮವು ದಿನಾಂಕ 01-12-2023ರಂದು ಸಂಜೆ ಗಂಟೆ 5ಕ್ಕೆ ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಶ್ರೀ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕಾಸರಗೋಡಿನ ಶಾಸಕರಾದ ಶ್ರೀ ಎನ್.ಎ. ನೆಲ್ಲಿಕುನ್ನು, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಶ್ರೀಮತಿ ಉಮಾಶ್ರೀ, ರಾಷ್ಟ್ರ ಪ್ರಶಸ್ತಿ ವಿಜೇತ ನಿದೇಶಕ ಶ್ರೀ ಶಿವಧ್ವಜ್ ಶೆಟ್ಟಿ ಮತ್ತು ಖ್ಯಾತ ಪತ್ರಕರ್ತರಾದ ಶ್ರೀ ರವೀಂದ್ರ ಜೋಶಿ ಇವರುಗಳು ಭಾಗವಹಿಸಲಿದ್ದಾರೆ. 2021ರ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ (ತೀರ್ಪುಗಾರರ ವಿಶೇಷ ಉಲ್ಲೇಖ) ಪ್ರಶಸ್ತಿಗೆ ಶ್ರೀ ಸುಬ್ರಹ್ಮಣ್ಯ ಬಾಡೂರು ಭಾಜನರಾಗಿದ್ದಾರೆ. ಚಲನಚಿತ್ರ ಪತ್ರಕರ್ತರೊಬ್ಬರು ಕರ್ನಾಟಕದಲ್ಲಿ ಈ ರಾಷ್ಟ್ರೀಯ ಗೌರವ ಪಡೆದಿದ್ದು…

Read More

ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇದರ ಜಂಟಿ ಆಶ್ರಯದಲ್ಲಿ ವಿಕಲಚೇತನರ ಸೇವಾ ಕೇಂದ್ರ ಪುತ್ತೂರು ತಾಲೂಕು ಪಂಚಾಯತ್‌ ಸಹಕಾರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಪ್ರಪ್ರಥಮ ಬಾರಿಗೆ ವಿನೂತನ ಕಾರ್ಯಕ್ರಮ ‘ದಿವ್ಯಾಂಗಜನ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 03-12-2023 ಆದಿತ್ಯವಾರದಂದು ಪುತ್ತೂರಿನ ಬಿರುಮಲೆ ಬೆಟ್ಟದ ಪ್ರಜ್ಞಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಕಲಚೇತನರಲ್ಲಿರುವ ಸುಪ್ತ ಪ್ರತಿಭೆಯನ್ನು ಹಾಗೂ ಸಾಹಿತ್ಯ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಹಾಗೂ ಸೂಕ್ತ ವೇದಿಕೆಯನ್ನು ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಪ್ರಥಮ ವಿನೂತನ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಈ ಕೆಳಗಿನ ಗೋಷ್ಠಿಗಳಿಗೆ ಆಸಕ್ತಿಯುಳ್ಳ ಪುತ್ತೂರು ತಾಲೂಕಿನ ದಿವ್ಯಾಂಗ ಪ್ರತಿಭೆಗಳು ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ವಿನಂತಿ. ಕವಿ ಗೋಷ್ಠಿ (ಸ್ವರಚಿತ ಕವನಗಳನ್ನು ವಾಚಿಸಲು ಅವಕಾಶ-12 ಸಾಲುಗಳ ಮಿತಿಯ ಒಳಗೆ ಇರುವ), ಕಥಾ ಗೋಷ್ಠಿ (ಸ್ವರಚಿತ ಕಿರು ಕಥೆಗಳನ್ನು ವಾಚಿಸಲು ಅವಕಾಶ 200-250 ಪದಗಳ…

Read More

ಕುಂದಾಪುರ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.), ಉಡುಪಿ ಜಿಲ್ಲೆ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು, ಕುಂದಾಪುರ ಘಟಕ ಇವರ ಸಹಯೋಗದಲ್ಲಿ ಕನಕ ಜಯಂತಿಯ ಪ್ರಯುಕ್ತ ‘ಕನಕದಾಸ ಕೀರ್ತನೆಗಳ ಗಾಯನ ಮತ್ತು ಗಮಕ ವಾಚನ ವ್ಯಾಖ್ಯಾನ’ ಕಾರ್ಯಕ್ರಮನ್ನು ದಿನಾಂಕ 30-11-2023ರಂದು ಸಂಜೆ 4.30ಕ್ಕೆ ಕುಂದಾಪುರ, ಎ.ಎಸ್.ಎನ್. ಹೆಬ್ಬಾರ್ ಇವರ ಸ್ವಗೃಹ ‘ನುಡಿ’ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಉಡುಪಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್‌ ಕುಮಾರ್‌ ಕೆಮ್ಮಣ್ಣು ಇವರ ಗೌರವ ಉಪಸ್ಥಿತಿ ಹಾಗೂ ಕುಂದಾಪುರದ ಹಿರಿಯ ನ್ಯಾಯವಾದಿ ಮತ್ತು ಕಲಾ-ಸಾಹಿತ್ಯ ಪೋಷಕರಾದ ಶ್ರೀ ಎ.ಎಸ್.ಎನ್. ಹೆಬ್ಬಾರ್ ಇವರ ಆತಿಥ್ಯದಲ್ಲಿ ನಡೆಯಲಿದೆ. ಕನಕದಾಸ ಕೀರ್ತನೆಗಳ ಗಾಯನ ಮತ್ತು ಗಮಕ ವಾಚನ ವ್ಯಾಖ್ಯಾನದಲ್ಲಿ ದ.ರಾ. ಬೇಂದ್ರೆಯವರ ಮೇಘದೂತ (ಪೂರ್ವ ಮೇಘ)ದ ವಾಚನವನ್ನು ಪ್ರಸಿದ್ಧ ಗಮಕಿ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಮಂಚಿ ಮತ್ತು ವ್ಯಾಖ್ಯಾನವನ್ನು ಸಂಸ್ಕೃತ ವಿದ್ವಾಂಸರು ಮತ್ತು ಕವಿಗಳಾದ ಡಾ. ರಾಘವೇಂದ್ರ ರಾವ್, ಪಡುಬಿದ್ರೆ ಇವರು ನಡೆಸಿಕೊಡಲಿದ್ದಾರೆ.…

Read More

ಶಿರ್ವ : ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪರಿಚಯ (ರಿ) ಪಾಂಬೂರು ಇದರ ಜಂಟಿ ಸಹಯೋಗದೊಂದಿಗೆ ಪಾಂಬೂರು ಪರಿಚಯದಲ್ಲಿ ‘ಕವಿಸಂಧಿ ಹಾಗೂ ಕಥಾಸಂಧಿ’ ಸಾಹಿತ್ಯಪೂರ್ಣ ಕಾರ್ಯಕ್ರಮವು ದಿನಾಂಕ 19-11-2023ರಂದು ಜರಗಿತು. ಖ್ಯಾತ ಕೊಂಕಣಿ ಕವಿ ಜೊ.ಸಿ. ಸಿದ್ಧಕಟ್ಟೆ ಇವರು ಕವಿತಾ ಸಂಧಿಯನ್ನು ಹಾಗೂ ಖ್ಯಾತ ಸಣ್ಣಕತೆಕಾರ ಗೋಕುಲ್‌ದಾಸ್ ಪ್ರಭುರವರು ಕಥಾ ಸಂಧಿಯನ್ನು ನಡೆಸಿಕೊಟ್ಟರು. ಪಾಂಬೂರ್‌ ಚರ್ಚ್ ಧರ್ಮಗುರು ವಂ| ಗುರು ಹೆನ್ರಿ ಮಸ್ಕರೇನ್ಹಸ್‌ರವರು ಮುಖ್ಯ ಅತಿಥಿಯಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗದ ನಿಮಂತ್ರಕ, ಕವಿ ಮೆಲ್ವಿನ್‌ ರೊಡ್ರಿಗಸ್‌ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪರಿಚಯ ಆಡಳಿತ ವಿಸ್ವಸ್ಥ ಡೊ| ವಿನ್ಸೆಂಟ್ ಆಳ್ವ ವಂದನಾರ್ಪಣೆಗೈದರು. ಪರಿಚಯ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಕಾರ್ಯಕ್ರಮವನ್ನು ಸಂಯೋಜಿಸಿದರು. ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗದ ಸದಸ್ಯರಾದ ಸಾಹಿತಿ ಶ್ರೀ ಎಚ್.ಎಮ್.ಪೆರ್ನಾಲ್ ಹಾಗೂ ಶ್ರೀ ಸ್ಟ್ಯಾನಿ ಬೇಳಾ ಹಾಗೂ ಪರಿಚಯದ ಟ್ರಸ್ಟಿಗಳೊಂದಿಗೆ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

Read More

ಉಡುಪಿ : ರಂಗಭೂಮಿ ವತಿಯಿಂದ 44ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯು ದಿನಾಂಕ 22-11-2023ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆ ವಿ.ವಿ. ಸಹ ಕುಲಾಧಿಪತಿ ಹಾಗೂ ರಂಗಭೂಮಿಯ ಗೌರವಾಧ್ಯಕ್ಷ ಡಾ. ಎಚ್‌.ಎಸ್‌. ಬಲ್ಲಾಳ್ ಇವರು “ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರದ ಬಗ್ಗೆ ನಾಟಕದ ಮೂಲಕ ಅರಿವು ಮೂಡಿಸುವುದರಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ದೇಶದ ಯುವ ಜನತೆಗೆ ನಾಟಕ ಸ್ಪರ್ಧೆಗಳ ಮೂಲಕ ಅರಿವು ಮೂಡಿಸುವ ಕೆಲಸವಾಗಬೇಕು. ಸಿನೆಮಾ ತಾರೆಯರಿಗಿಂತಲೂ ನಾಟಕ, ಯಕ್ಷಗಾನ ಕಲಾವಿದರ ಶ್ರಮ ಅಪಾರ. ಸಿನೆಮಾದಲ್ಲಿ ಒಂದು ದೃಶ್ಯಕ್ಕೆ ಹಲವಾರು ಟೇಕ್ ಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ನಾಟಕ, ಯಕ್ಷಗಾನದಲ್ಲಿ ಹಾಗೆ ಸಾಧ್ಯವಿಲ್ಲ. ಈ ಕಾರಣಕ್ಕೆ ಇಂತಹ ಕಲೆ ಮತ್ತಷ್ಟು ಬೆಳೆಯಬೇಕು. ನಾಟಕಗಳಲ್ಲಿ ಯುವಜನತೆ ಹಾಗೂ ಮಕ್ಕಳ ಪಾಲ್ಗೊಳ್ಳುವಿಕೆ ಅತೀ ಅಗತ್ಯವಾಗಿದೆ. ಇದರಿಂದ ಈ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸಾಧ್ಯ” ಎಂದು ಹೇಳಿದರು. ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ…

Read More

ಶಿರ್ವ : ಉಡುಪಿ ಪೇಜಾವರ ಮಠದ ಆಡಳಿತಕ್ಕೊಳಪಟ್ಟ, ಪಾಜಕ ಆನಂದತೀರ್ಥ ವಿದ್ಯಾಲಯದಲ್ಲಿ ಹೊಸನಗರ ತಾಲೂಕಿನ ಹೆಗ್ಗೋಡು ಕಿನ್ನರ ಮೇಳ ನಾಟಕ ತಂಡದಿಂದ “ಅನ್ನೇ ಫ್ರಾಂಕ್ ಡೈರಿ’ ನಾಟಕ ಪ್ರದರ್ಶನ ದಿನಾಂಕ 20-11-2023ರಂದು ನಡೆಯಿತು. ಆನಂದತೀರ್ಥ ವಿದ್ಯಾಸಂಸ್ಥೆಗೆ ಹಲವಾರು ವರ್ಷದಿಂದ ಈ ನಾಟಕ ತಂಡ ಆಗಮಿಸಿ ಮಕ್ಕಳ ಮನೋವಿಕಾಸಕ್ಕೆ ಬೇಕಾದ ನಾಟಕವನ್ನು ಪ್ರದರ್ಶಿಸುತ್ತಾ ಬಂದಿದ್ದು, ಈ ವರ್ಷವೂ ಕೂಡ ಹತ್ತನೇ ತರಗತಿಯ ಇಂಗ್ಲೀಷ್‌ನ ಒಂದು ಪಾಠವಾದ ಅನ್ನೇಫ್ರಾಂಕ್ ಪಾಠವನ್ನು ಸರಳವಾಗಿ ರೂಪಾಂತರಿಸಿ, ಮಕ್ಕಳಿಗೆ ಅರ್ಥವಾಗುವಂತೆ ಪ್ರಸ್ತುಪಡಿಸಿದರು. ಈ ನಾಟಕ ತಂಡದಲ್ಲಿರುವ ನುರಿತ, ಅನುಭವೀ ನಾಟಕ ಕಲಾವಿದರು ಮಾಡುವ ನಟನೆ ಮಕ್ಕಳ ಮನಸ್ಸಿಗೆ ಬೇಗ ನಾಟುವಂತಿರುತ್ತದೆ. 5ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ನಾಟಕ ನೋಡಿ ಆನಂದಿಸಿದರು. ಪ್ರಿನ್ಸಿಪಲ್ ಡಾ. ಗೀತಾ ಎಸ್. ಕೋಟ್ಯಾನ್, ಸಂಯೋಜಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ತಾಂತ್ರಿಕ ವಿಭಾಗದ ಛಾಯ ಕೋಟ್ಯಾನ್, ಪೂರ್ಣಿಮಾ, ನಿಶ್ಚಿತಾ ಸಹಕರಿಸಿದರು.

Read More

ಬೆಂಗಳೂರು : ಶ್ರೀ ಡಿ. ಸುಬ್ಬರಾಮಯ್ಯ ಲಲಿತ ಕಲಾ ಟ್ರಸ್ಟ್ (ರಿ.) ಇದರ 30ನೇ ರಾಗ ಶ್ರೀ ಸಮ್ಮೇಳನ 2023ರ ಪ್ರಯುಕ್ತ ‘ತೆಂಕುತಿಟ್ಟು ಯಕ್ಷಗಾನ ಹಾಡುಗಾರಿಕೆ’ ದಿನಾಂಕ 02-12-2023ರಂದು ಸಂಜೆ ಗಂಟೆ 4.45ಕ್ಕೆ ಬೆಂಗಳೂರಿನ ಬಸವನಗುಡಿ, ಬಿ.ಪಿ. ವಾಡಿಯಾ ರಸ್ತೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇಲ್ಲಿ ನಡೆಯಲಿದೆ. ಶ್ರೀ ಪಿ. ನಿತ್ಯಾನಂದ ರಾವ್ ಸುರತ್ಕಲ್ ಇವರ ಹಾಡುಗಾರಿಕೆಗೆ ಧರ್ಮಸ್ಥಳದ ಶ್ರೀ ಬಿ. ಜನಾರ್ದನ ತೋಳ್ಪಾಡಿತ್ತಾಯ ಇವರು ಮದ್ದಲೆಯಲ್ಲಿ ಸಹಕರಿಸಲಿದ್ದಾರೆ.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನ ‘ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ’ ಪ್ರಶಸ್ತಿಗೆ ದತ್ತಿ ದಾನಿಗಳ ಆಶಯದಂತೆ ಮಂಡ್ಯ ಜಿಲ್ಲೆಯ ಒಬ್ಬರು ಜನಪದ ಕಲಾವಿದರು ಸೇರಿದಂತೆ ರಾಜ್ಯದಲ್ಲಿ ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಒಟ್ಟು ಮೂರು ಜನಪದ ಸಾಧಕರನ್ನು ಪ್ರಸಕ್ತ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ‘ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿʼ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆಯ ಹಿರಿಯ ಸಮಾಜಸೇವಕರಾದ ಶ್ರೀ ಎಸ್.ಎಮ್. ಶಂಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು. ಪ್ರತಿ ವರ್ಷ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತದೆ.  2023ನೇ ಸಾಲಿನ ‘ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ’ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆ ನಾಗಮಂಗಲದ ಡಿ.ವಿ.ರುದ್ರೇಶ್, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಕದರಮ್ಮ ಹಾಗೂ ಮದ್ದೂರು ತಾಲೂಕಿನ ಸಿ.ಎನ್. ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಜಾನಪದ ಕಲಾವಿದರಿಗಾಗಿಯೇ ಮೀಸಲಾಗಿರುವ…

Read More

ಧಾರವಾಡ : ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಇದರ ‘ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ 2023’ವು ದಿನಾಂಕ 29-11-2023ರಂದು ಸಂಜೆ ಗಂಟೆ 5.30ಕ್ಕೆ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಪ್ರಶಸ್ತಿಗೆ ಭಾಜನರಾಗಿರುವ ಕಲಾವಿದರು ಚಿತ್ರಕಲಾ ಪ್ರಾತ್ಯಕ್ಷಿಕೆಯನ್ನು ದಿನಾಂಕ 28-11-2023ರಂದು ಬೆಳಿಗ್ಗೆ ಗಂಟೆ 11ಕ್ಕೆ ಧಾರವಾಡದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ನೀಡಲಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಭಾರತ ಸರ್ಕಾರದ ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳು ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ ಇವರ ಘನ ಉಪಸ್ಥಿತಿಯಲ್ಲಿ ಮಾನ್ಯ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಎಸ್‌. ಲಾಡ್ ಇವರು ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ…

Read More

ಮಂಗಳೂರು : ಅಂಡಾಲಬೀಡು ಕುಟುಂಬ ಟ್ರಸ್ಟ್ ವತಿಯಿಂದ ಮರಕಡದ ಅಂಡಾಲಬೀಡು ಧರ್ಮಚಾವಡಿಯಲ್ಲಿ ಕವಿ ಅಂಡಾಲ ಗಂಗಾಧರ ಶೆಟ್ಟರ ಸಹಸ್ರ ಚಂದ್ರದರ್ಶನ ಶಾಂತಿಹೋಮ, ಅಂಡಾಲ ಅಭಿನಂದನ ಮತ್ತು ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 22-11-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಸಾಹಿತಿಗಳಾದ ಡಾ. ವಸಂತಕುಮಾರ ಪೆರ್ಲ ಇವರು ಮಾತನಾಡಿ “ಸಾಹಿತ್ಯವು ಮನಸ್ಸನ್ನು ವಿಕಾಸಗೊಳಿಸಿ, ಬುದ್ದಿಯನ್ನು ಬಲಗೊಳಿಸುವ ಒಂದು ಕಲೆ. ಸಾಹಿತ್ಯ ಸಂಘಟನೆಗಳ ಮೂಲಕ ಒಂದು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಅರಿವು ವಿಸ್ತಾರವಾದಂತೆ ಸಮಾಜದಲ್ಲಿರುವ ಅಪನಂಬಿಕೆಗಳು ದೂರವಾಗಿ ವ್ಯಕ್ತಿ ವ್ಯಕ್ತಿಗಳೊಳಗೆ ಸುಮಧುರ ಬಾಂಧವ್ಯ ಏರ್ಪಡಲು ಸಾದ್ಯವಾಗುತ್ತದೆ. ಅಂಡಾಲ ಗಂಗಾಧರ ಶೆಟ್ಟಿಯವರು ಬ್ಯಾಂಕ್ ಉದ್ಯೋಗಿಯಾಗಿ ವೃತ್ತಿಜೀವನ ಆರಂಭಿಸಿ ಅನಂತರ ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರದತ್ತ ಆಕರ್ಷಿತರಾಗಿ ಕುಟುಂಬಸ್ಥರ ಮತ್ತು ಹತ್ತು ಸಮಸ್ತರ ಸಹಕಾರದೊಂದಿಗೆ ಅಂಡಾಲಬೀಡಿನ ಚಿತ್ರಣವನ್ನು ಬದಲಾಯಿಸಿದರು. ತನ್ನೊಂದಿಗೆ ಊರವರ ಬದುಕನ್ನು ಹಸನುಗೊಳಿಸಿದರು” ಎಂದು ಹೇಳಿದರು. ತನ್ನ ಬದುಕಿಗೆ ಕೊಡುಗೆ ನೀಡಿದ ಮಹನೀಯರನ್ನು ಮತ್ತು ಅಂಡಾಲದ ಏಳಿಗೆಗೆ ಪಟ್ಟ ಪರಿಶ್ರಮವನ್ನು…

Read More