Author: roovari

ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇವರು ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ಆಯೋಜಿಸಿದ ‘ವಿಶ್ವಕರ್ಮ ಕಲಾ ಸಿಂಚನ 2023’ ಕಾರ್ಯಕ್ರಮವು ದಿನಾಂಕ 08-10-2023ರ ಭಾನುವಾರ ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಸೇನಾಧಿಕಾರಿ ಬೃಜೇಶ್ ಚೌಟ “ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಜಗತ್ತೇ ಭಾರತದತ್ತ ಚಿತ್ತಹರಿಸುತ್ತಿದೆ. ದೇಶವು ಮತ್ತೆ ವಿಶ್ವಗುರುವಿನ ಸ್ಥಾನಕ್ಕೆ ಏರಬೇಕಾದರೆ ನಮ್ಮ ಕಲೆ ಸಂಸ್ಕೃತಿ, ಸಂಸ್ಕಾರ ಗತವೈಭವಕ್ಕೆ ಮರಳಬೇಕು. ಈ ನಿಟ್ಟಿನಲ್ಲಿ ವಿಶ್ವಕರ್ಮ ಸಮಾಜಕ್ಕೆ ವಿಶೇಷ ಜವಾಬ್ದಾರಿ ಇದೆ. ಹಲವು ದಾಳಿಗಳ ಹೊರತಾಗಿಯೂ ಸನಾತನ ಭಾರತೀಯ ನಾಗರೀಕತೆ ಮೂಲಸತ್ವವನ್ನು ಉಳಿಸಿಕೊಂಡು ಜಗತ್ತೇ ಗುರುತಿಸುವಂತೆ ಬೆಳೆದಿದೆ. ಇದರ ಕಲೆ, ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ವಿಶ್ವಕರ್ಮರು. ಜನ ಜೀವನ, ದೇಶ ದೇಶಗಳ ನಡುವಿನ ಸಂಬಂಧಗಳು ಮತ್ತು ಸಂಸ್ಕೃತಿಗಳು ಬದಲಾಗಿವೆ. ಕಲೆಯ ವಾರಸುದಾರರಾದ ವಿಶ್ವಕರ್ಮರು ಅವುಗಳನ್ನು ಹಂಚಿ ಕೊಂಡು, ಇನ್ನಷ್ಟು ವಿಸ್ತರಿಸಿ ದೇಶದ ವೈಭವವನ್ನು ಮತ್ತಷ್ಟು ಎತ್ತರಕ್ಕೆ ಏರಿಸಬೇಕು”…

Read More

ಬ್ರಹ್ಮಾವರ : ಶ್ರೀ ದಶಾವತಾರ ಯಕ್ಷ ಶಿಕ್ಷಣ ಕೇಂದ್ರ (ರಿ) ಬ್ರಹ್ಮಾವರ ಇದರ ನಾಲ್ಕನೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 15-10-2023 ರಂದು ಬ್ರಹ್ಮಾವರ ಸಾಲಿಕೇರಿಯ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಾಲಿಕೇರಿ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮುಕ್ತೇಸರರಾದ ಎಸ್. ಸುರೇಶ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಸವ್ಯಸಾಚಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ಕೋಟ ಸುಜಯೀಂದ್ರ ಹಂದೆ “ಜಗತ್ತಿನ ಶ್ರೀಮಂತ ಕಲೆ ಯಕ್ಷಗಾನ. ಯಕ್ಷಗಾನದ ಈ ಶ್ರೀಮಂತಿಕೆಗೆ ಅದರದೇ ಆದ ಅನನ್ಯತೆಯೊಂದು ಕಾರಣವಾದರೆ, ಮತ್ತೊಂದು ಕಾರಣ ತಮ್ಮ ಮನೆ, ಸಂಸಾರದಿಂದ ದೂರವುಳಿದು ಸರಿಯಾದ ನಿದ್ದೆ ಮುದ್ದೆಯಿಲ್ಲದೆ ರಂಗವನ್ನು ಸಂಪನ್ನಗೊಳಿಸಿದ ಹಿರಿಯ ಕಲಾವಿದರು. ಆಧುನಿಕ ಸೌಲಭ್ಯಗಳಿಲ್ಲದ ಆ ಕಾಲದಲ್ಲೂ ಕಲೆಯ ಮೇಲಿರುವ ಅವರೆಲ್ಲರ ಶ್ರದ್ಧಾ ಭಕ್ತಿಯ ರಸಪಾಕವೇ ಯಕ್ಷಗಾನದ ಹಿರಿಮೆ. ಹಾಗಾಗಿ ಇಂದಿನ ಕಲಾವಿದರಿಗೆ ಸಿಕ್ಕ ಯಾವುದೇ ಪ್ರಶಸ್ತಿ, ಪುರಸ್ಕಾರ ಅರ್ಪಿತವಾಗಬೇಕಾದುದು ಅಂದಿನ ಮೇರು…

Read More

ಪುತ್ತೂರು : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ರೋಟರಿ ಕ್ಲಬ್ ಪುತ್ತೂರು ಯುವ ಇದರ ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇವರ ಸಂಯೋಜನೆಯಲ್ಲಿ ಸುವರ್ಣ ಸಂಭ್ರಮ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಮಹನೀಯರನ್ನು ನೆನಪಿಸುವ ಸಲುವಾಗಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ರಾಜ್ಯೋತ್ಸವ ಕವಿಗೋಷ್ಠಿಯು ದಿನಾಂಕ 05-11-2023ರ ಆದಿತ್ಯವಾರ ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ಪೂರ್ವಾಹ್ನ ಘಂಟೆ 10.00ರಿಂದ ನಡೆಯಲಿದೆ. ಈ ಕವಿಗೋಷ್ಠಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಕವನಗಳನ್ನು ಮಾತ್ರ ವಾಚನ ಅಥವಾ ಗಾಯನ ಮಾಡಲು ಅವಕಾಶವಿದ್ದು, ಗಾಯನದಲ್ಲಿ ಕರೋಕೆ ಉಪಯೋಗಿಸಲು ಅವಕಾಶವಿಲ್ಲ. ಉತ್ತಮ ಗಾಯನ /ವಾಚನ ಮಾಡಿದವರಿಗೆ  ಪುಸ್ತಕ ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಪ್ರತಿಯೊಬ್ಬ ಕವಿಗಳಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ. ಆಸಕ್ತ ಗಾಯಕರು/…

Read More

ಬೆಂಗಳೂರು : ಕರ್ಣಾಟಕ ಯಕ್ಷಧಾಮ ಪ್ರಸ್ತುತ ಪಡಿಸುವ ‘ನೃತ್ಯೋಲ್ಲಾಸ – ಯಕ್ಷವಿಲಾಸ’ದಲ್ಲಿ ಕೂಚುಪುಡಿ ನರ್ತನ, ಸಭಾವಂದನ ಮತ್ತು ಯಕ್ಷಗಾನ ಪ್ರದರ್ಶನವು ದಿನಾಂಕ 29-10-2023 ಭಾನುವಾರ ಸಂಜೆ ಗಂಟೆ 3ಕ್ಕೆ ಬೆಂಗಳೂರಿನ ಚಾಮರಾಜ ಪೇಟೆಯ ಉದಯಭಾನು ಕಲಾ ಸಂಘದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಡಾ. ಪಿ. ಸದಾನಂದ ಮಯ್ಯ, ನಾಗರಾಜ ಉಪಾಧ್ಯಾಯ ಬಿ., ಪಿ. ನಾರಾಯಣ ಹೇರ್ಳೆ, ಎಮ್. ಸುಧೀಂದ್ರ ಹೊಳ್ಳ, ಎಸ್‌. ಪ್ರದೀಪ ಕುಮಾರ ಕಲ್ಕೂರ, ಗೋಪಾಲಕೃಷ್ಣ ಸೋಮಯಾಜಿ, ಜಿ. ವೆಂಕಟರಮಣ ಸೋಮಯಾಜಿ, ಎಮ್. ಸುಂದರೇಶ ಹೊಳ್ಳ, ರತ್ನಾಕರ ಜೈನ್ ಮಂಗಳೂರು ಇವರ ಗೌರವ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣಮೂರ್ತಿ ಐತಾಳ ದ್ವಾರಕ ಮತ್ತು ಶ್ರೀಮತಿ ಎಮ್. ರಾಜಶ್ರೀ ನಾಗರಾಜ ಹೊಳ್ಳ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಶ್ರೀಮತಿ ಎಮ್. ರಾಜಶ್ರೀ ನಾಗರಾಜ ಹೊಳ್ಳ ಇವರಿಂದ ಕೂಚುಪುಡಿ ನೃತ್ಯ ಪ್ರದರ್ಶನ ನಡೆಯಲಿದೆ. ಯಕ್ಷ ಕಣ್ಮಣಿಗಳಾದ ಸುಬ್ರಾಯ ಹೆಬ್ಬಾರ, ಅಕ್ಷಯ ಕುಮಾರ, ಶ್ರೀನಿವಾಸ ಪ್ರಭು, ಪ್ರಸನ್ನ ಶೆಟ್ಟಿಗಾರ, ಶಶಿಕಾಂತ ಶೆಟ್ಟಿ, ಸುಜಯೀಂದ್ರ ಹಂದೆ,…

Read More

ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವರು ಉಡುಪಿಯ ವೆಂಟನಾ ಪೌಂಡೇಶನ್‌ನ ಸಹಯೋಗದಲ್ಲಿ ಆಯೋಜಿಸಿದ ‘ಜನಪದ ಸರಣಿ ಕಲಾ ಕಾರ್ಯಾಗಾರ’ದ ಏಳನೇ ಆವೃತ್ತಿಯು ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ದಿನಾಂಕ 14-10-2023 ಮತ್ತು 15-10-2023ರಂದು ಎರಡು ವಿಭಾಗಗಳಲ್ಲಿ ನಡೆಯಿತು. ಈ ಕಾರ್ಯಾಗಾರವನ್ನು ವೆಂಟನಾ ಪೌಂಡೇಶನ್‌ ಇದರ ಟ್ರಸ್ಟಿಗಳಾದ ಶಿಲ್ಪಾ ಭಟ್‌ ಇವರು ಉದ್ಘಾಟನೆ ಮಾಡಿ ಮಾತನಾಡುತ್ತಾ “ಉಡುಪಿಯ ಕಲಾಪ್ರೇಮಿಗಳಿಗೆ ಈ ತೆರನಾದ ಕಾರ್ಯಾಗಾರಗಳು ಬಹು ಉಪಯುಕ್ತವಾಗಲಿದ್ದು, ಭಾರತೀಯ ದೇಶೀಯ ಕಲೆಯ ಉಳಿಸುವಿಕೆ ಹಾಗೂ ಬೆಳೆಸುವಿಕೆಯಲ್ಲಿ ಇದೊಂದು ಮೈಲಿಗಲ್ಲಾಗಬಹುದು ಮತ್ತು ವೆಂಟನಾ ಪೌಂಡೇಶನ್ ಈ ತೆರನಾದ ಕಾರ್ಯಕ್ರಮಗಳಿಗೆ ಸದಾ ಬೆಂಬಲವನ್ನೀಯುತ್ತದೆ” ಎಂದರು. ಮುಖ್ಯ ಅತಿಥಿಗಳಾದ ವೈಟ್ ಲೋಟಸ್ ಹೋಟೆಲ್‌ನ ಆಡಳಿತ ನಿರ್ದೇಶಕರಾದ ಯುವ ಉದ್ಯಮಿ, ಅಜಯ್ ಪಿ. ಶೆಟ್ಟಿಯವರು “ಭಾರತವು ಹಲವಾರು ವೈವಿಧ್ಯಮಯ ಆಚಾರ-ವಿಚಾರ, ಸಂಸ್ಕೃತಿಗಳಿಂದ ಕೂಡಿದ್ದಾಗಿದೆ. ಇವುಗಳ ನಡುವೆ ಹಂಚಿಹೋಗಿರುವ ಕಲಾ ಪ್ರಕಾರಗಳನ್ನೆಲ್ಲ ಉಡುಪಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ. ಇದರ ಪ್ರಯೋಜನವನ್ನು ಕರಾವಳಿಯ…

Read More

ಸುಳ್ಯ : ರಂಗ ನಿರ್ದೇಶಕ, ನಟ, ನಾಟಕಕಾರ, ವರ್ಣ ಚಿತ್ರ ಕಲಾವಿದ ಮೋಹನ ಸೋನ ಇವರ ಮೂರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ‘ಸೋನ ನೆನಪು’ ದಿನಾಂಕ 14-10-2023ರಂದು ಅವರ ನಿವಾಸ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿಯ ನಡುಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರವಾರದ ಕರಾವಳಿ ಮುಂಜಾವು ಪತ್ರಿಕೆಯ ಹಿರಿಯ ಸಂಪಾದಕ ಗಂಗಾಧರ ಹಿರೇಗುತ್ತಿ ಹಾಗೂ ಅಂಕೋಲಾದ ಗಾಯಕರಾದ ದೇವಾನಂದ ಗಾಂವ್ಕರ್ ಭಾಗವಹಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಂಗಾಧರ ಹಿರೇಗುತ್ತಿ ಅವರು ತನ್ನ ಪತ್ರಿಕೋದ್ಯಮ ಜೀವನದಲ್ಲಿ ಅನುಭವಿಸಿದ ಕೆಲವೊಂದು ಸವಾಲುಗಳೊಂದಿಗೆ ಕಲಾವಿನದ ಮೋಹನ ಸೋನ ಮತ್ತು ಅವರು ಪರಿಚಯಗೊಂಡ ಬಗೆಯನ್ನು ವಿವರಿಸಿದರು. ಅಲ್ಲದ ಹಿರಿಯ ಚಿತ್ರ ಕಲಾವಿದ ಸುದೇಶ್ ಮಹಾನ್ ಹಾಗೂ ಕಿರಿಯ ಚಿತ್ರಗಾರ್ತಿ ಆದ್ಯ ರಾಜೇಶ್ ಮಹಾನ್ ಇವರ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ದೇವಾನಂದ ಗಾಂವ್ಕರ್ ಮಾತನಾಡುತ್ತಾ ಕಳೆದ 2017ನೇ ಇಸವಿಯಲ್ಲಿ ಕಾರವಾರದ ಕಡಲ ಕಿನಾರೆಯಲ್ಲಿ ಅಲ್ಲಿನ ಬುಡಕಟ್ಟು ಜನಾಂಗದ ಜೀವನ ಶೈಲಿಯನ್ನು ಬಿಂಬಿಸುವ ಶಿಲ್ಪಕಲಾ ಉದ್ಯಾನ…

Read More

ಬೆಂಗಳೂರು : ಕರ್ನಾಟಕದ ಕ್ರಿಯಾಶೀಲ ರಂಗ ತಂಡಗಳಲ್ಲಿ ಜನಪದರು ಈಗ ತನ್ನ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಪ್ರದರ್ಶನ ಸರಣಿ “ರಂಗ ಮಾಲೆ -75” ಅಮೃತ ಮಹೋತ್ಸವ ತಿಂಗಳು. ಈ ಕಾರಣಕ್ಕೆ ದಿನಾಂಕ 14-10-2023ರಿಂದ ಮೂರು ದಿನಗಳ ರಂಗ ಸಂಭ್ರಮ ಆಯೋಜನೆ ಮಾಡಿದ್ದು, ಉದ್ಘಾಟನೆ ಮಾಡಿದ ನಾಡಿನ ಸಾಂಸ್ಕೃತಿಕ ರಾಯಭಾರಿ ಸಾಣಿ ಹಳ್ಳಿಯ ಶ್ರೀ ಮಠದ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ “ಜನಪದರು ರಂಗ ಮಂದಿರ ನೋಡಿ ಮಹಾಸಂತಸವಾಗಿದೆ. ನಾನು ರಾಷ್ಟ್ರದ ಹಲವಾರು ರಂಗ ಮಂದಿರ ನೋಡಿದ್ದು, ಆಧುನಿಕ ರಿವಾ ಲಿಂಗ್ ಹೈಡ್ರಾಲಿಕ್ ಅಲ್ಲದೆ ಸುಸಜ್ಜಿತ ಧ್ವನಿ ಬೆಳಕುಗಳು ಹೊಂದಿದೆ. ಶ್ರೇಷ್ಠ ಆಸನ ಹಾಗೂ ಹವಾ ನಿಯಂತ್ರಿತ ಸೌಲಭ್ಯ ಕೇವಲ ಜನರ ಸಹಕಾರದಿಂದ ಮಾಡಿದ ಈ ಘನ ಕಾರ್ಯ ಅಧ್ಯಕ್ಷ ಪಾಪಣ್ಣ ಕಾಟಂ ನಲ್ಲೂರು ಮತ್ತು ತಂಡ ಅಭಿನಂದನಾರ್ಹರು. ಇದರೊಂದಿಗೆ ನಮ್ಮ ಶಿವಸಂಚಾರ ಹಾಗೂ ಇತರೇ ರಂಗ ತಂಡಗಳ ನಾಟಕ ನಿಮಗೆ ತಲುಪಿಸಲು ಹಾಗೆ, ದಾಸೋಹದ ಅರಿವು…

Read More

ಮಂಗಳೂರು : ಪೇಜಾವರ ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ (ರಿ) ಸಂಸ್ಥೆಯ ‘ದಶಮಾನೋತ್ಸವ ಸಂಭ್ರಮ’ವು ದಿನಾಂಕ 14-10-2023ರಂದು ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡಬಿದ್ರೆ ಶಾಸಕ ಶೀ ಉಮಾನಾಥ ಕೋಟ್ಯಾನ್ ಇವರು ಮಾತನಾಡುತ್ತಾ “ಯುಕ್ಷರಂಗವು ಇಂದು ಸಮೃದ್ಧವಾಗಿ ಬೆಳೆದು ನಿಲ್ಲಲು ಹವ್ಯಾಸಿ ರಂಗಭೂಮಿಯೂ ಕಾರಣ. ಎಷ್ಟೋ ಹವ್ಯಾಸಿ ಕಲಾವಿದರು ಪ್ರಬುದ್ಧತೆ ಮೆರೆದು ಯಕ್ಷರಂಗ ಭೂಮಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ರವಿ ಅಲೆವೂರಾಯರಂತಹಾ ಯಕ್ಷಗುರುಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನೇಕ ಕಡೆಗಳಲ್ಲಿ ಯಕ್ಷ ತರಗತಿಗಳನ್ನು ನಡೆಸುತ್ತಾ ಮುಂದಿನ ಯಕ್ಷ ಪೀಳಿಗೆಗಳನ್ನು ಈ ರಂಗಕ್ಕೆ ಕೊಡುಗೆಯಾಗಿ ನೀಡಿ ಯಕ್ಷಮಾತೆಯ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇಂದು ಶ್ರೀ ಸೋಮನಾಥೇಶ್ವರ ಯಕ್ಷ ನಿಧಿ ಸಂಸ್ಥೆ ಅವರಿಗೆ ಗೌರವ ಸನ್ಮಾನವನ್ನು ನೀಡಿದೆ. ಅವರಿಂದ ಇನ್ನೂ ಸ್ಫೂರ್ತಿಯುತವಾಗಿ ಯಕ್ಷ ಸೇವೆ ಜರಗಲಿ” ಎ೦ದು ಹೇಳಿದರು. ಸನ್ಮಾನಕ್ಕೆ ಉತ್ತರಿಸುತ್ತಾ ಯಕ್ಷಗುರು ಶ್ರೀ…

Read More

ತುಮಕೂರು : ಯಕ್ಷಗಾನ ಸಾಂಸ್ಕೃತಿಕ ವೇದಿಕೆ ತುಮಕೂರು ಮತ್ತು ಶ್ರೀ ಕೃಷ್ಣ ಮಂದಿರ ತುಮಕೂರು ಇವರ ಸಹಯೋಗದಲ್ಲಿ ‘ಸುಧನ್ವ ಕಾಳಗ’ ಯಕ್ಷಗಾನ ಬಯಲಾಟವು ದಿನಾಂಕ 28-10-2023ರ ಶನಿವಾರ ಸಂಜೆ ಘಂಟೆ 4.30ಕ್ಕೆ ತುಮಕೂರಿನ ಶ್ರೀ ಕೃಷ್ಣ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಕರ್ನಾಟಕ ಯಕ್ಷಧಾಮ ಮಂಗಳೂರು ಇವರ ನೇತೃತ್ವದಲ್ಲಿ ಯಕ್ಷಗಾನದ ಅಗ್ರಗಣ್ಯ ಕಲಾವಿದರ ಕೂಡುವಿಕೆಯಲ್ಲಿ ಪ್ರಸ್ತುತಪಡಿಸುವ ಈ ಯಕ್ಷಗಾನ ಪೌರಾಣಿಕ ಪ್ರಸಂಗದ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಸರ್ವಶ್ರೀಗಳಾದ ಸುಬ್ರಾಯ ಹೆಬ್ಬಾರ, ಅಕ್ಷಯ ಕುಮಾರ, ಶ್ರೀನಿವಾಸ ಪ್ರಭು, ಪ್ರಸನ್ನ ಶೆಟ್ಟಿಗಾರ, ಶಶಿಕಾಂತ ಶೆಟ್ಟಿ, ಪ್ರಶಾಂತ ಹೆಗಡೆ, ಜನಾರ್ದನ ಹಂದೆ, ರಾಮಕೃಷ್ಣ ಭಟ್, ಅಂಬರೀಷ ಭಟ್‌ ಹಾಗೂ ಲಕ್ಷ್ಮೀ ಪ್ರಸಾದ ಭಾಗವಹಿಸಲಿದ್ದಾರೆ. ಕಲಾವಿದ , ಕವಿ, ಸಾಹಿತಿ, ಗಾಯಕ ಮತ್ತು ಸಂಘಟಕರಾದ ಹೆಚ್‌. ಜನಾರ್ದನ ಹಂದೆ ಮಂಗಳೂರು ಇವರು ಈ ಕಾರ್ಯಕ್ರಮದ ಸಂಯೋಜಕರಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಯ.ಸಾಂ. ವೇದಿಕೆ ತುಮಕೂರಿನ ಪ್ರಧಾನ ಸಂಚಾಲಕರುಗಳಾದ ನಾಗರಾಜಧನ್ಯ.ಕೆ ಹಾಗೂ ಅನಂತರಾವ್.ಕೆ ಮತ್ತು ಸಂಚಾಲಕರುಗಳು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಸ್ಟಾಕ್‌ ಹೋಂ : ಈ ಬಾರಿಯ ‘ಸಾಹಿತ್ಯದ ನೊಬೆಲ್’ ಪಾರಿತೋಷಕಕ್ಕೆ ಭಾಜನರಾಗಿರುವ ಕಾದಂಬರಿ, ಕವಿತೆ, ಪ್ರಬಂಧ, ಮಕ್ಕಳ ಸಾಹಿತ್ಯದಲ್ಲಿ ಶ್ರೇಷ್ಟ ಕೃತಿಗಳನ್ನು ಬರೆದಿರುವ ನಾರ್ವೆಯ ಖ್ಯಾತ ಲೇಖಕ ಜಾನ್ ಫೋಸ್ಸೆ ಅವರು ಸೃಜನಶೀಲ ಲೇಖಕರೆನ್ನಿಸಿಕೊಂಡಿದ್ದಾರೆ. ಫೋಸ್ಸೆ ಬಳಸುವ ನ್ಯೂ ನಾರ್ವೆ ಭಾಷೆಯನ್ನು ದೇಶದ ಕೇವಲ ಶೇ.10 ಜನ ಮಾತ್ರ ಬಳಸುತ್ತಾರೆ. ಈ ಭಾಷೆಯನ್ನು 19ನೇ ಶತಮಾನದಲ್ಲಿ ಗ್ರಾಮೀಣ ಆಡುಭಾಷೆಯೊಂದಿಗೆ ರೂಪಿಸಲಾಗಿದೆ. ಅಲ್ಲಿ ಹೆಚ್ಚಾಗಿ ಮಾತನಾಡುವ ಡ್ಯಾನಿಶ್ ಭಾಷೆ‌ಗೆ ಪರ್ಯಾಯವಾಗಿ ಸ್ಥಳೀಯ ಭಾಷೆ ಎಂದು ಇದನ್ನು ಪರಿಗಣಿಸಲಾಗುತ್ತದೆ. ನಾರ್ವೆಯ ಅಧಿಕೃತ ಭಾಷೆಯಾದ ‘ನಾರ್ವೇಜಿಯನ್ ನೈನೋರ್‌ಸ್ಟ್’ ನಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ. ಪ್ರಾದೇಶಿಕ ಅಸ್ಮಿತೆ ಮತ್ತು ಭಾಷೆಯ ಜತೆ ಅವರು ಆಧುನಿಕ ಕಲಾತ್ಮಕ ತಂತ್ರಗಳನ್ನು ಬೆಸೆದಿರುವುದು ವಿಶೇಷ. ಖ್ಯಾತ ಸಾಹಿತಿಗಳಾದ ಸ್ಯಾಮ್ಯೂಯಲ್ ಬೆಕೆಟ್, ಥಾಮಸ್ ಬೆರ್ನಾರ್ಡ್ ಅವರನ್ನು ಫೋಸ್ಸೆ ಅವರ ಬರಹಗಳು ನೆನಪಿಸುತ್ತವೆ. ಹೊಸ ನಮೂನೆಯ ನಾಟಕಗಳು ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾದ ಗದ್ಯಕ್ಕಾಗಿ ಜಾನ್ ಫೋಸ್ಸೆ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ…

Read More