Author: roovari

ಬೆಂಗಳೂರು : ಪ್ರವರ ಥಿಯೇಟರ್ ಇದರ 12ನೇ ವಾರ್ಷಿಕೋತ್ಸವ ಪ್ರಯುಕ್ತ ಕಾಜಾಣ ಪ್ರಸ್ತುತ ಪಡಿಸುವ ನಾಟಕ ಪ್ರದರ್ಶನವನ್ನು ದಿನಾಂಕ 23 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ. ಡಾ. ಎಸ್.ಎಲ್.ಎನ್. ಸ್ವಾಮಿ ಇವರ ರಚನೆ, ವಿನ್ಯಾಸ ಸಂಗೀತ ಮತ್ತು ನಿರ್ದೇಶನದಲ್ಲಿ ಪೌರಾಣಿಕ ದೃಶ್ಯ ಪ್ರಪಂಚದ ವಿಶಿಷ್ಟ ಅನಾವರಣ ಗೋಕುಲ ಸಹೃದಯನ ಅಸಾಮಾನ್ಯ ದೃಶ್ಯ ಸಂಪುಟ ಏಕವ್ಯಕ್ತಿ ಪೌರಾಣಿಕ ರಂಗ ಪ್ರಯೋಗ ‘ಪಂಚಗವ್ಯ’ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9880339669 ಮತ್ತು 8431803866 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಉಡುಪಿಯ ರಾಗ ಧನ (ರಿ.) ಸಂಸ್ಥೆಯ ರಾಗರತ್ನಮಾಲಿಕೆ ಸರಣಿ ಸಂಗೀತ ಕಾರ್ಯಕ್ರಮದ 39ನೆಯ ಸಂಗೀತ ಕಛೇರಿ ದಿನಾಂಕ 22 ಜುಲೈ 2025ರಂದು ಬ್ರಹ್ಮಾವರ ತಾಲೂಕಿನ ಕುಂಜಾಲು ಶ್ರೀರಾಮಮಂದಿರದ ಸಭಾಂಗಣದಲ್ಲಿ ಇಬ್ಬರು ಯುವ ಪ್ರತಿಭೆಗಳಿಂದ ಸಂಪನ್ನಗೊಂಡಿತು. ಇಬ್ಬರೂ ಶಾಸ್ತ್ರೀಯ ಸಂಗೀತದ ಆಧಾರಮೌಲ್ಯಗಳನ್ನು ಕಾದುಕೊಂಡು, ಅದರಲ್ಲಿ ತಂತಮ್ಮ ಮನೋಧರ್ಮಕ್ಕೆ ಅನುಗುಣವಾಗಿ ಕೆಲವು ಹೊಸ ಕಲ್ಪನೆಗಳನ್ನು ಅಳವಡಿಸುವ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದರು. ಉದ್ಘಾಟನಾ ಪೂರ್ವ ಕಛೇರಿಯನ್ನು ನೀಡಿದ ತರುಣ ಕಾರ್ತಿಕ್ ಶ್ಯಾಮ್ ಮುಂಡೋಳುಮೂಲೆ. ಗಂಭೀರವಾದ ಶಾರೀರ, ಅಪಾರವಾದ ಆತ್ಮವಿಶ್ವಾಸ, ನಿರಂತರ ಸಾಧನೆಯಿಂದ ರೂಡಿಸಿಕೊಳ್ಳಲಾದ ‘ಅ’ಕಾರಗಳು, ಸ್ವರಗಳ ಖಚಿತತೆ, ಅದಮ್ಯ ಉತ್ಸಾಹ…. 70ರ ದಶಕದ ವಿದ್ವಾಂಸರುಗಳನ್ನು ನೆನಪಿಸಿದವು. ಶಂಕರಾಭರಣದ ಅಟತಾಳ ವರ್ಣದ ನಂತರ ಶ್ರೀರಂಜನಿ (ಗಜವದನಾ) ರಚನೆಯು ಮೂಡಿಬಂತು. ಮುಂದಿನ ವಸಂತ (ಸೀತಮ್ಮ ಮಾಯಮ) ಅಂತೆಯೇ ಪ್ರಧಾನ ರಾಗವಾಗಿದ್ದ ವರಾಳಿ (ಮಾಮವ ಮೀನಾಕ್ಷಿ) ಈ ಎರಡೂ ಕೃತಿಗಳೂ ತಂತಮ್ಮ ನೆಲೆಯಲ್ಲಿ, ತ್ವರಿತಗತಿಯ ಬಿರ್ಕಾಗಳೊಂದಿಗೆ ನೀಡಲಾದ ರಾಗಾಲಾಪನೆ, ಚುರುಕಾದ ಕೃತಿನಿರೂಪಣೆ, ನೆರವಲ್, ಮುಕ್ತಾಯಗಳಿಂದಲೇ ತುಂಬಿದ್ದ ತುಂಬಿದ್ದ ಸ್ವರ ಪ್ರಸ್ತಾರಗಳಿಂದ…

Read More

ಮುಂಬಯಿ : ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಿನಾಂಕ 10 ಆಗಸ್ಟ್ 2025ರಂದು ಮುಂಬೈಯ ಕಲ್ಯಾಣ್ ಶಹಾಡ್ ಪಾಟೀದಾರ್ ಸಭಾಂಗಣದಲ್ಲಿ ಜರಗಿದ ‘ಶ್ರೀದೇವಿ ಬನಶಂಕರಿ’ ಯಕ್ಷಗಾನ ಪ್ರದರ್ಶನ ಸಂದರ್ಭ ಏರ್ಪಡಿಸಿದ್ದ ಕಲಾವಿದರ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಂಬಯಿ ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷರಾದ ಡಾ. ದಿವಾಕರ ಶೆಟ್ಟಿ ಇಂದ್ರಾಳಿ “ಕರ್ಮಭೂಮಿ ಮುಂಬೈಗೆ ಆಗಮಿಸಿದ್ದರೂ ಜನ್ಮ ಭೂಮಿಯ ಆಚಾರ ವಿಚಾರಗಳನ್ನು ಮರೆಯಬಾರದು. ಮಾತೃಭಾಷೆಯ ಮೇಲೆ ಪ್ರೀತಿ ಇರಬೇಕು; ಆಗ ಮಾತ್ರ ಇಂತಹ ಕಲೆ ಜೀವಂತವಾಗಿರಲು ಸಾಧ್ಯ. ಯಕ್ಷಗಾನದಿಂದ ಸಂಸ್ಕಾರ ಸಂಸ್ಕೃತಿಯನ್ನು ಕಲಿಯಲು ಮತ್ತು ಉಳಿಸಲು ಸಾಧ್ಯ. ತುಳುನಾಡಲ್ಲಿ ತುಳು ಸಿನಿಮಾಗಳು ಓಡದಿದ್ದರೂ ಮುಂಬೈಯಲ್ಲಿ ಹೌಸ್ ಫುಲ್ ಆಗುತ್ತದೆ, ಕಾರಣ ನಾವು ಕಲೆ ಮತ್ತು ಕಲಾವಿದರಿಗೆ ನೀಡುವ ಗೌರವ ಅದು” ಎಂದು ಅಭಿಪ್ರಾಯಪಟ್ಟರು. ಗೌರವ ಸ್ವೀಕರಿಸಿ ಮಾತನಾಡಿದ ಕಲಾವಿದ ಸಂಜೀವ ಶೆಟ್ಟಿ ಅರೆಹೊಳೆ “ಕಲೆ ಉಳಿಯಬೇಕಾದರೆ…

Read More

ಉಡುಪಿ : ವಿಭೂತಿ ಆರ್ಟ್ ಗ್ಯಾಲರಿ ಮತ್ತು ಚಿತ್ರಕಲಾ ಮಂದಿರ ಕಲಾಶಾಲೆ ಇದರ ವತಿಯಿಂದ ‘ಸಂಗಮ’ ಸಮೂಹ ಕಲಾ ಪ್ರದರ್ಶನವನ್ನು ದಿನಾಂಕ 23 ಆಗಸ್ಟ್ 2025ರಂದು ಪೂರ್ವಾಹ್ನ 10-30 ಗಂಟೆಗೆ ಚಿತ್ರಕಲಾ ಮಂದಿರ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ. ಅನ್ನಪೂರ್ಣ ಕಾಮತ್, ಜನಾರ್ದನ ಹಾವಂಜೆ, ಕಾಂತಿ ಪ್ರಭು, ಪ್ರವೀಣ್ ಮಲ್ಲಾರ್, ಪುರಂದರ ಎಸ್. ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್, ಸುಚೇಂದ್ರ ಕಾರ್ಲ, ಶ್ರೀನಿವಾಸ ಆಚಾರ್ಯ, ಸೂರಜ್ ಕುಮಾರ್ ವಿದ್ಯಾ ಎಲ್ಲೂ ರ್, ಯಶೋಧ ಎಸ್. ಸನಿಲ್ ಮೊದಲಾದ ಕಲಾವಿದರು ಭಾಗವಹಿಸಲಿದ್ದಾರೆ.

Read More

Iravati Karve, known in the literary world for her valuable masterwork ‘Yugantha’ a rethinking on the major characters of Mahabharatha, is a mesmerizing character in the intellectual arena because of her astounding knowledge of not only Sociology and Anthropology, but a variety of other subjects too. Her alluring personality has been effectively delineated in her recently published biography. ‘Iru’ written on joint effort by Urmila Deshpande (her granddaughter) and Thiango Pinto Barbosa. The book consists of two parts (16 chapters) giving an authentic account of Irawati Karve’s birth, growth, education, higher studies, career and her literary works. The Prologue makes…

Read More

ಕಟೀಲು : ಯುಎಇ -ಮಧ್ಯಪ್ರಾಚ್ಯದ ಏಕೈಕ ಮತ್ತು ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರ ‘ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ’ ಇದರ ದಶಮಾನೋತ್ಸವ ಸಡಗರದ ಪ್ರಯುಕ್ತ ಕೇಂದ್ರದ ಕಲಿಕಾ ವಿದ್ಯಾರ್ಥಿಗಳಿಂದ ಶ್ರೀಕ್ಷೇತ್ರ ಕಟೀಲಿನ ರಥಬೀದಿಯ ಸರಸ್ವತಿ ಸದನದಲ್ಲಿ ದಿನಾಂಕ 10 ಆಗಸ್ಟ್ 2025ರಂದು ಹಮ್ಮಿಕೊಂಡ ‘ಯಕ್ಷಗಾನಾರ್ಚಣೆ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಕರ್ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ “ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಯುಎಇಯಲ್ಲಿ ನೆಲೆಸಿರುವ ಕನ್ನಡಿಗರು, ತುಳುವರು ಅಲ್ಲಿಯೇ ಯಕ್ಷಗಾನ ಅಭ್ಯಾಸ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಈ ಕಲೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ಯಕ್ಷಗಾನಕ್ಕೆ ಮಾನವ ಹೃದಯವಲ್ಲದೆ ದೇಶ-ದೇಶಗಳನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ಸಂಸ್ಥೆ ಸಾಬೀತು ಪಡಿಸಿದೆ. ದುಬಾಯಿಯಲ್ಲಿ ಮಕ್ಕಳು, ಹಿರಿಯರು ಬೇಧಭಾವವಿಲ್ಲದೆ ಯಕ್ಷಗಾನವನ್ನು ಕಲಿತು ಯಶಸ್ವಿಯಾಗಿ ಪ್ರದರ್ಶನ ಮಾಡುತ್ತಿದ್ದಾರೆ. ಇದೊಂದು ಸಾಂಸ್ಕೃತಿಕ ಬೆರಗು. ಮಕ್ಕಳು, ಮಹಿಳೆಯರು ಯಕ್ಷಗಾನ ಕಲಿತರೆ ಕಲೆ ಉಳಿಯುತ್ತದೆ, ಬೆಳೆಯುತ್ತದೆ.…

Read More

ಪಾವಂಜೆ : ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ‘ಯಕ್ಷಾಂತರಂಗ’ ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ರಂಗ ನಡೆಗಳ ಮಾಹಿತಿ ಕಾರ್ಯಾಗಾರವನ್ನು ದಿನಾಂಕ 20 ಆಗಸ್ಟ್ 2025ರಿಂದ 24 ಆಗಸ್ಟ್ 2025ರವೆರೆಗೆ ಪ್ರತಿದಿನ ಸಂಜೆ ಗಂಟೆ 5-30ರಿಂದ 8-30ರ ತನಕ ಪಾವಂಜೆ ನಾಗವೃಜ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. • ಈ ಕಾರ್ಯಾಗಾರವು ಯಕ್ಷಗಾನ ಪ್ರಸಂಗ ಸಾಹಿತ್ಯ, ರಂಗನಡೆ, ಪುರಾಣ ಕಥನ ಮಾಲಿಕೆಯ ವ್ಯಾಪ್ತಿಯನ್ನು ಒಳಗೊಂಡಿದೆ. • ಪ್ರಸಂಗ ಸಾಹಿತ್ಯವನ್ನು ಓದುವ ಬಗೆ, ಅರ್ಥವಿಸ್ತರಣೆಗೆ ಬೇಕಾದ ತಂತ್ರ, ರಂಗ ನಡೆಯ ಪ್ರಾಯೋಗಿಕ ತರಗತಿ ಸಹಿತ ಪ್ರಸಂಗಕ್ಕೆ ಪೂರಕವಾದ ಪ್ರಸಾದನ ಮತ್ತು ವೇಷಭೂಷಣದ ಪರಿಚಯವನ್ನು ಒಳಗೊಂಡಿದೆ. • ಈ ಕಾರ್ಯಾಗಾರವು ಉಚಿತವಾಗಿದ್ದು ಮೇಳದ ಕಲಾವಿದರು, ಹವ್ಯಾಸಿ ಕಲಾವಿದರು ಮತ್ತು ಯಕ್ಷಗಾನಾಭ್ಯಾಸ ನಿರತ ವಿದ್ಯಾರ್ಥಿಗಳು ಭಾಗವಹಿಸಬಹುದು. •…

Read More

ಬೆಂಗಳೂರು : ‘ರೂಪಾಂತರ’ ಕ್ರಿಯಾಶೀಲ ಜೀವಗಳು ತಂಡದ ವತಿಯಿಂದ ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿಯವರಿಗೆ ರಂಗ ನಮನ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 19 ಆಗಸ್ಟ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿಯವರು ರಚಿಸಿರುವ ರೂಪಾಂತರ ಅಭಿನಯಿಸುವ ಕೆ.ಎಸ್.ಡಿ.ಎಲ್. ಚಂದ್ರು ನಿರ್ದೇಶನದಲ್ಲಿ ‘ಹೆಜ್ಜೆಗಳು’ ನಾಟಕ ಪ್ರದರ್ಶನಗೊಳ್ಳಲಿದೆ. ದಯಮಾಡಿ ಅಭಿಮಾನಿ ರಂಗಾಸಕ್ತರೆಲ್ಲರೂ ನಾಟಕವನ್ನು ನೋಡುವುದರ ಮೂಲಕ ರಂಗಭೂಮಿಯ ದೀಪ ನಿರಂತರವಾಗಿ ಬೆಳಗುತ್ತಿರಲು ನೀವೆಲ್ಲರೂ ಸಾಕ್ಷಿಯಾಗಬೇಕು ಎಂದು ಅತ್ಯಂತ ಗೌರವದಿಂದ, ಪ್ರೀತಿಯಿಂದ ಸ್ವಾಗತಿಸುತ್ತಿದೆ.

Read More

ಬೆಂಗಳೂರು : ‘ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಇದರ ವತಿಯಿಂದ ಸ್ವಾತಂತ್ರ್ಯ ಹೋರಾಟದ ನೆನಪಿನಂಗಳದಿಂದ ‘ಕಥನ, ಕವನ, ಗಾಯನ’ ಕಾರ್ಯಕ್ರಮವನ್ನು ದಿನಾಂಕ 17 ಆಗಸ್ಟ್ 2025ರಂದು ಸಂಜೆ 5-00 ಗಂಟೆಗೆ ಆನ್ ಲೈನಿನಲ್ಲಿ ನಡೆಯಲಿದೆ. ವೈದ್ಯರು ಹಾಗೂ ‘ಆವಿಷ್ಕಾರ’ ವೇದಿಕೆಯ ಸದಸ್ಯರಾದ ಡಾ. ರಾಜಶೇಖರ ಎಂ. ಇವರು ಕಥನ ಪ್ರಸ್ತುತಿ ಮಾಡಲಿದ್ದು, ‘ಆವಿಷ್ಕಾರ’ ವೇದಿಕೆಯ ಸಲಹೆಗಾರರಾದ ವೆಂಕಟೇಶ್ ಟಿ.ಎಂ. ಸಮಾರೋಪ ನುಡಿಗಳನ್ನಾಡಲಿದ್ದು, ‘ಆವಿಷ್ಕಾರ’ ವೇದಿಕೆಯ ಸದಸ್ಯರಾದ ಎಸ್.ಎ. ಪ್ರವೀಣ್ ನಿರೂಪಣೆ ಮಾಡಲಿದ್ದಾರೆ. https://meet.google.com/uak-zczt-hjp

Read More

ಬ್ರಹ್ಮಾವರ : ಬ್ರಹ್ಮಾವರದ ಬಂಟರ ಭವನದಲ್ಲಿ ದಿನಾಂಕ 09 ಆಗಸ್ಟ್ 2025ರಂದು ‘ನೆನಪು’ ಚೌಕಿಮನೆಯ ಬೆಳಕಿನಲಿ ಒಂದು ಸ್ಮರಣೀಯ ಕಾರ್ಯಕ್ರಮ ನಡೆಯಿತು. ಹವ್ಯಾಸಿ ಯಕ್ಷಗಾನ ತಂಡಗಳಿಗೆ ವೇಷಭೂಷಣವನ್ನು ಬಹಳ ಪ್ರೀತಿಯಿಂದ ಒದಗಿಸಿ, ಈ ಭಾಗದಲ್ಲಿ ಯಕ್ಷಗಾನದ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಹಂದಾಡಿ ಬಾಲಕೃಷ್ಣ ನಾಯಕ್ (ಬಾಲಣ್ಣ) ಇವರ ಪ್ರಥಮ ಪುಣ್ಯತಿಥಿ ಅರ್ಥಪೂರ್ಣವಾಗಿ ಜರಗಿತು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಇಂದ್ರಾಳಿ ಪ್ರಭಾಕರ್ ಆಚಾರ್ಯರಿಗೆ ಬಾಲಣ್ಣನ ನೆನಪಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗುವಲ್ಲಿ ಬಾಲಣ್ಣನ ಕೊಡುಗೆ ಅಪಾರ. ಸಮಾರಂಭದಲ್ಲಿ ಬಲ್ಲಣ್ಣನ ಸುಂದರವಾದ ಪುತ್ಥಳಿಯ ಅನಾವರಣವೂ ನೆರವೇರಿತು. ತಂದೆಯಂತೆ ತಮ್ಮನ್ನು ಯಕ್ಷಗಾನ ಕ್ಷೇತ್ರಕ್ಕೆ ಅರ್ಪಿಸಿಕೊಂಡ ಬಾಲಣ್ಣನ ಮೂವರು ಪುತ್ರರು ಕೂಡ ಅಭಿನಂದನಾರ್ಹರು. ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದವರಿಂದ ‘ಮೀನಾಕ್ಷಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಂಡಿತು.

Read More