Subscribe to Updates
Get the latest creative news from FooBar about art, design and business.
Author: roovari
ನಾಟ್ಯ ಎಂದೊಡನೆ ಮೊದಲು ಕಣ್ಣೆದುರಿಗೆ ಬಂದು ನಿಲ್ಲುವುದು ನಾಟ್ಯಾಧಿಪತಿ ಶಂಕರನ ಅಪೂರ್ವ ಮೆರುಗಿನ ನಾಟ್ಯ ವೈವಿಧ್ಯ ತಾಂಡವಗಳು. ನೋಡಿದಷ್ಟೂ ಪುಳಕಿಸುವ ಹೊಸಬಗೆ, ಕಂಡಷ್ಟೂ ಸಾಕ್ಷಾತ್ಕರಿಸುವ ವಿನೂತನ ಪರಿಕಲ್ಪನೆ ಅದು. ಶಿವನ ಕಥೆ ಅನಂತ ನೆಲೆಗಳಲ್ಲಿ ಅನಾವರಣಗೊಳ್ಳುವ ಕುತೂಹಲ ಜನ್ಯ ಕಥಾ ಸರಿತ್ಸಾಗರ. ಇಂಥದೊಂದು ಸ್ವಾರಸ್ಯಕರ ಕಥಾನಕದ ನೃತ್ಯರೂಪಕ ‘ನಾಟ್ಯ ಶಂಕರ’ ಇತ್ತೀಚೆಗೆ ಶಿವರಾತ್ರಿಯ ದಿನಗಳಲ್ಲಿ ‘ನಯನ’ ರಂಗಮಂದಿರದಲ್ಲಿ ಕಲಾರಸಿಕರಿಗೆ ನೀಡಿದ ರಸಾನುಭವ ನೆನಪಿನಲ್ಲಿ ಉಳಿಯುವಂಥದ್ದು. ಖ್ಯಾತ ಹಿರಿಯ ನೃತ್ಯಾಚಾರ್ಯ ಕೇಶವಮೂರ್ತಿ ನೇತೃತ್ವದ ‘ಕೇಶವ ನೃತ್ಯಶಾಲೆ’- ಕನ್ನಡ ನೃತ್ಯರೂಪಕಗಳ ಅಸ್ಮಿತೆಯಿಂದ ನೃತ್ಯಕ್ಷೇತ್ರದಲ್ಲಿ ವಿಶಿಷ್ಟತೆ ಪಡೆದಿರುವುದು ಸರ್ವವಿದಿತ. ಆದಿ ಪಂಪನಿಂದ ಪ್ರಾರಂಭವಾಗಿ ಹಲವಾರು ಕನ್ನಡ ನೃತ್ಯರೂಪಕಗಳ ನಿರ್ಮಾಣ-ಪ್ರದರ್ಶನ-ಪ್ರಯೋಗಗಳು ಅವರ ಕನ್ನಡ ಪ್ರೀತಿಯ ದ್ಯೋತಕ. ಅನಂತರ ಅವರ ಪುತ್ರ ನೃತ್ಯಾಚಾರ್ಯ ಡಾ. ಬಿ.ಕೆ. ಶ್ಯಾಂ ಪ್ರಕಾಶ್ ತಂದೆಯ ಪರಂಪರೆಯನ್ನು ಮುಂದುವರೆಸುತ್ತ ಮೂರು ದಶಕಗಳ ಹಿಂದೆಯೇ ‘ಶಿವಶಕ್ತಿ’ ಎಂಬ ನೃತ್ಯರೂಪಕವನ್ನು ಸಾಹಿತ್ಯ ರಚನೆಯೊಂದಿಗೆ ಮುಖ್ಯ ಪಾತ್ರವಹಿಸಿ ಪ್ರದರ್ಶಿಸಿದ್ದರು. ಅವರ ಮೂರನೆಯ ತಲೆಮಾರಿನವರಾದ ನೃತ್ಯಕಲಾವಿದ-ಗುರು ಕಲಾಯೋಗಿ ಎಸ್. ರಘುನಂದನ್…
ಬೆಂಗಳೂರು : ಕರ್ನಾಟಕ ಸರ್ಕಾರದಿಂದ ನೋಂದಾಯಿತ ಡಾ. ಪು.ತಿ.ನ. ಟ್ರಸ್ಟ್ (ರಿ.) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಇದರ ಸಹಯೋಗದೊಂದಿಗೆ ಆಯೋಜಿಸುವ ಪು.ತಿ.ನ. ಇವರ 120ನೇ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 17 ಮಾರ್ಚ್ 2025ರ ಸೋಮವಾರದಂದು ಸಂಜೆ ಘಂಟೆ 5:00ರಿಂದ ಬೆಂಗಳೂರಿನ ಮಲ್ಲೇಶ್ವರಂ 14ನೇ ಅಡ್ಡರಸ್ತೆ ಯಲ್ಲಿರುವ ಸೇವಾಸದನದಲ್ಲಿ ನಡೆಯಲಿದೆ. ಪು. ತಿ. ನ. ಟ್ರಸ್ಟ್ (ರಿ.) ಮಂಡ್ಯ ಇದರ ಅಧ್ಯಕ್ಷರಾದ ಪ್ರೊ. ಎಂ. ಕೃಷ್ಣಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಸುವಿಖ್ಯಾತ ಲೇಖಕರು, ಪತ್ರಕರ್ತರು ಹಾಗೂ ಪ್ರಾಧ್ಯಾಪಕರಾದ ಶ್ರೀ ಎನ್. ಎಸ್. ಶ್ರೀಧರಮೂರ್ತಿ, ಶ್ರೀ ವೈ.ಕೆ.ಮುದ್ದುಕೃಷ್ಣ, ಬೆಂಗಳೂರು, ಶ್ರೀ ಮಂಡ್ಯ ರಮೇಶ್ ಬೆಂಗಳೂರು, ಶ್ರೀ ಬಿ. ಎನ್. ಸುರೇಶ್ ಬೆಂಗಳೂರು, ಶ್ರೀ ಶ್ರೀನಾಥ ಮೇಲುಕೋಟೆ ಮಂಡ್ಯ, ಡಾ. ಸುಮಾರಾಣಿ ಮಂಡ್ಯ, ಶ್ರೀ ಕೆ. ಜೆ. ನಾರಾಯಣ ಮೈಸೂರು, ಶ್ರೀ ಬಿ. ಚಂದ್ರೇಗೌಡ, ಶಿವಮೊಗ್ಗ, ಶ್ರೀ ಕುಮಾರ ಕೊಪ್ಪ. ಮಂಡ್ಯ, ಹಾಗೂ ವಿಶೇಷ…
ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ, ಇದರ ಸಿನ್ಸ್ 1999 ಶ್ವೇತಯಾನದ ಅಂಗವಾಗಿ ಧಮನಿ ಟ್ರಸ್ಟ್ (ರಿ.), ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸುವ ರಜಾ ರಂಗು -2025 ‘ಚಂದಕ್ಕಿ ಬಾರೆ ಕತೆ ಹೇಳೆ’ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 11 ಏಪ್ರಿಲ್ 2025 ರಿಂದ 04 ಮೇ 2025ರ ವರೆಗೆ ತೆಕ್ಕಟ್ಟೆಯ ಮಾದರಿ ಶಿಶುಮಂದಿ ನಿಸರ್ಗದಲ್ಲಿ ನಡೆಯಲಿದೆ ಖ್ಯಾತ ರಂಗಕರ್ಮಿ ಡಾ. ಶ್ರೀ ಪಾದ್ ಭಟ್ ಇವರ ನಿರ್ದೇಶನದಲ್ಲಿ 8 ರಿಂದ 16 ವರ್ಷದ ಒಳಗಿನ ಮಕ್ಕಳಿಗಾಗಿ ನಡೆಯಲಿರುವ ಈ ಶಿಬಿರದಲ್ಲಿ ಕಥಾಭಿನಯ, ಕಾವ್ಯಾಭಿನಯ, ನೃತ್ಯರೂಪಕ, ನಾಟಕಗಳು, ಚಿತ್ರಬರೆ, ಕವನ ರಚನೆ, ಆಕಾಶ ವೀಕ್ಷಣೆ, ಮಕ್ಕಳ ಅದಾಲತ್-ಸಂವಾದ (ಪಾಲಕರೊಂದಿಗೆ, ವೈದ್ಯರೊಂದಿಗೆ), ಪರಿಸರ ಅಧ್ಯಯನ, ಮಕ್ಕಳ ಸಂತೆ ಮುಂತಾದವು ನಡೆಯಲಿದೆ.
ಉಡುಪಿ : ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಜಾನಪದ ವಿದ್ವಾಂಸ ‘ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 15 ಮಾರ್ಚ್ 2025ರಂದು ಉಡುಪಿ ಚಿಟ್ಟಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್ ಇದರ ಲಕ್ಷ್ಮೀ ಸಭಾಭವನದಲ್ಲಿ ನಡೆಯಲಿದೆ. ಈ ಸಾಲಿನ ‘ಜಾನಪದ ವಿದ್ವಾಂಸ ಪ್ರಶಸ್ತಿ’ಯನ್ನು ಜಾನಪದ ಸಂಶೋಧಕ ಡಾ. ತುಕಾರಾಂ ಪೂಜಾರಿ ಇವರಿಗೆ ಹಾಗೂ ‘ಜಾನಪದ ಕಲಾವಿದ ಪ್ರಶಸ್ತಿ’ಯನ್ನು ದೈವಾರಾಧನಾ ಸೇವಾ ವರ್ಗದ ಅಲೆವೂರು ಗೋಪು ಮಡಿವಾಳ ಅವರಿಗೆ ಪ್ರದಾನ ಮಾಡಲಾಗುವುದು. ಸಹಕಾರಿ ಧುರೀಣ ಜಯಕರ್ ಶೆಟ್ಟಿ ಇಂದ್ರಾಳಿ ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು, ಉದ್ಯಮಿ ರಂಜನ್ ಕೆ. ಹಾಗೂ ಪ್ರಶಸ್ತಿಯ ರೂವಾರಿ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿರುವರು. ರಜತ ವರ್ಷದ ಸಡಗರದಲ್ಲಿರುವ ಉಡುಪಿ ಯುವವಾಹಿನಿ ಸಂಘಟನೆಯು ಸಾಹಿತಿ ಮುದ್ದು ಮೂಡುಬೆಳ್ಳೆ ಇವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ನಾನಾ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರ…
ದೆಹಲಿ : ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಫೆಸ್ಟಿವಲ್ ಆಫ್ ಲೆಟರ್ಸ್’ ಸಾಹಿತ್ಯೋತ್ಸವ ಕಾರ್ಯಕ್ರಮ ದೆಹಲಿಯ ರವೀಂದ್ರ ಭವನದಲ್ಲಿ ಮಾರ್ಚ್ 7ರಿಂದ 12ರ ತನಕ ಆಯೋಜಿಸಿದ್ದು ದೇಶದ 50ಕ್ಕೂ ಮಿಕ್ಕಿದ ಬೇರೆ ಬೇರೆ ಭಾಷೆಗಳ ಸಾಹಿತಿಗಳನ್ನು ಆಹ್ವಾನಿಸಿತ್ತು. ಈ ಬಾರಿ ತುಳು ಭಾಷೆಯಿಂದ ಅಕ್ಷತಾ ರಾಜ್ ಪೆರ್ಲ ಹಾಗೂ ಆತ್ರಾಡಿ ಅಮೃತಾ ಶೆಟ್ಟಿಯವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಆಯ್ಕೆ ಮಾಡಿದೆ. ದಿನಾಂಕ 11 ಮಾರ್ಚ್ 2025ರಂದು ಹಿರಿಯ ಸಾಹಿತಿಗಳಾದ ಕಿರಣ್ ಕುಮಾರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಟೇಸ್ಟಿ ರೌಂಡ್ – ಉತ್ತರ ಪೂರ್ವ ಹಾಗೂ ದಕ್ಷಿಣಾದಿ ಕವಿಗೋಷ್ಠಿಯಲ್ಲಿ ಅಕ್ಷತಾ ರಾಜ್ ಪೆರ್ಲ ಅವರು ತಮ್ಮ ತುಳು ಕವಿತೆಗಳನ್ನು ತುಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ತನಕ ತುಳು ಮತ್ತು ಕನ್ನಡದಲ್ಲಿ ಒಟ್ಟು 13 ಕೃತಿಗಳನ್ನು ರಚಿಸಿದ್ದು, ಈ ಮೊದಲು ಮೈಸೂರು ದಸರಾ ಕವಿಗೋಷ್ಠಿಯಲ್ಲೂ ತುಳು ಭಾಷೆಯ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ.
ಉಡುಪಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀಮತಿ ಮತ್ತು ಶ್ರೀ ಗೋಪಾಲಕೃಷ್ಣ ಭಟ್ ಇವರ ಉಡುಪಿಯ “ಈಶಾವಾಸ್ಯ” ಮನೆಯಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯದ ಶಿರೂರು ಮಠಾಧೀಶರರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರ ಭೀಕ್ಷಾಸೇವಾ ಅಂಗವಾಗಿ ‘ಭೀಷ್ಮಾರ್ಜುನ’ ( ಕರ್ಮಬಂಧ ) ಯಕ್ಷಗಾನ ತಾಳಮದ್ದಳೆ ದಿನಾಂಕ 12 ಮಾರ್ಚ್ 2025 ರಂದು ನಡೆಯಿತು . ಹಿಮ್ಮೇಳದಲ್ಲಿ ನಾರಾಯಣ ಶಬರಾಯ , ಪದ್ಯಾಣ ಜಯರಾಮ್ ಭಟ್ , ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣನಾಗಿ ಕಿಶೋರಿದುಗ್ಗಪ್ಪ ನಡುಗಲ್ಲು, ಭೀಷ್ಮನಾಗಿ ಶುಭಾ ಜೆ. ಸಿ. ಅಡಿಗ, ಅರ್ಜುನನಾಗಿ ಹರಿಣಾಕ್ಷಿ ಜೆ. ಶೆಟ್ಟಿ ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಶ್ರೀ ಮತಿ ಶಾಂತಲಾ ಮತ್ತು ಶ್ರೀಗೋಪಾಲಕೃಷ್ಣ ಭಟ್ ಕಲಾವಿದರನ್ನು ಗೌರವಿಸಿ ವಂದಿಸಿದರು. ಶ್ರಿಮತಿ ರಾಜಶ್ರೀ ಮತ್ತು ಶ್ರೀ ನಾರಾಯಣ ಶಬರಾಯ ಸಹಕರಿಸಿದರು.
ಪುತ್ತೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ (ರಿ.) ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಶಾಸ್ತ್ರೀಯ ನೃತ್ಯ ಕಲಾವಿದರ ಸಂಘಟನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಇವರ ಸಹಭಾಗಿತ್ವದಲ್ಲಿ ಆಯೋಜಿಸುವ ‘ಭರತಮುನಿ ಜಯಂತಿ’ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2025ರ ಆದಿತ್ಯವಾರದಂದು ಪುತ್ತೂರು ನೆಲ್ಲಿಕಟ್ಟೆಯ ಶ್ರೀ ರಾಮಕೃಷ್ಣ ಸೇವಾ ಸಮಾಜ (ರಿ.) ಇಲ್ಲಿ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇಲ್ಲಿನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ಪಂಚಿಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶಾಂತಲಾ ಪ್ರಶಸ್ತಿ ಪುರಸ್ಕೃತರು ನಾಟ್ಯಗುರು ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ದೀ ಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇದರ ಸಂಚಾಲಕರಾದ ಶ್ರೀಮತಿ ಪದ್ಮ ಕೆ. ಆರ್. ಆಚಾರ್ಯ ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಯುಗಳ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 2025ನೆಯ ಸಾಲಿನ ‘ನಾಗಡಿಕೆರೆ-ಕಿಟ್ಟಪ್ಪ ರುಕ್ಮಣಿ ತೀರ್ಥಹಳ್ಳಿ’ ಪ್ರಶಸ್ತಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿರುವ ಪ್ರಸ್ತುತ ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಕಿಟ್ಟಪ್ಪ ಗೌಡರು ಹತ್ತನೆಯ ತರಗತಿ ಓದುತ್ತಿದ್ದಾಗಲೇ ಬ್ರಿಟೀಷರ ವಿರುದ್ಧದ ‘ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಭಾಗವಹಿಸಿದ್ದರು. ರೈತ ಚಳುವಳಿ, ಗೋಕಾಕ ಚಳುವಳಿಗಳಲ್ಲಿಯೂ ಭಾಗವಹಿಸಿದ ಇವರು ಸದಾ ಜನಪರ ಚಳುವಳಿಯಲ್ಲಿ ಸಕ್ರಿಯರಾಗಿದ್ದವರು. ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯದ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಯಾವುದೇ ಆಮಿಷಗಳಿಗೆ ಒಳಗಾಗದೆ ದಿಟ್ಟತನದಿಂದ ಸಮಾಜದ ನ್ಯೂನತೆಯನ್ನು ತೋರಿಸುವ ಶ್ರೇಷ್ಠ ಪತ್ರಕರ್ತರನ್ನು ಗುರುತಿಸಬೇಕು ಎನ್ನುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದಾರೆಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಉತ್ತರ ಕನ್ನಡ…
ಮೂದಬಿದಿರೆ : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತಮೂರನೇ ಕಾರ್ಯಕ್ರಮ ದಿನಾಂಕ 12 ಮಾರ್ಚ್ 2025ರಂದು ಮೂಡಬಿದ್ರೆಯ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ “ಸ್ವಾಮಿ ವಿವೇಕಾನಂದ – ಚಿರಂತನ ಸ್ಪೂರ್ತಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಸ್ನಾತಕೋತ್ತರ ವಿಭಾಗದ ಡೀನ್ ಆಗಿರುವ ಡಾ. ವಿಜಯ ಸರಸ್ವತಿ ಬಿ. ಮಾತನಾಡಿ “ಸ್ವಾಮಿ ವಿವೇಕಾನಂದರು ಭಾರತೀಯ ತತ್ವಶಾಸ್ತ್ರ, ಆಧ್ಯಾತ್ಮಿಕತೆ ಹಾಗೂ ಸಮಾಜಸೇವೆಗೆ ಶಾಶ್ವತ ಸ್ಫೂರ್ತಿಯಾಗಿದ್ದಾರೆ. ಅವರ ಸಂದೇಶಗಳು ಶಕ್ತಿಶಾಲಿ, ಸಮಕಾಲೀನ ಮತ್ತು ಎಲ್ಲಾ ತಲೆಮಾರುಗಳಿಗೆ ಪೂರಕವಾಗಿವೆ. ವಿಶ್ವದ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಘೋಷಿಸಿದ ಅವರು, ಯುವಕರಿಗೆ ಆತ್ಮವಿಶ್ವಾಸ, ಶಿಸ್ತು, ತ್ಯಾಗ ಮತ್ತು ಸೇವೆಯ ಮಹತ್ವವನ್ನು ಬೋಧಿಸಿದರು. ವಿವೇಕಾನಂದರು ಭಾರತೀಯ ಯುವಕರಿಗೆ “ಉತ್ತಿಷ್ಠತ ಜಾಗ್ರತ” ಎಂಬ ಸಂದೇಶ ನೀಡಿ, ಅವರಲ್ಲಿ ದೇಶಭಕ್ತಿಯನ್ನು ಮೂಡಿಸಿದರು. ಅವರಿಂದ ಪ್ರೇರಿತರಾದ ಅನೇಕರು…
ಕನ್ನಡ ಸಾಹಿತ್ಯ ಲೋಕ ಒಂದು ಸಾಗರ ಇದ್ದಂತೆ. ಆ ಸಾಗರದ ಬೇರೆ ಬೇರೆ ಪ್ರಕಾರಗಳಲ್ಲಿ ಕೈಯಾಡಿಸಿ ಪ್ರಸಿದ್ಧರಾದವರು ಬಹಳ. ಕೆಲವೇ ಮಂದಿ ಮಹಿಳಾ ಲೇಖಕಿಯರಿದ್ದ ಆ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ಬರಹಗಾರ್ತಿಯಾಗಿ, ಕಾದಂಬರಿ ಕ್ಷೇತ್ರದಲ್ಲಿ ಕೃಷಿ ಮಾಡಿ ಪ್ರಸಿದ್ಧರಾದವರು ಆರ್ಯಾಂಬಾ ಪಟ್ಟಾಭಿ. ಇವರು ಬಿ.ಎಂ. ಕೃಷ್ಣಸ್ವಾಮಿ ಮತ್ತು ಶ್ರೀಮತಿ ತಂಗಮ್ಮ ದಂಪತಿಯ ಸುಪುತ್ರಿ, 1936 ಮಾರ್ಚ್ 12 ರಂದು ಮೈಸೂರಿನಲ್ಲಿ ಜನಿಸಿದರು. 1958ರಲ್ಲಿ ರಾಜೇಂದ್ರಪುರ ಪಟ್ಟಾಭಿರಾಮಯ್ಯರೊಂದಿಗೆ ಇವರ ವಿವಾಹ ನಡೆಯಿತು. ಕನ್ನಡ ಸಾಹಿತ್ಯ ಲೋಕದ ಹಿರಿಯ ವಿದ್ವಾಂಸರೂ, ಕವಿಗಳೂ ಆದ ಬಿ. ಎಂ. ಶ್ರೀಕಂಠಯ್ಯ, ಜನಪ್ರಿಯ ಕಾದಂಬರಿಗಾರ್ತಿಯಾದ ವಾಣಿ ಮತ್ತು ‘ತ್ರಿವೇಣಿ’ ಎಂಬ ಕಾವ್ಯ ನಾಮದಿಂದ ಜನಪ್ರಿಯರಾದ ಅನಸೂಯ ಶಂಕರ್, ಇವರೆಲ್ಲರೂ ಆರ್ಯಾಂಬಾ ಪಟ್ಟಾಭಿಯವರ ಬಂಧುಗಳು. ಬರಹಗಾರರ ಪ್ರಸಿದ್ಧ ಕುಟುಂಬದಿಂದ ಬಂದ ಇವರು 32 ಕಾದಂಬರಿಗಳ ರಚನೆ ಮಾಡುವುದರೊಂದಿಗೆ, ಸಣ್ಣ ಕಥಾ ಸಂಕಲನಗಳು, ಜೀವನ ಚರಿತ್ರೆಗಳು, ನಾಟಕಗಳು, ಪ್ರಬಂಧಗಳು, ಮಕ್ಕಳಿಗಾಗಿ ಪುಸ್ತಕಗಳಲ್ಲದೆ, ಟೆನ್ನಿಸ್, ಟೇಬಲ್ ಟೆನಿಸ್, ಚದುರಂಗ ಆಟಗಳು ಹವ್ಯಾಸಗಳಾಗಿದ್ದ ಕಾರಣ…