Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಜಿಲ್ಲೆಯ ಗೌಡ ಸಮಾಜ-ಸಂಘಟನೆಗಳ ಸಹಯೋಗದಲ್ಲಿ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ‘ಅರೆಭಾಷೆ ದಿನಾಚರಣೆ’ ಕಾರ್ಯಕ್ರಮವು ದಿನಾಂಕ 15-12-2023ರಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಭಾಗಮಂಡಲ ಗ್ರಾ.ಪಂ.ಅಧ್ಯಕ್ಷರಾದ ಕಾಳನ ರವಿ ಇವರು ಚಾಲನೆ ನೀಡಿ ಮಾತನಾಡುತ್ತಾ “ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ಅರೆಭಾಷೆ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಗ್ರಾಮೀಣ ಪ್ರದೇಶದಲ್ಲಿಯೂ ‘ಅರೆಭಾಷೆ ದಿನಾಚರಣೆ’ಯನ್ನು ಆಯೋಜಿಸುವಂತಾಗಬೇಕು. ಕನ್ನಡ ಉಪ ಭಾಷೆಯಾದ ಅರೆಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆಗಳಲ್ಲಿ ಅರೆಭಾಷೆಯನ್ನು ಮಾತನಾಡುವಂತಾಗಬೇಕು. ಇದರಿಂದ ಮಕ್ಕಳಿಗೆ ಭಾಷೆ ಕಲಿಸಲು ಸಾಧ್ಯವಾಗಲಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಶೇ.75ಕ್ಕೂ ಹೆಚ್ಚು ಜನರು ಅರೆಭಾಷೆ ಮಾತನಾಡುವವರು ವಾಸಿಸುತ್ತಿದ್ದಾರೆ. ಅರೆಭಾಷೆ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ “ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ…
ಬೆಳಗಾವಿ : ಈ ಹೊತ್ತಿಗೆ ಟ್ರಸ್ಟ್ ಇದರ ‘ದಶಮಾನೋತ್ಸವ ಸಂಭ್ರಮ’ದ ಪ್ರಯುಕ್ತ ‘ನಾಟಕ ರಚನಾ ಕಮ್ಮಟ’ವನ್ನು 2024ರ ಜನವರಿ 26,27 ಮತ್ತು 28ರವರೆಗೆ ಬೆಳಗಾವಿಯ ‘ನಮ್ಮವರೊಂದಿಗೆ’ ಬಳಗದ ಸಹಯೋಗದೊಂದಿಗೆ ನಡೆಸುತ್ತಿದೆ. ನಾಟಕ ರಚನೆಯಲ್ಲಿ ಉತ್ಸುಕರಾಗಿರುವವರಿಗೆ ಇದೊಂದು ಸುವರ್ಣಾವಕಾಶ. ಕನ್ನಡ ಸಾಹಿತ್ಯಲೋಕದ ಮಹತ್ವದ ವಿಮರ್ಶಕರಾದ ಡಾ. ಎಂ.ಎಸ್. ಆಶಾದೇವಿ ಕಮ್ಮಟದ ನಿರ್ದೇಶಕರು. ನಾಟಕವು ಅತ್ಯಂತ ಪ್ರಭಾವಶಾಲಿ ಸಾಹಿತ್ಯ ಪ್ರಕಾರ. ಸಮುದಾಯದ ಆಗುಹೋಗುಗಳಷ್ಟೇ ಅದರ ಚಲನೆಗಳನ್ನು ಮುನ್ನೋಟದಲ್ಲಿ ಕೊಡಬಲ್ಲ ಶಕ್ತಿಯೂ ಇದಕ್ಕಿದೆ. ಸಾಹಿತ್ಯ ಪ್ರಕಾರವಲ್ಲದೆ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಹೋರಾಟಗಳ ಮಾಧ್ಯಮವಾಗಿಯೂ ನಾಟಕ ತನ್ನ ಬಹು ಪಾತ್ರಗಳನ್ನು ನಿಭಾಯಿಸುತ್ತಾ ಬಂದಿದೆ. ಆದ್ದರಿಂದಲೇ ಸಾಹಿತ್ಯ ಚರಿತ್ರೆಯಲ್ಲಿ ನಾಟಕಕ್ಕೆ ವಿಶಿಷ್ಟ ಮತ್ತು ಮಹತ್ವದ ಸ್ಥಾನವಿದೆ. ಈ ಹಿನ್ನೆಲೆಯಲ್ಲಿ ನಾಟಕ ರಚನೆಯ ತಾತ್ವಿಕ ತಾಂತ್ರಿಕ ಹಾಗೂ ಸೌಂದರ್ಯಾತ್ಮಕ ನೆಲೆಗಳನ್ನು ಪರಿಚಯಿಸುವ ಮತ್ತು ಕನ್ನಡದ ಸಮೃದ್ಧ ನಾಟಕ ಪರಂಪರೆಯನ್ನು ಅರಿಯುವ ಶಿಬಿರವನ್ನು ಈ ಹೊತ್ತಿಗೆಯಿಂದ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ನಾಟಕ ರಚನೆಯ ಕುರಿತ ಸಂವಾದಗಳು ಹಾಗೂ ಕಮ್ಮಟದ ಮೊದಲ ಮತ್ತು…
ಮಂಗಳೂರು : ಶ್ರೀ ನಾಟ್ಯಾoಜಲಿ ಕಲಾ ಅಕಾಡೆಮಿ ಸುರತ್ಕಲ್ ಸಂಸ್ಥೆಯ ‘ನಾಟ್ಯಾಂಜಲಿ ಕಲೋತ್ಸವ’ವು ಮಂಗಳೂರು ಪುರಭವನದಲ್ಲಿ ದಿನಾಂಕ 16-12-2023 ಮತ್ತು 17-12-2023ರಂದು ಎರಡು ದಿನಗಳ ಕಾಲ ಸಂಭ್ರಮಿಸಿತು. ಹಿರಿಯ ನೃತ್ಯ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ಇವರು ಎರಡೂ ದಿನಗಳ ಕಲೋತ್ಸವವನ್ನು ದೇವತಾ ಜ್ಯೋತಿ ಪ್ರಜ್ವಲನ ಮಾಡಿ ಉದ್ಘಾಟಿಸಿದರು. ಮೊದಲ ದಿನ ಹಿರಿಯ ಚಿತ್ರಕಲಾವಿದ ದಿ. ಪಿ. ಪುರುಷೋತ್ತಮ ಕಾರಂತರ ಸ್ಮರಣಾರ್ಥ ‘ವರ್ಣ ಕಾವ್ಯ ನರ್ತನ’ ಎಂಬ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರರು, ಚಿತ್ರ ಕಲಾವಿದ ಬಿ. ಗಣೇಶ್ ಸೋಮಯಾಜಿ ಉಪಸ್ಥಿತರಿದ್ದರು. ಚಿತ್ರ ಕಲಾವಿದೆ ಶ್ರೀಮತಿ ಕೆ. ಮನೋರಂಜನಿ ರಾವ್ ಇವರಿಗೆ ‘ಪುರುಷೋತ್ತಮ ವರ್ಣಾಂಜಲಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿ. ಸುಮಂಗಲ ರತ್ನಾಕರ್ ರಾವ್, ವಿ. ವಿದ್ಯಾಶ್ರೀ ರಾಧಾಕೃಷ್ಣ, ಡಾ. ಶ್ರೀವಿದ್ಯಾ ಮುರಳೀಧರ್, ವಿದ್ವಾನ್ ಸೂರ್ಯ ಎನ್. ರಾವ್ ಇವರುಗಳ ಏಕವ್ಯಕ್ತಿ ಭರತನಾಟ್ಯ ಹಾಗೂ ಶ್ರೀ ನಾಟ್ಯಾoಜಲಿ ಕಲಾ ಅಕಾಡೆಮಿ, ಕಲಾವಟಿಕ ಡಾನ್ಸ್ ಅಕಾಡೆಮಿ ಬೆಂಗಳೂರು,…
ಬಂಟ್ವಾಳ : ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಇದರ ವತಿಯಿಂದ ‘ವರ್ಣಾಂಜಲಿ’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯು ದಿನಾಂಕ 24-12-2023ರಂದು ಬೆಳಿಗ್ಗೆ 9.30ರಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಶ್ರೀ ಏರ್ಯ ಬಾಲಕೃಷ್ಣ ಹೆಗ್ಡೆಯವರಿಂದ ಉದ್ಘಾಟನೆಗೊಳ್ಳಲಿದ್ದು, ಮಧ್ಯಾಹ್ನ ಗಂಟೆ 2.30ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಸ್ಪರ್ಧಾ ವಿಭಾಗ : 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಷಯ : ಸುಂದರ ಪರಿಸರ ಬಹುಮಾನಗಳು ಪ್ರಥಮ ರೂ.1,000/-, ದ್ವಿತೀಯ ರೂ.750/- ಮತ್ತು ತೃತೀಯ ರೂ.500/- ಮತ್ತು ಪ್ರಶಸ್ತಿ ಪತ್ರ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಷಯ : ಹಳ್ಳಿಯ ಜೀವನ ಬಹುಮಾನಗಳು ಪ್ರಥಮ ರೂ.1,500/-, ದ್ವಿತೀಯ ರೂ.1,000/- ಮತ್ತು ತೃತೀಯ ರೂ.500/- ಮತ್ತು ಪ್ರಶಸ್ತಿ ಪತ್ರ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಷಯ : ಸ್ವಚ್ಛ ಭಾರತ ಬಹುಮಾನಗಳು ಪ್ರಥಮ ರೂ.2,000/-, ದ್ವಿತೀಯ ರೂ.1,500/- ಮತ್ತು ತೃತೀಯ ರೂ.1,000/- ಮತ್ತು ಪ್ರಶಸ್ತಿ ಪತ್ರ ಪ್ರತೀ ವಿಭಾಗದಲ್ಲಿ ಎರಡು ಸಮಾಧಾನಕರ ಬಹುಮಾನವಿದ್ದು, ಭಾಗವಹಿಸಿದ ಎಲ್ಲಾ…
ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಹಿರೇಬಂಡಾಡಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷ ವಾಕ್ಯದಲ್ಲಿ ನಡೆಯುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮವು ಈಗಾಗಲೇ 10 ಸರಣಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದು, 11ನೇ ಸರಣಿ ಕಾರ್ಯಕ್ರಮವು ಹಿರೇಬಂಡಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದಿನಾಂಕ 23-12-2023ರ ಶನಿವಾರದಂದು ಬೆಳಿಗ್ಗೆ ಗಂಟೆ 10ಕ್ಕೆ ನಡೆಯಲಿದೆ. ಯುವಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಅವರಿಗೆ ಸೂಕ್ತ ವೇದಿಕೆಯನ್ನು ನೀಡುವ ನಿಟ್ಟಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭ, ಸಾಧಕರಿಗೆ ಸನ್ಮಾನ, ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಯುವ ಕವಿಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಹಿರಿಯ ಸಾಹಿತಿಗಳಾದ ಶ್ರೀ ಎಸ್.ಜಿ. ಕೃಷ್ಣ ಅವರು ನೀಡಿದ ಸಲಹೆ ಮೇರೆಗೆ ಈ ಬಾರಿ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ಸರ್ವಾಧ್ಯಕ್ಷೆಯಾಗಿ…
ಶಿರಸಿ : ನಾಡಿನ ಪ್ರಸಿದ್ಧ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆಯವರಿಗೆ ಶಿರಸಿಯ ‘ಎಂ.ರಮೇಶ ಪ್ರಶಸ್ತಿ ಸಮಿತಿ’ ನೀಡುವ ರಾಜ್ಯಮಟ್ಟದ ‘ಎಂ.ರಮೇಶ ಪ್ರಶಸ್ತಿ’ ಪ್ರಕಟಿಸಲಾಗಿದೆ. ಈ ಮೊದಲು ಯಕ್ಷಗಾನ, ನಾಟಕ ಕ್ಷೇತ್ರದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಈ ಬಾರಿ ಸಾಹಿತ್ಯ ಕ್ಷೇತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡಲು ಸಮಿತಿ ತೀರ್ಮಾನಿಸಿ, ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸುಮಾರು ಮೂರು ದಶಕಗಳ ಕಾಲ ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕರಾಗಿ, ಜಿಲ್ಲೆಯಲ್ಲಿ ಹಾಸ್ಯ ಭಾಷಣಗಳಿಗೆ ಹೆಸರಾಗಿದ್ದ ಪ್ರೊ. ಎಂ.ರಮೇಶ ಅವರು 2020ರಲ್ಲಿ ಕಾಲವಾದ ನಂತರ ಸಮಾನ ಆಸಕ್ತರ ಬಳಗ ರಚಿಸಿಕೊಂಡ ಸಮಿತಿಯಿಂದ ಪ್ರಶಸ್ತಿ ಸ್ಥಾಪಿಸಲಾಗಿದೆ. ಎಂ.ರಮೇಶ ಅವರ ನೆನಪಿನ ಪ್ರಶಸ್ತಿಯು ನಗದು ರೂ. 25,000/-, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ. ಈ ಪ್ರಶಸ್ತಿಯನ್ನು ದಿನಾಂಕ 31-12-2023ರಂದು ಸಂಜೆ 4ಕ್ಕೆ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧರಣೇಂದ್ರ ಕುರಕುರಿ…
ಕಾಸರಗೋಡು : ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನ ಮತ್ತು ಕಾಸರಗೋಡು ಭಾರತೀಯ ವಿದ್ಯಾನಿಕೇತನ ಇವುಗಳ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕಲೋತ್ಸವ ‘ಶಿವೋಹಂ-2023’ ಕಾರ್ಯಕ್ರಮವು ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ದಿನಾಂಕ 01-12-2023ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಸಿ.ಟಿ. ರಾಜಗೋಪಾಲನ್ ಇವರು ಉದ್ಘಾಟಿಸಿ ಮಾತನಾಡಿ “ಭಾರತೀಯ ವಿದ್ಯಾ ನಿಕೇತನದ ಸಂಸ್ಥೆ ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನವು ಭಾರತೀಯ ಸಂಸ್ಕೃತಿ ಆಚಾರ, ವಿಚಾರ, ಸಂಸ್ಕಾರ ನೀಡುವ ಜೊತೆಗೆ ಶಾಲೆ ಉತ್ತಮ ಸಾಧನೆ ಮಾಡುತ್ತಿದೆ” ಎಂದು ಹೇಳಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಜೀನ್ ಲವೀನಾ ಮೊಂತೆರೊ “ಕಲೆ ಇದ್ದಲ್ಲಿ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುವುದು. ಆದುದರಿಂದ ಮಕ್ಕಳಿಗೆ ಅವರ ಕಲೆಗೆ ಪ್ರೋತ್ಸಾಹ ನೀಡಿ” ಎಂದು ಹೇಳಿದರು. ಸುಭೋದ್ ಕೂಡ್ಲು ಮಾತನಾಡಿ, “ವಿದ್ಯಾರ್ಥಿಗಳು ಮೊಬೈಲ್ ವೀಕ್ಷಿಸುವುದು ಹೊರತುಪಡಿಸಿ, ಪಾಠದ ಕಡೆ ಗಮನ ಕೊಡಬೇಕು. ಶಿಸ್ತು ಸಮಯ ಪರಿಪಾಲನೆ ಮಾಡಬೇಕು ಎಂದು ಹೇಳಿದರು. ರಾಜೇಂದ್ರ ವಿ. ಶೆಟ್ಟಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುರೇಶ್ ಶೆಟ್ಟಿ ಪೊಕಟ್ಟೆ,…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇವರ ವತಿಯಿಂದ 2023-24ನೇ ಪಾಕ್ಷಿಕ ತಾಳಮದ್ದಳೆಯ ಕೂಟವು ಪಾರ್ತಿಸುಬ್ಬ ವಿರಚಿತ ‘ಶ್ರೀ ರಾಮ ವನಗಮನ’ ಎಂಬ ಆಖ್ಯಾನದೊಂದಿಗೆ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ, ಬೊಳುವಾರು ಇಲ್ಲಿ ದಿನಾಂಕ 16-12-2023ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪ್ರೊ. ದಂಬೆ ಈಶ್ವರ ಶಾಸ್ತ್ರೀ ಮತ್ತು ಮಾ. ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ದಶರಥ), ಅಂಬಾ ಪ್ರಸಾದ್ ಪಾತಾಳ (ಕೈಕೇಯಿ), ದುಗ್ಗಪ್ಪ ನಡುಗಲ್ಲು (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಮಂಥರೆ), ಶಾರದಾ ಅರಸ್ (ಲಕ್ಷ್ಮಣ) ಸಹಕರಿಸಿದರು. ಸಂಘದ ನಿರ್ದೇಶಕರಾದ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.
ಉಡುಪಿ : ಉಡುಪಿ ಸಾಲಿಗ್ರಾಮದ ಚಿತ್ರಪಾಡಿಯ ಶ್ರೀ ನಟರಾಜ ನೃತ್ಯನಿಕೇತನದ 30ನೇ ವಾರ್ಷಿಕೋತ್ಸವ ಹಾಗೂ ನೃತ್ಯ ಸೌರಭ ಕಾರ್ಯಕ್ರಮವು ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಸಹಕಾರದೊಂದಿಗೆ ದಿನಾಂಕ 23-12-2023ರಂದು ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ಶ್ರೀಮತಿ ಸುಶೀಲಾ ಸೋಮಶೇಖರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾಕೇಂದ್ರ, ಹಂಗಾರಕಟ್ಟೆ, ಐರೋಡಿಯ ಕಾರ್ಯದರ್ಶಿ ಶ್ರೀ ರಾಜಶೇಖರ ಹೆಬ್ಬಾರ್ ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದಾರೆ. ಮಹಿಳಾ ಮಂಡಲ ಕೋಟದ ಅಧ್ಯಕ್ಷರಾದ ಶ್ರೀಮತಿ ಗೀತಾ ಎ. ಕುಂದರ್ ಹಾಗೂ ಉಡುಪಿಯ ಸಾಫಲ್ಯ ಟ್ರಸ್ಟ್ (ರಿ) ಇದರ ಪ್ರವರ್ತಕರಾದ ಶ್ರೀಮತಿ ನಿರುಪಮಾ ಪ್ರಸಾದ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಗೀತ ಶಿಕ್ಷಕಿ ಹಾಗೂ ಚಿತ್ರಪಾಡಿ ಶಾಲಾ ಶಿಕ್ಷಕಿಯಾದ ಶ್ರೀಮತಿ ಮಾಲಿನಿ ರಮೇಶ್ ಹಾಗೂ ಸಂಗೀತ ಶಿಕ್ಷಕಿಯಾದ ಶ್ರೀಮತಿ ಗೀತಾ ತುಂಗ ಇವರಿಗೆ ಗೌರವ ಸನ್ಮಾನ, ಕುಮಾರಿಯರಾದ ಪಾವನಿ, ಆದ್ರಿಕ, ನಿಧಿಶ್ರೀ, ಧನ್ಯತಾ, ಎಮ್. ಕಾಂಚನ್ ಮತ್ತು ವೈಷ್ಣವಿ ಪ್ರಭು ಇವರಿಗೆ ಸಾಧಕ ಪ್ರಶಸ್ತಿ ಪುರಸ್ಕಾರ,…
‘ಕಾತ್ಯಾಯಿನಿ’ ಮಲ್ಲಿಕಾ ಮಳವಳ್ಳಿ ಅವರ ಕಾದಂಬರಿ. ಎಪ್ಪತ್ತೆಂಟರ ಇಳಿಹರೆಯದಲ್ಲಿ ಬರೆದ ಈ ಕಾದಂಬರಿ ಯಾವ ರಿಯಾಯಿತಿಯನ್ನೂ ಅಪೇಕ್ಷಿಸದಿರುವಷ್ಟು ಪ್ರಬುದ್ಧ ಕೃತಿ. ಸುಮಾರು ನೂರು ವರುಷಗಳ ಐದು ತಲೆಮಾರುಗಳ ಬದುಕು ಹಾಗೂ ಅಂದಿನಿಂದ ಇಂದಿನವರೆಗಿನ ದಿನಮಾನವನ್ನು ತುಂಬಾ ಆಪ್ಯಾಯಮಾನತೆಯಿಂದ ಚಿತ್ರಿಸಿದ್ದಾರೆ. ಉದ್ದುದ್ದದ ವಾಕ್ಯಗಳು ಮಾತ್ರ ಕಿರಿಕಿರಿ ಅನ್ನಿಸುವುದೇ ವಿನಃ ಓದಿಗಾವ ಭಂಗವನ್ನೂ ತರುವುದಿಲ್ಲ. ವಯೋ ಹಿರಿಯರಿಗೆ ತಮ್ಮ ಬಾಲ್ಯದ ದಿನಗಳು ನೆನಪಾದರೆ, ಕಿರಿಯರು ತಮ್ಮ ಹಿರಿಯರ ಬದುಕಿನ ಚಿತ್ರವನ್ನು ಮನಗಾಣುತ್ತಾರೆ. ಈ ಕೃತಿಯ ಸೂಕ್ಷ್ಮ ಪರಿಚಯವನ್ನು ಕಾದಂಬರಿಕಾರರ ನುಡಿಗಳಲ್ಲೇ ಮಾಡಿಕೊಡುವೆ: ಇಂದಿನ ಆಧುನಿಕತೆಗೆ ಮರುಳಾಗಿ ನಮ್ಮ ಯುವ ಪೀಳಿಗೆಯು ಹಳ್ಳಿಯ ಜೀವನವನ್ನು ತೊರೆದು, ಪಟ್ಟಣವಾಸಿಗಳಾಗಿ ಬದುಕುತ್ತಿದ್ದಾರೆ. ನಮ್ಮ ಪೂರ್ವಜರು ಹಳ್ಳಿಯನ್ನು ಬಿಟ್ಟು ಎಲ್ಲೂ ಹೋಗದೆ, ತಮ್ಮ ಕೃಷಿಯ ಬದುಕಿನಲ್ಲೆ ಬದುಕಿ ಬಾಳಿ ನೆಮ್ಮದಿಯನ್ನು ಕಾಣುತ್ತಿದ್ದರು. ಆದರೆ ಇಂದಿನ ದಿನಮಾನದಲ್ಲಿ ಗ್ರಾಮ ಜೀವನ, ಬೇಸಾಯ, ಹಳ್ಳಿಯ ಊಟ ತಿಂಡಿಗಳಿಗೆ ತಿಲಾಂಜಲಿ ಕೊಟ್ಟು, ಹೋಟೆಲ್ ಊಟ, ತಿಂಡಿ ತಿನಿಸುಗಳಿಗೆ ಮಾರುಹೋಗಿ ತಮ್ಮ ಬೆಡಗು ಬಿನ್ನಾಣಗಳಿಂದ ಜನರನ್ನು…