Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಬಾಲವನ ಪುತ್ತೂರು ಮತ್ತು ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಉಪವಿಭಾಗ ಆಶ್ರಯದಲ್ಲಿ ದಿನಾಂಕ 10-10-2023ರಂದು ಪುತ್ತೂರು ಬಾಲವನದಲ್ಲಿ ಹಿರಿಯ ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಜನ್ಮದಿನೋತ್ಸವ ನಡೆಯಲಿದೆ. ಈ ಸಂದರ್ಭ ನೀಡಲಾಗುವ ಕೋಟ ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಖ್ಯಾತ ವರ್ಣ ಚಿತ್ರಕಲಾವಿದ ಬೆಂಗಳೂರಿನ ಕೆ.ಚಂದ್ರನಾಥ ಆಚಾರ್ಯ ಆಯ್ಕೆಯಾಗಿದ್ದಾರೆ. ಪುತ್ತೂರು ಶಾಸಕ ಅಶೋಕ್ ರೈ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಸಾಹಿತಿ ಡಾ.ವರದರಾಜ ಚಂದ್ರಗಿರಿ, ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಹಾಗೂ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಕಾರ್ಯನಿರ್ವಹಿಸಿದ್ದಾರೆ. ಸುಳ್ಯದ ಲಿಬರಲ್ ಅಕಾಡೆಮಿ ಆಫ್ ಎಜುಕೇಶನ್ ಸ್ಥಾಪಕಾಧ್ಯಕ್ಷರಾಗಿದ್ದ ದಿ.ಕುರುಂಜಿ ವೆಂಕಟರಮಣ ಗೌಡ ಅವರ ಹೆಸರಿನಲ್ಲಿ ಸ್ಥಾಪನೆಯಾದ ಶಾಶ್ವತ ನಿಧಿಯಲ್ಲಿ ಪ್ರತೀ ವರ್ಷ ಕಾರಂತ ಬಾಲವನ ಪ್ರಶಸ್ತಿ ನೀಡಲಾಗುತ್ತಿದೆ. ಕೆ.ಚಂದ್ರನಾಥ ಆಚಾರ್ಯ : ಶಿವರಾಮ ಕಾರಂತರಂತಹ ವ್ಯಕ್ತಿತ್ವಗಳಿಂದ ಅಪಾರವಾಗಿ ಪ್ರಭಾವಿತರಾದ ಚಂದ್ರನಾಥ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನ, ಭಾರತೀ ನಗರ, ಬನ್ನೂರು ಇಲ್ಲಿ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ‘ಮಾಯಾಮೃಗ’ ಎಂಬ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 26-09-2023ರಂದು ನಡೆಯಿತು. ಮುಮ್ಮೇಳದಲ್ಲಿ ಶ್ರೀ ಪಕಳಕುಂಜ ಶ್ಯಾಮ್ ಭಟ್ (ರಾವಣ), ಶ್ರೀ ಗುಡ್ಡಪ್ಪ ಬಲ್ಯ (ಸನ್ಯಾಸಿ ರಾವಣ), ಶ್ರೀ ಭಾಸ್ಕರ ಬಾರ್ಯ (ಶ್ರೀ ರಾಮ), ಶ್ರೀ ದುಗ್ಗಪ್ಪ ನಡುಗಲ್ಲು (ಸೀತೆ), ಶ್ರೀ ಮಾಂಬಾಡಿ ವೇಣುಗೋಪಾಲ್ ಭಟ್ (ಲಕ್ಷ್ಮಣ) ಮತ್ತು ಶ್ರೀ ಬಡೆಕ್ಕಿಲ ಚಂದ್ರಶೇಖರ ಭಟ್ (ಮಾರೀಚ) ಪಾತ್ರಗಳಲ್ಲಿ ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ ಮತ್ತು ಶ್ರೀ ಆನಂದ್ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪ್ರೊ.ಶ್ರೀ ದಂಬೆ ಈಶ್ವರ ಶಾಸ್ತ್ರೀ, ಶ್ರೀ ಅಚ್ಯುತ ಪಾಂಗಣ್ಣಾಯ ಮತ್ತು ಮಾಸ್ಟರ್ ಪರೀಕ್ಷಿತ್ ಸಹಕರಿಸಿದರು. ಶ್ರೀ ದೇವಳದ ಸಂಚಾಲಕರು ಹಾಗೂ ಸದಸ್ಯರು ಸಹಕಾರದೊಂದಿಗೆ ಇಂಜಿನಿಯರ್ ಶಂಕರ್ ಭಟ್ ಪ್ರಾಯೋಜಿಸಿದರು.
ಮುಂಬಯಿ : ಮಂಗಳೂರಿನ ಮಧುರತರಂಗ ಸಂಸ್ಥಾಪಕ ಸ್ವರ ತಪಸ್ವಿ ‘ಕರ್ನಾಟಕ ಸ್ವರ ಕಂಠೀರವ’ ಜೂ.ರಾಜ್ ಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಇವರ ಸ್ವರ ಗಾಯನ ಲೋಕದ 50ರ ಸುವರ್ಣ ಸಂಭ್ರಮ ಆಚರಣೆಯು ದಿನಾಂಕ 24-09-2023ರ ಭಾನುವಾರ ಮುಂಬಯಿಯ ಸಾಂತಾಕ್ರೂಸ್ (ಪೂ.)ನಲ್ಲಿರುವ ಬಿಲ್ಲವ ಭವನದಲ್ಲಿ ನಡೆಯಿತು. ‘ಸ್ವರ ಕಂಠೀರವ’ ಡಾ.ರಾಜ್ ಸವಿನೆನಪು, ಡಾ.ರಾಜ್ ಕುಮಾರ್ ಅವರ ನೆನಪಿನ ಮಧುರ ಗೀತೆಗಳು ಮತ್ತು ನೃತ್ಯ ವೈಭವಗಳ ವಿಭಿನ್ನ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮವನ್ನು ಸವಿತಾ ಅಶೋಕ್ ಪುರೋಹಿತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನವಿಮುಂಬಯಿಯ ಪನ್ವೇಲ್ ನಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಅಧ್ಯಕ್ಷ ಸಿ.ಎ. ಶ್ರೀಧರ್ ಆಚಾರ್ಯ ವಹಿಸಿಕೊಂಡಿದ್ದರು. ಶ್ರೀಯುತರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ “ಸಂಗೀತ ಕ್ಷೇತ್ರದಲ್ಲಿ ಅದ್ಭುತ ಸೇವೆಯನ್ನು ಮಾಡುತ್ತಾ ತನ್ನ ಕಂಠ ಸ್ವರದ ಮೂಲಕ ಡಾ.ರಾಜಕುಮಾರ್ ಅವರನ್ನು ಸದಾ ಸ್ಮರಿಸಿ, ನೆನಪಿಸಿಕೊಂಡು ಬಂದಿರುವ ಜಗದೀಶ್ ಶಿವಪುರ ಶ್ರೀ ಕಾಳಿಕಾಂಬಾ ದೇವಸ್ಥಾನದ ಭಕ್ತಿಗೀತೆಯನ್ನೂ ಹಾಡಿ ಭಕ್ತ ಜನರನ್ನು ಮುದಗೊಳಿಸಿದ್ದಾರೆ. ಮುಂಬಯಿ ನಗರದಲ್ಲಿ…
ಮಂಗಳೂರು : ಪುರಭವನದಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ 16ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 23-09-2023ರಂದು ಜರಗಿತು. ಇದರ ಅಧ್ಯಕ್ಷತೆ ವಹಿಸಿದ ಪ್ಲಾನ್ ಟೆಕ್ ಮತ್ತು ದೈಜಿ ವರ್ಲ್ಡ್ ಮೀಡಿಯಾ ನಿರ್ದೇಶಕರು ಲಾರೆನ್ಸ್ ಡಿಸೋಜ ಇವರ ಮಾತನಾಡುತ್ತಾ “ಸಾಂಸ್ಕೃತಿಕವಾಗಿ ಅಸ್ತಿತ್ವಕ್ಕೆ ಬಂದ ಯಾವುದೇ ಕಲಾ ಸಂಸ್ಥೆಗಳು ತಮ್ಮ ಪ್ರದರ್ಶಿತ ಚಟುವಟಿಕೆಗಳೊಂದಿಗೆ ಸಾಮಾಜಿಕವಾಗಿ ಸ್ಪಂದಿಸುವ ಕಾರ್ಯವಸೆಗಬೇಕು” ಎಂದು ಅಭಿಪ್ರಾಯಪಟ್ಟರು. ಹಿರಿಯ ಕಿರಿಯ ಸಂಗೀತ ಪ್ರತಿಭಾವಂತ ಕಲಾವಿದರ ಈ ಒಕ್ಕೂಟವು ಈ ನಿಟ್ಟಿನಲ್ಲಿ ನಿರಂತರವಾಗಿ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಾರದರ್ಶಕವಾಗಿ ಕಲಾಭಿಮಾನಿಗಳ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಮುಂಬೈಯ ವಚನಾ ಹಾಸ್ಪಿಟಾಲಿಟಿ ಸರ್ವೀಸಸ್ ಇದರ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಕುಕ್ಕುಂದೂರು, ಎಸ್.ಎಲ್. ಡೈಮಂಡ್ ಹೌಸ್ ಮಾಲಕ ಶ್ರೀ ಎಂ. ರವೀಂದ್ರ ಶೇಟ್ ಭಾಗವಹಿಸಿ ಶುಭ ಕೋರಿದರು. ಸಂಗೀತ ಕ್ಷೇತ್ರದ ಕಲಾ ಸಾಧಕ ಹಿರಿಯರಾದ ಸಂಗೀತ ಶಿಕ್ಷಕ ಗಾಯಕ ಕೆ. ರವಿಶಂಕರ್ ಸುರತ್ಕಲ್,…
ಬೆಂಗಳೂರು : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಧಾರವಾಡ ಹಾಗೂ ಕ್ಷಮತಾ ಹುಬ್ಬಳ್ಳಿ ಪ್ರಸ್ತುತಪಡಿಸುವ ‘ವಸುಂಧರಾ’ ಮಹಿಳಾ ವಿದ್ವನ್ಮಣಿಗಳ ದಿನಪೂರ್ತಿ ಸಂಗೀತ ಸಮ್ಮೇಳನವು ದಿನಾಂಕ 02-10-2023ರಂದು ಬೆಂಗಳೂರಿನ ಜಯನಗರದ ಯುವಪಥ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ರೋಟರಿ ಕ್ಲಬ್ ಸಖಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಅನಾಮಿಕ ಸಂಸ್ಥೆ, ಕಾಮತ್ ಮತ್ತು ಕಾಮತ್ ಸಹೋದರರು, ಪುಣೆಯ ನಾನಾಸಾಹೇಬ ಅಳವಣಿ ಟ್ರಸ್ಟ್ ಹಾಗೂ ಬಾಗಲಕೋಟೆಯ ನಟರಾಜ ಸಂಗೀತ ವಿದ್ಯಾಲಯ ಮತ್ತು ಕಲಾಸಂಘಗಳ ಸಹಪ್ರಾಯೋಜಕತ್ವದಲ್ಲಿ ವನಿತೆಯರ ಸಂಗೀತ ಸಮ್ಮೇಳನ ದಿನಪೂರ್ತಿ ನಡೆಯಲಿದೆ. ಇದರಲ್ಲಿ ಸಹಕಲಾವಿದರಾದಿಯಾಗಿ ಭಾಗವಹಿಸುವ ಎಲ್ಲರೂ ಮಹಿಳೆಯರೇ ಇರುವುದು ವಿಶೇಷವಾಗಿದೆ. ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತಗಳ ನಾದಲಹರಿ ಈ ಸಮ್ಮೇಳನದಲ್ಲಿ ಮೊಳಗಲಿದೆ. ಬೆಂಗಳೂರಿನ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಅವರ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ಶ್ರೀದೇವಿ ಹಾಗೂ ಡಾ. ಗಂಗಾ ಕಾಮತ್ ಅವರಿಂದ ದ್ವಂದ್ವ ವೀಣಾವಾದನ ಮೂಡಿಬರಲಿದೆ. ಫ್ಲ್ಯೂಟ್…
ಉಡುಪಿ : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ವತಿಯಿಂದ ಶ್ರೀ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ‘ನವಶಕ್ತಿ ವೈಭವ’ – ವೇಷ ಭೂಷಣ ಮತ್ತು ನೃತ್ಯ ರೂಪಕ ಸ್ಪರ್ಧೆಯು ದಿನಾಂಕ 15-10-2023ನೇ ಭಾನುವಾರ ಬೆಳಿಗ್ಗೆ ಘಂಟೆ 09.09ಕ್ಕೆ ದೇವಳದ ನವದುರ್ಗಾ ಮಂಟಪದಲ್ಲಿ ಉದ್ಘಾಟನೆಗೊಳ್ಳಲಿದೆ. ಸ್ಪರ್ಧೆಯ ನಿಯಮಾವಳಿಗಳು – * ಭಾಗವಹಿಸುವ ತಂಡದಲ್ಲಿ 9 ಮಂದಿ ಸ್ಪರ್ಧಾಳುಗಳು ಕಡ್ಡಾಯವಾಗಿ ಪಾಲ್ಗೊಳ್ಳುವುದು. * ನವರಾತ್ರಿ ವೈಭವ ಸಾರುವ ನವ ದುರ್ಗೆಯರ ಪಾತ್ರಗಳಿಗೆ ಮಾತ್ರ ಅವಕಾಶ. * ತಮಗೆ ಬೇಕಾದ ವೇಷ-ಭೂಷಣ, ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು. * ಬೆಂಕಿ ಅಥವಾ ಇನ್ಯಾವುದೇ ಅಪಾಯಕಾರಿ ಪರಿಕರಗಳಿಗೆ ಅವಕಾಶ ಇರುವದಿಲ್ಲ. * ಭಾಗವಹಿಸುವ ತಂಡಗಳು ತಮ್ಮ ತಂಡದ 9 ಜನರ ಹೆಸರನ್ನು ಮುಂಗಡವಾಗಿ ನೋಂದಾಯಿಸಿಕೊಳ್ಳತಕ್ಕದ್ದು. * ನವದುರ್ಗಾ ವೈಭವವನ್ನು ಸಾರುವ ವೇಷ-ಭೂಷಣ, ನೃತ್ಯ-ರೂಪಕ ಮತ್ತು ಯಕ್ಷಗಾನ ವೇಷಗಳಿಗೆ ಮಾತ್ರ ಅವಕಾಶ ನೀಡಲಾಗುವುದು. * ಯಾವುದೇ ಧಾರ್ಮಿಕ ಭಾವನೆ, ವಿಚಾರ ಮತ್ತು ನಂಬಿಕೆಗಳಿಗೆ ಅಪಹಾಸ್ಯ ಮಾಡುವಂತಹ ಚಟುವಟಿಕೆಗಳಿಗೆ…
ಬೆಂಗಳೂರು : ಪಾವಂಜೆ ಮೇಳ, ಜಲವಳ್ಳಿ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಾಗೇಂದ್ರ ಜೋಯ್ಸ್ ಅವರ ಸಾರಥ್ಯದಲ್ಲಿ ದಿನಾಂಕ 06-10-2023ರ ಶುಕ್ರವಾರ ರಾತ್ರಿ 9.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಮಾನಸ’ ಯಕ್ಷಗಾನ ಪ್ರದರ್ಶನವು ನಡೆಯಲಿದೆ. ಶ್ರೀ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಪಾವಂಜೆ ಮೇಳದ ಮೊದಲನೇ ಪ್ರಸಂಗ ‘ವಿದ್ಯುನ್ಮತಿ ಕಲ್ಯಾಣ’, ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಸಾರಥ್ಯದಲ್ಲಿ, ಶ್ರೀ ಶಂಕರ್ ಭಟ್ ಬ್ರಹ್ಮೂರ್ ಅವರ ದ್ವಂದ್ವ ಭಾಗವತಿಕೆಯಲ್ಲಿ ‘ಜಲವಳ್ಳಿ ಮೇಳ’ದ ಮೊದಲನೇ ಹಾಗೂ ಆ ದಿನದ 2ನೇ ಪ್ರಸಂಗ ‘ರಾಜ ಯಯಾತಿ’ ಹಾಗೂ ಶ್ರೀ ಚಂದ್ರಕಾಂತ ರಾವ್ ಮೂಡುಬೆಳ್ಳೆ ಅವರ ಸಾರಥ್ಯದಲ್ಲಿ ‘ಜಲವಳ್ಳಿ ಮೇಳ’ದ ಎರಡನೇ ಹಾಗೂ ಆ ದಿನದ 3ನೇ ಪ್ರಸಂಗ ‘ಶ್ವೇತ ಕುಮಾರ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಹಾನಗರದಲ್ಲಿ ನೆಲೆಸಿರುವ ಕರಾವಳಿಯ ಯಕ್ಷಾಭಿಮಾನಿ ಪರಿವಾರಕ್ಕೆ ಒಂದು ಮನವಿ…ಕೂಡು ಕುಟುಂಬ ಕೂಡಿಕೊಂಡು ಕಲಾಕ್ಷೇತ್ರಕ್ಕೆ ಬನ್ನಿ…!!!
ಮೈಸೂರು : ಮೈಸೂರಿನ ‘ಕಲಾ ಸುರುಚಿ’ ಪ್ರಸ್ತುತಪಡಿಸುವ ‘ನೆರಳು’ ನಾಟಕದ ಪ್ರಥಮ ಪ್ರದರ್ಶನ ದಿನಾಂಕ 01-10-2023 ರಂದು ಸಂಜೆ ಘಂಟೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗ ಮಂದಿರದಲ್ಲಿ ನಡೆಯಲಿದೆ. ಖ್ಯಾತ ಕವಿ ರಾಮಚಂದ್ರ ಶರ್ಮಾ ವಿರಚಿತ ಈ ನಾಟಕವನ್ನು ಧನಂಜಯ.ಎನ್ ನಿರ್ದೇಶಿಸಿದ್ದಾರೆ. ತೇಜಸ್ವಿನಿ ಎ.ಆರ್ ಸಂಗೀತ ಸಂಯೋಜನೆಯ ಈ ನಾಟಕದಲ್ಲಿ ಗಾಯಕರಾಗಿ ತೇಜಸ್ವಿನಿ ಎ.ಆರ್, ಸುರಭಿ ಎ ಮತ್ತು ಲಿಖಿತಾ ಎಸ್.ಗೌಡ ಸಹಕರಿಸಲಿದ್ದಾರೆ. ಸಂಗೀತ ನಿರ್ವಹಣೆ ಮತ್ತು ರಂಗಸಜ್ಜಿಕೆಯನ್ನು ನರಸಿಂಹ ಕುಮಾರ್ ಕೆ. ನಿರ್ವಹಿಸಲಿದ್ದು, ಪ್ರಸಾಧನದಲ್ಲಿ ಸುರಭಿ.ಎ ಸಹಕರಿಸಲಿದ್ದಾರೆ. ನಾಟಕದ ಬೆಳಕು ಮತ್ತು ಮೇಲ್ವಿಚಾರಣೆ ರಮೇಶ್ ಬಾಬು ಗುಬ್ಬಿ ಅವರದ್ದು. ರಂಗದ ಮೇಲೆ ಲಲಿತಾಳ ಪಾತ್ರದಲ್ಲಿ ಲಿಖಿತಾ ಎಸ್.ಗೌಡ, ಭಾಗ್ಯಮ್ಮನಾಗಿ ಎಂ.ವಿಜಯಲಕ್ಷ್ಮಿ, ಕಮಲಳಾಗಿ ರಕ್ಷಿತಾ ರಾವ್ ಆರ್, ಲಲಿತಾಳ ಧ್ವನಿಯಾಗಿ ಸುರಭಿ ಬಿ, ಶ್ರೀನಿವಾಸನಾಗಿ ವಿನೋದ್ ಕುಮಾರ್ ಎ.ವಿ ಹಾಗೂ ರಾಮಚಂದ್ರನಾಗಿ ವರ್ಚಸ್ ಬಿ.ವಿ ಅಭಿನಯಿಸಲಿದ್ದಾರೆ. ನಾಟಕದ ಸಾರಾಂಶ: ಮನುಷ್ಯ ಅನುಮಾನವೆಂಬ ರೋಗಕ್ಕೆ ಬಲಿಯಾದರೆ ಬದುಕು ಹೇಗೆ ನರಕವಾಗುತ್ತದೆ…
ಮೈಸೂರು : ರಂಗವಲ್ಲಿ ಪ್ರಸ್ತುತ ಪಡಿಸುವ ಪ್ರಶಾಂತ್ ಹಿರೇಮಠ್ ಪರಿಕಲ್ಪನೆ ಮತ್ತು ನಿರ್ದೇಶನದ ಶ್ರೀನಿವಾಸ ವೈದ್ಯರ ಬರಹಗಳನ್ನಾಧರಿಸಿದ ನಾಟಕ ‘ಪಾರ್ಶ್ವಸಂಗೀತ’ವು ದಿನಾಂಕ 30-09-2023, 01-10-2023, 07-10-2023 ಮತ್ತು 08-10-2023ರಂದು ಸಂಜೆ ಗಂಟೆ 6.30ಕ್ಕೆ ಮೈಸೂರಿನ ಕಿರುರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಪಾರ್ಶ್ವಸಂಗೀತ ನಾಟಕವು 1940ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ಅವಿನಾಭಾವ ಸಂಬಂಧವನ್ನು ತೆರೆದಿಡುತ್ತದೆ. ಸಿನಿಮಾ ಎನ್ನುವುದು ಸಭ್ಯರಿಗಲ್ಲ ಎನ್ನುವ ಕರ್ಮಠ ಕುಟುಂಬದಲ್ಲಿ ಸಿನಿಮಾ ಹಾಡುಗಳ ಗೀಳು ಹಚ್ಚಿಸಿಕೊಂಡು, ಸಿನಿಮಾ ಗೀತೆಗಳಿಗಾಗಿ ಮನೆಯವರೊಡನೆ ಜಗಳ ಕಾಯುವ ತನ್ನ ಚಿಕ್ಕಪ್ಪ; ಶಾಮ ಚಿಕ್ಕಪ್ಪನ ಕತೆ ಹೇಳುವ ಹಿರಿಯ ಜೀವದ ನೆನಪುಗಳ ಸರಮಾಲೆ ಈ ‘ಪಾರ್ಶ್ವಸಂಗೀತ’ ನಾಟಕ.
ಬೆಂಗಳೂರು : ಆಡಳಿತ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಆಡಳಿತ ಸೇವಾ ಸಂಘ ಕರ್ನಾಟಕ, ಲಡಾಯಿ ಪ್ರಕಾಶನ ಗದಗ ಹಾಗೂ ಗೌರಿ ಮೀಡಿಯಾ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ವಿ.ಬಾಲಸುಬ್ರಮಣಿಯನ್ ಅವರ ‘ಫಾಲ್ ಫ್ರಮ್ ಗ್ರೇಸ್’ ಪುಸ್ತಕದ ಕನ್ನಡ ಅನುವಾದ ‘ಕಲ್ಯಾಣ ಕೆಡುವ ಹಾದಿ’ ರೆಬೆಲ್ ಐಎಎಸ್ ಅಧಿಕಾರಿಯ ಆತ್ಮಕಥನ ಪುಸ್ತಕದ ಬಿಡುಗಡೆ ಸಮಾರಂಭವು ದಿನಾಂಕ 02-10-2023ರ ಸೋಮವಾರ ಬೆಳಗ್ಗೆ ಘಂಟೆ 10.00ಕ್ಕೆ ನಡೆಯಲಿದೆ. ಬೆಂಗಳೂರಿನ ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ಭಾರತೀಯ ಆಡಳಿತ ಸೇವಾ ಸಂಸ್ಥೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಾಧೀಶರಾದ ನ್ಯಾ.ವಿ.ಗೋಪಾಲ ಗೌಡ ಅಧ್ಯಕ್ಷತೆ ವಹಿಸಿ ಕೃತಿ ಜಡುಗಡೆಗೊಳಿಸಲಿದ್ದಾರೆ. ಎ.ಬಾಲಸುಬ್ರಮಣಿಯನ್ ಪ್ರಸ್ತಾವಿಕ ಮಾತುಗಳನ್ನಾಡಿ, ಪುಸ್ತಕ ಕುರಿತು ಜೆ.ಎನ್.ಯು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಪ್ರೊ.ವೆಲೇರಿಯನ್ ರೋಡ್ರಿಗಸ್, ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯದ ಪ್ರೊ.ಎ.ನಾರಾಯಣ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ರಹಮತ್ ತರೀಕೆರೆ ಹಾಗೂ ರೇಷ್ಮೆ ಕೃಷಿಕರಾದ ರಾಮಚಂದ್ರ ಗೌಡ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ವೇದಿಕೆಯಲ್ಲಿ ಅನುವಾದಕಿ ಎನ್.ಸಂಧ್ಯಾರಾಣಿ, ಪ್ರಕಾಶಕರಾದ ಬಸೂ…