Author: roovari

ಬೆಂಗಳೂರು : ವೀರಲೋಕ ಪ್ರತಿಷ್ಠಾನವು ಅತ್ಯಂತ ವಿನೂತನವಾದ ‘ಕಥಾ ಸಂಕ್ರಾಂತಿ -2024’ ಶೀರ್ಷಿಕೆಯಡಿ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಕನ್ನಡ ಕಥೆಗಾರರ ಪಾಲಿಗೆ ಇದೊಂದು ಅತ್ಯಪೂರ್ವ ಅವಕಾಶ. ಈ ಕಥಾ ಸ್ಪರ್ಧೆಯ ಸಂಪಾದಕತ್ವವನ್ನು ಹಿರಿಯ ಕಥೆಗಾರರಾದ ಶ್ರೀ ಕೇಶವ ಮಳಗಿ ಅವರು ವಹಿಸಿಕೊಂಡಿದ್ದಾರೆ. ಮೊದಲ ಬಹುಮಾನಕ್ಕೆ ಆಯ್ಕೆಯಾಗುವ ಕಥೆಗೆ ರೂ.55,000/-, ಎರಡನೆಯ ಬಹುಮಾನ ರೂ.30,000/-, ಮೂರನೆಯ ಬಹುಮಾನ ರೂ.20,000/- ಹಾಗೂ ತೀರ್ಪುಗಾರರ ಮೆಚ್ಚುಗೆ ಗಳಿಸುವ ಏಳು ಕಥೆಗಳಿಗೆ ತಲಾ 3 ಸಾವಿರ ರೂ. ಬಹುಮಾನ ನೀಡಲಾಗುವುದೆಂದು ವೀರಲೋಕ ಪ್ರತಿಷ್ಠಾನದ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್‌ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 2023ರವರೆಗೆ ತಮ್ಮ ಯಾವುದೇ ‘ಕಥಾ ಸಂಕಲನ’ವನ್ನು ಪ್ರಕಟಿಸಿರಬಾರದು. ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ ಈವರೆಗೆ ನಿಮ್ಮ ಒಂದೂ ಕಥಾಸಂಕಲನ ಪ್ರಕಟವಾಗಿರಬಾರದು. ಬೇರೆ ಪ್ರಕಾರದ ಪುಸ್ತಕಗಳ ಪ್ರಕಟಣೆಗೆ ಈ ನಿಯಮ ಅನ್ವಯಿಸುವುದಿಲ್ಲ. ಕಥೆಗಳನ್ನು ಸೆಪ್ಟೆಂಬರ್ 5ರೊಳಗೆ ಕಳುಹಿಸಬೇಕು. ಕಥೆಗಳನ್ನು ಕಳುಹಿಸಬೇಕಾದ ಇ ಮೇಲ್ : [email protected] ಮಾಹಿತಿಗೆ ಮೊಬೈಲ್ : 70221 22121.

Read More

ಕೊಡಿಯಾಲಬೈಲ್ : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಮಂಗಳೂರು ಇದರ 10ನೇ ವಾರ್ಷಿಕೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಹಿಳೆಯರಿಗೆ ಜಿಲ್ಲಾ ಮಟ್ಟದ ಸಾಮೂಹಿಕ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಗಸ್ಟ್ 13ರಂದು ಬೆಳಗ್ಗೆ 9ರಿಂದ ಕೊಡಿಯಾಲ್‌ ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಸಮಯಾವಕಾಶ 3ರಿಂದ 5 ನಿಮಿಷ. ಕನ್ನಡ ಗೀತೆಗಳನ್ನು ಹಾಡಬೇಕು ಹಾಗೂ ತಂಡದಲ್ಲಿ 5ರಿಂದ 6 ಮಂದಿಗೆ ಮಾತ್ರ ಅವಕಾಶವಿದೆ. 25 ವರ್ಷ ಮೇಲ್ಪಟ್ಟವರು ಮಾತ್ರ ಭಾಗವಹಿಸಬಹುದು. ಆಧಾರ್ ಪ್ರತಿ ಕಡ್ಡಾಯವಾಗಿದೆ. ಆಗಸ್ಟ್ 8ರ ಸಂಜೆ 6 ಗಂಟೆಯ ಒಳಗೆ ನೋಂದಣಿ ಮಾಡಬೇಕು. ಮೊದಲು ಬಂದ 20 ತಂಡಗಳಿಗೆ ಮಾತ್ರ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 8123578912 ಸಂಪರ್ಕಿಸಬಹುದು.

Read More

ಮಂಗಳಾದೇವಿ : ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನವು ಶ್ರೀಶಾ ಸೌಹಾರ್ದ ಕೋ-ಆಪರೇಟಿವ್‌ ಸೊಸೈಟಿ, ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ದಿನಾಂಕ 29-07-2023ರಂದು ಖ್ಯಾತ ಗಾಯಕ ವಿನಾಯಕ ಹೆಗ್ಡೆ ಅವರಿಂದ ಹರಿದಾಸರ ಕೃತಿ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಾಜಿ ಮಹಾರಾಜ್ ಉದ್ಘಾಟಿಸಿ ಮಾತನಾಡಿ, “ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ನಿಯಮಿತವಾಗಿ ತಿಂಗಳಿಗೊಂದರಂತೆ ನಾಡಿನ ಖ್ಯಾತ ಗಾಯಕರನ್ನು ಕರೆಸಿ ನಮ್ಮ ಆಶ್ರಮದ ಸಭಾಂಗಣದಲ್ಲಿ ಹರಿದಾಸರ ಕೃತಿಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಮಠದ ಭಕ್ತರಿಗೂ, ನಮಗೂ ಕೀರ್ತನೆಗಳನ್ನು ಆಲಿಸುವ ಅವಕಾಶ ಸಿಗುತ್ತಿದೆ. ಮುಂದೆಯೂ ಈ ಬಗೆಯ, ಕಾರ್ಯಕ್ರಮಗಳು ಮುಂದುವರೆಯಲಿ” ಎಂದರು. ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಹಾಗೂ ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್‌. ಗುರುರಾಜ್ ಸ್ವಾಗತಿಸಿ, ಪ್ರಸ್ತಾಪಿಸಿ, “ದಾಸ ಸಾಹಿತ್ಯವು ನಮ್ಮಲ್ಲಿ ಸನ್ನಡತೆ, ಸಚ್ಚಾರಿತ್ರ್ಯಗಳನ್ನು ಮೂಡಿಸುವ ಅಪೂರ್ವ, ಅತ್ಯಮೂಲ್ಯ ಸಾಹಿತ್ಯ. ಇದನ್ನು ಆಸಕ್ತರಿಗೆ ತಲುಪಿಸುವ ಸತ್ಕಾರ್ಯ ನಡೆಯುತ್ತಿದೆ.” ಎಂದರು. ಈ ಕಾರ್ಯಕ್ರಮದಲ್ಲಿ ವಿದ್ಯಾ ರಾವ್ ನಿರೂಪಿಸಿ,…

Read More

ಬೆಂಗಳೂರು :  ವಿಮೂವ್ ಥಿಯೇಟರ್ ಅರ್ಪಿಸುವ  ಅಭಿಶೇಕ್ ಅಯ್ಯಂಗಾರ್ ರಚಿಸಿ, ನಿರ್ದೇಶಿಸಿದ ‘ಬೈ2 ಕಾಫಿ’ ಕನ್ನಡ ನಾಟಕವು ದಿನಾಂಕ 03-08-2023 ರಂದು ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ‘ಬೈ2 ಕಾಫಿ’  ನಾಟಕವು ಮಧ್ಯಮ ವರ್ಗದ ಕುಟುಂಬದಲ್ಲಿ ನೆಲೆಸಿರುವ ತಾಯಿ ಮತ್ತು ಮಗನ ನಡುವಿನ ಸಂಘರ್ಷದ ಭಾವನೆಗಳ ಬಗ್ಗೆ. ಒಬ್ಬ ಧರ್ಮನಿಷ್ಠ ತಾಯಿಯು ತನ್ನ ಮಗನ ಸಂತೋಷದ ಬಗ್ಗೆ ನಿರಂತರವಾಗಿ ಚಿಂತಿಸುತ್ತಾಳೆ ಮತ್ತು ಈಗ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿರುವ ಮಗನ ತ್ವರಿತ ವಿವಾಹಕ್ಕಾಗಿ ಬಯಸುತ್ತಾಳೆ  ಮಗ ಬೆಂಗಳೂರು ನಗರಕ್ಕೆ ವಾರ್ಷಿಕ ವಾಡಿಕೆಯಂತೆ ಭೇಟಿ ನೀಡುತ್ತಿದ್ದಾನೆ ಮತ್ತು ತನ್ನ ತಾಯಿಯ ಧಾರ್ಮಿಕ ತತ್ವಗಳಿಗೆ ಎಳೆಯಲ್ಪಡುತ್ತಾನೆ. ಅವರಿಬ್ಬರೂ ಪೂಜೆಗಾಗಿ ದೇವಸ್ಥಾನಕ್ಕೆ ರಾತ್ರಿ ಹೊರಡುತ್ತಾರೆ. ಆಗ ಅವರ ಕಾರು ನಡುರಸ್ತೆಯಲ್ಲಿ ಕೆಟ್ಟು ನಿಲ್ಲುತ್ತದೆ. ಬೆರೇನು ಮಾಡಲು ಸಾಧ್ಯವಾಗದೆ ಅವರಿಬ್ಬರೂ ಸ್ಥಳೀಯ ಹೋಟೆಲ್‌ನಲ್ಲಿ ಬೈ 2 ಕಾಫಿಗಾಗಿ ಕೂರುತ್ತಾರೆ. ಮಗ, ತಾಯಿ, ಬೈ2 ಕಾಫಿ, ಹೋಟಲ್ ನ ಬೆಂಚು, ಅರ್ಧರಾತ್ರೆ, ಇವುಗಳ ಮಧ್ಯೆ ಅವರಿಬ್ಬರ ಸಂಬಂಧಗಳು, ನಂಬಿಕೆಗಳು, ಪದ್ಧತಿಗಳು ಮತ್ತು…

Read More

ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಕಾಸರಗೋಡಿನ ಕಛೇರಿಯಲ್ಲಿ ಸುಗಮ-ಭಕ್ತಿ-ಭಾವ-ಜನಪದ ಗೀತೆಗಳ ರಾಗ ಸಂಯೋಜನೆ, ಪ್ರಚಾರ, ಕವಿಗಳ ಮತ್ತು ಗಾಯಕರ ಪ್ರೋತ್ಸಾಹಕ್ಕಾಗಿ ಪ್ರತ್ಯೇಕ ಘಟಕ ರೂಪೀಕರಿಸುವುದರ ಪೂರ್ವಭಾವಿ ಸಭೆಯು ದಿನಾಂಕ 27-07-2023ರಂದು ನಡೆಯಿತು. ಈ ಸಭೆಯನ್ನು ಉದ್ಘಾಟಿಸಿದ ಹಿರಿಯ ಸಾಹಿತಿ, ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರು ಮಾತನಾಡುತ್ತಾ “ಕಾಸರಗೋಡಿನಲ್ಲಿ ಸಮರ್ಥ ಕವಿಗಳು ಅನೇಕರಿದ್ದರೂ ಅಖಿಲ ಕರ್ನಾಟಕ ಮಟ್ಟದಲ್ಲಿ ಅವರನ್ನು ಗುರುತಿಸುವ, ಅವರ ಕೃತಿಗಳನ್ನು ಜನರಿಗೆ ತಲುಪಿಸುವ ಕೆಲಸ ಆಗುತ್ತಿಲ್ಲ. ಕಾಸರಗೋಡಿನ ಕನ್ನಡಿಗರ ಸಾಹಿತ್ಯವನ್ನು ಅನಾವರಣಗೊಳಿಸುವುದರ ಜತೆಗೆ ರಾಗ ಸಂಯೋಜಿಸಿ ಹಾಡಲು ಇದೇ ಮೊದಲ ಬಾರಿಗೆ ಸಮಿತಿಯ ರೂಪೀಕರಣ ಆಗುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂಬುದಾಗಿ ಅವರು ಸಂತಸವನ್ನು ವ್ಯಕ್ತ ಪಡಿಸಿದರು. ರಂಗ ಚಿನ್ನಾರಿಯ ನಿರ್ದೇಶಕ, ಸಿನಿಮಾ ನಟ, ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ “ಗಾಯಕರಿಗೆ ಮತ್ತು ಹಿನ್ನೆಲೆ ಸಂಗೀತಕ್ಕೆ ಪ್ರಾಮುಖ್ಯತೆ ಕೊಡುವ ಮೂಲಕ ಕಾಸರಗೋಡಿನಲ್ಲಿ ಪ್ರತಿಭಾವಂತರನ್ನು ಗುರುತಿಸಿ ವೇದಿಕೆ ಒದಗಿಸುವುದೇ ಈ ನೂತನ ಘಟಕದ ಉದ್ದೇಶ”…

Read More

ಬೆಂಗಳೂರು : ಬೆಂಗಳೂರಿನ ‘ರಚನಾ ಡಾನ್ಸ್ ಅಕಾಡೆಮಿ’ ತನ್ನದೇ ಆದ ವೈಶಿಷ್ಟ್ಯಗಳಿಂದ ನೃತ್ಯಕ್ಷೇತ್ರದಲ್ಲಿ ಗಮನಾರ್ಹ ಸ್ಥಾನ ಪಡೆದಿದೆ. ಈ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿದ ವಿದುಷಿ ಕಾವ್ಯ ದಿಲೀಪ್ ಸ್ವತಃ ಉತ್ತಮ ನೃತ್ಯಕಲಾವಿದೆ ಹಾಗೂ ನಿಷ್ಠೆಯಿಂದ ತಾನು ಕಲಿತ ವಿದ್ಯೆಯನ್ನು ನೃತ್ಯಾಕಾಂಕ್ಷಿಗಳಿಗೆ ಸಂಪೂರ್ಣವಾಗಿ ಧಾರೆ ಎರೆಯುವ ಬದ್ಧತೆಯುಳ್ಳ ನೃತ್ಯ ಗುರು. ಈಕೆಯ ಕಲಾತ್ಮಕ ನೃತ್ಯ ತರಬೇತಿಯಲ್ಲಿ ರೂಪುಗೊಂಡ ಕಲಾಶಿಲ್ಪ ದೀಕ್ಷಾ ಶಂಕರ್ ಇವರು ಶ್ರೀಮತಿ ಬಿ.ಹೆಚ್.ಸುಮನಾ ಮತ್ತು ಹೆಚ್.ಸಿ.ರವಿಶಂಕರ್ ಅವರ ಪುತ್ರಿಯಾಗಿದ್ದಾರೆ. ಕಳೆದ 12 ವರ್ಷಗಳಿಂದ ನೃತ್ಯ ಶಿಕ್ಷಣವನ್ನು ಆಸಕ್ತಿಯಿಂದ ಪಡೆಯುತ್ತಿದ್ದಾಳೆ. ದಿನಾಂಕ 06-08-2023ರ ಭಾನುವಾರದಂದು ಸಂಜೆ 5 ಗಂಟೆಗೆ ಬಸವೇಶ್ವರನಗರದ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ದೀಕ್ಷಾ ಶಂಕರ್ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲಿದ್ದಾಳೆ. ಕಲಾವಿದೆಯ ಈ ನೃತ್ಯ ಕಾರ್ಯಕ್ರಮಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ. ದೀಕ್ಷಾಳಿಗೆ 7ನೆಯ ವಯಸ್ಸಿನ ಎಳವೆಯಲ್ಲಿಯೇ ನೃತ್ಯಾಸಕ್ತಿ ಮೂಡಿದ್ದು, ಅದಕ್ಕೆ ಪ್ರೋತ್ಸಾಹದ ನೀರೆರೆದವರು ತಾಯಿ ಸುಮನಾ. ಮೊದಲಗುರು ಅರ್ಚನಾ ಪುಣ್ಯೇಶ್. ಅನಂತರ ವಿದುಷಿ ಕಾವ್ಯಾ ದಿಲೀಪ್ ಅವರಲ್ಲಿ ಮಾರ್ಗದರ್ಶನ ಪಡೆದ…

Read More

ದೇರಳಕಟ್ಟೆ : ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಕಣಚೂರು ಮಹಿಳಾ ಪಿ.ಯು.ಕಾಲೇಜ್ ಇವುಗಳ ಜಂಟಿ ಆಶ್ರಯದಲ್ಲಿ ಕಣಚೂರು ಪಿಯು ಕಾಲೇಜು ಆಡಿಟೋರಿಯಂನಲ್ಲಿ ದಿನಾಂಕ 27-07-2023 ಗುರುವಾರ ನಡೆದ ಅಬ್ಬಕ್ಕಳ ಮುನ್ನೆಲೆಗೆ ಬಾರದ ವಿಚಾರಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಜಯರಾಮ್ ಶೆಟ್ಟಿಯವರು ಮಾತನಾಡುತ್ತಾ “ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ಪೈಕಿ ಅಬ್ಬಕ್ಕಳು ಉಳ್ಳಾಲ ಭಾಗದಲ್ಲಿ ಹೋರಾಟ ಮಾಡಿದ ಮಹಿಳೆ. ಅಬ್ಬಕ್ಕಳ ಸೇನೆಯಲ್ಲಿ ಜಾಸ್ತಿಯಾಗಿ ಮುಸ್ಲಿಮರು, ಕ್ರೈಸ್ತರು ಮತ್ತು ಹಿಂದುಗಳು ಇದ್ದರು. ಅವರು ಪೋರ್ಚುಗೀಸರ ವಿರುದ್ಧ ಹೋರಾಟದ ಜೊತೆ ಅಸಹಕಾರ ಚಳವಳಿ ಮಾಡಿದ್ದಾರೆ. ಮೂರು ಜನ ಅಬ್ಬಕ್ಕಳ ಪೈಕಿ ಹೋರಾಟ ಮಾಡಿ ಪ್ರಾಣ ಬಿಟ್ಟದ್ದು ಎರಡನೆಯವಳು. ಈ ಹೋರಾಟದ ಇತಿಹಾಸದ ಅಧ್ಯಯನ ಮಾಡಬೇಕಾಗಿದೆ” ಎಂದು ಹೇಳಿದರು. ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕ‌ರ್ ಉಳ್ಳಾಲ ‘ಅಬ್ಬಕ್ಕಳ ಮುನ್ನೆಲೆಗೆ ಬಾರದ ವಿಚಾರ’ಗಳ ಕುರಿತು ವಿಶೇಷ ಉಪನ್ಯಾಸ ನೀಡಿ “ವಾಸ್ಕೋಡಿಗಾಮ ದೇಶಕ್ಕೆ ಪ್ರಥಮವಾಗಿ…

Read More

ಮಾಲತಿ ವೆಂಕಟೇಶ್:- 29.05.1972 ನಾರಾಯಣ ನಾವಡ ಹಾಗೂ ಲಕ್ಷ್ಮೀ ಇವರ ಮಗಳಾಗಿ ಮಾಲತಿ ವೆಂಕಟೇಶ್ ಜನನ. ಪದವಿ, ನರ್ಸರಿ ಶಿಕ್ಷಣ ಹಾಗೂ ಕಂಪ್ಯೂಟರ್ ಕೋರ್ಸ್ ಇವರ ವಿದ್ಯಾಭ್ಯಾಸ. ಊರಿನಲ್ಲಿ ಆಗಾಗ ಕಟೀಲು ಮೇಳಗಳ ಯಕ್ಷಗಾನವನ್ನು ನೋಡಿ, ಅದರಲ್ಲೂ ಸಂಪಾಜೆ ಶೀನಪ್ಪ ರೈಗಳ ರಕ್ತಬೀಜ, ಪೆರುವಾಯಿ ನಾರಾಯಣ ಶೆಟ್ಟರ ಕಿರೀಟ ವೇಷವನ್ನು ನೋಡಿ ತುಂಬಾ ಆಕರ್ಷಿತಳಾಗಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. 1989ರಲ್ಲಿ ಗಿರೀಶ್ ನಾವಡ ಮತ್ತು ಶಂಕರನಾರಾಯಣ ಮೈರ್ಪಾಡಿ ಇವರಲ್ಲಿ ಯಕ್ಷಗಾನ ಹೆಜ್ಜೆಗಳನ್ನು ಕಲಿತು ಪ್ರಪ್ರಥಮವಾಗಿ “ವೀರ ಬಬ್ರುವಾಹನ” ಪ್ರಸಂಗದ ಅರ್ಜುನ ಪಾತ್ರವನ್ನು ಮಾಡಿದ್ದರು, ಈ ಪಾತ್ರವನ್ನು ನೋಡಿದ ಗುರುಗಳು ನನಗೆ ಕಿರೀಟ ವೇಷಗಳನ್ನು ಮಾಡುವುದಕ್ಕೆ ಉತ್ತೇಜನ ನೀಡಿದರು  ಎನ್ನುತ್ತಾರೆ ಮಾಲತಿ ವೆಂಕಟೇಶ್. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಮಾಹಿತಿ ಹಾಗೂ ಅರ್ಥಗಾರಿಕೆಯ ಬಗ್ಗೆ ಗುರುಗಳಲ್ಲಿ ಅಥವಾ ನಿರ್ದೇಶಕರಲ್ಲಿ ತಿಳಿದುಕೊಂಡು, ಭಾಗವತರಲ್ಲಿ ಪದ್ಯ ಮತ್ತು ತಾಳ ಇವುಗಳನ್ನು ಕೇಳಿಕೊಂಡು ರಂಗ ಪ್ರವೇಶ ಮಾಡುವುದು ರೂಢಿ ಎಂದು ಹೇಳುತ್ತಾರೆ ಮಾಲತಿ ವೆಂಕಟೇಶ್. ದಕ್ಷಯಜ್ಞದ…

Read More

ಮಂಗಳೂರು : ಮಂಗಳೂರಿನ ಫರಂಗಿಪೇಟೆಯ ಅರ್ಕುಳದಲ್ಲಿರುವ ಡಾ. ತುಂಗ ಅವರ ಮನಸ್ವಿನಿ ಆಸ್ಪತ್ರೆಯ ವಠಾರದಲ್ಲಿ ‘ಕುಡ್ಲಗಿಪ್ ಕುಂದಾಪ್ರದರ್ ವಾಟ್ಸಾಪ್ ಬಳಗ’ ಆಯೋಜಿಸಿದ‌ ‘ವಿಶ್ವ ಕುಂದಾಪುರ ಕನ್ನಡ ದಿನಾಚರಣೆ’ಯ ಅಂಗವಾಗಿ ದಿನಾಂಕ 23-07-2023ರಂದು ‘ಕುಂದಾಪ್ರ ಹಬ್ಬ’ವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಗಳಾದ ಡಾ. ಮೊಳಹಳ್ಳಿ ಶಾಂತರಾಮ ಶೆಟ್ಟಿಯವರು “ದಿನಕ್ಕೆ ಕಡಿಮೆ ಎಂದರೂ ಹನ್ನೆರಡು ಗಂಟೆ ಕೆಲಸ ಮಾಡುವ ಶ್ರಮಜೀವಿಗಳೆಂದರೆ ಅದು ಕುಂದಾಪುರದವರು. ಪಂಚನದಿಗಳು ಹರಿಯುವ ನಾಡಾದ ಕುಂದಾಪುರದಿಂದ ಬಂದ ಜನರು ಕುಂದಾಪ್ರ ಹಬ್ಬವನ್ನು ಮಂಗಳೂರಿನಲ್ಲಿ ಆಚರಿಸುತ್ತಿದ್ದಾರೆ ಎಂದರೆ ಅದು ಕೇವಲ ಇಲ್ಲಿರುವ ಎಲ್ಲಾ ಕುಂದಾಪ್ರದವರನ್ನು ಒಟ್ಟುಗೂಡಿಸುವ ಉದ್ದೇಶವೇ ಹೊರತು ಇನ್ನಾವುದೇ ಸ್ವಾರ್ಥ ಇಲ್ಲ” ಎಂಬ ಸಂದೇಶ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಿಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಮಂಗಳೂರು ಇದರ ಅಧ್ಯಕ್ಷರಾದ ಡಾ. ಕೈಲ್ಕೆರೆ ಭಾಸ್ಕರ ಶೆಟ್ಟಿಯವರು “ನೆರೆಯಲ್ಲಿ ಇಲ್ಲಾ ರಾತ್ರಿಯಲ್ಲಿ ಎಲ್ಲೇ ಆಗಲಿ ನಂಬಬಹುದಾದ ಜನರೆಂದರೆ…

Read More

ಬೈಂದೂರು : ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಕುಂದ ಅಧ್ಯಯನ ಕೇಂದ್ರ ಹಾಗೂ ಕುಂದಾಪ್ರ ಡಾಟ್ ಕಾಂ ಸಂಯುಕ್ತ ಆಶ್ರಯದಲ್ಲಿ ಬೈಂದೂರು ರೋಟರಿ ಕ್ಲಬ್, ಜೆಸಿಐ ಬೈಂದೂರು ಸಿಟಿ, ಜೆಸಿಐ ಉಪ್ಪುಂದ, ಲಯನ್ಸ್ ಕ್ಲಬ್ ಬೈಂದೂರು – ಉಪ್ಪುಂದ, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಬೈಂದೂರು ಹಾಗೂ ಉಪ್ಪುಂದ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ದಿನಾಂಕ 18-07-2023 ಮಂಗಳವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಯು. ಚಂದ್ರಶೇಖರ ಹೊಳ್ಳರಿಗೆ ಉಳುಮೆಯ ನೊಗ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅವರು ಮಾತನಾಡುತ್ತಾ “ಭಾಷೆ ಬಳಕೆಯ ಜೊತೆಗೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾದ್ದು ಬಹುಮುಖ್ಯ. ಕುಂದಾಪ್ರ ಕನ್ನಡ ಭಾಷೆಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಹಾಗೆಯೇ ಪ್ರದೇಶವಾರು ಮತ್ತು ಸಮುದಾಯವಾರು ಭಿನ್ನತೆಯೂ ಇದೆ. ಇದನ್ನು ದಾಖಲಿಸುವ ಕೆಲಸ ಮಾಡಬೇಕಿದೆ. ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಇದ್ದರಷ್ಟೇ ಸಾಲದು. ಅದು ಇನ್ನಷ್ಟು ವಿಸ್ತಾರಗೊಳ್ಳಬೇಕು. ಅಧ್ಯಯನ, ದಾಖಲೀಕರಣ ನಡೆದಾಗಲೇ…

Read More