Author: roovari

ಮಂಗಳೂರು : ಬೋಳೂರಿನ ಅಮೃತ ವಿದ್ಯಾಲಯಂ ಆವರಣದಲ್ಲಿ ಜರಗಿದ ಮಠದ 25ನೇ ವರ್ಷದ ಸಂಭ್ರಮಾಚರಣೆ ಹಾಗೂ ರಾಷ್ಟ್ರೀಯ ಯುವದಿನದ ಅಂಗವಾಗಿ ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ಆಯೋಜಿಸಲಾದ ‘ಯುವ ಸಾಹಿತ್ಯ ಸಮ್ಮೇಳನ’ವು ದಿನಾಂಕ 13-01-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರಿನ ಮಾತಾ ಅಮೃತನಂದಮಯಿ ಮಠದ ಸ್ವಾಮಿನಿ ಮಂಗಲಾಮೃತ ಪ್ರಾಣ ಅವರು ಮಾತನಾಡುತ್ತಾ “ಸಾಹಿತ್ಯದ ಓದು ಮತ್ತು ರಚನೆಯಿಂದ ವ್ಯಕ್ತಿತ್ವದ ಬೆಳವಣಿಗೆ ಆಗುತ್ತದೆ. ಇದು ಶಿಕ್ಷಣಕ್ಕೆ ಪೂರಕವಾದ ಒಂದು ಚಟುವಟಿಕೆಯಾಗಿದ್ದು ಯುವಜನರು ತಮ್ಮ ಆಂತರ್ಯದ ಅಭಿವ್ಯಕ್ತಿಗಾಗಿ ಸಾಹಿತ್ಯವನ್ನು ಅವಲಂಬಿಸುವುದು ಸೂಕ್ತ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರು “ಸಾಹಿತ್ಯದ ಬೆಳವಣಿಗೆಗೆ ನಾವು ಯುವಜನರ ಕಡೆಗೆ ಹೆಚ್ಚಾಗಿ ಗಮನ ಹರಿಸಿದ್ದೇವೆ. ಯುವಜನರಿಗೆ ಅನ್ವಯವಾಗುವ ಕಾರ್ಯಕ್ರಮಗಳ ಮೂಲಕ ಅವರನ್ನು ತಲಪುವ ಪ್ರಯತ್ನ ಮಾಡುತ್ತಿದ್ದೇವೆ” ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕವಿ ಸಾಹಿತಿ ಹಾಗೂ ಅಮೃತ ಸಂಸ್ಕೃತಿ ಮತ್ತು…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 07-01-2024ನೇ ರವಿವಾರದಂದು ಮಂಗಳೂರಿನ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು. ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡ “ಡಾ. ಅಮೃತ ಸೋಮೇಶ್ವರರ ಗ್ರಂಥಗಳಲ್ಲಿರುವ ಮಾಹಿತಿ ಸಾರ್ವಕಾಲಿಕವಾಗಿದ್ದು, ಅವುಗಳು ಕರಾವಳಿಯ ಸಾಂಸ್ಕೃತಿಕ ಸಾಕ್ಷಿ ಪ್ರಜ್ಞೆಯಾಗಿ ಉಳಿಯಲಿವೆ. ಅಮೃತರು ವ್ಯಕ್ತಿತ್ವ, ವಿನಯ ಮತ್ತು ವಿದ್ವತ್ತಿನ ಅಪೂರ್ವ ಸಂಗಮ. ಕರಾವಳಿಯಲ್ಲಿ ಲಲಿತ ಕಲಾ ಮಹಾವಿದ್ಯಾಲಯ ಸ್ಥಾಪಿಸುವುದು ಅವರ ಕನಸಾಗಿತ್ತು. ಅಂತಹ ಮಹಾವಿದ್ಯಾಲಯವನ್ನು ಸ್ಥಾಪಿಸಿದರೆ ಕರಾವಳಿ ಭಾಗದ ಸಂಸ್ಕೃತಿ ಉಳಿಸಲು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ.” ಎಂದು ಹೇಳಿದರು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ “ಡಾ. ಅಮೃತ ಸೋಮೇಶ್ವರ ಅವರು ಬರೆಯದ ವಿಷಯವೇ ಇಲ್ಲ. ವಿಷಯದಲ್ಲಿ ಖಚಿತವಾಗಿದ್ದರು. ತಮ್ಮ ನಿಲುವನ್ನು ಬಿಟ್ಟು ಕೊಡುತ್ತಿರಲಿಲ್ಲ. ಪುರಾಣಕ್ಕೆ ಹೊಸ ಅರ್ಥ ಹಾಗೂ ಹೊಸರೂಪ ನೀಡಿದ…

Read More

ಬೆಂಗಳೂರು : ಕಥಾಬಿಂದು ಪ್ರಕಾಶನದ ವತಿಯಿಂದ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ’ವು ದಿನಾಂಕ 21-01-2024ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಕನ್ನಡ ತಿಲಕ ರಾಜ್ಯ ಪ್ರಶಸ್ತಿ’ ಪ್ರದಾನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ‘ಕಥಾಬಿಂದು ಸಾಹಿತ್ಯ ಮಾಲೆ -2’ 40 ಕೃತಿಗಳು ಅನಾವರಣಗೊಳ್ಳಲಿವೆ. ಈ ಸಾಹಿತ್ಯ ಸಮ್ಮೇಳನವನ್ನು ಶಿವಮೊಗ್ಗದ ಹಿರಿಯ ಸಾಹಿತಿ ಶ್ರೀಮತಿ ಗಾಯತ್ರಿ ಸುರೇಂದ್ರ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಆನಂದ ನಿಲಯ ಪ್ರಕಾಶನದ ಶ್ರೀ ಆನಂದ್ ಕೊರಟಿಯವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಶ್ರೀ ವಾಮನ್ ರಾವ್ ಬೇಕಲ್ ಇವರ ಅಧ್ಯಕ್ಷತೆಯಲ್ಲಿ ‘ಕನ್ನಡ ತಿಲಕ ರಾಜ್ಯ ಪ್ರಶಸ್ತಿ’ ಪ್ರದಾನ ಮತ್ತು ಶ್ರೀಮತಿ ಭವ್ಯ ಸುಧಾಕರ ಜಗಮನೆ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿರುವುದು. ಹಿರಿಯ ಸಾಹಿತಿ ಕೆ.ವಿ. ಲಕ್ಷ್ಮಣ ಮೂರ್ತಿ ಇವರ ಉಪಸ್ಥಿತಿಯಲ್ಲಿ ಶ್ರೀಮತಿ ವಿನೋದಿನಿ ಆನಂದ್ ಇವರ ಅಧ್ಯಕ್ಷತೆಯಲ್ಲಿ ‘ಕಥಾಬಿಂದು ಸಾಹಿತ್ಯ ಮಾಲೆ -2’…

Read More

ಬೆಂಗಳೂರು : ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಆಶ್ರಯ ಮತ್ತು ಶುಭಾಶೀರ್ವಾದದೊಂದಿಗೆ ಬೆಂಗಳೂರಿನ ಶ್ರೀ ರಾಮ ಲಲಿತ ಕಲಾ ಮಂದಿರ (ರಿ.) ಇವರ ಆಶ್ರಯದಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಅರ್ಪಿಸುವ 25ನೇ ‘ಮಂಜುನಾದ’ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ ಸಂಗೀತ ಕಚೇರಿಯು ಶ್ರೀ ರಾಮ ಲಲಿತ ಕಲಾ ಮಂದಿರದ ಸಭಾಂಗಣದಲ್ಲಿ ದಿನಾಂಕ 21-01-2024ರಂದು ಸಂಜೆ ಗಂಟೆ 5.30ಕ್ಕೆ ನಡೆಯಲಿದೆ. ‘ಮಂಜುನಾದ’ ಸಂಗೀತ ಕಛೇರಿಯಲ್ಲಿ ಬೆಂಗಳೂರಿನ ಅದಿತಿ ಪ್ರಹ್ಲಾದ್, ಸ್ಮೃತಿ ಭಾಸ್ಕರ್ ಮತ್ತು ಅನಘಾ ಯೋಗಾನಂದ ಇವರ ಹಾಡುಗಾರಿಕೆಗೆ ಬೆಂಗಳೂರಿನ ಕಾರ್ತಿಕೇಯ ರಾಮಚಂದ್ರ ವಯಲಿನ್, ರಕ್ಷಿತ್ ಶರ್ಮ ಮೃದಂಗ ಮತ್ತು ಶಮಿತ್ ಎಸ್. ಗೌಡ ಘಟಂನಲ್ಲಿ ಸಾಥ್ ನೀಡಲಿದ್ದಾರೆ ಈ ಕಾರ್ಯಕ್ರಮದಲ್ಲಿ ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷರಾದ ಡಾ. ಎಮ್.ಆರ್.ವಿ. ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Read More

ಉಳ್ಳಾಲ : ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ ಇದರ ವತಿಯಿಂದ ಸಾಹಿತಿ ಪ್ರೊ. ಅಮೃತ ಸೋಮೇಶ್ವರರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 09-01-2024ರ ಮಂಗಳವಾರದಂದು ತೊಕ್ಕೊಟ್ಟು ಒಳಪೇಟೆಯಲ್ಲಿರುವ ಅಬ್ಬಕ್ಕ ಉತ್ಸವ ಸಮಿತಿಯ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಸಮಿತಿಯ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಮಾತನಾಡಿ “ಅಮೃತರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು. ಸಾಹಿತ್ಯ ಲೋಕದ ದಿಗ್ಗಜರೂ, ಶ್ರೇಷ್ಠ ವಿದ್ವಾಂಸ, ಶಿಕ್ಷಕ, ಹಾಗೂ ಸಮಿತಿಯ ಗೌರವ ಸಲಹೆಗಾರರಾಗಿದ್ದು, ಸಮಿತಿಗೆ ಮಾರ್ಗದರ್ಶಕರಾಗಿದ್ದರು.” ಎಂದು ಹೇಳಿದರು. ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಮಾತನಾಡಿ “ಅಮೃತ ಸೋಮೇಶ್ವರರು ಅಪೂರ್ವ ಮೇಧಾವಿ, ಕಳೆದ 26 ವರ್ಷಗಳಿಂದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಸಲಹೆಗಾರರಾಗಿದ್ದು, ಪ್ರತಿವರ್ಷ ಅಬ್ಬಕ್ಕ ಪ್ರಶಸ್ತಿ, ಪುರಸ್ಕಾರದ ಆಯ್ಕೆ ಅವರಿಂದಲೇ ನಡೆಯುತ್ತಿತ್ತು. ಅವರ ಆಯ್ಕೆಯೇ ಅಂತಿಮವಾಗುತ್ತಿತ್ತು. ಅಲ್ಲದೆ ಅಬ್ಬಕ್ಕ ಸಂಕಥನ, ಉಳ್ಳಾಲದ ಇತಿ-ಅದಿ ಪುಸ್ತಕದ ಪ್ರಧಾನ ಸಂಪಾದಕರಾಗಿದ್ದರು. ಅಬ್ಬಕ್ಕ ನಾಟಕ ಕೂಡಾ ಅವರಿಂದಲೇ ರಚನೆಯಾಗಿತ್ತು. ಅವರ ನಿಧನ ಸಾಹಿತ್ಯ ಲೋಕಕ್ಕೆ,…

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತೀಯ ವಿದ್ಯಾಭವನ ಸಹಯೋಗದೊಂದಿಗೆ ವಿದ್ವಾನ್ ಶ್ರೀನಿವಾಸ ಉಡುಪ ಸ್ಮರಣಾರ್ಥ ಪಿಟೀಲು ವಾದನ ಕಛೇರಿಯು ದಿನಾಂಕ 31-12-2023ರಂದು ಮಂಗಳೂರಿನ ಶಾರದಾ ವಿದ್ಯಾಲಯದ ಸಭಾಭವನದಲ್ಲಿ ನಡೆಯಿತು. ಬೆಂಗಳೂರಿನ ಹೊಸಹಳ್ಳಿ ರಘುರಾಮ, ಮತ್ತೂರು ವಿಶ್ವಜಿತ್ ಹಾಗೂ ಕಾರ್ತಿಕೇಯ ಅವರ ಪಿಟೀಲು ವಾದನಕ್ಕೆ ಮೃದಂಗದಲ್ಲಿ ಆನೂರು ವಿನೋದ್ ಶ್ಯಾಮ್ ಬೆಂಗಳೂರು ಹಾಗೂ ಖಂಜೀರದಲ್ಲಿ ಸುಮುಖ ಕಾರಂತ ಮಂಗಳೂರು ಪಕ್ಕವಾದ್ಯದಲ್ಲಿ ಸಾಥ್ ನೀಡಿದರು. ಇದಕ್ಕೂ ಮೊದಲು ಸುನಾದ ಎಸ್.ಪಿ. ಅವರ ಹಾಡುಗಾರಿಕೆ ಕಛೇರಿ ನಡೆಯಿತು. ಇವರಿಗೆ ಪಿಟೀಲಿನಲ್ಲಿ ಸುಪ್ರೀತ ಪಿ.ಎಸ್. ಹಾಗೂ ಮೃದಂಗದಲ್ಲಿ ಸುಮುಖ ಕಾರಂತ ಸಹಕರಿಸಿದರು. ಇದೇ ಸಂದರ್ಭದಲ್ಲಿ ಸಂಗೀತ ಲೋಕದ ದಿಗ್ಗಜ, ಸಂಗೀತ ಕಲಾನಿಧಿ ಚೆನ್ನೈನ ಓ.ಎಸ್. ತ್ಯಾಗರಾಜನ್ ಅವರನ್ನು ಸ್ಮರಿಸಲಾಯಿತು. ವೈದ್ಯ ಡಾ. ಸಿ.ವಿ. ರಘುವೀರ್, ನ್ಯಾಯವಾದಿ ಅನಂತಕೃಷ್ಣ ಉಡುಪ ಅವರನ್ನು ಗೌರವಿಸಲಾಯಿತು. ಸಂಗೀತ ಪರಿಷತ್ತಿನ ಜತೆ ಕಾರ್ಯದರ್ಶಿ ಅಶ್ವಿನಿ ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು. ಖಜಾಂಚಿ ಸುಬ್ರಹ್ಮಣ್ಯ ಉಡುಪ…

Read More

ಕೊಣಾಜೆ : ಕರ್ನಾಟಕ ಸಾಹಿತ್ಯ ಪರಿಷತ್ತು ಉಳ್ಳಾಲ‌‌ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಅಮೃತ ನಮನ ಕಾರ್ಯಕ್ರಮವು ದಿನಾಂಕ 11-01-2024ರಂದು ಕೊಣಾಜೆ ಪದವು ಇಲ್ಲಿನ ದ.ಕ.ಜಿ.ಪ. ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರೊ. ಅಮೃತ ಸೋಮೇಶ್ವರರಿಗೆ ನುಡಿನಮನ ಸಲ್ಲಿಸಿ ಮಾತನಾಡಿದ ತೋನ್ಸೆ ಪುಷ್ಕಳ್ ಕುಮಾರ್ “ಮೃದು ಸ್ವಭಾವ, ಸರಳ ವ್ಯಕ್ತಿತ್ವದ ಕವಿ, ಸಾಹಿತಿ ಪ್ರೊ. ಅಮೃತ‌ ಸೋಮೇಶ್ವರರು ಮಾನವೀಯ ಸಂವೇದನೆಯ ಕವಿ. ಪ್ರಕೃತಿ, ಕನ್ನಡ ಹಾಗೂ ತುಳು ನಾಡು ನುಡಿಯ ಬಗೆಗೆ ಅಪಾರ ಪ್ರೀತಿ ಹಾಗೂ ಸಾತ್ವಿಕ ವೈಚಾರಿಕತೆ ಅವರ ಕವಿತೆ ಮತ್ತು ಒಟ್ಟು ಸಾಹಿತ್ಯದಲ್ಲಿತ್ತು. ಗಾಯನಯೋಗ್ಯವಾದ ಅನೇಕ ಕವಿತೆಗಳನ್ನು ಅವರು ಬರೆದಿದ್ದಾರೆ. ಗೋವಿಂದ ಪೈ, ಕುವೆಂಪು, ಶಿವರುದ್ರಪ್ಪರಂತಹ ರಾಷ್ಟ್ರಕವಿಗಳ ಸಾಲಿನಲ್ಲಿ ಅಮೃತರಿಗೂ ಸ್ಥಾನ ದೊರಕಬೇಕಿತ್ತು. ಅವರು ಆ ತೂಕದ ಕವಿ. ಎಳೆಯ ಮಕ್ಕಳಿಂದ ಹಿರಿಯರವರೆಗೆ ಯಾರು ಯಾವ ಸಂದೇಹಗಳನ್ನು ಕೇಳಿದರೂ ಅವರು ಯೋಚಿಸಿ ತಮ್ಮದೇ ರೀತಿಯ ಆಲೋಚನೆಗಳನ್ನು ಹಂಚುತ್ತಿದ್ದರು. ಮಾತ್ರವಲ್ಲ ಒಂದು ಮನುಷ್ಯಪರ ನಿಲುವನ್ನು ತೋರಿಸಿಕೊಡುತ್ತಿದ್ದರು. 500ಕ್ಕೂ ಹೆಚ್ಚು ಕೃತಿಗಳಿಗೆ…

Read More

ಕಾಪು : ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ನಡೆದ ತೃತೀಯ ವರ್ಷದ ಯಕ್ಷಗಾನ ತಾಳಮದ್ದಳೆ ಸಪ್ತಾಹ-2023 ಕಾರ್ಯಕ್ರಮವು ದಿನಾಂಕ 31-12-2023ರಂದು ಸಂಪನ್ನಗೊಂಡಿತು. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಯಕ್ಷಗಾನ ಸಪ್ತಾಹ 2023ರ ಉದ್ಘಾಟನೆಯನ್ನು ದಿನಾಂಕ 25-12-023ರಂದು ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ನೆರವೇರಿಸಿದ್ದರು. ಬಳಿಕ ಆಶೀರ್ವಚನ ನೀಡಿದ ಗುರುಗಳು “ಮಹಾಸಂಸ್ಥಾನದಿಂದ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ಸದುದ್ದೇಶದೊಂದಿಗೆ ಹೊಸ ತಲೆಮಾರಿನಲ್ಲಿ ಕಲೆಗಳ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಆಸಕ್ತಿ, ಅಧ್ಯಯನ ಮತ್ತು ಅವುಗಳನ್ನು ಮುನ್ನಡೆಸುವ ಅಭಿರುಚಿ ಸೃಷ್ಟಿಸುವ ಗುರಿಯೊಂದಿಗೆ ಕಲೆ, ಸಾಹಿತ್ಯ ಹಾಗೂ ಕ್ರೀಡಾ ರಂಗಗಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಯೋಜನೆಯನ್ನು ಮಹಾಸಂಸ್ಥಾನದ ವತಿಯಿಂದ ನಡೆಸಲಾಗುವುದು” ಎಂದರು. ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಕಳಿ ಚಂದ್ರಯ್ಯ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ವೇ.ಬ್ರ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್, ಉದ್ಯಮಿ ಜಯ ಕೆ. ಶೆಟ್ಟಿ, ಅಸೆಟ್ ಅಧ್ಯಕ್ಷ…

Read More

ಮಂಗಳೂರು : ಪೊಳಲಿ ಶಂಕರ ನಾರಾಯಣ ಶಾಸ್ತ್ರಿ ಸ್ಮಾರಕ ಸಮಿತಿಯು ಆಯೋಜಿಸಿದ ಗೌರವಾರ್ಪಣೆ ಕಾರ್ಯಕ್ರಮವು ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಸಂಘದ ಮಾಸಿಕ ಹುಣ್ಣಿಮೆ ತಾಳಮದ್ದಳೆ ಕಾರ್ಯಕ್ರಮ ಜೊತೆಗೆ ದಿನಾಂಕ 26-12-2023ರಂದು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಮಿತಿಯ ಸಂಚಾಲಕರಾದ ಡಾ. ಪ್ರಭಾಕರ್ ಜೋಶಿ ಹಾಗೂ ಸುಚೇತಾ ಜೋಶಿ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ “ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯ ಸಂಚಾಲಕ ಡಾ. ಎಂ. ಪ್ರಭಾಕರ ಜೋಶಿ ಅವರು ಬಹುಮುಖ ಪ್ರತಿಭಾ ಸಂಪನ್ನರಾಗಿ ಯಕ್ಷಗಾನ ಮಕರಂದವೆಂಬ ಬೃಹತ್ ಸಂಸ್ಮರಣಾ ಗ್ರಂಥದ ಸಂಪಾದಕತ್ವದಲ್ಲಿ ಶ್ರಮವಹಿಸಿ ಒಂದು ದಾಖಲೆ ಗ್ರಂಥವನ್ನಾಗಿ ರೂಪಿಸಿ ಶಾಸ್ತ್ರಿಗಳ ಹೆಸರನ್ನು ಚಿರಂತನಗೊಳಿಸಿದ್ದಾರೆ.”ಎಂದರು ಗೌರವ ಸ್ವೀಕರಿಸಿದ ಡಾ. ಜೋಶಿ ಮಾತನಾಡಿ “ತಾಳಮದ್ದಳೆ ಪ್ರವಚನ ಕ್ಷೇತ್ರಕ್ಕೆ ಪೊಳಲಿ ಶಾಸ್ತ್ರಿಯವರ ಕೊಡುಗೆ ಅಸಾಮಾನ್ಯವಾದುದು. 1930-70 ಅವಧಿಯಲ್ಲಿ ಶಾಸ್ತ್ರಿಗಳು ತಮ್ಮ ಅಮೋಘ ಸೇವೆಯಿಂದ ಸ್ಮರಣೀಯರಾಗಿರುವರು. ತಾಳಮದ್ದಲೆಯ ನವೋದಯದ ನೇತಾರರಲ್ಲಿ ಶಾಸ್ತ್ರಿಯವರೂ ಒಬ್ಬರು.…

Read More

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇವರು ಆಯೋಜಿಸುವ ‘ಸಂಸ್ಕೃತಿ ಉತ್ಸವ – 2024’ ಕಾರ್ಯಕ್ರಮವು ದಿನಾಂಕ 23-01-2024 ಮತ್ತು 24-01-2024ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ನಡೆಯಲಿರುವುದು. ದಿನಾಂಕ 23-01-2024ರಂದು ಖ್ಯಾತ ಗಡಿನಾಡ ಕನ್ನಡ ಕಲಾವಿದರಾದ ಕಾಸರಗೋಡು ಚಿನ್ನ ಇವರಿಗೆ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ.) ಹೆಬ್ರಿ ಪ್ರಾಯೋಜಿತ ‘ಶಾರದಾ ಕೃಷ್ಣ’ ಪುರಸ್ಕಾರ – 2024’ವನ್ನು ನೀಡಿ ಗೌರವಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತೇಜಸ್ವಿ ಅನಂತ್ ತಂಡದವರಿಂದ ಭಾರತದಲ್ಲಿ ವಿಶಿಷ್ಟವೆನಿಸಿದ ಪಿಕ್ಸೆಲ್ ಪೋಯಿ, ಯನಿ ಸೈಕಲ್, ಜಗ್ಗಲರ್ ವಿಶೇಷ ಕಾರ್ಯಕ್ರಮ ನಡೆಯಲಿದೆ. ದಿನಾಂಕ 23-01-2024ರಂದು ಕನ್ನಡದ ಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿ ಇವರಿಗೆ ಶ್ರೀಮತಿ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ – 2024’ನ್ನು ನೀಡಿ ಪುರಸ್ಕರಿಸಲಾಗುವುದು. ಈ ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿರುತ್ತದೆ. ಇದೇ ಸಂದರ್ಭದಲ್ಲಿ ನಾಡಿನ ಪ್ರಸಿದ್ಧ ಕಲಾವಿದರಿಂದ…

Read More