Author: roovari

ಮಂಗಳೂರು : ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಮತ್ತು ರಂಗಸ್ಥಳ ಮಂಗಳೂರು (ರಿ) ಇವರ ಆಶ್ರಯದಲ್ಲಿ ‘ಬಳ್ಕೂರು ಯಕ್ಷ ಕುಸುಮ’ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮವು ದಿನಾಂಕ 09 ಮಾರ್ಚ್ 2025ರಂದು ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುರಸ್ಕಾರವನ್ನು ಸ್ವೀಕರಿಸಿದ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಮಾತನಾಡಿ “ಯಕ್ಷರಂಗವು ನನ್ನ ಬದುಕಿಗೆ ಅಭಿಮಾನಿಗಳ ಪ್ರೀತಿ ಮತ್ತು ಹೊಸತನದ ಸ್ಪೂರ್ತಿಯನ್ನು ನೀಡಿದೆ ಅದು ಮರೆಯಲಾದ ಅವಿಸ್ಮರಣೀ ಕ್ಷಣಗಳು. ನನ್ನ ತಂದೆವರು ಜಲವಳ್ಳಿ ವೆಂಕಟೇಶ್ ರಾವ್ ಯಕ್ಷಗಾನ ಕ್ಷೇತ್ರಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ. ಪ್ರತಿಯೊಬ್ಬ ಕಲಾವಿದರು ಕೂಡ ಹಿರಿಯವರು ಹಾಕಿಕೊಟ್ಟ ಯಕ್ಷಪರಂಪರೆಯನ್ನು ಮುಂದುವರಿಸುವ ಮೂಲಕ ತನ್ನ ತನವನ್ನು ಕಾಯ್ದುಕೊಳ್ಳಬೇಕೇ ಹೊರತು ನಕಲಿಸಬಾರದು. ಯಕ್ಷಗಾನದಲ್ಲಿ ಅಪಾರವಾದು ಓದು, ಕಲಿಕೆ ಅಭ್ಯಾಸದ ಮೂಲಕ ಇಲ್ಲಿ ಕಲಾವಿದ ಬೆಳೆಯಬಹುದು. ಬದುಕಿಗಾಗಿ ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಆದರೆ ಬಹಳಷ್ಟು ಪ್ರೇಕ್ಷಕರನ್ನು ನಾವು ಗಳಿಸಿದ್ದೇವೆ ಅಂದರೆ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಂಯುಕ್ತಾಶ್ರಯದಲ್ಲಿ, ಸುಲೋಚನಾ ಡಾ.ಎಂ.ಜಿ.ನಾಗರಾಜ್ ದಂಪತಿಗಳ ದತ್ತಿಯ ಸಹಕಾರದಿಂದ ‘ಜಿಲ್ಲೆಯ ಪುರಾತತ್ವ ಜಾನಪದ ಮತ್ತು ಪರಿಸರ ವಿಚಾರಗೋಷ್ಠಿ-ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 11 ಮಾರ್ಚ್ 2025ರಂದು ಮಡಿಕೇರಿಯ ಎಫ್‍. ಎಂ. ಕೆ. ಎಂ. ಸಿ. ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಸಂಶೋಧಕರು ಹಾಗೂ ಸಾಹಿತಿಗಳಾದ ಡಾ. ಎಂ. ಜಿ. ನಾಗರಾಜ್ ಮಾತನಾಡಿ “ಇತಿಹಾಸದ ಊರುಗೋಲನ್ನು ಇರಿಸಿಕೊಂಡು ಇಂದಿನ ಪರಿಸ್ಥಿತಿಗಳ ಅವಲೋಕನ ನಡೆಯಬೇಕಾಗಿದೆ” ಎಂದರು. ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ.ಕೋಡಿರ ಲೋಕೇಶ್ ಮಾತನಾಡಿ “ಜೀವನವೆನ್ನುವುದು ಉಣ್ಣುವುದು ಹಾಗೂ ತಿನ್ನುವುದನ್ನು ಮೀರಿದ ವಿಚಾರವೇ ಆಗಿದೆ. ಬದುಕನ್ನು ಉತ್ತಮಿಕೆಯತ್ತ ಕೊಂಡೊಯ್ಯಲು ಸಾಹಿತ್ಯ ಮತ್ತು ಸಾಂಸ್ಕಂತಿಕ ವಲಯಗಳತ್ತ ವಾಲಿದಾಗಲೆ ಕಥೆ, ಕವನಗಳನ್ನು ಒಳಗೊಂಡ ಸಾಹಿತ್ಯ, ಕಲೆ…

Read More

ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2022-2023 ಮತ್ತು 2024ರ ಕ್ಯಾಲೆಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್) ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟ ಪರಿಗಣಿಸಿ ವಿವಿಧ “ಕನ್ನಡ ಪುಸ್ತಕ ಸೊಗಸು ಬಹುಮಾನ”ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪ್ರಕಾಸಕರು / ಮುದ್ರಕರು/ಕಲಾವಿದರು/ ಲೇಖಕರುಗಳು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ. ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು / ಚಿತ್ರ ಕಲಾವಿದರ ಪೂರ್ಣ ವಿಳಾಸ / ದೂರವಾಣಿ ಸಂಖ್ಯೆ- ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು 29 ಮಾರ್ಚ್ 2025ರ ಒಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ. ಸಿ. ರಸ್ತೆ, ಬೆಂಗಳೂರು-560 002 – ಈ ವಿಲಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಹಾಗೂ ಕೊನೆಯ ದಿನಾಂಕ ಮುಗಿದ ನಂತರ ಬಂದ ಪುಸ್ತಕಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ…

Read More

ಸ್ವಿಟ್ಜರ್ಲೆಂಡ್‌ : ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿರುವ ಸ್ಪ್ರಿಹಾ ಅಕಾಡೆಮಿ’ ಆಯೋಜಿಸಿದ್ದ ರಶ್ಮಿತಾ ನಾಯರ್ ಹಾಗೂ ರಾಧಿಕಾ ಶೆಟ್ಟಿ ಇವರ ‘ಮಾನುಷಿ ಆನ್ ಎ ಕ್ವೆಸ್ಟ್’ ಭರತನಾಟ್ಯ ಕಾರ್ಯಕ್ರಮದ ಪ್ರಥಮ ಪ್ರದರ್ಶನ ದಿನಾಂಕ 08 ಮಾರ್ಚ್ 2025 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಜ್ಯೂರಿಚ್‌ನ ನೃತ್ಯಗಾರರು ಮತ್ತು ಕಲಾರಸಿಕರು ಭಾಗವಹಿಸಿದ್ದರು. ನೃತ್ಯ ಪ್ರದರ್ಶನದ ಜೊತೆ ಭರತನಾಟ್ಯದ ಕುರಿತು ಕಾರ್ಯಾಗಾರ ನಡೆಯಿತು. ಇದು ಇವರ ಯುರೋಪ್ ಪ್ರವಾಸ 2025ರ ಯಶಸ್ವಿ ಆರಂಭವಾಗಿದೆ. ಮಾನುಷಿಯ ಮುಂದಿನ ಪ್ರದರ್ಶನ ಹಂಗೇರಿಯ ಬುಡಾಪೆಸ್ಟ್ಇಲ್ಲಿ ನಡೆಯಲಿದೆ.

Read More

ಬೆಂಗಳೂರು : ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇವರು ಹಮ್ಮಿಕೊಂಡಿರುವ ‘ಚಿಗುರು ರಂಗೋತ್ಸವ’ದಲ್ಲಿ ದಿನಾಂಕ 14 ಮಾರ್ಚ್ 2025ರಂದು 3-00 ಮತ್ತು 7-00 ಗಂಟೆಗೆ ಬೆಂಗಳೂರಿನ ಕೋಣನಕುಂಟೆ ಮೆಟ್ರೋ ಸ್ಠೆಷನ್ ಬಳಿಯಿರುವ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇಲ್ಲಿ ಸಂಚಾರಿ ಥಿಯೇಟರ್ ತಂಡದವರು ‘ರೊಶೊಮನ್’ ನಾಟಕ ಪ್ರದರ್ಶನ ನೀಡಲಿದ್ದಾರೆ. ಜಪಾನಿನ ಬರಹಗಾರ ರುನೊಸುಕೆ ಅಕುತಗುವ ಅವರು ರಚಿಸಿದ ಕತೆಗಳನ್ನು ಆಧಾರವಾಗಿಟ್ಟುಕೊಂಡು ಅಕಿರಾ ಕುರುಸಾವಾ ಚಲನಚಿತ್ರವನ್ನಾಗಿಸಿದ ರಶೋಮನ್ ಚಲನಚಿತ್ರವನ್ನು ಆಧರಿಸಿ ಹಿಂದಿ ಲೇಖಕ ರಘುವೀರ್ ಸಹಾಯ್ ಹಿಂದಿ ನಾಟಕವನ್ನು ರಚಿಸಿದ್ದಾರೆ ಮತ್ತು ಅದನ್ನು ಕನ್ನಡಕ್ಕೆ ಎಸ್ ಮಾಲತಿ ಅನುವಾದಿಸಿದ್ದಾರೆ.

Read More

ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇದರ ವತಿಯಿಂದ ರಾಷ್ಟ್ರೀಯ ವೃತ್ತಿ ರಂಗೋತ್ಸವ-2025ರ ಅಂಗವಾಗಿ ಲಾಂಛನ ಬಿಡುಗಡೆ ಹಾಗೂ ಚಿತ್ರಕಲಾ ಶಿಬಿರ ಉದ್ಘಾಟನಾ ಸಮಾರಂಭವು ದಿನಾಂಕ 05 ಮಾರ್ಚ್ 2025ರಂದು ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆಯಿತು. ಈ ಸಮಾರಂಭವನ್ನು ಉದ್ಘಾಟಿಸಿದ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಇವರು ಮಾತನಾಡಿ “ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು 15 ಮಾರ್ಚ್ 2025ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ವೃತ್ತಿ ರಂಗೋತ್ಸವದ ಹಿನ್ನೆಲೆ ದೃಶ್ಯಕಲಾ ಕಾಲೇಜು ವಿದ್ಯಾರ್ಥಿಗಳ ಚಿತ್ರಕಲಾ ಶಿಬಿರ ನಾಟಕೋತ್ಸವಕ್ಕೆ ಮತ್ತಷ್ಟು ಸ್ಫೂರ್ತಿ ತುಂಬುತ್ತಿದೆ. ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಶುರುವಾಗಿ ಆರು ವರ್ಷವಾಗುತ್ತಿದೆ. ಮೊದಲ ಸಲ ಇಲ್ಲಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆಯಾಗುತ್ತಿದೆ. ಕನ್ನಡ, ತಮಿಳು, ತೆಲುಗು ಭಾಷೆಯ ನಾಟಕಗಳು ಪ್ರದರ್ಶನವಾಗಲಿವೆ. ಪ್ರೇಕ್ಷಕರಿಗೆ ಉಚಿತ ಪ್ರವೇಶ ಅವಕಾಶ ಇರುತ್ತದೆ. ಕನ್ನಡ ವೃತ್ತಿ ರಂಗಭೂಮಿಯ ರಾಜಣ್ಣ ಜೇವರ್ಗಿಯವರ ‘ಅಂಗಾರ.. ತಂಗಿ ಬಂಗಾರ’, ತೆಲುಗಿನ ‘ಮಾಯಾ…

Read More

ಮಂಗಳೂರು : ಬೊಂಬಾಟ್ ಬ್ರದರ್ಸ್ ಪ್ರಸ್ತುತ ಪಡಿಸುವ ಕಲಾ ಸಂಗಮ ಕಲಾವಿದರು ಅಭಿನಯಿಸುವ ‘ಛತ್ರಪತಿ ಶಿವಾಜಿ’ ಅದ್ದೂರಿ ತುಳು ಚಾರಿತ್ರಿಕ ನಾಟಕ ಪ್ರದರ್ಶನವನ್ನು ದಿನಾಂಕ 13 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ನಾಟಕಕ್ಕೆ ಶಶಿರಾಜ್ ಕಾವೂರು ಇವರ ಕಥೆ ಸಂಭಾಷಣೆ, ಎ.ಕೆ. ವಿಜಯ್ ಕೋಕಿಲ ಮತ್ತು ಕದ್ರಿ ಮಣಿಕಾಂತ್ ಇವರ ಸಂಗೀತ ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲು ನಿರ್ದೇಶನ ಮಾಡಿರುತ್ತಾರೆ.

Read More

ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕ ಗಮಕ ಕಲಾ ಪರಿಷತ್ತು ಇವುಗಳ ಸಂಯುಕ್ತ ಆಶಯದಲ್ಲಿ ಕುಮಾರವಾಲ್ಮೀಕಿ ರಚಿಸಿದ ತೊರವೆ ರಾಮಾಯಣದ ಆಯೋಧ್ಯಾ ಕಾಂಡದ ‘ಭರತನ ಸೋದರ ಪ್ರೀತಿ’ ಭಾಗದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 08 ಮಾರ್ಚ್ 2025 ಶನಿವಾರದಂದು ಸಂದರ್ಭನಗರದ ಆಶ್ರಮ ರಸ್ತೆಯಲ್ಲಿರುವ 37 ನಂ. ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸಾಂಗವಾಗಿ ನಡೆಯಿತು. ವಿಜಯಪುರ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಶ್ರೀ ಬಿ.ಎಂ. ಪಾಟೀಲರು ಕಾರ್ಯಕ್ರಮ ಆಯೋಜಿಸಿದ್ದರು. “ಭರತನು ತಂದೆ, ತಾಯಿ, ಅಣ್ಣ ಹಾಗೂ ಪ್ರಜೆಗಳನ್ನು ಸಮನಾಗಿ ಪ್ರೀತಿಸುತ್ತಿದ್ದನು. ರಾಮನಿಗೆ ಸಮನಾದ ಶ್ರೇಷ್ಠ ಗುಣಗಳು ಭರತನಲ್ಲಿದ್ದವು. ಹೀಗಾಗಿ ರಾಮಾಯಣವು ಭಾರತದ ಒಂದು ಉನ್ನತ ಕಾವ್ಯವಾಗಿದೆ” ಎಂದು ಹಿರಿಯ ಸಾಹಿತಿ ಶ್ರೀ ಜಂಬುನಾಥ ಕಂಚ್ಯಾಣಿ ತಿಳಿಸಿದರು. ಆರಂಭದಲ್ಲಿ ಗಮಕಿ ಶ್ರೀಮತಿ ಪುಷ್ಪಾ ಕುಲಕರ್ಣಿ ಇವರು ‘ಶ್ರೀ ಜನಕಚಾರಮಣ ವಿಮಲ ಸರೋಜ ಸಂಭವ ಜನಕ… ತೊರವೆಯ ರಾಯ ನರಹರಿ…

Read More

ಉಡುಪಿ : ಹೋಟೆಲ್ ಉದ್ಯಮದಲ್ಲಿ ಇದ್ದುಕೊಂಡು ತನ್ನ 66ರ ಹರೆಯದಲ್ಲೂ ಹದಿನಾರರ ಯುವಕನಂತೆ ತೆಳ್ಳಗೆ ಬೆಳ್ಳಗಿನ ದೇಹ ಪ್ರಕೃತಿಯನ್ನು ಹೊಂದಿರುವ ವ್ಯಕ್ತಿ ಸಾಧನೆಗಳ ಸಾಕಾರ ಮೂರ್ತಿ ಎಂದರೆ ಮೂಗಿನ ಮೇಲೆ ಬೆರಳು ಹೊರಳುತ್ತದೆ ಅಲ್ಲವೇ! ಕಾರಂತ ಎಂಬ ಉಪನಾಮ ಹೊಂದಿದವರು ಹೆಚ್ಚಾಗಿ ಹೀಗೆಯೋ ಏನೋ… ಒಂದಲ್ಲ ಒಂದು ಕ್ಷೇತ್ರದಲ್ಲಿ ಇವರು ಮುಂಚೂಣಿಯಲ್ಲಿ ಇರುವವರು…ಹೀಗೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡ ರಂಗನಟ ನಿರ್ದೇಶಕ ನಮ್ಮ ಗಣೇಶ್ ಕಾರಂತ್. ಅಂದು 1958ರ ಸೆಪ್ಟೆಂಬರ್ ತಿಂಗಳಲ್ಲಿ ಸೇನೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಬೈಂದೂರು ಎಂಬ ಪುಟ್ಟ ಹಳ್ಳಿಯ ಸ್ವರ್ಣ ನೆಲೆಯಲ್ಲಿ ಸುಸಂಸ್ಕೃತ ಮನೆತನವೊಂದರ ಸಣ್ಣ ಗೂಡೊಂದರಲ್ಲಿ ಶಿವರಾಮ ಕಾರಂತ – ಸಾವಿತ್ರಿ ದಂಪತಿಗಳ ಕರುಳ ಕುಡಿಯಾಗಿ ಚಿಗುರೊಡೆದು ಅರಳಿದ ಕಲಾ ಕುಸುಮ ಗಣೇಶ ಕಾರಂತ. ಹಸಿರು ಆಸೆಯ ಕನಸಲ್ಲಿ ಕಳೆದಿತ್ತು, ಕೆಸರ ಮೇಲಣ ಪಯಣ, ಇವರ ಬಾಲ್ಯ ಯವ್ವನದ ಜೀವನ. ಸರೋವರದ ಆಳವನ್ನು ಲೆಕ್ಕಿಸದೆ ಕೆಸರನ್ನು ಕೊಡವಿಕೊಂಡು ನೀರ ಮೇಲೆದ್ದು…

Read More

ಸಾಗರ : ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲೆ, ತಾಲೂಕು, ಹೋಬಳಿ ಸಮಿತಿ ಮತ್ತು ಚೆನ್ನಮ್ಮಾಜಿ ಜಾನಪದ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 6ನೇ ಜಾನಪದ ಸಮ್ಮೇಳನ ದಿನಾಂಕ 09 ಮಾರ್ಚ್ 2025ರ ಭಾನುವಾರದಂದು ಸಾಗರ ತಾಲೂಕಿನ ಆನಂದಪುರ ಸಮೀಪದ ಚನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ “ಮಲೆನಾಡು ಜಾನಪದ ಕ್ಷೇತ್ರಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದು ಅಂತಹ ಸೂಕ್ಷ್ಮ ಜಾನಪದ ಸಂಗತಿಗಳ ದಾಖಲೀಕರಣ ಆಗಬೇಕಿದೆ. ಮೌಖಿಕ ಪರಂಪರೆ ನಮಗೆ ಅಪಾರ ಕೊಡುಗೆ ನೀಡಿದೆ. ನೂರಾರು ವರ್ಷಗಳ ಜಾನಪದ, ಸಾಹಿತ್ಯ ಹಾಗೂ ಮೌಖಿಕ ಪರಂಪರೆಯನ್ನು ದಾಖಲಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಅಂತಹ ಅಮೂಲ್ಯ ಜಾನಪದ ಸಂಪತ್ತನ್ನು ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಿಲ್ಲೆಯಲ್ಲಿ ನಡೆದಿರುವ ಜಾನಪದ ಸಾಹಿತ್ಯ ಪರಂಪರೆ, ಚಳವಳಿಗಳು, ಸಾಹಿತ್ಯ ಕೃಷಿ ಎಲ್ಲವೂ ಇಡೀ ರಾಜ್ಯಕ್ಕೆ ಹೊಸ ದಿಕ್ಕನ್ನು ತೋರಿಸಿವೆ” ಎಂದರು. ಸಮ್ಮೇಳನಾಧ್ಯಕ್ಷ ಟಾಕಪ್ಪ ಬಿ. ಕಣ್ಣೂರು…

Read More