Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರಾವಳಿಯ ನಾಟ್ಯಪ್ರಪಂಚಕ್ಕೆ ಮಹಾನ್ ಕೊಡುಗೆ ನೀಡಿದ ಪಂದನಲ್ಲೂರು ಶೈಲಿಯ ಭರತನಾಟ್ಯ ನಿಪುಣೆ, ನೃತ್ಯಗುರು ಕಮಲಾ ಭಟ್ ಅವರ ಸ್ಮರಣಾರ್ಥವಾಗಿ ಕರಂಗಲ್ಪಾಡಿಯ ಸುಬ್ರಹ್ಮಣ್ಯ ಸಭಾ ಸದನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಅವರ ಶಿಷ್ಯೆ ವಿನಯ ರಾವ್ ಆಯೋಜಿಸಿದ್ದ ‘ಕಮಲಾಂಜಲಿ’ ಕಾರ್ಯಕ್ರಮವು ದಿನಾಂಕ 10 ಏಪ್ರಿಲ್ 2025ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ತನ್ನ ಶಿಷ್ಯೆಯ ಸಂಸ್ಮರಣೆ ಮಾಡುತ್ತಾ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ “ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ನಗರಾದ್ಯಂತ ಪ್ರಚಾರ ಮಾಡಿ, ನೂರಾರು ಪ್ರತಿಭಾಶಾಲಿ ಶಿಷ್ಯರನ್ನು ತಯಾರಿಸಿ, ನೃತ್ಯಜಗತ್ತಿಗೆ ಮಹತ್ತರ ಕೊಡುಗೆ ನೀಡಿದ ಕಮಲಾ ಭಟ್ ಅವರು ತಮ್ಮ ಜೀವನವನ್ನೆಲ್ಲ ಕಲಾಸೇವೆಗೆ ಅರ್ಪಿಸಿರುವರು. ಸುಧೀರ್ಘ 45 ವರ್ಷಗಳ ನಟರಾಜನ ಸೇವೆ ಮಾಡಿದ ಅವರು, ಕಲೆಯೇ ದೇವತೆ, ಕಲೆಯೇ ಧರ್ಮ ಎಂಬ ಭಾವನೆಯೊಂದಿಗೆ ತಮ್ಮ ತಪಸ್ಸನ್ನು ಮುಂದುವರಿಸಿದ್ದರು. ಅವರ ಶಿಷ್ಯರು ಇಂದು ನೃತ್ಯದ ಸಂಸ್ಕೃತಿಯನ್ನು ಮುಂದುವರೆಸುತ್ತಿರುವುದು ನಿಜವಾದ ಅರ್ಥದ ಗುರುಪರಂಪರೆಯ ಪ್ರತೀಕವಾಗಿದೆ” ಎಂದು ಹೇಳಿದರು. “ಕಮಲಾ…
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸಹಕಾರದಲ್ಲಿ, ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಬೇಕಲ ರಾಮ ನಾಯಕರವರ ಬದುಕು – ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮವು ದಿನಾಂಕ 27 ಏಪ್ರಿಲ್ 2025ರಂದು ಅಪರಾಹ್ನ 2-00 ಗಂಟೆಗೆ ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ವಸಂತ ಚುಟುಕು ಕವಿಗೋಷ್ಠಿಯಲ್ಲಿ ಕಾಸರಗೋಡು ಜಿಲ್ಲೆಯ ಆಸಕ್ತ ಕವಿಗಳಿಗೆ ಚುಟುಕುಗಳನ್ನು ವಾಚಿಸಲು ಅವಕಾಶವಿದೆ. ಚುಟುಕು ಕವನಕ್ಕೆ ವಿಷಯ ನಿರ್ಬಂಧವಿಲ್ಲ. ಒಬ್ಬರು ನಾಲ್ಕು ಸಾಲಿನ ಉತ್ತಮ ಎನಿಸುವ ಮೂರು ಚುಟುಕುಗಳನ್ನು ವಾಚಿಸಬಹುದು. ಆಸಕ್ತರು ದಿನಾಂಕ 20 ಏಪ್ರಿಲ್ 2025ರ ಮೊದಲು 9447490344 ಸಂಖ್ಯೆಗೆ ವಾಟ್ಸಪ್ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ತಿಳಿಸಬೇಕೆಂದು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ತಿಳಿಸಿದ್ದಾರೆ.
ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ (ರಿ.) ತೆಕ್ಕಟ್ಟೆ ಮತ್ತು ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಚಂದಕ್ಕಿ ಬಾರೇ ಕಥೆ ಹೇಳೆ’ ರಜಾ ರಂಗು 2025 ಬೇಸಿಗೆ ಶಿಬಿರವು ದಿನಾಂಕ 11 ಏಪ್ರಿಲ್ 2025ರಂದು ಸೇವಾಸಂಗಮದ ನಿಸರ್ಗದಲ್ಲಿ ಉದ್ಘಾಟನೆಗೊಂಡಿತು. ಚಿಟ್ಟೆ ಬುತ್ತಿಯನ್ನು ಬಿಚ್ಚಿಡುವ ಮೂಲಕ ಈ ಶಿಬಿರವನ್ನು ಉದ್ಘಾಟಿಸಿದ ರಂಗಕರ್ಮಿ ಡಾ. ಶ್ರೀಪಾದ ಭಟ್ ಇವರು ಮಾತನಾಡಿ “ಕಥೆಯ ಮುಖೇನ ಅನೇಕ ವಿಷಯವನ್ನು ಮಂಡಿಸುವುದಕ್ಕೆ ಸಾಧ್ಯವಾಗುತ್ತದೆ. ಕಥೆಗೆ ದೇಹದ ಪ್ರತೀ ಅಂಗಾಂಗಗಳೂ ಪ್ರಾಮುಖ್ಯ. ದೇಹದ ಯಾವುದೇ ಒಂದು ಅಂಗಾಂಗಳನ್ನು ಉಪಯೋಗಿಸದೇ ಕಥೆ ಹೇಳಿದರೆ ಅದು ಅಷ್ಟು ಸ್ವಾರಸ್ಯಕರವಾಗಿ ಪರಿಣಾಮ ಬೀರುವುದಿಲ್ಲ. ಮಕ್ಕಳ ಚಲನವಲನಗಳಿಗೆ ಮಹತ್ವ ನೀಡಿ ಪರಿಣಾಮಕಾರಿಯಾಗಿ ಸಮಾಜಮುಖಿಯಾಗಿ ಸ್ಪಂದಿಸುವುದಕ್ಕೆ ಕಥೆ ಹೇಳುವ ರೀತಿಯನ್ನು ಅರಿತಿರಬೇಕು. ‘ರಜಾರಂಗು-25’ ಮಕ್ಕಳ ಬೇಸಿಗೆ ಶಿಬಿರವು ಕಥೆಗಳ ಆಧಾರಿತ ಚಿತ್ರ, ನೃತ್ಯ, ಆಟ, ಪಾಠಗಳನ್ನು ಕಲಿಸುತ್ತದೆ” ಎಂದು ಹೇಳಿದರು. ಶಿಬಿರದ ಮೌಲ್ಯವನ್ನು ಉತ್ಕೃಷ್ಟ ಮಟ್ಟದಲ್ಲಿ ಕಂಡುಕೊಂಡ…
ಮಂಗಳೂರು : ಸಮುದಾಯ ಮಂಗಳೂರು, ಭಗತ್ ಸಿಂಗ್ ಮೆಮೊರಿಯಲ್ ಟ್ರಸ್ಟ್ (ರಿ.) ಪಂಜಿಮೊಗರು ಮತ್ತು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರು ಇವರ ಸಂಯುಕ್ತ ಆಶ್ರಯದಲ್ಲಿ ‘ಚಿಣ್ಣರ ಸಂಭ್ರಮ 2025’ ಬೇಸಿಗೆ ರಜಾ ಶಿಬಿರವನ್ನು ದಿನಾಂಕ 13 ಏಪ್ರಿಲ್ 2025ರಿಂದ 16 ಏಪ್ರಿಲ್ 2025ರವೆರೆಗೆ ಪಂಜಿಮೊಗರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಉಚಿತ ಶಿಬಿರದಲ್ಲಿ 4ನೇ ತರಗತಿ ಮೇಲ್ಪಟ್ಟ ಯಾವುದೇ ಶಾಲೆಯ ಮಕ್ಕಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9448427787, 8050107203 ಮತ್ತು 7795309161 ಸಂಖ್ಯೆಯನ್ನು ಸಂಪರ್ಕಿಸಿರಿ.
ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ (ರಿ.) ಹಾಗೂ ಮೋಹನ ತರಂಗಿಣಿ ಸಂಗೀತ ಸಭಾ ಇದರ ‘76ನೇ ವಾರ್ಷಿಕ ಸಂಗೀತ ನೃತ್ಯ ಸಂಭ್ರಮ ಹಾಗೂ ಶರಣ ನುಲಿಯ ಚಂದಯ್ಯ, ಬುದ್ಧ, ಬಸವ, ಡಾ. ಬಿ.ಆರ್. ಅಂಬೇಡ್ಕರ್ ಜಯಂತೋತ್ಸವದ ಪ್ರಯುಕ್ತ ದಿನಾಂಕ 13 ಮತ್ತು 14 ಏಪ್ರಿಲ್ 2025ರಂದು ಮಧ್ಯಾಹ್ನ 2-30 ಗಂಟೆಗೆ ವಿದ್ಯಾಲಯದ 2ನೇ ಮಹಡಿಯಲ್ಲಿ ‘ಅಮ್ಮನ ನೆನಪಿನಂಗಳದಲ್ಲಿ ಅಪ್ಪನ ಶತಮಾನೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 13 ಏಪ್ರಿಲ್ 2025ರಂದು ಕೀರ್ತಿಶೇಷರಾದ ಶ್ರೀಮತಿ ಶಾರದಮ್ಮ ಗುರು ಕರ್ನಾಟಕ ಕಲಾಶ್ರೀ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಗಾಮದ ಶ್ರೀ ಕೆ. ಮಂಜಪ್ಪರವರ ಸ್ಮರಣಾರ್ಥ ‘ಮಂಜುದಾಸ ರಾಜ್ಯ ಪ್ರಶಸ್ತಿ’ಯನ್ನು ಖ್ಯಾತ ಸಂಗೀತ ನಿರ್ದೇಶಕರು ಶ್ರೀ ವಿ. ಮನೋಹರ ಇವರಿಗೆ ಪ್ರದಾನ ಮಾಡಲಾಗುವುದು. ವಿದುಷಿ ಶ್ರೀಮತಿ ಕೆ.ಎಸ್. ದಾಕ್ಷಾಯಣಿ ರಾಜಕುಮಾರ, ವಿದುಷಿ ಶ್ರೀಮತಿ ಕೆ.ಎಸ್. ದಮಯಂತಿ ರಾಮಸ್ವಾಮಿ ಹಾಗೂ ವಿದ್ಯಾರ್ಥಿಗಳಿಂದ ದಾಸವಾಣಿ, ವಿದುಷಿ ಶ್ರೀಮತಿ ಲೀನಾ ದತ್ತಾತ್ರೇಯ ಫಡ್ನಾವಿಸ್ ಇವರ ಹಿಂದೂಸ್ಥಾನಿ ಗಾಯನಕ್ಕೆ…
ಬಿ.ಸಿ. ರೋಡು : ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ತುಳು ಬದುಕು ವಸ್ತು ಸಂಗ್ರಹಾಲಯ (ರಿ.) ಸಂಚಯಗಿರಿ ಬಿ.ಸಿ. ರೋಡು ಇದರ ವತಿಯಿಂದ ‘ರಾಣಿ ಅಬ್ಬಕ್ಕ ಬಹುಮುಖ ಚಿಂತನೆ ವಿಚಾರಗೋಷ್ಠಿ’ಯನ್ನು ದಿನಾಂಕ 18 ಏಪ್ರಿಲ್ 2025ರಂದು ಬೆಳಗ್ಗೆ 9-30 ಗಂಟೆಗೆ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಇತಿಹಾಸ ಸಂಶೋಧಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಇವರು ವಹಿಸಲಿದ್ದು, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರು ಉದ್ಘಾಟನೆ ಮಾಡಲಿರುವರು. ಬೆಳಗ್ಗೆ 11-30 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು, ಗೋಷ್ಠಿ 01ರಲ್ಲಿ ‘ಉಳ್ಳಾಲದ ಅಬ್ಬಕ್ಕ ರಾಣಿಯರು ಐತಿಹಾಸಿಕ ನೆಲೆ’ ಎಂಬ ವಿಷಯದ ಬಗ್ಗೆ ‘ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಮಾಲತಿ ಕೃಷ್ಣಮೂರ್ತಿ, ಗೋಷ್ಠಿ 02ರಲ್ಲಿ ‘ಕಾದಂಬರಿಗಳಲ್ಲಿ ರಾಣಿ ಅಬ್ಬಕ್ಕ’ ಎಂಬ ವಿಷಯದ ಬಗ್ಗೆ ವಿಶ್ರಾಂತ ಉಪನ್ಯಾಸಕರಾದ ಡಾ. ವಿ.ಕೆ. ಯಾದವ, ಗೋಷ್ಠಿ 03ರಲ್ಲಿ ‘ರಂಗಭೂಮಿಯಲ್ಲಿ ರಾಣಿ…
ಕಾಸರಗೋಡು : ಕರ್ನಾಟಕ ರಾಜ್ಯದ ಹಿರಿಯ ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟನೆಯಾದ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ 44ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025ರಂದು ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಹಳೆ ನಾಟಕಗಳ ಸವಿನೆನಪು, ಕಾಸರಗೋಡು ಕನ್ನಡ ನಾಟಕೋತ್ಸವದಲ್ಲಿ ನಾಲ್ಕು ಕನ್ನಡ ನಾಟಕಗಳ ಪ್ರದರ್ಶನ ಮತ್ತು ಕರ್ನಾಟಕ ಗಡಿನಾಡ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ.ಎಂ. ತಿಮ್ಮಯ್ಯ ಬೆಂಗಳೂರು ಇವರ ಸಾರಥ್ಯದಲ್ಲಿ ಈ ನಾಲ್ಕು ಕನ್ನಡ ನಾಟಕಗಳು ಗಡಿನಾಡಿನ ಕಾಸರಗೋಡು ಕನ್ನಡ ಗ್ರಾಮದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿರುತ್ತದೆ. ಬೆಂಗಳೂರಿನ ರೂಪ ಕಲಾನಿಕೇತನ ಅಭಿನಯಿಸುವ ಎನ್.ಎಸ್. ರಾವ್ ವಿರಚಿತ ‘ವರ ಭ್ರಷ್ಟ’…
ಬೆಂಗಳೂರು : ಜಂಗಮ ಕಲೆಕ್ಟಿವ್ ಬೆಂಗಳೂರು ಪ್ರಸ್ತುತ ಪಡಿಸುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟಿದ ದಿನದ ಆಚರಣೆಯನ್ನು ದಿನಾಂಕ 13 ಏಪ್ರಿಲ್ 2025ರಂದು ಬೆಂಗಳೂರಿನ ಸ್ಪೂರ್ತಿಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10-00 ಗಂಟೆಗೆ ‘ಬ್ಲೂಮಿಂಗ್ ಬಾಬಾ ಸಾಹೇಬ್’ ಕಲೆಯ ಮೂಲಕ ಮಕ್ಕಳಿಗೆ ಅಂಬೇಡ್ಕರ್ ಜಗತ್ತಿನ ಪರಿಚಯ, 11-00 ಗಂಟೆಗೆ ‘ವೈಟಿಂಗ್ ಫಾರ್ ಅ ವೀಸಾ’ ಅಂಬೇಡ್ಕರ್ ಅವರ ಕೃತಿಯ ಓದು ಮತ್ತು ಚರ್ಚೆ, 2-30 ಗಂಟೆಗೆ ‘ನಾಟಕ ಮತ್ತು ಹಾಡಿನ ಕಮ್ಮಟ’, ಅಂಬೇಡ್ಕರ್ ಫೋಟೋ ಪ್ರದರ್ಶನ ಮತ್ತು 7-00 ಗಂಟೆಗೆ ಜಂಗಮ ಕಲೆಕ್ಟಿವ್ ತಂಡದವರಿಂದ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ ಪ್ರದರ್ಶನ ನಡೆಯಲಿದೆ.
ಉಡುಪಿ : ಹಿರಿಯ ಸಾಹಿತಿ, ರಂಗಕರ್ಮಿ ಹಾಗೂ ವಿಮರ್ಶಕಿ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಇವರು 2025ನೇ ಸಾಲಿನ ಶ್ರೀಯುತ ಈಶ್ವರಯ್ಯ ಅನಂತಪುರ ಇವರ ಹೆಸರಿನಲ್ಲಿ ಕೊಡಲ್ಪಡುವ ‘ಕಲಾ ಪ್ರವೀಣ’ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ‘ಕಲಾವಿಹಾರಿ’ ಶ್ರೀಯುತ ಎ. ಈಶ್ವರಯ್ಯ ಅವರ ಹೆಸರನಲ್ಲಿ ಅವರ ಕುಟುಂಬವು ರಾಗ ಧನ ಉಡುಪಿ ಸಂಸ್ಥೆಯ ಮೂಲಕ ವರ್ಷಪ್ರತಿ ಕೊಡಮಾಡುವ ‘ಕಲಾ ಪ್ರವೀಣ’ ಪ್ರಶಸ್ತಿಗೆ ಈ ಬಾರಿ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಇವರು ಆಯ್ಕೆಯಾಗಿರುತ್ತಾರೆ ಎಂದು ಶ್ರೀ ಈಶ್ವರಯ್ಯ ಅನಂತಪುರ ಅವರ ಸಹೋದರ ಶ್ರೀಕೃಷ್ಣಯ್ಯ ಅನಂತಪುರ, ಮಗ ಶೈಲೇಂದ್ರ ಅನಂತಪುರ ಮತ್ತು ಕುಟುಂಬದವರು ತಿಳಿಸಿರುತ್ತಾರೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ. ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ : ಕನ್ನಡ ಸಾಹಿತ್ಯ ಲೋಕದ ಪ್ರಖ್ಯಾತ ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ ನಾಟಕಗಳ ಖ್ಯಾತ ವಿಮರ್ಶಕಿಯೂ ಕೂಡ. ಮಾತ್ರವಲ್ಲ ಕೂಚಿಪುಡಿ ನೃತ್ಯ ಕಲಾವಿದೆ ಮತ್ತು ಸಂಗೀತ ವಿಮರ್ಶೆಯಲ್ಲೂ ಪಳಗಿದವರು. ಕನ್ನಡ ಎಂ.ಎ.ಯಲ್ಲಿ ಡಿಸ್ಟಿಂಕ್ಷನ್…
ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)’ ಇದರ ವತಿಯಿಂದ ಡಾ. ಸುನೀತಾ ಎಂ. ಶೆಟ್ಟಿ ದತ್ತಿನಿಧಿ ಪ್ರಾಯೋಜಿತ ‘ತೌಳವ ಸಿರಿ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 12 ಏಪ್ರಿಲ್ 2025ರಂದು ಅಪರಾಹ್ನ 2-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಅಶೋಕ ನಗರ ಕಚೇರಿ ಬಳಿಯಿರುವ ‘ಸಾಹಿತ್ಯ ಸದನ’ದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕ.ಲೇ.ವಾ. ಸಂಘ ಇವರ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರು ವಹಿಸಲಿದ್ದು, ಲೇಖಕಿ ಪತ್ರಕರ್ತೆ ಶ್ರೀಮತಿ ಜಯಂತಿ ಎಸ್. ಬಂಗೇರ ಇವರಿಗೆ ‘ತೌಳವ ಸಿರಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.