Subscribe to Updates
Get the latest creative news from FooBar about art, design and business.
Author: roovari
ಸುಳ್ಯ : ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇತ್ತೀಚೆಗೆ ನಿಧನರಾದ ಜಾನಪದ ವಿದ್ವಾಂಸ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 10-05-2024ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ನಿವೃತ್ತ ವೈದ್ಯಾಧಿಕಾರಿ ಡಾ. ಎಸ್. ರಂಗಯ್ಯ, ಕಸಾಪ ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಭ್ರಪ್ಪಾಡಿ, ನಿವೃತ್ತ ಪ್ರಾಂಶುಪಾಲೆ ಡಾ. ರೇವತಿ ನಂದನ್ ಇವರು ಪಾಲ್ತಾಡಿಯವರು ತುಳು ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಅವರ ಸಾಹಿತ್ಯ ಸಾಧನೆಗೆ ದೊಡ್ಡ ಪ್ರಶಸ್ತಿ ಸಿಗಬೇಕಿತ್ತು ಎಂದು ಹೇಳಿದರು. ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಕಸಾಪ ಗೌರವ ಕೋಶಾಧಿಕಾರಿ ದಯಾನಂದ ಆಳ್ವ, ನಿರ್ದೇಶಕರುಗಳಾದ ಯೋಗಿಶ್ ಹೊಸೊಳಿಕೆ, ರಮೇಶ್ ನೀರಬಿದಿರೆ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಸಾವಿತ್ರಿ ಕಣೆಮರಡ್ಕ ಉಪಸ್ಥಿತರಿದ್ದರು.…
ಉಡುಪಿ : ರಾಗ ಧನ ಉಡುಪಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ‘ರಾಗರತ್ನ ಮಾಲಿಕೆ’ -24 ಸಂಗೀತ ಕಾರ್ಯಕ್ರಮವು ದಿನಾಂಕ 21-05-2024 ಮತ್ತು 22-05-2204ರಂದು ಮಣಿಪಾಲ ಅಲೆವೂರು ರಸ್ತೆ, ಮಣಿಪಾಲ ಡಾಟ್ ನೆಟ್ ಇಲ್ಲಿ ನಡೆಯಲಿದೆ. ದಿನಾಂಕ 21-05-2024 ಮತ್ತು 22-05-2204ರಂದು ಗುರುಗುಹಾಮೃತ ಸಂಸ್ಥೆಯ ವತಿಯಿಂದ ಮುತ್ತುಸ್ವಾಮಿ ದೀಕ್ಷಿತರ ಅಪರೂಪದ ಕೀರ್ತನೆಗಳ ‘ಸಂಗೀತ ಕಾರ್ಯಾಗಾರ’ವನ್ನು ಸಂಪನ್ಮೂಲ ವ್ಯಕ್ತಿಯಾಗಿ ಚೆನ್ನೈಯ ಶ್ರೀ ಜಿ. ರವಿಕಿರಣ್ ಇವರು ನಡೆಸಿಕೊಡಲಿದ್ದಾರೆ. ದಿನಾಂಕ 21-05-2024ರಂದು ಅಪರಾಹ್ನ ಗಂಟೆ 2-30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಇವರು ಸಂಗೀತ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ದಿನಾಂಕ 22-05-2204ರಂದು ಅಪರಾಹ್ನ ಗಂಟೆ 2-00ರಿಂದ ಶಿಬಿರಾರ್ಥಿಗಳಿಂದ ಅಭ್ಯಾಸಕ್ರಮ, ಗಂಟೆ 2-55ರಿಂದ ಕರ್ನಾಟಕ ಸಂಗೀತ ಕಛೇರಿಯಲ್ಲಿ ಉಡುಪಿಯ ಪ್ರಣತಿ ಎಸ್. ಭಟ್ ಮತ್ತು ಧೃತಿ ಎಸ್. ಭಟ್ ಇವರಿಂದ ದ್ವಂದ್ವ ಹಾಡುಗಾರಿಕೆ ನಡೆಯಲಿದೆ. ತನ್ಮಯೀ ಉಪ್ಪಂಗಳ ವಯೊಲಿನ್ ಮತ್ತು ನಾರಾಯಣ ಬಳ್ಳಕ್ಕೂರಾಯ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಬಸವ ಜಯಂತಿ’ ಕಾರ್ಯಕ್ರಮವು ದಿನಾಂಕ 10-05-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿಯವರು ಮಾತನಾಡಿ “ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ ಕಲ್ಯಾಣ ಕ್ರಾಂತಿಯ ಮೂಲಕ ಸಮಾನತೆಯ ಆಶಯವನ್ನು ಎತ್ತಿ ಹಿಡಿದ ಬಸವಣ್ಣನವರ ಕೊಡುಗೆ ಅಪಾರ. ಬಸವಣ್ಣನವರು ಸಾಹಿತ್ಯದಲ್ಲಿ ಸರಳತೆಯನ್ನು ತಂದು ಜನ ಸಾಮಾನ್ಯರನ್ನು ತಲುಪಿದವರು. ಗಹನ ವೇದಾಂತವನ್ನು ಸರಳವಾಗಿ ಜನರ ಬಳಿಗೆ ತಂದವರು. ಅನುಭವ ಮಂಟಪದ ಪರಿಕಲ್ಪನೆಯ ಮೂಲಕ ಸಮಾಜದ ಎಲ್ಲರನ್ನೂ ಒಂದುಗೂಡಿಸಿದವರು. ಅವರ ತಾತ್ವಿಕ ಮೌಲ್ಯಗಳನ್ನು ಭಾರತದ ಸಂವಿಧಾನ ಕೂಡ ಅಳವಡಿಸಿಕೊಂಡಿದೆ ಈ ಘೋಷಣೆಯ ಮೂಲಕ ಬಸವಣ್ಣನವರ ಚಿಂತನಗಳು ಎಲ್ಲೆಡೆ ಪಸರಿಸಲು ಅನುಕೂಲವಾಗುವುದು” ಎಂದು ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿಯವರು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ಬಸವಣ್ಣನವರ ಜೀವನ ಸಾಧನೆಯನ್ನು ಪ್ರಸಾರ ಮಾಡುವಲ್ಲಿ ಬಹಳ ಹಿಂದಿನಿಂದಲೂ ಶ್ರಮಿಸುತ್ತಾ ಬಂದಿದೆ.…
ವ್ಯಕ್ತಿ, ಕುಟುಂಬ ಮತ್ತು ಸಮುದಾಯಗಳ ಕತೆಯನ್ನು ಏಕಕಾಲಕ್ಕೆ ಹೇಳುತ್ತಾ ತನ್ನೆಲ್ಲ ಸಂಕೀರ್ಣತೆಯೊಂದಿಗೆ ಬಿಚ್ಚಿಕೊಳ್ಳುವ ‘ದೇವ’ ಕಾದಂಬರಿಯು ಶ್ರೀಮತಿ ಎ.ಪಿ. ಮಾಲತಿಯವರ ಅನನ್ಯ ರಚನೆಗಳಲ್ಲೊಂದು. ಕಥಾನಾಯಕನಾದ ದೇವನ ಚಿಂತೆ, ಚಿಂತನೆ ಮತ್ತು ಚಟುವಟಿಕೆಗಳು ಕಾದಂಬರಿಯ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿದ್ದು ಅವನ ಸುತ್ತ ಜರಗುವ ವಿದ್ಯಮಾನಗಳು ಕೃತಿಯ ವಿನ್ಯಾಸವನ್ನು ರೂಪಿಸಿವೆ. ದೇವನ ಆದರ್ಶ, ಕನಸು, ಶೋಧ ಮತ್ತು ಪ್ರಗತಿಪರ ಚಟುವಟಿಕೆಗಳನ್ನು ದಾಖಲಿಸುತ್ತಾ ಅವನ ವ್ಯಕ್ತಿತ್ವದೊಳಗಿನ ವ್ಯಂಗ್ಯ ವೈರುಧ್ಯ ಮತ್ತು ನೈತಿಕ ಸಂಘರ್ಷಗಳನ್ನು ವಿವರಿಸುವ ಲೇಖಕಿಯ ಕಥನ ಕೌಶಲ ಗಮನ ಸೆಳೆಯುತ್ತದೆ. ದೇವನ ಸಾಕು ತಂದೆ ಈಶ್ವರಯ್ಯನವರು ತಮ್ಮ ಬದುಕಿನ ಕೊನೆಯ ದಿನಗಳಂದು ಅವನ ಜನ್ಮರಹಸ್ಯವನ್ನು ತಿಳಿಸಿದ ಬಳಿಕ ಕಾದಂಬರಿಯು ಹೊಸ ತಿರುವನ್ನು ಪಡೆದುಕೊಳ್ಳುತ್ತದೆ. ತಾನು ಈಶ್ವರಯ್ಯ-ನಾಗಮ್ಮ ದಂಪತಿಗಳ ಮಗನಲ್ಲವೆಂದೂ, ದಲಿತ ಹೆಂಗಸಿನಿಂದ ಉಪೇಕ್ಷಿತನಾದ ತನ್ನನ್ನು ಅವರು ಸ್ವಂತ ಮಗನಂತೆ ಬೆಳೆಸುತ್ತಾ ಬಂದಿದ್ದರು ಎಂಬುದನ್ನು ತಿಳಿದು ಆಘಾತಗೊಂಡ ದೇವನು ತನ್ನ ಬದುಕಿನ ಸತ್ಯವನ್ನು ದಿಟ್ಟತನದಿಂದ ಸ್ವೀಕರಿಸಿದರೂ ಅದನ್ನು ಅರಗಿಸಿಕೊಳ್ಳಲು ವಿಫಲನಾಗುತ್ತಾನೆ. ಬೆಳೆಯುವ ಅಥವಾ ಬೆಳೆಸುವ ಕ್ರಮದಲ್ಲಿ…
ಉಡುಪಿ : ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಉಡುಪಿ ಮತ್ತು ಉಡುಪಿ ಜಿಲ್ಲಾ ಶ್ರೀ ವಿಶ್ವಕರ್ಮ ಎಜ್ಯೂಕೇಶನಲ್ ಟ್ರಸ್ಟ್ (ರಿ) ಉಡುಪಿ ಇವುಗಳ ಸಹಯೋಗದಲ್ಲಿ ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ಇದರ ರಜತಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ‘ಗ್ರಂಥ ಲೋಕಾರ್ಪಣ ಸಮಾರಂಭ’ವು ದಿನಾಂಕ 12-05-2024ರಂದು ಉಡುಪಿಯ ಕುಂಜಿಬೆಟ್ಟು ಇಲ್ಲಿರುವ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿಯ ಆರ್.ವಿ.ಎಸ್. ಸಂಘದ ಅಧ್ಯಕ್ಷರಾದ ಶ್ರೀ ವೇಕಟೇಶ ಆಚಾರ್ಯ ಇವರು ವಹಿಸಲಿದ್ದು, ಉಡುಪಿಯ ಅಲೆವೂರು ಪ್ರಭಾಕರ ಆಚಾರ್ಯ ಸ್ಮಾರಕ ಶಿಕ್ಷಣ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀ ವಿಶ್ವನಾಥ ರಾವ್ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಹಚಿಂತನದ ಪ್ರಕಾಶಕರಾದ ಶ್ರೀ ಎಸ್. ವಿ. ಆಚಾರ್ಯ ಇವರು ಕೃತಿ ಲೋಕಾರ್ಪಣ ಮಾಡಲಿದ್ದು, ಅಧ್ಯಾಪಕರಾದ ಶ್ರೀ ರಮೇಶ್ ವಿ. ಆಚಾರ್ಯ ಮತ್ತು ವಿಶ್ವಕರ್ಮ ಎಜ್ಯೂಕೇಶನಲ್ ಟ್ರಸ್ಟಿನ ಅಧ್ಯಕ್ಷರಾದ ಇಂ.ಬಿ.ಎ. ಆಚಾರ್ಯ ಇವರುಗಳು ಕೃತಿ ಪರಿಚಯ ಮಾಡಲಿದ್ದಾರೆ.
ಉಡುಪಿ : ಚಲನಚಿತ್ರ ನಟ, ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರ ಸಾರಥ್ಯದಲ್ಲಿ ‘ಘರ್ ಘರ್ ಕೊಂಕಣಿ’ ಕಾರ್ಯಕ್ರಮವು ಈಗಾಗಲೇ ಗಡಿನಾಡು ಕೇರಳ ಹಾಗೂ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಯಶಸ್ವಿಗೊಂಡಿದ್ದು, ದಿನಾಂಕ 12-05-2024ರಂದು ಉಡುಪಿಯ ಆಸುಪಾಸಿನಲ್ಲಿ ನಡೆಯಲಿದೆ. ಬೆಳಗ್ಗೆ 10-00 ಗಂಟೆಗೆ 152ನೇ ಕಾರ್ಯಕ್ರಮವು ಉಡುಪಿಯ ಅಂಬಲ್ಪಾಡಿ, ಕಿದಿಯೂರ್ ರಸ್ತೆ, 4ನೇ ಅಡ್ಡ ರಸ್ತೆ, ‘ದರ್ಶನ್’ ಇಲ್ಲಿ ಶ್ರೀಮತಿ ದೀಪಾ ಮತ್ತು ಎಂ. ದಿನೇಶ್ ಭಂಡಾರಿ ಇವರ ಆತಿಥ್ಯದಲ್ಲಿ, 11-30 ಗಂಟೆಗೆ 153ನೇ ಕಾರ್ಯಕ್ರಮವು ಉಡುಪಿಯ ಬನ್ನಂಜೆ, ಬಿ.ಬಿ. ಗರಡಿ ರೋಡ್, ‘ಗಣೇಶ್ ಪ್ರಸಾದ್’ ಇಲ್ಲಿ ಶ್ರೀಮತಿ ಕಲ್ಪನಾ ಎಸ್. ಶೇಟ್ ಮತ್ತು ಶ್ರೀ ಸುಬ್ರಹ್ಮಣ್ಯ ಶೇಟ್ ಇವರ ಆತಿಥ್ಯದಲ್ಲಿ, 02-30 ಗಂಟೆಗೆ 154ನೇ ಕಾರ್ಯಕ್ರಮವು ಉಡುಪಿಯ ಸಿಟಿ ಹಾಸ್ಪಿಟಲ್ ಲಾಗ್ಗಿ, ಕಾಡಬೆಟ್ಟು, ‘ವೈಕುಂಠ ಭವನ್’ ಇಲ್ಲಿ ಶ್ರೀಮತಿ ಪ್ರಿಯಾ ಎಸ್. ಕಾಮತ್ ಇವರ ಆತಿಥ್ಯದಲ್ಲಿ ಹಾಗೂ 04-15…
ಮಂಗಳೂರು : ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸುವ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ಕುಮಾರಿ ಮಹತಿ ಪಾವನಸ್ಕರ ಇವರ ‘ಭರತನಾಟ್ಯ ರಂಗಪ್ರವೇಶ’ವು ದಿನಾಂಕ 12-05-2024ರಂದು ಸಂಜೆ 5-30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಗುರು ಉಳ್ಳಾಲ ಮೋಹನ್ ಕುಮಾರ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ಆಸ್ರಣ್ಣ ಮತ್ತು ಬಂಟ್ವಾಳದ ಕಶೆಕೋಡಿ ಸೂರ್ಯ ನಾರಾಯಣ ಭಟ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗಂನಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ, ಹಾಡುಗಾರಿಕೆಯಲ್ಲಿ ಚೆನ್ನೈಯ ವಿದ್ವಾನ್ ಶ್ರೀಕಾಂತ್ ಗೋಪಾಲ ಕೃಷ್ಣನ್, ಮೃದಂಗದಲ್ಲಿ ಚೆನ್ನೈಯ ವಿದ್ವಾನ್ ಕಾರ್ತಿಕೇಯನ್ ರಮಾನಾಥನ್, ಕೊಳಲು ಬೆಂಗಳೂರಿನ ವಿದ್ವಾನ್ ರಘು ನಂದನ್ ರಾಮಕೃಷ್ಣ ಮತ್ತು ವೀಣೆಯಲ್ಲಿ ಚೆನ್ನೈಯ ವಿದ್ವಾನ್ ಅನಂತ ನಾರಾಯಣ ಇವರುಗಳು ಸಹಕರಿಸಲಿದ್ದಾರೆ.
ಉಡುಪಿ : ಖ್ಯಾತ ವಿಮರ್ಶಕ ಪ್ರೊ. ವಿ.ಎಂ. ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಖ್ಯಾತ ವಿಮರ್ಶಕ ಡಾ. ಎ. ಮೋಹನ್ ಕುಂಟಾರ್ ಅವರ ‘ಸ್ವಗತ ಮತ್ತು ಸಂವಾದ ವಿಮರ್ಶಾಕೃತಿಯು 2023ರ ಸಾಲಿಗೆ ಆಯ್ಕೆಯಾಗಿದೆಯೆಂದು ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯನ್ನು ದಿನಾಂಕ 27-05-2024ರಂದು ಎಂ.ಜಿ.ಎಂ ಕಾಲೇಜಿನಲ್ಲಿ ನಡೆಯಲಿರುವ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುವುದು. ಕನ್ನಡದಲ್ಲಿ ಎಂ. ಎ., ಎಂ. ಫಿಲ್, ಪಿ. ಎಚ್. ಡಿ. ಪದವಿಯನ್ನು ಹೊಂದಿರುವ ಡಾ. ಎ. ಮೋಹನ್ ಕುಂಟಾರ್ ಮಲೆಯಾಳಂ ಮತ್ತು ತಮಿಳು ಭಾಷೆಯಲ್ಲಿ ಸರ್ಟಿಫಿಕೇಟ್ ಹಾಗೂ ತೆಲುಗಿನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇಲ್ಲಿನ ಭಾಷಾಂತರ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಉದ್ಯೋಗಕ್ಕೆ ಸೇರಿ ಉಪನ್ಯಾಸಕರಾಗಿ, ಪ್ರವಾಚಕರಾಗಿ ಪ್ರಸ್ತುತ ಭಾಷಾಂತರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರು ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. 15…
ಕೋಟ : ಕೇಂದ್ರ ಲಲಿತ ಕಲಾ ಅಕಾಡೆಮಿಯಿಂದ ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತರಾದ ಕೋಟ ಹಂದಟ್ಟಿನ ಎಚ್. ಜಿ. ಗಣೇಶ್ ಉರಾಳರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ‘ಆಧುನಿಕ ಭಾರತೀಯ ಶಿಲ್ಪ ಕಲೆಯಲ್ಲಿ ಅಭಿವ್ಯಕ್ತಿತ ಗ್ರಾಮ್ಯ ರೂಪಾಕಾರಗಳ ಪುನರಭಿವ್ಯಕ್ತಿ’ ಎಂಬ ವಿಷಯಕ್ಕೆ ಸಂಬಂಧಿಸಿ ಮಂಡಿಸಿದ ಪಿ. ಎಚ್. ಡಿ. ಪ್ರೌಢ ಪ್ರಬಂಧಕ್ಕೆ ಶಿಲ್ಪಕಲಾ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಕೋಟದ ಯಕ್ಷಗಾನ ಮತ್ತು ನಾಟಕ ಪ್ರಸಾಧನ ತಜ್ಞ ಎಚ್. ಗೋವಿಂದ ಉರಾಳ ಮತ್ತು ನಾಗರತ್ನ ದಂಪತಿಗಳ ಪುತ್ರರಾದ ಇವರು ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡಮಿಯಲ್ಲಿ ‘ಸ್ವರ್ಣ ಪದಕ’ದೊಂದಿಗೆ ಶಿಲ್ಪ ಕಲಾ ಸ್ನಾತಕ ಪದವಿಯನ್ನು ಪಡೆದು, ಮುಂದೆ ಗುಜರಾತಿನ ವಡೋದರದ ‘ದಿ ಮಹಾರಾಜ ಸಯಾಜಿ ರಾವ್ ವಿಶ್ವ ವಿದ್ಯಾನಿಲಯ’ದಲ್ಲಿ ಶಿಲ್ಪ ಕಲಾ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಇದೀಗ ಮಣಿಪಾಲದ ಮಾಹೆಯಲ್ಲಿ ‘ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್’ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಂಭವಿ ಗಿಳಿಯಾರು ಶಾಲೆ,…
ಪುತ್ತೂರು : ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರ ವಿವೇಕಾನಂದ ಕಾಲೇಜು ಪುತ್ತೂರು ಇವರು ಕೊಡಮಾಡುವ ಶ್ರೀ ನಿರಂಜನ ಪ್ರಶಸ್ತಿ 2023 ಹಾಗೂ ಶ್ರೀ ಸಿದ್ಧಮೂಲೆ ಶಂಕರನಾರಾಯಣ ಭಟ್ಟರು ಸ್ಥಾಪಿಸಿ ವಿದ್ವಾಂಸರಿಗೆ ನೀಡುವ ಶ್ರೀ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 09-05-2024ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಶ್ರೀ ನಿರಂಜನ ಪ್ರಶಸ್ತಿ 2023ರನ್ನು ಹಿರಿಯ ಸಾಹಿತಿಗಳಾದ ಪ್ರೊ. ಶ್ರೀ ವಿ. ಬಿ. ಅರ್ತಿಕಜೆಯವರಿಗೆ ಹಾಗೂ ಶ್ರೀ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನಕ್ಕೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಶ್ರೀ ನಿರಂಜನ ವಾನಳ್ಳಿ ಮತ್ತು ಬೆಟ್ಪಂಪಾಡಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ವರದರಾಜ ಚಂದ್ರಗಿರಿಯವರು ಅಭಿನಂದನಾ ಮಾತುಗಳನ್ನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೃಷ್ಣ ಭಟ್, ವಿವೇಕಾನಂದ ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ, ಕಾರ್ಯದರ್ಶಿಗಳಾದ ಮುರಳಿ ಕೃಷ್ಣ…