Subscribe to Updates
Get the latest creative news from FooBar about art, design and business.
Author: roovari
ಅಂಕೋಲಾ ಶಹರದಿಂದ ತುಸು ದೂರದಲ್ಲಿರುವ ‘ವಂದಿಗೆಯೆಂಬ ಪುಟ್ಟ ಗ್ರಾಮವು ಅಂಕೋಲಾದ ಸುತ್ತಲಿನ ಹತ್ತೂರುಗಳಲ್ಲಿ ಸುಪರಿಚಿತಗೊಳ್ಳುವಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದ ನಾಯಕದಯರಾದ ವಿ.ಜೆ ಹಾಗೂ ವಿಠೋಬ ನಾಯಕರವರಿಂದ ಎನ್ನುವಲ್ಲಿ ಕೊಂಚವೂ ಉತೇಕ್ಷೆಯಿಲ್ಲ. ವಿಠೋಬ ನಾಯಕರವರು ಎಂಬತ್ತೆಂಟು ಸಂವತ್ಸರಗಳ ತುಂಬು ಬದುಕನ್ನು ಕಂಡವರು. ಅವರದು ನಾಡವರ ಕಟ್ಟುಮಸ್ತಾದ ಗಟ್ಟುಮುಟ್ಟಿನ ಮೈಕಟ್ಟು, ಉದ್ದನೆಯ ಆಳು, ನೀಳವಾದ ತೋಳು, ಹವಳದಂತೆ ಹೊಳೆಯುವ ಕವಳ ತುಂಬಿದ ತುಟಿಯ ನಗು, ಅಗಲವಾದ ಹಣೆ, ಆಕರ್ಷಕ ಕಂಗಳು, ವಿಸ್ತಾರವಾಗಿರುವ ಎದೆ, ಸುಮ್ಮನೆ ಮಾತನಾಡಿದರೂ ‘ಝಲ್’ ಎನ್ನಿಸುವ ಸಿರಿಕಂಠ ಮತ್ತು ರಾಜಗಾಂಭೀರ್ಯದ ನಡೆ… ಹೀಗೆ ಕಣ್ಣಿಗೆ ಕಟ್ಟುವ ಅವರು ರಂಗದಲ್ಲಿ ಹಾಗೂ ರಂಗದಾಚೆಯೂ ರಂಗಾಗಿಯೇ ಇದ್ದ ಯಕ್ಷಗಾನದ ಅಭಿಜಾತ ಕಲಾವಿದ. ನಾವೆಲ್ಲ ಪ್ರವರ್ಧಮಾನಕ್ಕೆ ಬರುವ ಹೊತ್ತಿನಲ್ಲಿ ವಿಠೋಬಣ್ಣ ರಂಗದಿಂದ ದೂರ ಸುರಿದು ಸಾಕಷ್ಟು ಸಮಯವೇ ಸಂದಿತ್ತು. ಅವರೊಂದಿಗೆ ಒಡನಾಡಿದ ಅವರ ಕಿರಿಯ ಸಮಕಾಲೀನ ಸಹ ಕಲಾವಿದರು ವೇಷ ಮಾಡಿಕೊಳ್ಳುವಾಗಲೆಲ್ಲ “ಇದು ವಂದಿಗೆಯ ವಿಠೋಬ ನಾಯಕರವರು ಮಾಡುತ್ತಿದ್ದ ವೇಷ, ವಿಠೋಬ ನಾಯಕರವರ ನಡೆ ಹಾಗಿತ್ತು.…
ಬೆಂಗಳೂರು : ಆಸ್ಟ್ರೇಲಿಯಾ ದೇಶದ ವಿಕ್ಟೋರಿಯಾ ರಾಜ್ಯದ ರಾಜಧಾನಿಯಾದ ಪಶ್ಚಿಮ ಮೆಲ್ಬೋರ್ನಿನಲ್ಲಿ ವಿಂಡ್ಯಮ್ ಪ್ರದೇಶದ ಕನ್ನಡಿಗರು ಸೇರಿ ಕಟ್ಟಿರುವ ʻವಿಂಡ್ಯಮ್ ಕನ್ನಡ ಬಳಗʼವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ದಿನಾಂಕ : 13-07-2023ರಂದು ವಿಲಿಯನ್ಸ್ ಲ್ಯಾಂಡಿಂಗ್ ನಲ್ಲಿ ಉದ್ಘಾಟಿಸಿದರು. ʻವಿಂಡ್ಯಮ್ ಕನ್ನಡ ಬಳಗʼವನ್ನು ಉದ್ದೇಶಿಸಿ ಮಾತನಾಡಿದ ಡಾ. ಜೋಶಿಯವರು “ಉದ್ಯೋಗ ಅರಸಿ ದೇಶ ಬಿಟ್ಟು ವಿದೇಶಕ್ಕೆ ಬಂದರೂ ಸ್ವಂತಿಕೆಯನ್ನು ಬಿಡದೇ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಳ್ಳುವ ಮೂಲಕ ನಿಜವಾದ ಕನ್ನಡ ಭಾಷೆಯ ರಾಯಭಾರಿಗಳು ಪಶ್ಚಿಮ ಮೆಲ್ಬೋರ್ನಿನಲ್ಲಿ ನೆಲೆಸಿರುವ ‘ವಿಂಡ್ಯಮ್ ಕನ್ನಡ ಬಳಗ’ದ ಸದಸ್ಯರು ಎಂದು ಶ್ಲಾಘಿಸಿದರು. ಕಳೆದ 15 ವರ್ಷಗಳಿಂದ ಇಲ್ಲಿ ನೆಲೆ ನಿಂತಿರುವ ಕನ್ನಡಿಗರು ಪ್ರತೀ ವರ್ಷವೂ ರಾಜ್ಯೋತ್ಸವವನ್ನು ಆಚರಿಸುತ್ತಾ ಕನ್ನಡದ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಇರುವ ಕನ್ನಡಿಗರ ಮಕ್ಕಳಿಗೆ ಹಾಗೂ ಕನ್ನಡ ಭಾಷಾಭಿಮಾನ ಇರುವ ಇತರರಿಗೂ ಕನ್ನಡ ಕಲಿಸುವ ಕೆಲಸವನ್ನು ವಿಂಡ್ಯಮ್ ಕನ್ನಡ ಬಳಗ ಮಾಡುತ್ತ ಬಂದಿದೆ. ಇಂತಹ ಕನ್ನಡಿಗರ…
ಮಂಗಳೂರು : ಕುಳಾಯಿ ಹೊಸಬೆಟ್ಟಿನ ಶ್ರೀ ಶಾರದಾ ನಾಟ್ಯಾಲಯದಲ್ಲಿ ದಿನಾಂಕ :03-07-2023ರಂದು ಗುರು ಪೂರ್ಣಿಮಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀ ಶ್ರೀಕಾಂತ್ ಚಿಪ್ಳೂಣ್ಕರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರನ್ನು ಶ್ರೀ ಶಾರದಾ ನಾಟ್ಯಾಲಯದ ನೃತ್ಯ ನಿರ್ದೇಶಕಿ ವಿದುಷಿ ಶ್ರೀಮತಿ ಭಾರತಿ ಸುರೇಶ್ ಇವರು ಆತ್ಮೀಯವಾಗಿ ಸನ್ಮಾನಿಸಿದರು. ಗೌರವ ಸ್ವೀಕರಿಸಿದ ಶ್ರೀ ಶ್ರೀಕಾಂತ್ ಚಿಪ್ಳೂಣ್ಕರ್ ಅವರು ಗುರು ಪೂರ್ಣಿಮೆ ಹಾಗೂ ಗುರುಗಳ ಮಹತ್ವದ ಬಗ್ಗೆ ಶಾರದಾ ನಾಟ್ಯಾಲಯದ ಮಕ್ಕಳಿಗೆ ತಿಳಿಸಿ ಹೇಳಿದರು. ವಿದುಷಿ ಪ್ರಣತಿ ಸತೀಶ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ನಿರ್ದೇಶಕಿ ವಿದುಷಿ ಭಾರತಿ ಸುರೇಶ್ ವಂದಿಸಿದರು. ನಂತರ ಸಂಸ್ಥೆಯ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿ ಪ್ರಸ್ತುತ ಪಡಿಸುವ ‘ನೃತ್ಯಾಂತರಂಗ’ದ 101ನೇ ಸರಣಿ ಕಾರ್ಯಕ್ರಮವು ದಿನಾಂಕ :01-07-2023ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಕಡಬದ ವಿಶ್ವಮೋಹನ ಸಂಸ್ಥೆಯ ಗುರು ಮಾನಸ ಪುನೀತ್ ರೈಯವರ ಶಿಷ್ಯೆಯರಾದ ಕುಮಾರಿ ಪ್ರಣಮ್ಯಾ ಪಿ.ರಾವ್ ಮತ್ತು ಕುಮಾರಿ ಸ್ನೇಹಾ ಪಿ.ರಾವ್ ಇವರು ನೃತ್ಯ ಕಾರ್ಯಕ್ರಮ ನೀಡಿದರು. ಅಕಾಡಮಿಯ ಪುಟಾಣಿ ವಿದ್ಯಾರ್ಥಿಗಳಾದ ಆದ್ಯ, ವೃದ್ಧಿ ರೈ, ಆರುಷಿ ರೈ, ಮೇಧಾ ಘಾಟೆ, ಯಶ್ವಿ, ಧನ್ವಿ ಮತ್ತು ತಪಸ್ಯಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೃತ್ಯಾಶಾಲೆಯ ರೂಢಿಯಂತೆ ಮಂಗಳಮಯ ಓಂಕಾರ ನಾದವು ವಿದುಷಿ ಪ್ರೀತಿಕಲಾ ಹಾಗೂ ಶಂಖನಾದ ವಿದ್ವಾನ್ ಗಿರೀಶ್ ಕುಮಾರ್ ಇವರಿಂದ ನಡೆಯಿತು. ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದಂತಹ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹೇಶ್ ನಿಟಿಲಾಪುರ ಇವರು ದೀಪ ಬೆಳಗಿ ಕಾರ್ಯಕ್ರಮ ಪ್ರಾರಂಭಿಸಿದರು. ಕುಮಾರಿ ಮಾತಂಗಿಯವರು ಪಂಚಾಂಗ ಪಠಣವನ್ನು ನಡೆಸಿಕೊಟ್ಟರು. ನಂತರ ಈ ಕಲಾ ಶಾಲೆಯ ಮತ್ತೊಂದು ಪುಟಾಣಿಗಳ ತಂಡದಲ್ಲಿರುವ ಶಾರ್ವರಿ ರೈ, ನಿಯತಿ,…
ಸುರತ್ಕಲ್ : ಎಂ.ಆರ್.ಪಿ.ಎಲ್. ಸಂಸ್ಥೆಯವರು ನಡೆಸುತ್ತಿರುವ ಸ್ವಚ್ಛತಾ ಪಕ್ವಾಡದ ಅಂಗವಾಗಿ ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಆ್ಯಂಡ್ ರೇಂಜರ್ಸ್ ಹಾಗೂ ಜೂನಿಯರ್ ರೆಡ್ ಕ್ರಾಸ್ ಯೂನಿಟ್ ಸಹಯೋಗದಲ್ಲಿ ಕಾಲೇಜಿನ ಆವರಣದಿಂದ ಸುರತ್ಕಲ್ ಪೇಟೆಯವರೆಗೆ ಸ್ವಚ್ಛತಾ ಜಾಗೃತಿ ಜಾಥಾ ದಿನಾಂಕ : 12-07-2023ರಂದು ನಡೆಯಿತು. ಇದರ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ “ಸ್ವಚ್ಛತೆ ನಮ್ಮ ಧ್ಯೇಯ” ಎಂಬ ಶೀರ್ಷಿಕೆಯ ಬೀದಿ ನಾಟಕ ಸ್ವಚ್ಚತೆಯ ಕುರಿತು ಜನರಲ್ಲಿ ಅರಿವು ಮೂಡಿಸಿತು. ಈ ನಾಟಕವನ್ನು ವಿದ್ಯಾರ್ಥಿ ಶ್ರೀ ವಿನೀತ್ ರಾಜ್ ಮಧ್ಯ ರಚಿಸಿ, ಹಿನ್ನೆಲೆ ಸಂಗೀತ ನೀಡಿದರು ಹಾಗೂ ಉಪನ್ಯಾಸಕ, ರಂಗಕರ್ಮಿ ಶ್ರೀ ರಾಕೇಶ್ ಹೊಸಬೆಟ್ಟು ಬೀದಿ ನಾಟಕವನ್ನು ನಿರ್ದೇಶಿಸಿದರು. ಈ ಬೀದಿನಾಟಕದಲ್ಲಿ ಸುಮಾರು 45 ವಿದ್ಯಾರ್ಥಿಗಳು ಅಭಿನಯಿಸಿ ನೆರೆದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಇದರ ರಿಜಿಸ್ಟ್ರಾರ್ ಪ್ರೊ. ವಿನೀತಾ ರೈ ಅವರು ಮುಖ್ಯ ಅತಿಥಿಗಳಾಗಿ…
ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ ಹಾಗೂ ವಾಸವಿ ಸಾಹಿತ್ಯ ಕಲಾ ವೇದಿಕೆ ಪ್ರಸ್ತುತ ಪಡಿಸುವ ‘ಸಾಹಿತಿಗಳೊಂದಿಗೆ ಒಂದು ಸಂಜೆ’ ಆನ್ಲೈನ್ ಕಾರ್ಯಕ್ರಮವು ದಿನಾಂಕ : 16-07-2023 ರವಿವಾರ ಸಂಜೆ 6-30ಕ್ಕೆ ನಡೆಯಲಿದೆ. ಇದು ಈ ಸರಣಿ ಕಾರ್ಯಕ್ರಮದ 100ನೇ ಆವೃತ್ತಿಯಾಗಿದ್ದು, ಪ್ರಖ್ಯಾತ ಸಾಹಿತಿಯಾದ ಶ್ರೀ ಚಂದ್ರಶೇಖರ ನಾವುಡ ಬೈಂದೂರು ಈ ಬಾರಿ ಅತಿಥಿಯಾಗಿ ಭಾಗವಹಿಸಿ ‘ಸೈನ್ಯ ಛಾವಣಿ ಒಳಗಿನ ಬದುಕು’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಈ ಆನ್ಲೈನ್ ಕಾರ್ಯಕ್ರಮವನ್ನು ಝೂಮ್ ಲಿಂಕ್ https://bit.ly/2UbE22Z, ಮೀಟಿಂಗ್ ಐಡಿ 5940765774 ಮತ್ತು ಪಾಸ್ ಕೋಡ್ imaksb ಮೂಲಕ ಭಾಗವಹಿಸಬಹುದು. ಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷರಾದ ಡಾ.ಶಿವಾನಂದ ಕುಬಸದ, ಭಾ.ವೈ ಸಂ ಕರ್ನಾಟಕ ಶಾಖೆಯ ರಾಜ್ಯಾಧ್ಯಕ್ಷರಾದ ಡಾ. ಶಿವಕುಮಾರ್ ಲಕ್ಕೊಳ್, ಗೌರವ ಕಾರ್ಯದರ್ಶಿಗಳಾದ ಡಾ. ಕರುಣಾಕರ ಬಿ.ಪಿ. ಹಾಗೂ ಸುಳ್ಯದ ವಾಸವಿ ಸಾಹಿತ್ಯ ಕಲಾವೇದಿಕೆಯ ಡಾ. ವೀಣಾ ಎನ್. ಎಲ್ಲರಿಗೂ ಈ ಆನ್ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ದಿನಾಂಕ : 13-07-2023ರಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥರ ನೇತೃತ್ವದ ಒಂದು ತಂಡವು ನಾಲ್ವರು ಹಿರಿಯ ಸಾಹಿತಿಗಳ ಮನೆಗೆ ಹೋಗಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಪುರಸ್ಕರಿಸಿತು. ಮಂಗಳೂರು ಪರಿಸರದ ಹಿರಿಯ ಸಾಹಿತಿಗಳಾದ ಪ್ರೊ. ಕೆ.ಟಿ. ಗಟ್ಟಿ, ಡಾ. ವಾಮನ ನಂದಾವರ, ಶ್ರೀ ಸದಾನಂದ ಸುವರ್ಣ, ಶ್ರೀ ಕೇಶವ ಕುಡ್ಲ ಇವರುಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿತು. ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಜಿಲ್ಲಾ ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ಕಿರಣಪ್ರಸಾದ್ ರೈ, ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮಂಜುನಾಥ್ ರೇವಣ್ಕರ್, ಎಂ.ಪಿ. ಸಾಕೇತ್ ರಾವ್ ಮುಂತಾದವರು ಜಿಲ್ಲಾ ಕಸಾಪ ತಂಡದಲ್ಲಿದ್ದರು. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸಹಕಾರ-ಸಹಯೋಗ ಪಡೆಯುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಹಾಗೂ ಸಾಹಿತ್ಯ ಪರಿಷತ್ತಿನ ಪದನಿಮಿತ್ತ ಸದಸ್ಯರಾಗಿರುವ ಕರ್ನಾಟಕ…
ಪಡುಬಿದ್ರಿ: ಯಕ್ಷಶಿಕ್ಷಣ ಟ್ರಸ್ಟ್ ಇವರ ಸಹಯೋಗದಲ್ಲಿ ಯಕ್ಷಗಾನದ ತರಗತಿಯು ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ದಿನಾಂಕ : 12-07-2023ರಂದು ಆರಂಭವಾಯಿತು. ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಶ್ರೀ ಎಮ್. ಗಂಗಾಧರ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ “ಮಕ್ಕಳಿಗೆ ಪುರಾಣ ಜ್ಞಾನ, ಭಾರತೀಯ ಸಂಸ್ಕೃತಿಯ ತಿಳಿವನ್ನು ಹೆಚ್ಚಿಸಿಕೊಳ್ಳಲು ಯಕ್ಷಗಾನ ಸಹಕಾರಿಯಾಗಿದೆ” ಎಂದು ಹೇಳಿದರು. ಕಲಾರಂಗದ ಉಪಾಧ್ಯಕ್ಷರಾದ ಶ್ರೀ ವಿ.ಜಿ.ಶೆಟ್ಟರು ಶುಭ ಹಾರೈಸಿದರು. ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ ಮುರಳಿ ಕಡೇಕಾರ್ ಮಾತನಾಡಿ, “ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಯಕ್ಷಶಿಕ್ಷಣ ಸಹಕಾರಿ ಎಂಬುದನ್ನು ಅರಿತ ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಅವರ ವಿಶೇಷ ಆಸಕ್ತಿಯಿಂದಾಗಿ ಈ ಬಾರಿ ಕಾಪು ವಿಧಾನಸಭಾ ವ್ಯಾಪ್ತಿಯ 15 ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಗತಿ ಆರಂಭಿಸಲಾಗಿದೆ” ಎಂದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಅನುರಾಧಾ ಪಿ.ಎಸ್. ಇವರು ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಅಶೋಕ ಕೆ. ಇವರು ಧನ್ಯವಾದ ಸಮರ್ಪಿಸಿ, ಸಂಸ್ಕೃತ ಭಾಷಾ ಶಿಕ್ಷಕರಾದ ಡಾ. ರಾಘವೇಂದ್ರ…
ಉಡುಪಿ : ರಾಗ ಧನ ಉಡುಪಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶ್ರೀಮತಿ ಶಂಕರಿ ಬಿ. ಭಟ್ ಉಪ್ಪಂಗಳ, ಶ್ರೀಮತಿ ಅನಿತಾ ವರದೇಶ್ ಮಣಿಪಾಲ ಹಾಗೂ ಶ್ರೀಮತಿ ಗಾಯತ್ರಿ ಮನೋಹರ್ ಪರ್ಕಳ ಇವರ ಆತಿಥ್ಯ ಮತ್ತು ಸಹ ಪ್ರಾಯೋಜಕತ್ವದಲ್ಲಿ ಪ್ರಸ್ತುತ ಪಡಿಸುವ ಗೃಹ ಸಂಗೀತ ಕಾರ್ಯಕ್ರಮ ‘ರಾಗ ರತ್ನ ಮಾಲಿಕೆ’ -14 ದಿನಾಂಕ 15-07-2023 ಶನಿವಾರ ಸಂಜೆ ಉಡುಪಿ ಜಿಲ್ಲೆಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಮಾಧವಿ ಎಸ್. ಭಟ್ ಪೆರ್ಣಂಕಿಲ, ಶ್ರೀಮತಿ ಲಲಿತಾ ಶ್ರೀರಾಮ್ ಮತ್ತು ಶ್ರೀಮತಿ ಸರಸ್ವತಿ ಇವರಿಂದ ಕೀರ್ತನೆಗಳ ಪ್ರಸ್ತುತಿ ನಡೆಯಲಿದೆ. ಇವರಿಗೆ ವಯೊಲಿನ್ ನಲ್ಲಿ ಶ್ರೀಮತಿ ಶರ್ಮಿಳಾ ರಾವ್ ಹಾಗೂ ಮೃದಂಗದಲ್ಲಿ ಶ್ರೀ ಬಾಲಚಂದ್ರ ಭಾಗವತ್ ಸಹಕರಿಸಲಿದ್ದಾರೆ. ಇದರ ಬಳಿಕ ವಿಜಯವಾಡದ ಮಲ್ಲಾಡಿ ಸಹೋದರರಾದ ಮಲ್ಲಾಡಿ ಶ್ರೀರಾಮ್ ಪ್ರಸಾದ್ ಹಾಗೂ ಡಾ. ಮಲ್ಲಾಡಿ ರವಿಕುಮಾರ್ ಇವರುಗಳಿಂದ ದ್ವಂದ್ವ ಹಾಡುಗಾರಿಕೆ ನಡೆಯಲಿದೆ. ಇವರ ಹಾಡುಗಾರಿಕೆಗೆ ವಯೊಲಿನ್…
ಮಂಗಳೂರು : ಚಕ್ರಪಾಣಿ ನೃತ್ಯ ಕಲಾಕೇಂದ್ರ (ರಿ.) ಅತ್ತಾವರ ಮಂಗಳೂರು ಇದರ ವತಿಯಿಂದ ಗುರುಪೂರ್ಣಿಮೆ ಹಬ್ಬ ಹಾಗೂ ಮಾತಾ ಪಿತರ ಪಾದಪೂಜೆಯು ಚಕ್ರಪಾಣಿ ಕಲಾಮಂಟಪದಲ್ಲಿ ದಿನಾಂಕ : 09-07-2023ರಂದು ಜರುಗಿತು. ಚಕ್ರಪಾಣಿ ದೇಗುಲದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ತಾಯಿ ಮತ್ತು ತಂದೆಯರ ಪಾದಪೂಜೆ ನಡೆಯಿತು. “ಮಕ್ಕಳಿಗೆ ಶಾಲೆಯಲ್ಲಿ ಸಿಗುವ ಶಿಕ್ಷಣ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ಪಡೆಯುತ್ತದೆಯೋ ಅಷ್ಟೇ ಮೌಲ್ಯ ಶಿಕ್ಷಣ ಕೂಡ ಮಕ್ಕಳ ಬೆಳವಣಿಗೆಗೆ ಕಾರಣವಾಗುತ್ತದೆ. ಮಕ್ಕಳು ಮನೆಯ ವಾತಾವರಣ, ಶಿಸ್ತು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಜೀವನದ ಗುರಿಯನ್ನು ಅತೀ ಸುಲಭದಲ್ಲಿ ತಲುಪಲು ಸಾಧ್ಯ.” ಎಂದು ಶಿಕ್ಷಣ ತಜ್ಞೆ ಮತ್ತು ಆಪ್ತ ಸಮಾಲೋಚಕಿ ಶ್ರೀಮತಿ ಸುಮತಿ ಪೈ ಹೇಳಿದರು. ಈ ಸಂದರ್ಭದಲ್ಲಿ ಶ್ರೀಮತಿ ಮಯೂರಿ ಅತ್ತಾವರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಸುರೇಶ್ ಅತ್ತಾವರ್ ಇವರು ಸ್ವಾಗತಿಸಿ, ಶ್ರೀಮತಿ ಮಲ್ಲಿಕಾ ಸುರೇಶ್ ವಂದನಾರ್ಪಣೆಗೈದರು.