Author: roovari

ಬೆಂಗಳೂರು: ಮಾ. ಚಿರಂತ್ ಭಾರಧ್ವಾಜ್ ‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಕೇವಲ ಹನ್ನೊಂದು ವರ್ಷಗಳ ಬಾಲಕ ಬಹುಮುಖ ಪ್ರತಿಭಾವಂತ. ಶ್ರೀ ಭೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಓದುತ್ತಿರುವ ಚಿರಂತ್ ಗೆ ಬಾಲ್ಯದಿಂದಲೂ ನಾಟಕ-ಸಂಗೀತ ಮತ್ತು ನೃತ್ಯಗಳಲ್ಲಿ ಅಪರಿಮಿತ ಆಸಕ್ತಿ. ಶ್ರೀಮತಿ ಪರಿಮಳ ಅರಳುಮಲ್ಲಿಗೆ ಅವರಲ್ಲಿ ಭರತನಾಟ್ಯವನ್ನು ಕಲಿತಿರುವ ಕೈವಾರದ ಶಿವಪ್ರಸಾದ್ ಶಾಸ್ತ್ರೀ ಮತ್ತು ಉಷಾ ದಂಪತಿಗಳ ಪ್ರೀತಿಯ ಪುತ್ರ. ಸತತ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡಿರುವ ಇವನು ಬೆಂಗಳೂರಿನ ಕೆ. ಬೃಂದಾ ಅವರಲ್ಲಿ ಹೆಚ್ಚಿನ ತರಬೇತಿ ಪಡೆದು, ತನ್ನ ಭರತನಾಟ್ಯ ನೃತ್ಯ ಪ್ರದರ್ಶನವನ್ನು 29-10-2023ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಕೈವಾರದ ಯೋಗಿ ನಾರಾಯಣ ಆಶ್ರಮದ ಸಭಾಂಗಣದಲ್ಲಿ ಕಲಾರಸಿಕರ ಸಮ್ಮುಖದಲ್ಲಿ ನರ್ತಿಸಲಿದ್ದಾನೆ. ಅತ್ಯುತ್ಸಾಹಿ -ಚಟುವಟಿಕೆಯ ಚಿಲುಮೆಯಾದ ಚಿರಂತನ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೆರಿಸಿಕೊಳ್ಳಲಿದ್ದಾನೆ. ಇವನ ಕಲಾಪ್ರತಿಭೆಯನ್ನು ಸಾಕ್ಷಾತ್ಕರಿಸಲು ಎಲ್ಲ ಕಲಾರಸಿಕರಿಗೂ ಆದರದ ಸುಸ್ವಾಗತ. ಕೈವಾರದ ಶ್ರೀ ಶಿವಪ್ರಸಾದ್ ಶಾಸ್ತ್ರೀ ಮತ್ತು ಬಿ.ಎಸ್.ಉಷಾ ಅವರ ಪುತ್ರಿ ಆರ್. ಸಿಂಧೂ ಅವರ ಪುತ್ರ ಚಿರಂತ್ ಬಾಲ್ಯದಿಂದಲೂ ತುಂಬಾ ತೀಕ್ಷ್ಣಮತಿ. ದತ್ತುಪುತ್ರನಾದ…

Read More

ಬೆಂಗಳೂರು : ಬೆಂಗಳೂರಿನ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಡಾ.ನರಹಳ್ಳಿ ಪ್ರತಿಷ್ಠಾನ ಹಾಗೂ ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ‘ನರಹಳ್ಳಿ ಪ್ರಶಸ್ತಿ’ ಮತ್ತು ‘ನರಹಳ್ಳಿ ದಶಮಾನ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 08-10-2023ರಂದು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ್‌ ಮೂರ್ತಿಯವರು ಮಾತನಾಡುತ್ತಾ “ಕನ್ನಡ ಸಾಹಿತ್ಯ ಯಾವತ್ತೂ ನಿಂತ ನೀರಾಗಿಲ್ಲ. ಸದಾ ಹರಿಯುವ ಕಾವೇರಿ ನದಿಯಂತೆ. ಹಳೆ ಲೇಖಕರು ಬರೆಯುತ್ತಿರುವಾಗಲೇ ಹೊಸ ಲೇಖಕರು ಹುಟ್ಟುತ್ತಿರುತ್ತಾರೆ. ಈ ಕನ್ನಡ ಸಾಹಿತ್ಯ ಪರಂಪರೆಯನ್ನು ಮುಂದುವರಿಸುವವರೇ ಯುವ ಪೀಳಿಗೆ. ಕನ್ನಡ ಕಾವ್ಯ ಪರಂಪರೆ ಯುವ ಸಮೂಹದ ಬರಹ, ಲೇಖನಗಳ ಮೂಲಕ ನಿತ್ಯ ನಿರಂತರವಾಗಿ ಮುಂದುವರಿಯಬೇಕು. ಇಂತಹ ಬೆಳವಣಿಗೆ ಸಾಧ್ಯವಾದಾಗ ಕನ್ನಡ ಸಾಹಿತ್ಯ ಇನ್ನಷ್ಟು ಪರಿಪಕ್ವತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿನಿತ್ಯ ನಾವುಗಳೆಲ್ಲರೂ ಗಮನಿಸುತ್ತಿದ್ದೇವೆ ಹೊಸ ಕವಿಗಳು, ಕಥೆಗಾರರು, ಭಿನ್ನ ಭಿನ್ನ ವಿಮರ್ಶಕರು ಹುಟ್ಟುತ್ತಿರುವಂತಹ ಕನ್ನಡ ಸಾಹಿತ್ಯಕ್ಕೆ ಕೊನೆಯೆಂಬುದು ಇಲ್ಲ ಎಂದು ಭಾವಿಸುವೆ. ಇಂತಹ ಸಾಹಿತ್ಯವನ್ನು ಎಚ್ಚರ, ಜಾಗೃತಿಗೊಳಿಸಲು ನಾಡಿನೆಲ್ಲೆಡೆ ಹಲವು ಸಂಸ್ಥೆಗಳು, ಪ್ರತಿಷ್ಠಾನಗಳು ಮುಂದಾಗುತ್ತಿರುವುದು ಒಳ್ಳೆಯ…

Read More

ಪುತ್ತೂರು : ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ತುಳು ಸಂಘ, ಮಾನವಿಕ ಸಂಘ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ನಡೆದ ತುಳು ಸಂಘದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 13-10-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ತುಳು ಮೌಖಿಕ ಸಾಹಿತ್ಯ’ ಎಂಬ ವಿಷಯದ ಕುರಿತು ಮಾತನಾಡಿದ ಪುತ್ತೂರಿನ ತುಳು ಕೂಟದ ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ “ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಪಾರಂಪರಿಕವಾಗಿ ಶ್ರೀಮಂತಿಕೆಯನ್ನು ಹೊಂದಿದ ತುಳುನಾಡಿನ ವೈಶಿಷ್ಟಗಳನ್ನು ಜನಪದ ಸಾಹಿತ್ಯವು ತಿಳಿಸಿಕೊಡುತ್ತದೆ. ತುಳುನಾಡಿನಲ್ಲಿ ದೈವಗಳ ಶಕ್ತಿ ಅಪಾರ. ಅಂತಹ ದೈವದ ಕಥೆಯನ್ನು ಸಿರಿವಂತಿಕೆಯ ರೂಪದಲ್ಲಿ ತೋರಿಸಿ ಕೊಡುವ ಶ್ರೀಮಂತ ಕಲೆ ಪಾಡ್ದನ. ಇದು ತುಳುನಾಡಿನ ವಿಶೇಷತೆಯನ್ನು ತಿಳಿಸಿ ಕೊಡುತ್ತದೆ. ತುಳುನಾಡಿನಲ್ಲಿ ವೈದಿಕ ಮತ್ತು ಜಾನಪದ ಸಾಹಿತ್ಯದ ಪರಿಕಲ್ಪನೆಗಳು ವಿಭಿನ್ನ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ ಬಿ. “ತುಳುನಾಡು ಚಾರಿತ್ರ್ಯಿಕವಾದ…

Read More

ಬೆಂಗಳೂರು: ಭಾರತ ನೃತ್ಯೋತ್ಸವದ ಪ್ರತೀಕವಾದ ‘ನಾಟ್ಯ ಪರಂಪರ ಉತ್ಸವ’ವು ಭಾರತ ಮಾತ್ರವಲ್ಲದೆ, ಯು.ಎಸ್, ರಷ್ಯಾ, ತೈವಾನ್, ಕೆನಡಾ ಮುಂತಾದೆಡೆಗಳ ಕುಚಿಪುಡಿ ಮತ್ತು ಇನ್ನಿತರ ನೃತ್ಯಶೈಲಿಗಳ ಖ್ಯಾತ ಕಲಾವಿದರ ನೃತ್ಯ ಪ್ರದರ್ಶನಗಳನ್ನು ಅರ್ಪಿಸುತ್ತ ಬಂದಿರುವುದು ಹೆಗ್ಗಳಿಕೆಯ ಸಂಗತಿ. ಕೋವಿಡ್ ನಂಥ ದುಸ್ತರ ಪರಿಸ್ಥಿತಿಯಲ್ಲೂ ಅಂತರ್ಜಾಲದ ಮೂಲಕ ಕಲೆಯನ್ನು ಜೀವಂತವಾಗಿಡಲು ಸಂಸ್ಥೆ ಪರಿಶ್ರಮಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ನೃತ್ಯೋತ್ಸವವು, ಕಲಾರಸಿಕರ ಬೆಂಬಲ-ಸಹಾಯದ ಜೊತೆಗೆ, ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಮತ್ತು ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂತಾದ ಸರ್ಕಾರಿ ಸಂಸ್ಥೆಗಳ ಆಶ್ರಯ-ಪ್ರೋತ್ಸಾಹಗಳನ್ನು ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ನಾಲ್ಕುದಶಕಗಳಿಂದ ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ಪರಿಶ್ರಮಿಸುತ್ತಿರುವ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ ಸುಮಾರು ಐದುನೂರು ವರ್ಷಗಳ ಇತಿಹಾಸವುಳ್ಳ ಕೂಚಿಪುಡಿ ನೃತ್ಯಶೈಲಿಯ ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ ಅವರ ಎರಡನೆಯ ಪರಂಪರೆಗೆ ಸೇರಿದವರು. ಇವರು ತಮ್ಮ ಅಸಂಖ್ಯ ನೃತ್ಯಪ್ರದರ್ಶನಗಳಿಂದ ಖ್ಯಾತರಾದವರು. ತಮ್ಮ `ಕೂಚಿಪುಡಿ ಪರಂಪರಾ ಫೌಂಡೆಶನ್ ‘ ಮೂಲಕ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ…

Read More

ಕಾಸರಗೋಡು : ಕಾಸರಗೋಡು ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ರಂಗಚಿನ್ನಾರಿ ಇದರ ಮಹಿಳಾ ಘಟಕ ನಾರಿ ಚಿನ್ನಾರಿಯ 10ನೇ ಸರಣಿ ಕಾರ್ಯಕ್ರಮ ‘ಶರದ್ವಿಲಾಸ’ ದಿನಾಂಕ 29-10- 2023 ಆದಿತ್ಯವಾರ ಅಪರಾಹ್ನ ಗಂಟೆ 2.30 ರಿಂದ ಕಾಸರಗೋಡು ಕರಂದಕ್ಕಾಡು ಇಲ್ಲಿನ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಹೆಸರಾಂತ ಲೇಖಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಉದ್ಘಾಟಿಸಲಿದ್ದು, ನಾರಿ ಚಿನ್ನಾರಿಯ ಕಾರ್ಯಾಧ್ಯಕ್ಷರಾದ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೊರಗ ಸಮುದಾಯದ ಮೊದಲ ಮಹಿಳಾ ಸಾಧಕಿ ಮೀನಾಕ್ಷಿ ಬೊಡ್ಡೋಡಿ ಹಾಗೂ ಮಹಿಳಾ ಉದ್ಯಮಿ ಬಿಂದು ದಾಸ್ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಕವಯತ್ರಿ ವನಜಾಕ್ಷಿ ಚೆಂಬ್ರಕಾನ ಮೀನಾಕ್ಷಿ ಬೊಡ್ಡೋಡಿ ಇವರನ್ನು ಹಾಗೂ ನಾರಿ ಚಿನ್ನಾರಿಯ ಜತೆ ಕಾರ್ಯದರ್ಶಿ ಸರ್ವಮಂಗಳ ಜಯ್ ಪುಣಿಚಿತ್ತಾಯ ಬಿಂದು ದಾಸ್ ಇವರನ್ನು ಪರಿಚಯಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಪರ್ಣಾ ಶೆಟ್ಟಿ ಮತ್ತು…

Read More

ಮುಂಬೈ : ಕಡಬ ಸಂಸ್ಮರಣಾ ಸಮಿತಿ ರಥಬೀದಿ ಮಂಗಳೂರು ಇದರ ಚತುರ್ಥ ವಾರ್ಷಿಕ ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ – 2023’ ಇದಕ್ಕೆ ಹಿರಿಯ ಭಾಗವತ ಶ್ರೀ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಕಾರ್ಯಕ್ರಮವು ದಿನಾಂಕ 29-10-2023ನೇ ಆದಿತ್ಯವಾರ ಅಪರಾಹ್ನ ಗಂಟೆ 2-00 ರಿಂದ ಮುಂಬೈನ ಗೋರೆಗಾಂವ್ (ಪಶ್ಚಿಮ)ದ ಆರೇ ರೋಡ್ ನಲ್ಲಿರುವ ಅಂಬಾಬಾಯಿ ದೇವಸ್ಥಾನದ ಹತ್ತಿರದ ಕೇಶವಗೋರೆ ಸಭಾಗೃಹದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶ್ರೀನಿವಾಸ ಒರ್ನಮೆಂಟ್ ಮುಂಬೈ ಇದರ ಶ್ರೀ ಶ್ರೀಧರ ವಿ. ಆಚಾರ್ಯ ಉದ್ಘಾಟಿಸಲಿದ್ದು, ಮಂಗಳೂರಿನ ರಥಬೀದಿಯ ಕಡಬ ಸಂಸ್ಕರಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬೈ ಇದರ ಅಧ್ಯಕ್ಷರಾದ ಶ್ರೀ ಸದಾನಂದ ಎನ್. ಆಚಾರ್ಯ ಭಾಗವಹಿಸಲಿದ್ದು, ಗೌರವ ಅತಿಥಿಗಳಾಗಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಖ್ಯಾತ ಕನ್ನಡ ಕೊಂಕಣಿ ರಂಗನಟರಾದ ಶ್ರೀ ಕಮಲಾಕ್ಷ ಸರಾಫ್ ಹಾಗೂ…

Read More

ಕಾಸರಗೋಡು : ರಂಗಚಿನ್ನಾರಿ, ಕಾಸರಗೋಡು (ರಿ.) ಇದರ ಸಂಗೀತ ಘಟಕ ಸ್ವರ ಚಿನ್ನಾರಿಯ 1ನೇ ಸರಣಿ ಕಾರ್ಯಕ್ರಮ ‘ಸ್ವರ ಸಂಚಾರ’ ಸಂಗೀತ ಸ್ವರಗಳ ಕಲಿಕೆಯ ಒಂದು ದಿನದ ಶಿಬಿರವು ದಿನಾಂಕ 28.10.2023 ನೇ ಶನಿವಾರ ಬೆಳಿಗ್ಗೆ 9.30 ರಿಂದ  ಕಾಸರಗೋಡು ಕರಂದಕ್ಕಾಡು ಇಲ್ಲಿನ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರು ಹಾಗೂ ಸಂಗೀತ ಗುರುಗಳಾದ ಗಾನಪ್ರವೀಣ ವಿದ್ವಾನ್ ಶ್ರೀ ಯೋಗೀಶ್ ಶರ್ಮ ಬಳ್ಳಪದವು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸ್ವರಚಿನ್ನಾರಿಯ ಗೌರವಾಧ್ಯಕ್ಷರು ಹಾಗೂ ಖ್ಯಾತ ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಮಣಿಪಾಲ ಇದರ ನಿರ್ದೇಶಕಿಯಾದ ವಿದುಷಿ ಶ್ರೀಮತಿ ಉಮಾ ಶಂಕರಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಗಂಟೆ 4.00ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಆಶೀರ್ವದಿಸಲಿದ್ದು, ಖ್ಯಾತ ನೇತ್ರ ತಜ್ಞ ಹಾಗೂ ಸಮಾಜ ಸೇವಕರಾದ ಡಾ. ಅನಂತ್…

Read More

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕವು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಹಾಗೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಮೂಲ್ಕಿ ತಾಲೂಕಿನ ಪ್ರೌಢಶಾಲೆ, ಪದವೀಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕವನ ರಚನೆ ಹಾಗೂ ಕತೆ ರಚನೆಯ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಕವನ ರಚನೆ ಕಾರ್ಯಾಗಾರವು ದಿನಾಂಕ 28-10-2023ರ ಶನಿವಾರ ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನ 1.00 ಗಂಟೆಯ ವರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಶಿಕ್ಷಕಿ ಹಾಗೂ ಬರಹಗಾರ್ತಿಯಾದ  ವಿಜಯಲಕ್ಷ್ಮೀ ಕಟೀಲು ನಡೆಸಿಕೊಡಲಿರುವರು. ಕವಿಗಳಾದ ವಿಲ್ಸನ್ ಕಟೀಲು ಮತ್ತು ಹೇಮಂತಕೃಷ್ಣ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾದಲಿದ್ದಾರೆ. ಕಟೀಲಿನ ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ ಪ್ರೇರಣೆಯ ನುಡಿಗಳನ್ನಾಡಲಿದ್ದಾರೆ. ಕತೆ ರಚನೆ ಕಾರ್ಯಾಗಾರ ಕತೆ ರಚನೆ ಕಾರ್ಯಾಗಾರವು ದಿನಾಂಕ 04-11-2023ರ ಶನಿವಾರ ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನ 1.00 ಗಂಟೆಯ ವರೆಗೆ ಮೂಲ್ಕಿ ಸರಕಾರಿ ಪದವೀಪೂರ್ವ ಕಾಲೇಜು, ಕಾರ್ನಾಡು ಇಲ್ಲಿ ನಡೆಯಲಿದ್ದು, ಬರಹಗಾರರು ಮತ್ತು ಮಂಗಳೂರು ಆಕಾಶವಾಣಿ…

Read More

ಮಂಗಳೂರು : ಶಾಂತಲಾ ಪ್ರಶಸ್ತಿ ಪುರಸ್ಕೃತೆ ದಿ. ಶ್ರೀಮತಿ ಜಯ ಲಕ್ಷ್ಮೀ ಆಳ್ವ ಅವರ 90ನೇ ವರ್ಷದ ಜನ್ಮ ವರ್ಷಾಚರಣೆಯ ಅಂಗವಾಗಿ ಮಂಗಳೂರಿನ ಶ್ರೀದೇವಿ ನೃತ್ಯಕಲಾ ಕೇಂದ್ರ ಆಯೋಜಿಸುವ ‘ನೃತ್ಯೋತ್ಸವ-2023’ ಪ್ರತಿಭಾ ಪ್ರದರ್ಶನ ಹಾಗೂ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆ ದಿನಾಂಕ 27-10-2023 ಮತ್ತು 28-10-2023ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ದಿನಾಂಕ 27-10-2023ರಂದು ಪೂರ್ವಾಹ್ನ ಘಂಟೆ 10.00ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮವನ್ನು ಮಣಿಪುರಿ ನೃತ್ಯದ ಹಿರಿಯ ಪ್ರತಿವಾದಕರಾದ ಪದ್ಮಶ್ರೀ ದರ್ಶನ ಜ್ಹವೇರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನೃತ್ಯಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಆಯ್ದ 20 ಸ್ಪರ್ಧಾಳುಗಳು ಭಾಗವಹಿಸಲಿದ್ದು, ವಿಜೇತರಿಗೆ ‘ಯುವಕಲಾ ಪ್ರಶಸ್ತಿ’ ಪ್ರದಾನಿಸಲಾಗುವುದು.ದಿನಾಂಕ 28-10-2023 ರಂದು ಸಂಜೆ ಘಂಟೆ 5.30ಕ್ಕೆ ನೃತ್ಯ ಗುರು ಕೆ.ಎನ್.ದಂಡಾಯುಧಪಾಣಿ ಒಳ್ಳೈ ಸ್ಮರಣಾರ್ಥ ನೀಡಲಾಗುವ ‘ನಾಟ್ಯಕಲಾ ತಪಸ್ವಿ ಪ್ರಶಸ್ತಿಯನ್ನು ಕಲಾವಿದೆ ಪದ್ಮಶ್ರೀ ಡಾ.ನರ್ತಕಿ ನಟರಾಜ ಚೆನ್ನೈ ಅವರಿಗೆ ಹಾಗೂ ಶ್ರೀಮತಿ ಜಯಲಕ್ಷ್ಮೀ ಆಳ್ವ ಅವರ ಸ್ಮರಣಾರ್ಥ ‘ಜಯ…

Read More

ಮಂಗಳೂರು : ತುಳು ಪರಿಷತ್ ವತಿಯಿಂದ ಮಯೂರಿ ಫೌಂಡೇಶನ್ ಸಹಭಾಗಿತ್ವದಲ್ಲಿ ಮಂಗಳೂರು ಮ್ಯಾಪ್ಸ್ ಕಾಲೇಜಿನಲ್ಲಿ ದಿನಾಂಕ 16-10-2023ರಂದು ಆಯೋಜಿಸಲಾದ ಎರಡನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಸುಳ್ಯ ಬಂಟಮಲೆ ಅಕಾಡೆಮಿ ಅಧ್ಯಕ್ಷ ಎ.ಕೆ.ಹಿಮಕರ ಉದ್ಘಾಟಿಸಿ ಮಾತನಾಡುತ್ತಾ “ಕುಂದಕನ್ನಡ, ಕೊರಗ ಭಾಷೆ ಸೇರಿದಂತೆ ಸಣ್ಣ ಭಾಷೆಗಳ ಬೆಳವಣಿಗೆಗೆ ಅಕಾಡೆಮಿಯ ಸ್ಥಾಪನೆ ಅಗತ್ಯವಿದೆ. ಆಯಾ ಪ್ರದೇಶದ ಜನರು ತಮ್ಮ ಮಿತಿಯಲ್ಲಿ ತಮ್ಮ ಭಾಷೆಯ ಸಂರಕ್ಷಣೆಗಾಗಿ ಕಾರ್ಯಪ್ರವೃತ್ತರಾಗಬೇಕು” ಎಂದು ಹೇಳಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕಿ ಹಾಗೂ ಲೇಖಕಿ ಡಾ. ಮೀನಾಕ್ಷಿ ರಾಮಚಂದ್ರ ಇವರು ಮಾತನಾಡಿ “ತುಳುನಾಡಿನ ಭಾಷಾ ವೈವಿಧ್ಯತೆ ನಮ್ಮ ಪ್ರದೇಶದ ಅನನ್ಯತೆಯಾಗಿದ್ದು, ನಮ್ಮಲ್ಲಿ ಹಲವು ಭಾಷೆಗಳು, ಹಲವು ಧರ್ಮಗಳಿದ್ದರೂ ನಮ್ಮಲ್ಲಿ ಭಾಷಾ ಸಾಮರಸ್ಯದ ಮೂಲಕ ಧರ್ಮ ಸಾಮರಸ್ಯ ನೆಲೆಯಾಗಿದೆ” ಎಂದು ಅಭಿಪ್ರಾಯಪಟ್ಟರು. ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ತುಳುನಾಡಿನ ಹನ್ನೆರಡು ಭಾಷೆಗಳಾದ ತುಳು, ಕನ್ನಡ, ಬ್ಯಾರಿ, ಅರೆಭಾಷೆ, ಕುಂದ ಕನ್ನಡ, ಹವ್ಯಕ ಕನ್ನಡ, ಶಿವಳ್ಳಿ ತುಳು, ಸ್ಥಾನಿಕ ತುಳು, ಕೊರಗ ಭಾಷೆ, ಜಿ.ಎಸ್‌.ಬಿ.…

Read More