Author: roovari

ಮಂಗಳೂರು : ಡಾ. ವಾಮನ ನಂದಾವರ ಅವರ ಬಹುಮಾನಿತ ಕೃತಿಯ ಮೂರನೇ ಮುದ್ರಣ ‘ಸಿಂಗ ದನ’ ಬಿಡುಗಡೆ ಸಮಾರಂಭವು ದಿನಾಂಕ 05-08-2023 ಶನಿವಾರ ಮಧ್ಯಾಹ್ನ 3.30 ಗಂಟೆಗೆ ಬಳ್ಳಾಲ್‌ಬಾಗ್‌, ಪತ್ತು ಮುಡಿ ಸೌಧದಲ್ಲಿ ನಡೆಯಲಿದೆ. ಮೈಸೂರು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನದ ನಿಕಟ ಪೂರ್ವ ಯೋಜನಾ ನಿರ್ದೇಶಕರಾದ ಡಾ. ಬಿ. ಶಿವರಾಮ ಶೆಟ್ಟಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಪುಸ್ತಕ ಬಿಡುಗಡೆಯನ್ನು ಮಾಡಲಿದ್ದಾರೆ. ಡಾ. ವಾಮನ ನಂದಾವರ ಇವರ ಉಪಸ್ಥಿತಿಯಲ್ಲಿ ಶ್ರೀ ಮೌನೇಶ್ ಕುಮಾರ್ ಛಾವಣಿ ಮತ್ತು ಬಳಗದವರಿಂದ ವಚನ, ದಾಸ ಸಾಹಿತ್ಯ ಗಾಯನ ನಡೆಯಲಿದೆ. ಹೇಮಾಂಶು ಪ್ರಕಾಶನದ ಚಂದ್ರಕಲಾ ನಂದಾವರ ಮತ್ತು ಡಾ. ವಾಮನ ನಂದಾವರ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ಸ್ ಕಲ್ಲೂರು ನಾಗೇಶ ಎಲ್ಲರಿಗೂ ಪ್ರೀತಿಯ ಸ್ವಾಗತ ಕೋರಿದ್ದಾರೆ.

Read More

ಬದಿಯಡ್ಕ : ರಾಮಾಯಣ ವಾರಾಚರಣೆ ಸಮಿತಿ ಬದಿಯಡ್ಕ ಇದರ ನೇತೃತ್ವದಲ್ಲಿ ಬದಿಯಡ್ಕ ಶ್ರೀ ರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ಜರಗುತ್ತಿರುವ ರಾಮಾಯಣ ವಾರಾಚರಣೆಯ ಮೂರನೇ ಕಾರ್ಯಕ್ರಮದ ಅಂಗವಾಗಿ ಯಕ್ಷವಿಹಾರಿ ಬದಿಯಡ್ಕ ಇದರ ಆಶ್ರಯದಲ್ಲಿ ‘ತರಣಿಸೇನ ಕಾಳಗ’ ಎಂಬ ಯಕ್ಷಗಾನ ತಾಳಮದ್ದಳೆ ದಿನಾಂಕ 23-07-2023ರಂದು ನಡೆಯಿತು. ಹಿಮ್ಮೇಳದಲ್ಲಿ ಉದಯಶಂಕರ ಭಟ್ ಪಟ್ಟಾಜೆ, ತಲ್ಲಣಾಜೆ ವೆಂಕಟ್ರಮಣ ಭಟ್, ಬೇಂದ್ರೋಡು ಗೋವಿಂದ ಭಟ್, ಅಂಬೆಮೂಲೆ ಶಿವಶಂಕರ ಭಟ್, ವೇಣುಗೋಪಾಲ ಬರೆಕರೆ ಮತ್ತು ಅರ್ಥಧಾರಿಗಳಾಗಿ ಬಾಲಕೃಷ್ಣ ಆಚಾರ್ಯ ನೀರ್ಚಾಲು, ಡಾ. ಬೇ.ಸೀ. ಗೋಪಾಲಕೃಷ್ಣ ಶ್ಯಾಮ ಆಳ್ವ ಕಡಾರು, ವಿಷ್ಣುಪ್ರಕಾಶ ಪೆರ್ವ, ಗಣೇಶಪ್ರಸಾದ್‌ ಕಡಪ್ಪು, ಡಾ. ಶ್ರೀಶಕುಮಾರ ಪಂಜಿತ್ತಡ್ಕ ಭಾಗವಹಿಸಿದ್ದರು. ಕರಿಂಬಿಲ ಲಕ್ಷ್ಮಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ‘ಕೃತಿ ಅನಾವರಣ’ ಹಾಗೂ ‘ಕವಿಗೋಷ್ಠಿ’ ಕಾರ್ಯಕ್ರಮ ಕೊಡಿಯಾಲ್ ಬೈಲಿನ ಶಾರದಾ ವಿದ್ಯಾಲಯ ಧ್ಯಾನ ಮಂದಿರದಲ್ಲಿ ದಿನಾಂಕ 29-07-2023ರಂದು ಸಂಜೆ ಗಂಟೆ 4ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್. ರೇವಣಕರ್ ಇವರು ವಹಿಸಲಿದ್ದು, ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ವಿದ್ವಾನ್ ರಘುಪತಿ ಭಟ್ ರಚಿಸಿರುವ ಕೃತಿ ‘ನಾನು ಮತ್ತು ನಾನು’ ಎಂಬ ಭಾವ ಸಂಕಲನವನ್ನು ಅನಾವರಣಗೊಳಿಸಲಿದ್ದಾರೆ. ಹಿರಿಯ ಸಾಹಿತಿ ಹಾಗೂ ಬರಹಗಾರರಾದ ಡಾ. ವಸಂತ ಕುಮಾರ್ ಪೆರ್ಲ ಮತ್ತು ಖ್ಯಾತ ಸಾಹಿತಿ, ನ್ಯಾಯವಾದಿಗಳಾದ ಶ್ರೀ ಶಶಿರಾಜ ರಾವ್ ಕಾವೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ನಡೆಯುವ ಕವಿಗೋಷ್ಠಿಯಲ್ಲಿ ಕವಿಗಳಾದ ಡಾ. ಸುರೇಶ ನೆಗಳಗುಳಿ, ಶ್ರೀ ಸುಬ್ರಾಯ ಭಟ್‌, ಶ್ರೀ ಗಣೇಶ್ ಪ್ರಸಾದ್ ಜೀ, ಡಾ. ಮೀನಾಕ್ಷಿ ರಾಮಚಂದ್ರ, ಶ್ರೀ…

Read More

ಎಡನೀರು: ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಸಂಸ್ಥಾನ ಎಡನೀರು ಮಠ, ಇಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ದಿನಾಂಕ 26-07-2023ರಂದು ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರಮೇಶ್ ಭಟ್ ಪುತ್ತೂರು, ಚೆಂಡೆ ಮದ್ದಳೆಗಳಲ್ಲಿ ಶ್ರೀ ಲವ ಕುಮಾರ್ ಐಲ, ಶ್ರೀ ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ (ಶಂತನು), ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ದೇವವ್ರತ), ಶ್ರೀ ಕುಂಬ್ಳೆ ಶ್ರೀಧರ್ ರಾವ್ (ದಾಶರಾಜ), ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ (ಸತ್ಯವತಿ) ಸಹಕರಿಸಿದರು. ಮಠದ ವತಿಯಿಂದ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ಶ್ರೀ ರಾಜೇಂದ್ರ ಕಲ್ಲೂರಾಯ ವಂದಿಸಿದರು.

Read More

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ದತ್ತಿ ಉಪನ್ಯಾಸ ಮತ್ತು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 22-07-2023ರಂದು ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಪುರುಷೋತ್ತಮ ಪೂಂಜ ವಿರಚಿತ ಪ್ರಸಂಗ ‘ಉಲೂಪಿ ವಿವಾಹ’ ಯಕ್ಷಗಾನ ತಾಳಮದ್ದಳೆಯು ನಡೆಯಿತು. ಸರ್ವಶ್ರೀಗಳಾದ ಗೋಪಾಲಕೃಷ್ಣ ಭಟ್ ಪುಂಡಿಕಾಯಿ, ಟಿ.ಡಿ. ಗೋಪಾಲಕೃಷ್ಣ ಭಟ್ ಪುತ್ತೂರು ಮತ್ತು ಮಾ.ಅದ್ವೈತ್ ಕನ್ಯಾನ ಇವರು ಹಿಮ್ಮೇಳದಲ್ಲಿ ಹಾಗೂ ಸರ್ವಶ್ರೀಗಳಾದ ಶಂಭು ಶರ್ಮ ವಿಟ್ಲ, ಜಯರಾಮ್ ಭಟ್ ದೇವಸ್ಯ, ರಾಜಗೋಪಾಲ ಕನ್ಯಾನ ಅರ್ಥದಾರಿಗಳಾಗಿ ಸಹಕರಿಸಿದರು. ಡಾ. ಜಾನಕಿ ಸುಂದರೇಶ್ ಸ್ಥಾಪಿತ ಕಳಸ ಪುಟ್ಟದೇವರಯ್ಯ ನಾಗಮ್ಮ ದತ್ತಿ ಉಪನ್ಯಾಸದಲ್ಲಿ ಕವಯತ್ರಿ ಮತ್ತು ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ಗೀತಾ ಕೊಂಕೋಡಿಯವರು ದತ್ತಿ ಉಪನ್ಯಾಸ ನೀಡುತ್ತಾ “ಕಾದಂಬರಿಗಾರ್ತಿ ಗಂಗಾ ಪಾದೆಕಲ್ಲು ಅವರ ‘ಮೌನ ರಾಗಗಳು’ ಎಂಬ ಕಾದಂಬರಿ ಸ್ತ್ರೀಯ ಬದುಕಿನ ನೈಜ ಚಿತ್ರಣವನ್ನು ಪ್ರದರ್ಶಿಸಿ, ರೋಗ ರುಜಿನಗಳನ್ನು…

Read More

ಮಂಗಳೂರು : ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಕರ್ನಾಟಕ ನಾರ್ತ್ ವಿಭಾಗದ ಪುಟ್ಟಪರ್ತಿ ಯಾತ್ರೆ ಕಾರ್ಯಕ್ರಮದ ಅಂಗವಾಗಿ ಆಂಧ್ರ ಪ್ರದೇಶದ ಪುಟ್ಟಪರ್ತಿಯ ಪ್ರಶಾಂತಿ ನಿಲಯಂನ ಸಾಯಿ ಕುಲವಂತ್ ಹಾಲ್‌ನಲ್ಲಿ ದಿನಾಂಕ 22-07-2023 ಶನಿವಾರ ಬೆಳಗ್ಗೆ ಮಂಗಳೂರಿನ ಯುವ ಸಿತಾರ್ ವಾದಕ ಅಂಕುಶ್‌ ಎನ್. ನಾಯಕ್ ಅವರಿಂದ ‘ಸಿತಾರ್ ವಾದನ’ ಕಾರ್ಯಕ್ರಮ ನಡೆಯಿತು. ತಬ್ಲಾದಲ್ಲಿ ಪಂಡಿತ್ ರಾಜೇಂದ್ರ ನಾಕೋಡ್ ಸಾಥ್ ನೀಡಿದರು. ಕರ್ನಾಟಕ ನಾರ್ತ್ ವ್ಯಾಪ್ತಿಗೊಳಪಟ್ಟ ರಾಜ್ಯದ 19 ಜಿಲ್ಲೆಗಳ 4 ಸಾವಿರಕ್ಕೂ ಅಧಿಕ ಸಾಯಿ ಭಕ್ತರು ಈ ಪರ್ತಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಕರ್ನಾಟಕ ನಾರ್ತ್ ರಾಜ್ಯಾಧ್ಯಕ್ಷ ಶ್ರೀ ಪದ್ಮನಾಭ ಪೈ ಅವರು ಸಂಸ್ಥೆ ಕೈಗೊಂಡ ವಿವಿಧ ಸೇವಾ ಚಟುವಟಿಕೆಗಳನ್ನು ತಿಳಿಸಿದರು. ಸಂಸ್ಥೆಯ ರಾಜ್ಯ ಸೇವಾ ಕೋ-ಆರ್ಡಿನೇಟರ್ ಶ್ರೀ ಪ್ರಭಾಕರ ಬೀರಯ್ಯ ಸೇವಾ ಅವಕಾಶದ ಹಲವು ವಿಷಯಗಳನ್ನು ಉದಾಹರಣೆಯೊಂದಿಗೆ ತಿಳಿಸಿದರು.

Read More

ಬೆಂಗಳೂರು : ‘ನೃತ್ಯ ಕುಟೀರ’ ಬೆಂಗಳೂರು ಪ್ರಸ್ತುತ ಪಡಿಸುವ 19ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ‘ನೃತ್ಯ ಮಿಲನ’ ಕಾರ್ಯಕ್ರಮವು ದಿನಾಂಕ 30-07-2023ರ ಭಾನುವಾರ ಸಂಜೆ 4:30ಕ್ಕೆ ಬೆಂಗಳೂರಿನ ಜೆ.ಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಖ್ಯಾತ ನೃತ್ಯಗಾರ್ತಿ, ದೂರದರ್ಶನ ಕಲಾವಿದೆ ಮತ್ತು ನಿರೂಪಕಿಯಾದ ಶ್ರೀಮತಿ.ಸುಷ್ಮಾ ಕೆ.ರಾವ್ ಹಾಗೂ ಭರತನಾಟ್ಯ ಕಲಾವಿದರು ಮತ್ತು ‘ತಾಳಾವಧಾನ ಭರತನಾಟ್ಯ’ ಶೋಧಕರಾದ ವಿದ್ವಾನ್ ಶ್ರೀ ಮಂಜುನಾಥ ಎನ್.ಪುತ್ತೂರು ಈ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ನೃತ್ಯ ಕುಟೀರದ ನಿರ್ದೇಶಕಿ, ವಿದುಷಿ ದೀಪಾ ಭಟ್ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.

Read More

ಮೂಡುಬಿದಿರೆ : ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ವತಿಯಿಂದ 26ನೇ ವರ್ಷದ ಯಕ್ಷಗಾನದ ಸರ್ವ ಆಯಾಮಗಳ ಬೃಹತ್ ಸಂಕಲನವಾದ ಒಳಗೊಂಡ ‘ಯಕ್ಷ ಸಂಭ್ರಮ-2023’ರ ಕಾರ್ಯಕ್ರಮವು ದಿನಾಂಕ 30-07-2023 ಆದಿತ್ಯವಾರ ಬೆಳಿಗೆ ಗಂಟೆ 8.30ರಿಂದ ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆಯಲಿದೆ. ಈ ಯಕ್ಷಸಂಭ್ರಮ ಸಮಾರಂಭವನ್ನು ಬೆಳಗ್ಗೆ 8.30ಕ್ಕೆ ಮೂಡುಬಿದಿರೆಯ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ, ವಹಿಸಲಿದ್ದು, ನಾರಾವಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀ ಕೃಷ್ಣ ತಂತ್ರಿ ಆಶೀರ್ವಚನ ನೀಡುವರು. ವಿ.ಟಿ.ಎಸ್. ಕ್ಯಾಶ್ಯು ಇಂಡಸ್ಟ್ರೀಸ್ ಮಾಲಕರಾದ ಶ್ರೀ ಅಶೋಕ್ ಕಾಮತ್, ಶ್ರೀ ವಿಜಯಲಕ್ಷ್ಮಿ ಕ್ಯಾಶ್ಯು ಇಂಡಸ್ಟ್ರೀಸ್ ಮಾಲಕರಾದ ಶ್ರೀ ಎ.ಕೆ. ರಾವ್, ಬೆಳುವಾಯಿ ಬ್ಲೋಸಂ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಶ್ರೀ ಸೈಮನ್ ಮಸ್ಕರೇನಸ್, ಕರ್ನಾಟಕ ಬ್ಯಾಂಕಿನ ನಿವೃತ್ತ ಜಿ.ಎಂ. ಶ್ರೀ ಚಂದ್ರಶೇಖರ್ ರಾವ್ ಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ರಾಜೇಶ್ ಜಿ.…

Read More

ಮುಂಬೈ : ಮುಂಬೈ ವಿಶ್ವವಿದ್ಯಾನಿಲಯ, ಕಲೀನಾ ಕ್ಯಾಂಪಸ್ ನ ಜೆ.ಪಿ, ನಾಯಕ್‌ ಸಭಾ ಭವನದಲ್ಲಿ ಕನ್ನಡ ವಿಭಾಗದ ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳೊಂದಿಗೆ ‘ಸಾಹಿತ್ಯ ಸಂವಾದ’ ಕಾರ್ಯಕ್ರಮವು ದಿನಾಂಕ 21-07-2023ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಡಾ.ಎಸ್.ಎಲ್. ಭೈರಪ್ಪ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಾ “ಯಾವುದೇ ಪದಬಳಕೆಯನ್ನು ವಿವಿಧ ಸನ್ನಿವೇಶಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಮಾಡುವಾಗ ಯೋಚಿಸಿ ಮಾಡಬೇಕು. ಕತೆ, ಕಾದಂಬರಿ, ಪ್ರಬಂಧ ಅಥವಾ ಇತರ ಯಾವುದೇ ಲೇಖನಗಳನ್ನು ಬರೆದಾಗ ಅದನ್ನು ಪುನಃ ಪುನಃ ಪರಿಷ್ಕರಿಸಬೇಕಾದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ನಾವು ಭಾಷೆಯ ಸರಿಯಾದ ಅಧ್ಯಯನವನ್ನು ಮಾಡಿರಬೇಕು. ಬರಹಗಾರರು ಕಲ್ಪನಾಶೀಲರಾಗಿರಬೇಕು ಮತ್ತು ತತ್ವಶಾಸ್ತ್ರವನ್ನು ತಿಳಿದಿರಬೇಕು. ಕಥೆಯ ಮೂಲಕ ತತ್ವಶಾಸ್ತ್ರದ ಬಗ್ಗೆ ಹೇಳಲು, ತಿಳಿಯಲು ಸಾಧ್ಯ. ವೇದೋಪನಿಷತ್ತುಗಳ ಕಾಲದಿಂದಲೂ ತತ್ವಜ್ಞಾನವನ್ನು ಋಷಿಮುನಿಗಳು ಕಥೆಗಳ ಮೂಲಕವೇ ಹೇಳುತ್ತಾ ಬಂದರು. ಕಥೆ ಇಲ್ಲದೆ ಹೋದರೆ ಗಂಭೀರ ತತ್ವಗಳನ್ನು ಹೇಳುವುದಕ್ಕೆ ಆಗಲಾರದು. ಕಾದಂಬರಿಗಳಲ್ಲಿ ವಾಸ್ತವಾಂಶಗಳ ಜೊತೆಗೆ ಕಲ್ಪನಾಶಕ್ತಿಯೂ ಮುಖ್ಯ, ಆಳವಾದ ಚಿಂತನೆ, ಕಲ್ಪನೆ…

Read More

ಬೆಂಗಳೂರು: ಬೆಂಗಳೂರಿನ ಮಹಿಳಾ ಅಧ್ಯಯನಕೇಂದ್ರ, ವಿಶ್ವವಿದ್ಯಾಲಯ ಮತ್ತು ಕ್ರಿಯಾ ಮಾಧ್ಯಮ ಪ್ರಸ್ತುತಪಡಿಸುವ ವೀಣಾ ಮಜುಂದಾರ್ ಅವರ ’ಉರುಳುವ ಕಲ್ಲಿನ ನೆನಪಿನ ಸುರುಳಿ’ ಕೃತಿಯ ಬಿಡುಗಡೆ ಮತ್ತು ರಾಷ್ಟ್ರೀಯ ವಿಚಾರಸಂಕಿರಣ ಕಾರ್ಯಕ್ರಮವು ದಿನಾಂಕ 31-07-2023ರ ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣದ ಸೆನೆಟ್ ಸಭಾಂಗಣದಲ್ಲಿ ನಡೆಯಲಿದೆ. ನವದೆಹಲಿಯ ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರದ ಇಂದ್ರಾಣಿ ಮಂಜುದಾರ್ ಕೃತಿಯ ಆನಾವರಣ ಮಾಡಲಿದ್ದಾರೆ. ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಡಾ.ಕೆ.ಎಸ್.ವೈಶಾಲಿ ಕೃತಿಯ ಕುರಿತು ಮಾತುಗಳನ್ನಾಡಲಿರುವರು. ಕ್ರಿಯಾ ಮಾಧ್ಯಮದ ನಿರ್ದೇಶಕಿಯಾದ ಕೆ.ಎಸ್.ವಿಮಲ ಹಾಗೂ ಅನುವಾದಕರಾದ ಲೇಖಕಿ ಡಾ.ಎನ್.ಗಾಯತ್ರಿ ತಮ್ಮ ಅಭಿಪ್ರಾಯಗಳನ್ನು ಹಂಚಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ‘ಸಮಾನತೆಯೆಡೆಗೆ’ ವರದಿಯ ಅಪೂರ್ಣವಾಗುಳಿದ ಕಾರ್ಯಸೂಚಿಗಳು ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಆರ್.ಇಂದಿರಾ ವಹಿಸಲಿದ್ದಾರೆ ಮತ್ತು ಇಂದ್ರಾಣಿ ಮಂಜುದಾರ್ ಹಾಗೂ ಲೇಖಕಿಯಾದ ಡಾ.ದು.ಸರಸ್ವತಿ ವಿಚಾರ ಮಂಡಿಸಲಿರುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಂಗಳೂರು…

Read More