Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಚಿಂತನಶೀಲ ಬರಹಗಾರ ಎಂ. ಎಸ್. ಕೆ. ಪ್ರಭು

    July 15, 2025

    ಪುಸ್ತಕ ವಿಮರ್ಶೆ – ಪೀಳಿಗೆಯ ಯೋಚನೆಗಳನ್ನು ಬದಲು ಮಾಡಬಲ್ಲ ಕೃತಿ – ‘ಮಾತು ಎಂಬ ವಿಸ್ಮಯ’

    July 15, 2025

    ನಟನದಲ್ಲಿ ‘ಸುಬ್ಬಣ್ಣ ಸ್ಮರಣೆ 2025’ | ಜುಲೈ 16

    July 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯಲ್ಲಿ ರಾಗ ಧನ ಸಂಸ್ಥೆಯ ‘ಸಂಗೀತ ಕಾರ್ಯಾಗಾರ’ದ ಸಮಾರೋಪ ಸಮಾರಂಭ
    Music

    ಉಡುಪಿಯಲ್ಲಿ ರಾಗ ಧನ ಸಂಸ್ಥೆಯ ‘ಸಂಗೀತ ಕಾರ್ಯಾಗಾರ’ದ ಸಮಾರೋಪ ಸಮಾರಂಭ

    May 24, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಉಡುಪಿಯ ರಾಗ ಧನ ಸಂಸ್ಥೆ ಹಮ್ಮಿಕೊಂಡಿದ್ದ ಮುತ್ತುಸ್ವಾಮಿ ದೀಕ್ಷಿತರ ಅಪರೂಪದ ಕೃತಿಗಳ ಕಾರ್ಯಾಗಾರವು 32 ಸಂಗೀತಾಭ್ಯಾಸಿಗಳ ಪಾಲ್ಗೊಳ್ಳುವಿಕೆಯೊಂದಿಗೆ ದಿನಾಂಕ 22-05-2024ರಂದು ಸಂಪನ್ನಗೊಂಡಿತು.

    ವಿದ್ವಾನ್ ಜಿ. ರವಿಕಿರಣ್ ಚೆನೈಯವರ ಸಂಗೀತ ಕಛೇರಿಯ ಮುನ್ನ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯೂ ಆದ ವಿದ್ವಾನ್ ಶ್ರೀ ಜಿ. ರವಿಕಿರಣ್, ಶಾಸ್ತ್ರೀಯ ಸಂಗೀತದಲ್ಲಿ ಒಲವು ಬೆಳೆಸಿಕೊಂಡ ಮಕ್ಕಳನ್ನು ಶ್ಲಾಘಿಸಿ, “ಇದರಲ್ಲಿ ನಿರಂತರತೆ ಕಾಯ್ದುಕೊಳ್ಳಿ. ನಿನ್ನೆ ಮತ್ತು ಇಂದು ಕಲಿತ ಪಾಠಗಳನ್ನು ದಿನವೂ ಮನನ ಮಾಡುವುದು ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರಿಗೆ ನಿಮ್ಮ ಗುರುಕಾಣಿಕೆ. ನಿಮ್ಮ ಓದುವಿಕೆಗೆ ಸಂಗೀತ ಯಾವತ್ತೂ ಅಡ್ಡಿಯಾಗುವುದಿಲ್ಲ. ಸಂಗೀತಾಭ್ಯಾಸವು ನಿಮ್ಮ ತನ್ಮಯತೆಯನ್ನು (ಕಾನ್ಸಂಟ್ರೇಷನ್) ಹೆಚ್ಚಿಸುವುದಲ್ಲದೆ ಮನಸ್ಸಿಗೆ ಶಾಂತತೆಯನ್ನು ತರುತ್ತದೆ” ಎಂದರು. ತದನಂತರ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ, ಹರಸಿದರು.

    ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಶ್ರೀಕಿರಣ್ ಹೆಬ್ಬಾರ್, “ಕಾರ್ಯಾಗಾರದ ಯಶಸ್ಸಿಗೆ ಹೆತ್ತವರ ಪ್ರೋತ್ಸಾಹ ಕಾರಣ. ಸಂಗೀತಾಸಕ್ತ ಮಕ್ಕಳ ಪಾಲ್ಗೊಳ್ಳುವಿಕೆ ನಿರಂತರವಾಗಿರಲಿ, ಮಕ್ಕಳನ್ನು ಪ್ರೋತ್ಸಾಹಿಸುವ ಹೆತ್ತವರ ಪರವಾಗಿ ರೋಬೋಸಾಪ್ಟ್ ನ ಉನ್ನತಾಧಿಕಾರಿ ಶ್ರೀ ಷಣ್ಮುಖ ರಾಜ ಅವರು ವೇದಿಕೆಯಲ್ಲಿರುವುದು ನಮಗೆ ಹೆಮ್ಮೆಯ ವಿಷಯ” ಎಂದರು.

    ಸಮಾರೋಪ ಸಮಾರಂಭದ ಮುನ್ನ ವಿದ್ಯಾರ್ಥಿಗಳು ತಾವು ಕಲಿತ ದೀಕ್ಷಿತರ ಕೃತಿಗಳನ್ನು ಸಂಗೀತಾಭಿಮಾನಿಗಳ ಮುಂದೆ ಪ್ರಸ್ತುತ ಪಡಿಸಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಪರವಾಗಿ ಕುಮಾರಿ ಸ್ವಸ್ತಿ ಎಂ. ಭಟ್, ಕುಮಾರಿ ಚೈತನ್ಯ ಪುಣೆ ಹಾಗೂ ಶ್ರೀಮತಿ ರಶ್ಮಿ ಶ್ರೀನಿವಾಸ್ ಮಂಗಳೂರು ಇವರು ತಮ್ಮ ಅನಿಸಿಕೆಗಳನ್ನು ತಿಳಿಸಿ, ಇಂತಹ ಅವಕಾಶವನ್ನು ಒದಗಿಸಿಕೊಟ್ಟ ರಾಗ ಧನ ಉಡುಪಿ ಮತ್ತು ಚೆನೈನ ಗುರುಗುಹಾಮೃತ ಸಂಸ್ಥೆಗೆ ಕೃತಜ್ಞತಾಪೂರ್ವಕ ನಮನಗಳನ್ನು ತಿಳಿಸಿದರು. ಬಳಿಕ ಕುಮಾರಿ ಪ್ರಣತಿ ಮತ್ತು ಕುಮಾರಿ ಧೃತಿ ಅವರು ದ್ವಂದ್ವ ಗಾಯನ ನಡೆಸಿಕೊಟ್ಟರು. ಇವರಿಗೆ ವಯೊಲಿನ್ ನಲ್ಲಿ ವಿದುಷಿ ತನ್ಮಯಿ ಉಪ್ಪಂಗಳ ಹಾಗೂ ಮೃದಂಗದಲ್ಲಿ ವಿದ್ವಾನ್ ನಾರಾಯಣ ಬಳ್ಳಕೂರಾಯ ಸಹಕರಿಸಿದರು.

    ಮಾಸ್ಟರ್ ಪರ್ಜನ್ಯ ರಾವ್ ಪ್ರಾರ್ಥನೆಗೈದರು. ರಾಗ ಧನ ಸಂಸ್ಥೆಯ ಕಾರ್ಯದರ್ಶಿ ವಿದುಷಿ ಉಮಾಶಂಕರಿ ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ಷಣ್ಮುಖರಾಜ ಧನ್ಯವಾದಗಳನ್ನು ಅರ್ಪಿಸಿದರು. ಕೆ. ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್ ಜಿ. ರವಿಕಿರಣ್ ಚೆನೈ ಅವರಿಂದ ಎರಡೂವರೆ ಗಂಟೆಗಳ ಕಾಲ ಅತ್ಯಂತ ಪ್ರೌಡ ಮಟ್ಟದ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ ನಡೆಯಿತು. ವಯೊಲಿನ್ ನಲ್ಲಿ ವಿದ್ವಾನ್ ಎಡಪಳ್ಳಿ ಅಜಿತ್ ಕುಮಾರ್ ಮತ್ತು ಮೃದಂಗದಲ್ಲಿ ವಿದ್ವಾನ್ ನಿಕ್ಷಿತ್ ಟಿ. ಪುತ್ತೂರು ಅವರು ಉತ್ತಮವಾಗಿ ಸಹವಾದನ ನೀಡಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಸಾಹಿತಿ ದಿ. ಮೇಟಿ ಮುದಿಯಪ್ಪ ನೆನಪಿನ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ನಾಟಕ ಪ್ರದರ್ಶನ | ಮೇ 26
    Next Article ಕಾಸರಗೋಡಿನ ಎಡನೀರು ಮಠದಲ್ಲಿ ಕೃತಿಗಳ ಲೋಕಾರ್ಪಣೆ
    roovari

    Add Comment Cancel Reply


    Related Posts

    ವಿಶ್ವದಾಖಲೆ ಮೂಡಿಸಿರುವ ಗಾಯಕನಿಗೆ ‘ಯಶೋಭಿನಂದನೆ’ ಸನ್ಮಾನ ಸಮಾರಂಭ

    July 15, 2025

    ಹಯಗ್ರೀವದಲ್ಲಿ ಉದ್ಘಾಟನೆಗೊಂಡ ಕರೋಕೆ ಗಾಯನ ಕಾರ್ಯಕ್ರಮ

    July 15, 2025

    ಭರತಾಂಜಲಿಯ ಕಿಂಕಿಣಿ ತ್ರಿಂಶತ್ ಸಂಭ್ರಮದಲ್ಲಿ ‘ನೃತ್ಯಾಮೃತಂ 2025’

    July 15, 2025

    ತೆಕ್ಕಟ್ಟೆಯ ಹಯಗ್ರೀವದಲ್ಲಿ ಸಂಗೀತ ಗುರು ಶಾರದ ವಿ. ಹೊಳ್ಳ ಇವರಿಗೆ ಗುರುವಂದನಾ ಕಾರ್ಯಕ್ರಮ

    July 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.