Author: roovari

ಮಂಡ್ಯ : ಡಾ. ಪ್ರದೀಪ ಕುಮಾರ ಹೆಬ್ರಿ ಅವರು ಒಂದು ವರ್ಷಗಳ ಕಾಲ ‘ಕುಂದಾನಗರಿ’ ಕನ್ನಡ ದಿನಪತ್ರಿಕೆಯಲ್ಲಿ ‘ಪುಸ್ತಕ ಪ್ರೀತಿ’ ಅಂಕಣದಲ್ಲಿ ಬರೆದ ನಾಡಿನ ವಿವಿಧ ಲೇಖಕರ 306 ಕೃತಿಗಳ ಪರಿಚಯ ಲೇಖನಗಳ ಕೃತಿ ‘ಪುಸ್ತಕ ಪ್ರೀತಿ’ ಇದರ ಲೋಕಾರ್ಪಣಾ ಸಮಾರಂಭ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನದಂದು (ದಿನಾಂಕ 15-08-2023) ಮಂಡ್ಯದ ಡ್ಯಾಫೊಡಿಲ್ಸ್ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆಯಿತು. ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ನಾಗಾನಂದ ಹಾಗೂ ವಿ.ಎಲ್.ಎನ್. ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಸುಜಾತ ಕೃಷ್ಣರವರು ಇನ್ನಿತರ ಶಿಕ್ಷಕರ ಒಡಗೂಡಿ ಕೃತಿ ಲೋಕಾರ್ಪಣೆ ಮಾಡಿ ಡಾ. ಹೆಬ್ರಿ ಅವರನ್ನು ಸನ್ಮಾನಿಸಿದರು. ಕೃತಿ ಹಾಗೂ ಕೃತಿಕಾರರನ್ನು ಪರಿಚಯಿಸಿದ ಕವಿಯತ್ರಿ ಹಾಗೂ ಕನ್ನಡ ಭಾಷಾ ಶಿಕ್ಷಕಿ ಜಿ. ಅಶ್ವಿನಿ‌ ಇವರು “ಈ ಕೃತಿಯು 306 ಬೇರೆ ಬೇರೆ ಲೇಖಕರ ಕೃತಿಗಳ ಪರಿಚಯಾತ್ಮಕ ಕೃತಿ. ಬೆಳಗಾವಿಯ ಕುಂದಾನಗರಿ ಕನ್ನಡ ದಿನಪತ್ರಿಕೆಯಲ್ಲಿ ನಿರಂತರ ಒಂದು ವರ್ಷಗಳ ಕಾಲ ಪ್ರಕಟವಾಗಿ ಹೆಬ್ರಿಯವರ ಸಾಹಿತ್ಯ ಪ್ರೀತಿಯನ್ನು…

Read More

ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು (ರಿ) ಇದರ ಮಹಿಳಾ ಘಟಕ ನಾರಿಚಿನ್ನಾರಿಯ 8ನೇ ಸರಣಿ ಕಾರ್ಯಕ್ರಮ ‘ಓಣಂ ಸಂಧ್ಯಾ’ವು ಕಾಸರಗೋಡಿನ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ದಿನಾಂಕ 26-08-2023 ಶನಿವಾರದಂದು ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಿಚಿನ್ನಾರಿಯ ಗೌರವಧ್ಯಕ್ಷರು ಹಾಗೂ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀಮತಿ ತಾರಾ ಜಗದೀಶ್ ಇವರು ವಹಿಸಲಿದ್ದು, ಕಾಸರಗೋಡಿನ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜ ಸೇವಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀ ಇವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಮತ್ತು ನಾಟ್ಯ ಗುರುಗಳಾದ ವಿದುಷಿ ಶಶಿಕಲಾ ಟೀಚರ್ ಇವರಿಗೆ ಗೌರವಾರ್ಪಣೆ ಮಾಡಲಾಗುವುದು. ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಇವರ ಐದು ಕೃತಿಗಳಾದ ಏಕತಾರಿ ಸಂಚಾರಿ (ಕವನ ಸಂಕಲನ), ಕೊಕ್ಕೊ ಕೋಕೋ (ಮಕ್ಕಳ ನಾಟಕ), ಶಿವರಾಮ ಕಾರಂತರ ಕನ್ನಡ ಪ್ರಜ್ಞೆ (ಸಂಪಾದಿತ), ಕನಕದಾಸೆರ್ನ ರಾಮಧಾನ್ಯ ಚರಿತೆ (ಅನುವಾದ) ಮತ್ತು ಮೊಗೇರಿ ಗೋಪಾಲಕೃಷ್ಣ ಅಡಿಗ (ವಾಚಿಕೆ) ಅನಾವರಣಗೊಳ್ಳಲಿವೆ. ಈ ಐದು ಕೃತಿಗಳನ್ನು ಅನಾವರಣಗೊಳಿಸುವವರು ವಿಜಯಲಕ್ಷ್ಮೀ ಶ್ಯಾನ್ ಭೋಗ್, ಸರ್ವಮಂಗಳ ಜಯ್ ಪುಣಿಚಿತ್ತಾಯ,…

Read More

ಮಂಗಳೂರು : ನಡೂರು ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮೇಳದವರು ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ‘ಕೃಷ್ಣ ಗಾರುಡಿ’ ಯಕ್ಷಗಾನ ಪ್ರದರ್ಶಿಸಿದರು. ಈ ವೇಳೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್‌. ಪ್ರದೀಪ್‌ ಕುಮಾರ ಕಲ್ಕೂರ ಅವರು “ಮಳೆಗಾಲದಲ್ಲಿ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ” ಎಂದರು. ಕರ್ನಾಟಕ ಯಕ್ಷಧಾಮ ಮತ್ತು ಕಲ್ಕೂರ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾಗವತರಾದ ಶ್ರೀ ಸದಾಶಿವ ಅಮೀನ್ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು. ಸಿ.ಎ. ಶಿವಾನಂದ ಪೈ. ಪಿ.ಲಕ್ಷ್ಮೀ ನಾರಾಯಣ ಉಪಾಧ್ಯ, ಪೊಳಲಿ ನಿತ್ಯಾನಂದ ಕಾರಂತ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಜನಾರ್ದನ ಹಂದೆ ಸ್ವಾಗತಿಸಿ, ವಂದಿಸಿದರು. ಕೊನೆಗೆ ಯಕ್ಷಗಾನ ಪ್ರದರ್ಶನ ಮನೋಜ್ಞವಾಗಿ ನೆರವೇರಿತು.

Read More

ಉಡುಪಿ : ಸುಶಾಸನ ಉಡುಪಿ ಪ್ರಾಯೋಜಕತ್ವದಲ್ಲಿ ಸುಧಾಕರ ಆಚಾರ್ಯರ ಕಲಾರಾಧನೆಯ 33ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಕಾರ್ಯಕ್ರಮವು ಉಡುಪಿ ಕಿದಿಯೂರು ಹೊಟೇಲ್‌ನಲ್ಲಿ ದಿನಾಂಕ 15-08-2023 ಮಂಗಳವಾರದಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಟ ಸತೀಶ ಶೆಟ್ಟಿಯವರು “ಯಕ್ಷಗಾನ ತಾಳಮದ್ದಳೆಯ ಮೂಲಕ ‘ಕಾಶ್ಮೀರ ವಿಜಯ’ ಪ್ರಸ್ತುತಿಯೊಂದಿಗೆ ಜನಮಾನಸದಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಿಗೊಳಿಸುವ ಸಂಕಲ್ಪ ಶ್ಲಾಘನೀಯ. ದೇಶಪ್ರೇಮವನ್ನು ಉದ್ದೀಪನಗೊಳಿಸುವ ಕಥೆಯಾಧಾರಿತ ಸ್ವರಾಜ್ಯ ವಿಜಯ, ಹೈದರಾಬಾದ್ ವಿಜಯ, ಕಾಶ್ಮೀರ ವಿಜಯ ಎನ್ನುವ ಪ್ರಸಂಗಗಳನ್ನು ಪ್ರಸ್ತುತಪಡಿಸಿದ ಹೆಚ್ಚುಗಾರಿಕೆಯೊಂದಿಗೆ 33 ವರ್ಷಗಳಿಂದ ಸ್ವಾತಂತ್ರ್ಯೋತ್ಸವದಂದು ತಾಳಮದ್ದಳೆ ಆಯೋಜಿಸಿಕೊಂಡು ಬರುತ್ತಿರುವ ಸುಧಾಕರ ಆಚಾರ್ಯರದ್ದು ಐತಿಹಾಸಿಕ ಹೆಜ್ಜೆಯಾಗಿದೆ” ಎಂದು ಹೇಳಿದರು. ಪ್ರಸಂಗಕರ್ತ ಪ್ರೊ. ಪವನ್ ಕಿರಣ್ ಕೆರೆ ಪ್ರಸ್ತಾವನೆಗೈದರು. ಶಾಸಕರಾದ ಯಶ್ ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಶುಭ ಹಾರೈಸಿದರು. ಅಮೆರಿಕ ನ್ಯೂಜೆರ್ಸಿಯ ಪುತ್ತಿಗೆ ಮಠದ ಅರ್ಚಕ ರಾಘವೇಂದ್ರ ಮೂಡುಬಿದಿರೆ, ಹರ್ಷದ ಪ್ರಕಾಶ್ ರಿಟೇಲ್ ಪೈ.ಲಿ.ನ ಎಂ.ಡಿ. ಶ್ರೀ ಕೆ. ಸೂರ್ಯಪ್ರಕಾಶ್, ತೋಟದಮನೆ ದಿವಾಕರ ಶೆಟ್ಟಿ,…

Read More

ಮಂಗಳೂರು : ಕಲಾಭಿ ಥಿಯೇಟರ್ ಮಂಗಳೂರು, ಕೆನರಾ ಕಲ್ಚರಲ್ ಅಕಾಡೆಮಿಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ರಂಗಸಂಗೀತ ಕಾರ್ಯಾಗಾರ ಎರಡು ದಿನಗಳ ರಂಗಸಂಗೀತ ಕಾರ್ಯಾಗಾರ ದಿನಾಂಕ 13-08-2023ರ ಭಾನುವಾರ ಸಂಜೆ ನಗರದ ಕೆನರಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಾರೋಪಗೊಂಡಿತು. ಶಿಬಿರದ ನಿರ್ದೇಶಕರಾಗಿದ್ದ ಶ್ರೀಪಾದ ತೀರ್ಥಹಳ್ಳಿಯವರು ಕನ್ನಡ ರಂಗಭೂಮಿಯ ಅನೇಕ ರಂಗಗೀತೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಿಕೊಟ್ಟರು. 20ಕ್ಕೂ ಹೆಚ್ಚು ಶಿಬಿರಾರ್ಥಿಗಳು ರಂಗಗೀತೆಗಳನ್ನು ಕಲಿತು ಸಮಾರೋಪ ಸಮಾರಂಭದಲ್ಲಿ ಪ್ರಸ್ತುತಪಡಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅಥಿತಿಗಳಾಗಿ ಭಾಗವಹಸಿದ್ದ ಆರ್.ಜೆ. ಅಭಿಷೇಕ್ ಶೆಟ್ಟಿ ಮಾತನಾಡಿ, “ಮಂಗಳೂರಿನಂತಹ ನಗರದಲ್ಲಿ ಈ ರೀತಿಯ ನಿರಂತರ ರಂಗಚಟುವಟಿಕೆಗಳನ್ನು ನಡೆಸುತ್ತಿರುವ ಕಾರ್ಯ ಶ್ಲಾಘನೀಯ, ಇನ್ನಷ್ಟು ಚಟುವಟಿಕೆಗಳನ್ನು ನಡೆಸುವ ಶಕ್ತಿ ಸಿಗಲಿ” ಎಂದು ಶುಭ ಹಾರೈಸಿ, ರೇಡಿಯೋ ಜೀವನದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಲಾಭಿ ಥಿಯೇಟರ್ನ ಕಾರ್ಯದರ್ಶಿ ಉಜ್ವಲ್ ಯು.ವಿ. ಮಾತಾನಾಡಿ ‘ಕಲಾಭಿ ಥಿಯೇಟರ್’ ಮಂಗಳೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ಕಲೆಯ ಕೆಲಸಗಳನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲೂ ಈ ರೀತಿಯ ಕಾರ್ಯಾಗಾರಗಳು, ಶಿಬಿರಗಳು, ಕಲೆಗೆ ಸಂಬಂಧಿಸಿದ…

Read More

ಬೆಂಗಳೂರು: ಯಾವುದೇ ವಿಷಯವನ್ನಾಗಲೀ ಆಳವಾಗಿ ಅಭ್ಯಾಸ ಮಾಡುವ ಆಕಾಂಕ್ಷೆಯುಳ್ಳ ಶ್ರೀರಕ್ಷಾ ರವಿ ಹೆಗ್ಡೆ ವಿಶೇಷ ಪ್ರತಿಭೆಯ ನೃತ್ಯಕಲಾವಿದೆ. ತಾಯಿ ಮತ್ತು ಗುರು ಪ್ರಸಿದ್ಧ ನೃತ್ಯಜ್ಞೆ ಡಾ. ಜಯಶ್ರೀ ರವಿ ‘ಲಯಾಭಿನಯ ಕಲ್ಚರಲ್ ಫೌಂಡೇಶನ್’ನ ಸ್ಥಾಪಕಿ ಮತ್ತು ವಿಶ್ವವಿಖ್ಯಾತಿಯ ಹಿರಿಯ ನೃತ್ಯಪಟು ಡಾ. ಸುಂದರಿ ಸಂತಾನಂ ಅವರ ಮಾರ್ಗದರ್ಶನದಲ್ಲಿ 108 ಮಾರ್ಗದ ‘ಕರಣ’ಗಳನ್ನು ಅಭ್ಯಾಸ ಮಾಡಿದವರು. ವಿಶ್ವಾದ್ಯಂತ ನೃತ್ಯ ಪ್ರದರ್ಶನಗಳನ್ನು ನೀಡಿ ಸನ್ಮಾನ್ಯರಾದ ಇಂಥ ವಿದುಷಿ ಗುರುಗಳ ಬಳಿ ತರಬೇತಿ ಪಡೆಯುತ್ತಿರುವ ಶ್ರೀರಕ್ಷಾ ಕೂಡ 108 ಕರಣಗಳನ್ನು ಕಲಿತು, ಭರತನಾಟ್ಯದಲ್ಲಿ ದೀರ್ಘಕಾಲ ಅಭ್ಯಾಸ ಮಾಡಿದ ಬದ್ಧತೆಯ ನೃತ್ಯಾಕಾಂಕ್ಷಿ. ಶಾಸ್ತ್ರೀಯ ಸಂಗೀತ, ಯೋಗ, ನೃತ್ಯ ಸಂಯೋಜನೆ, ಪ್ರದರ್ಶನ, ಯಕ್ಷಗಾನ, ಕ್ರೀಡೆಗಳಲ್ಲೂ ಮುಂದಿರುವ ಬಹುಮುಖ ಪ್ರತಿಭೆ ಶ್ರೀರಕ್ಷಾ ನೃತ್ಯದ ಎಲ್ಲ ಆಯಾಮಗಳನ್ನು ಅಭ್ಯಾಸ ಮಾಡಿದ್ದಾಳೆ. ಇದೀಗ ಇವಳು ಇದೇ ತಿಂಗಳ 20 ಭಾನುವಾರದಂದು ಜೆ.ಎಸ್.ಎಸ್. ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ. ಈಕೆಯ ಮನಮೋಹಕ ನೃತ್ಯವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಅದರದ ಸುಸ್ವಾಗತ.…

Read More

ಮಂಗಳೂರು : ಕವಿತಾ ಟ್ರಸ್ಟ್ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಸಾದ್ ಸೈಮಾಚೊ’ (ಪ್ರಕೃತಿಯ ನಾದಗಳು) ಎಂಬ ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗವು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಸಹಕಾರದಲ್ಲಿ ದಿನಾಂಕ 06-08-2023ರಂದು ನಡೆಯಿತು. ಗೋವಾದ ಢಾಯಿ ಆಖಾರ್ (ಎರಡುವರೆ ಅಕ್ಷರ) ತಂಡದವರು ಪ್ರಕೃತಿಯ ದನಿಗಳಿಗೆ ಸಂಬಂಧಪಟ್ಟ ಹಿಂದಿ ಮತ್ತು ಕೊಂಕಣಿಯ ಸಾಹಿತ್ಯವನ್ನು ಸಾದರಪಡಿಸಿದರು. ಕೇದಾರ್‌ನಾಥ್ ಸಿಂಗ್ ಇವರ ‘ಬಾಘ್’, ಸಲೀಲ್ ಚತುರ್ವೇದಿಯ ‘ಕಹಾಂ ಗಯೀ ವಹ್ ನದೀ ಕೀ ಧಾರ್’ ಮತ್ತು ಝಾರ್ಖಂಡಿನ ಜಸಿಂತಾ ಕೆರ್ಕಟ್ಟಾ ಅವರ ‘ನದೀ, ಪಹಾಡ್ ಔರ್ ಬಜಾರ್’ ಹಿಂದಿ ಕವಿತೆಗಳನ್ನು ಹಾಗೂ ಮಮತಾ ವೆರ್ಲೇಕರ್ ಇವರ ‘ಗುಪೀತ್’, ‘ಫೊಂಡ್ಕುಲಾಂ’ ಮತ್ತು ಪ್ರಕಾಶ್ ಪರಿಯೆಂಕಾರ್ ಇವರ ‘ಪಾಣಿ ಆತಾಂ ದೆಂವ್ತಾ’ ಹಾಗೂ ‘ಹಿ ರಾನ್ಕಾಣಿ’ ಕವಿತೆಗಳನ್ನು ಪ್ರಸ್ತುತಪಡಿಸಿದರು. ಜ್ಞಾನಪೀಠ ಪುರಸ್ಕಾರ ವಿಜೇತ ಸಾಹಿತಿ ದಾಮೋದರ ಮಾವ್ಜೊ ಇವರ ಕತೆ ‘ಭುರ್ಗಿಂ ಮುಗೆಲಿಂ ತಿಂ’ ಇದರ ವಿಷಯ ಮತ್ತು ಪ್ರಸ್ತುತಿಯ ನೈಜತೆಯು ನೆರೆದ…

Read More

ಉಡುಪಿ : ರಾಷ್ಟ್ರೀಯ ಗ್ರಂಥಪಾಲಕರ ದಿನದ ಅಂಗವಾಗಿ ಭಾರತದ ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಇವರ ದಿನಾಚರಣೆಯ ಕಾರ್ಯಕ್ರಮವು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ದಿನಾಂಕ 12-08-2023ರಂದು ನಡೆಯಿತು. ಎಂ.ಜಿ.ಎಂ.ಕಾಲೇಜಿನ ಗ್ರಂಥಪಾಲಕರಾದ ಶ್ರೀ ಕಿಶೋರ್ ಕುಮಾರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ನವಭಾರತದ ಗ್ರಂಥಾಲಯದ ಪರಿಕಲ್ಪನೆಗೆ ಹೊಸದಿಕ್ಕನ್ನು ಕಲ್ಪಿಸಿಕೊಟ್ಟ ಕೀರ್ತಿ ಡಾ.ಎಸ್.ಆರ್.ರಂಗನಾಥನ್ ಅವರಿಗೆ ಸಲ್ಲುತ್ತದೆ. ಅವರು ಮೂಲತಃ ಗಣಿತಾಸ್ತ್ರದ ಪ್ರಾಧ್ಯಾಪಕರು. ಅವರ ಅದಮ್ಯವಾದ ಪುಸ್ತಕ ಪ್ರೀತಿ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹನನ್ನಾಗಿ ರೂಪಿಸಿದೆ. ಅವರು ಅಂದು ರೂಪಿಸಿದ ವ್ಯವಸ್ಥೆಯಿಂದಾಗಿ ಶಾಲಾ ಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಗ್ರಂಥಾಲಯ ಆಧುನಿಕ ವ್ಯವಸ್ಥೆಯೊಂದಿಗೆ ಪರಿವರ್ತನೆಗೊಂಡಿದೆ. ಡಾ.ಎಸ್‌.ಆರ್.ರಂಗನಾಥನ್‌ ಅವರು ಆಗೋಸ್ಟ್ 12, 1892ರಲ್ಲಿ ಜನಿಸಿದರು. ಅವರು ಗ್ರಂಥಾಲಯದ ಬಗ್ಗೆ ಮಾಡಿದ ಸಾಧನೆ, ನೀಡಿದ ಕೊಡುಗೆ ಹಾಗೂ ಅವರ ಸೇವೆಗಾಗಿ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯಾಗಿ ಆಚರಿಸಲಾಗುತ್ತದೆ” ಎಂದು ಹೇಳಿದರು. ರಂಗನಾಥನ್ ಗ್ರಂಥಾಲಯಕ್ಕೆ ನೀಡಿದ ಕೊಡುಗೆಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್…

Read More

ಮಂಗಳೂರು : ಸಂತ ಅಲೋಶಿಯಸ್‌ ಕಾಲೇಜಿನ ಮ್ಯೂಸಿಕ್ ಅಸೋಸಿಯೇಶನ್ ಸಹಯೋಗದಲ್ಲಿ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಪ್ರಸ್ತುತ ಪಡಿಸಿದ ‘ಜನಪದ ಗೀತೆ ಹಾಗೂ ರಂಗಸಂಗೀತ’ ಗಾಯನ ಕಾರ್ಯಕ್ರಮ ನಗರದ ಸಂತ ಅಲೋಶಿಯಸ್ ಕಾಲೇಜಿನ ಫಾ. ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ದಿನಾಂಕ 11-08-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆ.ಫಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಇ.ಸಿ. ಮತ್ತು ಸಿ.ಸಿ. ಸಂಚಾಲಕರಾದ ಶ್ರೀ ಅಶೋಕ್ ಪ್ರಸಾದ್, ಡಾ.ದಿನೇಶ್ ನಾಯಕ್, ವ್ಯವಸ್ಥಾಪನಾ ವಿಭಾಗದ ನಿರ್ದೇಶಕರಾದ ಡಾ.ಚಾರ್ಲ್ಸ್ ಫುರ್ತಾದೋ, ಎಲ್.ಸಿ.ಆರ್.ಐ ವಿಭಾಗದ ನಿರ್ದೇಶಕರಾದ ಡಾ.ರೋನಾಲ್ಡ್ ನಜ್ರತ್, ಹಣಕಾಸು ಅಧಿಕಾರಿಯಾದ ಫಾ.ವಿನ್ಸೆಂಟ್ ಲೋಬೊ, ಮ್ಯೂಸಿಕ್ ಅಸೋಸಿಯೇಶನ್ನಿನ ಅಧ್ಯಕ್ಷರಾದ ಡಾ.ಸ್ಮಿತಾ ಡಿ.ಕೆ. ಮತ್ತು ಡಾ.ಭಾರತಿ ಉಪಸ್ಥಿತರಿದ್ದರು. ರೋಹನ್ ಎಸ್.ಉಚ್ಚಿಲ್, ಭವ್ಯ ಶೆಟ್ಟಿ, ಸುನಿಲ್ ಪಲ್ಲಮಜಲು, ಅರ್ಜುನ್ ಆಚಾರ್ಯ, ಶಶಾಂಕ್ ಐತಾಳ್, ಅರ್ಲ್ ಬ್ರ್ಯಾನ್, ರಾಘವ್ ಸೂರಿ, ಸುಧೀಶ್ ಕೂಡ್ಲು, ಚಿನ್ಮಯಿ ಭಟ್, ಮೇಘನಾ ಕುಂದಾಪುರ, ಸಕೇತಾ ಶೆಟ್ಟಿ, ಶರಣ್ಯಾ ಭಟ್, ಮೇಘಾ ಸುರತ್ಕಲ್, ಗೌತಮ್ ಬಿರ್ವ, ಗೌತಮ್ ಶೆಟ್ಟಿ, ರಾಹುಲ್ ಕುಡುಪು…

Read More

ಹೊಸಕೋಟೆ : ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಆಯೋಜಿಸಿದ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಸರಣಿಯ ‘ರಂಗ ಮಾಲೆ -73’ರ ಕಾರ್ಯಕ್ರಮವು ದಿನಾಂಕ 12-08-2023ರಂದು ನಡೆಯಿತು. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ‘ಸ್ವಾತಂತ್ರ್ಯ ಸಮರ ಕರುನಾಡು ಅಮರ’ ಎಂಬ ನಾಟಕವು ‘ಜನಪದರು ರಂಗಮಂದಿರ’ದಲ್ಲಿ ಪ್ರದರ್ಶನಗೊಂಡಿತು. ಈ ನಾಟಕವು ಡಾ.ಟಿ.ಲಕ್ಷ್ಮೀನಾರಾಯಣ ಇವರ ರಚನೆಯಾಗಿದ್ದು, ಮಾಲೂರು ವಿಜಿ ನಿರ್ದೇಶನದಲ್ಲಿ ಮಾಲೂರಿನ ರಂಗ ವಿಜಯ ತಂಡ ಪ್ರಸ್ತುತ ಪಡಿಸಿತು. ಹೌಸ್ ಫುಲ್ ಪ್ರದರ್ಶನವನ್ನು ಉದ್ಧಾಟಿಸಿದ ವೇದಿಕೆ ಅಧ್ಯಕ್ಷರಾದ ಕೆ.ವಿ. ವೆಂಕಟರಮಣಪ್ಪ ಪಾಪಣ್ಣ ಕಾಟಂ ನಲ್ಲೂರು ಇವರು ಪ್ರೇಕ್ಷಕರಿಂದ ತುಂಬಿದ ಸಭಾಂಗಣವನ್ನು ಅಭಿನಂದಿಸಿ “ರಂಗ ಚಟುವಟಿಕೆಗಳಿಗೆ ನೀಡಿದ ಸಹಕಾರ ಸಂತಸ ತಂದಿದೆ” ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಬೆಂ.ಹಾ.ಉ. ಒಕ್ಕೂಟದ ಮಾಜಿ ನಿರ್ದೇಶಕ ಹುಸ್ಕೂರು ಸುಬ್ಬಣ್ಣನವರನ್ನು ಹಾಗೂ ನಾಟಕಕಾರ ಮತ್ತು ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್, ಸಿದ್ದೇಶ್ವರ ನನಸು ಮನೆ, ಸುರೇಶ್ ಎಂ. ಮತ್ತು ಮಮತ ಮುನಿರಾಜು…

Read More