Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ‘ಯಥಾ ಗುರು ತಥಾ ಶಿಷ್ಯ’ ಎಂಬ ನಾಣ್ಣುಡಿಗೆ ಅನ್ವರ್ಥಕವಾಗಿ ಉತ್ತಮ ಕಲಾವಿದೆ- ಬದ್ಧತೆಯ ನಾಟ್ಯ ಗುರುವಾಗಿ ಖ್ಯಾತರಾಗಿರುವ ಬೆಂಗಳೂರಿನ ‘ನೃತ್ಯೋದಯ ಅಕಾಡೆಮಿ’ ನಾಟ್ಯ ಸಂಸ್ಥೆಯ ವಿದುಷಿ ದಿವ್ಯಶ್ರೀ ಎಸ್. ವಟಿಯವರ ನುರಿತ ಗರಡಿಯಲ್ಲಿ ರೂಪುಗೊಂಡ ಕಲಾಶಿಲ್ಪ ಕು. ಪ್ರೇರಣಾ ಬಾಲಾಜಿ ಪ್ರತಿಭಾವಂತ ನೃತ್ಯಪ್ರತಿಭೆ. ಐದರ ಎಳವೆಯಿಂದಲೇ ನೃತ್ಯಪ್ರೀತಿ ಬೆಳೆಸಿಕೊಂಡ ಪ್ರೇರಣಾ ಕಳೆದ ಒಂದು ದಶಕದಿಂದ ಅತ್ಯಾಸಕ್ತಿಯಿಂದ ನೃತ್ಯಾಭ್ಯಾಸವನ್ನು ಮಾಡುತ್ತಾ ಜ್ಯೂನಿಯರ್, ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದು, ವಿದ್ವತ್ತಿಗೆ ತಯಾರಾಗುತ್ತಿರುವುದು ಅವಳ ವಿಶೇಷ. ನಾಡಿನಾದ್ಯಂತ ಅನೇಕ ದೇವಾಲಯಗಳಲ್ಲಿ, ಪ್ರತಿಷ್ಠಿತ ವೇದಿಕೆಗಳಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದರೂ ಇದೀಗ ಏಕವ್ಯಕ್ತಿ ಪ್ರದರ್ಶನ ನೀಡುತ್ತಿರುವ ಸುಯೋಗ ಅವಳದಾಗಿದೆ. ಶ್ರೀ ಎಸ್. ಬಾಲಾಜಿ ಮತ್ತು ದಿವ್ಯ ಬಾಲಾಜಿಯವರ ಸುಪುತ್ರಿಯಾದ ಇವಳು ‘ಲಾ’ ಪರೀಕ್ಷೆಗೆ ಓದುತ್ತಿದ್ದು, ಉತ್ತಮ ಕ್ರೀಡಾಪಟು ಕೂಡ. ಪ್ರೇರಣಾ ದಿನಾಂಕ 23 ಫೆಬ್ರವರಿ 2025ರ ಭಾನುವಾರ ಸಂಜೆ ಗಂಟೆ 4-30ಕ್ಕೆ ಯಲಹಂಕ ಸ್ಯಾಟಲೈಟ್ ಟೌನಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ…
ಉಡುಪಿ : ಸುಮನಸಾ ಕೊಡವೂರು ಉಡುಪಿ (ರಿ.) ಇದರ ವತಿಯಿಂದ ‘ರಂಗಹಬ್ಬ 13’ ಸಮಾರಂಭವನ್ನು ದಿನಾಂಕ 23 ಫೆಬ್ರವರಿ 2025ರಿಂದ 01 ಮಾರ್ಚ್ 2025ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 23 ಫೆಬ್ರವರಿ 2025ರಂದು ಶ್ರೀಜಿತ್ ಸುಂದರಂ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಪಯಣ ತಂಡದವರು ‘ತಲ್ಕಿ’, ದಿನಾಂಕ 24 ಫೆಬ್ರವರಿ 2025ರಂದು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದವರು ‘ಗೊಂದಿ’, 25 ಫೆಬ್ರವರಿ 2025ರಂದು ದಿ. ಕೆ. ಸಾಣ್ಣೇಗೌಡ ಇವರ ನಿರ್ದೇಶನದಲ್ಲಿ ಹಾಸನದ ಅನಿಕೇತನ (ರಿ.) ಇವರು ‘ಕಿರಗೊರಿನ ಗಯ್ಯಾಳಿಗಳು’, 26 ಫೆಬ್ರವರಿ 2025ರಂದು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದವರು ‘ಈದಿ’, 27 ಫೆಬ್ರವರಿ 2025ರಂದು ಮಹಾದೇವ ಹಡಪದ ಇವರ ನಿರ್ದೇಶನದಲ್ಲಿ ಧಾರವಾಡದ ಆಟಮಾಟ (ರಿ.) ತಂಡದವರು ‘ಗುಡಿಯ ನೋಡಿರಣ್ಣ’, 28 ಫೆಬ್ರವರಿ 2025ರಂದು ಪ್ರಸಾದ್ ಮುದ್ರಾಡಿ ಇವರ ನಿರ್ದೇಶನದಲ್ಲಿ ಸುಮನಸಾ…
ಸುಳ್ಯ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘವು ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಹಮ್ಮಿಕೊಂಡ “ಬರವಣಿಗೆ ಮಾಧ್ಯಮ ಶಿಬಿರ” ಕಾರ್ಯಕ್ರಮವು ದಿನಾಂಕ 20 ಫೆಬ್ರವರಿ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿವೃತ್ತ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಮಾತನಾಡಿ “ಸುಖ ಯಾವುದನ್ನೂ ಸೃಷ್ಟಿಸುವುದಿಲ್ಲ. ಸತತ ಪರಿಶ್ರಮದಿಂದ ಸಾಹಿತ್ಯ ಸೃಷ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಹಳ್ಳಿಯ ಬೇರುಗಳು ಸಾಹಿತ್ಯವನ್ನು ಸೃಷ್ಟಿಸುತ್ತವೆ. ಬದುಕನ್ನು ಕಟ್ಟಿಕೊಡುವ ಮಾಧ್ಯಮ ಬರವಣಿಗೆ ಶಾಶ್ವತವಾಗಿಸುತ್ತದೆ. ನಿಮ್ಮ ಒಂದೇ ಒಂದು ಬರಹ ಕೂಡ ನಿಮ್ಮನ್ನು ಶಾಶ್ವತವಾಗಿಸಬಹುದು. ಆ ನಿಟ್ಟಿನಲ್ಲಿ ಓದುವ ಹವ್ಯಾಸವನ್ನು ಮೂಡಿಸಿಕೊಂಡು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ” ಎಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ. ಎಂ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ಶುಭ ಹಾರೈಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುದ್ರಾಜೆ ಸ್ವಾಗತಿಸಿ, ಕಾರ್ಯಕ್ರಮದ ಸಂಘಟಕರು ಹಾಗೂ ಕನ್ನಡ ಸಂಘದ ಸಂಚಾಲಕರಾದ ಡಾ.…
ಬೆಂಗಳೂರು : ಬಿಂಬ ಆರ್ಟ್ ಫೌಂಡೇಷನ್ ಇದರ ವತಿಯಿಂದ ‘ಕೃಷ್ಣನ ಕೊಳಲಿನ ಕರೆ’ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿಂಬ ದಿ ಅರ್ಥ್ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ನಾರಾಯಣಿ ದೀಪಿಕಾ ದೇವಿ ಇವರ ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆಯಲ್ಲಿ ವಿಭವಿ, ಅರವಿಂದ್, ಶಾರದಾ, ಭುವನ ಇವರ ಶಾಸ್ತ್ರೀಯ ಭರತನಾಟ್ಯದಲ್ಲಿ ಚಿತ್ರಿಸಲಾದ ಸ್ವರಜತಿ ‘ರಾ. ರಾ. ವೇಣು ಗೋಪಾ ಬಾಲ’ ಕೃತಿಯ ಭರತನಾಟ್ಯಕ್ಕೆ ಮತ್ತು ಕೃಷ್ಣನಾಗಿ ಮಾಸ್ಟರ್ ದೊರೈ ಇವರು ಸಾಥ್ ನೀಡಲಿದ್ದಾರೆ.
ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಿಜಯಪುರ ಜಿಲ್ಲಾ ಗಮಕ ಕಲಾ ಪರಿಷತ್ತು ಹಾಗೂ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ ಕುಮಾರವ್ಯಾಸ ಜಯಂತಿ ಪ್ರಯುಕ್ತ ‘ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ’ವು ದಿನಾಂಕ 17 ಫೆಬ್ರವರಿ 2025ರಂದು ವಿಜಯಪುರದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಹಿರಿಯ ಸಾಹಿತಿ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಮಾತನಾಡಿ “ಗಮಕ ಕಲೆ ಪ್ರಾಚೀನ ಕಾಲದಿಂದಲೂ ಬಂದಿರುವಂತಹದು. ಕಾವ್ಯಗಳನ್ನು ರಾಗ, ಶ್ರುತಿ. ಬದ್ಧವಾಗಿ ವಾಚನ ಮಾಡುವ ಕಲೆ ಕನ್ನಡಕ್ಕಿದೆ. ಕಾವ್ಯದ ಅರ್ಥ, ಭಾವ, ನವರಸಗಳಿಗೆ ಪ್ರಾಧಾನ್ಯತೆ ಕೊಟ್ಟು ರಸ ಭಾವ ಕೆಡದಂತೆ ಶ್ರೋತೃಗಳಿಗೆ ರಸಗ್ರಹಣ ಮಾಡುವುದೇ ಗಮಕವಾಚನ ಉದ್ದೇಶವಾಗಿದೆ” ಎಂದು ಪ್ರೇಕ್ಷಕರನ್ನು ಗಮನದಲ್ಲಿಟ್ಟು ಗಮಕ ಸಾಹಿತ್ಯದ ಮೌಲ್ಯವನ್ನು ಎತ್ತಿ ಹೇಳಿದರು. ಮಾತನಾಡಿದರು. “ಗಮಕ…
ಮಂಗಳೂರು : ತನ್ನ ಸೇವೆಯ 22ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ, ಇಲ್ಲಿನ ವಿಶೇಷ ಮಕ್ಕಳಿಂದ ಇದೇ 23 ಫೆಬ್ರವರಿ 2025ರ ಆದಿತ್ಯವಾರದಂದು ಸಂಜೆ ಘಂಟೆ ಘಂಟೆ 5.00ಕ್ಕೆ ಸರಿಯಾಗಿ ಕದ್ರಿ ಉದ್ಯಾನದ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣಗೊಳ್ಳಲಿದೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ವಿಧಾನ ಸೌಧದಲ್ಲಿ, ಸುತ್ತೂರು, ಮೈಸೂರು, ಕುಂಬ್ಳೆ, ಹಾಗೂ ದುಬೈ ಮತ್ತು ಕತಾರ್ನಲ್ಲಿ ತಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಿದ ‘ಸಾನಿಧ್ಯ’ದ ವಿಶೇಷ ಮಕ್ಕಳು ನಗರದ ಕದ್ರಿ ಉದ್ಯಾನದಲ್ಲಿ ಹವ್ಯಾಸಿ ಬಳಗ ಕದ್ರಿ ಇದರ ನಿರ್ದೇಶಕರರಾಗಿರುವ ಶ್ರೀ ಶರತ್ ಕದ್ರಿ ಇವರ ನಿರ್ದೇಶನದಲ್ಲಿ “ಕೃಷ್ಣ ಜನ್ಮ-ಕಂಸ ವಧೆ” ಎಂಬ ಯಕ್ಷಗಾನವನ್ನು ಹಾಗೂ ಡಾ. ವಸಂತ್ ಕುಮಾರ್ ಶೆಟ್ಟಿಯವರು ನಿರ್ದೇಶಿಸಿ, ಇದೇ ಜನವರಿ ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜರುಗಿದ ರಾಜ್ಯಮಟ್ಟದ ಜನಪದ ನೃತ್ಯೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ “ಕರ್ನಾಟಕ ವೈಭವ”ವನ್ನು ಪ್ರದರ್ಶಿಸಲಿದ್ದಾರೆ. 22 ಫೆಬ್ರವರಿ 2025ನೇ ತಾರೀಕು ಶನಿವಾರದಂದು ಸಂಜೆ…
ದೂರದ ಮುಂಬೈ ಮಹಾನಗರದಲ್ಲಿ ಕನ್ನಡವನ್ನು ಬೆಳಗುವಂತೆ ಮಾಡಿದ ಮಾಸಿಕ ಮೊಗವೀರ. ಈ ಪತ್ರಿಕೆಗೆ ಈಗ 85ರ ಸಂಭ್ರಮ. ಮರಾಠಿ ಮಣ್ಣಿನಲ್ಲಿ ಕನ್ನಡ ಡಿಂಡಿಮ ಮೊಳಗಿಸಿ ಇತಿಹಾಸ ನಿರ್ಮಿಸಿದ ಮೊಗವೀರ ಮಾಸಿಕ ನಡೆದ ಬಂದ ದಾರಿಯ ಕಿರು ಅವಲೋಕನ ಇಲ್ಲಿದೆ. ಮುಂಬೈ ಕನ್ನಡ ಪತ್ರಿಕೋದ್ಯಮಕ್ಕೆ ನೂರೈವತ್ತು ವರ್ಷಗಳಷ್ಟು ಸುದೀರ್ಘವಾದ ಇತಿಹಾಸವಿದೆ. ನರರ ಶ್ರೇಷ್ಠ ನಗರವಾಗಿ ಮೆರೆಯುತ್ತಿದ್ದ ಬಾಂಬೆಪುರದಿ ಎಂಬುದಾಗಿ ಮುಂಬೈ ಮಹಾನಗರವನ್ನು ಕವಿ ಡೇಂಗಾ ದೇವರಾಯ ನಾಯ್ಕ ಬಹು ಹಿಂದೆಯೇ ಕೊಂಡಾಡಿದ್ದಾನೆ. ಕರ್ನಾಟಕದಿಂದ ಮಾಯಾನಗರಿ ಮುಂಬೈಗೆ ವಲಸೆ ಬಂದವರಲ್ಲಿ ಮೊಗವೀರರೇ ಮೊದಲಿಗರು. ಮುಂಬೈಯಲ್ಲಿ ನೆಲೆ ನಿಂತು ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಮೊಗವೀರರ ಸಾಹಸ ಸಾಧನೆ ಅವಲೋಕನೀಯವಾಗಿದೆ. ಸಂಘಟನೆಯಲ್ಲಿ ಮುಂಬೈನ ತುಳು ಕನ್ನಡಿಗರದು ಎತ್ತಿದ ಕೈ. ಮೊಗವೀರ ವ್ಯವಸ್ಥಾಪಕ ಮಂಡಳಿಯು ಮುಂಬೈನ ಪ್ರತಿಷ್ಠಿತ ಸಂಘ – ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. 1902 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಮಹಾನ್ ಸಂಸ್ಥೆ ಮುಂಬೈ ಮಹಾನಗರದಲ್ಲಿ ಅದ್ಭುತವಾದ ಸಾಧನೆಗೈದಿದೆ. ಮುಂಬೈಯ ಸುತ್ತಮುತ್ತ ನೆಲೆಸಿರುವ…
ಬೆಂಗಳೂರು : ತೊಂಬತ್ತು ವಸಂತಗಳನ್ನು ಕಂಡ ಕನ್ನಡದ ಶ್ರೇಷ್ಠ ಸಾಹಿತಿ, ವಿಮರ್ಶಕ, ಭಾಷಣಕಾರರಾದ ಪ್ರೊ. ಅ.ರಾ.ಮಿತ್ರ ಇವರ ಕೃತಿ ಅವಲೋಕನ, ಅನಾವರಣ ಮತ್ತು ಅಭಿನಂದನ ಸಮಾರಂಭವನ್ನು ದಿನಾಂಕ 23 ಫೆಬ್ರವರಿ 2025ರಂದು ಬೆಳಗ್ಗೆ 9-30 ಗಂಟೆಗೆ ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಖಿಂಚ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಭಾರತೀಯ ವಿದ್ಯಾ ಭವನ ಹಾಗೂ ರಮಣಶ್ರೀ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಮಿತ್ರವೃಂದದವರು ಅರ್ಪಿಸುತ್ತಿರುವ ವಿಶೇಷ ಕಾರ್ಯಕ್ರಮ ‘ಮಿತ್ರಾವರಣ’ವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಉದ್ಘಾಟಿಸುವರು. ಖ್ಯಾತ ಸಾಹಿತಿ, ವಿಮರ್ಶಕ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ‘ಮಿತ್ರಾರ್ಜಿತ’ ಅಭಿನಂದನ ಗ್ರಂಥವನ್ನು ಶತಾವಧಾನಿ ಡಾ. ರಾ.ಗಣೇಶ್ ಇವರ ಜತೆಗೂಡಿ ಲೋಕಾರ್ಪಣೆಗೈಯುವರು. ಕನ್ನಡ ನಾಡಿನ ಹೆಸರಾಂತ ಸಾಹಿತಿಗಳು, ಕಲಾವಿದರು, ದಿಗ್ಗಜರು ಆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಪ್ರೊ. ಅ.ರಾ. ಮಿತ್ರರ ಜೀವನ ಮತ್ತು ಸಾಧನೆಯ ಬಗ್ಗೆ ಬೆಳಕು ಚೆಲ್ಲುವರು. ಮಧ್ಯಾಹ್ನ ಗೀತ-ನೃತ್ಯ-ಕಲಾ ವೈದುಷ್ಯದ ಪ್ರದರ್ಶನವನ್ನು ಸಂಗೀತ ವಿದುಷಿ ಡಾ. ನಾಗವಲ್ಲಿ ನಾಗರಾಜ್, ನೃತ್ಯ ಗುರು ಡಾ.ಶೋಭಾ ಶಶಿಕುಮಾರ್…
ಬೆಂಗಳೂರು : ಸಪ್ನ ಬುಕ್ ಹೌಸ್ ಬೆಂಗಳೂರು, ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಮತ್ತು ದಲಿತ ಸಾಹಿತ್ಯ ಪರಿಷತ್ತು ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ, ಸಾಕ್ಷ್ಯಚಿತ್ರ, ಕಥಾ ಆಲಾಪ, ಐದು ಕೃತಿಗಳ ಜನಾರ್ಪಣೆ ಮತ್ತು ಅಭಿನಂದನೆ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರು, ಕುಮಾರಪಾರ್ಕ್ ಪೂರ್ವ, ಗಾಂಧಿ ನಗರ, ಎರಡನೆಯ ಮಹಡಿ, ಮಹಾದೇವ ದೇಸಾಯಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10-00 ಗಂಟೆಗೆ ಡಾ. ಅಪ್ಪಗೆರೆ ತಿಮ್ಮರಾಜು ಮತ್ತು ತಂಡದವರಿಂದ ‘ಜನಪದ ಗೀತಗಾಯನ’ ಪ್ರಸ್ತುತಗೊಳ್ಳಲಿದೆ. ಉನ್ನತ ಶಿಕ್ಷಣ ಪರಿಷತ್ತು ಇದರ ಉಪಾಧ್ಯಕ್ಷರಾದ ಪ್ರೊ. ಎಸ್.ಆರ್. ನಿರಂಜನ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಬೆಂಗಳೂರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕವಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಇವರು ಆಶಯ ಭಾಷಣ ಮಾಡಲಿರುವರು. ಪ್ರೊ. ಪಿ.ಕೆ. ಖಂಡೋಬಾ, ಪ್ರೊ. ವ್ಹಿ.ಜಿ.…
ಕಾಸರಗೋಡು : ಇತ್ತೀಚೆಗೆ ದೀಪದ ಬೆಳಕಿನ ಯಕ್ಷಗಾನ ಎಂಬ ವಿನೂತನ ಪ್ರಯೋಗ ನಡೆಸಿ ಸೈಯೆನಿಸಿದ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಹಲವಾರು ಮೈಲಿಗಲ್ಲುಗಳನ್ನು ದಾಟಿದೆ. ಇದೀಗ ಸಂಸ್ಥೆಯು ಮತ್ತೊಂದು ದಿಟ್ಟ ಹೆಜ್ಜೆಯಿಡಲು ಸಿದ್ಧವಾಗಿದೆ. ಗಡಿನಾಡು ಕಾಸರಗೋಡಿನ ಕುಂಬಳೆ ಸಮೀಪ ನಾರಾಯಣಮಂಗಲದ ಕಿನ್ನಿಮಾಣಿ ಪೂಮಾಣಿ ಕಟ್ಟೆಯಲ್ಲಿ ಇನ್ನೊಂದು ವಿಶಿಷ್ಟ ಪ್ರಯೋಗ ನಡೆಯಲಿದೆ. ಯಕ್ಷ ಗುರು ಶ್ರೀಯುತ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ಮಾರ್ಗದರ್ಶನದಲ್ಲಿ ‘ದೊಂದಿ ಬೆಳಕಿನ ಯಕ್ಷಗಾನ’ ಪ್ರದರ್ಶನಕ್ಕೆ ರಂಗಸಿರಿಯ ತಂಡವು ಸಿದ್ಧವಾಗಿದೆ. ಯಕ್ಷಗಾನ ಕಲಾಭಿಮಾನಿಗಳಿಗೆ ಇದೊಂದು ಅಪೂರ್ವ ಸುವರ್ಣಾವಕಾಶವಾಗಿದೆ. ಯಕ್ಷಗಾನದ ಗತವೈಭವವನ್ನು ಮರಳಿ ಕಾಣುವ ಪ್ರಯತ್ನವೆಂಬ ನಿಟ್ಟಿನಲ್ಲಿ ಇದು ಮಹತ್ವ ಪಡೆದಿದೆ. ದಿನಾಂಕ 22 ಫೆಬ್ರವರಿ 2025ರಂದು ರಾತ್ರಿ 10-00 ಗಂಟೆಗೆ ಯಕ್ಷಗಾನ ಆರಂಭಗೊಳ್ಳಲಿದ್ದು, ‘ಗಿರಿಜಾ ಕಲ್ಯಾಣ’ ಹಾಗೂ ‘ಪುರುಷಾಮೃಗ’ ಎಂಬ ಪುರಾಣ ಕಥಾನಕಗಳ ಪ್ರಸ್ತುತಿ ನಡೆಯಲಿದೆ. ಪರಂಪರೆಯ ದೇವೇಂದ್ರ ಒಡ್ಡೋಲಗದ ಗಾಂಭೀರ್ಯ, ಮನ್ಮಥ ದಹನದ ಪ್ರಸ್ತುತಿ, ಹನುಮ ಒಡ್ಡೋಲಗಗಳು, ಸಭಿಕರ ಮಧ್ಯದಿಂದೆದ್ದು ಬರುವ ಕೆಲವು ವೇಷಗಳ ಅಬ್ಬರ ಇತ್ಯಾದಿ ಆಕರ್ಷಣೆಗಳಿರಲಿವೆ.…