Author: roovari

ತುಮಕೂರು : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ನಡೆಯುವ ಸುವರ್ಣ ಪರ್ವ -10ರ ಸರಣಿಯಲ್ಲಿ ಯಕ್ಷಗಾನ ಸಾಂಸ್ಕೃತಿಕ ವೇದಿಕೆ ಮತ್ತು ಶ್ರೀ ಕೃಷ್ಣ ಮಂದಿರ ತುಮಕೂರು ಇವರ ಸಹಯೋಗದೊಂದಿಗೆ ಸುವರ್ಣ ಸಮ್ಮಾನ – ಯಕ್ಷಗಾನ ಪ್ರದರ್ಶನವನ್ನು ದಿನಾಂಕ 07 ಜೂನ್ 2025ರಂದು ಸಂಜೆ 04-00 ಗಂಟೆಗೆ ತುಮಕೂರಿನ ಕೆ.ಆರ್. ಬಡಾವಣೆಯಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಕ್ಷೇತ್ರದ ಅನನ್ಯ ಸಾಧಕ ದಂಪತಿಗಳಾದ ಆರತಿ ಪಟ್ರಮೆ ಹಾಗೂ ಸಿಬಂತಿ ಪದ್ಮನಾಭ ಇವರಿಗೆ ಸುವರ್ಣಪರ್ವ ಗೌರವ ಪುರಸ್ಕಾರ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಕಾರ್ಕಳದ ಶ್ರೀದೇವಿ ಲಲಿತ ಕಲಾವೃಂದದವರಿಂದ ‘ಶಾಂಭವಿ ವಿಜಯ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Read More

ಮಂಗಳೂರು : ಹೋಟೆಲ್ ಮಾಯಾ ಇಂಟರ್‌ನ್ಯಾಷನಲ್‌ನಲ್ಲಿ ದಿನಾಂಕ 31 ಮೇ 2025ರ ಶನಿವಾರದಂದು ನಡೆದ ಮಂಗಳೂರು ಮೆಟ್ರೋ ರೋಟರಿ ಕ್ಲಬ್‌ನ ವಾರದ ಕುಟುಂಬ ಸಭೆ ಹಾಸ್ಯ, ನೆನಪು ಮತ್ತು ಪ್ರೇರಣೆಯ ಸಂಜೆಯಾಗಿ ಪರಿವರ್ತಿತವಾಯಿತು. ನಾಡಿನ ಖ್ಯಾತ ನಾಟಕಕಾರರೂ ಹಾಗೂ ಚಿತ್ರರಂಗದ ಅಭಿಜಾತ ಕಲಾವಿದರೂ ಆದ ಕಾಸರಗೋಡು ಚಿನ್ನಾ (ಸುಜೀರ್ ಶ್ರೀನಿವಾಸ್ ರಾವ್) ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕನ್ನಡ, ತುಳು, ಕೊಂಕಣಿ, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿನ 400ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ಚಿನ್ನಾರವರು, ಕಾಸರಗೋಡಿನ ಸಣ್ಣ ವೇದಿಕೆಯಿಂದ ಬೆಳ್ಳಿತೆರೆಗೆ ಸಾಗಿದ ತಮ್ಮ ಕಲಾಜೀವನದ ಪಯಣವನ್ನು ಮನಮೋಹಕವಾಗಿ ಹಂಚಿಕೊಂಡರು. ಅವರ ಚುಟುಕು ಮಾತುಗಳು, ಹೃದಯಸ್ಪರ್ಶಿ ಕಥೆಗಳು ಹಾಗೂ ಹಾಸ್ಯಭರಿತ ನೆನೆಪುಗಳು ಸಭಿಕರ ಮುಖದಲ್ಲಿ ಮಂದಹಾಸ ಮೂಡಿಸಿತು. “ಬದುಕು ಕ್ಷಣಿಕ ಆದರೆ ಸುಂದರ. ಕೆಟ್ಟದನ್ನು ಬಿಟ್ಟು ಧನಾತ್ಮಕವಾಗಿ ಚಿಂತಿಸಿ, ಇಡಿಯಾಗಿ ಬದುಕಿ” ಎಂಬ ಅವರ ಮಾತುಗಳು ಸಭಿಕರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದವು. ಸಭೆಯ ಅಧ್ಯಕ್ಷತೆಯನ್ನು ಕ್ಲಬ್‌ ಅಧ್ಯಕ್ಷರಾದ ಶ್ರೀಮತಿ ಛಾಯಾ ಕಾಮತ್ ಹಾಗೂ…

Read More

ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಶಿವಮೊಗ್ಗ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪಕರು ನಾಡಿನ ಅಭಿವೃದ್ಧಿಯ ಕಳಶಪ್ರಾಯರಾದ ರಾಜರ್ಷಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಇವರ 141 ನೆಯ ಜನ್ಮದಿನಾಚರಣೆಯನ್ನು ದಿನಾಂಕ 04 ಜೂನ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಉದ್ಘಾಟನೆ ಮಾಡಲಿದ್ದು, ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಈಶ್ವರಪ್ಪ ಎಚ್. ಇವರು ಅಧ್ಯಕ್ಷತೆ ವಹಿಸಲಿರುವರು. ಹಿರಿಯ ಸಾಹಿತಿ ಜಿ.ವಿ. ಸಂಗಮೇಶ್ವರ ಇವರು ಉಪನ್ಯಾಸ ನೀಡಲಿದ್ದು, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಯೋಗೀಶ್ ಎಸ್. ಅತಿಥಿಯಾಗಿ ಭಾಗವಹಿಸಲಿದ್ದಾರೆ.

Read More

ಮಂಗಳೂರು : “ಪ್ರತಿಯೊಬ್ಬ ವ್ಯಕ್ತಿಯ ಒಳಗೊಬ್ಬ ಕಲಾವಿದ ಇರುತ್ತಾನೆ. ಅವನನ್ನು ಜಾಗ್ರತಗೊಳಿಸುವುದಷ್ಟೇ ನನ್ನ ಕೆಲಸ. ನಿಮ್ಮೊಳಗಿನ ಪ್ರತಿಭೆ ನಿಮಗೆ ತಿಳಿಯುವುದಿಲ್ಲ. ಆಸಕ್ತಿ, ಶ್ರದ್ದೆ, ಮತ್ತು ತಾಳ್ಮೆಯು ಕಲಾವಿದನಿಗೆ ಇರಬೇಕಾದ ಮುಖ್ಯ ಲಕ್ಷಣಗಳು”. ಎಂದು ಖ್ಯಾತ ರಂಗ ನಿರ್ದೇಶಕ, ನಟ ಕಾಸರಗೋಡು ಚಿನ್ನಾ ಅವರು ತಿಳಿಸಿದರು. ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ನೇತೃತ್ವದಲ್ಲಿ ವರ್ಷಂಪ್ರತಿ ಜರಗುವ “ಕ್ಷಿತಿಜ್ ” ಕಾರ್ಯಕ್ರಮದ ಅಂಗವಾಗಿ ಕೇಂದ್ರದಲ್ಲಿ ಜರಗಿದ ರಂಗ ತರಬೇತಿ ಶಿಬಿರದ ನಿರ್ದೇಶಕರಾಗಿ ಅವರು ಮಾತನಾಡುತ್ತಿದ್ದರು. ಮೇ ತಿಂಗಳ 25 ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಊರುಗಳಿಂದ ಭಾಗವಹಿಸಿದ ಸುಮಾರು 70 ಮಂದಿ ವಿದ್ಯಾರ್ಥಿಗಳಿಗೆ ಧ್ವನಿ ಏರಿಳಿತ, ಮೂಕಾಭಿನಯ, ನಟನೆ ಮತ್ತು ಅಂಗಿಕ ಅಭಿನಯ ಸೇರಿದಂತೆ ರಂಗಭೂಮಿಯ ವಿವಿಧ ಆಯಾಮಗಳ ಬಗ್ಗೆ ವಿವರಿಸಿ ಹೇಳಿದರು. ವಿಶ್ವ ಕೊಂಕಣಿ ಕೇಂದ್ರದ ಆಡಳಿತ ನಿರ್ದೇಶಕರಾದ ಸಿ.ಎ. ನಂದಗೋಪಾಲ ಶೆಣೈ ಅವರು “ಕ್ಷಿತಿಜ್ ” ಕಾರ್ಯಾಗಾರದ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಿದರು. ಕೇಂದ್ರದ ಶ್ರೀಮತಿ ಲಕ್ಷ್ಮಿ ಅವರು ಸ್ವಾಗತಿಸಿ,…

Read More

ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಕಥೆ ಬರೆಯುವ ಕಾರ್ಯಾಗಾರ ದಿನಾಂಕ 31 ಮೇ 2025ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಮಾತನಾಡಿ “ಮಕ್ಕಳಲ್ಲಿ ಕಥೆ ಬರೆಯುವ ಹವ್ಯಾಸವನ್ನು ಬೆಳೆಸಿದರೆ ಮುಂದೆ ಉತ್ತಮ ಕಥೆಗಾರರಾಗಿ ಭಾಷೆ, ಸಾಹಿತ್ಯಕ್ಕೆ ದೊಡ್ಡ ಆಸ್ತಿ ಆಗಲಿದ್ದಾರೆ” ಎಂದು ಹೇಳಿದರು. ಅಕಾಡೆಮಿಯ ಸದಸ್ಯ ಹಾಗು ಕಾರ್ಯಕ್ರಮದ ಸಂಚಾಲಕ ಲೋಕೇಶ್ ಊರುಬೈಲು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಕಾಡೆಮಿ ಸದಸ್ಯರಾದ ತೇಜಕುಮಾರ್ ಕುಡೆಕಲ್ಲು, ಅರಂತೋಡು ಶಾಲೆಯ ಶಿಕ್ಷಕರಾದ ಕಿಶೋರ್ ಕುಮಾರ್ ಕಿರ್ಲಾಯ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಪುನೀತ್ ರಾಘವೇಂದ್ರ ಕುಂಟುಕಾಡು, ಪ್ರಸನ್ನ ಐವರ್ನಾಡು ಮತ್ತು ಅಕಾಡೆಮಿ ಸದಸ್ಯರಾದ ಗೋಪಾಲ ಪೆರಾಜೆ ಉಪಸ್ಥಿತರಿದ್ದರು. ದೃತಿ ದೀಟಿಗೆ ಸ್ವಾಗತಿಸಿ, ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿ, ಖಷೀರ ಸಿ.ಯು ವಂದಿಸಿದರು. ಸಂಜೆ ನಡೆದ ಸಮಾರೋಪ…

Read More

ಮಡಿಕೇರಿ : ಪತ್ರಕರ್ತ ಪ್ರಶಾಂತ್ ಟಿ. ಆರ್ ವಿರಚಿತ ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಈ ಸಾಲಿನ ಇಂಡಿಯನ್ ಐಕಾನ್ ಸಂದಿದೆ. ಒರಿಯಂಟಲ್ ಫೌಂಡೇಶನ್ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಇಂಡಿಯನ್ ಐಕಾನ್ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅಂತೆಯೇ ಈ ಬಾರಿಯೂ ಪ್ರಶಸ್ತಿ ಪ್ರಕಟಸಿದ್ದು ಸಾಹಿತ್ಯ ಕ್ಷೇತ್ರದಿಂದ ಪ್ರಶಾಂತ್ ಟಿ.ಆರ್. ವಿರಚಿತ ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ. ಬಡತನದಲ್ಲಿ ಅರಳಿದ ಕ್ರೀಡಾ ಪ್ರತಿಭೆಯ ಕುರಿತ ಕಥಾವಸ್ತು ಈ ಕಾದಂಬರಿಯಲ್ಲಿ ಅಡಕವಾಗಿದೆ. ವಿಶೇಷ ಎಂದರೆ ಈ ಕಾದಂಬರಿಯನ್ನು ಮೆಚ್ಚಿದ ಖ್ಯಾತ ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅನಿರುದ್ಧ ಜಟ್ಕರ್ ಬೆನ್ನುಡಿ ಬರೆದಿದ್ದಾರೆ. ಬಾಲಿವುಡ್ ನಟ ಹಾಗೂ ಕ್ರಿಕೆಟಿಗೆ ಭಾಸ್ಕರ್ ಮುನ್ನುಡಿ ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅವರ ಸಹಯೋಗದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ದಿನಾಂಕ 15 ಜೂನ್ 2025ರಂದು ಬೆಂಗಳೂರಿನ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ನೆರವೇರಲಿದ್ದು, ಅಂದು…

Read More

ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮದ 11ನೇ ದಿನದ ಕಾರ್ಯಕ್ರಮ ದಿನಾಂಕ 28ಮೇ 2025ರ ಬುಧವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉದ್ಯಮಿ, ಕಲಾಪೋಷಕ ಸಿ. ಎಸ್. ಭಂಡಾರಿ ಮಾತನಾಡಿ “ಇಂದು ಯಕ್ಷಗಾನವು ಪಂಡಿತ-ಪಾಮರರೆನ್ನುವ ಬೇಧವಿಲ್ಲದೇ ಎಲ್ಲರನ್ನೂ ಸುಲಭವಾಗಿ ತಲುಪುವ ಕಲೆಯಾಗಿದೆ. ಎಳೆಯ ಚಿಣ್ಣರೂ ಇದರ ನಾಟ್ಯಗಾರಿಕೆ ಮಾತುಗಾರಿಕೆಯನ್ನು ಕೈಗೂಡಿಸಿಕೊಂಡು ಬೆಳೆಯುತ್ತಿದ್ದಾರೆ. ಇದು ಈ ರಂಗದಲ್ಲಿ ಉತ್ತಮ ಬೆಳವಣಿಗೆ ಎಂಬುದು ಸಂತಸದ ವಿಷಯ. ಕಲಾ ಗೌರವ ಎಲ್ಲೆಡೆ ತುಂಬಿ ಹರಿಯಲಿ” ಎಂದು ಹಾರೈಸಿದರು. ಸಾಧಕ ಸನ್ಮಾನವನ್ನು ಸ್ವೀಕರಿಸಿದ ನಿವೃತ್ತ ಶಿಕ್ಷಕ, ಯಕ್ಷಲಹರಿ (ರಿ) ಸಂಸ್ಥೆಯ ಕಾರ್ಯದರ್ಶಿ ಕಲ್ಲ ಮುಂಡ್ಕೂರು ವಸಂತ ದೇವಾಡಿಗ ಮಾತನಾಡಿ “ಯಕ್ಷಗಾನ,u ನಾಟಕವೇ ಮೊದಲಾದ ಸಾಂಸ್ಕೃತಿಕ ರಂಗದಲ್ಲಿ ನಿರಂತರ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದೇನೆ. ಇದರಲ್ಲಿ ತುಂಬಾ ವಿಚಾರಗಳನ್ನು ತಿಳಿದಿದ್ದೇನೆ. ಇದು ನನಗೆ ಪ್ರಿಯವಾದ…

Read More

ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಮತ್ತು ಯಕ್ಷಗಾನ ಕಲಿಕಾ ಕೇಂದ್ರ ತೆಕ್ಕಟ್ಟೆ ಇವರ ಸಹಯೋಗದಲ್ಲಿ ನಡೆಯುವ ಆರು ತಿಂಗಳುಗಳ ಕಾಲದ ಬಡಗು ಹಿಮ್ಮೇಳ ಮುಮ್ಮೇಳ ಯಕ್ಷಗಾನದ ತರಗತಿಯು ದಿನಾಂಕ 01 ಜೂನ್ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶಾರದಾ ಪೀಠಂ ಶೃಂಗೇರಿಯ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತಿ ಲೋಕೇಶ ಅಡಿಗರು “ಸನಾತನ ಧರ್ಮದಲ್ಲಿ ಸತ್ಕಾರ್ಯಗಳೆಲ್ಲವಕ್ಕೂ ಮನ್ನಣೆ ಇದೆ. ಪ್ರತೀ ಮನೆ ಮನೆಗಳ ಒಂದೊಂದು ಮಗುವಿನ ಹೃದಯದಲ್ಲೂ ಕಲೆ ಇರುತ್ತದೆ. ಹಲವು ಮಕ್ಕಳು ಜನ್ಮತಃ ಕಲಾವಿದರಾಗಿರುತ್ತಾರೆ. ಅವರನ್ನು ಹೊರ ಪ್ರಪಂಚಕ್ಕೆ ತೋರಿಸುವುದಕ್ಕೆ ಇಂತಹ ಸಂಸ್ಥೆ ಬೇಕು, ಗುರುಗಳು ಬೇಕು. ಅನೇಕ ಮಕ್ಕಳನ್ನು ಕಲಾ ಪ್ರಪಂಚಕ್ಕಾಗಿ ತಯಾರಿ ಮಾಡುವಲ್ಲಿ ಸಂಸ್ಥೆಯ ಸ್ವಾರ್ಥ ಇರುವುದಿಲ್ಲ. ಗುರುಗಳಿಗೆ ಯಾವುದೇ ನಿರೀಕ್ಷೆ ಇರುವುದಿಲ್ಲ. ಕೇವಲ ಕಲೆ ಬೆಳೆಯಬೇಕೆಂಬುದಷ್ಟೇ ಆಗಿರುತ್ತದೆ. ಸಂಸ್ಥೆ ಅನೇಕ ಶಿಷ್ಯರನ್ನು ಹೊಂದಿ ಇನ್ನಷ್ಟು ಬೆಳೆಯಲಿ” ಎಂದು ಶುಭಾಶಂಸನೆಗೈದರು. ತರಗತಿಯನ್ನು ಮಕ್ಕಳಿಗೆ ಕೋರೆ ತಾಳ ಹೇಳಿಕೊಡುವ ಮೂಲಕ ಉದ್ಘಾಟಿಸಿದ…

Read More

ಶಿವಮೊಗ್ಗ : ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತನ್ನ ಮೂರು ವರ್ಷದ ಕಾರ್ಯಚಟುವಟಿಕೆಗಳ ದಾಖಲೆಗಳಿರುವ ‘ಕ್ರಿಯಾಶೀಲತೆಯ ಒಳನೋಟ’ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿ ಕುರಿತು ಚರ್ಚೆ ಕಾರ್ಯಕ್ರಮವು ದಿನಾಂಕ 28 ಮೇ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ 19ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಜೆ.ಕೆ. ರಮೇಶ್ “ಕ್ರಿಯಾಶೀಲತೆಯ ಒಳನೋಟಕ್ಕೆ ಹೊರನೋಟವು ಇದೆ. ಮಲೆನಾಡಿನ ಚಿತ್ರಣ, ಜಿಲ್ಲೆಯ ನಕ್ಷೆ, ರಾಷ್ಟ್ರಕವಿಯ ಚಿತ್ರ ಎಲ್ಲವನ್ನೂ ಒಳಗೊಂಡಿದೆ. ಪರಿಷತ್ತು ಚಟುವಟಿಕೆಗಳು, ಅತಿಥಿಗಳ ಮಾತು ಸಂಘಟಿಸಿದ ನಾಲ್ಕು ಸಮ್ಮೇಳನಗಳ ಭಾಷಣಗಳ ಸಂಗ್ರಹಗಳಲ್ಲಿ ನೂರ ಇಪ್ಪತೈದು ಜನರ ಭಾಷಣಗಳ ಟಿಪ್ಪಣಿಗಳಿವೆ. ಇಲ್ಲಿ ಎಲ್ಲಾ ಬಗೆಯ ಅಭಿಪ್ರಾಯಗಳಿವೆ. ಒಳಹೊಕ್ಕು ನೋಡಿದಾಗ ಒಳನೋಟದ ಅರಿವಾಗುತ್ತೆ. ಈ ಸಂಚಿಕೆಯಲ್ಲಿ ಕನ್ನಡ ಭಾಷೆ, ಅದರ ಸ್ವರೂಪ, ಸ್ಥಿತಿ, ಸ್ಥಾನಮಾನಗಳ ಕುರಿತು ಚಿಂತಿಸಿರುವ ಲೇಖನಗಳಿವೆ. ಸಾಹಿತ್ಯ ಕೃತಿಗಳು,…

Read More

ಕಾಸರಗೋಡು : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ ಮತ್ತು ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಆಶ್ರಯದಲ್ಲಿ ದಿನಾಂಕ 08 ಜೂನ್ 2025ರಂದು ಅಪರಾಹ್ನ 3-00 ಗಂಟೆಗೆ ಕನ್ನಡ ಭವನ ಸಭಾಂಗಣದಲ್ಲಿ ಕಯ್ಯಾರ ಕಿಞಣ್ಣ ರೈ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಲಿದೆ. ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದಂಪತಿಗಳು ಕಯ್ಯಾರರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ನುಡಿನಮನ ಸಲ್ಲಿಸುವರು. ಮುಖ್ಯ ಅತಿಥಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ನ್ಯಾಯವಾದಿ ಕೆ. ಸತ್ಯನಾರಾಯಣ ತಂತ್ರಿ, ದ.ಕ. ಜಿಲ್ಲಾ ಕನ್ನಡ ಭವನ ಅಧ್ಯಕ್ಷೆ ರೇಖಾ ಸುಧೇಶ್ ರಾವ್, ದ.ಕ. ಜಿಲ್ಲಾ ಕನ್ನಡ ಭವನ ಕಾರ್ಯಾಧ್ಯಕ್ಷ ಉಮೇಶ್…

Read More