Subscribe to Updates
Get the latest creative news from FooBar about art, design and business.
Author: roovari
ಮುಂಬಯಿ: ಮೈಸೂರು ಅಸೋಸಿಯೇಶನ್ ಮುಂಬಯಿ ದಿನಾಂಕ 28-05-2023ರಂದು ಸಂಜೆ ಗಂಟೆ 6ಕ್ಕೆ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ‘ಬಹುಮಾನ ವಿತರಣಾ ಸಮಾರಂಭ’ ನಡೆಯಲಿದೆ. ಇದೇ ಸಂದರ್ಭದಲ್ಲಿ ಡಾ. ಬೇಲೂರು ರಘುನಂದನ್ ರಚನೆಯ ಶ್ರೀ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ‘ಚಿಟ್ಟೆ’ ನಾಟಕ ಪ್ರದರ್ಶನವಿದೆ. ಬೆಂಗಳೂರಿನ ಹೆಸರಾಂತ ಬಾಲ ಕಲಾವಿದ ಮಾಸ್ಟರ್ ಗೋಕುಲ ಸಹೃದಯ ಅವರ ಏಕಪಾತ್ರ ಅಭಿನಯ ಈ ನಾಟಕದ ವೈಶಿಷ್ಟ್ಯ. ಡಾ. ಬೇಲೂರು ರಘುನಂದನ್ ಅವರ “ಶರ್ಮಿಷ್ಟೆ” ನಾಟಕಕ್ಕೆ ಪ್ರಥಮ ಬಹುಮಾನ ಬಂದಿರುತ್ತದೆ. ನಾಟಕಕಾರ, ನಟ, ನಿರ್ದೇಶಕ, ಲೇಖಕ ಡಾ. ಬೇಲೂರು ರಘುನಂದನ್ ಬೆಂಗಳೂರಿನ ವಿಜಯನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯರಾದ ಇವರಿಗೆ ಕಾಜಾಣ ಬಳಗದ ಮೂಲಕ ಅನೇಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ ಅನುಭವವಿದೆ. 1996ರಲ್ಲಿ ರಂಗಭೂಮಿ ಪ್ರವೇಶಿಸಿದ ಇವರು ನಾಟಕ ನಿರ್ದೇಶನ ಮಾಡುವಲ್ಲಿಂದ ಬಣ್ಣ ಹಚ್ಚಿ ಅಭಿನಯ ಮಾಡುವುದರಲ್ಲೂ ಸೈ ಅನ್ನಿಸಿ ಕೊಂಡವರು. ಸುಮಾರು 27ಕ್ಕೂ ಮಿಕ್ಕಿ ನಾಟಕ…
ಕಾಸರಗೋಡು : ಕಲಾಕುಂಚ ದಾವಣಗೆರೆ ಸಂಸ್ಥೆಯ ಕಾಸರಗೋಡು ಗಡಿನಾಡು ಶಾಖೆಯ ವತಿಯಿಂದ 21-05-2023ರಂದು ಮಂಗಲ್ಪಾಡಿ ಶಾರದಾ ಭಜನಾ ಮಂದಿರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವ್ಯಂಗ್ಯ ಚಿತ್ರ ರಚನಾ ತರಬೇತಿ ಶಿಬಿರವು ನಡೆಯಿತು. ಖ್ಯಾತ ಕವಿ ಶ್ರೀ ವಿ.ಬಿ.ಕುಳಮರ್ವರವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು, ವಿಶ್ರಾಂತ ಕನ್ನಡ ಪ್ರೊಫೆಸರ್ ಹಾಗೂ ಪ್ರಿನ್ಸಿಪಾಲ್ ಶ್ರೀ ಪಿ.ಎನ್ ಮೂಡಿತ್ತಾಯರವರು ಸುಂದರವಾದ ರೇಖಾ ಚಿತ್ರವೊಂದನ್ನು ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿರಾಜ್ ಅಡೂರು ಅವರು ತರಬೇತಿ ನೀಡಿದರು. ಕಲಾಕುಂಚ ಕೇರಳ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಹಾಗೂ ಶ್ರೀ ರಾಮ ಕಾರಂತ್ ಕೋರ್ತಿಮಾರು ಉಪಸ್ಥಿತರಿದ್ದರು. ಶ್ರೀಮತಿ ಶಶಿಕಲಾ ಮಯ್ಯ ಸ್ವಾಗತಿಸಿ, ಶ್ರೀಮತಿ ಜಯಲಕ್ಷ್ಮಿ ಆರ್. ಹೊಳ್ಳ ವಂದಿಸಿದರು. ಸಾಧಾರಣ ಇಪ್ಪತ್ತೊಂದು ಮಕ್ಕಳು ಶಿಬಿರಾರ್ಥಿಗಳಾಗಿ ಆಸಕ್ತಿಯಿಂದ ಭಾಗವಹಿಸಿದ್ದ, ಅದೊಂದು ಸುಂದರ ಶಿಬಿರ ಮತ್ತು ಬೇಸಿಗೆಯ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಲು ಈ ರೀತಿಯ ಶಿಬಿರಗಳು ಸಹಕಾರಿ. ಶ್ರೀ ವಿರಾಜ್ ಅಡೂರು ಸರ್ ರವರು ಮಕ್ಕಳಿಗೆ…
ಉಡುಪಿ: ಉಡುಪಿ ಜಿಲ್ಲೆಯ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯದಲ್ಲಿ ಮೇ 21ರಂದು ಜರಗಿದ ನೂತನ ಗರ್ಭಗುಡಿಯ ಷಢಾಧಾರ, ನಿಧಿ ಕುಂಭ ಪ್ರತಿಷ್ಠೆ ಮತ್ತು ಗರ್ಭನ್ಯಾಸ ಕಾರ್ಯಕ್ರಮದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ ಮುಂಬೈ ಅವರ ಸಂಪೂರ್ಣ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ 8 ಹಾಡುಗಳ ‘ಪುಣ್ಯನೆಲ ಪೆರಣಂಕಿಲ’ ತುಳು-ಕನ್ನಡ ಭಕ್ತಿಗೀತಾ ಸಂಗಮದ ಧ್ವನಿ ಕರಂಡಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು “ಶ್ರೀ ಮಹಾಲಿಂಗೇಶ್ವರ ಮತ್ತು ಉದ್ಭವ ಗಣಪತಿಯ ಸಾನಿಧ್ಯವಿರುವ ಪೆರ್ಣಂಕಿಲ ಕ್ಷೇತ್ರವು ಅತ್ಯಂತ ಪುರಾತನವಾಗಿದ್ದು ಅದರ ಮಹಿಮೆಯನ್ನು ಎಲ್ಲರೂ ತಿಳಿಯುವಂತಾಗಬೇಕು. ಅದಕ್ಕಾಗಿ ಗೀತಾ ಸಾಹಿತ್ಯವನ್ನು ರಚಿಸಿ ನಾಡಿನ ಶ್ರೇಷ್ಠ ಸಂಗೀತಜ್ಞರ ಧ್ವನಿಯಲ್ಲಿ ಭಕ್ತಿ ಕರಂಡಿಕೆಯನ್ನು ಸಿದ್ಧಗೊಳಿಸಿರುವುದು ಶ್ಲಾಘನೀಯ. ಇದರಿಂದ ಕ್ಷೇತ್ರದ ಪುರಾಣ-ಇತಿಹಾಸಗಳು ಜನಮಾನಸಕ್ಕೆ ತಲುಪಲಿ” ಎಂದು ಹೇಳಿದ್ದಾರೆ. ಸಮಾರಂಭದಲ್ಲಿ 2 ತುಳು ಹಾಗೂ 6 ಕನ್ನಡ ಹಾಡುಗಳ ಭಕ್ತಿಗೀತಾ ಸಾಹಿತ್ಯವನ್ನು ರಚಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ,…
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಪುತ್ತಿಗೆಯ ಗೋಪಾಲಕೃಷ್ಣ ಭಟ್ ಹಾಗೂ ರೂಪಾ ಭಟ್ ಇವರ ಮಗಳಾಗಿ 24.05.2004ರಂದು ದಿವ್ಯಶ್ರೀ ಭಟ್ ಪುತ್ತಿಗೆ ಅವರ ಜನನ. ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ B.A ವ್ಯಾಸಂಗವನ್ನು ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಆಸಕ್ತಿ ತುಂಬಾನೇ ಇದ್ದ ಇವರಿಗೆ ಮೂಡಬಿದ್ರೆಯ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಗುರುಗಳಾದ ಲೀಲಾವತಿ ಬೈಪಾಡಿತ್ತಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳು ಯಕ್ಷಗಾನ ಭಾಗವತಿಕೆ ಹಾಗೂ ಚೆಂಡೆ ಮದ್ದಳೆ ತರಬೇತಿ ನೀಡುವುದಗಿ ಹೇಳಿದರು. ಆಗಲೇ ಕುಶಿಯಿಂದ ಭಾಗವತಿಕೆಗೆ ಸೇರಿಕೊಂಡ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಗುರುಗಳಾದ ಲೀಲಾವತಿ ಬೈಪಡಿತ್ತಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯ ಅವರು ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ತರಬೇತಿ ಮಾಡುವುದನ್ನು ನಿಲ್ಲಿಸಿದ ಮೇಲೆ ಮನೆಯ ಹತ್ತಿರದಲ್ಲೇ ಯಕ್ಷಗಾನ ಚೆಂಡೆ ಹಾಗೂ ಮದ್ದಳೆ ಕಲಾವಿದರಾದ ಕೌಶಿಕ್ ರಾವ್ ಪುತ್ತಿಗೆ ಅವರ ಹೆಂಡತಿ ಅಮೃತ ಅಡಿಗ ಅವರೊಡನೆ ಯಕ್ಷಗಾನ ಭಾಗವತಿಕೆ ತರಬೇತಿಯನ್ನು ಪಡೆದುಕೊಂಡರು. ಹಾಗಾಗಿ ಇವರ ನಂತರದ ಗುರುಗಳು ಶ್ರೀಮತಿ ಅಮೃತ ಅಡಿಗ.…
ಕಾಸರಗೋಡು : ಜೋನ್ ಡಿ ಸೋಜಾ ಅವರ ಸಂಪಾದಕೀಯದ ಪೊಸಡಿಗುಂಪೆ ಮಾಸ ಪತ್ರಿಕೆಯ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಗಡಿನಾಡ ಕನ್ನಡಿಗರ ದರ್ಪಣ ಕಾರ್ಯಕ್ರಮವು ದಿನಾಂಕ 20-05-2023ರಂದು ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಶ್ರೀ ಸದಾಶಿವ ಮುಖ್ಯೋಪಾಧ್ಯಾಯರು ಬಿ ಪಿ ಪಿ ಎ ಎಲ್ ಪಿ ಶಾಲೆ ಪೆರ್ಮುದೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ರಾಮಚಂದ್ರ ಭಟ್ ಪ್ರಾಂಶುಪಾಲರು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಡಾ. ವಾಣಿಶ್ರೀ ಕಾಸರಗೋಡು (ವೈದ್ಯರು, ಸಾಹಿತಿಗಳು, ಸಂಘಟಕರು), ಶ್ರೀ ಮಹಾಲಿಂಗ ಭಟ್ ಮುಖ್ಯೋಪಾಧ್ಯಾಯರು ಎ.ಯು.ಪಿ. ಶಾಲೆ ಧರ್ಮತ್ತಡ್ಕ, ಶ್ರೀ ಶಾರದಾ ತನಯ ಬಾಯಾರು ಭಾಗವಹಿಸಿದ್ದರು. ಎಡ್ವಕೇಟ್ ಥಾಮಸ್ ಡಿಸೋಜಾ ಸೀತಾಂಗೋಳಿ, ಶ್ರೀ ಪಿ. ರಾಮಚಂದ್ರ ಭಟ್ ಧರ್ಮತ್ತಡ್ಕ, ಶುಭಾಶಾಂಸನೆಗೈದರು. ಈ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯಿಂದ ಸಾಹಿತ್ಯ ಗಾನ ನೃತ್ಯ…
ಬೆಂಗಳೂರು: ರಂಗಮಂಡಲ – ಸಿವಗಂಗ ಟ್ರಸ್ಟ್ ಪ್ರಸ್ತುತ ಪಡಿಸುವ ‘ಮ್ಯಾಳ ಕಲಿಯೋಣ ಬಾರ’ ದೊಡ್ಡಾಟ-ಮೂಡಲಪಾಯ ಯಕ್ಷಗಾನ ಉಚಿತ ಶಿಬಿರವು 28 ಮೇ 2023ರಿಂದ 4 ಜೂನ್ 2023ರವರೆಗೆ ಬೆಂಗಳೂರಿನ ಕೆಂಗೇರಿಯ ಸಿವಗಂಗ ರಂಗಮಂದಿರದಲ್ಲಿ ನಡೆಯಲಿದೆ. ದೊಡ್ಡಾಟ/ಅಟ್ಟದಾಟ/ಬಯಲಾಟ/ಮೇಳೆ ಎಂಬ ದೃಶ್ಯ ಕಲಾಪ್ರಕಾರ ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನದಷ್ಟೇ ಪುರಾತವಾದ ಶ್ರೀಮಂತವಾದ ದೃಶ್ಯ ಮಾದ್ಯಮ. ಬಯಲುಸೀಮೆಯ ಅಭಿಜಾತ ರಂಗವೈಭವ. ಹಳೆಯ ಮೈಸೂರು ಭಾಗದಲ್ಲಿ ‘ಮ್ಯಾಳ’ ಎಂದೇ ಪ್ರಸಿದ್ಧವಾಗಿರುವ ಶುದ್ಧ ಯಕ್ಷಗಾನ. ಅಧ್ಯಯನ/ಸಂಶೋಧನೆ ಹಾಗೂ ಗುರುತಿಸಲ್ಪಡುವ ಕಾರಣಕ್ಕಾಗಿ ವಿದ್ವಾಂಸರಿಂದ ‘ಮೂಡಲಪಾಯ ಯಕ್ಷಗಾನ’ ಎಂದು ಕರೆಯಲ್ಪಡುವ ‘ಮೇಳ – ಮ್ಯಾಳ’ದ ಕಲಿಕಾ ಶಿಬಿರ. ಶಿಬಿರವು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ 5ರಿಂದ 8ರವರೆಗೆ ಹಿರಿಯ ಕಲಾವಿದರಾದ ಅರಳಗುಪ್ಪೆ ಕಲ್ಮನೆ ನಂಜಪ್ಪನವರ ಶಿಷ್ಯರಾದ ಯುವ ಭಾಗವತರೂ ಹಾಗೂ ಕಲಾವಿದರಾದ ಎ.ಆರ್. ಪುಟ್ಟಸ್ವಾಮಿ ಅರಳಗುಪ್ಪೆ ಅವರ ನಿರ್ದೇಶನದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಖ್ಯಾತ ಕಾದಂಬರಿಗಾರ್ತಿಯಾದ ಆಶಾ ರಘುರವರ ‘ಪೂತನಿ’ಯನ್ನು ರಂಗರೂಪಕ್ಕೆ ಸಜ್ಜುಗೊಳಿಸಲಾಗುತ್ತಿದ್ದು, ಯುವ ಕಲಾವಿದೆ ನಿರ್ಮಲಾ ನಾದನ್…
ಮಂಗಳೂರು: ಸುದೀರ್ಫ ಕಾಲ ಯಕ್ಷಗಾನ ರಂಗದಲ್ಲಿ ಕಲಾಸೇವೆಗೈದು ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿರುವ ಹಿರಿಯ ಕಲಾವಿದ ನೆಡ್ಲೆ ಗೋವಿಂದ ಭಟ್ಟರನ್ನು ಅವರ ಸ್ವಗೃಹದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು. ಧರ್ಮಸ್ಥಳ ಮೇಳ ಸಹಿತ ಇತರ ಮೇಳಗಳಲ್ಲೂ 4 ದಶಕಗಳ ಕಾಲ ತಿರುಗಾಟ ನಡೆಸಿರುವುದಲ್ಲದೆ, ಮಳೆಗಾಲದಲ್ಲೂ ತಂಡಕಟ್ಟಿಕೊಂಡು, ಮುಂಬೈ, ಚೆನ್ನೈ, ಕೊಯಂಬತ್ತೂರು ಕರ್ನಾಟಕ ಸೇರಿದಂತೆ ದೇಶದಾದ್ಯಂತ ಯಕ್ಷಗಾನ ಪ್ರದರ್ಶನಗಳನ್ನೂ ನೀಡಿರುವ ಯಕ್ಷ ಸಂಘಟಕರೂ ಎನಿಸಿರುವ ನೆಡ್ಲೆ ಗೋವಿಂದ ಭಟ್ಟರನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸನ್ಮಾನಿಸಿದರು. ಪ್ರತಿಷ್ಠಾನದ ವಿಶ್ವಸ್ಥರಲ್ಲೋರ್ವರಾಗಿರುವ ಜನಾರ್ದನ ಹಂದೆ ಉಪಸ್ಥಿತರಿದ್ದರು.
ಮಂಗಳೂರು: ಮಂಗಳೂರಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಾಂಸ್ಕೃತಿಕ ವೇದಿಕೆಯಲ್ಲಿ ಕೊಟ್ಟಾರದ ‘ಭರತಾಂಜಲಿ’ಯ ವಿದುಷಿ ಪ್ರತಿಮಾ ಶ್ರೀಧರ್ ನಿರ್ದೇಶನದಲ್ಲಿ ‘ನೃತ್ಯಾರ್ಪಣಂ’ ಮತ್ತು ‘ಪುಣ್ಯಕೋಟಿ’ ಎಂಬ ನೃತ್ಯರೂಪಕಗಳು ದಿನಾಂಕ 20-05-2023ರಂದು ಪ್ರದರ್ಶನಗೊಂಡವು. ಪುಣ್ಯಕೋಟಿ ರೂಪಕದ ಹಾಡಿನ ಪ್ರತಿಯೊಂದು ವಾಕ್ಯಗಳಿಗೂ ಭಾವನೆಗಳನ್ನು ತುಂಬಿ ಅರ್ಥಪೂರ್ಣವಾಗಿ ಜನರ ಮುಂದೆ ಪ್ರದರ್ಶಿಸಿ ಮುಕ್ತ ಪ್ರಶಂಸೆಗೆ ಪಾತ್ರರಾದರು ಶ್ರೀಧರ ಹೊಳ್ಳ ದಂಪತಿಗಳು. ಹುಲಿಯ ಚಿತ್ರಣವನ್ನು ಯಕ್ಷ ಮತ್ತು ನಾಟ್ಯ ಶೈಲಿಯಲ್ಲಿ ಪ್ರದರ್ಶನ ಮಾಡಲಾಗಿದ್ದು ಎಲ್ಲ ವರ್ಗದ ಪ್ರೇಕ್ಷಕರನ್ನೂ ಆಕರ್ಷಿಸಿತು. ಗೋವನ್ನು ಆಧರಿಸಿರುವ ಈ ಕಥೆಯಲ್ಲಿ ಭಾವ-ಅನುಭಾವ, ತುಡಿತ-ಮಿಡಿತ, ಕೊನೆಗೆ ಹುಲಿರಾಯನ ಸಾವು ಎಲ್ಲವೂ ಅತ್ಯುತ್ತಮವಾಗಿ ಮೂಡಿ ಬಂದು, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಕಥೆಯ ಪ್ರಮುಖ ಪಾತ್ರಗಳಾದ ಹುಲಿ ಮತ್ತು ಧೇನುವನ್ನು ಶ್ರೀಧರ ಹೊಳ್ಳ ಮತ್ತು ಪ್ರತಿಮಾ ಶ್ರೀಧರ್ರವರು ಆಭಿನಯಿಸಿ ಆ ಪಾತ್ರಗಳು ಅದ್ಭುತವಾಗಿ ಮೂಡಿ ಇಡಿ ರೂಪಕದ ಅಂದವನ್ನು ಹೆಚ್ಚಿಸಿತು. ಕರುವಿನ ಪಾತ್ರಧಾರಿ ತಾಯಿ ಪುಣ್ಯಕೋಟಿಯೊಂದಿಗೆ ‘ಅಮ್ಮ ನೀನು ಸಾಯಲೇಕೆ ಎನ್ನ ತಬ್ಬಲಿ ಮಾಡಲೇಕೆ’ ಎಂಬ ಮಾತು, ಹುಲಿಯ…
ಮಸ್ಕತ್: ಪ್ರಪ್ರಥಮ ಬಾರಿ ಒಮನ್ ಮಸ್ಕತ್ ನಲ್ಲಿ ತುಳು ನಾಡಿನ ಕಾರಣೀಕದ ದೈವ ಕೊರಗಜ್ಜನ ಚರಿತ್ರೆ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರದರ್ಶನ ಕಂಡಿತು. ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ ತಂಡದವರು ಹರೀಶ್ ಶೆಟ್ಟಿ ಸೂಡ ವಿರಚಿತ “ಸ್ವಾಮಿ ಕೊರಗಜ್ಜ” ಪ್ರಸಂಗವನ್ನು ಕಾಲಮಿತಿಯಲ್ಲಿ ಪ್ರಸ್ತುತಿ ಮಾಡಿದರು. ಬಿರುವ ಜವನೆರ್ ಮಸ್ಕತ್ ವಾಟ್ಸಾಪ್ ಬಳಗದ ಸೇವಾ ಸಂಘಟನೆಯು ಸಂಯೋಜಿಸಿದ ಈ ಕಾರ್ಯಕ್ರಮ ಸಾವಿರಾರು ತುಳುವ ಯಕ್ಷಗಾನ ಅಭಿಮಾನಿಗಳ ಹಾಗೂ ಕೊರಗಜ್ಜ ಭಕ್ತರ ಮನ ಗೆದ್ದಿತು. ಭಾಗವತಿಕೆಯಲ್ಲಿ ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯ ಮಾಡುತ್ತಿರುವ ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಮತ್ತು ಚೆಂಡೆ ಮದ್ದಳೆ ಹಿಮ್ಮೇಳದಲ್ಲಿ ಪಕ್ಷಿಕೆರೆ ಪದ್ಮನಾಭ ಶೆಟ್ಟಿಗಾರ್ ಹಾಗೂ ಭಾಸ್ಕರ ಭಟ್ ಕಟೀಲು ಅವರು ಸಹಕರಿಸಿದರು. ಶಿವಯೋಗಿಯಾಗಿ ಕದ್ರಿ ನವನೀತ ಶೆಟ್ಟಿ, ಕೊರಗಜ್ಜನಾಗಿ ಸದಾಶಿವ ಆಳ್ವ ತಲಪಾಡಿ, ಮೈರಕ್ಕೆ ಪಾತ್ರದಲ್ಲಿ ರಾಮಚಂದ್ರ ಮುಕ್ಕ, ಮೈಸ0ದಾಯನಾಗಿ ಕಾವಲಕಟ್ಟೆ ದಿನೇಶ್ ಶೆಟ್ಟಿ, ಪಂಜಂದಾಯ ದೈವವಾಗಿ ದಯಾನಂದ ಜಿ. ಕತ್ತಲ್ಸಾರ್ ಹಾಗೂ ಪುಷ್ಪರಾಜ್ ಕುಕ್ಕಾಜೆ ಇವರುಗಳು ಅರಸು…
ಮೂಡಬಿದರೆ: ತೆಂಕುತಿಟ್ಟಿನ ಹಿರಿಯ ಚಂಡೆ-ಮದ್ದಲೆ ವಾದಕರಾದ ಮಿಜಾರು ರಾಮಕೃಷ್ಣ ಶೆಟ್ಟಿಗಾರ್ (76 ವರ್ಷ) 21-05-2023ರಂದು ಅಶ್ವತ್ಥಪುರದ ಮಿಜಾರಿನಲ್ಲಿ ನಿಧನರಾದರು. ಕೂಡ್ಲು, ಮಂಗಳಾದೇವಿ, ಉಳ್ಳಾಲ ಭಗವತಿ ಮತ್ತು 25 ವರ್ಷಕ್ಕೂ ಮೇಲ್ಪಟ್ಟು ಕಟೀಲು ಮೇಳದಲ್ಲಿ ಪ್ರಸಿದ್ಧ ಭಾಗವತರಿಗೆ ಚಂಡೆ-ಮದ್ದಲೆ ವಾದಕರಾಗಿ ಕಲಾಸೇವೆಗೈದಿದ್ದರು. ಪೂರ್ವರಂಗದ ಹಾಡುಗಳನ್ನು ಹಾಡುವ ಕ್ರಮವನ್ನು ತಿಳಿದಿದ್ದರು. 2020ರಲ್ಲಿ ಇವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.