Subscribe to Updates
Get the latest creative news from FooBar about art, design and business.
Author: roovari
ʻಪದ್ಮಭೂಷಣ ಡಾ.ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿʼಗೆ ಡಾ.ಪುಷ್ಪಾ ಐಯ್ಯಂಗಾರ್ ಹಾಗೂ ಶ್ರೀಮತಿ ಜಯಲಕ್ಷ್ಮಿ ಪಾಟೀಲ ಆಯ್ಕೆ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭಾವಂತ ಮಹಿಳಾ ಸಾಹಿತಿಗಳಿಗಾಗಿ ಮೀಸಲಿಟ್ಟಿರುವ ʻಪದ್ಮಭೂಷಣ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿʼ ಪ್ರಕಟಿಸಲಾಗಿದೆ.2022 ಹಾಗೂ 2023ನೇ ಸಾಲಿನ ಪ್ರಶಸ್ತಿಗಾಗಿ ಮಹಿಳಾ ಸಾಹಿತಿಗಳ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 15,000(ಹದಿನೈದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪದ್ಮಭೂಷಣ ಡಾ.ಸರೋಜಾದೇವಿ ಅವರು ತಮ್ಮ ಸುಪುತ್ರಿ ಬಿ.ಭುವನೇಶ್ವರಿ ಅವರ ಸ್ಮರಣಾರ್ಥ ಈ ದತ್ತಿ ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. ʻಪದ್ಮಭೂಷಣ ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿʼಯನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡುತ್ತಿರುವ ಮಹಿಳಾ ಸಾಹಿತಿಗಳಿಗಾಗಿಯೇ ಈ ಪ್ರಶಸ್ತಿಯನ್ನು ದತ್ತಿ ದಾನಿಗಳು ಮಿಸಲಿಟ್ಟಿರುತ್ತಾರೆ. ಅದರಂತೆ ಕಳೆದ 26 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ಸಮರ್ಥ ಮಹಿಳಾ ಸಾಹಿತಿಗಳಿಗೆ ನೀಡುತ್ತಾ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿರುವ ಮಹಿಳಾ ಸಾಹಿತಿಯನ್ನು ಗುರುತಿಸಿ ಆಯ್ಕೆ ಮಾಡಿದೆ. ಇದುವರೆಗೆ ರಾಜ್ಯದ 25 ಮಹಿಳಾ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.…
ತೆಕ್ಕಟ್ಟೆ: ನಿರಂತರವಾಗಿ ಹಲವಾರು ವರ್ಷಗಳಿಂದ ನೆರವೇರಿದ ಬಡಗು ಯಕ್ಷಗಾನ ಹಿಮ್ಮೇಳ ತರಗತಿ ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದದ ನೇತೃತ್ವದಲ್ಲಿ ಈ ವರ್ಷ ಜೂನ್ 4ರ ಭಾನುವಾರದಂದು ಮಧ್ಯಾಹ್ನ 3ರಿಂದ ಪ್ರತೀ ದಿನ ಆರು ತಿಂಗಳುಗಳ ಕಾಲ ನಡೆಯಲಿದೆ. ಪ್ರಸಂಗಕರ್ತರಾದ, ಕಲಾ ಪೋಷಕರಾದ ಮಹಾಬಲ ಹೇರಿಕುದ್ರು ತರಗತಿಯನ್ನು ಉದ್ಘಾಟಿಸಲಿದ್ದು, ಅತಿಥಿಗಳಾಗಿ ಉಪನ್ಯಾಸಕರಾದ ಸುಜಯೀಂದ್ರ ಹಂದೆ, ಯಕ್ಷಗುರುಗಳಾದ ಸೀತಾರಾಮ ಶೆಟ್ಟಿ ಕೋಕೂರು, ಯಕ್ಷ ಸಂಘಟಕರಾದ ಕೋಟ ಸುದರ್ಶನ ಉರಾಳ ಆಗಮಿಸಲಿದ್ದಾರೆ. ಗುರುಗಳಾಗಿ ವಿದ್ವಾನ್ ಗಣಪತಿ ಭಟ್, ಕೂಡ್ಲಿ ದೇವದಾಸ್ ರಾವ್, ಲಂಬೋದರ ಹೆಗಡೆ ನಿಟ್ಟೂರು ಹಾಗೂ ಅತಿಥಿಯಾಗಿ ಪ್ರಾಚಾರ್ಯ ಕೆ.ಪಿ. ಹೆಗಡೆ ತೆಕ್ಕಟ್ಟೆ ಕೇಂದ್ರದ ಗುರುಗಳಾಗಿ ನೇಮಕಗೊಂಡಿರುತ್ತಾರೆ. ಭಾಗವತಿಗೆ, ಚಂಡೆ, ಮದ್ದಲೆ, ಹೆಜ್ಜೆ ತರಗತಿಗೆ ಸೇರಲಿಚ್ಚಿಸುವವರು ಉದ್ಘಾಟನೆಯಲ್ಲಿ ಹಾಜರಿರಬೇಕೆಂದು ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕ:9945947771
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರಕಾಶನ ಸಂಸ್ಥೆಗಳಿಗೆ ಕೊಡಮಾಡುವ 2022 ಹಾಗೂ 2023ನೇ ಸಾಲಿನ ʻಅಂಕಿತ ಪುಸ್ತಕ ಪುರಸ್ಕಾರʼದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಶಸ್ತಿಯು 35,000 (ಮೂವತೈದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನದವರು ಕನ್ನಡ ಪ್ರಕಾಶಕರಿಗಾಗಿ ಈ ದತ್ತಿ ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. ಕನ್ನಡ ಪ್ರಕಾಶಕರಿಗಾಗಿ ಮಿಸಲಿಟ್ಟ ರಾಜ್ಯಮಟ್ಟದ ಈ ಪುರಸ್ಕಾರವನ್ನು ʻವರ್ಷದ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ-ಅಂಕಿತ ಪುಸ್ತಕ ಪುರಸ್ಕಾರʼ ದತ್ತಿ ಹೆಸರಿನಲ್ಲಿ ಪ್ರಶಸ್ತಿಯನ್ನುನೀಡಬೇಕು ಎನ್ನುವುದು ದತ್ತಿ ದಾನಿಗಳ ಆಶಯವಾಗಿದೆ. ಅದರಂತೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ನೀಡುತ್ತ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಪ್ರಕಾಶನ ಕ್ಷೇತ್ರದಲ್ಲಿ ನಿರಂತರ 10 ವರ್ಷಗಳಿಂದ ಚಾಲ್ತಿಯಲ್ಲಿದ್ದು ಕನ್ನಡ ಪುಸ್ತಗಳನ್ನು ಪ್ರಕಟಿಸುವ ಮೂಲಕ ಕನ್ನಡದ ಸೇವೆ ಸಲ್ಲಿಸುತ್ತಿರುವ ಪ್ರಕಾಶನವನ್ನು ಗುರುತಿಸಿ ಅಂಕಿತ ಪುಸ್ತಕ ಪುರಸ್ಕಾರ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಕರೋನಾ…
ಮಂಗಳೂರು: ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ. ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ‘ಚಿತ್ತಾಲರ ಮುದ್ರೆ ಇರುವ ಅವರ ಬರವಣಿಗೆಯು ಕತೆ ಕಾದಂಬರಿಗಳಿಗೆ ಮಾತ್ರವಲ್ಲ. ಅವರ ಪ್ರಬಂಧ, ಲಬಸಾ (ಲಯಬದ್ದ ಸಾಲುಗಳು) ಕವಿತೆಗಳಲ್ಲಿಯೂ ಹರಡಿದೆ. ಈ ಅಗ್ರಮಾನ್ಯ ಲೇಖಕರ ಭಾವಚಿತ್ರವು ಮಂಗಳೂರು, ಶಕ್ತಿ ನಗರದ ವಿಶ್ವ ಕೊಂಕಣಿ ಕೀರ್ತಿ ಮಂದಿರದಲ್ಲಿ ಜೂನ್ 10ರಂದು ಅನಾವರಣಗೊಳ್ಳಲಿದೆ. ಬನ್ನಿ, ಸಂಜೆ 4ರಿಂದ 6.30ವರೆಗೆ ಬಿಡುವು ಮಾಡಿಕೊಳ್ಳಿ. ಕನ್ನಡ ಕಂಡ ಈ ಮಹತ್ವದ ಬರಹಗಾರರನ್ನು ಸ್ಮರಿಸಿಕೊಳ್ಳೋಣ. ವಿಶ್ವ ಕೊಂಕಣಿ ಕೇಂದ್ರ ಎಲ್ಲ ಕನ್ನಡ ಸಾಹಿತ್ಯ ಪ್ರೇಮಿಗಳನ್ನು ಆಹ್ವಾನಿಸುತ್ತಿದೆ. ನಮ್ಮೊಂದಿಗೆ ಜಯಂತ ಕಾಯ್ಕಿಣಿ ಮತ್ತು ವಿವೇಕ ಶಾನಭಾಗರೂ ಇದ್ದು, ಚಿತ್ತಾಲರ ವ್ಯಕ್ತಿತ್ವ ಮತ್ತು ಬರಹಗಳನ್ನು ಮೆಲುಕು ಹಾಕುತ್ತಾ ಅವರೊಡನೆಯ ಒಡನಾಟದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಈ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ವಿಜೇತ ಕೃತಿ, ‘ನ ಪ್ರಮದಿತವ್ಯಮ್’ ವಿಭಿನ್ನ ಹಿನ್ನೆಲೆಯ ಹದಿಮೂರು ಸಣ್ಣ ಕಥೆಗಳ ಸಂಕಲನ, ಬಿಟ್ಟು ಬಂದ ಹಳ್ಳಿಯ ಮುಗ್ಧ ಮನುಷ್ಯ ಸಂಬಂಧಗಳನ್ನೋ ಬಾಲ್ಯದ ಹಳವಂಡಗಳನ್ನೂ ಮೆಲುಕುಹಾಕುವ ಯುವ ಬರಹಗಾರರ ಈಚೆಯ ಕಥೆಗಳಿಗಿಂತ ಪ್ರತ್ಯೇಕ ಹಾದಿ ಹಿಡಿದಿರುವ ಸೋಮಯಾಜಿಯವರಲ್ಲಿ ಜಾಗತೀಕರಣದ ಹಿನ್ನೆಲೆಯಲ್ಲಿ ವಿಸ್ತಾರವೂ, ವೈವಿಧ್ಯಮಯವೂ ಆಗುತ್ತಿರುವ ಜೀವನಾನುಭವದ ಕಥೆಗಳಿವೆ. ಅವರ ಕಥೆಗಳು ಘಟಿಸುವುದು ಲಿಬರಲೈಸ್ಡ್ ನವ್ಯೋತ್ತರ ಜಗತ್ತಿನಲ್ಲಾದರೂ, ಅವರು ಸೃಷ್ಟಿಸುವ ಪಾತ್ರಗಳು ನವೋದಯದ ಕಾಲಘಟ್ಟದಲ್ಲಿ ಬೇರು ಚಾಚಿರುವುದರಿಂದ ಅವರ ಕಥೆಗಳ ಕಟ್ಟೋಣ ಬಹುತೇಕ ಪೂರ್ವಸೂರಿಗಳು ಅನುಸರಿಸಿದ ಮಾರ್ಗದಲ್ಲಿವೆ. ಶ್ರೀಲೋಲ ಸೋಮಯಾಜಿ ಆದುದರಿಂದಲೇ, ಶ್ರೀಲೋಲ ಸೋಮಯಾಜಿಯವರ ಬಹುತೇಕ ಕಥೆಗಳು, ಸಮಕಾಲಿನ ಸಂದಿಗ್ಧತೆಯೊಂದರ ಎರಡು ಆಯಾಮಗಳನ್ನು ದಕ್ಕಿಸಿಕೊಂಡು ಬೆಳೆದರೂ, ಒಟ್ಟು ಮೌಲ್ಯಮಾಪನದ ಸಂದರ್ಭ ತಲುಪಿದಾಗ ಓದುಗರಿಗೆ ಹಸ್ತಾಂತರವಾಗುವ ಮಾಸ್ತಿಯವರ ಒಂದು ತಂತ್ರದ ಮುಂಚಾಚಿನ ಮಾದರಿಯಲ್ಲಿ ನಿರೂಪಿತವಾಗಿದೆ. ಉದಾರಣೆಗೆ ವೆಂಕಟಾಚಲ ನಿಲಯದಂತಹ ರಾಚನಿಕವಾಗಿ ಗಮನಾರ್ಹವೆನ್ನಿಸುವ ಕಥೆಯಲ್ಲಿನ ತ್ಯಾಗರಾಜರು ಬಿಲಹರಿ ರಾಗದ ಮೂಲಕ ಸತ್ತ ವ್ಯಕ್ತಿಯನ್ನು ಪುನಃ ಜೀವಂತ…
ಬಡಗುತಿಟ್ಟು ಯಕ್ಷಗಾನ ರಂಗದ ಅಭಿಜಾತ ಕಲಾವಿದ; ಅಭಿಮನ್ಯು, ಬಬ್ರುವಾಹನದಂತಹ ಪುಂಡು ವೇಷಗಳಲ್ಲಿ ಮೆರೆದು ಕ್ರಾಂತಿ ಮೂಡಿಸಿ ಯಕ್ಷರಂಗದ ಅಭಿಮನ್ಯು, ಯಕ್ಷಗಾನದ ಸಿಡಿಲಮರಿ, ಚಿರಯುವಕ ಎಂಬಿತ್ಯಾದಿ ಬಿರುದು ಪಡೆದು ಪುಂಡುವೇಷದಲ್ಲಿ ವಿಶಿಷ್ಟ ಹೆಸರು ಮಾಡಿದ ಕಲಾವಿದರು ಶ್ರೀಯುತ ತೀರ್ಥಹಳ್ಳಿ ಗೋಪಾಲ ಆಚಾರ್ಯ. ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ: ಯಕ್ಷಗಾನದ ಉಭಯತಿಟ್ಟುಗಳಿಗೆ ಮಹಾನ್ ಕಲಾವಿದರನ್ನು ನೀಡಿದ ಮಲೆನಾಡಿನ ತೀರ್ಥಹಳ್ಳಿ ಗೋಪಾಲಾಚಾರ್ಯರ ಹುಟ್ಟೂರಾದರೂ ಅವರ ಯಕ್ಷಗಾನ ಕಾರ್ಯಕ್ಷೇತ್ರ ಉಡುಪಿ ಜಿಲ್ಲೆ. ಬಹಳ ಹಿಂದಿನಿಂದಲೂ ಕುಂದಾಪುರ ತಾಲೂಕಿನ ನಾಯ್ಕನಕಟ್ಟೆಯಲ್ಲಿ ನೆಲೆನಿಂತ ಇವರು ತೀರ್ಥಹಳ್ಳಿಯ ವಾಸುದೇವ ಆಚಾರ್ಯ ಹಾಗೂ ಸುಲೋಚನಮ್ಮ ದಂಪತಿಗಳ ಐದು ಮಂದಿ ಮಕ್ಕಳಲ್ಲಿ ಎರಡನೆಯವರಾಗಿ ೨೪.೦೨.೧೯೫೬ ರಂದು ಜನಿಸಿದರು. ಕೇವಲ 3ನೇ ತರಗತಿ ವಿದ್ಯಾಭ್ಯಾಸ ಮಾಡಿ ತೀರ್ಥಹಳ್ಳಿ ಕೃಷ್ಣೋಜಿ ರಾವ್ ಬಳಿ ಪ್ರಾಥಮಿಕ ಯಕ್ಷಗಾನ ಅಭ್ಯಾಸ ಮಾಡಿದರೂ ಉಳಿದದ್ದೆಲ್ಲ ಕಂಡುಕೇಳಿ ಕಲಿತದ್ದೇ ಹೆಚ್ಚು. ಇವರ ಹೆಜ್ಜೆಗಾರಿಕೆಯಲ್ಲಿ ಮಟಪಾಡಿ ವೀರಭದ್ರ ನಾಯಕರ ಹೆಜ್ಜೆಗುರುತನ್ನು ಕಾಣಬಹುದಾಗಿದೆ. ತನ್ನ 14ನೇ ವಯಸ್ಸಿನಲ್ಲಿ ಮಲೆನಾಡಿನ ರಂಜದಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ…
ಬೆಂಗಳೂರು: ಸ್ಪಂದನ, ಬೆಂಗಳೂರು -ನಾಟಕ ತಂಡ ತನ್ನ ಐವತ್ತನೆಯ ಹುಟ್ಟುಹಬ್ಬದ ನೆಪದಲ್ಲಿ ಬೆಂಗಳೂರಿನ ನೇಷನಲ್ ಹೈಸ್ಕೂಲಿನ ಸಭಾಂಗಣದಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ದಿನಾಂಕ 31-05-2023ರಂದು ಆಯೋಜಿಸಿತು. ತನ್ನಂತೆ ಐವತ್ತರ ಆಸುಪಾಸಿನ ತಂಡಗಳೆಷ್ಟಿವೆ ರಾಜಧಾನಿಯಲ್ಲಿ? ಎಲ್ಲರನ್ನೂ ಕರೆದು ಮಾತನಾಡಿಸೋಣ ಎಂಬ ಯೋಚನೆಯೊಂದು ಸ್ಪಂದನದ ನೇತಾರರಾದ ಬಿ.ಜಯಶ್ರೀ- ಅವರಿಗೆ ಹೊಳೆದಿರಬೇಕು. ಅದನ್ನು ಕಾರ್ಯಗತಗೊಳಿಸುವವರಾರು ಎಂಬ ಪ್ರಶ್ನೆ ಉದಿಸಿದಾಗ ಉತ್ತರ ರೂಪದಲ್ಲಿ ದೊರಕಿದವರೇ ಕನ್ನಡ ರಂಗಭೂಮಿಯ ಸವ್ಯಸಾಚಿ ಶ್ರೀನಿವಾಸ್ ಜಿ. ಕಪ್ಪಣ್ಣ. ಕಾರ್ಯಕ್ರಮ ಜಯಶ್ರೀಯವರ ಸ್ಪಂದನದ್ದಾದರೂ ಅದಕ್ಕೊಂದು ಚೌಕಟ್ಟು ಒದಗಿಸಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟವರು ಕಪ್ಪಣ್ಣ. ನೋಡಿದರೆ ಒಂದು ಕಾಲದ ಗಟ್ಟಿಮುಟ್ಟಾದ ಎಂಟು ತಂಡಗಳು! ನಟರಂಗ, ಸ್ಪಂದನ, ಕಲಾಗಂಗೋತ್ರಿ, ರಂಗಸಂಪದ, ಬೆನಕ, ಸಮುದಾಯ, ಸಂಕೇತ್ ಹಾಗೂ ಕನ್ನಡ ಸಾಹಿತ್ಯ ಕಲಾಸಂಘ (ನಾಟ್ಯದರ್ಪಣ). (ಅವುಗಳಲ್ಲಿ ʻಸಮುದಾಯʼದಂಥ ಕೆಲವು ತಂಡಗಳು ಇವತ್ತಿಗೂ ತನ್ನ ಗಟ್ಟಿತನವನ್ನು ಉಳಿಸಿಕೊಂಡಿದೆ.) ಒಂದೊಂದು ರಂಗ ತಂಡಕ್ಕೂ ಬೃಹತ್ತಾದ ಇತಿಹಾಸ. ಇತ್ತೀಚೆಗಷ್ಟೇ ʻನಟರಂಗಕ್ಕೆ ಐವತ್ತು ವರ್ಷʼ ಕಾರ್ಯಕ್ರಮವನ್ನು ಆಯೋಜಿಸಿ ಗೆದ್ದ ಕಪ್ಪಣ್ಣ, ಸ್ಪಂದನದ ಈ ಕಾರ್ಯಕ್ರಮಕ್ಕೆ ಬೇರೆಯೇ ಆಯಾಮ…
21 ಮೇ 2023ರಂದು ಮಂಗಳೂರಿನ ಕರಾವಳಿ ಲೇಖಿಕಿಯರ ಮತ್ತು ವಾಚಕಿಯರ ಸಂಘದಲ್ಲಿ ಅನಾವರಣಗೊಂಡ ಕಾಸರಗೋಡಿನ ಸೃಜನಶೀಲ ಬರಹಗಾರ್ತಿ ಶೀಲಾಲಕ್ಷ್ಮೀ ಅವರ ‘ಸರಸ-ಸಮರಸ’ ಕಾದಂಬರಿ ಮನಶಾಸ್ತ್ರ, ಸ್ತ್ರೀ ಸಬಲೀಕರಣಕ್ಕೆ ಹೆಜ್ಜೆಯಾಗಿ, ಮಾನವೀಯತೆಯ ನೆಲೆಯಾಗಿ ಗುರುತಿಸಿಕೊಂಡಿದೆ. ಕಾದಂಬರಿ ರಚನೆಯ ಕುರಿತು ಲೇಖಕಿ ಶೀಲಾಲಕ್ಷ್ಮೀಯವರು “ಓರ್ವ ತಾಯಿಯಾಗಿ ಮಕ್ಕಳ ಮನಸ್ಸಿನ ಸೂಕ್ಷ್ಮತೆಗಳನ್ನು ಗಮನಿಸುವುದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಅವರ ಮನೋಲ್ಲಾಸಕ್ಕೆ ಮಾರಕವಾಗಿ ಅವರ ವ್ಯಕ್ತಿತ್ವ ರೂಪೀಕರಣದಲ್ಲಿ ಋಣಾತ್ಮಕ ಪರಿಣಾಮ ಬೀರುವಂಥಾ ಹಲವಾರು ಬೆಳವಣಿಗಗಳು ಅವರವರ ಮನೆಯೊಳಗೇ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಅರಿತೋ ಅರಿಯದೆಯೋ ಹೆತ್ತವರೇ ಇದಕ್ಕೆ ಕಾರಣೀಭೂತರಾಗುತ್ತಿರುವುದು ದುರದೃಷ್ಟಕರ. ಒಂದೆರಡು ದಶಕಗಳ ಹಿಂದೆ ವೈದ್ಯಲೋಕದಲ್ಲಿ ಮಾತ್ರ ಉಪಯೋಗಿಸಲ್ಪಡುತ್ತಿದ್ದ ‘ಖಿನ್ನತೆ’ ಅಥವಾ ‘ಡಿಪ್ರೆಷನ್’ ಎನ್ನುವ ಪದ ಇತ್ತೀಚೆಗೆ ಮನೆ ಮನೆಗಳಲ್ಲೂ ಕೇಳಿಬರುತ್ತಿದೆ. ಸ್ಪರ್ಧಾತ್ಮಕ ಜಗತ್ತಿನ ಒತ್ತಡ ಹೆತ್ತವರನ್ನೂ ಮಕ್ಕಳನ್ನೂ ಹೈರಾಣಾಗಿಸುವ ಬಗೆಯು ನನ್ನನ್ನು ಬಹುವಾಗಿ ಕಾಡಿದೆ. ಇದನ್ನೇ ವಸ್ತುವನ್ನಾಗಿಸಿಕೊಂಡು ‘ಸರಸ-ಸಮರಸ’ ಕಥೆ ಸೃಷ್ಟಿಯಾಗಿದೆ” ಎಂದಿದ್ದಾರೆ. ಆಧುನಿಕ ಬದುಕಿನಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಇಂದು ತಲೆದೋರುತ್ತಿರುವ ಮಾನಸಿಕ ಸಮಸ್ಯೆಗಳು ನೂರಾರು,…
ಪುತ್ತೂರು : ಪುತ್ತೂರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ವತಿಯಿಂದ ದಿನಾಂಕ 30-05-2023ರಂದು ಸಂಜೆ ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ಮೇಧಿನಿರ್ಮಾಣ’ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಜಯಪ್ರಕಾಶ್ ನಾಕೂರು, ಸತೀಶ್ ಇರ್ದೆ, ಆನಂದ ಸವಣೂರು, ಪದ್ಯಾಣ ಶಂಕರ ನಾರಾಯಣ ಭಟ್, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಆದಿಮಾಯೆ (ದುಗ್ಗಪ್ಪ ಯನ್.), ವಿಷ್ಣು (ಕು೦ಬ್ಳೆ ಶ್ರೀಧರ್ ರಾವ್ ಮತ್ತು ಭಾಸ್ಕರ್ ಶೆಟ್ಟಿ ಸಾಲ್ಮರ), ಬ್ರಹ್ಮ (ಭಾಸ್ಕರ್ ಬಾರ್ಯ ಮತ್ತು ಅಚ್ಯುತ ಪಾಂಗಣ್ಣಾಯ ಕೋಡಿಬೈಲು), ಈಶ್ವರ (ಚಂದ್ರಶೇಖರ್ ಭಟ್ ಬಡೆಕ್ಕಿಲ), ಮಧು (ಗುಂಡ್ಯಡ್ಕ ಈಶ್ವರ ಭಟ್) ಮತ್ತು ಕೈಟಭ (ಗುಡ್ಡಪ್ಪ ಬಲ್ಯ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು. ಬನ್ನೂರು ರಾಜಗೋಪಾಲ್ ಭಟ್ ಪ್ರಾಯೋಜಿಸಿದ್ದರು. ಇದೇ ಯಕ್ಷಗಾನ ಸಂಘದ 2022-2023 ಸಾಲಿನ ಕೊನೆಯ ಕೂಟ (ಪತ್ತನಾಜೆ)ವು ದಿನಾಂಕ 31-05-2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ‘ಜಾಂಬವತಿ ಕಲ್ಯಾಣ’ ಎಂಬ ಆಖ್ಯಾನದ ತಾಳಮದ್ದಳೆ…
ಕುಂದಾಪುರ : ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಸಾರಥ್ಯದಲ್ಲಿ ಮೇ 27ರಂದು ‘ರಜಾರಂಗು-ರಂಗಮಂಚ’ ಮಕ್ಕಳ ಶಿಬಿರದ ಸಮಾರೋಪ ಸಮಾರಂಭ ಹಾಗೂ ‘ಕಾಳಿಂಗ ನಾವುಡರ ಸಂಸ್ಮರಣೆ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಮರಣಾ ಮಾತುಗಳನ್ನಾಡಿ ಹಿರಿಯ ಕಲಾವಿದ ಹೊಸಂಗಡಿ ರಾಜೀವ ಶೆಟ್ಟಿಯವರು “ಗಗನಂ ಗಗನಾಕಾರಂ. ಸಮುದ್ರಕ್ಕೆ ಸಮುದ್ರವೇ ಸಾಟಿ. ಹಾಗೆಯೇ ನಾವುಡರಿಗೆ ಸಾಟಿ ಮತ್ತೊಂದಿಲ್ಲ. ರಂಗದಲ್ಲಿ ಏನೂ ಅಲ್ಲದ ಕಲಾವಿದನನ್ನು ಮೇಲಕ್ಕೆತ್ತುವ ಸಾಮರ್ಥ್ಯ ಕಾಳಿಂಗ ನಾವುಡರಲ್ಲಿದೆ. ರಂಗದಲ್ಲಿ ರಾಜಿ ಇಲ್ಲದ ಮಹಾನ್ ಕಲಾವಿದ. ಅತೀ ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯದ ಶಕ್ತಿ ದೈವದತ್ತವಾಗಿ ಅವರಿಗೆ ಅನುಗ್ರಹಿತವಾಗಿದೆ. ಅವರು ಯಕ್ಷಗಾನದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ಸ್ಥಿತರಾದರು” ಎಂದು ಹೇಳಿದರು. ಬೆಳೆಯುವ ಮಕ್ಕಳಿಗೆ ಕಲೆಯ ಪರಿಚಯವನ್ನು ಮಾಡಿಸಿದರೆ, ಅವರಿಗೆ ಭಾಗವಹಿಸುವುದಕ್ಕೆ ಅವಕಾಶವನ್ನು ಕೊಟ್ಟರೆ, ಒಂದು ತಲೆಮಾರಿಗೆ ನಾವೊಂದು ಕಾಣಿಕೆ ಕೊಟ್ಟ ಹಾಗೆ. ಇಂತಹ ಕೆಲಸವನ್ನು ಮಾಡಿದ ಸಂಸ್ಥೆಯನ್ನು ಶ್ಲಾಘಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನನ್ನನ್ನೂ ಸೇರಿದಂತೆ ಅನೇಕ ಕಲಾವಿದರನ್ನು ಬೆಳಕಿಗೆ ತಂದು ಕಲಾ ಪ್ರಪಂಚಕ್ಕೆ ತೋರಿಸಿಕೊಟ್ಟವರು…