Subscribe to Updates
Get the latest creative news from FooBar about art, design and business.
Author: roovari
ಯಕ್ಷಗಾನ ಪ್ರಸಂಗಗಳು ಪದ್ಯ ರೂಪದಲ್ಲಿರುವ ಕಥಾ ವಸ್ತುಗಳಾಗಿವೆ. ಯಕ್ಷಗಾನ ಅರ್ಥಗಾರಿಕೆಗೆ ಪ್ರಸಂಗಗಳು ಮೂಲ ಪಠ್ಯಗಳಾಗಿರುತ್ತವೆ. ಪ್ರಸಂಗವು ಪ್ರದರ್ಶನದ ಸಂವಿಧಾನವಾಗಿರುತ್ತದೆ. ಭಾಗವತರು ಮತ್ತು ಕಲಾವಿದರು ಪ್ರಸಂಗನಿಷ್ಠರಾಗಿ ಕಥಾವಸ್ತುವನ್ನು ಮುಂದಕ್ಕೆ ಒಯ್ಯುತ್ತಾರೆ. ಯಕ್ಷಗಾನ ಪ್ರಸಂಗಕರ್ತನನ್ನು ಯಕ್ಷಕವಿ ಎಂದು ಕರೆಯುತ್ತಾರೆ. ಇಂದು ನಾವು ಪರಿಚಯ ಮಾಡುವ ಯಕ್ಷ ಕವಿ ಚಾರ ಪ್ರದೀಪ ಹೆಬ್ಬಾರ್.21.08.1983ರಂದು ಸೀತಾರಾಮ್ ಹೆಬ್ಬಾರ್ ಮತ್ತು ಶ್ರೀಮತಿ ಗಿರಿಜಾ ಹೆಬ್ಬಾರ್ ಇವರ ಮಗನಾಗಿ ಚಾರ ಪ್ರದೀಪ ಹೆಬ್ಬಾರ್ ಅವರ ಜನನ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಕಾಂ ಪದವಿಯನ್ನು ಪಡೆದಿರುತ್ತಾರೆ. ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪಗಳಿವೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ:- ಯಕ್ಷಗಾನ ಪರಂಪರೆಗೆ ಚ್ಯುತಿ ಬರದ ರೀತಿಯಲ್ಲಿ ಪ್ರಸಂಗ ರಚನೆ. ಪರಂಪರೆಯನ್ನು ಉಳಿಸುವ ಬೆಳೆಸುವ ಕಲೆಯಾಗಬೇಕು, ಸಿನಿಮಾ ಮಾದರಿ ರಾಗಗಳನ್ನು ಯಕ್ಷಗಾನಕ್ಕೆ ಬಳಸಬಾರದು, ಶ್ರೀಮಂತ ಕಲೆಯನ್ನು ಉಳಿಸಿ ಬೆಳೆಸಬೇಕು. ಪದ್ಯ ಬರೆಯುವ ಬಗ್ಗೆ ನಿಮ್ಮ ನಿಲುವು ಏನು:- ಪ್ರಸಂಕರ್ತರು ಎಂದ ಮೇಲೆ ಪದ್ಯವನ್ನು ಸ್ವತಃ ಅವರೇ ಬರೆಯಬೇಕು. ಸಿನಿಮಾ ಮಾದರಿ ಪದ್ಯವನ್ನು ರಚಿಸಬಾರದು, ಕಲೆಯ ಪರಂಪರೆಗೆ…
ಹೆಗ್ಗೋಡು: ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ 2023-24ನೇ ಸಾಲಿನ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿಯಿದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದ್ದು ಅಗತ್ಯ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಊಟ, ವಸತಿ ವ್ಯವಸ್ಥೆಯ ಬಾಬ್ತು ಭಾಗಶಃ ವಿದ್ಯಾರ್ಥಿವೇತನ ದೊರೆಯುತ್ತದೆ. ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಮುಂತಾಗಿ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಕೇಂದ್ರದ ನುರಿತ ಅಧ್ಯಾಪಕರುಗಳಲ್ಲದೆ ಹೊರಗಿನ ತಜ್ಞರನ್ನು ಕರೆಸಿ ಸಾಕಷ್ಟು ಪ್ರಬುದ್ಧ ಶಿಕ್ಷಣ ಕೊಡಲಾಗುತ್ತದೆ. ಒಳ್ಳೆಯ ಗ್ರಂಥ ಭಂಡಾರ ಹಾಗೂ ದೃಶ್ಯಶ್ರವ್ಯ ಪರಿಕರಗಳ ಅನುಕೂಲತೆಯಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿದಿನ ಸುಮಾರು 12 (07.00 am- 09.30 pm) ಗಂಟೆಗಳಷ್ಟು ಕಾಲ ಅಭ್ಯಾಸದಲ್ಲಿ ತೊಡಗಿರಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಬಳಸಿ https://ninasam.org/diploma-announcement-2023/
ಬೆಂಗಳೂರು: ಸ್ಟೇಜ್ ಬೆಂಗಳೂರು ಪ್ರಸ್ತುತಪಡಿಸುವ ‘ ನಮ್ಮ ನಿಮ್ಮೊಳಗೊಬ್ಬ’ ನಾಟಕದ ಪ್ರದರ್ಶನವು ಇದೇ ಬರುವ 16-05-2023 ರಂದು ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ .ಅಶೋಕ್ ಕೊಡಗು (ನೀನಾಸಂ)ನಿರ್ದೇಶಿಸಿರುವ ಈ ನಾಟಕದ ವಿನ್ಯಾಸ ರಂಗನಾಥ್ ಶಿವಮೊಗ್ಗ (ನೀನಾಸಂ) ಅವರದ್ದು ಬೆಳಕಿನ ವಿನ್ಯಾಸ ನವೀನ್ ಭೂಮಿ ಮಾಡಲಿದ್ದು ಶ್ರೀನಿವಾಸ್ ರಾವ್ ಸಂಗೀತ ನಿರ್ವಹಿಸಲಿದ್ದಾರೆ . ನಾಟಕದ ವಿವರಣೆ ನಮ್ಮ ನಿಮ್ಮೊಳಗೊಬ್ಬ – “One among us” ಇದು ಇಂಗ್ಲಿಷ್ನಲ್ಲಿ ಅನುವಾದಿಸುವಂತೆ ಒಂದು ಥ್ರಿಲ್ಲರ್ ಆಗಿದೆ. ಪ್ರಸಿದ್ಧ ರಂಗಕರ್ಮಿ ರಾಜೇಂದ್ರ ಕಾರಂತರು ಬರೆದ ನಾಟಕವು ಪ್ರೇಕ್ಷಕರನ್ನು ಅವರ ಆಸನದ ತುದಿಯಲ್ಲಿ ಇರಿಸಲು ಎಲ್ಲಾ ಅಂಶಗಳನ್ನು ಹೊಂದಿರುವ ಶ್ರೇಷ್ಠ ನಾಟಕವಾಗಿದೆ. ಈ ನಾಟಕವನ್ನು ಹಲವಾರು ಪೀಳಿಗೆಯ ರಂಗಭೂಮಿ ಆಸಕ್ತರು ಹಲವಾರು ಬಾರಿ ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಕಥಾವಸ್ತುವು ತುಂಬಾ ಆಸಕ್ತಿದಾಯಕವಾಗಿದೆ ಮತ್ತು ಕ್ಲೈಮ್ಯಾಕ್ಸ್ ಸಮಯದಲ್ಲಿ ಅದು ಅನಾವರಣಗೊಳ್ಳುವುದರಿಂದ ಪ್ರೇಕ್ಷಕರು ನಾಟಕವನ್ನು ಆನಂದಿಸುತ್ತಾರೆ. ನಾಟಕದ ಮುಖ್ಯಾಂಶಗಳು ಕರ್ನಾಟಕದ ಮಲೆನಾಡು ಪ್ರದೇಶಕ್ಕೆ ಅಧಿಕೃತವಾಗಲು ಬಳಸಲಾದ ಭಾಷೆಯಾಗಿದೆ. ನಿರಂತರವಾಗಿ ಸುರಿಯುವ ಮಳೆ ಮತ್ತು ನಾಟಕದ…
ಅಹಲ್ಯಾ ಬಲ್ಲಾಳ್ ಪ್ರಸ್ತುತಪಡಿಸಿದ ‘ಅವಳ ಕಾಗದ’ ಲೇಖಕಿ, ಅಂಕಣಕಾರ್ತಿ ಸುಧಾ ಆಡುಕಳ ಬರೆದ ಈ ರೂಪಕವನ್ನು ಶ್ವೇತಾ ಹಾಸನ ವಿನ್ಯಾಸ ಮಾಡಿದ್ದು, ಬೆಳಕಿನ ವಿನ್ಯಾಸವನ್ನು ಶ್ರೀನಿವಾಸ್ ಜಿ. ಕಪ್ಪಣ್ಣ ಮಾಡಿದ್ದಾರೆ. ಡಾ. ಶ್ರೀಪಾದ ಭಟ್ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ರೂಪಕ. ಅನುಕಾಲದಿಂದಲು ಹೆಣ್ಣನ್ನು ದ್ವಿತೀಯ ಪ್ರಜೆಯನ್ನಾಗಿಸಿ, ಅವಳ ಅಸ್ಮಿತೆಯನ್ನು ನಿರಾಕರಿಸುವ, ಭಾರತೀಯ ಮಧ್ಯಮವರ್ಗದ ಕುಟುಂಬದ ಹುನ್ನಾರದ ವಿರುದ್ದ ಸಿಡಿದೆದ್ದ, ಹೆಣ್ಣೊಬ್ಬಳ ರೂಪಕವಾಗಿ ನೂರು ವರ್ಷಗಳ ಹಿಂದೆಯೆ, ತಮ್ಮ ಸೂಕ್ಷ್ಮ ಸಂವೇದನಾ ಶೀಲತೆಯನ್ನು ತಮ್ಮ ಕಥೆಗಳ ಮೂಲಕ ಪ್ರಕಟಿಸಿದವರು ರವೀಂದ್ರನಾಥ ಠಾಕೂರರು. ಅವಳ ಕಾಗದದ ಮೂಲಕ ಅದನ್ನು ರೂಪಕವಾಗಿಸಿದ ಶ್ರೇಯಸ್ಸು ಸುಧಾ ಅಡುಕಳ ಅವರದಾದರೆ, ಅದನ್ನು ನಿರ್ದೇಶಿಸಿದ ಶ್ರೇಯಸ್ಸು ಡಾ.ಶ್ರೀಪಾದ ಭಟ್ಟರಿಗೆ ಸಲ್ಲಬೇಕು. ಅದನ್ನು ಅನನ್ಯವಾಗಿ ತನ್ನ ಭಾವಾಭಿನಯದ ಮೂಲಕ ತೆರೆಯ ಮೇಲೆ ಪ್ರದರ್ಶಿಸಿದವರು ಮುಂಬಯಿನ ನನ್ನ ಕನ್ನಡದ ಶಿಷ್ಯೆ ಅಹಲ್ಯಾ ಬಲ್ಲಾಳ್ ಅನುಪಮ ಕಲಾವಿದೆ. “ಗಾಳಿಯಲ್ಲಿ ಹಾರಿಬಂದ ಬೀಜಗಳು, ಕಲ್ಲಿನ ಬಿರುಕುಗಳಲ್ಲಿ ಬಿದ್ದು, ಅವು ಚಿಗುರೊಡೆದಾಗಲೇ ಬಿರುಕು…
ಮಂಗಳೂರು: ಮಂಗಳೂರು ಕಲ್ಲಚ್ಚು ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಪಾಟೀಲರ ಜತೆಗೆ ಒಂದು ಸಂಜೆ, ಮಾತುಕತೆ ಸಂವಾದ ಕಾರ್ಯಕ್ರಮವು ವುಡ್ ಲ್ಯಾಂಡ್ ಹೊಟೇಲ್ ಆವರಣದಲ್ಲಿ ದಿನಾಂಕ 04-05-2023 ರಂದು ನಡೆಯಿತು. ಕನ್ನಡದ ಹಿರಿಯ ಮತ್ತು ಪ್ರಸಿದ್ಧ ಸಾಹಿತಿ ಮೂಲತ ಗೋಕಾಕ್ ನ ಪ್ರಸ್ತುತ ಧಾರವಾಡದಲ್ಲಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಪಾಟೀಲ ಅವರು ಈ ಕಾಲದ ಕನ್ನಡದ ಸಾಹಿತ್ಯ ಮತ್ತು ಸಾಹಿತಿಗಳು ಅನಿವಾರ್ಯವಾಗಿ ತ್ರೀವ ಗತಿಯಲ್ಲಿ ಬದಲಾಗುತ್ತಿದ್ದು ಎಡ ಅಥವಾ ಬಲದ ಮಾನಸಿಕತೆಯೊಂದಿಗೆ ರಾಜಕೀಯ ನೆಲೆಯಿಂದ ಗುರುತಿಸಿಕೊಳ್ಳುವ ಜಂಜಾಟದ ಒತ್ತಡದಲ್ಲಿ ಇದ್ದಾರೆ ಎಂದು ಅವರ ಅಭಿಪ್ರಾಯಪಟ್ಟಿದ್ದಾರೆ. ಆಶಾವಾದಿ ಪ್ರಕಾಶನದ ವಲೇರಿಯನ್ ಕ್ವಾಡ್ರಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಾಹಿತ್ಯ ವಲಯದ ಕಾಸರಗೋಡು ನಾರಾಯಣ ಮೂಡಿತ್ತಾಯ, ವಿಜಯಶ್ರೀ ಹಾಲಾಡಿ, ಮಾರ್ಶಲ್ ಡಿಸೋಜಾ, ಎಸ್ ಎಂ ಶಿವಪ್ರಕಾಶ್, ಎಡ್ವರ್ಡ್ ಲೋಬೊ, ಗುರುಪ್ರಸಾದ್, ವಿಯಯೇಂದ್ರ ಪಾಟೀಲ… ಮೊದಲಾದವರು ಉಪಸ್ಥಿತರಿದ್ದರು. ಕಲ್ಲಚ್ಚು ಪ್ರಕಾಶನದ ಸಾಹಿತಿ ಪ್ರಕಾಶಕ ಮಹೇಶ ಆರ್ ನಾಯಕ್ ಸ್ವಾಗತಿಸಿ ನಿರೂಪಿಸಿದರು. ಅತ್ಯಂತ ಆಕರ್ಷಕವಾಗಿ ಒಂದು…
ಪುತ್ತೂರು : ಪುತ್ತೂರು ಕಬಕ ಸಮೀಪದ ಮಂಜಪಾಲು ಶ್ರೀಮತಿ ಮತ್ತು ಶ್ರೀ ಲಿಂಗಪ್ಪ ಪೂಜಾರಿಯವರು ನೂತನವಾಗಿ ಕಟ್ಟಿದ ‘ಲಕ್ಷ್ಯ’ ಮನೆಯ ಪ್ರವೇಶೋತ್ಸದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ದಿನಾಂಕ 04.05.2023ರಂದು ಸಂಜೆ ‘ಜಾಂಬವತೀ ಕಲ್ಯಾಣ’ ತಾಳಮದ್ದಳೆ ನಡೆಯಿತು. ಮುಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಲಕ್ಷ್ಮೀಶ ಬೇಂದ್ರೋಡಿ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ಶುಭಾ ಗಣೇಶ್), ಜಾಂಬವ (ಕಿಶೋರಿ ದುಗ್ಗಪ್ಪ ನಡುಗಲ್ಲು), ಬಲರಾಮ (ಹರಿಣಾಕ್ಷೀ ಜೆ. ಶೆಟ್ಟಿ) ಹಾಗೂ ನಾರದ (ಪ್ರೇಮಲತಾ ಟಿ. ರಾವ್) ಸಹಕರಿಸಿದರು. ಸಂಘದ ಕೋಶಾಧಿಕಾರಿ ದುಗ್ಗಪ್ಪ ಯನ್. ಸ್ವಾಗತಿಸಿ ವಂದಿಸಿದರು.
ಸುಳ್ಯ : ಶ್ರೀ ಜಗದ್ಗುರು ಮಧ್ವಾಚಾರ್ಯರ ಮಹಾಸಂಸ್ಥಾನ೦ ಶ್ರೀ ಕಾಣಿಯೂರು ಮಠ ಸುಳ್ಯ ದ.ಕ. ಇಲ್ಲಿಯ ಪೀಠಾಧಿಪತಿ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಮಹಾ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ “ಶ್ರೀ ನರಸಿಂಹ ಜಯಂತಿ” ಬಾಬ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು, ಪುತ್ತೂರು ವತಿಯಿಂದ ದಿನಾಂಕ 05.05.2023ರಂದು ಬೆಳಿಗ್ಗೆ ‘ಸ್ಯಮಂತಕ ಮಣಿ’ ತಾಳಮದ್ದಳೆ ಶ್ರೀ ಮಠದ ವಠಾರದಲ್ಲಿ ನಡೆಯಿತು. ಮುಮ್ಮೇಳದಲ್ಲಿ ಭವ್ಯ ಶ್ರೀ ಕುಲ್ಕುಂದ, ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಬೇಂದ್ರೋಡಿ ಲಕ್ಷ್ಮೀಶ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವ), ಹರಿಣಾಕ್ಷೀ ಜೆ. ಶೆಟ್ಟಿ (ಬಲರಾಮ) ಹಾಗೂ ಪ್ರೇಮಲತಾ ಟಿ. ರಾವ್ (ನಾರದ) ಸಹಕರಿಸಿದರು. ಪೂಜ್ಯ ಶ್ರೀಗಳು ಕಲಾವಿದರನ್ನು ಗೌರವಿಸಿದರು, ಸಂಚಾಲಕ ಭಾಸ್ಕರ್ ಬಾರ್ಯ ಕಲಾವಿದರನ್ನು ಪರಿಚಯಿಸಿದರು. ಶ್ರೀ ಮಠದ ವ್ಯವಸ್ಥಾಪಕ ನಿರಂಜನ ಆಚಾರ್ ಸ್ವಾಗತಿಸಿ, ಸದಾನಂದ ಕಾಣಿಯೂರು ವಂದಿಸಿದರು.
ಬಂಟ್ವಾಳ : ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕುಕ್ಕಾಜೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಶ್ರೀ ನರಸಿಂಹ ಜಯಂತಿ ಬಾಬ್ತು ದಿನಾಂಕ 04.05.2023ರಂದು ಸಂಜೆ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ವತಿಯಿಂದ ‘ಶರಸೇತು ಬಂಧ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಮುರಳೀಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಹನೂಮಂತ), ಭಾಸ್ಕರ್ ಶೆಟ್ಟಿ ಸಾಲ್ಮರ (ವೃದ್ಧ ವಿಪ್ರ) ಮತ್ತು ಕಯ್ಯೂರು ನಾರಾಯಣ ಭಟ್ (ಅರ್ಜುನ) ಸಹಕರಿಸಿದರು. ನ್ಯಾಯವಾದಿ ಪತ್ತುಮುಡಿ ಚಿದಾನಂದ ರಾವ್ ಪ್ರಾಯೋಜಿಸಿದ್ದರು.
ಮಂಗಳೂರು : ದಿನಾಂಕ 05-05-2023ನೇ ಶುಕ್ರವಾರದಂದು ನಗರದ ಬಲ್ಮಠದಲ್ಲಿರುವ ಬಜಾಜ್ ಸುಪ್ರೀಮ್ ಕಛೇರಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ಕಸಾಪ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ್ ಎಸ್. ರೇವಣಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಬಜಾಜ್ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀ ರಾಘವೇಂದ್ರ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು. “ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಇತಿಹಾಸ ಇದೆ, ಚರಿತ್ರೆ ಇದೆ. ಕ.ಸಾ.ಪ. ಎನ್ನುವುದು ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಕೇತ ಮತ್ತು ಕನ್ನಡದ ಅಸ್ಮಿತೆಯ ದ್ಯೋತಕ. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅರಿತು ಕನ್ನಡ ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮನೆಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಕನ್ನಡವನ್ನು ಬಳಸಬೇಕು. ಆಂಗ್ಲ ಭಾಷೆಯ ಮೋಹದಿಂದ ನಮ್ಮ ಆಡುಭಾಷೆ ಹಾಗೂ ಮಾತೃ ಭಾಷೆಯಾದ ಕನ್ನಡವನ್ನು ಕೀಳಾಗಿ ಕಾಣಬಾರದು. ತಾವು ಕನ್ನಡದಲ್ಲಿ ವ್ಯವಹರಿಸುವುದರ ಜೊತೆಗೆ ತಮ್ಮ ಮಕ್ಕಳಿಗೆ…
ಮುಡಿಪು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ದಿನಾಂಕ 05-05-2023ರಂದು ದೇರಳಕಟ್ಟೆಯ ಕಂಫರ್ಟ್ ಇನ್ ಸಭಾಂಗಣದಲ್ಲಿ ನಡೆಯಿತು. ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ವಿಶ್ರಾಂತ ನಿರ್ದೇಶಕ ಪ್ರೊ ಪಿ. ಶ್ರೀಕೃಷ್ಣ ಭಟ್ ಅವರು ‘ಕನ್ನಡ ನಾಡು ನುಡಿ : ಪರಿಷತ್ತಿನ ಜವಾಬ್ದಾರಿ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. “ಸಾಹಿತ್ಯ ಪರಿಷತ್ತು ಆರಂಭದಲ್ಲಿ ರಾಜಪ್ರಭುತ್ವದ ನೇತೃತ್ವದಲ್ಲಿದ್ದು ಕಾಸರಗೋಡಿನ ಸಾಹಿತ್ಯ ಸಮ್ನೇಳನದ ಬಳಿಕ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯ ತೆಗೆದುಕೊಂಡಿತು. ಅಂದಿನಿಂದಲೂ ಸಾಹಿತ್ಯ ಪರಿಷತ್ತು ಪ್ರಭುತ್ವದ ಅಡಿಯಾಳಾಗದೇ ಕನ್ನಡ ನಾಡು ನುಡಿ ಸಂವರ್ಧನೆಗೆ ಕಟಿಬದ್ಧವಾಗಿ ಕಾರ್ಯನಿರ್ವಹಿಸಿದೆ. ಸಾಹಿತ್ಯ ಪರಿಷತ್ತು ಬೆಳ್ಳಾವೆ, ಮಾಸ್ತಿ, ಡಿವಿಜಿ ಮೊದಲಾದ ಹಲವು ಸಾಹಿತಿಗಳ ಸಮರ್ಥ ಮುಂದಾಳತ್ವದಲ್ಲಿ ನಿಘಂಟು, ಹಳೆಗನ್ನಡ ಸಾಹಿತ್ಯ, ಗದ್ಯಾನುವಾದ ಮುಂತಾದ ಮೌಲಿಕ ಕೃತಿಗಳ ಪ್ರಕಟಣೆಯ ಮೂಲಕ ಅಧ್ಯಯನ ಮತ್ತು ಜ್ಞಾನಕೇಂದ್ರಿತ ಕಾರ್ಯಗಳನ್ನು ಮಾಡಿದೆ. ಈ ಪರಂಪರೆಯ ಅರಿವು ನಮಗಿರಬೇಕು”…