Author: roovari

ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ಎಂಬಂತೆ ಸಾಹಿತ್ಯದಲ್ಲಿ, ಕಾವ್ಯದಲ್ಲಿ, ಶಿಲ್ಪದಲ್ಲಿ, ಕಲಾಕೃತಿಯಲ್ಲಿ, ಸಂಗೀತದಲ್ಲಿ, ನಾಟ್ಯದಲ್ಲಿ, ಕನ್ನಡವನ್ನು ಕಟ್ಟುವ ಬೆಳೆಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ದೃಶೃಕಲೆಯು ಸಂವಹನದ ಮಾಧ್ಯಮವಾಗಿ ವಿವಿಧ ಉದ್ದೇಶಗಳಿಂದ ಜನರನ್ನು ತಲುಪುತ್ತದೆ. ಇಲ್ಲಿ ಕನ್ನಡ ಲಿಪಿಗಳನ್ನೇ, ವರ್ಣಮಾಲೆಯನ್ನೇ ಅಂದದ ಕೈಬರಹದ ಮೂಲಕ ಕಲಾಕೃತಿಗಳನ್ನಾಗಿಸಿ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ ಈ ಐದು ಜನ ಯುವ ಕಲಾವಿದರು. ಶ್ರೀ ಅನಿಮಿಶ ನಾಗನೂರು, ಶ್ರೀ ಜಿ. ಹರಿಕುಮಾರ್, ಶ್ರೀ ಮೋಹನ ಕುಮಾರ ಈರಪ್ಪ, ಶ್ರೀ ಸುರೇಶ್ ವಾಘ್ಮೋರೆ, ಶ್ರೀ ಟಿ.ಬಿ. ಕೋಡಿಹಳ್ಳಿ ಇವರು “ಅಕ್ಷರ ಸಿಂಗಾರೋತ್ಸವ೨೩” ಎನ್ನುವ ಹೆಸರಿನಲ್ಲಿ ಈ ಕಲಾಪ್ರದರ್ಶನವನ್ನು ಬೆಂಗಳೂರಿನ ಜಯನಗರದ ಯುವಪಥ ರಸ್ತೆಯಲ್ಲಿರುವ ‘ಬೆಂಗಳೂರು ಆರ್ಟ ಗ್ಯಾಲರಿ’ಯಲ್ಲಿ ಹಮ್ಮಿಕೊಂಡಿದ್ದಾರೆ. ಕನ್ನಡ ನಾಡು ನುಡಿ, ಇತಿಹಾಸ,ಪರಂಪರೆ, ಕಾವ್ಯ , ಸಾಹಿತ್ಯದೊಂದಿಗೆ ಕನ್ನಡ ಅಕ್ಷರಮಾಲೆಯನ್ನೇ ಕಲಾಕೃತಿಗಳಾಗಿ ಬಿಂಬಿಸುವ ದಾಖಲಿಸುವ ಮತ್ತು ಕನ್ನಡ ಮನಸ್ಸನ್ನು ಸೆಳೆಯುವ ಪ್ರಯತ್ನ ಇವರದು. ಮಾನವ ವಿಕಾಸವಾದಾಗಿನಿಂದ ವಿವಿಧ ಮಾಧ್ಯಮಗಳಲ್ಲಿ ಕಲ್ಲಿನಿಂದ ಕಂಪ್ಯೂಟರ್ ತನಕ ಅಕ್ಷರದ ಬೆಳವಣಿಗೆ…

Read More

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಅಜ್ಜನ ಮನೆ ಕಲಾ ಪ್ರಪಂಚ ಸಾದರ ಪಡಿಸುವ ‘ಹರಿದಾಸ ಸ್ಮರಣೆ’ ದಾಸ ಕೃತಿ ಗಾಯನ ಸ್ಪರ್ಧೆಯು ದಿನಾಂಕ 24-12-2023 ಮತ್ತು 25-12-2023ರಂದು ಮೈಸೂರಿನ ಶ್ರೀ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆಯಲಿದೆ. ಈ ಸ್ಪರ್ಧೆಯ ಪ್ರಥಮ ಹಂತದಲ್ಲಿ 100 ಸ್ಪರ್ಧಿಗಳಿಗೆ ಮಾತ್ರ ಪ್ರವೇಶವಿದೆ. ಪ್ರಥಮ ಹಂತದಲ್ಲಿ ಸ್ಪರ್ಧಿಗಳು ಬೇರೆ ಬೇರೆ ರಾಗದಲ್ಲಿರುವ 4 ದಾಸರ ಕೃತಿಗಳನ್ನು ಕಲಿತಿರಬೇಕು. ತೀರ್ಪುಗಾರರು ಕೇಳಿದ ಕೃತಿಯನ್ನು ಹಾಡಬೇಕು. ದ್ವಿತೀಯ ಹಂತದಲ್ಲಿ ಆಯ್ಕೆಯಾದ 30 ಸ್ಪರ್ಧಿಗಳು ಮೊದಲ ಹಂತದ 4 ಕೃತಿಗಳ ಜೊತೆಗೆ ಹೊಸದಾಗಿ 4 ಕೃತಿಗಳನ್ನು ಉಗಾಭೋಗದ ಸಮೇತ ಕಲಿತಿರಬೇಕು. ಇದರಲ್ಲಿ 2 ಹಾಡು ರಾಗಮಾಲಿಕೆಯಲ್ಲಿರಬೇಕು. ಇಲ್ಲಿ ಸ್ಪರ್ಧಿಗಳು 1 ಕೃತಿ ಅವರ ಆಯ್ಕೆಯದ್ದು ಹಾಗೂ ಇನ್ನೊಂದು ತೀರ್ಪುಗಾರರ ಆಯ್ಕೆಯಂತೆ ಹಾಡಬೇಕು. ತೃತೀಯ ಹಂತದಲ್ಲಿ ಆಯ್ಕೆಯಾದ 10 ಸ್ಪರ್ಧಿಗಳು ತೀರ್ಪುಗಾರರು ಹೇಳುವ ಕೃತಿಯನ್ನು ವಾದ್ಯ ಸಹಕಾರದೊಂದಿಗೆ ಹಾಡಬೇಕು ಹಾಗೂ ಕಿರಿಯ ದರ್ಜೆ ಪಠ್ಯ ಪುಸ್ತಕದ ಪ್ರಕಾರ (ರಾಗ, ತಾಳದ ಬಗ್ಗೆ)…

Read More

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಘೋಷಣೆಯಾಗಿ ಐವತ್ತು ವರ್ಷವಾಗಿದ್ದು ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ಕನ್ನಡ ನಾಡಿನ ಕನ್ನಡ, ಸಂಸ್ಕೃತಿ, ಇತಿಹಾಸ ಪರಂಪರೆಗಳ ವಿಷಯದ ಕುರಿತು ರಾಜ್ಯ ಮಟ್ಟದ ಉಚಿತ ಲಿಖಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಂಡಿದ್ದು ಫಲಿತಾಂಶ ಈ ಕೆಳಗಿನಂತಿದೆ. ಪ್ರಥಮ ಬಹುಮಾನ ಬೆಳಗಾವಿ ಜಿಲ್ಲೆಯ ಕರಡಿಗುದ್ದಿಯ ಶ್ರೀಮತಿ ಗಂಗಾದೇವಿ ಚಕ್ರಸಾಲಿ, ದ್ವಿತೀಯ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತಗಲ್‌ನ ವಿನಾಯಕ ರಮೇಶನಾಯ್ಕ ಮತ್ತು ತೃತೀಯ ಬಹುಮಾನ ದಕ್ಷಿಣ ಕನ್ನಡ ಜಿಲ್ಲೆಯ ಜಾಲ್ಸೂರಿನ ಶ್ರೀಮತಿ ಪೂರ್ಣಿಮಾ ಎಂ. ಪಡೆದಿರುತ್ತಾರೆ. ಈಗಾಗಲೇ ತಿಳಿಸಿದ ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ ಸಮಾರಂಭಗಳಿಲ್ಲದೇ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ವಿಜೇತರಾದವರಿಗೆ ಮಾತ್ರ ಅವರು ಕೊಟ್ಟ ವ್ಯಾಟ್ಸಪ್‌ ಸಂಖ್ಯೆಗೆ ಫಲಿತಾಂಶ, ಅವರ ಭಾವಚಿತ್ರದೊ೦ದಿಗೆ ಪ್ರಮಾಣಪತ್ರ ಕಳಿಸಲಾಗುವುದು ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಸಂಸ್ಥೆಯ ಸರ್ವ ಸದಸ್ಯರು, ಪದಾಧಿಕಾರಿಗಳು ಬಹುಮಾನ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Read More

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಳೆದ ಮೂರುವರೆ ದಶಕಗಳಿಂದ ರಾಜ್ಯ, ಅಂತರರಾಜ್ಯ ಮಟ್ಟದಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಯಕ್ಷಗಾನ, ಆಧ್ಯಾತ್ಮಿಕ ಹೀಗೆ ಹತ್ತು ಹಲವು ನಿರಂತರ ಕಾರ್ಯ ಚಟುವಟಿಕೆಗಳೊಂದಿಗೆ, ಕ್ರಿಯಾಶೀಲವಾಗಿದ್ದು ಸಾವಿರಾರು ಮಕ್ಕಳಿಗೆ, ಮಹಿಳೆಯರಿಗೆ ಅವಕಾಶ ವಂಚಿತ ಪ್ರತಿಭೆಗಳಿಗೆ ಮುಕ್ತವಾದ, ಸೂಕ್ತವಾದ ವೇದಿಕೆ ಕಲ್ಪಿಸಿ ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಹೊಸ ಹೊಸ ಪರಿಕಲ್ಪನೆಗಳ ಸಮಾರಂಭದ ಕುರಿತು ‘ಕುಂಚ ಕೈಪಿಡಿ’ ಕಿರು ಹೊತ್ತಿಗೆಗೆ ಸಾರ್ವಜನಿಕವಾಗಿ ಲೇಖನಗಳಿಗೆ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮೊದಲೇ ಪರೀಕ್ಷೆ ಪೂರ್ವಬಾವಿ ತಯಾರಿ ಉಚಿತ ಕಾರ್ಯಾಗಾರ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಪರಿಪೂರ್ಣ ಅಂಕ ಪಡೆದ ಮಕ್ಕಳಿಗೆ ‘ಕನ್ನಡ ಕೌಸ್ತುಭ’ ರಾಜ್ಯ ಪ್ರಶಸ್ತಿಯನ್ನು ಈಗಾಗಲೇ 36 ಸಾವಿರ ಮಕ್ಕಳಿಗೆ ಅದ್ದೂರಿಯಾಗಿ ಸಮಾರಂಭದಲ್ಲಿ ವಿಜೃಂಭಣೆಯಿಂದ ವಿತರಿಸಿದ ಸವಿನೆನಪಿನ ಪ್ರಶಸ್ತಿ ಪುರಸ್ಕೃತರು ಅವರ ಪೋಷಕರು ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಸಂಕ್ಷಿಪ್ತವಾಗಿ ಒಂದು ಪುಟಕ್ಕೆ ಮೀರದಂತೆ ಬರೆದು 15-11-2023ರೊಳಗೆ ಈ ಕೆಳಗಿನ ವಿಳಾಸಕ್ಕೆ ಅಥವಾ…

Read More

ಮಂಗಳೂರು : ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ನಡೆಯುತ್ತಿರುವ ಕಥಾಬಿಂದು ಪ್ರಕಾಶನವು ಲೇಖಕ-ಲೇಖಕಿಯರಿಂದ ಕವನ ಸಂಕಲನಗಳಿಗೆ ಕವನಗಳನ್ನು ಆಹ್ವಾನಿಸಿದೆ. ಕಳೆದ ತಿಂಗಳು ಹೊಸ ಬರಹಗಾರರನ್ನು ಪ್ರೋತ್ಸಾಹಿಸಲು ಸ್ಪರ್ಧಾತ್ಮಕ ಬೆಲೆಯಲ್ಲಿ ಪುಸ್ತಕ ಪ್ರಕಟಣೆಗೆ ಪ್ರಕಟಣೆ ಹೊರಡಿಸಿತು. ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದುದರಿಂದ 50 ಕೃತಿಗಳನ್ನು ಮಾತ್ರ ಪ್ರಕಟಣೆಗೆ ಆಯ್ದುಕೊಳ್ಳಲಾಯಿತು. ನಾವು ಸಮಯಕ್ಕೆ ಪುಸ್ತಕಗಳನ್ನು ಪ್ರಕಟಿಸಿ ಅಕ್ಟೋಬರ್ 29ಕ್ಕೆ ಪುಸ್ತಕ ಬಿಡುಗಡೆ ಮಾಡಿ ನಿಮ್ಮ ವಿಶ್ವಾಸಕ್ಕೆ ಪಾತ್ರರಾಗಿದ್ದೇವೆ. ಕಳೆದ ಬಾರಿ ನಿರಾಶೆಗೊಂಡ ಕವಿಗಳಿಗೆ ಈಗ ಇನ್ನೊಂದು ಅವಕಾಶ ಒದಗಿ ಬಂದಿದೆ. ಕವಿಗಳ ಬೇಡಿಕೆಯನ್ನು ಗಮನದಲ್ಲಿರಿಸಿ ಈ ಕೆಳಗಿನ ಎರಡು ಯೋಜನೆಗಳನ್ನು ಪ್ರಕಟಿಸುತ್ತಿದ್ದೇನೆ. ಯೋಜನೆ 1 : 30 ಪುಟಗಳ ಸೆಂಟರ್ ಪಿನ್ನಿಂಗ್ ಪುಸ್ತಕ 20 ಪ್ರತಿಗಳು ಒಟ್ಟು ಶುಲ್ಕ ರೂ 3500/- ಯೋಜನೆ 2 : 56 ಪುಟಗಳ ಪರ್ಫೆಕ್ಟ್ ಬೈಂಡಿಂಗ್ ಪುಸ್ತಕ ಪ್ರತಿಗಳು 50 ಒಟ್ಟು ಶುಲ್ಕ ರೂ 6,000/- ಎರಡೂ ಯೋಜನೆಗಳಲ್ಲಿ ನಮೂದಿಸಿದ ಶುಲ್ಕ ಕವರ್ ಪೇಜ್ ಮತ್ತು ಪುಸ್ತಕ ಬಿಡುಗಡೆ…

Read More

ಉಡುಪಿ : 1947-48ರ ಸ್ವರಾಜ್ಯ ವಿಜಯ, ಹೈದರಾಬಾದ್ ವಿಜಯ, 2023ರ ಕಾಶ್ಮೀರ ವಿಜಯದಂತಹ ಐತಿಹಾಸಿಕ ರಾಷ್ಟ್ರ ಪ್ರಜ್ಞೆಯ ಪ್ರಸಂಗಗಳನ್ನು ಪ್ರಸ್ತುತ ಪಡಿಸಿದ ಉಡುಪಿಯ ಸುಶಾಸನ ‘ನಾರೀ ಶಕ್ತಿ- ಮಾನಿನಿ ಮನ್ವಂತರ’ ಎಂಬ ವಿನೂತನ ಪ್ರಾಯೋಗಿಕ ಯಕ್ಷಗಾನ ಪ್ರಸಂಗದ ತಾಳಮದ್ದಳೆ 2024ರ ಜನವರಿಯಂದು ಉಡುಪಿಯಲ್ಲಿ ಲೋಕಾರ್ಪಣೆಯಾಗಲಿದೆ. ಸ್ವಾತಂತ್ರೋತ್ಸವದ ತಾಳಮದ್ದಳೆಯ ರೂವಾರಿ ಉಡುಪಿಯ ಸುಧಾಕರ ಆಚಾರ್ಯರ ಸಂಕಲ್ಪದಂತೆ ಪ್ರಸಿದ್ಧ ಪ್ರಸಂಗಕರ್ತ ಹಾಗೂ ತಾಳಮದ್ದಳೆ ಅರ್ಥಧಾರಿ ಪ್ರೊ. ಪವನ್ ಕಿರಣಕೆರೆ ಪರಿಕಲ್ಪನೆಯಲ್ಲಿ ಈ ಪ್ರಸಂಗ ಮೂಡಿ ಬರಲಿದೆ. ನವರಾತ್ರಿಯಂದು ಶ್ರೀಕ್ಷೇತ್ರ ಕಟೀಲಿನಲ್ಲಿ ಶ್ರೀ ಶೀರೂರು ಶ್ರೀಪಾದರು, ಅರ್ಚಕರಾದ ಆಸ್ರಣ್ಣರು, ನವ ಕನ್ನಿಕಾ ಮುತ್ತೈದೆಯರ ಉಪಸ್ಥಿತಿಯಲ್ಲಿ ವೀಳ್ಯ ಪ್ರದಾನ ಪೂರೈಸಿ, ಪ್ರಸಂಗ ರಚನೆಗೆ ಸಿದ್ಧತೆ ನಡೆಸಿದೆ. ಭಾರತೀಯ ಸಂಸ್ಕೃತಿ ಹೆಣ್ಣಿಗೆ ನೀಡಿದ ಸ್ಥಾನಮಾನ, ಐತಿಹಾಸಿಕ ಸ್ಥಿತ್ಯಂತರಗಳು, ಪ್ರಸ್ತುತ ಸಮಾಜದಲ್ಲಿನ ಸ್ತ್ರೀ ಸಂವೇದನೆ, ಸ್ತ್ರೀ ಶಕ್ತಿಯ ಪ್ರಾಬಲ್ಯದ ಅನಾವರಣವೇ ಮುಂತಾದ ಮಹತ್ವಪೂರ್ಣ ವಿಷಯಗಳ ನೆಲೆಗಟ್ಟಿನಲ್ಲಿ ಸಿದ್ಧವಾಗಲಿರುವ ‘ನಾರೀ ಶಕ್ತಿ’ ಪ್ರಸಂಗವು ಈಗಾಗಲೇ ಚಾಲ್ತಿಯಲ್ಲಿರುವ ಪೌರಾಣಿಕ ಪ್ರಸಂಗಗಳಿಗಿಂತ ಭಿನ್ನವಾಗಿದ್ದು, ಪುರಾಣ…

Read More

ಮೂಡುಬಿದಿರೆ : ದ.ಕ. ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಇವುಗಳ ಆಶ್ರಯದಲ್ಲಿ 3 ದಿನಗಳ ಕಾಲ ನಡೆಯುವ ‘ಮೈಸೂರು ವಿಭಾಗ ಮಟ್ಟದ ಜಾನಪದ ಕಲಾ ತಂಡಗಳ ತರಬೇತಿ ಕಾರ್ಯಾಗಾರ’ ದಿನಾಂಕ 02-11-2023 ರ ಗುರುವಾರದಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೈಸೂರು ವಿಭಾಗದ ಆರೋಗ್ಯ, ಕುಟುಂಬ ಕಲ್ಯಾಣ ಸೇವೆ ವಿಭಾಗೀಯ ಜಂಟಿ ನಿರ್ದೇಶಕಿ ಡಾ| ರಾಜೇಶ್ವರಿ ದೇವಿ “ಆಧುನಿಕತೆಯ ಬಿರುಗಾಳಿಯಲ್ಲಿ ಜಾನಪದ ಕಲೆಗಳು ಎಲ್ಲೋ ಸಾಗುತ್ತಿವೆ. ಆದರೆ ದ.ಕ., ಉಡುಪಿ ಜಿಲ್ಲೆಯ ಮಣ್ಣಿನ ಗಟ್ಟಿತನದಿಂದಾಗಿ 5 ಸಾವಿರ ವರ್ಷಗಳಿಂದಲೂ ಇಲ್ಲಿಯ ಜಾನಪದ ಕಲೆಗಳು ಜೀವಂತವಾಗಿವೆ. ಸಿನೆಮಾದ ಮೂಲಕ ಜಾನಪದ ಕಲೆಗಳನ್ನು ಜೀವಂತವಾಗಿ ಉಳಿಸುವ ಕೆಲಸ ನಡೆಯುತ್ತಿದೆ” ಎಂದು ಹೇಳಿದರು. ವಿದ್ಯಾಗಿರಿಯಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ವಹಿಸಿದ್ದರು. ಬೆಂಗಳೂರು ಆರೋಗ್ಯ ಸೌಧ ಆ.ಕು.ಕ.ಸೇವೆಗಳ ಉಪ ನಿರ್ದೇಶಕ…

Read More

ಮಂಗಳೂರು : ಸಂತ ಅಲೋಶಿಯಸ್ ಪ್ರೌಢಶಾಲಾ ವತಿಯಿಂದ ಶಾಲಾ ಸಭಾಂಗಣದಲ್ಲಿ ‘ಸಿಂಫನಿ’ – ಶಾಂತಿ ಸೌಹಾರ್ದಕ್ಕಾಗಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ದಿನಾಂಕ 31-10-2023ರಂದು ನಡೆಸಿಕೊಟ್ಟರು. ಬೆಳಗ್ಗಿನ ಕಾರ್ಯಕ್ರಮವನ್ನು ಬಹುಮುಖ ಪ್ರತಿಭೆ, ಲೆಕ್ಕಪರಿಶೋಧಕಿ ಪಲ್ಲವಿ ಪ್ರಭು ಎಚ್. ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ವಂ. ಜೆರಾಲ್ಡ್‌ ಫುರ್ಟಾಡೊ ಮಾತನಾಡಿ, “ಪ್ರಸ್ತುತ ಸಮಾಜದಲ್ಲಿ ತಾಂಡವವಾಡುತ್ತಿರುವ ಅಶಾಂತಿ, ಅಪನಂಬಿಕೆಗಳ ಬದುಕಿನಲ್ಲಿ ಸೌಹಾರ್ದ ವಾತಾವರಣದ ಅಗತ್ಯವನ್ನು ತಿಳಿಸಿದರು. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಖ್ಯಾತ ಹಾಡುಗಾರ್ತಿ, ಸಂತ ಅಲೋಶಿಯಸ್ ಐಟಿಐ ವಿಭಾಗದ ಉಪನ್ಯಾಸಕಿ ಅಂಕಿತ ಮಸ್ಕರೇನ್ಹಸ್ ಭಾಗವಹಿಸಿದ್ದರು. ‘ಸಿಂಫನಿ’ ಕಾರ್ಯಕ್ರಮದಲ್ಲಿ ಮೂವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಹಾಡುಗಾರಿಕೆಯ ಅನಾವರಣವಾಯಿತು. ಉಪ ಮುಖ್ಯೋಪಾಧ್ಯಾನಿ ಲ್ಯಾನ್ಸಿ ಡಿ’ಸೋಜಾ ಅತಿಥಿಗಳನ್ನು ಸಮ್ಮಾನಿಸಿದರು. ಶಿಕ್ಷಕಿಯರಾದ ಲಿನೆಟ್ ಮಥಾಯಸ್ ಮತ್ತು ಸುನಿತಾ ಪಾಯ್ಸ್ ಪ್ರಸ್ತುತ ಸಮಾಜದ ಸಂಘರ್ಷಮಯ ಚಿತ್ರಣ, ಜಾಗೃತಿಯ ಅಗತ್ಯ ಹಾಗೂ ಸೌಹಾರ್ದವನ್ನು ಪ್ರೇರೇಪಿಸುವ ವಿಚಾರ ಆಧಾರಿತ ವೀಡಿಯೋ ಪ್ರದರ್ಶಿಸಿದರು. ವಿದ್ಯಾರ್ಥಿಗಳಾದ ಜೋಶುವಾ, ಸಿಮಂತಾ, ಆಫ್ಲಾ, ವಿವಾನ್, ನವೊಮಿ, ಶನನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜೊವಿಟಾ…

Read More

ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆದ ವಿಶ್ವ ಬಂಟರ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ಕವಿಗೋಷ್ಠಿಯಲ್ಲಿ ‘ಕವಿ ಸಮಯ – ಕಾವ್ಯ ನಮನ – ಚಿತ್ತ ಚಿತ್ತಾರ’ ಕಾರ್ಯಕ್ರಮವು ಉಡುಪಿಯ ಬಂಟರ ಸಂಘದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ದಿನಾಂಕ 29-10-2023ರಂದು ನಡೆಯಿತು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡುತ್ತಾ “ಪ್ರಾಚೀನ ಕಾಲದಿಂದಲೂ ನಾಡಿನ ಕಲೆ-ಸಾಹಿತ್ಯಗಳಿಗೆ ರಾಜಾಶ್ರಯ ನೀಡಿದ ವರ್ಗಗಳಲ್ಲಿ ಬಂಟ ಸಮಾಜದವರೂ ಪ್ರಮುಖರು. ಮೌಖಿಕ ಪರಂಪರೆಯಿಂದ ತೊಡಗಿ ಸಮೃದ್ಧವಾದ ಆಧುನಿಕ ಸಾಹಿತ್ಯ ಕೃಷಿಯವರೆಗೆ ಅನೇಕ ವಿದ್ವನ್ಮಣಿಗಳು ವಿವಿಧ ಪ್ರಕಾರಗಳಲ್ಲಿ ನಮ್ಮ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಿಸಿದ್ದಾರೆ. ನೃಪತುಂಗನ ಕವಿರಾಜಮಾರ್ಗದಲ್ಲಿ ಬರುವ ಕಾವ್ಯ ಪ್ರಯೋಗ ಪರಿಣತಮತಿಗಳ್ ನಾಡವರ್ಗಳ್ ಎಂಬ ಸೊಲ್ಲು ನಾಡವ – ಬಂಟರ ಕುರಿತಾಗಿಯೇ ಹೇಳಲ್ಪಟ್ಟಿದೆ ಎಂಬುದನ್ನು ಹಿರಿಯ ಭಾಷಾ ವಿದ್ವಾಂಸರರಾದ ಡಾ.ಶಂಬಾ ಜೋಶಿಯವರೇ ತಮ್ಮ ಸಂಶೋಧನಾತ್ಮಕ ಬರಹದಲ್ಲಿ…

Read More

ಉಡುಪಿ : ಕುಂದಾಪುರ ತಾಲ್ಲೂಕಿನ ಮೋರ್ಟು-ಬೆಳ್ಳಾಲದ ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ (ರಿ.) ಇದರ ರಜತ ವರ್ಷದ ಸಂಭ್ರಮದ ಪ್ರಯುಕ್ತ ಮಕ್ಕಳಿಗಾಗಿ ಯಕ್ಷಗಾನ ಚಿತ್ರಕಲಾ ಸ್ಪರ್ಧೆಯನ್ನು ನೇರಳಕಟ್ಟೆಯ ಬ್ರಹ್ಮನಜೆಡ್ಡು, ಶ್ರೀ ಶಂಕರ ಧಾರ್ಮಿಕ ಸಭಾ ಭವನದಲ್ಲಿ ದಿನಾಂಕ 14-11-2023 ಮಂಗಳವಾರದಂದು ಸಂಜೆ 3 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ. ಮೂರು ಬೇರೆ ಬೇರೆ ವಿಭಾಗಗಳು ಮತ್ತು ಸ್ಪರ್ಧೆಯ ವಿಷಯ: 1] 1ರಿಂದ 3ನೇತರಗತಿಯವರಿಗೆ, ವಿಷಯ : ಯಕ್ಷಗಾನ ವೇಷದ ಮುಖವರ್ಣಿಕೆ 2] 4ರಿಂದ 7ನೇ ತರಗತಿಯವರೆಗೆ, ವಿಷಯ : ಯಕ್ಷಗಾನದ ರಾಜವೇಷ/ಪುಂಡುವೇಷ 3] 8ರಿಂದ 10ನೇ ತರಗತಿಯವೆರೆಗೆ, ವಿಷಯ : ಯಕ್ಷಗಾನದ ಬಣ್ಣದವೇಷ * ಭಾಗವಹಿಸಲಿಚ್ಚಿಸುವ ಮಕ್ಕಳು ತಮ್ಮ ಹೆಸರು, ವಯಸ್ಸು, ತರಗತಿ, ಶಾಲೆ, ಪೋಷಕರ ಮೊಬೈಲ್ ಸಂಖ್ಯೆಯನ್ನು 9986363495 ಈ ನಂಬರಿಗೆ ವಾಟ್ಸಪ್ ಮಾಡಿ, ದಿನಾಂಕ 10-11-2023ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊಂಡವರಿಗೆ ಮಾತ್ರ ಅವಕಾಶ. ನೋಂದಣಿ ಮಾಡುವಾಗ ನೀಡಿದ ವಿವರಗಳನ್ನು ಬಳಸಿ ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನು ಮಾತ್ರವೇ ಪರಿಗಣಿಸಲಾಗುವುದು. * ಸ್ಪರ್ಧೆಯ ದಿನ ಮಧ್ಯಾಹ್ನ…

Read More