Author: roovari

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ ಮೇ 30 ಮತ್ತು 31ರಂದು ನಡೆದ ಆಹ್ವಾನಿತ ಕಾಲೇಜು ತಂಡಗಳ ಯಕ್ಷಗಾನ ಸ್ಪರ್ಧೆಯಲ್ಲಿ ‘ತರಣಿಸೇನ ಕಾಳಗ’ ಪ್ರದರ್ಶಿಸಿದ ನಿಟ್ಟೆ ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು ತಂಡ ಪ್ರಥಮ ಸ್ಥಾನ, ‘ಶ್ರೀಹರಿ ಲೀಲಾ’ ಪ್ರದರ್ಶಿಸಿದ ಮೂಡುಬಿದಿರೆ ಆಳ್ವಾಸ್ ಕಾಲೇಜು ದ್ವಿತೀಯ, ‘ಸುದರ್ಶನ ವಿಜಯ’ ಪ್ರದರ್ಶಿಸಿದ ಮಂಗಳೂರು ಎಸ್‌.ಡಿ.ಎಂ. ಕಾನೂನು ಮಹಾವಿದ್ಯಾಲಯ ತೃತೀಯ ಪ್ರಶಸ್ತಿ ಪಡೆದವು. ರಾಜ ವೇಷದಲ್ಲಿ ಗೋವಿಂದ ದಾಸ ಕಾಲೇಜಿನ ಕಾರ್ತಿಕ್ ಅಮೀನ್, ಎಸ್‌.ಡಿ.ಎಂ.ನ ಅಜೇಯ ಸುಬ್ರಹ್ಮಣ್ಯ, ಪುಂಡುವೇಷದಲ್ಲಿ ಎಸ್.ಡಿ.ಎಂ.ನ ಪ್ರಶಾಂತ ಐತಾಳ, ಮಂಗಳೂರು ವಿವಿ ಕಾಲೇಜಿನ ಕೌಶಿಕ್, ಸ್ತ್ರೀ ವೇಷದಲ್ಲಿ ಆಳ್ವಾಸ್‌ನ ಈಶ್ವರೀ ಶೆಟ್ಟಿ, ಮಂಗಳೂರು ವಿವಿ ಕಾಲೇಜಿನ ವೀಕ್ಷಿತಾ, ಹಾಸ್ಯದಲ್ಲಿ ನಿಟ್ಟೆ ಎನ್‌ಎಸ್‌ಎಎಂನ ಪ್ರಣವ ಮೂಡಿತ್ತಾಯ, ಎಸ್.ಡಿ.ಎಂ.ನ ರೋಹಿಲ್ ಶೆಟ್ಟಿ, ಬಣ್ಣದ ವೇಷದಲ್ಲಿ ಎಸ್.ಡಿ.ಎಸ್‌.ನ ವೆಂಕಟ ಯಶಸ್ವಿ ಕೆ., ಆಳ್ವಾಸ್ ನ ಜೀವನ್ ಕಟೀಲ್ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಪಡೆದರು. ಸಮಗ್ರ…

Read More

ಕಾರ್ಕಳ: ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕಾರ್ಕಳ ಸಮಿತಿ ಜಂಟಿಯಾಗಿ ಮತ್ತು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರ್ಕಳದ ಹೋಟೇಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 27-05-2023 ರಂದು ನಡೆಯಿತು. ಆಳ್ವಾಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀ ಹರೀಶ್ ಟಿ.ಜಿಯವರು ‘ಉಗಾಭೋಗಗಳೆಂಬ ರಸಘಟ್ಟಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ‘ದಾಸ ಪರಂಪರೆಯಲ್ಲಿ ಬಂದಂತಹ ಕೀರ್ತನಕಾರರು ದೊಡ್ಡ ಮಟ್ಟದಲ್ಲಿ ಕೀರ್ತನೆಗಳನ್ನು ಬರೆದಂತೆ ಶ್ಲೋಕ ರೂಪದ ಸಣ್ಣ ಸಣ್ಣ ಭಕ್ತಿಗೀತೆಗಳಾಗಿರುವ ಉಗಾಭೋಗಗಳನ್ನೂ ರಚಿಸಿದರು. ಇವು ಗಾತ್ರದಲ್ಲಿ ಚಿಕ್ಕದಾದರೂ ಆಧ್ಯಾತ್ಮಿಕ ಹಂಬಲ ಮತ್ತು ಅದರ ರೀತಿಯನ್ನು ಸರಳವಾಗಿ ಇಲ್ಲಿ ನಿರೂಪಿಸಲಾಗಿದೆ. ಕೆಲವೇ ಸಾಲುಗಳಲ್ಲಿ ಭಕ್ತಿಯ ಮಹತ್ವವನ್ನು ಸಾರುವ ಉಗಾಭೋಗಗಳು ಅರ್ಥಪೂರ್ಣವೂ, ಸತ್ವಪೂರ್ಣವೂ ಆಗಿದ್ದು ಅವು ಕೊಡುವ ಆನಂದ ಅಪರಿಮಿತವಾದುದು ಭಕ್ತಿ, ಶರಣಾಗತಿ ಮತ್ತು ಮೋಕ್ಷ ಪ್ರಾಪ್ತಿಯನ್ನು ಗುರಿಯಾಗಿಟ್ಟುಕೊಂಡು ರಚನೆಗೊಂಡ ಉಗಾಭೋಗಗಳಲ್ಲಿ ಶ್ರೇಷ್ಠವಾದ ತಾತ್ವಿಕ ಚಿಂತನೆಗಳು ಅಡಗಿವೆ. ಶರಣರ…

Read More

ಮಂಗಳೂರು : ದಿನಾಂಕ 31-05-2023ರಂದು ಮಂಗಳೂರು ಗಮಕ ಕಲಾ ಪರಿಷತ್ತಿನ ಸಹಯೋಗದೊಂದಿಗೆ ಮಂಗಳೂರು ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಆವರಣದಲ್ಲಿ ವಾಸವಾಗಿರುವ ಶ್ರೀಮತಿ ವಾಣಿ ಮತ್ತು ಶ್ರೀ ಶುಭಕರ ಇವರ ಮನೆಯಲ್ಲಿ ಮನೆ ಮನೆ ಗಮಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಈ ಕಾರ್ಯಕ್ರಮದಲ್ಲಿ ಅಲ್ಲಿನ ಸಂಸ್ಕೃತ ಶಿಕ್ಷಕಿ ಶ್ರೀಮತಿ ಸ್ಮಿತಾ ಅವರ ಉತ್ತಮ ವಾಚನದಲ್ಲಿ ಮತ್ತು ಅಲ್ಲಿನ ಕನ್ನಡ ಉಪನ್ಯಾಸಕರಾದ ನಮ್ಮ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸುರೇಶ್ ರಾವ್ ಅವರ ವ್ಯಾಖ್ಯಾನದಲ್ಲಿ “ಕರ್ಣ ಜನನ” ಪ್ರಸಂಗ ಚೆನ್ನಾಗಿ ಮೂಡಿ ಬಂದಿತು. ನಮ್ಮ ಪರಿಷತ್ತಿನ ಕಾರ್ಯದರ್ಶಿಯಾದ ಶ್ರೀ ಶುಭಕರ ಅವರು ಸ್ವಾಗತಿಸಿ, ವಂದಿಸಿದರು. ವಾಣಿಶ್ರೀ ಅವರು ನಿರೂಪಣೆ ಮಾಡಿದರು. ಮಕ್ಕಳಾದ ಶ್ರೀಪಾಲ ಮತ್ತು ಶ್ರೀಕಲಾ ದೀಪ ಬೆಳಗಿಸಿ ಉದ್ಘಾಟಸಿದರು. ಹತ್ತಾರು ಮಂದಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Read More

ಮಂಗಳೂರು: ಆಕಾಶವಾಣಿ ಮಂಗಳೂರು ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಮಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಯುವವಾಣಿ ಕಥಾ-ಕವನ-ಲೇಖನ ಸ್ಪರ್ಧೆ 2023ರ ಬಹುಮಾನ ವಿತರಣಾ ಸಮಾರಂಭವು 27-5-2023ರ ಶನಿವಾರ ಅಪರಾಹ್ನ ಮಂಗಳೂರು ಆಕಾಶವಾಣಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು. ಆಕಾಶವಾಣಿ ಮಂಗಳೂರು ನಿಲಯದ ಕಾರ್ಯಕ್ರಮ ಮುಖ್ಯಸ್ಥ ಶ್ರೀ ಟಿ. ಕೆ.ಉಣ್ಣಿಕೃಷ್ಣನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಳ್ತೂರು ಅಣ್ಣಯ್ಯ ಕುಲಾಲ್,ರೆಡ್ ಕ್ರಾಸ್ ಅಂತರ ರಾಷ್ಟ್ರೀಯ ಸಂಸ್ಥೆಯ ಮಂಗಳೂರು ವಿಭಾಗದ ಅಧ್ಯಕ್ಷ ರೊಟೇರಿಯನ್ ಸಿ.ಎ ಶ್ರೀ ಶಾಂತಾರಾಮ ಶೆಟ್ಟಿ, ಐ.ಸಿ.ಎ.ಐ ಮಂಗಳೂರು ವಿಭಾಗದ ಪೂರ್ವಾಧ್ಯಕ್ಷ ಸಿ.ಎ ಶ್ರೀ ಎಸ್.ಎಸ್. ನಾಯಕ್, ಪ್ರಣವ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಶ್ರೀ ಸೋಮಪ್ಪ ನಾಯಕ್, ವಿನಯ ಕೃಷಿಕ ಬೆಳೆಗಾರರ ಸಂಘ, ಕೋಲ್ನಾಡು ಇದರ ಅಧ್ಯಕ್ಷ ಶ್ರೀ ವಿಜಯ್ ಶೆಟ್ಟಿ ಕೋಲ್ನಾಡು ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಉಪನ್ಯಾಸಕ ಶ್ರೀ…

Read More

ಬೆಂಗಳೂರು: ಕನ್ನಡ ಪುಸ್ತಕೋದ್ಯಮ ಸಂಕಷ್ಟದಲ್ಲಿದ್ದು ಕನ್ನಡ ಪುಸ್ತಕಗಳನ್ನು ಖರೀದಿಸಲು ಮುಂಬರುವ ಬಜೆಟ್ ನಲ್ಲಿ 25ಕೋಟಿ ಮೀಸಲಿಡಬೇಕು ಎಂದು ಪ್ರಕಾಶಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನಿಯೋಗವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನು 30-05-2023ರ ಮಂಗಳವಾರ ಭೇಟಿಮಾಡಿ ಪುಸ್ತಕೋದ್ಯಮದ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡರು. ಸಾರ್ವಜರಿಕ ಗ್ರಂಥಾಲಯ ಇಲಾಖೆಯು ಏಕಗವಾಕ್ಷಿ ಯೋಜನೆಯಡಿ 2020 ರಿಂದ 3 ವರ್ಷಗಳ ಪುಸ್ತಕ ಖರೀದಿ ನಡೆಸಿಲ್ಲ. ಇದರಿಂದಾಗಿ ರಾಜ್ಯದ ಎಲ್ಲೆಡೆ ಓದುಗರು ಹೊಸ ಕೃತಿಗಳಿಂದ ವಂಚಿತರಾಗಿದ್ದಾರೆ ಬಿ.ಬಿ.ಎಂ.ಪಿ 450ಕೋಟಿ ಗ್ರಂಥಾಲಯ ಕರ ಸಂಗ್ರಹಿಸಿದೆ ಇದನ್ನು ಸಂಬಂಧಿಸಿದ ಇಲಾಖೆಗೆ ಹತ್ತಾಂತರಿಸಿಲ್ಲ ಇದರಿಂದಾಗಿ ಪ್ರಕಾಶನ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎಂದು ಪ್ರಕಾಶಕರು ಹೇಳಿದರು. ಪುಸ್ತಕ ಪ್ರಕಟಣೆ ವೆಚ್ಚ ಗಗನಕ್ಕೇರಿದೆ ಆದರೆ ಸಗಟು ಖರೀದಿಯಲ್ಲಿ ಮಾತ್ರ ಹಳೆಯ ದರವನ್ನೇ ನಿಗದಿಪಡಿಸಲಾಗಿದೆ. ಹೆಚ್ಚಿರುವ ಕಾಗದ, ಮುದ್ರಣ ಬೆಲೆ, ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಪ್ರಕಾಶನ ರಂಗ ತತ್ತರಿಸಿದೆ. ಆದ್ದರಿಂದ ಒಂದು ಪುಟದ…

Read More

ಉಡುಪಿ : ಯಕ್ಷ ಆರಾಧನಾ ಕಿದಿಯೂರು ಟ್ರಸ್ಟಿನ ಪ್ರಥಮ ವಾರ್ಷಿಕೋತ್ಸವವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ದಿನಾಂಕ 28-05-2023 ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ವಿದ್ವಾನ್ ಗಣಪತಿ ಭಟ್ ಅವರಿಗೆ ‘ಯಕ್ಷ ಆರಾಧನಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಯವರು “ಯಕ್ಷಗಾನ ಅನಕ್ಷರಸ್ಥರಿಗೂ ನಮ್ಮ ಪುರಾಣಗಳ ಬಗ್ಗೆ ತಿಳಿಸಿ ಅವರಲ್ಲಿ ಅಧ್ಯಾತ್ಮಿಕ ಜಾಗೃತಿ ಮೂಡಿಸಿದೆ. ಯಕ್ಷಗಾನದಂತಹ ಕಲೆಗಳು ಬರೀ ಮನೋರಂಜನೆಗೆ ಮಾತ್ರವಲ್ಲ, ಸಮಾಜಕ್ಕೂ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿವೆ. ಈ ಜಾನಪದ ಕಲೆಗಳು ಸಂಸ್ಕಾರ, ನೀತಿವಂತ ಸಮಾಜವನ್ನು ನಿರ್ಮಿಸಿವೆ. ಎಲ್ಲಾ ಕಲೆಗಳನ್ನು ಮೇಳೈಸಿಕೊಂಡಿರುವ ಯಕ್ಷಗಾನಕ್ಕೆ ಇಂದು ರಾಜಾಶ್ರಯ ತಪ್ಪಿದರೂ, ಸಮಾಜ, ಮಠ ಮಂದಿರಗಳ ಪ್ರೋತ್ಸಾಹದಲ್ಲಿ ಬೆಳೆಯುತ್ತಿದೆ. ಆಧುನಿಕತೆಯ ಪ್ರಭಾವದಲ್ಲಿ ಈ ಕಲೆ ತನ್ನ ನೈಜತೆಯನ್ನು ಕಳೆದುಕೊಂಡು ವಿಕಾರವಾಗಬಾರದು. ಈ ಪ್ರಜ್ಞೆ ಕಲಾವಿದರಲ್ಲಿರಬೇಕು” ಎಂದು ಅವರು ಮಾರ್ಮಿಕವಾಗಿ ನುಡಿದರು. ಅಭ್ಯಾಗತರಾಗಿ ಆಗಮಿಸಿದ ತಲ್ಲೂರು…

Read More

ಮಂಗಳೂರು : ಶ್ರೀ ಶಾರದಾ ನಾಟ್ಯಾಲಯ ಹೊಸಬೆಟ್ಟು, ಇದರ ರಜತ ಸಂಭ್ರಮದ ಪ್ರಯುಕ್ತ ‘ನೃತ್ಯ ಶರಧಿ’ ಸರಣಿ ಕಾರ್ಯಕ್ರಮವು ದಿನಾಂಕ 21-05-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾ ತಿಲಕ ನಾಟ್ಯಾಚಾರ್ಯ ಶ್ರೀ ಮೋಹನ್ ಕುಮಾರ್ ಉಳ್ಳಾಲ್ ಮಂಗಳ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ನಾಟ್ಯಾಚಾರ್ಯ ಮೋಹನ್ ಕುಮಾರ್ ಉಳ್ಳಾಲ್, ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದ್ವಾನ್ ಮುರಳೀಧರ ಆಚಾರ್ಯ ಉಪಸ್ಥಿತರಿದ್ದರು. ವಿದುಷಿ ಶಾರದಾಮಣಿ ತನ್ನ ಶಿಷ್ಯೆ ಶ್ರೀ ಶಾರದಾ ನಾಟ್ಯಾಲಯದ ನಿರ್ದೇಶಕಿ ಭಾರತಿ ಸುರೇಶ್ ಅವರನ್ನು ಅಭಿನಂದಿಸಿ ಶುಭ ಕೋರುತ್ತಾ “ಕಲೆ ಒಂದು ಶಕ್ತಿ ಮತ್ತು ಧ್ಯಾನ ಇದ್ದ ಹಾಗೆ, ನಂಬಿದವರ ಕೈ ಬಿಡುವುದಿಲ್ಲ. ನಾವು ಕಲೆಯನ್ನು ಪ್ರೀತಿಸಿದರೆ ಸಮಾಜವೇ ನಮ್ಮನ್ನು ಪ್ರೀತಿಸುತ್ತದೆ” ಎಂದರು. ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಮಾತನಾಡುತ್ತಾ “ಭರತನಾಟ್ಯ ಸನಾತನ ಕಲೆ, ಅದನ್ನು ಪ್ರೋತ್ಸಾಹಿಸಿ ಎಲ್ಲರೂ ಅದನ್ನು ಎತ್ತಿ ಹಿಡಿಯಬೇಕು. ನಟರಾಜನ ಆರಾಧನೆಯೊಂದಿಗೆ ಸಂಗೀತ ಮತ್ತು…

Read More

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಅಹ್ವಾನಿತ ತಂಡಗಳ ಅಂತ‌ರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಭ್ರಾಮರೀ ಯಕ್ಷ ಝೇಂಕಾರ’ವನ್ನು ದಿನಾಂಕ 30-05-2023 ರಂದು ಮುಂಬೈ ಉದ್ಯಮಿ ಶಶಿಧರ್ ಶೆಟ್ಟಿ ಇನ್ನಂಜೆ ಉದ್ಘಾಟಿಸಿದರು. ದೇಗುಲದ ವಿಶೇಷಾಧಿಕಾರಿ ಮೋಹನ್ ರಾವ್, ಹಳೆ ವಿದ್ಯಾರ್ಥಿ ಸಂಘದ ಕಿರಣ್ ಪಕ್ಕಳ, ಕಿರಣ್ ಶೆಟ್ಟಿ,ಕಾಲೇಜಿನ ಪ್ರಾಚಾರ್ಯ ಡಾ. ಕೃಷ್ಣ, ಸ್ಪರ್ಧೆಯ ಸಂಘಟಕ ಡಾ.ವಿಜಯ್‌ ವಿ ಉಪಸ್ಥಿತರಿದ್ದರು ಆಶಾಕೀರ್ತಿ ಸ್ವಾಗತಿಸಿದರು. ಚೊಂದಮ್ಮ ಎಂ. ಎಂ ನಿರೂಪಿಸಿ, ಪೂಜಾ ಯು.ಕಾಂಚನ್ ವಂದಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಐಕಳ ಪಾಂಪೈ ಕಾಲೇಜು ಏಕಾದಶಿ ಮಹಾತ್ಮೆ, ಉರ್ವಸ್ಟೋರ್‌ನ ಸ್ವಸ್ತಿಕ್ ನ್ಯಾಶನಲ್ ಸ್ಕೂಲ್‌ ನಿಂದ ದಕ್ಷಯಜ್ಞ, ಮಂಗಳೂರು ವಿವಿ ಕಾಲೇಜು ತಂಡದ ದಕ್ಷಯಜ್ಞ ಸಂತ ಅಲೋಶಿಯಸ್ ಕಾಲೇಜು ತಂಡದಿಂದ ನರಕ ಹರಣ, ನಿಟ್ಟೆ ಡಾ. ಎನ್‌ ಎಸ್ ಎ.ಎಂ ಪ್ರಥಮ ದರ್ಜೆ ಕಾಲೇಜಿನ ತರಣಿಸೇನ,ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡದಿಂದ ದಕ್ಷಯಜ್ಞ ಪ್ರದರ್ಶನಗೊಂಡಿತು. ದಿನಾಂಕ…

Read More

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ  (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಮುಂಬೈಯ ಕನ್ನಡ ರಂಗಭೂಮಿಯ ಕಲಾವಿದ ಮೋಹನ್ ಮಾರ್ನಾಡ್ ಇವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರವನ್ನು ದಿನಾಂಕ 30-05-2023 ರಂದು  ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದೆ. ಮುಂಬೈಯ ಶಂಕ್ ಸ್ಟುಡಿಯೋದ ಮುಖ್ಯಸ್ಥರಾದ ಮನೋಹರ್ ನಾಯಕ್ ಅವರು ಸನ್ಮಾನಿಸಿ ಮೋಹನ್ ಮಾರ್ನಾಡ್   ಒಬ್ಬ ಒಳ್ಳೆಯ ರಂಗ ಕಲಾವಿದರಾಗಿದ್ದು, ಮುಂಬೈಯ ಶ್ರೇಷ್ಠ ಕಂಠದಾನ ಕಲಾವಿದರಾಗಿರುತ್ತಾರೆ. ಇವರು ಮುಂಬೈ ಕನ್ನಡ ರಂಗಭೂಮಿಗೆ ಬಹುದೊಡ್ಡ ಆಸ್ತಿ ಎಂದರು . ಸಮಾರಂಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣಿೈ , ಅಧ್ಯಕ್ಷರಾದ ಪ್ರೊ. ಶಂಕರ್, ಸಿ.ಎಸ್ ರಾವ್, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ವ್ಯವಸ್ಥಾಪಕ ಹಫೀಸ್ ರೆಹಮಾನ್ , ಮನೋಹರ್ ತಿಂಗಳಾಯ, ರಾಘವೇಂದ್ರ ನಾಯಕ್, ನಾರಾಯಣ ಮಡಿ , ದಿನೇಶ್ ಉಪ್ಪೂರ್, ಸೀಮಾ ಮಾರ್ನಾಡ್, ನರಸಿಂಹಮೂರ್ತಿ ,ಗಣೇಶ್ ಬ್ರಹ್ಮಾವರ,…

Read More

ಸಾರಡ್ಕ : ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಹಾಗೂ ಆರಾಧನಾ ಸಂಗೀತ ಶಾಲೆ ಸಾರಡ್ಕ ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 04-06-2023, ಭಾನುವಾರ ಸಂಜೆ ಸಾರಡ್ಕದ ಆರಾಧನಾ ಸಂಗೀತ ಶಾಲೆ ಇಲ್ಲಿ ನಡೆಯಲಿದೆ. ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್‌ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 12 ಕಚೇರಿಗಳು ನಡೆದಿದ್ದು, ಇದು 13ನೆಯ ಸಂಗೀತ ಕಚೇರಿಯಾಗಿರುತ್ತದೆ. ಈ ಕಾರ್ಯಕ್ರಮವನ್ನು ಸಾರಡ್ಕದ ಆರಾಧನಾ ಸಂಗೀತ ಶಾಲೆಯ ನಿರ್ದೇಶಕರಾದ ಸಂಗೀತ ವಿದುಷಿ ಶ್ರೀಮತಿ ಶಕುಂತಲಾ ಕೃಷ್ಣ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ…

Read More