Author: roovari

ಮುಂಬಯಿ : ಮುಂಬಯಿ ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ಮಂದಿರದಲ್ಲಿ ದಿನಾಂಕ 09 ಆಗಸ್ಟ್ 2025ರಂದು ಅಜೆಕಾರು ಕಲಾಭಿಮಾನಿ ಬಳಗದ 24ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸರಣಿಯ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಯಕ್ಷಗಾನ ಅರ್ಥಧಾರಿ, ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಇವರು ಮಾತನಾಡಿ “ಯಕ್ಷಗಾನವಿಂದು ಕೇವಲ ಕರಾವಳಿಯ ಕಲೆಯಾಗಿ ಉಳಿದಿಲ್ಲ. ತನ್ನ ವಿಶಿಷ್ಟವಾದ ಪ್ರಭಾವ ಮತ್ತು ಪ್ರಯೋಗಶೀಲತೆಯಿಂದ ನಾಡು – ಹೊರನಾಡುಗಳಲ್ಲಿ ಮೆರೆದು ಸೀಮೋಲ್ಲಂಘನೆ ಮಾಡಿರುವ ಯಕ್ಷಗಾನ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಪರಿಪೂರ್ಣ ರಂಗಕಲೆಯಾಗಿ ಗಮನ ಸೆಳೆದಿದೆ. ಅದು ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು. ಅದರ ಮೌಖಿಕ ವಿಭಾಗವಾದ ತಾಳಮದ್ದಳೆಯನ್ನು ಮುಂಬಯಿಯಲ್ಲಿ ಜನಪ್ರಿಯಗೊಳಿಸಿರುವ ಅಜೆಕಾರು ಬಾಲಕೃಷ್ಣ ಶೆಟ್ಟರ ಕಾರ್ಯ ಶ್ಲಾಘನೀಯ” ಎಂದು ಹೇಳಿದರು. ಮುಂಬಯಿಯ ಹಿರಿಯ ಅರ್ಥಧಾರಿ ಕೆ.ಕೆ. ಶೆಟ್ಟಿಯವರು ಶ್ರೀದೇವಿ ಸನ್ನಿಧಿಯಲ್ಲಿ ದೀಪ ಬೆಳಗಿ 2024-25ನೇ ಸಾಲಿನ ಸರಣಿ ತಾಳಮದ್ದಳೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ “ಮುಂಬಯಿಯಲ್ಲಿ ಯಕ್ಷಗಾನಕ್ಕೆ ದೀರ್ಘ ಪರಂಪರೆಯಿದೆ.…

Read More

ಮಂಗಳೂರು : ಸುರತ್ಕಲ್ ರೋಟರಿ ಕ್ಲಬ್ ದಿನಾಂಕ 10 ಆಗಸ್ಟ್ 2025ರಂದು ಆಯೋಜಿದ್ದ ಆಟಿಯ ಹುಣ್ಣಿಮೆ.. ಆಟಿದ ಕೂಟದಲ್ಲಿ ಜಾನ್ ಎಫ್. ಕೆನಡಿ ಇವರನ್ನು ಸನ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಜಾನ್ ಎಫ್. ಕೆನಡಿ “ನಮ್ಮ ಹಿರಿಯರಿಂದ ಬಂದಿರುವ ಪಾರಂಪರಿಕ ಜ್ಞಾನ ವಿಚಾರಗಳನ್ನು ಯುವ ಸಮುದಾಯಕ್ಕೆ ತಲುಪಿಸಲು ಜ್ಞಾನದ ಮನೆ ತುಳುನಾಡ ವಸ್ತು ವಿಚಾರಗಳ ಸಂಗ್ರಹಾಲಯ ಸ್ಥಾಪನೆ ಮಾಡಲಾಯಿತು. ತುಳುನಾಡಿನ ಸಂಸ್ಕೃತಿಯ ಕುರಿತು ಹೆಚ್ಚಿನ ಆಸಕ್ತಿ ಮೂಡುತ್ತಿದ್ದು, ಇಲ್ಲಿರುವ ಒಂದೊಂದು ವಸ್ತುವು ಇತಿಹಾಸದ ವಿಚಾರಗಳನ್ನು ಹೇಳುತ್ತಿವೆ. ಅದನ್ನು ವೀಕ್ಷಿಸಿ ಅರ್ಥ ಮಾಡಿಕೊಳ್ಳುವ ತಾಳ್ಮೆ ನಮ್ಮಲ್ಲಿರಬೇಕು. ವಿದ್ಯಾರ್ಥಿಗಳಿಗೆ ಪೂರಕವಾಗಿರುವ ಇಲ್ಲಿನ ಸಂಗ್ರಹಣೆಯನ್ನು ವೀಕ್ಷಿಸಲು ಮುಕ್ತ ಅವಕಾಶ ಇದೆ” ಎಂದು ನುಡಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಪ್ರೊ. ಕೃಷ್ಣ ಮೂರ್ತಿ ಇವರು ಅಭಿನಂದನಾ ಮಾತುಗಳಲ್ಲಿ “ಪಾರಂಪರಿಕ ವಸ್ತುಗಳ ಮೂಲಕ ನಮ್ಮ ನಾಡಿನ ಇತಿಹಾಸವನ್ನು ಪುನರ್ ರಚಿಸಲು ಸಾಧ್ಯವಿದೆ. ಜಾನ್ ಎಫ್. ಕೆನಡಿಯವರ ಕಾರ್ಯಗಳಿಗೆ ಸೇವಾ ಹಾಗೂ ಕೈಗಾರಿಕಾ ಸಂಸ್ಥೆಗಳ ಬೆಂಬಲ ಅಗತ್ಯ” ಎಂದರು. ರೋಟರಿ…

Read More

ಬೆಳಗಾವಿ : ಶ್ರೀ ಲಾಲಸಾಬ ಎಚ್. ಪೆಂಡಾರಿ ಸಾರಥ್ಯದ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ.) ನಾಗರಮುನ್ನೋಳಿ ಇದರ ವತಿಯಿಂದ ದಿನಾಂಕ 27 ಜುಲೈ 2025ರಂದು ಮಂಗಳೂರಿನ‌ ಕಣಚೂರು ಆಸ್ಪತ್ರೆ ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಮೂಲವ್ಯಾಧಿ ಚರ್ಮರೋಗಗಳ ವಿಶೇಷ ಚಿಕಿತ್ಸಕ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಇವರಿಗೆ ಅಂತಾರಾಷ್ಟ್ರೀಯ ಮಟ್ಟದ ‘ಕವಿ‌ ಕುಲಪತಿ ಪ್ರಶಸ್ತಿ’ಯನ್ನು ನೀಡಿ ಸನ್ಮಾನ ಮಾಡಲಾಯಿತು. ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಈ ಮೊದಲಾದ ಕ್ಷೇತ್ರಗಳಲ್ಲಿ ಅನವರತವಾಗಿ ಶ್ರಮಿಸುತ್ತಿರುವ ತಮ್ಮ ಸೇವೆ ಗಣನೀಯ ಸೇವೆ ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ ಈ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡುವುದಾಗಿ ಸಂಘಟಕರು ತಿಳಿಸಿರುತ್ತಾರೆ. ಜಿಲ್ಲಾಧ್ಯಕ್ಷ ಶ್ರೀ ಮಂಜುನಾಥ ಗಣಪತಿ‌ ಹೆಗಡೆ, ಸರ್ವಾಧ್ಯಕ್ಷ ಡಾ ಗೋವಿಂದರಾಯ ಎಂ. ಮತ್ತು ಶ್ರೀಮತಿ ರೂಪ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

Read More

ಹೈದರಾಬಾದ್ : ‘ಪಯಣ’ ಪ್ರಸ್ತುತ ಪಡಿಸುವ ಶ್ರೀಜಿತ್ ಸುಂದರಂ ನಿರ್ದೇಶನದ ‘ತಲ್ಕಿ’ ನಾಟಕದ ಪ್ರದರ್ಶನವನ್ನು ಅಭಿನಯ ನ್ಯಾಷನಲ್ ಥಿಯೇಟರ್ ಫೆಸ್ಟಿವಲ್ -2025 ಕಾರ್ಯಕ್ರಮದಲ್ಲಿ ದಿನಾಂಕ 13 ಆಗಸ್ಟ್ 2025ರಂದು ಸಂಜೆ ಗಂಟೆ 8-00ಕ್ಕೆ ಹೈದರಾಬಾದಿನ ರವೀಂದ್ರ ಭಾರತಿಯಲ್ಲಿ ಆಯೋಜಿಸಲಾಗಿದೆ. ನಾಟಕದ ಕುರಿತು : ‘ತಲ್ಕಿ’ ನಾಟಕವು ಸಮುದಾಯದವರ ಜೀವನ ಕಥೆಗಳ ಆಧಾರದ ಸತ್ಯ ಕಥೆಗಳು. ಬರವಣಿಗೆ, ಸಮಾಜಸೇವೆ, ಸಮುದಾಯ ಮುಖ್ಯಸ್ಥರು, ಅಮ್ಮಂದಿರು, ಹೀಗೆ ಸಮಾಜದ ಬೇರೆ ಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿರುವ, ಐವತ್ತು ವರ್ಷ ದಾಟಿರುವ ಮಂಗಳಮುಖಿಯರು ತಮ್ಮ ಈಡೇರದ ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ನಟನೆ ಹಾಗೂ ರಂಗ ಪ್ರಕ್ರಿಯೆಗಳ ನೆರವಿನಿಂದ ಹೋರಾಡಲು ಅವಕಾಶ ಕಲ್ಪಿಸಿಕೊಡುವ ವಿಶಿಷ್ಟ ಯತ್ನ ಈ ನಾಟಕ. ಇವರೆಲ್ಲರಿಗೂ ಇರುವ ಒಂದು ಸಾಮ್ಯತೆ ಎಂದರೆ ಸಮಯ ಹಾಗೂ ಸಮಾಜ ನೀಡಿರುವ ಗಾಯದ ಗುರುತುಗಳು. ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳ ಜೊತೆ ಅವಿನಾಭಾವ ಸಂಬಂಧವಿರುವ ಅವರ ದೇಹದ ಮೇಲಿನ ಗುರುತುಗಳು, ಆ ಪ್ರದೇಶಗಳ ಗುರುತುಗಳಾಗಿ ಮಾರ್ಪಟ್ಟಿವೆ ಎನ್ನಬಹುದು. ಇಂತಹ…

Read More

ಕಾರ್ಕಳ : ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನ ಇದರ ವತಿಯಿಂದ ‘ಕ್ರಿಯೇಟಿವ್ ಪುಸ್ತಕ ಧಾರೆ 2025’ ಸಮಾರಂಭವನ್ನು ದಿನಾಂಕ 13 ಆಗಸ್ಟ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮತ್ತು ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರುಗಳು ಭಾಗವಹಿಸಲಿದ್ದು, ಅಪರಾಹ್ನ 2-00 ಗಂಟೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಖ್ಯಾತ ನಿರೂಪಕರಾದ ಅವಿನಾಶ್ ಕಾಮತ್ ಇವರು ಸಂವಾದಕರಾಗಿ ಮತ್ತು ಜೀ ಸರಿಗಮಪ ಖ್ಯಾತಿಯ ಯಶವಂತ್ ಎಂ.ಜಿ. ಇವರಿಂದ ಗಾಯನ ಪ್ರಸ್ತುತಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದಿಂದ 22 ಕೃತಿಗಳು ಅನಾವರಣಗೊಳ್ಳಲಿವೆ. ಹೆಚ್ಚಿನ ಮಾಹಿತಿಗಳ 96064 74296 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಮಹರ್ಷಿ ವಾಲ್ಮೀಕಿ ವಸತಿ ಶಾಲೆ ಕದ್ರಿ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ 112ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮವು ದಿನಾಂಕ 09 ಆಗಸ್ಟ್ 2025 ಶನಿವಾರ ಮಹರ್ಷಿ ವಾಲ್ಮೀಕಿ ಸಭಾಂಗಣದಲ್ಲಿ ನಡೆಯಿತು. ಸಾಹಿತ್ಯ ಅಭಿರುಚಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹರ್ಷಿ ವಾಲ್ಮೀಕಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನೀತಾರವರು ವಹಿಸಿದ್ದರು. ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಕರಾವಳಿ ಡೈಲಿ ನ್ಯೂಸ್ ಚೀಪ್ ಎಡಿಟರ್ ಮಹೇಶ್ ಕನ್ನೇಶ್ವರ, ಹಿರಿಯ ಬರಹಗಾರರಾದ ಸುಬ್ರಾಯ ಭಟ್, ದೂರದರ್ಶನ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರರಾದ ರಾಜೇಶ್ ದಡ್ಡಂಗಡಿ ಇವರುಗಳು ಭಾಗವಹಿಸಿದ್ದರು. ಶಾಲೆಯ ಮೇಲ್ವಿಚಾರಕಿ ಸರಸ್ವತಿ ಉಪಸ್ಥಿತರಿದ್ದರು. ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿ, ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ಲೇಖಕಿ ಶಿಕ್ಷಕಿ ನಿರ್ಮಲ ಉದಯಕುಮಾರ್ ವಂದಿಸಿದರು.

Read More

ಭಾವದಲೆಯಲ್ಲಿ ಭರತನಾಟ್ಯದ ಸೊಬಗು ! ಬೆಂಗಳೂರಿನ ಭಾರತೀಯ ವಿದ್ಯಾ ಭವನ್ ನಲ್ಲಿ ಒಂದು ರಂಗ ಪ್ರವೇಶದ ಕಾರ್ಯಕ್ರಮದ ನಿರೂಪಣೆಗೆ ಹೋಗಿದ್ದೆ. ಬೆಳ್ತಂಗಡಿ ಮೂಲದ ಪ್ರಸ್ತುತ ಕುವೈಟ್ ದೇಶದಲ್ಲಿ ನೆಲೆಸಿರುವ ವಿದುಷಿ ಶಾಂತಲಾ ಸತೀಶ್ ಅವರ ಪುಷ್ಕರ ನೃತ್ಯ ನಿಕೇತನದ ವಿದ್ಯಾರ್ಥಿನಿ ಸಾನ್ವಿ ನವೀನ್ ಇವರ ಭರತನಾಟ್ಯ ರಂಗಪ್ರವೇಶದ ಕಾರ್ಯಕ್ರಮ. ಸಾಮಾನ್ಯವಾಗಿ ರಂಗ ಪ್ರವೇಶದ ಕಾರ್ಯಕ್ರಮ ನಡೀತಾನೇ ಇರುತ್ತೆ, ಆದ್ರೆ ಇದು ನನಗೆ ಬಹಳ ವಿಶೇಷ ಅನ್ನಿಸಿದ್ದಕ್ಕಾಗಿ ಈ ಲೇಖನವನ್ನ ಬರೀತಾ ಇದೀನಿ. ಭಾವ, ರಾಗ, ತಾಳ, ರಸ ಕಾವ್ಯದ ಸುಂದರ ದೃಶ್ಯ ವೈಭವ ಅದು ಭರತನಾಟ್ಯ! ಭರತ ಮುನಿಯ ಮೂಲಕ ರಚಿತವಾದ ಭರತನಾಟ್ಯ ಸಹಸ್ರಾರು ವರ್ಷಗಳ ಭವ್ಯವಾದ, ದಿವ್ಯವಾದ ಇತಿಹಾಸವನ್ನ ಹೊಂದಿದೆ. ಇದು ಕೇವಲ ನೃತ್ಯವಲ್ಲ ಭಾರತದ ಸನಾತನ ಶಾಸ್ತ್ರೀಯ ಪರಂಪರೆಯ ಪ್ರತಿಬಿಂಬ. ಒಂದೋ ಎರಡೋ ತಿಂಗಳು ಡಾನ್ಸ್ ಕ್ಲಾಸ್ ಗೆ ಹೋಗಿ ಭರತನಾಟ್ಯ ಕಲಿಯೋದಿಕ್ಕಾಗಲ್ಲ, ಹಲವಾರು ವರ್ಷಗಳ ಕಾಲದ ಶ್ರದ್ದಾ ಭಕ್ತಿಯ ಕಲಿಕೆ, ಗುರುವಿನ ಮಾರ್ಗದರ್ಶನದಿಂದ ಮಾತ್ರ ಭರತನಾಟ್ಯ ಒಬ್ಬ…

Read More

ಮಡಿಲಲ್ಲಿ ಮುಖ ಹುದುಗಿಸಿ ಕಂಬನಿಯಲಿ ಒಡಲ ತೋಯಿಸುವ ಅಂತರಾಳದ ಹಂಬಲಕೆ ಓಗೊಡಲು ಯಾರಿಹರಿಲ್ಲಿ ? ತಾಯ್ಮಮತೆಯ ನೆನಪಾದಾಗಲೆಲ್ಲಾ ಮೂಡುವುದೊಂದೇ ಜಿಜ್ಞಾಸೆ ಅಮ್ಮಾ ನೀನೇಕೆ ದೂರಾದೆ ? ಸಂಬಂಧ ಎಂದರೇನಮ್ಮಾ ಲೌಕಿಕ ಸುಖದ ಹಾದಿ ಪಯಣವೇ ? ಭೌತಿಕ ಸ್ಪರ್ಶದಲಿ ಹಿತಕಾಣುವ ತನುಮನ ಭಾವನೆಗಳ ಮಿಳಿತವೇ ? ಅಥವಾ ಮಿಲನ ಸುಖದಲಿ ಮಿಂದು ಸಾಂಗತ್ಯದಲ್ಲೇ ಸಾರ್ಥಕ್ಯ ಕಾಣುವುದೇ ? ನೋವಿಗೆ ಸ್ಪಂದಿಸದ ಭಾವ ಮರಳುಗಾಡಿನ ಹಸಿರು ದಿಬ್ಬದಂತಲ್ಲವೇ ? ಮಾಸದ ಗಾಯಗಳು ಮಾಗಿದ ಅಂತರಂಗದ ಯಾತನೆಗಳು ಮತ್ತೆಮತ್ತೆ ಇರಿದು ಚಿಮ್ಮುತ್ತಿರುವಾಗ ಎದೆಯಾಗ್ನಿಯ ಕುಲುಮೆಗೆ ತಂಪೆರೆಯುವ ಒಂದೆರಡು ಸವಿಮಾತು ಬೇಕಲ್ಲವೇನಮ್ಮಾ ,,,,,? ಬಂಧನದ ಸಂಕೋಲೆಗಳಲಿ ಎದೆಯ ಸದ್ದಿಗೆ ನಾಡಿ ಕಿವುಡಾದರೆ ಬೆಸುಗೆಯ ಸಾರ್ಥಕ್ಯವ ಕಾಣುವುದೆಲ್ಲಿ ? ಈ ಆಂತರ್ಯದ ಕೂಗು ನಿನಗೆ ಕೇಳಿಸದು ಮರ್ತ್ಯ ಲೋಕದ ಹೊಸ್ತಿಲಿಗೆ ಕಟ್ಟಿರುವ ತೋರಣವ ಛೇದಿಸಿ ನೋಡು ನಿನ್ನ ಕಂದನ ನೋವಾದರೂ ಕಂಡೀತು ! – ನಾ ದಿವಾಕರ

Read More

ಧಾರವಾಡ : ಬೆಳಗಾವಿಯ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ.) ಕರ್ನಾಟಕ ಇದರ ವತಿಯಿಂದ ‘ರಾಷ್ಟ್ರೀಯ ಜಾನಪದ ಲೋಕೋತ್ಸವ’ ಹಾಗೂ ‘ನ್ಯಾಶನಲ್ ಅಚಿವ್ಮೆಂಟ್ ಗ್ಲೋಬಲ್ ಅವಾರ್ಡ್’ ಪ್ರದಾನ ಸಮಾರಂಭವು ದಿನಾಂಕ 10 ಆಗಸ್ಟ್ 2025ರಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಳೆದ ಎಂಟು ವರ್ಷಗಳಿಂದ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಚಾಪು ಮೂಡಿಸಿ ಜನಮನ ಗಳಿಸಿದೆ. ಆದ್ದರಿಂದ ಇದೀಗ ಧಾರವಾಡದಲ್ಲಿ ಜರಗುವ ರಾಷ್ಟ್ರೀಯ ಜಾನಪದ ಲೋಕೋತ್ಸವ ಕಾರ್ಯಕ್ರಮಕ್ಕೆ ಸಾಧಕರಿಗೆ ಕರೆ ನೀಡಿ ಕಲೆ, ಸಾಹಿತ್ಯ, ಸಂಗೀತ, ಸಾಮಾಜಿಕ, ವೈದ್ಯಕೀಯ, ಕ್ರೀಡೆ, ಪತ್ರಿಕೋದ್ಯಮ, ಧಾರ್ಮಿಕ, ವೈಜ್ಞಾನಿಕ, ರಂಗಭೂಮಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಸಾಧಕ ಪ್ರತಿಭೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಸಿದ್ರಾಮ ಮಾ. ನಿಲಜಗಿ 9611694804 ಇವರನ್ನು ಸಂಪರ್ಕಿಸಿರಿ.

Read More

ಬಹುತೇಕ ಕಲೆಗಳಿಗೆ ತನ್ನದೇ ರೂಢಿಗತ ಮಾದರಿಗಳಿದ್ದ ಹಾಗೆ ಬರವಣಿಗೆಗೆ ಯಾವುದೇ ನಿರ್ದಿಷ್ಟ ಮಾದರಿಗಳು ಅಂದರೆ ಕಲಿಕಾ ಮಾದರಿಗಳು ಇರಲಾರವು, ಬರವಣಿಗೆಗೆ ಬೇಕಾಗಿರುವ ಬಹುದೊಡ್ಡ ಪೂರ್ವ ತಾಲೀಮು ‘ಅನುಭವ’ದ ಮಾಗುವಿಕೆ ; ಧ್ಯಾನಸ್ಥ ಸ್ಥಿತಿ. ಜೀವನಕ್ರಮದಲ್ಲಿ ಇವೆರಡೂ ಪ್ರಧಾನ ಸಂಕರಗಳೂ ಹೌದು. ಒಬ್ಬ ಬರಹಗಾರ ಈ ಎರಡನ್ನೂ ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ಬೇರೆ ಬರಹಗಾರರಿಗಿಂತ ಭಿನ್ನವಾಗಬಲ್ಲ. ಯಾವುದೇ ಲೇಖಕನಿಗೆ ಪೂರ್ವ ತಾಲೀಮು ಕೇವಲ ಬದುಕಿನ ಅನುಭವಗಳಿಂದ ಲಭ್ಯವಾದರೆ ಸಾಲದು. ಬರಹಕ್ಕೆ ಚಾಲಕಶಕ್ತಿ, ಅಭಿವ್ಯಕ್ತಿಯ ಸೇತುವೆಯಾದ ‘ಭಾಷಿಕ ವಿನ್ಯಾಸ’ಗಳೂ ಕೈ ಹಿಡಿಯಬೇಕು. ಈ ನೆಲೆಯಲ್ಲಿ ಪ್ರತಿ ಬರಹಗಾರನೂ ತಾಲೀಮು ನಡೆಸಿರುತ್ತಾನೆ. ಕನ್ನಡದ ಸಂವೇದನಾಶೀಲ ಬರಹಗಾರರು ತಮ್ಮ ಬರವಣಿಗೆಯ ತಾಲೀಮಿನ ಕುರಿತು ಇಲ್ಲಿ ಬರೆದಿದ್ದಾರೆ. ಈ ‘ಬರವಣಿಗೆಯ ತಾಲೀಮು’ ಸ್ವಾರಸ್ಯಕರವಾಗಿದೆ. ನೀವು ಹೇಗೆ ಬರೆಯುತ್ತೀರಿ? ಹೇಗೆ ಬರವಣಿಗೆಯ ತಾಲೀಮು ನಡೆಸುತ್ತೀರಿ? ಎಂದು ಕೇಳಿದರೆ ಹೇಳುವುದು ಕಷ್ಟ. ಅದು ಗೊತ್ತಿದ್ದೂ ಲೇಖಕರ ಜೊತೆ ಸೃಜನಶೀಲ ‘ಆಟ’ವಾಡಿ ಮೋಜು ನೋಡಬೇಕೆನಿಸಿತು. ‘ಆಟ’ ಸಾರ್ಥಕಗೊಳ್ಳುವಂತೆ ಎಲ್ಲ ಬರಹಗಾರರು ಭಿನ್ನವಾಗಿ ಬರೆದುಕೊಟ್ಟಿದ್ದಾರೆ. -ಟಿ.ಎಸ್.…

Read More