Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ವಿದ್ಯಾ ಪ್ರಕಾಶನ ಮಂಗಳೂರು ಹಾಗೂ ‘ಥಂಡರ್ ಕಿಡ್ಸ್’ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ‘ಗುಬ್ಬಿದ ಗೂಡು’ ಎಂಬ ಹೆಸರಿನ ಪುಟಾಣಿ ಮಕ್ಕಳ ವಾದ್ಯ ಗೋಷ್ಠಿ ಹಾಗೂ ಗಾಯನ ತಂಡದ ಉದ್ಘಾಟನೆಯು ತಾ.01-05-2023ರಂದು ಮಂಗಳೂರು ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ನೆರವೇರಿತು. ಮಂಗಳೂರಿನ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಶ್ರೀ ಎಂ. ರಂಗನಾಥ ಭಟ್ ಇವರು ‘ಗುಬ್ಬಿದ ಗೂಡು’ ಮತ್ತು ಶ್ರೀ ರಘು ಇಡ್ಕಿದು ಇವರ ಕನ್ನಡ-ತುಳು ಭಾವಗೀತೆಗಳನ್ನು ಬಿಡುಗಡೆ ಮಾಡಿದರು. ಈ ಭಾವಗೀತೆಗಳನ್ನು ಶ್ರೀಮತಿ ಮಾಲಿನಿ ಕೇಶವ ಪ್ರಸಾದ್ ಇವರು ಮಧುರವಾಗಿ ಹಾಡಿದರು. ವಿನಮ್ರ ಇಡ್ಕಿದು ಹಾಡಿರುವ ಭಾವಗೀತೆಗಳ ಬಿಡುಗಡೆಯನ್ನು ಮಂಗಳೂರಿನ ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ. ಯ ಪ್ರಾಂಶುಪಾಲರಾದ ಶ್ರೀಮತಿ ಸುರೇಖಾ ಆರ್ ಭಟ್ ನೆರವೇರಿಸಿದರು. ‘ಗುಬ್ಬಿದ ಗೂಡು’ ಮತ್ತು ಭಾವಗೀತೆಗಳ ಬಿಡುಗಡೆ ಮಾಡಿದ ಶ್ರೀ ರಂಗನಾಥ್ ಭಟ್ ಮಾತನಾಡುತ್ತಾ “ಸಂಗೀತ ಸಂಯೋಜನೆ ಮಾಡಿ ಮಕ್ಕಳಿಗೆ ಪ್ರಾಸ ಪದ್ಯಗಳು ಹೊಸ ರೀತಿಯಲ್ಲಿ ಮನಮುಟ್ಟುವಂತೆ ಮಾಡುವ ‘ಗುಬ್ಬಿದ ಗೂಡು’…
ನಮ್ಮ ಹೆಮ್ಮೆಯ ಕರ್ನಾಟಕದ ಜನಪದ ಸಂಸ್ಕೃತಿಗಳಾದ ಕಲೆ, ಸಾಹಿತ್ಯ, ನೃತ್ಯ, ನಾಟಕ ಮುಂತಾದವುಗಳು ಮಾನವನಷ್ಟೇ ಪ್ರಾಚೀನ ಮತ್ತು ಅತ್ಯಂತ ಶ್ರೀಮಂತ. ಮೇಲಾಗಿ ನಮ್ಮ ರಾಷ್ಟ್ರದ ಜೀವಾಳ. ಅದರಲ್ಲಿಯೂ ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳು. ಕರ್ನಾಟಕದ ಧಾರ್ಮಿಕ ನೃತ್ಯಗಳನ್ನು ‘ಕುಣಿತ’ ಎನ್ನಲಾಗುತ್ತದೆ. ಅವುಗಳೇ ಡೊಳ್ಳು ಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ಕಂಗೀಲು, ಕರಡಿ ಮಜಲು, ಕಂಸಾಳೆ, ಜಡೆ ಕೋಲಾಟ, ಗೊರವ ನೃತ್ಯ, ನಂದಿ ಧ್ವಜ ಮುಂತಾದವುಗಳು. ಇವುಗಳಲ್ಲಿ ಗೊರವ ಕುಣಿತ ಒಂದು ವಿಶೇಷ ಪ್ರಕಾರ. ಕರ್ನಾಟಕದ ವಿಶಿಷ್ಟ ಜನಪದ ಕಲೆಗಳಲ್ಲಿ ಒಂದು. ಗೊರವರ ಕುಣಿತವು ಮೈಲಾರ ಲಿಂಗನ ಪ್ರಾತಿನಿಧಿಕ ರೂಪವಾಗಿದ್ದು, ಪ್ರದರ್ಶನ ಕಲೆಗೆ ಪ್ರಸಿದ್ಧವಾದುದು. ಇವರು ಮೈಲಾರ ಲಿಂಗನ ಶಿಷ್ಯರೆಂದೂ ಮುಡುಕು ತೊರೆಯ ಮೈಲಾರ ಸ್ವಾಮಿಯ ಒಕ್ಕಲಿಗರೆಂದು ಗುರುತಿಸಿಕೊಂಡವರು. ಇದೊಂದು ಕುರುಬ ಗೌಡ ಸಮುದಾಯದ ಸಾಂಪ್ರದಾಯಿಕ ನೃತ್ಯವೂ ಹೌದು. ಇದರಿಂದಾಗಿ ಇವರನ್ನು ಮೈಲಾರ ಲಿಂಗ ಕಥಾ ಪರಂಪರೆಯ ಹಾಡುಗಾರಿಕಾ ವೃತ್ತಿ ಗಾಯಕರು ಎನ್ನಲಾಗಿದೆ. ಕಥೆ ಹೇಳುವ…
ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ‘ಸಂಕಲ್ಪ ಕನ್ನಡ ಸಂಘ’ ಕನ್ನಡ ವಿಭಾಗ ಇದರ ಆಶ್ರಯದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಹಾಗೂ ಕೃತಿ ಬಿಡುಗಡೆ’ ಕಾರ್ಯಕ್ರಮವು ದಿನಾಂಕ 05-05-2023ನೇ ಶುಕ್ರವಾರ ಅಪರಾಹ್ನ ಗಂಟೆ 02:00ಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ವಹಿಸಲಿದ್ದು, ಸ.ಪ್ರ.ದ.ಕಾಲೇಜು ಸುಳ್ಯ ಇದರ ಪ್ರಾಂಶುಪಾಲರಾದ ಶ್ರೀ ಸತೀಶ್ ಕೆ. ಆರ್. ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಸಾಹಿತಿ ಡಾ.ಬಿ. ಪ್ರಭಾಕರ ಶಿಶಿಲ ಇವರು ‘ಕನ್ನಡದ ಅಸ್ಮಿತೆ – ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಅದೇ ದಿನ ಕ.ಸಾ.ಪ. ಜಿಲ್ಲಾ ಪ್ರತಿನಿಧಿಯಾದ ಶ್ರೀ ರಾಮಚಂದ್ರ ಪಲ್ಲತಡ್ಕರವರ ಉಪಸ್ಥಿತಿಯಲ್ಲಿ ಡಾ.ಬಿ. ಪ್ರಭಾಕರ ಶಿಶಿಲರ ನಾಟಕ ಕೃತಿ…
ವಸ್ತ್ರವಿನ್ಯಾಸದ ಮೆರುಗು, ಕುಣಿತದ ಶ್ರೀಮಂತಿಕೆ, ಮಾತುಗಾರಿಕೆಯ ಅಬ್ಬರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಕಲೆಯ ಮತ್ತೊಂದು ಹೆಸರೇ ಯಕ್ಷಗಾನ. ಬಡಗುತಿಟ್ಟು ಯಕ್ಷಗಾನ ರಂಗದ ಅನುಭವೀ ವೇಷಧಾರಿ ಶ್ರೀ ದಿನಕರ್ ಕುಂದರ್ ನಡೂರು ಅವರು ತಿರುಗಾಟದ ರಜತ ಸಂಭ್ರಮದಲ್ಲಿದ್ದಾರೆ. ವೃತ್ತಿ ಕಲಾವಿದನಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಯಕ್ಷಗಾನ ಕಲಾ ವ್ಯವಸಾಯವನ್ನು ಮಾಡುತ್ತಿದ್ದಾರೆ. 2022-23ನೇ ಸಾಲು ಇವರ ಇಪ್ಪತ್ತೈದನೇ ವರ್ಷದ ತಿರುಗಾಟ. ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡು ತಮ್ಮದೇ ವಿಶೇಷ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿದ ಕಲಾವಿದ ದಿನಕರ್ ಕುಂದರ್ ನಡೂರು ರಂಗದಲ್ಲಿ ಸದಾ ಹೊಸತನ್ನು ನೀಡುವ ಅವರ ಅರ್ಥಗಾರಿಕೆ, ಕುಣಿತ ನೋಡಲು ಬಹಳ ಸುಂದರ. ೨೮.೦೪.೧೯೮೦ ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ನಡೂರು, ಅಜ್ಜಿಮನೆಯ ಮಾಧವ ರಾವ್ (ದಿ.ಶಿರಿಯಾರ ಮಂಜು ನಾಯಕರ ತಮ್ಮ) ಹಾಗೂ ತುಂಗ ಮರಕಾಲ್ತಿ ಇವರ ಮಗನಾಗಿ ಜನನ. ೭ ನೇ ತರಗತಿವರೆಗೆ ವಿದ್ಯಾಭ್ಯಾಸ. ಹಿರಿಯಣ್ಣ ಶೆಟ್ಟಿಗಾರ್, ತಂತ್ರಾಡಿ ಇವರು ಯಕ್ಷಗಾನದ ಪ್ರಥಮ ಗುರು. ಯಕ್ಷಗಾನ ಕಲಾಕೇಂದ್ರ ಉಡುಪಿಯಲ್ಲಿ ಒಂದು ವರುಷದ ಅಭ್ಯಾಸ. ನೀಲಾವರ…
ಉಡುಪಿ: ಉಡುಪಿಯಲ್ಲಿ 1965ರಲ್ಲಿ ಹುಟ್ಟಿಕೊಂಡ, ಇಂದು ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಪ್ರಸಿದ್ಧ ನಾಟಕ ಸಂಸ್ಥೆ “ರಂಗಭೂಮಿ”ಯ ಆರಂಭದ ದಿನಗಳಲ್ಲಿ ಬಹು ಹಾಸ್ಯ ಪ್ರಜ್ಞೆಯ, ಆಕರ್ಷಕ ನಗುಮೊಗದ, ಪಾದರಸದಂತೆ ಸದಾ ಚಟುವಟಿಕೆಯ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಹಾಸ್ಯ ಕಲಾವಿದರಾಗಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದವರು ಹೆಸರಾಂತ ಹಿರಿಯ ರಂಗ ಕಲಾವಿದ ಉಡುಪಿ ಮಹಮ್ಮದ್ ಅಸ್ಲಾಂ (ಯು.ಎಂ. ಅಸ್ಲಾಂ) (86)ರವರು ಇಂದು ವಯೋಸಹಜ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ದಿನಾಂಕ 02-05-2023ರಂದು ದೈವಾಧೀನರಾದರು. ಮಡದಿ ಮತ್ತು 4 ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 04-12-1937ರಂದು ಹುಟ್ಟಿದ ಅಸ್ಲಾಂರು, ಶ್ರೀ ಅಬ್ದುಲ್ ಆಲಿ ಸಾಹೇಬ್ ಹಾಗೂ ಹಫೀಝಬಿ ದಂಪತಿಗಳ 13 ಮಕ್ಕಳಲ್ಲಿ ಅಸ್ಲಾಂರು ಹಿರಿಯರು. ಅಸ್ಲಾಂ ಶಾಲಾ ದಿನಗಳಲ್ಲಿಯೇ ನಟನೆಯ ಕಡೆಗೆ ಒಲವನ್ನು ತೋರಿದವರು. ಕಾಲೇಜಿನ ಬಿ.ಎ.- ಎ.ಎಫ್.ಐ.ಐ. ಶಿಕ್ಷಣ ಪೂರೈಸುತ್ತಲೇ ಭಾರತೀಯ ಜೀವ ವಿಮಾ ನಿಗಮದಲ್ಲಿಯೇ 1967ರಲ್ಲಿ ಉದ್ಯೋಗ ದೊರಕಿಸಿಕೊಂಡರು. 20 ವರ್ಷಗಳ ಕಾಲ ಎಲ್.ಐ.ಸಿ.ಯ ವಿವಿಧ ಹುದ್ದೆಗಳಲ್ಲಿ…
ಮಂಗಳೂರು : ಹಿರಿಯ ಯಕ್ಷಗಾನ ಕಲಾವಿದ ಬಿ.ಕೆ.ಚೆನ್ನಪ್ಪ ಗೌಡರ ನಿವಾಸದಲ್ಲಿ ದಿನಾಂಕ 28.04.2023 ರಂದು ಜರಗಿದ ದಿ. ಅಳಿಕೆ ರಾಮಯ್ಯ ರೈ ಸ್ಮೃತಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಅರ್ಥಧಾರಿ, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅವರು ಸಂಸ್ಮರಣಾ ಭಾಷಣ ಮಾಡಿದರು. ‘ಒಂದು ಕಾಲಘಟ್ಟದಲ್ಲಿ ತನ್ನ ನಟನಾ ಕೌಶಲ್ಯ ಮತ್ತು ವಿಶಿಷ್ಟ ಹೆಜ್ಜೆಗಾರಿಕೆಯಿಂದ ತೆಂಕುತಿಟ್ಟು ಯಕ್ಷರಂಗವನ್ನು ಆಳಿದ ಅಳಿಕೆ ರಾಮಯ್ಯ ರೈ ಭವಿಷ್ಯದ ಕಲಾವಿದರಿಗೆ ಮಾದರಿಯಾಗಿದ್ದರು. ಅವರ ಹೆಸರಿನಲ್ಲಿ ಪ್ರತಿ ವರ್ಷ ನಿವೃತ್ತ ಯಕ್ಷಗಾನ ಕಲಾವಿದರ ಮನೆಗೆ ತೆರಳಿ ನೀಡುವ ಸಹಾಯ ನಿಧಿಯು ಒಂದು ಸಾರ್ಥಕ ಸ್ಮೃತಿ ಗೌರವವಾಗಿದೆ’ ಎಂದು ಹೇಳಿದ್ದಾರೆ. ಬೆಂಗಳೂರಿನ ದಿ. ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ನೀಡಲಾಗುವ ರೂ.20,000/- ಯಕ್ಷ ಸಹಾಯ ನಿಧಿಯನ್ನು 2022- 23ನೇ ಸಾಲಿಗೆ ಇರಾ ಗ್ರಾಮದ ಕೆಂಜಿಲ ಪದವಿನಲ್ಲಿರುವ ಬಿ.ಕೆ.ಚೆನ್ನಪ್ಪ ಗೌಡರಿಗೆ ಗೃಹ ಸಂಮಾನದೊಂದಿಗೆ ಸಮರ್ಪಿಸಲಾಯಿತು. ಮುಂಬಯಿ ಉದ್ಯಮಿ, ಲೇಖಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ…
ಪುತ್ತೂರು : ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ “ಸುಧನ್ವ ಮೋಕ್ಷ” ಶ್ರೀ ಆಂಜನೇಯ ಮಂತ್ರಾಲಯದಲ್ಲಿ ದಿನಾಂಕ 29-04-2023ರಂದು ಸಂಜೆ ನಡೆಯಿತು. ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಸುಧನ್ವ (ಭಾಸ್ಕರ್ ಬಾರ್ಯ ಮತ್ತು ಗುಂಡ್ಯಡ್ಕ ಈಶ್ವರ ಭಟ್), ಅರ್ಜುನ (ಗುಡ್ಡಪ್ಪ ಬಲ್ಯ), ಕೃಷ್ಣ (ತಾರಾನಾಥ ಸವಣೂರು), ಹಂಸ ಧ್ವಜ (ಬಡೆಕ್ಕಿಲ ಚಂದ್ರಶೇಖರ ಭಟ್) ಮತ್ತು ಪ್ರಭಾವತಿ (ಕು೦ಬ್ಳೆ ಶ್ರೀಧರ್ ರಾವ್) ಸಹಕರಿಸಿದರು. ಬನ್ನೂರು ರಾಜಗೋಪಾಲ್ ಭಟ್ ಪ್ರಾಯೋಜಿಸಿದ್ದರು. ಟಿ. ರಂಗನಾಥ ರಾವ್ ಸಹಕರಿಸಿದರು.
ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜು, ಗಾಂಧಿನಗರ, ಮಂಗಳೂರು ಇದರ ಸಭಾಂಗಣದಲ್ಲಿ 2023 ಏಪ್ರಿಲ್ 27ರಂದು ‘ಸಾಹಿತ್ಯದಲ್ಲಿ ಹಾಸ್ಯ’ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇದರ ನಿವೃತ್ತ ಹಿರಿಯ ಅಧಿಕಾರಿಯಾದ ಶ್ರೀ ಯು. ರಾಮರಾವ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, “ಜೀವನದಲ್ಲಿ ಹಾಸ್ಯ ಮತ್ತು ಚಪ್ಪಾಳೆ ತಟ್ಟುವುದರಿಂದ ನಮ್ಮ ಆರೋಗ್ಯದ ಸಮಸ್ಯೆ ನಿವಾರಣೆಯಾಗುತ್ತದೆ. ಡಿ.ವಿ.ಜಿ, ದಿನಕರ ದೇಸಾಯಿ ಮುಂತಾದ ಹಾಸ್ಯ ಬರಹಗಾರರ ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳು ಓದಬೇಕು. ನಾವು ಹಾಸ್ಯ ಮಾಡಬೇಕು, ಆದರೆ ಇನ್ನೊಬ್ಬರಿಗೆ ಅಪಹಾಸ್ಯ ಮಾಡಬಾರದು. ಹಾಸ್ಯವಿರುವುದು ಮನಸ್ಸಿನ ಒತ್ತಡ ನಿವಾರಣೆಗಾಗಿ” ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾಲತಾ ಸುವರ್ಣ ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ನಾವಿಂದು ಧಾವಂತದ ಯುಗದಲ್ಲಿ ಬದುಕುತ್ತಿದ್ದೇವೆ. ಹಾಸ್ಯವು ವ್ಯಕ್ತಿಯ ಅನುಭವದಿಂದ ಬರುತ್ತದೆ. ನಮಗೆ ಜ್ಞಾನ ದಾಹ ಇರಬೇಕು. ಪ್ರಸ್ತುತ ನಾವಿರುವ ಸಮಾಜವನ್ನು ಅರ್ಥ ಮಾಡಿಕೊಳ್ಳಬೇಕು” ಎಂದರು. ಕಾಲೇಜಿನ ಡೀನ್ ಡಾ. ಉಮ್ಮಪ್ಪ ಪೂಜಾರಿ…
ಪುತ್ತೂರು : ಪುತ್ತೂರು ಸಮೀಪದ ಮುರದಲ್ಲಿರುವ “ಶ್ರೀ ಮಾ”, ಪ್ರೊ.ವೇದವ್ಯಾಸ ರಾಮಕುಂಜರ ಮನೆಯಲ್ಲಿ ನಡೆದ ಮಧುಸೂದನ ಪೂಜಾ “ಅಕ್ಷಯ ತೃತೀಯ” ಬಾಬ್ತು ಯಕ್ಷಗಾನ ಅರ್ಥದಾರಿ ಮತ್ತು ಸಂಘಟಕ ನೆಲೆಯಲ್ಲಿ ಭಾಸ್ಕರ ಬಾರ್ಯರಿಗೆ ಕೊಡಮಾಡಿದ ‘ಅಕ್ಷಯ ತೃತೀಯ ಗೌರವ ಪ್ರಶಸ್ತಿ’ ದಿನಾಂಕ 22-04-2023ರಂದು ನಡೆಯಿತು. ವೇದಿಕೆಯಲ್ಲಿ ಬಾರ್ಯರ ಪತ್ನಿ ಶ್ರೀಮತಿ ಸ್ವರ್ಣಲತಾ ಭಾಸ್ಕರ್, ಡಾ. ತಾಳಾಜೆ ವಸಂತ ಕುಮಾರ್, ಪ್ರೊ. ವೇದವ್ಯಾಸ ದಂಪತಿಗಳು, ಪುತ್ರಿ ಡಾ.ನಿವೇದಿತಾ ಮತ್ತು ಗಿರಿಧರ ರಾಮಕುಂಜ ದಂಪತಿಗಳು ಉಪಸ್ಥಿತರಿದ್ದರು.
ಪುತ್ತೂರು : ಅಕ್ಷತಾರಾಜ್ ಪೆರ್ಲರವರು ಬರೆದ ‘ಅವಲಕ್ಕಿ ಪವಲಕ್ಕಿ’ ಲೇಖನಗಳ ಸಂಗ್ರಹ ಅತ್ಯದ್ಭುತವಾಗಿ ಮೂಡಿಬಂದಿದೆ. ಇದು ಬರಿಯ ಲೇಖನವಷ್ಟೇ ಅಲ್ಲ .. ! ವಾಸ್ತವಿಕತೆಯ ಬೊಟ್ಟು ಮಾಡಿ ಬದಲಾವಣೆಗೆ ಮುನ್ನುಡಿ ಬರೆವ ಟಾನಿಕ್ ನಂತಿದೆ. ಇದರಲ್ಲಿರುವ ಸುಮಾರು 55 ಲೇಖನಗಳೂ ಕೂಡಾ ಒಂದಿಲ್ಲೊಂದು ಹೊಸತನದೊಂದಿಗೆ ಓದುಗರ ಮನ ತಲುಪಲು ಪ್ರಯತ್ನಿಸಿದೆ. ಇಲ್ಲಿ ಲೇಖಕಿ ಅಕ್ಷತರಾಜ್ ಪೆರ್ಲ ಅವರ ಆಂತರ್ಯದ ದನಿಯೊಂದು ಸದ್ದಿಲ್ಲದೆ ಸಹೃದಯದೊಂದಿಗೆ ಮಾತನಾಡುತ್ತಾ ಹೋಗುತ್ತದೆ. ಪ್ರತೀ ಲೇಖನಗಳೂ ತೀರಾ ಸಾಮಾನ್ಯವಾಗಿ ಆರಂಭಗೊಂಡು ಕೊನೆಯ ಒಂದು ಭಾಗದಲ್ಲಂತೂ ಒಮ್ಮೆ ನಮ್ಮೊಳಗೆ ‘ಇದು ಹೌದಲ್ಲವೇ ?’ ಎಂದು ಯೋಚಿಸುವಂತೆ ಮಾಡುವಲ್ಲಿ ಯಶಸ್ಸು ಕಂಡಿದೆ. ಇಲ್ಲಿ ಅಂಗಳದಲ್ಲಿ ಆಡುವ ಪುಟ್ಟ ಮಗುವಿನಿಂದ ಹಿಡಿದು, ಮನೆಯೊಳಗೆ ಕುಳಿತು ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅಜ್ಜಿ, ಮನೆಯ ಅಡುಗೆ ಕೋಣೆ, ಹೆಂಡತಿಯ ಸತ್ಕಾರ, ಗಂಡನ ಆರ್ಡರ್ ಭಾವ, ಸಾಫ್ಟ್ ವೇರ್ ಬದುಕು, ಅಂಶದ ಬದುಕಿನಲ್ಲಿ ಸುಖ ಕಾಣುವ ಲೇಟೆಸ್ಟ್ ಅಪ್ಪ–ಅಮ್ಮ .. ಹೀಗೆ ಇನ್ನೂ ಹಲವು ಗಂಭೀರವಾಗಿ…