Author: roovari

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ದಿನಾಂಕ : 08-07-2023ರಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ನಾಗಮಣಿ ಎಸ್. ರಾವ್ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಹಿತಿ ಕಮಲಾ ಹಂಪನಾ ಅವರು ಪತ್ರಕರ್ತೆ ಆರ್. ಪೂರ್ಣಿಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ “ಹಿಂದೆ ದೇವಾಲಯಗಳಲ್ಲಿ ಪಂಚಾಯಿತಿ ತೀರ್ಮಾನ ಹಾಗೂ ನ್ಯಾಯದಾನ ನಡೆಯುತ್ತಿತ್ತು. ಅಲ್ಲಿ ಸರಿ ತಪ್ಪುಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈಗ ಅವುಗಳ ಮಹತ್ವ ಅರಿತುಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ನಮ್ಮ ನಡೆ ಇತರರಿಗೆ ಮಾದರಿಯಾಗುವಂತಿರಬೇಕು. ಪತ್ರಿಕೆಗಳು ಜನತೆಯನ್ನು ತಿದ್ದುವ ಕಡೆಗೆ, ಸತ್ಯ ಸಂಗತಿ ಪ್ರಚಾರ ಮಾಡುವ ಕಡೆಗೆ ಹೋಗಬೇಕು” ಎಂದು ನುಡಿದರು. ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಮಾತನಾಡಿ, “ನಾಗಮಣಿ ಅವರು ವಿಧಾನಮಂಡಲ ಅಧಿವೇಶನದ ವರದಿ ಮಾಡಿದ ಮೊದಲ ಪತ್ರಕರ್ತೆ, ರಾಜ್ಯದ ಯಾವುದೇ ಭಾಗದಲ್ಲಿ ಪ್ರಧಾನಿ ಭಾಷಣವಿದ್ದರೂ ಅವರು ವರದಿಗೆ ಹೋಗುತ್ತಿದ್ದರು. ಅವರ ಅನುಭವ ರೋಮಾಂಚಕಾರಿಯಾಗಿದೆ” ಎಂದು ಹೇಳಿದರು. ಲೇಖಕಿಯರ ಸಂಘದ ಅಧ್ಯಕ್ಷೆ ಎಚ್‌.ಎಲ್‌.…

Read More

ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ : 09-07-2023ರಂದು ನಡೆದ ‘ಸನಾತನ ಗುರು ಪರಂಪರೆ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸೂರಿ ಕುಮೇರು ಗೋವಿಂದ ಭಟ್ ಗುರುನಮನ ಸ್ವೀಕರಿಸಿ ಮಾತನಾಡುತ್ತಾ “ವ್ಯಕ್ತಿಯ ಜೀವನಕ್ಕೊಂದು ಸರಿಯಾದ ಸಂಸ್ಕಾರವು ನೃತ್ಯಕಲೆಯಿಂದ ದೊರಕುತ್ತದೆ. ಹಾಗೆ ನೋಡಿದರೆ ಪ್ರತಿಯೊಂದು ಕಲೆಯೂ ಆತನ ಸಂಸ್ಕಾರದಿಂದಲೇ ಪ್ರಾಪ್ತವಾಗಲು ಸಾಧ್ಯ. ಲಲಿತ ವಿದ್ಯೆಗಳನ್ನು ಸ್ವೀಕರಿಸಲು ಪೂರ್ವ ಸಂಸ್ಕಾರ ಬೇಕು. ಸತ್ಯದ ಸಾಕ್ಷಾತ್ಕಾರವೇ ವಿದ್ಯೆಯ ಪರಮ ಲಕ್ಷ್ಯ. ಕೇಳುಗನಿಗೆ, ನೋಡುಗನಿಗೆ ಏನನ್ನು ಕೊಡಬೇಕು ಎಂಬುದನ್ನು ಕಲಾವಿದನು ತಿಳಿದಿರಬೇಕು. ಅದು ಗುರು ಮುಖೇನ ಲಭ್ಯವಾಗಬೇಕು” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, “ಜೀವಿತದಲ್ಲಿ ನಮಗಿರುವ ದೊಡ್ಡ ಜವಾಬ್ದಾರಿ ಎಂದರೆ ನಮ್ಮ ಹಿರಿಯರ ಉತ್ತಮ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸುವಂತಹುದು. ಪ್ರತ್ಯಕ್ಷ ಪೂಜೆಗಿಂತಲೂ ಗುರುವಿನ ತತ್ವ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದು ಅತ್ಯುತ್ತಮ ಗುರುಪೂಜೆ”…

Read More

ಹೊಸಕೋಟೆ : ಜನಪದರು ಸಾಂಸ್ಕೃತಿಕ ವೇದಿಕೆ (ರಿ) ಹೊಸಕೋಟೆ ಆಯೋಜಿಸುವ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಸರಣಿ ‘ರಂಗಮಾಲೆ’ – 72 ರ ಅಂಗವಾಗಿ ಈ ಬಾರಿ ಜನಪದರು ಅಭಿನಯದ – ಸಿದ್ದೇಶ್ವರ ನನಸು ಮನೆ ರಚನೆ ಮತ್ತು ನಿರ್ದೇಶನದ ‘ಮಾತೆ ಮಹತ್ವ’ ನಾಟಕದ ಪ್ರದರ್ಶನವು ದಿನಾಂಕ 08-07-3023 ರಂದು ನೆರೆದ ಭಾರಿ ಪ್ರೇಕ್ಷಕರ ಭಾವಕೋಶವನ್ನು ಕಲುಕಿತು. ವೇದಿಕೆ ಅಧ್ಯಕ್ಷ ಕೆ. ವಿ. ವೆಂಕಟರಮಣಪ್ಪ ಪಾಪಣ್ಣ ಕಾಟ0 ನಲ್ಲೂರು ಉದ್ಘಾಟನೆ ಮಾಡಿದರು. ಖ್ಯಾತ ಸಾಹಿತಿ, ಸಮಾಜ ಚಿಂತಕ ಡಾII ಬಾಲಗುರುಮೂರ್ತಿ ನಾಟಕ ವಿಮರ್ಶೆ ಮಾಡುತ್ತಾ “ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ತ್ಯಾಗ ಮಯಿ ಆಕೆಯನ್ನು ಗೌರವಿಸಿ ಮತ್ತೆ ಶೋಷಣೆಗೆ ಒಳಪಡಿಸುವುದು ಶೋಚನೀಯ . ವಿಘಟಿತ ಸಮಾಜ ವ್ಯವಸ್ಥೆಯಲ್ಲಿ ಮೊಬೈಲ್ ಎಲ್ಲರ ಮಧ್ಯೆ ಜಗಳ ತಂದಿಡುತ್ತಿರುವುದು ವಿಪರ್ಯಾಸ. ಮೂರು ತಲೆಮಾರುಗಳ ಚಿತ್ರಣ ಸೊಗಸಾಗಿದೆ. ಕೇವಲ ರಂಗಭೂಮಿ ಅನುಭವದ ಮೂಲಕ ವೈಚಾರಿಕ ನಾಟಕ ಕಟ್ಟಿಕೊಡುವಲ್ಲಿ ಸಿದ್ದೇಶ್ವರ ನನಸು ಮನೆ ಯಶಸ್ವಿಯಾಗಿದ್ದಾರೆ” ಎಂದರು. ಇದೇ ಸಂದರ್ಭದಲ್ಲಿ…

Read More

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನಾ ಸಮಿತಿಯ ವತಿಯಿಂದ ದಿನಾಂಕ : 08-07-2023ರಂದು ನಡೆದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ 70 ವರ್ಷ ತುಂಬಿದ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿಗಳನ್ನು ಅಭಿನಂದಿಸಿ, ಪುಸ್ತಕ ಬಿಡುಗಡೆಗೊಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಾ “ಕುತೂಹಲ ಪ. ರಾಮಕೃಷ್ಣ ಶಾಸ್ತ್ರಿಗಳ ಬರಹಗಳ ಶಕ್ತಿಯಾಗಿದೆ. ಶಿವರಾಮ ಕಾರಂತರಂತಹ ವಿದ್ವಾಂಸರು ನಮ್ಮ ಮುಂದೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸುಯೋಗವಾಗಿದೆ. ಕಾರಣ ಅವರಂತೆ ಶಾಸ್ತ್ರಿಗಳಿಗೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಮಾತನಾಡಿ “ಬರವಣಿಗೆ ಮೂಲಕ ಬದುಕು ಕಟ್ಟಿಕೊಂಡವರು ಪ.ರಾ.ಶಾಸ್ತ್ರಿಗಳು. ಅವರು ನೆಲದ ಸ್ಪರ್ಶವನ್ನು ಬದುಕಿನುದ್ದಕ್ಕೂ ಇಟ್ಟುಕೊಂಡವರು. ಮಾಹಿತಿಗಳನ್ನು ಬೇರೆ ಬೇರೆ ಆಕರಗಳಿಂದ ಸಂಗ್ರಹಿಸಿ ತನ್ನ ಜ್ಞಾನದಲ್ಲಿರಿಸಿಕೊಂಡು ಲೇಖನವಾಗಿ ಬರೆಯುವುದು ಅವರಿಗೆ ಸಿದ್ದಿಸಿದೆ” ಎಂದರು. ಶಾಸಕ ಹರೀಶ್ ಪೂಂಜ ಮಾತನಾಡಿ, “ಪ.ರಾ.ಶಾಸ್ತ್ರಿಗಳ ಸಾಹಿತ್ಯ ಬದುಕನ್ನು…

Read More

ಮೂಡುಬಿದಿರೆ : ಮೂಡುಬಿದಿರೆ ಮಾರೂರು ಸಮೀಪದ ನೂಯಿಯಲ್ಲಿರುವ ಬಲಿಪ ಭವನದಲ್ಲಿ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರದ 18ನೇ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ : 25-06-2023ರಂದು ಭಾನುವಾರ ಸಂಜೆ ಬಲಿಪತ್ರಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಯಕ್ಷರಂಗದ ಮಹಾನ್ ಕಲಾವಿದ ಬಲಿಪ ನಾರಾಯಣ ಭಾಗವತರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವತಿಯಿಂದ ಪ್ರಶಸ್ತಿ ಸ್ಥಾಪಿಸುವುದಾಗಿ ಕೇಂದ್ರದ ಸ್ಥಾಪಕಾಧ್ಯಕ್ಷ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ ತಮ್ಮ ನಿರ್ಧಾರ ಪ್ರಕಟಿಸಿದರು. ತಕ್ಷಣ ಮೊದಲ ವರ್ಷದ ಪ್ರಶಸ್ತಿಯನ್ನು ತಾನು ಪ್ರಾಯೋಜಿಸುವುದಾಗಿ ಮುಖ್ಯ ಅತಿಥಿ ಡಾ.ವಿಷ್ಣುಪ್ರಸಾದ್ ಬರಕೆರೆ ತಿಳಿಸಿದರು. ಬಲಿಪ ಭಾಗವತರ ಆಪ್ತ ಹಾಗೂ ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಲಿಪ ನಾರಾಯಣ ಭಾಗವತರಿಗೆ ಘೋಷಿಸಲಾದ ‘ಚೇವಾರು ಕಾಮತ್‌ ಪ್ರಶಸ್ತಿ’ಯನ್ನು ಮರಣೋತ್ತರವಾಗಿ ಭಾಗವತರ ಪುತ್ರ ಮಾಧವ ಭಟ್ ರಿಗೆ ನೀಡಲಾಯಿತು, ಬಲಿಪರ ಪುತ್ರ ಪ್ರಸಾದ್‌ ಬಲಿಪ ಭಾಗವತರಿಗೆ ನೀಡಲಾಗುವ ‘ಪಡ್ರೆ ಚಂದು ಪ್ರಶಸ್ತಿ’ಯನ್ನು…

Read More

ಮಂಗಳೂರು: ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಗರದ ರಾಮಕೃಷ್ಣ ಕಾಲೇಜಿನಲ್ಲಿ ದಿನಾಂಕ : 03-07-2023ರಂದು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್‌ ಜಿಲ್ಲಾ ಸಮಿತಿ ಪದಾಧಿಕಾರಿಗಳ ಘೋಷಣೆ ನಡೆಯಿತು. ‘ಸಾಹಿತ್ಯ ಮತ್ತು ವಿದ್ಯಾರ್ಥಿಗಳು’ ವಿಷಯದ ಬಗ್ಗೆ ಮಾತನಾಡಲು ಸಂಪನ್ಮೂಲ ವ್ಯಕ್ತಿಯಾಗಿ ಬಂದ ಕತೆಗಾರ ಜೋಗಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಸಾಹಿತ್ಯದಲ್ಲಿ ನಿಜವಾದ ಸಂತೋಷ ಅಡಗಿದೆ. ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಸಾಹಿತ್ಯದಲ್ಲೂ ಬದಲಾವಣೆ ಆಗುತ್ತಿದೆ. ಯುವಜನತೆ ಓದಿನ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ಸಾಹಿತ್ಯದ ಸಂತಸವನ್ನು ಅನುಭವಿಸಬೇಕು. ಸಾಹಿತ್ಯ ಓದೋದನ್ನು ಕೇಳೋದನ್ನು ಕಲಿಯಬೇಕು. ಒಮ್ಮೆ ಅದರ ರುಚಿ ಸಿಕ್ಕರೆ ಸಾಹಿತ್ಯದ ದಾಸರಾಗುತ್ತೀರಿ. ವಿದ್ಯಾರ್ಥಿಗಳು ಪಾಠವನ್ನು ಕತೆಯಂತೆಯೇ ಆಸಕ್ತಿಯಿಂದ ಓದಬೇಕು” ಎಂದರು. ರಾಮಕೃಷ್ಣ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಮಾಧವ ಉಪಸ್ಥಿತರಿದ್ದರು. ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಶೈಲೇಶ್ ಕುಲಾಲ್ ದ.ಕ. ಜಿಲ್ಲಾ…

Read More

ಬೆಂಗಳೂರು: ಬೆಂಗಳೂರಿನ ನೃತ್ಯ ಸಂಸ್ಥೆಯಾಗಿರುವ ಶ್ರೀ ಮಾರಿಕಾಂಬಾ ನೃತ್ಯ ಕಲಾಕೇಂದ್ರ (ರಿ), ಕೋರಮಂಗಲ ಸಂಸ್ಥೆಯು ತನ್ನ ಸಂಸ್ಥೆಯ ಸಭಾಂಗಣದಲ್ಲಿ, ತಮ್ಮ ನೃತ್ಯ ವಿದ್ಯಾರ್ಥಿಗಳಿಗಾಗಿ ದಿನಾಂಕ : 08-07-2023 ಮತ್ತು 09-07-2023ರಂದು ತಾಳ ಕಾರ್ಯಗಾರವನ್ನು ನಡೆಸಿತು. ಖ್ಯಾತ ಯುವ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಸಂಸ್ಥೆಯ ಗುರುಗಳಾದ ಶ್ರೀಮತಿ ವಿದುಷಿ ಸ್ಮಿತಾ ಪ್ರಕಾಶ್ ಅವರ 19 ಮಂದಿ ವಿದ್ಯಾರ್ಥಿಗಳು ಕಾರ್ಯಗಾರದ ಪ್ರಯೋಜನವನ್ನು ಪಡೆದರು. ಈ ನೃತ್ಯ ಸಂಸ್ಥೆಯು ಕಳೆದ 18 ವರುಷಗಳಿಂದ ಶಿರಸಿ, ಕುಮಟಾ, ಹೊನ್ನಾವರ ಮುಂತಾದ ಕಡೆಗಳಲ್ಲಿಯೂ ಶಾಖೆಯನ್ನು ಹೊಂದಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಗುರು ಸ್ಮಿತಾ ಪ್ರಕಾಶ್ ನೃತ್ಯ ಶಿಕ್ಷಣವನ್ನು ನೀಡುತ್ತಿದ್ದಾರೆ.

Read More

ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ಪ್ರೊ. ಅಭಯ ಕುಮಾರ್ ಅವರ ಬೀಳ್ಕೊಡುಗೆ ಸಮಾರಂಭ ದಿನಾಂಕ : 30-06-2023ರಂದು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಸೋಮಣ್ಣ ಹೊಂಗಳ್ಳಿ ಅವರು, “ಪ್ರೊ. ಅಭಯ್‌ ಕುಮಾರ್ ಅವರು ತುಂಬಾ ಸರಳ ವ್ಯಕ್ತಿತ್ವದ ಮತ್ತು ಮಾನವ ಪ್ರೀತಿಯುಳ್ಳ ವ್ಯಕ್ತಿಯಾಗಿದ್ದಾರೆ. ಅವರು ಜಾನಪದ ವಿದ್ವಾಂಸನಾಗಿ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ನಿವೃತ್ತ ಜೀವನವು ಸುಖಮಯವಾಗಿರಲಿ” ಎಂದು ಹಾರೈಸಿದರು. ಪ್ರಾಧ್ಯಾಪಕ ಡಾ.ನಾಗಪ್ಪ ಗೌಡ ಅವರು ಮಾತನಾಡಿ, “ಒಳ್ಳೆಯದನ್ನು ಗುರುತಿಸಿ, ಪ್ರೋತ್ಸಾಹಿಸುವ ವ್ಯಕ್ತಿತ್ವ ಪ್ರೊ, ಅಭಯ ಕುಮಾರ್ ಅವರದ್ದು. ಸಮಾಜಮುಖಿಯಾಗಿ ಯೋಚನೆ ಮಾಡುವವರಾಗಿ, ಸಿದ್ಧಾಂತ, ವೈಚಾರಿಕತೆ, ನಿಲುವುಗಳಿಗನುಸಾರವಾಗಿ ಸಮಾಜದಲ್ಲಿ ಬದುಕನ್ನು ಕಟ್ಟಿಕೊಂಡವರು. ಜಾನಪದ ಕ್ಷೇತ್ರದಲ್ಲಿ ಅಪಾರ ಜ್ಞಾನವನ್ನು ಹೊಂದಿದ ಇವರ ಅನುಭವಗಳು ನಿವೃತ್ತಿ ಬಳಿಕ ಕೃತಿಗಳ ಮೂಲಕ ಅನಾವರಣಗೊಳ್ಳಲಿ” ಎಂದರು.…

Read More

ಧಾರವಾಡ: ಅಲನ್ ಅಲ್ದಾ ರಚನೆಯ ಸುಮನಾ ಡಿ ಮತ್ತು ಶಶಿಧರ್ ಡೋಂಗ್ರೆ ಕನ್ನಡಕ್ಕೆ ಅನುವಾದಿಸಿದ ‘ಪ್ರಭಾಸ’ ನಾಟಕದ ಪ್ರದರ್ಶನವು ದಿನಾಂಕ 03-07-2023 ರಂದು ಧಾರವಾಡದ ಸೃಜನ ರಂಗಮಂದಿರದಲ್ಲಿ ‘ಅಭಿನಯ ಭಾರತಿ’ ಪ್ರಸ್ತುತಪಡಿಸಿತು. ವಿಜ್ಞಾನ, ಪ್ರೇಮ ಮತ್ತು ಜೀವನದ ದೌರ್ಬಲ್ಯಗಳ ಉತ್ತಮವಾದ ಮಿಶ್ರಣವನ್ನು ಅಭಿನಯ ಭಾರತಿಯು ತನ್ನ ಕಲಾವಿದರ ಅಪ್ರತಿಮ ಪ್ರತಿಭೆಯ ಆಧಾರದಿಂದ ತನ್ನದೇ ಆದ ಎತ್ತರಕ್ಕೇರಲು ‘ಪ್ರಭಾಸ’ ನಾಟಕ ಪ್ರಥಮ ಪ್ರದರ್ಶನದಲ್ಲಿ ಯಶಸ್ವಿಯಾಯಿತು. ನೋಬಲ್ ಪ್ರಶಸ್ತಿ ವಿಜೇತರ ಜೀವನ ಸಂಘರ್ಷಗಳ ಮಧ್ಯೆಯೂ ತಮ್ಮ ಸಂಶೋಧನೆಯ ಗುರಿ ಮುಟ್ಟುವ ಮನೋಬಲ ಮತ್ತು ಛಲವನ್ನು ನವಿರಾದ ಹಾಸ್ಯ ಲೇಪನದಿಂದ ಪ್ರಸ್ತುತಪಡಿಸುವಲ್ಲಿ ನಿರ್ದೇಶಕ ಉಮೇಶ್ ಸಾಲಿಯಾನ್ ಯಶಸ್ವಿಯಾದರು. 95 ನಿಮಿಷಗಳಕಾಲ ವಿಜ್ಞಾನ ವಿಚಾರ, ಸಾಮಾಜಿಕ ಆಚಾರ ವಿಚಾರ, ಪ್ರಶಸ್ತಿಗಳ ಹಿಂದಿರುವ ಅಂತರಾಷ್ಟ್ರೀಯ ರಾಜಕೀಯ ವಿಚಾರಗಳನ್ನು ಎಳೆ ಎಳೆಯಾಗಿ ನಾಟಕದಲ್ಲಿ ಮೂಡಿಸಿ ನೋಡುಗರಿಗೆ ವಿಜ್ಞಾನದ ಬಗ್ಗೆ ಕುತೂಹಲ ಆಸಕ್ತಿ ಹುಟ್ಟಿಸುವಲ್ಲಿ ತಕ್ಕಮಟ್ಟಿಗೆ ಸಫಲವಾಯಿತು. ವಿಜ್ಞಾನದ ಕಥಾವಸ್ತು ಇದ್ದ ಕಠಿಣವಾದ ನಾಟಕವನ್ನು ಸಾಮಾನ್ಯ ಪ್ರೇಕ್ಷಕರ ಮುಂದೆ ಯಶಸ್ವೀ ಪ್ರಯತ್ನ…

Read More

ಕಾರ್ಕಳ: ಯಕ್ಷ ಕಲಾರಂಗ ಕಾರ್ಕಳ ಇದರ ವತಿಯಿಂದ ಪೆರ್ವಾಜೆಯ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ದಿನಾಂಕ :04-07-2023ರಂದು ‘ಯಕ್ಷಗಾನ ತರಬೇತಿ’ ಕಾರ್ಯಕ್ರಮ ನಡೆಯಿತು. ಯಕ್ಷ ಕಲಾರಂಗದ ಸಂಚಾಲಕ ಪ್ರೊ. ಪದ್ಮನಾಭ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ “ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುವುದರಿಂದ ಜ್ಞಾನ ವೃದ್ಧಿ ಮತ್ತು ಸಂಸ್ಕೃತಿಯ ಪರಿಚಯವಾಗುವುದು” ಎಂದರು. ಕಾರ್ಯದರ್ಶಿ ಮಹಾವೀರ ಪಾಂಡಿಯವರು ಯಕ್ಷಗಾನದ ಮಹತ್ವ ಮತ್ತು ಪ್ರಯೋಜನವನ್ನು ವಿವರಿಸಿ, ಯಕ್ಷಗಾನ ತರಗತಿಯ ವಿದ್ಯಾರ್ಥಿಗಳಿಗೆ ದೊರೆಯುವ ವಿದ್ಯಾರ್ಥಿ ವೇತನಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಯಕ್ಷಗಾನ ಗುರು ಅಜಿತ್ ಜೈನ್ ವೇದಿಕೆಯಲ್ಲಿದ್ದರು. ಶಿಕ್ಷಕ ಹರಿಶ್ಚಂದ್ರ ಬಾಯರಿ ಸ್ವಾಗತಿಸಿ, ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More