Author: roovari

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಪ್ರೊ. ಎ.ವಿ. ನಾವಡ ಅವರಿಗೆ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಹಾಗೂ ಡಾ. ಸಾಯಿಗೀತಾ ಅವರಿಗೆ ಡಾ. ಯು.ಪಿ. ಉಪಾಧ್ಯಾಯ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿಯನ್ನು ದಿನಾಂಕ : 01-07-2023, ಶನಿವಾರ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಪ್ರೊ. ನಾವಡ ಮಾತನಾಡಿ, “ಸೇಡಿಯಾಪು ಕೃಷ್ಣಭಟ್ಟರು ಮಹಾಪಂಡಿತರು. ಅವರ ವಿದ್ವತ್ತನ್ನು ಬೆಳಕಿಗೆ ತಂದವರಲ್ಲಿ ಪಾದೇಕಲ್ಲು ವಿಷ್ಣು ಭಟ್ಟರ ಕೊಡುಗೆಯೂ ದೊಡ್ಡದಿದೆ. ಮುಂದೆ ಸೇಡಿಯಾಪು ಅವರ ಸಂಪುಟಗಳು ರಚನೆಯಾಗಬೇಕು. ಪರಿಭಾಷೆಗಳನ್ನು ನಿಶ್ಚಯಿಸುವಲ್ಲಿ ಅವರ ಕೊಡುಗೆ ಅಪಾರ. ಜ್ಞಾನ ಸ್ಫೋಟವಾಗುವುದು ವಿಶ್ವವಿದ್ಯಾನಿಲಯಗಳಲ್ಲಿ ಅಲ್ಲ. ಪಿ.ಎಚ್.ಡಿ. ಪಡೆಯದೆ ಸಾಧನೆ ಮಾಡಿದ ಹಲವಾರು ಮಂದಿ ಪಂಡಿತರಿದ್ದಾರೆ. ಸೇಡಿಯಾಪು ಅವರ ವಿಚಾರಗಳನ್ನು ಪಿಎಚ್.ಡಿ.ಗೆ ತೆಗೆದು ಕೊಳ್ಳಬಹುದಾಗಿದೆ. ದೇಸೀಯ ದೃಷ್ಟಿಕೋನವನ್ನು ಬರೆವಣಿಗೆಯಲ್ಲಿ ಅಳವಡಿಸಬೇಕು ಎಂಬುವುದನ್ನು ಅವರು ತಿಳಿದುಕೊಂಡಿದ್ದರು. ದ.ಕ. ಜಿಲ್ಲೆಯಲ್ಲಿ ಪಂಡಿತರ ಸೇವೆ ಹಾಗೂ…

Read More

ಕಾರ್ಕಳ : ಯಕ್ಷ ಕಲಾರಂಗ ಕಾರ್ಕಳ ಇದರ ವತಿಯಿಂದ ಕಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ತರಬೇತಿ ಕಾರ್ಯಕ್ರಮವು ದಿನಾಂಕ :03-07-2023ರಂದು ಉದ್ಘಾಟನೆಗೊಂಡಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಆರೀಸ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಕ್ಷಕಲಾ ರಂಗ ಸಂಚಾಲಕ ಪದ್ಮನಾಭ ಗೌಡ ಮಾತನಾಡಿ “ಯಕ್ಷಗಾನ ಮಾನಸಿಕ ಏಕಾಗ್ರತೆಗೆ ಪೂರಕ. ವಿದ್ಯಾರ್ಥಿಗಳು ಯಕ್ಷಗಾನವನ್ನು ಬಹಳ ಆಸಕ್ತಿಯಿಂದ ಕಲಿಯಬೇಕು” ಎಂದರು. ಯಕ್ಷಕಲಾ ರಂಗದ ಕೋಶಾಧ್ಯಕ್ಷ ಶ್ರೀವರ್ಮ ಅಜ್ರಿ, ಕಾರ್ಯದರ್ಶಿ ಮಹಾವೀರ ಪಾಂಡಿ, ಪುರಸಭಾ ಸದಸ್ಯೆ ರೆಹಮತ್ ಮತ್ತು ಮುಖ್ಯ ಶಿಕ್ಷಕಿ ಜೇಸಿಂತಾ ಡೇಸಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ನರೇಂದ್ರ ಕಾಮತ್ ಸ್ವಾಗತಿಸಿ, ನಿರೂಪಿಸಿ, ನಯನ ವಂದಿಸಿದರು.

Read More

ಕಡಬ : ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಡಬ ತಾಲೂಕು ಮತ್ತು ಶ್ರೀ ಮಂಜುನಾಥೇಶ್ವರ ಮಹಿಳಾ ಭಜನಾ ಮಂಡಳಿ ಇದರ ಸಂಯುಕ್ತ ಆಶ್ರಯದಲ್ಲಿ ಜರಗಿದ ಕುಣಿತ ಭಜನಾ ತರಬೇತಿ ಶಿಬಿರದ ಸಮಾರೋಪ ಹಾಗೂ ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ಕೊಂಬಾರು ಮಣಿಭಾಂಡ ಮಂಜುಶ್ರೀ ಭಜನಾ ಮಂದಿರದಲ್ಲಿ ದಿನಾಂಕ : 18-06-2023ರಂದು ಜರಗಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಂಬಾರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಯಶ್ರೀ ರಾಮಚಂದ್ರ ಗೌಡ, “ದೇವರ ನಾಮ ಸಂಕೀರ್ತನೆಯಿಂದ ನಮಗೆ ಮಾನಸಿಕ ನೆಮ್ಮದಿ, ಭಗವಂತನ ಕೃಪಾಕಟಾಕ್ಷ ದೊರೆಯುತ್ತದೆ. ಪ್ರತಿ ಮನೆಗಳಲ್ಲಿಯೂ ನಾವು ದಿನಕ್ಕೆ ಒಂದು ಹೊತ್ತಿಗಾದರೂ ಮನೆ ಮಂದಿ ಎಲ್ಲರೂ ಸೇರಿ ಭಜನೆ ಹಾಡುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಮನೆ ಮಕ್ಕಳಿಗೂ ಭಜನೆಯ ಬಗ್ಗೆ ಆಸಕ್ತಿ ಮೂಡಿಸಬೇಕು” ಎಂದರು. ಆಹ್ವಾನಿತ ಭಜನಾ ತಂಡಗಳ ಕುಣಿತ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಡಬ ಆರಕ್ಷಕ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ, “ಭಜನೆ ಎನ್ನುವುದು ಮನೆ…

Read More

ಬೆಂಗಳೂರು: ಜುಲೈ 17 ಸಂಚಾರಿ ವಿಜಯ್ ಅವರು ಹುಟ್ಟಿದ ದಿನದ ಸವಿನೆನಪಿಗೆ ಸಂಚಾರಿ ಥಿಯೇಟರ್ ಪ್ರಸ್ತುತ ಪಡಿಸುವ ‘ಹುತ್ತವ ಬಡಿದರೆ’ ನಾಟಕದ ಪ್ರದರ್ಶನವು ದಿನಾಂಕ 16-07-2023 ರಂದು ಬೆಂಗಳೂರಿನ ಎಂಪ್ಟಿ ಸ್ಪೇಸ್ ನಲ್ಲಿ ಪ್ರದರ್ಶನ ಗೊಳ್ಳಲಿದೆ. ವಾರಾಂತ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ವಾರದ ಐದೂ ದಿನ ಪೂರ್ತಿ ಕೆಲಸ ಮಾಡಿ ವಾರಾಂತ್ಯದಲ್ಲಿ ಬಿಡುವಾಗುವ ಯುವ ರಂಗಾಸಕ್ತರಿಗಾಗಿ ಹಮ್ಮಿಕೊಂಡಿರುವಂತಹ ಅಭಿನಯ ಕಾರ್ಯಾಗಾರ ‘ಆದಿರಂಗ’. ಸಂಪೂರ್ಣವಾಗಿ ರಂಗಭೂಮಿಗೆ ಹೊಸಬರಾಗಿರುವವರಿಗೆ ರಂಗಭೂಮಿಯ ಪರಿಚಯ ಮಾಡಿಕೊಡುವ ಒಂದು ಅವಕಾಶ ಈ ಕಾರ್ಯಾಗಾರದಲ್ಲಿ ಇರುತ್ತದೆ. ಸುಮಾರು ಐದು ತಿಂಗಳ ಕಾಲ ನಡೆಯುವ ಈ ಶಿಬಿರದ ವಾರಾಂತ್ಯದಲ್ಲಿ ಇವರು ರಂಗಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಅಭಿನಯಕ್ಕೆ ಸಂಬಂಧಿಸಿದ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಾ, ಅಭ್ಯಾಸಗಳಲ್ಲಿ ತೊಡಗಿಕೊಂಡು ನಾಟಕ ಪ್ರದರ್ಶನದ ಮೂಲಕ ಅನುಭವವನ್ನು ಪಡೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಇವರಿಗೆ ಈ ವರ್ಷ ‘ಹುತ್ತವ ಬಡಿದರೆ’ ನಾಟಕವನ್ನು ಅಭ್ಯಾಸಕ್ಕೆ ಆರಿಸಿಕೊಳ್ಳಲಾಗಿದೆ. ಕೆ.ವಿ.ನಾರಾಯಣರವರು ರಚಿಸಿರುವ ಈ ನಾಟಕವನ್ನು ಮಂಗಳಾ.ಎನ್ ನಿರ್ದೇಶಿಸಿದ್ದು, ಸಿ.ವೀರಣ್ಣ ನಾಟಕಕ್ಕೆ ಹಾಡುಗಳನ್ನು ರಚಿಸಿದ್ದಾರೆ. ಬಿ.ವಿ.ಕಾರಂತ ಸಂಗೀತ ನೀಡಿದ್ದು,…

Read More

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ರೋಟರಿ ಕ್ಲಬ್ ಮಣಿಪಾಲ, ಮಣಿಪಾಲ ಮಹಿಳಾ ಸಮಾಜ ಇವರ ಆಶ್ರಯದಲ್ಲಿ 02-07-2023ರ ಭಾನುವಾರ ಕನ್ನಡದ ಪ್ರಸಿದ್ಧ ಕವಯಾತ್ರಿಯರಾದ ಅಕ್ಕಮಹಾದೇವಿ ,ವೈದೇಹಿ, ಕಮಲಾ ಹಂಪನಾ ಹಾಗೂ ಪ್ರತಿಭಾ ನಂದಕುಮಾರ್ ಮುಂತಾದ ಮಹಿಳಾ ಕವಯತ್ರಿಯರ ಕಾವ್ಯದ ನೃತ್ಯ ಮತ್ತು ಅಭಿವ್ಯಕ್ತಿ ‘ಕಾವ್ಯ ಕನ್ನಿಕಾ’ ಕಾರ್ಯಕ್ರಮವು ಪ್ರಸಿದ್ಧ ಕಲಾವಿದರು ಹಾಗೂ ಮನೋವೈದ್ಯರಾದ ಶಿವಮೊಗ್ಗದ ಡಾ. ಪವಿತ್ರ ಕೆ.ಎಸ್ ಅವರಿಂದ ಬುಡ್ನಾರಿನ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಯಕ್ಷಗಾನ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣರು ಉದ್ಘಾಟಿಸಿದ ಸಂದರ್ಭದಲ್ಲಿ ಖ್ಯಾತ ಕಲಾವಿದೆ ಡಾII ಕೆ.ಎಸ್ ಪವಿತ್ರರನ್ನು ಗೌರವಿಸಲಾಯಿತು. ಗೌರವ ಸ್ವಿಕರಿಸಿದ ಅವರು ಮಾತನಾಡಿ “ಮಹಿಳಾವಾದಿ ಎಂದರೆ ಪುರುಷ ವಿರೋಧಿ ಭಾವನೆಯಲ್ಲ, ಮಹಿಳೆಯರ ಮನಸ್ಸು ಆಕೆಯ ಆಂತರಿಕ ಭಾವನೆಗಳು ಪುರುಷರಲ್ಲಿ ಕೂಡ ಇರುತ್ತವೆ. ಮಾತು ಮೌನವಾದಾಗ ಸಂಗೀತ ಜನ್ಮ ತಾಳುತ್ತದೆ. ಸಂಗೀತ, ಕಾವ್ಯ ಮುoತಾದವುಗಳಿಗೆ ವಿಶೇಷ ಶಕ್ತಿಇದೆ ಹಾಗೂ ಹಿಂದಿನ ಕವನಗಳು ಇಂದಿಗೂ ಪ್ರಸ್ತುತವಾಗಿದೆ” ಎಂದರು.…

Read More

ಬೆಂಗಳೂರು: ʻಕನ್ನಡ ಚಳುವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿʼ ಪ್ರಶಸ್ತಿಗೆ ಕನ್ನಡ ಪರ ಹೋರಾಟಗಾರ ಹಿರಿಯ ಕಲಾವಿದರಾದ ಶ್ರೀ ಜಿ.ಕೆ. ಸತ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಶ್ರೀ ಟಿ. ತಿಮ್ಮೇಶ್‌ ಅವರು ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಯು ರೂ 10,000(ಹತ್ತು ಸಾವಿರ) ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ. ಕನ್ನಡ ಚಳುವಳಿ ಸೇನಾನಿ ಶ್ರೀ ಮ. ರಾಮಮೂರ್ತಿ ಅವರು ರಾಜ್ಯಾದ್ಯಂತ ಕನ್ನಡ ಉಳಿಸಿ ಬೆಳೆಸುವ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಹೋರಾಟಕ್ಕೆ ಶಕ್ತಿ ಮತ್ತು ಚೈತನ್ಯವನ್ನು ತುಂಬಿದವರು. ಇವರ ಹೆಸರಿನಲ್ಲಿರುವ ಈ ದತ್ತಿ ಪ್ರಶಸ್ತಿಯನ್ನು ರಾಜ್ಯದಲ್ಲಿ ಕನ್ನಡದ ಹೋರಾಟದಲ್ಲಿ ತೊಡಗಿಸಿಕೊಂಡಿರುವ 50 ವರ್ಷ ಮೀರಿದ ವಯೋಮಾನದ ಕನ್ನಡ ಕಾರ್ಯಕರ್ತರಿಗೆ ನೀಡತಕ್ಕದ್ದು ಎಂಬುದು ಈ ಪ್ರಶಸ್ತಿಯ ಆಶಯವಾಗಿದೆ. ಇದುವರೆಗೆ 8 ಜನ ಕನ್ನಡ ಚಳುವಳಿಗಾರರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2023ನೆಯ ಸಾಲಿನ ಈ ಪ್ರಶಸ್ತಿಗೆ ಕನ್ನಡ ಪರ ಹೋರಾಟಗಾರ…

Read More

ಪುತ್ತೂರು : ಡಿಸೆಂಬರ್ 2023ರಲ್ಲಿ ನಡೆಯಲಿರುವ ಶ್ರೀ ಆಂಜನೇಯ 55ರ ಸಂಭ್ರಮಕ್ಕೆ ಪೂರಕವಾಗಿ ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ರೂಪುಗೊಂಡು ಪ್ರಾರಂಭವಾದ ‘ಯಕ್ಷ ಬಾನುಲಿ ಸರಣಿ ತಾಳಮದ್ದಳೆ’ ಎಂಬ ಕಾರ್ಯಕ್ರಮದಡಿಯಲ್ಲಿ ದಿನಾಂಕ : 06-07-2023ರಂದು, ವಿವೇಕಾನಂದ ಕಾಲೇಜಿನ ಆಡಳಿತಕ್ಕೊಳಪಟ್ಟ ರೇಡಿಯೋ ಪಾಂಚಜನ್ಯದಲ್ಲಿ ‘ಯಕ್ಷ ದಾಂಪತ್ಯ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ಆನಂದ ಸವಣೂರು, ಚೆಂಡೆ ಮದ್ದಳೆಗಳಲ್ಲಿ ಅಚ್ಯುತ ಪಾಂಗಣ್ಣಾಯ, ತಾರಾನಾಥ್ ಸವಣೂರು ಹಾಗೂ ಅಮೋಘ ಶಂಕರ ಸಹಕರಿಸಿದರು. ಮುಮ್ಮೇಳದಲ್ಲಿ ಗುಡ್ಡಪ್ಪ ಬಲ್ಯ (ವಾಲಿ), ಮನೋರಮಾ ಜಿ. ಭಟ್ (ತಾರೆ), ಸುಬ್ಬಪ್ಪ ಕೈಕಂಬ (ಶ್ರೀ ರಾಮ), ಶಾರದಾ ಅರಸ್ (ಸೀತೆ) ಸಹಕರಿಸಿದರು. ತೇಜಸ್ವಿನಿ ಕೆಮ್ಮಿಂಜೆ ಹಾಗೂ ಪ್ರಶಾಂತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Read More

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲೂಕು ಘಟಕದ ಸಹಯೋಗದಲ್ಲಿ ಇಲ್ಲಿನ ಕನ್ನಡ ಭವನದಲ್ಲಿ ದಿನಾಂಕ : 04-07-2023ರಂದು ‘ಕಚೇರಿ ಉದ್ಘಾಟನೆ’ ಮತ್ತು ಕೊರಗಪ್ಪ ಶೆಟ್ಟಿ ಅವರ ಅಭಿನಂದನಾ ಗ್ರಂಥ ‘ರಂಗಸ್ಥಳದ ರಾಜ ಅರುವ’ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಸಾಪ ಮೂಡಬಿದರೆ ತಾಲೂಕು ಘಟಕ ಕಛೇರಿಯನ್ನು ಉದ್ಘಾಟನೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್‌ ಮಾತನಾಡುತ್ತಾ “ಜನರಲ್ಲಿ ಓದುವ ಆಸಕ್ತಿ ಕುಂಠಿತಗೊಳ್ಳುತ್ತಿದ್ದು, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಬೆಳಸುವ ಜವಾಬ್ದಾರಿಯನ್ನು ‘ಕಸಾಪ’ ಹೊತ್ತುಕೊಂಡಿದೆ. ಕಸಾಪ ಪ್ರತಿ ವರ್ಷ ನೂರಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಸದಸ್ಯರ ಸಕ್ರಿಯತೆ ಮತ್ತು ಉತ್ಸುಕತೆಯಿಂದ ಉತ್ತಮ ಕೊಡುಗೆ ನೀಡಬಹುದಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಸಾಪ ಸದಸ್ಯತ್ವ ಕಡಿಮೆ ಇದೆ. ಇದು ಬೇಸರದ ಸಂಗತಿ. ಯುವಜನತ ಕಸಾಪ ಅಜೀವ ಸದಸ್ಯರಾಗುವ ಮೂಲಕ ಸಾಹಿತ್ಯಕ್ಕೆ ಕೊಡುಗೆ ನೀಡಬೇಕಾಗಿದೆ” ಎಂದರು. ‘ರಂಗಸ್ಥಳದ ರಾಜ ಅರುವ’ ಅಭಿನಂದನಾ…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೆಯ ಸಾಲಿನ ‘ಫಾದರ್‌ ಚಸರಾ ಕನ್ನಡ ಸಂಸ್ಕೃತಿ ದತ್ತಿ’ ಪ್ರಶಸ್ತಿಗಾಗಿ ಹಿರಿಯ ಸಾಹಿತಿ ನಾ. ಡಿಸೋಜ ಹಾಗೂ ಸಾಮಾಜಿಕ ಹೋರಾಟಗಾರ್ತಿ ದು.ಸರಸ್ವತಿ ಅವರನ್ನು ಆಯ್ಕೆ ಮಾಡಲಾಗಿದೆ. ದತ್ತಿ ದಾನಿಗಳ ಆಶಯದಂತೆ ಪ್ರತಿವರ್ಷ ಇಬ್ಬರು ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು ಒಬ್ಬರು ಕ್ರೈಸ್ತ ಕನ್ನಡ ಸಾಧಕರಿಗೆ ಮತ್ತು ಇನ್ನೊಬ್ಬರು ಕನ್ನಡ ಜನಪರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದವರನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರಶಸ್ತಿಯು ತಲಾ ರೂ 10,000 (ಹತ್ತು ಸಾವಿರ)ರೂ.ನಗದು, ಫಲ ತಾಂಬೂಲ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ‘ಫಾದರ್‌ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ಯನ್ನು ʻಸಂಚಲನ ಬಳಗ’ದವರು 2017ರಲ್ಲಿ ಸ್ಥಾಪಿಸಿದ್ದು ಇದುವರೆಗೆ 12 ಜನರಿಗೆ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. “ತಮ್ಮ ನಿತ್ಯ ಬದುಕಿನಲ್ಲಿ ಕನ್ನಡ ನಾಡು- ನುಡಿಯ ಕುರಿತು ಅಪಾರ ಗೌರವ ಹೊಂದಿರುವ ಹಿರಿಯ ಸಾಧಕರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಪ್ರಶಸ್ತಿ ಪುರಸ್ಕಾರ ಪಡೆದ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ನಿರಂತರ…

Read More

ಮಂಗಳೂರು: ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತು (ರಿ) ಇವರು ಆಯೋಜಿಸುವ ಪ್ರಸಕ್ತ ವರ್ಷದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ದಿನಾಂಕ 02-07-2023 ರಂದು ಶರವು ದೇವಳದ ಧ್ಯಾನ ಮಂದಿರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶರವು ಶ್ರೀ ಮಹಾಗಣಪತಿ ದೇವಳದ ಧರ್ಮದರ್ಶಿಯಾದ ರಾಘವೇಂದ್ರ ಶಾಸ್ತ್ರಿಯವರು “ಪಾಶ್ಚಾತ್ಯ ಸಂಸ್ಕೃತಿ ಇಂದು ಬೇರೆ ಬೇರೆ ರೀತಿಯಲ್ಲಿ ಪ್ರವೇಶ ಮಾಡುತ್ತಿರುವ ಕಾಲಘಟ್ಟದಲ್ಲಿ ಭರತನಾಟ್ಯಂತಹ ಪ್ರಾಚೀನ ಮತ್ತು ಅಗತ್ಯವಾದ ಕಲೆಯನ್ನು ಮಕ್ಕಳಿಗೆ ಕಲಿಸಿ ಪ್ರದರ್ಶಿಸುವುದು ನಮ್ಮ ಸಂಸ್ಕೃತಿಯನ್ನು ರಕ್ಷಿಸಿದಂತೆ. ಭಾರತದ ಖ್ಯಾತ ನಾಟ್ಯ ಶಾಸ್ತ್ರಜ್ಞ ಭರತಮುನಿಯ ನಾಟ್ಯ ಶಾಸ್ತ್ರ ಗ್ರಂಥವು ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ ಈ ಗ್ರಂಥದ ಆಧಾರದಲ್ಲೇ ನೃತ್ಯ ಗುರುಗಳು ಮತ್ತಷ್ಟು ಸಾಧನೆ ಮಾಡುವಂತಾಗಲಿ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲಾ ಗುರುಗಳ ಮತ್ತು ಕಲಾವಿದ್ಯಾರ್ಥಿಗಳ ಔನ್ನತಿಗಾಗಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಹಮ್ಮಿಕೊಳ್ಳಲಾಗಿರುವ ನೃತ್ಯ ಸಮ್ಮೇಳನವು ಯಶಸ್ವಿಯಾಗಿ ಜರಗಲಿ” ಎಂದು ಶುಭಹಾರೈಸಿದರು. ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಯು.…

Read More