Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಆನ್ ಸ್ಟೇಜ್ ಯೂತ್ ಥಿಯೇಟರ್ ಆಯೋಜಿಸುತ್ತಿರುವ 45 ದಿನಗಳ ರಂಗ ತರಬೇತಿ ಕಾರ್ಯಾಗಾರ (ಅಭಿನಯ ಮತ್ತು ನಾಟಕ ತಯಾರಿ) ಕಾರ್ಯಾಗಾರವು ದಿನಾಂಕ 10-11-2023ರಿಂದ ಪ್ರತಿದಿನ ಸಂಜೆ 6:30 ರಿಂದ 9:00ರ ವರೆಗೆ ಮೈಸೂರಿನ ಹೆಬ್ಬಾಳದ ಬಸವನಗುಡಿ ಸರ್ಕಲ್ ಹತ್ತಿರವಿರುವ ಅಣ್ಣಯ್ಯಪ್ಪ ಭೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 8892314554 ಈ ಸಂಖ್ಯೆಯನ್ನು ಸಂಪರ್ಕಿಸಬಹುದು. ನಿರ್ದೇಶಕ ವಿನೋದ ಸಿ. ಮೈಸೂರು ಮಂಡ್ಯ ರಮೇಶ್ ಇವರ “ನಟನ” ರಂಗ ಶಾಲೆಯಲ್ಲಿ 2 ವರ್ಷ ವಿದ್ಯಾರ್ಥಿಯಾಗಿ, ಶ್ರೀ ಶಿವಕುಮಾರ ರಂಗ ಪ್ರಯೋಗ (ಸಾಣೀಹಳ್ಳಿ) ಶಾಲೆಯಲ್ಲಿ ಪದವೀಧರರು, ಶಿವ ಸಂಚಾರ ತಿರುಗಾಟ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಎಂ.ಎ. ಡ್ರಾಮಾ ಮಾಡಿರುತ್ತಾರೆ. ಕಳೆದ 9 ವರ್ಷಗಳಿಂದ ನಿರಂತರವಾಗಿ ರಂಗ ಭೂಮಿಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಬಿ.ಎಚ್.ಎನ್. ಶಾಲೆಯಲ್ಲಿ ಡ್ರಾಮಾ ಶಿಕ್ಷಕರಾಗಿ ಕೆಲಸ ಮಾಡಿರುವ ಅನುಭವವಿದೆ. ಪ್ರಸ್ತುತ ಖಾಸಗಿ ಕಂಪನಿಯಲ್ಲಿ ‘ಅಕೌಂಟ್’ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ ವರ್ಕ್ ಶಾಪ್ ಇನ್…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಹಲವು ಕಲಾವಿದರ ಸಾಲಿನಲ್ಲಿ ಸದ್ಯ ಮಿಂಚುತ್ತಿರುವ ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು. ತಂದೆ ಮೊಗೆಬೆಟ್ಟು ಹೆರಿಯ ನಾಯ್ಕ ಮೊದಲ ಪ್ರೇರಣೆ, . ಆ ನಂತರ ಇವರ ಮಾನಸಗುರು ಕಂದಾವರ ರಘುರಾಮ ಶೆಟ್ಟರ ಪ್ರಸಂಗಗಳು, ಕಂದಾವರರ ಚೆಲುವೆ ಚಿತ್ರಾವತಿ, ಬನಶಂಕರಿ ಯಕ್ಷಗಾನ ಪ್ರದರ್ಶನ ನೋಟ ಹಾಗೂ ಕಂದಾವರರ ಪದ್ಯ ರಚನೆಯ ಪ್ರಭಾವ; ಕಾಳಿಂಗ ನಾವಡರ ಪದ್ಯ ಹಾಗೂ ಪ್ರಸಂಗಗಳೂ ಪ್ರೇರಣೆ. ಹವ್ಯಾಸಿ ಯಕ್ಷಗಾನ ರಂಗಭೂಮಿಯಿಂದ ಬಂದವರು ಮೊಗೆಬೆಟ್ಟು ಚಿಕ್ಕಮ್ಮ ಹೈಗುಳಿ ಯಕ್ಷಗಾನ ಮಂಡಳಿಯ ಬಾಲಕಲಾವಿದನಾಗಿ 10 ನೆಯ ವಯಸ್ಸಿನಲ್ಲಿ ಬಬ್ರುವಾಹನನಾಗಿ ರಂಗ ಪ್ರವೇಶ ಮಾಡಿದೆ. ಆ ದಿವಸವೇ ಇವರ ವೇಷ ಮೆಚ್ಚಿ ಆಟ ನೋಡುತ್ತಿದ್ದ ಪಂಚಾಯತ್ ಅಧ್ಯಕ್ಷರು ಇವರಿಗೆ ಸನ್ಮಾನ ಮಾಡಿ ಗೌರವಿಸಿದರು. 1998 ರಲ್ಲಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಸಾಂಪ್ರದಾಯಿಕ…
ಮಂಗಳೂರು : ದ.ಕ. ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾದ್ಯ ಕಲಾವಿದರ ಸಂಘದ ವತಿಯಿಂದ ದಿನಾಂಕ 05-11-2023ರಂದು ಬೆಳಗ್ಗೆ 10.30ಕ್ಕೆ ನಗರದ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ‘ವಾದ್ಯ ಕಲಾ ಮೇಳ’ ಆಯೋಜಿಸಲಾಗಿದೆ. ಬೆಳಿಗ್ಗೆ 8.30ಕ್ಕೆ ಮಂಗಳ ಕ್ರೀಡಾಂಗಣದಿಂದ ಸಂಭ್ರಮದ ಮೆರವಣಿಗೆಯಲ್ಲಿ ಕಹಳೆ, ವಾದ್ಯಮೇಳ, ಡೋಲು, ಕೀಳು ಕುದುರೆ, ತಾಲೀಮು, ಕಂಗೀಲು, ಹುಲಿಕುಣಿತ, ಬ್ಯಾಂಡ್ ಸೆಟ್, ಚೆಂಡೆ ವಾದನ, ಆಕರ್ಷಕ ಮೆರವಣಿಗೆ, ತಾಸೆ ಮತ್ತು ಡೋಲುಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ವಿಧಾನಸಭೆ ಸಭಾಪತಿ ಶ್ರಿ ಯು.ಟಿ. ಖಾದರ್ ಮತ್ತು ಶ್ರೀ ಕ್ಷೇತ್ರ ಕಚ್ಚೂರಿನ ಧರ್ಮದರ್ಶಿ ಶ್ರೀ ಗೋಕುಲ್ ದಾಸ್ ಬಾರ್ಕೂರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರೆ, ಚಲನಚಿತ್ರ ನಿರ್ದೇಶಕ ಶ್ರೀ ರಾಜ್ ಬಿ. ಶೆಟ್ಟಿ ವಾದ್ಯ ಕಲಾ ಮೇಳ ಉದ್ಘಾಟಿಸಲಿದ್ದಾರೆ. ಕಟೀಲು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀ ಅನಂತ ಪದ್ಮನಾಭ ಆಸ್ರಣ್ಣ ಶುಭಹಾರೈಸಲಿದ್ದಾರೆ. ದ.ಕ. ಜಿಲ್ಲಾ ಸಂಸದ ಶ್ರೀ ನಳಿನ್ ಕುಮಾರ್ ಕಟೀಲು, ಶಾಸಕ ಶ್ರೀ…
ಮಡಿಕೇರಿ : ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದಿಂದ ‘ನಿಮ್ಮ ಪ್ರತಿಭೆ ನಮ್ಮ ವೇದಿಕೆ 2023’ ಕಾರ್ಯಕ್ರಮದಡಿ ಕನ್ನಡ ಹಬ್ಬ, ಸಮರ್ಥ ಕನ್ನಡಿಗರು ಗೌರವಾರ್ಪಣೆ, ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 05-11-2023ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಓಂಕಾರ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಈ ಬಾರಿ ಹತ್ತು ಮಂದಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಕಂಜರ್ಪಣೆ ಬಾಲಸುಬ್ರಹ್ಮಣ್ಯ ಉದ್ಘಾಟಿಸಲಿದ್ದಾರೆ. ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಶ್ರೀ ಲಿಂಗೇಶ್ ಹುಣಸೂರು, ಪ್ರಧಾನ ಸಂಚಾಲಕರಾದ ಶ್ರೀ ಆನಂದ್ ದಗ್ಗನಹಳ್ಳಿ, ಮುಂಬೈನ ಲೇಖಕಿ ಜಯಂತಿ ಸಿ.ರಾವ್, ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 10.45 ಘಂಟೆಗೆ ಛದ್ಮವೇಷ, ಸಮೂಹ ಗಾಯನ, ಸಮೂಹ ನೃತ್ಯ, ಚಿತ್ರಕಲೆ ಸ್ಪರ್ಧೆಗಳು, 1.30ಕ್ಕೆ ಪುಸ್ತಕ ಲೋಕಾರ್ಪಣೆ, 2-00 ಘಂಟೆಗೆ ಕವಿತೆ ಓದು ಮತ್ತು 3-00 ಘಂಟೆಗೆ ‘ಸಮರ್ಥ ಕನ್ನಡಿಗರು’ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸ್ಪರ್ಧೆಯ ವಿಜೇತರಿಗೆ…
ಮಂಗಳೂರು : ರಾಜ್ಯ ಸಾಹಿತ್ಯ ಚಿಗುರು ಬಳಗ ಮಂಗಳೂರು ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ದಿನಾಂಕ 05-11-2023ರಂದು ಏರ್ಪಡಿಸಲಾಗಿದೆ. ಇದರಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಥಮ ಬಹುಮಾನ ಚಿನ್ನದ ನಾಣ್ಯ, ದ್ವಿತೀಯ ಬಹುಮಾನವಾಗಿ ಬೆಳ್ಳಿಯ ಪದಕ, ತೃತೀಯ ಬಹುಮಾನವಾಗಿ ಬೆಳ್ಳಿಯ ನಾಣ್ಯದೊಂದಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಗುವುದು. ಮಾಹಿತಿಗಾಗಿ ನಿಯಾಜ್ ಪಡೀಲ್ (ಮೊಬೈಲ್ ಸಂಖ್ಯೆ 9740221152) ಅವರನ್ನು ಸಂಪರ್ಕಿಸಬಹುದು. ನಿಯಮಗಳು – 1. ಯಾವುದೇ ರೀತಿಯ ಪ್ರವೇಶ ಶುಲ್ಕವಿರುವುದಿಲ್ಲ. 2. ಸ್ಪರ್ಧೆಯ ಕವನದ ವಿಷಯವನ್ನು 04-11-2023ರ ಶನಿವಾರದಂದು ಸಂಜೆ 5:00 ಗಂಟೆಗೆ ನೀಡಲಾಗುವುದು. ಕವನವನ್ನು ದಿನಾಂಕ 05-11-2023ರ ಭಾನುವಾರದಂದು ಸಂಜೆ 5:00 ಗಂಟೆಯ ಒಳಗಾಗಿ 9740221152 ಈ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಡಬೇಕು. 3. ಕವನವು ನೀಡಲಾಗುವ ವಿಷಯಕ್ಕೆ ಸೂಕ್ತವಾಗಿದ್ದು 16 ಸಾಲುಗಳಿಗೆ ಸೀಮಿತವಾಗಿರಬೇಕು. 4. ಕವನದ ಲಕ್ಷಣಗಳನ್ನು ಒಳಗೊಂಡಿರಬೇಕು. 5. ಸ್ಪರ್ಧೆಯ ಸಮಯ ಮುಗಿದ ನಂತರ ಬಂದ ಕವನಗಳನ್ನು ಪರಿಗಣಿಸಲಾಗುವುದಿಲ್ಲ. 6. ಕವನದೊಂದಿಗೆ ತಮ್ಮ…
ಪೊಳಲಿ : ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಹತ್ತಿರ ಇರುವ ರಾಮಕೃಷ್ಣ ತಪೋವನದಲ್ಲಿ ದಿನಾಂಕ 04-11-2023ರಿಂದ 10-11-2023ರವರೆಗೆ ಪ್ರತಿದಿನ ಸಂಜೆ 6.30ರಿಂದ ‘ಹರಿಕಥಾ ಸಪ್ತಾಹ’ವು ಜರುಗಲಿರುವುದು. ದಿನಾಂಕ 04-11-2023ರಂದು ‘ಪಾಶುಪತಾ ಪ್ರಧಾನ’ ಎಂಬ ಕಥಾನಕವನ್ನು ದೇವಕಿತನಯ ಕೂಡ್ಲು (ಶ್ರೀ ಮಹಾಬಲ ಶೆಟ್ಟಿ), ದಿನಾಂಕ 05-11-2023ರಂದು ‘ಶ್ರೀ ಕೃಷ್ಣ ಕಾರುಣ್ಯ’ ಎಂಬ ಕಥಾನಕವನ್ನು ಆಕಾಶ ವಾಣಿ ಕಲಾವಿದೆ ಶ್ರೀಮತಿ ಮಂಜುಳಾ ಜಿ. ರಾವ್, ದಿನಾಂಕ 06-11-2023ರಂದು ‘ಭಕ್ತ ಸುಧಾಮ’ ಎಂಬ ಕಥಾನಕವನ್ನು ಹರಿದಾಸ್ ಶ್ರೀ ಜಗದೀಶ್ ದಾಸ್ ಪೊಳಲಿ, ದಿನಾಂಕ 07-11-2023ರಂದು ‘ಹರಿಶ್ಚಂದ್ರ’ ಎಂಬ ಕಥಾನಕವನ್ನು ಕಥಾಕೀರ್ತನೆ ಕೋವಿದ ಸಿರಿವಿಠಲಾಂಕಿತ ಈಶ್ವರದಾಸ್ ಕೊಪ್ಪೇಸರ, ದಿನಾಂಕ 08-11-2023ರಂದು ‘ಶ್ರೀ ರಾಮಕೃಷ್ಣ ಅವತಾರ ಲೀಲೆ’ ಎಂಬ ಕಥಾನಕವನ್ನು ಡಾ. ಎಸ್.ಪಿ. ಗುರುದಾಸ್, ದಿನಾಂಕ 09-11-2023ರಂದು ‘ಗಿರಿಜಾ ಕಲ್ಯಾಣ’ ಎಂಬ ಕಥಾನಕವನ್ನು ಶ್ರದ್ಧಾ ಭಟ್ ನಾಯರ್ಪಳ್ಳ ಅಲಮ ಮತ್ತು ದಿನಾಂಕ 10-11-2023ರಂದು ‘ಸತೀ ಸಾವಿತ್ರಿ’ ಎಂಬ ಕಥಾನಕವನ್ನು ಕಲಾ ವಾರಿಧಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್ ನಡೆಸಿಕೊಡಲಿರುವರು. ರಾಮಕೃಷ್ಣ…
ಮಂಗಳೂರು : ಸುರತ್ಕಲ್ ಯಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರಿನ ತುಳು ಪರಿಷತ್, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಂಗಳೂರಿನ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯದ ಕನ್ನಡ ಸಂಘ, ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ 26-10-2023ರಂದು ಮಂಗಳೂರಿನ ರೋಶನಿ ನಿಲಯದ ಮರಿಯಾ ಪೈವಾ ಸಭಾಂಗಣದಲ್ಲಿ ಇಂದಿರಾ ಹೆಗ್ಗಡೆ ಅವರ ಸಾಹಿತ್ಯಾವಲೋಕನ ‘ನೆಲ ಮೂಲದ ನಡೆ : ಶೋಧ-ಸ್ವಾದ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದಿರಾ ಹೆಗ್ಗಡೆ ಅವರ ‘ಅತಿಕಾರೆ’ ಕೃತಿ ಬಿಡುಗಡೆ ಮಾಡಿದ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ದೇವರಕೊಂಡಾ ರೆಡ್ಡಿರವರು ಮಾತನಾಡುತ್ತಾ “ಹಲವು ಕಡೆಗಳ ಸಾಂಸ್ಕೃತಿಕ ಪ್ರಭಾವ ಆಗಿದ್ದರೂ ತುಳುವರು ಮತ್ತು ತುಳು ಸಂಸ್ಕೃತಿ ನಲುಗಲಿಲ್ಲ. ಇದು ಈ ನೆಲದ ವಿಶಿಷ್ಟ ಗುಣವಾಗಿದ್ದು ಸಾಂಸ್ಕೃತಿಕ ಅಧ್ಯಯನದಲ್ಲಿ ಮಹತ್ವ ಗಳಿಸಿದೆ. ತುಳುನಾಡಿನ ಬಗ್ಗೆ ಬಯಲು ಸೀಮೆಯವರ ಕಲ್ಪನೆಯೇ ವಿಭಿನ್ನ. ಇಲ್ಲಿನವರು ಹೋಟೆಲ್ ಉದ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಎಂದಷ್ಟೇ ಅನೇಕರು…
ವಿಜಯಪುರ : ದಿನಾಂಕ 28-10-2023 ಶನಿವಾರ ಶೀಗೀ ಹುಣ್ಣಿಮೆಯಂದು ನಗರದ ಶ್ರೀ ಕುಮಾರವ್ಯಾಸ ಭಾರತ ಭವನದಲ್ಲಿ ‘ವಾಲ್ಮೀಕಿ ಜಯಂತಿ’ ನೆರವೇರಿಸಲಾಯಿತು. ಈ ಸಮಾರಂಭವನ್ನು ಶ್ರೀಮತಿ ಸುಲಭಾ ಮೋಹನರಾವ್ ಕುಲಕರ್ಣಿಯವರು ದೀಪ ಬೆಳಗಿಸಿ ಉದ್ಘಾಟಿಸಿ “ರತ್ನಾಕರನೆಂಬ ಹೆಸರಿನ ಬೇಡನು ಮಹಾನ್ ಕವಿ ವಾಲ್ಮೀಕಿಯಾದ ಬಗೆ ರೋಮಾಂಚಕವಾದುದು. ಕವಿ ವಾಲ್ಮೀಕಿಗಳು ರಚಿಸಿದ ರಾಮಾಯಣವು ಲೋಕವಂದ್ಯವಾದುದು. ರಾಮಾಯಣ ಮಹಾಕಾವ್ಯದಲ್ಲಿ ರಾಮನು ಹೇಳಿದ ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಮಾತು ಭಾರತೀಯರಿಗೆ ದೇಶಭಕ್ತಿ ಮೂಡಿಸುವಲ್ಲಿ ವೇದ ವಾಕ್ಯವಾಗಿದೆ. ಕುಮಾರವ್ಯಾಸ ಭಾರತ ವೇದಿಕೆಯಿಂದ ಮೇಲಿಂದ ಮೇಲೆ ಗಮಕ ಕಾರ್ಯಕ್ರಮಗಳು ಜರುಗುತ್ತಿರುವುದು. ವಿಜಯರಪುರ ನಗರಕ್ಕೆ ಶೋಭೆ ತಂದಿದೆ” ಎಂದರು. ಆಮೇಲೆ ಮುಖ್ಯ ಅತಿಥಿಗಳಾದ ಶ್ರೀಮತಿ ಸುಲಭಾ ಕುಲಕರ್ಣಿ ಹಾಗೂ ಮೋಹನ್ ಕುಲಕರ್ಣಿ ದಂಪತಿಗಳನ್ನು ಶಾಲು ಹೊದಿಸಿ, ಫಲಪಷ್ಟ ನೀಡಿ ಸನ್ಮಾನಿಸಲಾಯಿತು. ನಂತರ ನಡೆದ ಕುಮಾರ ವಾಲ್ಮೀಕಿಗಳ ತೊರವೆ ರಾಮಾಯಣದ ಗಮಕ ಕಾರ್ಯಕ್ರಮವು ಸಭಿಕರನ್ನು ರಾಮಾಯಣ ಲೋಕಕ್ಕೆ ಕರೆದೊಯ್ಯಿತು. ಗಮಕ ವಿದುಷಿ ಶಾಂತಾ ಕೌತಾಳ ಹಾಗೂ ಕಲ್ಯಾಣರಾವ್ ಇವರುಗಳು ಸುಂದರಕಾಂಡದ…
ಕಟೀಲು : ಇಲ್ಲಿನ ಸಮೀಪದ ಜುಮಾದಿಗುಡ್ಡೆ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಾನಿಧ್ಯವೃದ್ಧಿಗೆ ಭಜನಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ 29-10-2023ರಂದು ನಡೆಯಿತು. ಕಟೀಲು ಶ್ರೀ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ದೀಪ ಬೆಳಗಿಸಿ ಆಶೀರ್ವಚನ ನೀಡಿ, “ಧಾರ್ಮಿಕ ಕಾರ್ಯಕ್ರಮಗಳಿಂದ ಎಳೆಯ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿ ಬೆಳೆಯುವುದರ ಜೊತೆಗೆ ಗ್ರಾಮದ ಅಭಿವೃದ್ಧಿಯೂ ಸಾಧ್ಯ” ಎಂದರು. ದೇವಸ್ಥಾನದ ಅರ್ಚಕರಾದ ರಾಜ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಯಕ್ಷಗಾನ, ತಾಳಮದ್ದಳೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಸೀತಾರಾಮ ಶೆಟ್ಟಿ ಸುರಗಿರಿ, ಕೊಡೆತ್ತೂರು ಅರಸು ಕುಂಜುರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಪ್ರೇಮ್ ರಾಜ್ ಶೆಟ್ಟಿ, ಸಂಜೀವ ಮಡಿವಾಳ, ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಸಂಘಟಕ ಯಕ್ಷಗಾನ ಕಲಾವಿದ ಸೀತಾರಾಮ್ ಕುಮಾರ್ ಕಟೀಲು ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ಯ ಅವರು ಕಾರ್ಯಕ್ರಮವನ್ನು…
ಉಡುಪಿ : ಎಂ.ಜಿ.ಎಂ. ಪದವಿ ಕಾಲೇಜಿನ ಅಮೃತ ಮಹೋತ್ಸವದ ಅಂಗವಾಗಿ ಕಾಲೇಜಿನ ‘ಕನ್ನಡ ಸಾಹಿತ್ಯ ಸಂಘ’ವು, ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ – ಉಡುಪಿ ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಒಂದು ದಿನದ ‘ಕಥಾ ಕಮ್ಮಟ’ವನ್ನು ಹಮ್ಮಿಕೊಂಡಿದೆ. ಕಥಾಕಮ್ಮಟದಲ್ಲಿ ಹೆಸರಾಂತ ಹಿರಿಯ ಕತೆಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಕತೆ ಬರೆಯಲು ಮಾರ್ಗದರ್ಶನ ನೀಡಲಿದ್ದಾರೆ. ಕಥಾಕಮ್ಮಟವು ದಿನಾಂಕ 17-11-2023 ಶುಕ್ರವಾರ ನಡೆಯಲಿದೆ. ಉಡುಪಿ ಜಿಲ್ಲೆಯ ಕಾಲೇಜುಗಳಿಂದ ಕತೆ ಬರೆಯುವ ಆಸಕ್ತಿಯಿರುವ ವಿದ್ಯಾರ್ಥಿಗಳು ಹೆಸರನ್ನು ದಿನಾಂಕ 10-11-2023ರ ಒಳಗೆ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಎಂ.ಜಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪುತ್ತಿ ವಸಂತ ಕುಮಾರ್ 9449332242 ಅಥವಾ ಕ.ಸಾ.ಪ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ರವಿರಾಜ ಎಚ್.ಪಿ. 9845240309 ಇವರನ್ನು ಸಂಪರ್ಕಿಸಬಹುದು.