Subscribe to Updates
Get the latest creative news from FooBar about art, design and business.
Author: roovari
ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಕ್ಷೇಮ ಹಾಲ್ ನಲ್ಲಿ ದಿನಾಂಕ 31 ಜುಲೈ 2025 ಗುರುವಾರ ‘ಶರಸೇತು ಬಂಧ’ ಎಂಬ ಮಹಾಭಾರತದಿಂದ ಆಯ್ದ ಭಾಗದ ಯಕ್ಷಗಾನ ತಾಳಮದ್ದಳೆಯು ಪ್ರಸಿದ್ಧ ಮೇರು ಕಲಾವಿದರ ಕೂಡುವಿಕೆಯಿಂದ ಜರುಗಿತು. ಹನುಮಗಿರಿ ಮೇಳದ ಯುವ ಪ್ರಸಿದ್ಧ ಭಾಗವತರಾದ ಚಿನ್ಮಯ ಭಟ್ ಇವರ ಹಾಡುಗಾರಿಕೆ, ಚೆಂಡೆವಾದನದಲ್ಲಿ ಎತ್ತಿದ ಕೈ ಸೀತಾರಾಮ ತೋಳ್ವಾಡಿತ್ತಾಯ, ಮೃದಂಗದಲ್ಲಿ ಜನಾರ್ದನ ತೋಳ್ವಾಡಿತ್ತಾಯರವರು ಹಿಮ್ಮೇಳ ವಾದಕರಾಗಿದ್ದರು. ಅರ್ಜುನನ ಪಾತ್ರದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಹನುಮಂತನಾಗಿ ಜಬ್ಬಾರ್ ಸಮೋ ಸಂಪಾಜೆ ಹಾಗೂ ಶ್ರೀ ಕೃಷ್ಣನ ಪಾತ್ರದಲ್ಲಿ ಪವನ್ ಕಿರಣ್ ಕೆರೆಯವರು ತಮ್ಮ ನಿರರ್ಗಳ ಅರ್ಥಗರ್ಭಿತ ಮಾತುಗಳಿಂದ ನೆರೆದ ಸಭಿಕರನ್ನು ಭಾವಪರವಶೆಯ ಮಾಯಾಲೋಕಕ್ಕೆ ಕೊಂಡೊಯ್ದರು. ಸೌಖ್ಯವನದಲ್ಲಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ನಿರಂತರ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಇದರ ಪ್ರಾಯೋಜಕತ್ವವನ್ನು ಉಡುಪಿಯ ಖ್ಯಾತ ಕಾಂಟ್ರಾಕ್ಟರ್ದಾರರಾದ ಶ್ರೀ ನಂದಕುಮಾರ್ ಇವರು ವಹಿಸಿರುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಕಲಾವಿದರನ್ನು ಗೌರವಪೂರ್ವಕವಾಗಿ ಶ್ರೀ…
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 134’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಉಡುಪಿಯ ಡಾ. ಮಂಜರಿಚಂದ್ರ ಪುಷ್ಪರಾಜ್ ಇವರ ಶಿಷ್ಯೆ ಸಾಯಿ ಅನ್ನಪೂರ್ಣೆ ಸುಧಾಕರ್ ಇವರು ನೃತ್ಯ ಪ್ರದರ್ಶನ ನೀಡಲಿದ್ದು, ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ಹಾಗೂ ಭರತನಾಟ್ಯ ಕಲಾವಿದೆ ವಿ. ಸುಶ್ಮಿತಾ ಯತೀಶ್ ಆಚಾರ್ಯ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.
ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿವಿಧ ಚಟುವಟಿಕೆಗಳ ಮುನ್ನುಡಿಯಾಗಿ ಕಲಾ ಸಂಘದ ಉದ್ಘಾಟನಾ ಸಮಾರಂಭ ದಿನಾಂಕ 06 ಆಗಸ್ಟ್ 2026ರಂದು ವೈದೇಹಿ ಸಭಾಂಗಣದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅನಿತಾ ಕಾಮತ್ ಕೆ. ಮಾತನಾಡಿ “ಕಲಾವಿಭಾಗ ಎಂಬುದು ಇತಿಹಾಸ, ಪರಂಪರೆ, ಸಂಸ್ಕೃತಿ, ದೇಶದ ಆರ್ಥಿಕ ಪರಿಸ್ಥಿತಿ, ವ್ಯವಹಾರ, ಅಭಿವೃದ್ಧಿ, ರಾಜಕೀಯ ವ್ಯವಸ್ಥೆಗಳು, ಸಮಾಜದ ಬಾಂಧವ್ಯ ಮುಂತಾದ ವೈವಿಧ್ಯಮಯ ವಿಷಯಗಳ ಸಾಗರ. ಕಲೆಯಿಂದ ಸೃಜನಶೀಲತೆ ಬೆಳೆಯುತ್ತದೆ. ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಪ್ರತಿಭೆಗಳು ಅಡಗಿವೆ. ಅವುಗಳ ಅನಾವರಣವಾಗಬೇಕಾದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಹಿಂಜರಿಯದೆ, ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡು ಹೆಜ್ಜೆಯನ್ನು ಮುಂದಿಡಬೇಕು. ವಿದ್ಯಾರ್ಥಿಗಳಲ್ಲಿ ಮಾನವಿಕ ಮೌಲ್ಯಗಳ ಬೆಳವಣಿಗೆ, ಇತರರ ಭಾವನೆಗೆ ಸ್ಪಂದಿಸುವ ಮನಸ್ಸು ಇರಬೇಕು” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ. ಎಂ. ವಹಿಸಿಕೊಂಡರು. ವೇದಿಕೆಯಲ್ಲಿ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ಹಾಗೂ ಕಲಾ ಸಂಘದ ಅಧ್ಯಕ್ಷರಾದ ಅನೂಪ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ…
ಮುಡಿಪು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಅಂಬ್ಲಮೊಗರು ಸರಕಾರಿ ಪ್ರೌಢಶಾಲೆಯ ಸಹಯೋಗದೊಂದಿಗೆ ಏರ್ಪಡಿಸಿದ ‘ಕನ್ನಡ ನವೋದಯ ಸಂಭ್ರಮ’ ಕಾರ್ಯಕ್ರಮವು ದಿನಾಂಕ 05 ಆಗಸ್ಟ್ 2025ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಡಾ. ವಿಶ್ವನಾಥ ಎನ್. ನೇರಳೆಕಟ್ಟೆ ಮಾತನಾಡಿ “ಕುವೆಂಪು ಮತ್ತು ಬೇಂದ್ರೆ ಕನ್ನಡ ನವೋದಯ ಕಾಲದ ಎರಡು ಕಣ್ಣುಗಳಿದ್ದಂತೆ. ಕವಿಗಳಾಗಿ ಅವರಿಬ್ಬರೂ ಎಷ್ಟು ದೊಡ್ಡವರೋ ಬದುಕಿನಲ್ಲಿ ಕೂಡ ಪ್ರಕೃತಿ ಪ್ರೀತಿ, ನಾಡು ನುಡಿಯ ಅಭಿಮಾನ, ವಿಶ್ವ ಸೋದರತೆಯ ಭಾವನೆಯನ್ನು ಹೊಂದಿ ಗೌರವಾರ್ಹರಾಗಿದ್ದಾರೆ. ಕನ್ನಡ ನವೋದಯ ಕಾಲದ ಬರಹಗಾರರು ಬದುಕು ಬರಹದ ನಡುವೆ ಸಾಂಗತ್ಯ ಇರಬೇಕು ಎಂದು ಪ್ರತಿಪಾದಿಸಿದ್ದಾರೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕ. ಸಾ. ಪ. ಉಳ್ಳಾಲ ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಭಾವನೆಗಳಿಲ್ಲದೇ ಮನುಷ್ಯ ಬದುಕಲಾರ. ಪ್ರಕೃತಿಯ ಜೊತೆಗಿನ ಒಡನಾಟದಿಂದ ಮನುಷ್ಯ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬಲ್ಲ. ನಮ್ಮ ಸುತ್ತಲಿನ ಮನುಷ್ಯರನ್ನು ಪ್ರೀತಿಸುತ್ತಾ ಗೌರವಿಸುತ್ತಾ ಸಹಭಾವದ ಬದುಕನ್ನು ಹೊಂದುವುದೇ ಬಾಳಿನ…
ಬೆಂಗಳೂರು : ಶ್ರೀ ಮುರಳಿಧರ ಸಂಗೀತ ನೃತ್ಯ ಮಹಾವಿದ್ಯಾಲಯ (ರಿ.) ಮೋಹನ ತರಂಗಿಣಿ ಸಂಗೀತ ಸಭಾ (ಕಲಾಪೋಷಕ ಪ್ರಶಸ್ತಿ ಪುರಸ್ಕೃತ ಸಂಸ್ಥೆ) ಹಾಗೂ ಪಲ್ಲವಿ ಗಾನಸಭಾ (ಲ.), ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ‘ಪಲ್ಲವಿ ಕಾರ್ಯಾಗಾರ’ವು ದಿನಾಂಕ 10 ಆಗಸ್ಟ್ 2025ರ ಭಾನುವಾರದಿಂದ ದಿನಾಂಕ 28 ಸೆಪ್ಟೆಂಬರ್2025ರ ಭಾನುವಾರದವರೆಗೆ ಎಂಟು ವಾರಗಳು ಭಾನುವಾರ (ಬೆಳಗ್ಗೆ ಘಂಟೆ 10 ರಿಂದ 12:30 ರವರೆಗೆ) ನಡೆಯಲಿದೆ. ಕೀರ್ತಿಶೇಷ ಲಯಯೋಗಿ ಪೂಜ್ಯ ವಿದ್ವಾನ್ ಶ್ರೀ ಪಲ್ಲವಿ ಎಸ್. ಚಂದ್ರಪ್ಪ ಇವರ ಸ್ಮರಣಾರ್ಥ ಆಯೋಜಿಸುವ ಈ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2025 ರಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಬಳ್ಳಾರಿ ಇಲ್ಲಿನ ಕುಲಪತಿಗಳಾದ ಡಾ. ಪ್ರೊ. ಎಂ. ಮುನಿರಾಜು ಉದ್ಘಾಟಿಸಲಿದ್ದು, ಪಲ್ಲವಿ ಗಾನಸಭಾ (ರಿ.) ಬೆಂಗಳೂರು ಇದರ ಅಧ್ಯಕ್ಷರಾದಕ ಗುರು ನಾದಬ್ರಹ್ಮ ವಿದ್ವಾನ್ ಶ್ರೀ ಪಲ್ಲವಿ ಸಿ. ವರದರಾಜ, ಮೋಹನ ತರಂಗಿಣಿ ಸಂಗೀತ ಸಭಾ ಬೆಂಗಳೂರು ಇದರ ಕಾರ್ಯದರ್ಶಿಗಳಾದ ಶ್ರೀಮತಿ ಲಕ್ಷ್ಮೀದೇವಿ ಮೋಹನಕುಮಾರ ಉಪಸ್ಥಿತರಿರುವರು. ಈ…
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಮಹರ್ಷಿ ವಾಲ್ಮೀಕಿ ವಸತಿ ಶಾಲೆ ಕದ್ರಿ ಮಂಗಳೂರು ಜಂಟಿ ಆಶ್ರಯದಲ್ಲಿ 112ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ದಿನಾಂಕ 9 ಆಗಸ್ಟ್ 2025ರ ಶನಿವಾರ ಮಹರ್ಷಿ ವಾಲ್ಮೀಕಿ ಸಭಾಂಗಣದಲ್ಲಿ ಬೆಳಿಗ್ಗೆ 10:30 ಕ್ಕೆ ನಡೆಯಲಿದೆ. ಸಾಹಿತ್ಯ ಅಭಿರುಚಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹರ್ಷಿ ವಾಲ್ಮೀಕಿ ವಸತಿ ಶಾಲೆ ಇಲ್ಲಿನ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನೀತಾ ವಹಿಸಲಿದ್ದು, ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಕರಾವಳಿ ಡೈಲಿ ನ್ಯೂಸ್ ಇದರ ಚೀಪ್ ಎಡಿಟರ್ ಆಗಿರುವ ಮಹೇಶ್ ಕನ್ನೇಶ್ವರ, ಹಿರಿಯ ಬರಹಗಾರರಾದ ಸುಬ್ರಾಯ ಭಟ್, ದೂರದರ್ಶನ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರರಾದ ರಾಜೇಶ್ ದಡ್ಡಂಗಡಿ, ಲೇಖಕಿ ನಿರ್ಮಲ ಉದಯಕುಮಾರ್ ಭಾಗವಹಿಸಲಿರುವರು. ಕಾರ್ಯಕ್ರಮದ ನಿರೂಪಣೆಯನ್ನು ಸುರೇಖಾ ಯಾಳವಾರ ಮಾಡಲಿರುವರು ಎಂದು ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ತಿಳಿಸಿದ್ದಾರೆ.
ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಇದರ ರಂಗ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸುವ ‘ಮಾನ್ಸೂನ್ ರಂಗೋತ್ಸವ -2’ ದಿನಾಂಕ 09 ಮತ್ತು 10 ಆಗಸ್ಟ್ 2025ರಂದು ಸಂಜೆ ಗಂಟೆ 6-44ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 09 ಆಗಸ್ಟ್ 2025ರಂದು ಮಹೇಶ್ ದತ್ತಾನಿ ಇವರ ನಿರ್ದೇಶನದಲ್ಲಿ ‘ಯೋಗಿ ಮತ್ತು ಭೋಗಿ’ ನಾಟಕ ಪ್ರದರ್ಶನ ಹಾಗೂ ದಿನಾಂಕ 10 ಆಗಸ್ಟ್ 2025ರಂದು ತ್ರಿಶಾ ಶೆಟ್ಟಿ, ಕೃತಿಕಾ ವರ್ಮ, ಫೈಜಲ್ ಅಹ್ಮದ್, ಭವ್ಯ ಭಾರಧ್ವಾಜ್, ಸೌಮ್ಯ ಝಕಾರಿಯಾ, ಅಭಿನವ್ ಗ್ರೋವರ್ ಇವರ ನಿರ್ದೇಶನದಲ್ಲಿ ಮೂರು ಕಿರು ನಾಟಕಗಳು ಪ್ರದರ್ಶನಗೊಳ್ಳಲಿವೆ. ಎರಡೂ ದಿನ ಉಚಿತ ಪ್ರವೇಶವಾಗಿದ್ದು, ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ, ನಾಟಕ ಸರಿಯಾದ ಸಮಯಕ್ಕೆ ಪ್ರಾರಂಭವಾಗುತ್ತದೆ.
ಮಂಜೇಶ್ವರ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ವಿಭಾಗ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಮಂಜೇಶ್ವರ ಇವರ ಸಹಭಾಗಿತ್ವದಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಸಂಸ್ಮರಣೆ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರಂದು ಪೂರ್ವಾಹ್ನ 10-00 ಗಂಟೆಗೆ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಶಂಕರ ಪಿ. ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೊಹಮದ್ ಅಲಿ ಕೆ. ಇವರು ಉದ್ಘಾಟನೆ ಮಾಡಲಿದ್ದು, ಅಧೀಕ್ಷಕರಾದ ದಿನೇಶ ಕೆ. ಇವರು ಶುಭಾಶಂಸನೆಗೈಯ್ಯಲಿದ್ದಾರೆ. ಕುಮಾರಿ ದೀಕ್ಷಿತ ಇವರ ‘ಧ್ವನಿ’ ಕೃತಿ ಬಿಡುಗಡೆಗೊಳ್ಳಲಿದ್ದು, ಕೃತಿಯ ಪರಿಚಯವನ್ನು ನಿವೃತ್ತ ಮುಖ್ಯೋಪಾಧ್ಯಯರಾದ ರಾಜಾರಾಮ ರಾವ್…
ಮೂಡುಬಿದಿರೆ : ಇಂಟರ್ ನ್ಯಾಶನಲ್ ಸರ್ಕ್ಯೂಟ್ 2025ರ ಅಂತಾರಾಷ್ಟ್ರೀಯ ಸೆಲೂನ್ 3-ಫೋಟೋ ಜರ್ನಲಿಸಂ ವಿಭಾಗದಲ್ಲಿ ಡಿಜಿ ಕ್ಲಬ್ ಗೋಲ್ಡ್ ಪ್ರಶಸ್ತಿಗೆ ಛಾಯಾಗ್ರಾಹಕ ರವಿ ಕೋಟ್ಯಾನ್ ಅವರು ಪಾತ್ರರಾಗಿದ್ದಾರೆ. ಮೂಡುಬಿದಿರೆಯಲ್ಲಿ ಸುಮಾರು 3 ದಶಕಗಳ ಕಾಲ ಫೋಟೋಗ್ರಫಿಯಲ್ಲಿ ಕಾರ್ಯನಿರ್ವಹಿಸಿದ ಮಾನಸ ಡಿಜಿಟಲ್ನ ರವಿ ಕೋಟ್ಯಾನ್ರಿಗೆ ಈ ಬಾರಿ ಅಂತರ್ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿದೆ. ವೇಣೂರು ಮಸ್ತಕಾಭಿಷೇಕ-2024ರ ಛಾಯಾಚಿತ್ರಕ್ಕಾಗಿ ಕ್ರೆಡೆನ್ಸ್: ಆಳ್ವಾಸ್ ಸಂಘಟಿಸಿದ ಸ್ಪೀಪಲ್ ಚೇಸ್ ವಾಟರ್ ಜಂಪ್ ಫೋಟೋ ಸಲ್ಲಿಕೆಗಾಗಿ ಕಲ್ಕಿ 2025 (ಡಿಜಿಟಲ್)ರ ಜ್ಯುಪಿಟರ್ ಸೊಸೈಟಿ ಆಫ್ ಫೋಟೋ ಗ್ರಫಿ (ಜೆ. ಎಸ್. ಸಿ. ಇಂಡಿಯಾ) ಮೆಡಲ್, ಡಿಜಿಟಲ್ ವಿಭಾಗದಲ್ಲಿ ಸಲ್ಲಿಸಿದ ಪ್ರಕೃತಿ ಚಿತ್ರಕ್ಕಾಗಿ ಹ್ಯಾಪ್ ಇಂಟರ್ ನ್ಯಾಶನಲ್ ಸ್ಯಾಲೊನ್ 2025. ಎಫ್. ಐ. ಪಿ. ರಿಬ್ಬನ್ ಮನ್ನಣೆ, ಆಳ್ವಾಸ್ನಲ್ಲಿ ನಡೆದ ಹರ್ಡಲ್ಸ್ನ ಚಿತ್ರ ಸಲ್ಲಿಕೆಗಾಗಿ ಜ್ಯೂರಿ ಚಾಯ್ಸ್-ಕಲ್ಕಿ 2025 ಡಿಜಿಟಲ್ನ ಜೆ. ಎಸ್. ಪಿ. ವರ್ಲ್ಡ್ ವೈಡ್ ಗೌರವ ಮನ್ನಣೆ, ಕ್ರಿಯೇಟಿವ್ ಐಸ್ ಇಂಟರ್ ನ್ಯಾಶನಲ್-ಸರ್ಕ್ಯೂಟ್ 2025…
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರವು ದಿನಾಂಕ 16, 17, 23 ಮತ್ತು 24 ಆಗಸ್ಟ್ 2025ರಂದು ಸಂಜೆ 7-00 ಗಂಟೆಯಿಂದ 8-15 ರವೆರೆಗೆ ಆನ್ ಲೈನ್ ನಲ್ಲಿ ನಡೆಯಲಿದೆ. ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಇವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಮತ್ತುಸ್ವಾಮಿ ದೀಕ್ಷಿತರ್ ಅಪರೂಪದ ಸಂಯೋಜನೆಯನ್ನು ಕಲಿಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ ವಿಭು ರಾವ್ 74119 16098 ಸಂಖ್ಯೆಯನ್ನು ಸಂಪರ್ಕಿಸಿರಿ.