Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯು ಪರಿಷತ್ತಿನ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 17 ಫೆಬ್ರವರಿ 2025ರಂದು ನಡೆಯಿತು. ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆಯನ್ನು ಆಚರಿಸುವ ಕುರಿತು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳು ತಾಲೂಕು ಅಧ್ಯಕ್ಷರು ಮತ್ತು ಹೋಬಳಿ ಅಧ್ಯಕ್ಷರುಗಳಿಗೆ ಜವಾಬ್ದಾರಿ ಹಂಚಿದ್ದು, ಸ್ವಾಗತ ಸಮಿತಿ, ಆಹಾರ ಸಮಿತಿ, ಸನ್ಮಾನ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಪದ್ಮನಾಭ ಸದಸ್ಯರುಗಳಾಗಿ ಮಂಜುನಾಥ ಎ.ವಿ., ಎಸ್.ಎಸ್. ಸಂಪತ್ ಕುಮಾರ್, ಕೆ.ಟಿ. ಬೇಬಿ ಮ್ಯಾಥ್ಯೂ, ಕೋಳೆರ ದಯಾ ಚಂಗಪ್ಪ, ಕೆ.ಎಸ್. ನಾಗೇಶ್, ಕುಲ್ಲಚಂಡ ಪ್ರಮೋದ್ ಗಣಪತಿ, ಉಳುವಂಗಡ ಕಾವೇರಿ ಉದಯ, ವಿ.ಟಿ. ಮಂಜುನಾಥ್ ಇವರಿಗೆ ಜವಾಬ್ದಾರಿ ವಹಿಸಲಾಯಿತು. ವೇದಿಕೆ ಸಮಿತಿ ಅಧ್ಯಕ್ಷರಾಗಿ ಅಂಬೆಕಲ್ ನವೀನ್ ಸದಸ್ಯರುಗಳಾಗಿ ಎಸ್.ಡಿ. ವಿಜೇತ್, ಸುನಿಲ್ ಪತ್ರವೋ, ನಂಗಾರು ಕೀರ್ತಿ ಪ್ರಸಾದ್, ಈರಮಂಡ ಹರಿಣಿ ವಿಜಯ್, ಪಿ.ಎಫ್. ಸಭಾಸ್ಟಿನ್, ಬಿ.ಬಿ.…
ಬೆಂಗಳೂರು : ರಂಗ ಮಂಡಲ ಬೆಂಗಳೂರು, ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಕಲಾನಿಕೇತನ ಮತ್ತು ಸಾಮಾಜಿಕ ಸಾಂಸ್ಕೃತಿಕ ಸಂಘಟನೆ ರಂಗ ಚಂದಿರ (ರಿ.) ಜಂಟಿಯಾಗಿ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ಎಂಟನೇ ಕವಿಗೋಷ್ಠಿ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಹೀಗೆ ಜನರೆಡೆಗೆ ಕಾವ್ಯ ಕೊಂಡುಹೋಗುವ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ರಾಜಧಾನಿ ಬೆಂಗಳೂರಿನಿಂದ ಸ್ವರ್ಗ ಸದೃಶ ನಾಡು ಕೊಡಗು ಜಿಲ್ಲೆಯ ಕಡೆಗೆ ‘ಕಾವ್ಯ ದೀವಟಿಗೆಯ ಪಯಣ’ ದಿನಾಂಕ 22 ಫೆಬ್ರವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನ ರವೀಂದ್ರ ಕಲಾಕ್ಷೇತ್ರದ ಆವರಣದ ನಯನ ಸಭಾಂಗಣದಲ್ಲಿ ನಡೆಯಲಿದೆ. ಬೆಂಗಳೂರು ಗೋಷ್ಠಿಯ ಅಧ್ಯಕ್ಷತೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಡಾ. ಸತ್ಯಮಂಗಲ ಮಹಾದೇವ ಇವರು ವಹಿಸಲಿದ್ದು, ಉದ್ಘಾಟಕರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜು ಭಾಗವಹಿಸಲಿದ್ದಾರೆ. ವಿಜಯಲಕ್ಷ್ಮಿ ಸತ್ಯಮೂರ್ತಿ, ನಂರುಶಿ, ಚಿತ್ತಣ್ಣ ಪಿ., ಭಾರತಮ್ಮ ಎ., ಸುಜಾತ ಎನ್.,…
ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 16 ಫೆಬ್ರವರಿ 2025ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ “ಜನರಿಗೆ ಸಂಸ್ಕೃತಿ, ಸಂಸ್ಕಾರವನ್ನು ಕಳುಹಿಸಿಕೊಡುವ ಕಲೆ ಎಂದರೆ ಅದು ಯಕ್ಷಗಾನ. ಹಳ್ಳಿ ಜನರಿಗೆ ರಾಮಾಯಣ, ಮಹಾಭಾರತ ಕಳುಹಿಸಿಕೊಟ್ಟಿರುವುದೇ ಈ ಯಕ್ಷಗಾನ. ಯಕ್ಷಗಾನ ಇಂದು ವಿಶ್ವಗಾನವಾಗಲು ನೆರವಾದ ಡಾ. ಕಾರಂತರು ಸೇರಿದಂತೆ ಕಲಾವಿದರನ್ನು ಇಲ್ಲಿ ನೆನಪಿಸಲೇಬೇಕು. ಡಾ. ತಲ್ಲೂರು ಅಧ್ಯಕ್ಷತೆಯಲ್ಲಿ ಯಕ್ಷಗಾನ ಅಕಾಡೆಮಿ ಇಂದು ಉತ್ತಮ ಕಾರ್ಯ ಮಾಡುತ್ತಿದೆ. ಯಕ್ಷಗಾನದ ವೇಷಭೂಷಣಗಳು, ಹಿರಿಯ ಕಲಾವಿದರ ಬಗ್ಗೆ ದಾಖಲಾತಿಯನ್ನು ಅಕಾಡೆಮಿ ಮಾಡಬೇಕು. ಯಕ್ಷಗಾನ ಒಂದು ದೇವರ ಕೆಲಸ ಎಂದು ಅದರ ಬೆಳವಣಿಗೆಗೆ ಶ್ರಮಿಸಿದ ಹಿರಿಯ ಕಲಾವಿದರನ್ನು ಮರೆಯಬಾರದು” ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡಿ, “ಸರಕಾರ ನೀಡಿದ…
ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಎರಡೂ ಯಕ್ಷಗಾನದ ತವರೆಂದು ಪ್ರಸಿದ್ಧವಾಗಿದೆ. ಎಂ. ಗೋಪಾಲಕೃಷ್ಣ ಅಡಿಗರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ 18 ಫೆಬ್ರವರಿ 1918ರಲ್ಲಿ ಜನಿಸಿದರು. ತಮ್ಮ ಪರಿಸರದಲ್ಲಿ ಎಲ್ಲಿ ಯಕ್ಷಗಾನ ಪ್ರಸಂಗಗಳು ನಡೆಯುತ್ತಿದ್ದರೂ ಅಲ್ಲಿ ಹೋಗಿ, ಅದನ್ನು ನೋಡಿ ಬರುತ್ತಿದ್ದರು. ಅದು ಬರೀ ಮನೋರಂಜನೆಗೆ ಮಾತ್ರ ನೋಡುವುದಾಗಿರಲಿಲ್ಲ. ಆ ಹಾಡುಗಳು, ಕುಣಿತದ ಭಂಗಿಗಳು, ಹಾವಭಾವಗಳು ಎಲ್ಲವೂ ಅವರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿದವು. ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನು ಮತ್ತು ಕನ್ನಡದಲ್ಲಿ ಭಕ್ತಿಗೀತೆಗಳನ್ನು ರಚಿಸುತ್ತಿದ್ದರು. ಮಾತ್ರವಲ್ಲದೆ ತಾಳಮದ್ದಳೆಗಳಲ್ಲಿ ಅರ್ಥದಾರಿಯಾಗಿದ್ದರು. ತಂದೆ, ಅಜ್ಜ, ಅಜ್ಜಿ, ಸೋದರತ್ತೆ, ಚಿಕ್ಕಪ್ಪ ಎಲ್ಲರೂ ಪದ್ಯ ರಚನೆ ಮಾಡುವ ಕಲೆಯನ್ನು ಸಿದ್ಧಿಸಿಕೊಂಡವರು. ಇಷ್ಟು ಮಾತ್ರವಲ್ಲದೆ ಸೋದರತ್ತೆ ಪ್ರತಿ ರಾತ್ರಿ ಸಮಯದಲ್ಲಿ ಗದುಗಿನ ಭಾರತ, ಜೈಮಿನಿ ಭಾರತಗಳನ್ನು ರಾಗ ಬದ್ಧವಾಗಿ ಹಾಡುತ್ತಿದ್ದರು. ಈ ಪರಿಸರದ ಮಧ್ಯೆ ಬೆಳೆದವರು ಎಂ. ಗೋಪಾಲಕೃಷ್ಣ ಅಡಿಗರು. ಒಂದು ಕಡೆ ಯಕ್ಷಗಾನ, ಇನ್ನೊಂದು ಕಡೆ ಮನೆಯಲ್ಲಿಯೇ…
ಸಂಸ್ಕೃತ ಮತ್ತು ತಮಿಳು ಭಾಷೆಗಳ ಸಾಹಿತ್ಯ ಸಂಸ್ಕೃತಿಗಳಂತೆ ಕನ್ನಡ ಸಾಹಿತ್ಯದ ಕಾಲ ವಿಸ್ತಾರ ಸಹ ಬೆರಗುಗೊಳಿಸುವಂಥದ್ದೇ ಆಗಿದೆ. ಕನ್ನಡ ಸಾಹಿತ್ಯ ಚರಿತ್ರೆಗೆ ಸುಮಾರು ಒಂದೂವರೆ ಸಾವಿರ ವರ್ಷಗಳ ಸುದೀರ್ಘವಾದ ಇತಿಹಾಸವಿದೆ.ಇ. ಪಿ.ರೈಸ್ ಅವರು ಮೊದಲ ಬಾರಿಗೆ ಕನ್ನಡ ಸಾಹಿತ್ಯ ಚರಿತ್ರೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಕಟ್ಟಿಕೊಟ್ಟರು. ಆ ಬಳಿಕ ಕವಿ ಚರಿತೆಯ ಮೂರು ಸಂಪುಟಗಳು ಹೊರಬಂದವು.1953ರಲ್ಲಿ ರಂ. ಶ್ರೀ. ಮುಗಳಿ ಅವರ ಕನ್ನಡ ಸಾಹಿತ್ಯ ಚರಿತ್ರೆ ಬೆಳಕು ಕಂಡಿತು. ಮೊದಲ ಬಾರಿಗೆ ಕನ್ನಡ ಸಾಹಿತ್ಯವನ್ನು ವಿಮರ್ಶೆಯ ನೆಲೆಯಲ್ಲಿ ನೋಡಿ ವಸ್ತುನಿಷ್ಠವಾಗಿ ಚರ್ಚಿಸಿದ್ದು ಈ ಗ್ರಂಥದ ಅನನ್ಯತೆ. ಕನ್ನಡ ಸಾಹಿತ್ಯವು ಕನ್ನಡದ ನಂದಾದೀಪ, ಕರ್ನಾಟಕದ ತವನಿಧಿ ಎಂಬ ಅರಿವು ಮಾಡಿಸಿದ್ದು ರಂ. ಶ್ರೀ ಅವರ ಸಾಧನೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತು ಈ ವರೆಗೆ ಹಲವು ಗ್ರಂಥಗಳು ಪ್ರಕಟವಾಗಿವೆ. ಆರ್. ನರಸಿಂಹಾಚಾರ್ಯರ ‘ಕವಿಚರಿತ್ರೆ’ಯ ಮೂರು ಸಂಪುಟಗಳಂತೂ ಬೆರಗುಗೊಳಿಸುವ ಸಾಮಗ್ರಿಯನ್ನೊಳಗೊಂಡಿವೆ, ಚರಿತ್ರ ಲೇಖಕರಿಗೆ ಮುಖ್ಯ ಆಕರಗಳಾಗಿವೆ. ತರುವಾಯದ ಗ್ರಂಥಗಳಲ್ಲಿ ಒಂದೊಂದು ಗುಣ ವಿಶೇಷವಿದೆ. ಆದರೂ ಕನ್ನಡ…
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೆರಡನೇಯ ಉಪನ್ಯಾಸ ಕಾರ್ಯಕ್ರಮ ದಿನಾಂಕ 12 ಫೆಬ್ರವರಿ 2025 ರಂದು ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಬೆಳ್ಳಾಲ ಗೋಪಿನಾಥ ರಾವ್ “21ನೇ ಶತಮಾನದ ಯುವ ಮನಸ್ಸುಗಳಿಗೆ ವಿವೇಕಾನಂದರ ಸಂದೇಶ” ಎಂಬ ವಿಷಯದಲ್ಲಿ ಮಾತನಾಡಿ “ನಾನು ಭಾರತವನ್ನು ಯುವಕರ ಶಕ್ತಿಯ ಮೂಲಕವೇ ನೋಡುತ್ತೇನೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ವಾಮಿ ವಿವೇಕಾನಂದರು ಒಂದು ಅಮರ ಪ್ರೇರಣೆ. 21ನೇ ಶತಮಾನದ ಯುವಕರಿಗೆ ಅವರು ನೀಡಿದ ಸಂದೇಶಗಳು ಇಂದು ಇನ್ನಷ್ಟು ಪ್ರಸಕ್ತವಾಗಿದೆ. ಸ್ವಾಮಿ ವಿವೇಕಾನಂದರು ಯುವಕರನ್ನು ಶಕ್ತಿ, ಸೇವಾ ಮನೋಭಾವನೆ, ಹಾಗೂ ಆತ್ಮವಿಶ್ವಾಸ ಇವುಗಳನ್ನು ತಮ್ಮ ಜೀವನದ ಮೂಲ ಸಿದ್ಧಾಂತಗಳಾಗಿಸಿಕೊಳ್ಳಲು ಪ್ರೇರೇಪಿಸಿದರು. “ನಾನು ಭಾರತವನ್ನು ಯುವಕರ ಶಕ್ತಿಯ ಮೂಲಕವೇ ನೋಡುತ್ತೇನೆ” ಎಂಬ ಅವರ ಮಾತು ನಮ್ಮನ್ನೆಲ್ಲಾ ಚಿಂತನೆಗೆ ಒಡ್ಡುತ್ತದೆ. ನೀವು ದುರ್ಬಲರೆಂದು ಅಂದುಕೊಳ್ಳಬೇಡಿ, ನೀವು ಅಮೋಘ ಶಕ್ತಿಯೆಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ಉದ್ದೇಶವಿಲ್ಲದೆ…
ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಸಂಸ್ಥೆಗಳ ಸಂಸ್ಥಾಪಕರ ದಿನ, ಕಾಲೇಜು ದಿನ ಹಾಗೂ ಎ. ಶಾಮ ರಾವ್ ಸ್ಮಾರಕ ಅತ್ಯುತ್ತಮ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಫೆಬ್ರವರಿ 2025ರ ಶುಕ್ರವಾರದಂದು ಶ್ರೀನಿವಾಸ ವಿಶ್ವವಿದ್ಯಾಲಯ ಮುಕ್ಕಾ ಕ್ಯಾಂಪಸ್ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಹಾಗೂ ಎ. ಶಾಮರಾವ್ ಫೌಂಡೇಶನ್ ಮಂಗಳೂರಿನ ಅಧ್ಯಕ್ಷರಾದ ಡಾ. ಸಿಎ ಎ. ರಾಘವೇಂದ್ರ ರಾವ್ ಇವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎಂ.ಆರ್.ಪಿ.ಎಲ್ (ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್)ಇದರ ಮಾನವ ಸಂಪತ್ತು ವಿಭಾಗದ ಶ್ರೀ ಕೃಷ್ಣ ಹೆಗ್ಡೆ ಮಿಯಾರ್ ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಸ್ಪಷ್ಟ ದೃಷ್ಟಿಕೋನ ಮತ್ತು ಉದ್ದೇಶಗಳನ್ನು ಹೊಂದಿರುವುದಕ್ಕೆ ಅಭಿನಂದಿಸಿದರು. ಅವರು ಶಿಕ್ಷಣದ ಮಹತ್ವವನ್ನು ವಿವರಿಸುತ್ತಾ “ಶಿಕ್ಷಣವು ಜೀವನದಲ್ಲಿ ಮುನ್ನಡೆಯಲು, ಯಶಸ್ಸು ಪಡೆಯಲು ಮತ್ತು ಸಮಾಜದ ಉತ್ತರಣೆಗೆ ಮಾರ್ಗಸೂಚಿಯಾಗಿದೆ.” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಶ್ರೀ ರಾಮಕೃಷ್ಣ ಮಯ್ಯ ಸಿರಿಯಬಾಗಿಲು,…
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಇವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ದಿನಾಂಕ 16 ಫೆಬ್ರವರಿ 2025ರಂದು ಆಚರಿಸಲಾಯಿತು. ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ .ಮಹೇಶ ಜೋಶಿ ಮಾತನಾಡಿ “ತೊಂಬತ್ತು ವರ್ಷಕ್ಕೂ ಮೀರಿದ ಸಂತೃಪ್ತ ಜೀವನವನ್ನು ನಡೆಸಿದ ಶೇಷಗಿರಿ ರಾಯರು ಏನಿಲ್ಲವೆಂದರೂ ಮೂವತ್ತು ಸಾವಿರ ಪುಟಗಳಿಗೂ ಮಿರಿದ ಬರವಣಿಗೆಯನ್ನು ಮಾಡಿದ್ದಾರೆ. ಅವರ ಬರವಣಿಗೆ ಆರಂಭಿಸಿದ್ದು ಆಧುನಿಕ ಕನ್ನಡ ರೂಪುಗೊಂಡ ದಿನಗಳಲ್ಲಿ. ಆಗ ಇನ್ನೂ ವಿಮರ್ಶೆಯ ಸ್ವರೂಪ ನಿಖರವಾಗಿರಲಿಲ್ಲ. ಸಾಹಿತ್ಯದ ಪರಿಚಯ ಆಗಿನ ತುರ್ತು ಅಗತ್ಯವಾಗಿತ್ತು. ಅದನ್ನು ಶೇಷಗಿರಿ ರಾಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಶೇಷಗಿರಿ ರಾಯರು ವ್ಯಾಪಕವಾಗಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದರು. ಹೀಗೆ ಬರೆಯುವಾಗ ಸಮಾಜದ ಎಲ್ಲಾ ವರ್ಗದವರಿಗೂ ತಮ್ಮ ಚಿಂತನೆಗಳು ತಲುಪುವಂತೆ ಬರೆದರು. ಅವರ ಚಿಂತನೆಗಳು ಈ ಪ್ರಕ್ರಿಯೆಯಲ್ಲಿ ಸರಳವಾದವು. ಆದರೆ ತಮ್ಮ ಗಹನತೆಯನ್ನು ಕಳೆದುಕೊಳ್ಳಲಿಲ್ಲ. 1947ರ ವೇಳೆಗೆ ಆಗ ಪರಿಷತ್ತಿನ ಅಧ್ಯಕ್ಷರಾಗಿದ್ದ ತಿ.…
ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ -2025’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಬೆಳಿಗ್ಗೆ ಗಂಟೆ 10-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜು ಆವರಣದ ದ್ವನ್ಯಾಲೋಕ ಆರ್.ಆರ್.ಸಿ.ಯಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸುಮೊ ಇವರಿಗೆ ಪ್ರಶಸ್ತಿ ಪ್ರದಾನ ಮಾಡುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಕಾಲೇಜು ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಇವರು ವಹಿಸಲಿದ್ದು, ವಿಶ್ರಾಂತ ಪ್ರಾಂಶುಪಾಲರು ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಪ್ರೊ. ಎಂ.ಎಲ್. ಸಾಮಗ ಇವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ದಿ. ಮನೋರಮಾ ಭಟ್ ಇವರ ‘ಆಡಿಯೋ ನಾಟಕಗಳು’ ಮಟ್ಟು ‘ಸ್ವಯಂವರ’ ಎಂಬ ಕೃತಿಗಳ ಬಿಡುಗಡೆಗೊಳ್ಳಲಿದೆ.
ಮಂಗಳೂರು : ದೇರೆಬೈಲು ಕೊಂಚಾಡಿಯ ಶ್ರೀ ರಾಮ ಭಜನಾ ಮಂದಿರ (ರಿ) ಇದರ ವಿಜಯಲಕ್ಮೀ ಎಲ್.ಎನ್. ಮತ್ತು ಬಳಗದವರಿಂದ ‘ಸೂರ್ಯ ರತ್ನ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟವು ದಿನಾಂಕ 16 ಫೆಬ್ರವರಿ 2025ರಂದು ದೇರೆಬೈಲು ಕೊಂಚಾಡಿಯಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗಾಯತ್ರಿ ಎ. ರಾವ್ “ಯಕ್ಷಗಾನವು ಇಂದು ಸಂಕ್ರಮಣ ಪಥದಲ್ಲಿದೆ. ಅಬಾಲವೃದ್ಧರಾದಿಯಾಗಿ ಈ ಕಲೆಯ ಬಗ್ಗೆ ಆಸಕ್ತಿ ಹೊಂದಿ ಒಂದೊಂದು ರೀತಿಯಲ್ಲಿ ಕಲಾಮಾತೆಯ ಸೇವೆ ಮಾಡುತ್ತಿದ್ದಾರೆ. ಸಾಧನೆಯಿಂದ ಸ್ತ್ರೀ-ಪುರುಷ ಬೇಧವಿಲ್ಲದೆ ಇಲ್ಲಿ ಎಲ್ಲರೂ ಕಲಾವಿದರಾಗುತ್ತಿದ್ದಾರೆ. ಯಕ್ಷಕಲಾ ಮಾತೆಯ ಮಡಿಲಲ್ಲಿ ಕುಣಿದು ನರ್ತಿಸಿ ಹರ್ಷಿಸುತ್ತಿದ್ದಾರೆ. ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ವಿಜಯಲಕ್ಮೀ ಮತ್ತು ತಂಡದಿಂದ ಜರಗುವ ಯಕ್ಷಗಾನವೂ ಇದಕ್ಕೆ ಸಾಕ್ಷಿ. ಈ ಪರಂಪರೆ ಬೆಳೆಯಲಿ” ಎ೦ದು ಶುಭ ಹಾರೈಸಿದರು. ಶ್ರೀ ರಾಮ ಭಜನಾ ಮಂದಿರದ ಶ್ರೀ ವಿಜಯಕುಮಾರ್ “ಇಂತಹ ಸತ್ಕಾರ್ಯಗಳಿಗೆ ನಮ್ಮ ಮಂದಿರ ಮುಕ್ತವಾಗಿದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಸರಿದಾರಿಗೆ ಒಯ್ದು, ಸಮಾಜದ…