Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಅಶೋಕ ನಗರದಲ್ಲಿರುವ ಶ್ರೀಕೃಷ್ಣ ಮಂದಿರದ ಬೆಳ್ಳಿ ಹಬ್ಬ ವರ್ಷಾಚರಣೆಯ ಉದ್ಘಾಟನಾ ಸಮಾರಂಭ ಗೋಕುಲ ಕಲ್ಯಾಣ ಮಂಟಪದಲ್ಲಿ ದಿನಾಂಕ 07-09-2023ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಡುಬಿದರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ವಿದ್ವಾನ್ ಡಾ. ವಿನಾಯಕ ಭಟ್ ಗಾಳಿಮನೆ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಉರ್ವದ ಯಕ್ಷಾರಾಧನ ಕಲಾ ಕೇಂದ್ರದ ನಿರ್ದೇಶಕಿ, ನೃತ್ಯ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಮತ್ತು ಬಳಗದವರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು. ವಿದುಷಿ ಸುಮಂಗಲಾ ರತ್ನಾಕರ್ ರಾವ್, ಶ್ರೀಮತಿ ಸುಮಾಡ್ಕರ್, ಕುಮಾರಿ ಛಾಯಾಲಕ್ಷ್ಮೀ ಆರ್.ಕೆ., ಆದಿಸ್ವರೂಪ, ಸನತ್ ಆಚಾರ್ಯ, ಸಾಕ್ಷಿ ಶೇಷಾದ್ರಿ, ವೈಶಾಕ್ ರಾವ್, ಸಂಪ್ರೀತ್ ಹಂದೆ, ಪೂರ್ವಿ ಗಟ್ಟಿ, ಪ್ರಜ್ಞಾಶ್ರೀ ಸಾಮಗ, ವರುಣ್ ಕಾರಂತ್, ಸೂರಜ್ ಸಾಮಗ, ಸಮೀಕ್ಷಾ ಆಚಾರ್ಯ, ಪ್ರತೀಕ್ ಜಗತಾಪ್, ಸ್ವಸ್ತಿಕ್ ರಾವ್, ಹಿಮ್ಮೇಳದಲ್ಲಿ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ, ಶ್ರೀ ಪ್ರಫುಲ್ಲಚಂದ್ರ ನೆಲ್ಯಾಡಿ, ಶಿತಿಕಂಠ ಭಟ್ ಉಜಿರೆ, ಶ್ರೀ ಸುಬ್ರಹ್ಮಣ್ಯ…
ಧಾರವಾಡ : ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವ ವಿದ್ಯಾನಿಲಯ ಧಾರವಾಡ, ಚೇತನಾ ಫೌಂಡೇಶನ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಆಯೋಜನೆಯಗೊಂಡ ‘ಧಾರವಾಡ ನುಡಿ ಸಡಗರ-ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದ ಎರಡನೆಯ ದಿನದ ಗಮಕ ವಾಚನ, ಮುಕ್ತ ಗಜ್ಲ್, ಕವಿಗೋಷ್ಠಿ ಅಂಗವಾಗಿ ಗಂಗೊಳ್ಳಿ ಸರಸ್ವತಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆ ಮತ್ತು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ತೃತೀಯ ಬಿ.ಎಸ್ಸಿ. ಪದವೀಧರೆ ಗಮಕಿ ಕುಮಾರಿ ಕಾವ್ಯ ಹಂದೆಯವರಿಂದ ಗಮಕ ವಾಚನ ವ್ಯಾಖ್ಯಾನ ಪ್ರಾತ್ಯಕ್ಷಿಕೆಯು ದಿನಾಂಕ 09-09-2023ರಂದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾನಿಲಯದ ಕನಕ ಪೀಠದ ಕನಕ ಭವನದಲ್ಲಿ ನಡೆಯಿತು. ಕುಮಾರಿ ಕಾವ್ಯ ಅವರು ನಾಟಿ, ಹಂಸಧ್ವನಿ, ಹಿಂದೋಳ, ಅಮೀರ್ ಕಲ್ಯಾಣಿ, ಕಲ್ಯಾಣಿ, ಶಿವರಂಜಿನಿ, ಜೋಗ್ ಮೊದಲಾದ ರಾಗಗಳ ಮೂಲಕ ಗಮಕ ವಾಚನದಲ್ಲೂ, ಸುಜಯೀಂದ್ರ ಹಂದೆ ವ್ಯಾಖ್ಯಾನಕಾರರಾಗಿಯೂ ದಾಸ ವರೇಣ್ಯ, ಭಕ್ತಿ ಕಾವ್ಯ ಪರಂಪರೆಯ ಕನಕದಾಸರ ನಳಚರಿತ್ರೆಯ ಆರನೇಯ ಸಂಧಿಯ ಕಾರ್ಕೋ ಟಕ ದಂಶನ ಪ್ರಸಂಗವನ್ನು ಕನಕ ಪೀಠದ ವಿದ್ಯಾರ್ಥಿ ಮತ್ತು…
ಕಾಸರಗೋಡು : ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ‘ನೃತ್ಯ ವಂದನಾ’ ಕಾರ್ಯಕ್ರಮವು ದಿನಾಂಕ 08-09-2023 ರ ಶುಕ್ರವಾರದಂದು ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದಲ್ಲಿ ನಡೆಯಿತು. ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ನಿರ್ದೇಶನದಲ್ಲಿ, ಗುರು ಶ್ರೀಧರ ಹೊಳ್ಳ ಸಂಯೋಜನೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಕಲಾವಿದೆಯರಾದ ವಿದುಷಿ ಪ್ರಕ್ಷಿಲಾ ಜೈನ್, ಶಿವಪ್ರಣಾಮ್ ಸಂಸ್ಥೆಯ ವಿದುಷಿ ಅನ್ನಪೂರ್ಣ ರಿತೇಶ್, ವಿದುಷಿ ಮಾನಸ ಕುಲಾಲ್, ವಿದುಷಿ ಅದಿತಿ ಸಹಕರಿಸಿದ್ದರು. ಹಿಮ್ಮೇಳ ಕಲಾವಿದರಾಗಿ ಹಾಡುಗಾರಿಕೆಯಲ್ಲಿ ಸ್ವರಾಗ್ ಕಣ್ಣೂರು, ಮೃದಂಗನಲ್ಲಿ ವಿದ್ವಾನ್ ಸುರೇಶ್ ಬಾಬು, ಕೊಳಲಿನಲ್ಲಿ ರಾಹುಲ್ ಕಣ್ಣೂರು ಸಹಕರಿಸಿದ್ದರು. ವಿದುಷಿ ಮಧುರಾ ಕಾರಂತ್ ನಿರೂಪಿಸಿದರು.
ಬೆಂಗಳೂರು: ಪ್ರಕೃತಿ ಪ್ರತಿಯೊಬ್ಬರಿಗೂ ಒಂದೊಂದು ಕಾಯಕವನ್ನು ಕಲ್ಪಿಸಿದೆ. ಅದನ್ನು ಪ್ರಾಮಾಣಿಕವಾಗಿ, ನಿಯತ್ತಾಗಿ ಮಾಡಿದಲ್ಲಿ ಅದು ಒಂದು ರೀತಿಯ ಸಾರ್ಥಕ ಬದುಕೇ ಸರಿ. ಇದಕ್ಕೆ ಉದಾಹರಣೆ ಎಂಬಂತೆ ಸಾಫ್ಟ್ ವೇರ್ ಸಂಸ್ಥೆಗಳಲ್ಲಿ, ಜಾಹೀರಾತು ಸಂಸ್ಥೆಗಳಲ್ಲಿ ಮತ್ತು ಇತರ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದ ‘ದಾವಣಗೆರೆ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟನೆ’ ಬೆಂಗಳೂರು ನಗರದಲ್ಲಿ ಕಲಾಪ್ರದರ್ಶನ ಹಮ್ಮಿಕೊಂಡಿತ್ತು. “ದಾಕಹವಿಸ” ಅಂತಲೇ ಕಲಾವಲಯದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ 40 ಕಲಾವಿದರಿರುವ ಈ ಸಂಘಟನೆ ಕಲೆಯ ಮೇಲಿನ ಪ್ರೀತಿಯಿಂದಾಗಿ ದಿನಾಂಕ 09-09-2023ರಿಂದ ಮೂರು ದಿನಗಳ ಕಾಲ ಚಿತ್ರಕಲಾ ಪರಿಷತ್ತಿನಲ್ಲಿ ‘Artspring’ ಎಂಬ ಹೆಸರಿನಲ್ಲಿ ಚಿತ್ರಕಲಾ ಪ್ರದರ್ಶನವನ್ನು ನಡೆಸಿತು. ವಿವಿಧ ಮಾಧ್ಯಮಗಳನ್ನು ಉಪಯೋಗಿಸಿ ಕಲೆಯಲ್ಲಿ ಹೊಸ ನಾವೀನ್ಯತೆಯನ್ನು ತೋರಿಸಿದ್ದಾರೆ. ಪೇಪರ್ ರಟ್ಟನ್ನು ಇಟ್ಟಿಗೆಯಂತೆ ಸಿದ್ಧಗೊಳಿಸಿ ಅದರಲ್ಲಿ ರೇಖಾಚಿತ್ರಗಳನ್ನು ವರ್ಣಚಿತ್ರಗಳನ್ನು ಮೂಡಿಸಿ ಆ ಸೃಷ್ಟಿಸಿದ ಚಿತ್ರದ ರೂಪ ನೋಡುಗರನ್ನು ಗಮನ ಸೆಳೆಯುವಲ್ಲಿ ಶೀಲವಂತ ಯಾದಗಿರಿಯವರ ಕೆಲಸ ಸಾರ್ಥಕವಾಗಿತ್ತು. ವಿನೋದ್ ಕುಮಾರವರ 4×8 ಅಡಿ ಬೃಹತ್ ವುಡ್ ಪಟ್ಟಿಯ ಮೇಲೆ ಕೆತ್ತಿದ ಹಂಪಿಯ ಚಿತ್ರಗಳು…
ಮುಡಿಪು : ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿದ್ದ ಕಾಸರಗೋಡು ಬೀರಂತಬೈಲು ನಿವಾಸಿ ಎಸ್.ವಿ.ಭಟ್ ಎಂದೇ ಪರಿಚಿತರಾಗಿರುವ ಸುಬ್ರಹ್ಮಣ್ಯ ವೆಂಕಟ್ರಮಣ ಭಟ್ (73) ದಿನಾಂಕ 10-09-2023ರಂದು ನಿಧನ ಹೊಂದಿದರು. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ನಿರಂತರ ನಡೆಸುತ್ತಾ ಗ್ರಾಮ ಗ್ರಾಮಗಳಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಎಸ್.ವಿ. ಭಟ್ಟರು ಕಾಸರಗೋಡು ಕನ್ನಡ ಚಳವಳಿಯನ್ನು ಜೀವಂತವಾಗಿರಿಸಿದ್ದರು. ಎಸ್.ವಿ. ಭಟ್ಟರು ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡು ಘಟಕದ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಗೊಂಡು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಸರಳವಾದ, ವಿದ್ಯಾರ್ಥಿಸ್ನೇಹಿಯಾದ ಕನ್ನಡ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಎಳೆಯರ ಮನಸ್ಸಿನಲ್ಲಿ ಕನ್ನಡಾಭಿಮಾನವನ್ನು ಬಿತ್ತುವ ಕಾರ್ಯವನ್ನು ಮಾಡಿದ್ದಾರೆ. ಅವರ ಹಠಾತ್ ಅಗಲಿಕೆ ಕಾಸರಗೋಡು ಕನ್ನಡಿಗರಿಗೆ ತುಂಬಲಾರದ ನಷ್ಟ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ. ಕಸಾಪ ಉಳ್ಳಾಲ ಘಟಕದ ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರ್, ಎಡ್ವರ್ಡ್ ಲೋಬೋ, ಕೋಶಾಧಿಕಾರಿ ಚಂದ್ರಹಾಸ…
ಕಾಸರಗೋಡು : ಶ್ರೀಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯು ದಿನಾಂಕ 03-09-2023 ರಂದು ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಧಾರ್ಮಿಕ ಮುಂದಾಳು ಮತ್ತು ಸಮಾಜ ಸೇವಕಿಯಾದ ಮೀರಾ ಕಾಮತ್ “ಭಗವಂತನನ್ನು ತೃಪ್ತಿಪಡಿಸಲು ಭಜನೆಯು ಪ್ರಮುಖ ಮಾರ್ಗಗಳಲ್ಲಿ ಒಂದು. ಸಂಕೀರ್ತನೆಯಲ್ಲಿ ಭಕ್ತಿಯೂ ಅಡಕವಾಗಿರಬೇಕು. ಭಕ್ತಿಪೂರ್ವಕವಾಗಿ ಭಗವಂತನನ್ನು ಭಜಿಸಿದರೆ ಎಲ್ಲಾ ದುರಿತಗಳು ಪರಿಹಾರಗೊಳತ್ತವೆ. ಭಜನೆಯ ಮೂಲಕ ಧಾರ್ಮಿಕ ಜಾಗೃತಿ ಮೂಡುತ್ತದೆ” ಎಂದು ಹೇಳಿದರು. ಶ್ರೀಕೃಷ್ಣ ಜನ್ಮಾಷ್ಠಮಿ ಮಹೋತ್ಸವ ಸಮಿತಿಯ ಅಧ್ಯಕ್ಷ ದಿವಾಕರ ಅಶೋಕನಗರ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗ ನಾಯ್ಕ, ರಾಮದಾಸ್, ನಿರ್ಮಲಾ, ಕುಶಲಕುಮಾರ್, ಮೇಘರಾಜ್, ಶ್ರೀಕಾಂತ್ ಕಾಸರಗೋಡು, ಯೋಗೀಶ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 28 ತಂಡಗಳು ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದವು. ನೃತ್ಯ ಕಲಾವಿದೆ ಸುಚಿತ್ರಾ ಭಾರತಿ, ಭಜನಾ ಸಾಮ್ರಾಟ್ ಮೋಹನ ಆಚಾರ್ಯ ಪುಳ್ಳೂರು ಮತ್ತು ಕವಿ ಹಾಗೂ…
ಮಂಗಳೂರು: ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆದ ಅಂತರ್ ಕಾಲೇಜು ಮಟ್ಟದ ಶಾರದಾ ಮಹೋತ್ಸವ ಸಾಂಸ್ಕೃತಿಕ ಸ್ಪರ್ಧೆಯು ದಿನಾಂಕ 09-09-2023 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಸಿದ್ಧ ಹರಿದಾಸರು ಮತ್ತು ನ್ಯಾಯವಾದಿಗಳಾದ ಶ್ರೀ ಕಲಾರತ್ನ ಶಂನಾಡಿಗ ಕುಂಬ್ಳೆ “ಶಿಕ್ಷಣದ ಗುರಿ ಕೇವಲ ಅಂಕಗಳಿಕೆ ಮತ್ತು ಉದ್ಯೋಗ ಸಂಪಾದನೆಗೆ ಮಾತ್ರ ಸೀಮಿತವಾಗಬಾರದು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ನಮ್ಮ ಪರಂಪರಾಗತ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆಯೂ ಅರಿವು ಹೊಂದಿರಬೇಕು. ಆಗ ಮಾತ್ರ ವ್ಯಕ್ತಿತ್ವ ಪರಿಪೂರ್ಣವಾಗಲು ಸಾಧ್ಯ.” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಅಪರ್ಣಾ, ಅನಘಾ, ಸಾಕ್ಷಿ ಪ್ರಾರ್ಥಿಸಿ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಸ್ಮಿತಾ ಪೈ ಸ್ವಾಗತಿಸಿದರು. ಪ್ರಾಂಶುಪಾಲ ಮಹಾಬಲೇಶ್ವರ ಭಟ್ ಸೊಡಂಕೂರು ಪ್ರಸ್ತಾವಿಕ ಮಾತುಗಳನ್ನಾಡಿ, ಉಪ ಪ್ರಾಂಶುಪಾಲ ಪ್ರಕಾಶ್ ನಾಯ್ಡ ಅತಿಥಿಗಳನ್ನು ಪರಿಚಯಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥ ರಮೇಶ ಆಚಾರ್ಯ…
ಉಡುಪಿ : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ಮಂಗಳೂರು ಇದರ ಈ ಆರ್ಥಿಕ ವರುಷದ ಐದನೇ ಕಾರ್ಯಕ್ರಮ ಕಿಶೋರ ಪ್ರತಿಭೋತ್ಸವ 2023. ಕಾರ್ಯಕ್ರಮವು ದಿನಾಂಕ 10-09-2023ರ ಆದಿತ್ಯವಾರದಂದು ಸಂಜೆ ಉಡುಪಿಯ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಿತು. ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಳದ ಧರ್ಮದರ್ಶಿಗಳಾಗಿರುವ ಡಾ.ನಿ.ಬಿ.ವಿಜಯಬಲ್ಲಾಳ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, “ದೇವಸ್ಥಾನಗಳಲ್ಲಿ ಲಲಿತ ಕಲೆಗಳಿಗೆ ಯಾವತ್ತೂ ಅವಕಾಶ ಪ್ರೋತ್ಸಾಹ ನಮ್ಮ ತಂದೆಯ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಇನ್ನೂ ಮುಂದೆಯೂ ಇಂತಹ ಮಕ್ಕಳ ಕಾರ್ಯಕ್ರಮಕ್ಕೆ ಈ ವೇದಿಕೆ ಸದಾ ಇದೆ.” ಎಂದು ಪರಿಷತ್ತಿನ ಮುಂದಿನ ಕಾರ್ಯಕ್ರಮದ ಬಗ್ಗೆ ಪ್ರೋತ್ಸಾಹದ ನುಡಿಯ ಮುಖಾಂತರ ಶುಭ ಹಾರೈಸಿದರು. ಹದಿನಾರು ಕಿಶೋರ ಪ್ರತಿಭೆಗಳಿಗೆ ಮೆಚ್ಚು ಪತ್ರವನ್ನು ಕೊಟ್ಟು ಗೌರವಿಸಿ, ಪರಿಷತ್ತಿನ ಮಾರ್ಗದರ್ಶಕರಾದ ವಿದ್ವಾನ್ ಪಿ. ಕಮಲಾಕ್ಷ ಆಚಾರ್ ಮಾತನಾಡಿದರು. ಪರಿಷತ್ತಿನ ಉಪಾಧ್ಯಕ್ಷರಾದ ವಿದ್ವಾನ್ ಚಂದ್ರಶೇಖರ ನಾವಡ, ಶ್ರೀಮತಿ ರಾಜಶ್ರೀ, ಪರಿಷತ್ತಿನ ಕೋಶಾಧಿಕಾರಿಗಳಾದ ವಿದ್ವಾನ್ ಸುರೇಶ್ ಅತ್ತಾವರ್, ಸದಸ್ಯರಾದ ರಾಮಕೃಷ್ಣ ಕೊಡಂಚ ಮತ್ತು…
ಉಜಿರೆ: ಯಕ್ಷ ಭಾರತಿ ಕನ್ಯಾಡಿ (ರಿ)ಬೆಳ್ತಂಗಡಿ ಇದರ 9ನೇ ವಾರ್ಷಿಕೋತ್ಸವು ದಿನಾಂಕ 10-09 2023 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರು ಬೊಳುವಾರಿನ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಇವರಿಗೆ ಯಕ್ಷಭಾರತಿ ಪ್ರಶಸ್ತಿ 2023 ಪ್ರದಾನ ಮಾಡಿ ಗೌರವಿಸಲಾಯಿತು. ಯಕ್ಷ ಭಾರತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದನ ನುಡಿಗಳನ್ನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು “ಯಕ್ಷಗಾನ ನನ್ನ ಉಸಿರು, ಇದು ಬರೀ ಮನೋರಂಜನೆ ಅಲ್ಲ ಇದು ಮನಃ ಪರಿವರ್ತನೆಗೊಳ್ಳುವ ವಿಧಾನ. ಇತ್ತೀಚೆಗಿನ ದಿನಗಳಲ್ಲಿ ಅಧಿಕವಾದ ನೃತ್ಯ, ಭಾಗವತರು ಇನ್ನೊಬ್ಬರ ಅನುಕರಣೆ ಮಾಡುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸನ್ನಿವೇಶಗಳು ಬಹಳ ಬೇಸರವನ್ನುಂಟುಮಾಡಿದೆ. ನಾವು ಒಂದು ಮೂರ್ತಿಯನ್ನು ಕಂಡಾಗ ಹೇಗೆ ಅದನ್ನು ಪೂಜಿಸುತ್ತೇವೆಯೋ, ಹಾಗೆಯೇ ಅಂತಹ ದೇವರ ಪುರಾಣಗಳನ್ನು ಜನರಿಗೆ ತಲುಪಿಸುವ ಸನಾತನ ಧರ್ಮದ ಒಂದು ಭಾಗ ನಾವು. ಇದನ್ನು ಹಿಂದಿನಿಂದ ಹಾಗೂ ಪ್ರತ್ಯಕ್ಷದರ್ಶಿಗಳಾಗಿ ಗಮನಿಸುವ ಜನರಿದ್ದಾರೆ.…
ಕಟೀಲು : ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕದ ವತಿಯಿಂದ ಹಿರೇಮಗಳೂರು ಕಣ್ಣನ್ ಜೊತೆ ಹರಟೆ ಕಾರ್ಯಕ್ರಮವು ದಿನಾಂಕ 10-09-2023ರ ಭಾನುವಾರದಂದು ಕಟೇಲಿನಲ್ಲಿ ನಡೆಯಿತು. ‘ಕನ್ನಡದ ಪೂಜಾರಿ’ ಖ್ಯಾತಿಯ ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ “ಭಾರತ ದೇಶದ ಮಣ್ಣಿನ ಗುಣ ಶ್ರೇಷ್ಟವಾದುದು. ಜಗತ್ತಿಗೇ ಮಾರ್ಗದರ್ಶನ ಮಾಡಿದ ಸನಾತನ ಧರ್ಮದ ಮೇಲೆ ಪೆಟ್ಟು ಕೊಡುವ ಕೆಲಸ ಸರಿಯಾದುದಲ್ಲ. ಇಸ್ರೇಲ್ ನಿಂದ ನಮ್ಮೂರಿಗೆ ಸಂಸ್ಕೃತ ಕಲಿಯಲು ಬಂದವರು ನಾವು ಜ್ಞಾನ ಸಂಪಾದನೆಗಾಗಿ ಬಂದಿದ್ದೇವೆ ಎಂದಿದ್ದರು. ದ್ವೈತ, ಆದ್ವೈತ, ವಿಶಿಷ್ಟಾದ್ವೈತ ಸಿದ್ದಾಂತಗಳು ರಾದ್ದಾಂತಗಳಾಗಬಾರದು ಎಂದ ಕಣ್ಣನ್ ಇತ್ತೀಚಿಗೆ ನಮ್ಮ ಮನೆಯ ನಾಗರಿಕ ಸಂಸ್ಕೃತಿ ಹೇಗಿದೆಯೆಂದರೆ ಪದ್ಮಾವತಿ ನಿಲಯ ವೆಂಕಟೇಶ್ವರ ಪ್ರಸನ್ನ ತಂದೆ ತಾಯಿಯ ಅಶೀರ್ವಾದ ಎಂದೆಲ್ಲ ಹಾಕಿ “ನಾಯಿಗಳಿವೆ ಎಚ್ಚರಿಕೆ” ಎಂಬ ಅಪಸಂಸ್ಕೃತಿ ಬೋರ್ಡನ್ನೂ ನೇತು ಹಾಕುತ್ತೇವೆ. ಮುದ್ದಣ ಮನೋರಮೆಯರ ಸಾಹಿತ್ಯ ಬರೆದ ಕವಿ ಕಷ್ಟದಲ್ಲಿದ್ದ. ಆದರೆ ಅಂತಹ ಶ್ರೇಷ್ಟ ಸಾಹಿತ್ಯವನ್ನು ಮುಂದಿಟ್ಟು ಡಾಕ್ಟರೇಟ್ ಮಾಡಿದವರು ಎಷ್ಟೋ ಮಂದಿ ಇದ್ದಾರೆ. ಮುಳಿಯ ತಿಮ್ಮಪ್ಪಯ್ಯ, ಡಿವಿಜಿ ಮತ್ತು …