Author: roovari

ಮಂಗಳೂರು : ತುಳು ಕೂಟ ಕುಡ್ಲ ಇದರ ‘ಬಂಗಾರ ಪರ್ಬ’ ಸರಣಿ ಕಾರ್ಯಕ್ರಮವು ಶ್ರೀ ಕ್ಷೇತ್ರ ಶರವು ದೇವಾಲಯದ ಸಭಾಂಗಣದಲ್ಲಿ ದಿನಾಂಕ 29-07-2023ನೇ ಶುಕ್ರವಾರ ಸಂಜೆ 4 ಗಂಟೆಗೆ ನಡೆಯಲಿದೆ. ಶ್ರೀ ಕ್ಷೇತ್ರ ಶರವು ದೇವಾಲಯದ ಶಿಲೆ ಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ.ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಅಧ್ಯಕ್ಷರು, ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷರು ಹಾಗೂ ಒಡಿಯೂರು ಸೇವಾ ಬಳಗದ ಕಾರ್ಯಾಧ್ಯಕ್ಷರಾದ ಶ್ರೀ ತಾರಾನಾಥ ಶೆಟ್ಟಿ ಬೋಳಾರ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ(ನಿ.)ದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ ಮತ್ತು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ‘ದೇವಕೀ ತನಯ’, ಹಿರಿಯ ನ್ಯಾಯವಾದಿಗಳು ಮತ್ತು ಹರಿಕಥಾ ಪರಿಷತ್ತಿನ ಅಧ್ಯಕ್ಷರೂ ಆದ ಶ್ರೀ ಮಹಾಬಲ ಶೆಟ್ಟಿ ಕೂಡ್ಲು ‘ತುಳು ಹರಿಕಥೆ ಸಾಹಿತ್ಯ’ದ ಪರಿಚಯ ಮಾಡಿಕೊಡಲಿದ್ದು,…

Read More

ಉಡುಪಿ : ದಿನಾಂಕ 20.07.2023 ಗುರುವಾರದಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಹೆಬ್ರಿ ತಾಲೂಕು ಘಟಕದ ವತಿಯಿಂದ ಕನ್ನಡ ಡಿಂಡಿಮ ಸರಣಿಯ ಎರಡನೇ ಕಾರ್ಯಕ್ರಮವು ಪಿ.ಆರ್.ಎನ್. ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಹೆಬ್ರಿ ಇವರ ಸಹಯೋಗದಲ್ಲಿ ಅಮೃತ ಭಾರತಿಯಲ್ಲಿ ನಡೆಯಿತು. ಕ.ಸಾ.ಪ ಹೆಬ್ರಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರವನ್ನು ಅವಿಭಜಿತ ದ.ಕ.ಜಿಲ್ಲಾ ಜವಳಿ ವರ್ತಕರ ಸಂಘದ ಅಧ್ಯಕ್ಷರಾದ ಹೆಬ್ರಿ ಯೋಗೀಶ್ ಭಟ್ ಉದ್ಘಾಟಿಸಿ ಮಾತನಾಡುತ್ತಾ “ಗಿಡವನ್ನು ಪೋಷಿಸಿದಾಗ ಅದು ಉತ್ತಮವಾಗಿ ಬೆಳೆಯುತ್ತದೆ. ಅಂತೆಯೇ ಬೆಳೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾಹಿತ್ಯ ಸಂಸ್ಕೃತಿಯ ಪೋಷಣೆ ನೀಡಿದಾಗ ಅದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕ.ಸಾ.ಪ ಹೆಬ್ರಿ ಘಟಕದ ಕಾರ್ಯ ಶ್ಲಾಘನೀಯ” ಎಂದರು. ರಾಜ್ಯ ಎನ್.ಎಸ್.ಎಸ್ ನಿಕಟ ಪೂರ್ವ ಅಧ್ಯಕ್ಷರು ಮತ್ತು ಕರ್ನಾಟಕ ಸರಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರ್ ಅವರು ಮಾತನಾಡಿ “ಎರಡುವರೆ ಸಾವಿರ ವರ್ಷಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡ…

Read More

ಕಾಸರಗೋಡು : ಭಜನಾ ಸಂಕೀರ್ತನಾ ಗುರುಗಳಾದ ಹರಿದಾಸ ಶ್ರೀ ಜಯಾನಂದ ಕುಮಾರ್ ಹೊಸದುರ್ಗ ಇವರ ನೇತೃತ್ವದಲ್ಲಿ ಪ್ರತೀ ವರ್ಷ ಕರ್ಕಾಟಕ ಮಾಸದ ಮನೆ ಮನೆ ಭಜನಾ ಅಭಿಯಾನಕ್ಕೆ ದಿನಾಂಕ 17-07-2023 ರಂದು ಮಧೂರಿನ ಪ್ರಣವ ಮಹಿಳಾ ಭಕ್ತವೃಂದದ ಸಹಕಾರದಲ್ಲಿ ಚಾಲನೆ ನೀಡಲಾಯಿತು. ಭಜನಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಹರಿದಾಸ ಶ್ರೀ ಜಯಾನಂದ ಕುಮಾರ್ “ಕರ್ಕಾಟಕ ಮಾಸದ ಸಂಕಷ್ಟಗಳನ್ನು ದೂರ ಮಾಡಿ ಎಲ್ಲರಲ್ಲೂ ಚಿಂತನೆಗಳನ್ನು ಹುಟ್ಟು ಹಾಕಬೇಕು ಎಂಬ ಉದಾತ್ತ ಧ್ಯೇಯದೊಂದಿಗೆ ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಜನಾ ಸೇವೆ ಮಾಡಲಾಗುತ್ತಿದೆ. ದೈವ ಕೃಪೆಯಿಂದ ಮನಸ್ಸಿನ ಸಂಕಲ್ಪಗಳು ಈಡೇರುವ ಆಶಾಭಾವನೆಯನ್ನು ಒಳಗೊಂಡು ಮಾಡುವ ಈ ಭಜನಾ ಸೇವೆಯು ರಾಮಾಯಣ ಮಾಸವನ್ನು ಪುಣ್ಯ ಪ್ರದವಾಗಿಸಿ ದೈವಿಕ ಚೈತನ್ಯವನ್ನು ಮೂಡಿಸುವುದು. ಮಕ್ಕಳು ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳುವುದರೊಂದಿಗೆ ದೇಶಕ್ಕೆ ಜ್ಞಾನ ದೀವಿಗೆಯಾಗಿ, ಭಾರತ ಮಾತೆಯ ನಂದಾದೀಪವಾಗಿ ಬೆಳಗಬೇಕು.” ಎಂದು ಹೇಳಿದರು. ಹರಿದಾಸ ಶ್ರೀ ಜಯಾನಂದ ಕುಮಾರ್ ತಮ್ಮ ಬಳಿ ತರಬೇತಿ ಪಡೆಯುತ್ತಿರುವ ಭಜನಾ…

Read More

ಮಂಗಳೂರು : ಮಂಗಳೂರು ಎಚ್‌.ಎಂ.ಎಸ್‌. ಸಂಘಟನೆಯ ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ವತಿಯಿಂದ ‘ಬಾಂಡಿಂಗ್ ತ್ರೂ ಬೀಡಿ’ ಕೃತಿಯ ಅನಾವರಣ ದಿನಾಂಕ : 18-07-2023ರಂದು ನಡೆಯಿತು. ನಾನಾ ಸಾಹಿತಿಗಳು ಬರೆದ ಬೀಡಿ ಉದ್ಯಮದ ಕಾರ್ಮಿಕರ ಬಗೆಗಿನ ನೋವು ನಲಿವಿನ ಲೇಖನಗಳುಳ್ಳ ‘’ಬೀಡಿ ಬದುಕು’ ಕನ್ನಡ ಪುಸ್ತಕದ ಇಂಗ್ಲೀಷ್ ಅವತರಣಿಕೆ ‘ಬಾಂಡಿಂಗ್ ತ್ರೂ ಬೀಡಿ’ ಕೃತಿಯನ್ನು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಬೆಂಗಳೂರಿನ ವಿಧಾನ ಸೌಧದ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತಾ “ಕರಾವಳಿ ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ಬೀಡಿಯನ್ನೇ ನಂಬಿಕೊಂಡು ಲಕ್ಷಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ಬೀಡಿ ಉದ್ಯೋಗದಿಂದಲೇ ಮಕ್ಕಳಿಗೆ ಶಿಕ್ಷಣ ನೀಡಿ ಉದ್ಯೋಗ ಕಲ್ಪಿಸಿಕೊಟ್ಟ ಅದೆಷ್ಟೋ ಕುಟುಂಬಗಳನ್ನು ನಾವು ಕಂಡಿದ್ದೇವೆ. ಪ್ರಸಕ್ತ ದಿನಗಳಲ್ಲಿ ಬೀಡಿ ಉದ್ಯಮವೂ ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಬೀಡಿ ಕಾರ್ಮಿಕರು ಹಲವಾರು ಸಮಸ್ಯೆಗಳಿಗೆ ಒಳಗಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಅವರ ಸಮಸ್ಯೆ- ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ…

Read More

ಪುತ್ತೂರು : ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಪುತ್ತೂರು, ಇದರ ಆಶ್ರಯದಲ್ಲಿ ಅಧಿಕ ಶ್ರಾವಣ ಮಾಸ ಪ್ರಯುಕ್ತ ‘ವಿಶೇಷ ತಾಳಮದ್ದಳೆ ಚತುರ್ಥಿ’ಯಲ್ಲಿ ದಿನಾಂಕ 22/07/2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ‘ಸುದರ್ಶನ ವಿಜಯ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಜಯಪ್ರಕಾಶ್ ನಾಕೂರು, ಶ್ರೀ ನಿತೀಶ್ ಎಂಕಣ್ಣಮೂಲೆ, ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಶುಭಾ ಜೆ.ಸಿ. ಅಡಿಗ (ಶ್ರೀ ಮಹಾವಿಷ್ಣು), ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಮಹಾಲಕ್ಷ್ಮೀ), ಶ್ರೀಮತಿ ಶುಭಾ ಗಣೇಶ್ (ಸುದರ್ಶನ) , ಶ್ರೀಮತಿ ಹರಿಣಾಕ್ಷಿ ಜೆ.ಶೆಟ್ಟಿ (ಶತ್ರುಪ್ರಸೂದನ) ಸಹಕರಿಸಿದರು. ಶ್ರೀ ದೇವಳದ ಆಡಳಿತ ಮೊಕ್ತೇಸರ ಅಶೋಕ್ ಪ್ರಭು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿ, ರಂಗನಾಥ ರಾವ್ ವಂದಿಸಿದರು. ದೇವಳದ ಆಡಳಿತ ಸಮಿತಿಯ ಸದಸ್ಯರು, ಅರ್ಚಕರು ಕಲಾವಿದರಿಗೆ ಪ್ರಸಾದ ನೀಡಿ ಗೌರವಿಸಿದರು.

Read More

ಮಂಗಳೂರು : ಅದ್ಯಪಾಡಿ ಶ್ರೀ ಕ್ಷೇತ್ರ ಬೀಬೀಲಚ್ಚಿಲ್ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ‘ಪುಣ್ಯಕ್ಷೇತ್ರ ಬೀಬೀಲಚ್ಚಿಲ್’ ಐದು ಭಕ್ತಿಗೀತೆಗಳ ಲೋಕಾರ್ಪಣೆ ಸಮಾರಂಭ ದಿನಾಂಕ : 16-07-2023 ರವಿವಾರದಂದು ನಡೆಯಿತು. ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಆರ್ಚಕ ವೇದಮೂರ್ತಿ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ಅಶ್ವಿನ್ ಬಳ್ಳಾಲ ಬೈಲುಬೀಡು, ಶ್ರೀ ಸುಧಾಕರ ರಾವ್‌ ಪೇಜಾವರ, ಬಂಟ್ವಾಳ ಗಾಣಿಗ ಸಂಘ ಅಧ್ಯಕ್ಷ ಶ್ರೀ ರಘು ಸಫಲ್ಯ, ಬಜರಂಗದಳ ವಿಭಾಗ ಸಂಚಾಲಕ ಶ್ರೀ ಭುಜಂಗ ಕುಲಾಲ್, ಶ್ರೀ ಬಾಲಕೃಷ್ಣ ಕಾವ, ಶ್ರೀ ಯಶೋಧರ ಕಾವ ಪಾದೆ ಅದ್ಯಪಾಡಿ, ಶ್ರೀ ರವೀಂದ್ರ ಕೌಡೂರ, ಶ್ರೀ ಪುರುಷೋತ್ತಮ ಪೂಜಾರಿ, ಶ್ರೀ ಪ್ರಶಾಂತ್ ಪೂಜಾರಿ, ಶ್ರೀ ಪ್ರವೀಣ್ ಶೆಟ್ಟಿ ಮರಕಡ, ಶ್ರೀ ಯೋಗೀಶ್ ಶೆಟ್ಟಿ ಥೆಂಜಾ, ಶ್ರೀ ಪ್ರಭಾಕರ ಆಚಾರ್ಯ ಕಂದಾವರ, ಶ್ರೀ ಗೋಪಾಲಕೃಷ್ಣ ಭಟ್, ಶ್ರೀ ಆದಿತ್ಯ ಭಟ್ ಬೀಬಿಲಚ್ಚಿಲ್, ಸೌಮ್ಯಾ ಭಟ್‌ ಕಟೀಲು, ಬೀಬೀಲಚ್ಚಿಲ್ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಮೋನಪ್ಪ ಮೇಸ್ತ್ರಿ ಬೀಬಿಲಚ್ಚಿಲ್ ಹಾಗೂ ಮೊದಲಾದವರು…

Read More

ಮುಡಿಪು : ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಆಶ್ರಯದಲ್ಲಿ ‘ಸಂಭ್ರಮ-2023’ ಸಾಂಸ್ಕೃತಿಕ ಸ್ಪರ್ಧೆಯು ದಿನಾಂಕ 17-07-2023 ಸೋಮವಾರ ಉದ್ಘಾಟನೆಗೊಂಡು 18 ಮತ್ತು 19-07-2023ರಂದು ಮೂರು ದಿನಗಳ ಕಾಲ ನಡೆಯಿತು. ಈ ಕಾರ್ಯಕ್ರಮವನ್ನು ಮಂಗಳಾ ಸಭಾಂಗಣದಲ್ಲಿ ಸಮಾಜ ಸೇವಕ ರವಿ ಕಟಪಾಡಿ ಅವರು ಉದ್ಘಾಟಿಸಿ ಮಾತನಾಡುತ್ತಾ “ಕಾಲ ಬದಲಾದರೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯದೆ ಸಂಸ್ಕಾರದ ಮೌಲ್ಯವನ್ನು ಅರಿತುಕೊಂಡು ನಾವು ಮುನ್ನಡೆಯಬೇಕು. ನಾವು ಯಾವುದೇ ಸಾಧನೆ ಮಾಡಿದರೂ ನಮ್ಮ ತಂದೆ ತಾಯಿಗೆ ಕೊಡುವ ಗೌರವದ ಮೌಲ್ಯ ನಮಗೆ ತಿಳಿದಿರಬೇಕು. ಇಂದಿನ ಆಧುನಿಕ ಯುಗದಲ್ಲಿ ಸಾಧನೆಗೆ ಬಹಳಷ್ಟು ಮಾರ್ಗಗಳಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಬದುಕನ್ನು ಕಂಡುಕೊಳ್ಳಬೇಕು” ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಪತಿ ಪ್ರೊ. ಜಯರಾಜ್ ಅಮೀನ್‌ ಅವರು ಮಾತನಾಡಿ, “ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು” ಎಂದರು. ರಾಷ್ಟ್ರಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಜಯಗಳಿಸಿದ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಗೋವಿಂದ ದಾಸ…

Read More

ಮುಂಬೈ: ಶ್ರೀ ಶನೀಶ್ವರ ಮಹಾತ್ಮೆ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿ ಶ್ರೀ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು ಅವರಿಗೆ ಮುಂಬೈ ಕಲ್ಯಾಣದ ಹೋಟೆಲ್ ಗುರುದೇವ್ ಗ್ರ್ಯಾಂಡ್ ನಲ್ಲಿ ದಿನಾಂಕ 17-07-2023ರಂದು ‘ಗುರುದೇವ ಕಲಾ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ನಂದಯ್ಯ ಗಾಣದ ರಾಮಣ್ಣ ಪಾತ್ರ ನಿರ್ವಹಣೆಯಲ್ಲಿ ಸಿದ್ಧಿ ಪ್ರಸಿದ್ಧಿ ಪಡೆದ ಮೊಯ್ಲೊಟ್ಟು ಅವರ ಸಾಧನೆಯನ್ನು ಗುರುತಿಸಿ, ಎಕ್ಕಾರು ನಡ್ಯೋಡಿ ಗುತ್ತು ಭಾಸ್ಕರ ಶೆಟ್ಟಿ ಮತ್ತು ಶಾರದಾ ಭಾಸ್ಕರ ಶೆಟ್ಟಿ ಹಾಗೂ ಶ್ರೀಕಾಂತ್ ಶೆಟ್ಟಿ ಅವರು ಚಾರಿಟೇಬಲ್ ಟ್ರಸ್ಟ್ ಮೂಲಕ ಈ ಪ್ರಶಸ್ತಿ ನೀಡಿ ಅಭಿನಂದಿಸಿ ಗೌರವಿಸಿದರು. ಕಲ್ಯಾಣದ ಪ್ರತಿಷ್ಟಿತ ಉದ್ಯಮಿಗಳ ಉಪಸ್ಥಿತಿಯಲ್ಲಿ, ಶ್ರೀ ಶನೀಶ್ವರ ಭಕ್ತವೃಂದ ಪಕ್ಷಿಕೆರೆ ತಂಡದ ಮುಂಬೈ ಯಕ್ಷಯಾನದ ಕಲ್ಯಾಣದಲ್ಲಿ ನಡೆದ ‘ಶ್ರೀ ಸತ್ಯನಾರಾಯಣ ವೃತ ಮಹಾತ್ಮೆ’ ಪೂಜಾ ಸಹಿತ ತಾಳಮದ್ದಳೆಯ ಕಾರ್ಯಕ್ರಮವನ್ನು ಕದ್ರಿ ಶ್ರೀ ನವನೀತ ಶೆಟ್ಟಿ ನಿರ್ವಹಿಸಿದರು. ಹಿಮ್ಮೇಳನದಲ್ಲಿ ಹೆಬ್ರಿ ಗಣೇಶ್, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ದಯಾನಂದ ಶೆಟ್ಟಿಗಾರ್ ಮಿಜಾರ್ ಹಾಗೂ ಅರ್ಥದಾರಿಗಳು ಕದ್ರಿ…

Read More

ಮಂಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದ.ಕ.ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ದಯಾನಂದ ರಾಮಚಂದ್ರ ನಾಯ್ಕ್ ರನ್ನು ದಿನಾಂಕ 21-07-2023 ರಂದು ಭೇಟಿಯಾಗಿ ದ.ಕ.ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಾಹಿತ್ಯ ಪ್ರೇರಣಾ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತಾಗಿ ಶಿಕ್ಷಣ ಇಲಾಖೆಯ ಮೂಲಕ ಮಾರ್ಗದರ್ಶನ ನೀಡಲು ಮನವಿ ಪತ್ರವನ್ನು ನೀಡಲಾಯಿತು. ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವಲ್ಲಿ ಕನ್ನಡ ಭಾಷೆಯೇ ಆಧಾರ. ಈ ನಿಟ್ಟಿನಲ್ಲಿ ಭಾಷೆಯ ಸಬಲೀಕರಣಕ್ಕೆ ದ.ಕ.ಜಿಲ್ಲೆಯಾದ್ಯಂತ ಪ್ರತೀ ಶಾಲೆಗಳಲ್ಲಿ ವರ್ಷದಲ್ಲಿ ಕನಿಷ್ಠ ಒಂದಾದರೂ ಕನ್ನಡ ಪರ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು. ಸಾಹಿತಿಗಳ ಪರಿಚಯ, ಸಾಹಿತ್ಯಿಕ ಉಪನ್ಯಾಸ, ವಾಚನಾಲಯ ಬಳಕೆ, ಕತೆ ಮತ್ತು ಕವನ ಬರವಣಿಗೆ ಕಮ್ಮಟ, ಕನ್ನಡ ಗೀತೆಗಳ ಗಾಯನ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಕ್ರಮ ಕೈಗೊಳ್ಳಲು ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆ ಶಾಲೆಗಳಿಗೆ ಸೂಕ್ತ…

Read More

ಕಿನ್ನಿಗೋಳಿ: ಯಕ್ಷಲಹರಿ(ರಿ.) ಮತ್ತು ಯುಗಪುರುಷ ಕಿನ್ನಿಗೋಳಿ ಪ್ರಸ್ತುತಪಡಿಸುವ ಯಕ್ಷಲಹರಿಯ 33ನೇ ವಾರ್ಷಿಕ ಸಂಭ್ರಮ-2023 ‘ಚರಿತಂ ಮಹಾತ್ಮನಃ’ ಯಕ್ಷಗಾನ ವಾಗ್ವೈಭವದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 31-07-2023ರಂದು ನಡೆಯಲಿದೆ. 31-07-2023ರಿಂದ 08-08-2023ರ ವರೆಗೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಸಂಜೆ ಗಂಟೆ 5-00 ರಿಂದ 8.30ರ ವರೆಗೆ ‘ಯಕ್ಷಗಾನ ವಾಗ್ವೈಭವ’ ತಾಳಮದ್ದಳೆ ಕಾರ್ಯಕ್ರಮವು ನಡೆಯಲಿದೆ. ದಿನಾಂಕ 31-07-2023ನೇ ಸೋಮವಾರ ಪ್ರಸಂಗ ‘ಧ್ರುವ ಚರಿತ್ರೆ’. ಭಾಗವತರಾಗಿ ಪ್ರದೀಪ್ ಗಟ್ಟಿ ಹಾಗೂ ದೇವರಾಜ ಆಚಾರ್ಯ. ಚಂಡೆ ಮತ್ತು ಮದ್ದಳೆಯಲ್ಲಿ ರಾಮಪ್ರಕಾಶ ಕಲ್ಲೂರಾಯ ಹಾಗೂ ಸವಿನಯ ನೆಲ್ಲಿತೀರ್ಥ. ಅರ್ಥಧಾರಿಗಳಾಗಿ ವಿಷ್ಣು ಶರ್ಮ ವಾಟೆಪಡ್ಪು, ಎಂ.ಕೆ.ರಮೇಶ ಆಚಾರ್ಯ, ನಾ.ಕಾರಂತ ಪೆರಾಜೆ, ಶೇಣಿ ವೇಣುಗೋಪಾಲ, ವೆಂಕಟರಮಣ ಕೆರೆಗದ್ದೆ ಮತ್ತು ಪಶುಪತಿ ಶಾಸ್ತ್ರಿ ಭಾಗವಹಿಸಲಿದ್ದಾರೆ. ದಿನಾಂಕ 1-08-2023ನೇ ಮಂಗಳವಾರ ಪ್ರಸಂಗ ‘ನಳ ಚರಿತ್ರೆ’. ಭಾಗವತರಾಗಿ ರಾಮಕೃಷ್ಣ ಮಯ್ಯ, ಸಿರಿಬಾಗಿಲು. ಚಂಡೆ ಮತ್ತು ಮದ್ದಳೆಯಲ್ಲಿ ಸಕ್ಕರೆಮೂಲೆ ಗಣೇಶ ಭಟ್ ಹಾಗೂ ವೇದವ್ಯಾಸ ರಾವ್‌ ಕುತ್ತೆತ್ತೂರು. ಅರ್ಥಧಾರಿಗಳಾಗಿ ಸರ್ಪಂಗಳ ಈಶ್ವರ ಭಟ್, ರವಿರಾಜ ಪನೆಯಾಲ, ಸಂಜಯ ಕುಮಾರ್…

Read More