Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 05-02-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ಧೀಮಹಿ ಮಟ್ಟು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀಮತಿ ಭಾಗ್ಯಲಕ್ಷ್ಮಿ ಹಾಗೂ ಶ್ರೀ ಪ್ರಸಾದ್ ರಾವ್ ಮಟ್ಟು ದಂಪತಿಗಳ ಸುಪುತ್ರಿಯಾದ ವಿದುಷಿ ಕು. ಧೀಮಹಿ ನೃತ್ಯನಿಕೇತನ ಕೊಡವೂರು (ರಿ)ನ ನಿರ್ದೇಶಕರಾದ ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಶ್ರೀಮತಿ ಮಾನಸಿ ಸುಧೀರ್ ಇವರಿಂದ ಕಳೆದ ಇಪ್ಪತ್ತು ವರ್ಷಗಳಿಂದ ನೃತ್ಯಾಭ್ಯಾಸವನ್ನು ಪಡೆಯುತ್ತಿದ್ದಾಳೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನ ಪಡೆದಿರುವ ಈಕೆ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿರುತ್ತಾಳೆ. 2017ರಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉತ್ತಮ…
ಬೆಳಗಾವಿ : ರಂಗಸಂಪದವರು ತಿಲಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದಿರದಲ್ಲಿ ದಿನಾಂಕ 09-12-2023ರಂದು ಹಮ್ಮಿಕೊಂಡಿದ್ದ ನಿನಾಸಂ ತಂಡದವರ ‘ನಿನಾಸಂ ತಿರುಗಾಟ’ದಲ್ಲಿ ಎರಡು ದಿನಗಳ ನಾಟಕೋತ್ಸವವನ್ನು ಖ್ಯಾತ ನ್ಯಾಯವಾದಿ, ರಂಗಸಂಪದದ ಪೋಷಕ ಎಸ್.ಎಂ. ಕುಲಕರ್ಣಿಯವರು ಜಾಗಟೆಯನ್ನು ಬಾರಿಸುವದರ ಮೂಲಕ ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಸುಮಾರು 45 ವರ್ಷಗಳ ಇತಿಹಾಸವನ್ನು ರಂಗಸಂಪದ ಹೊಂದಿದೆ. ಪ್ರೇಕ್ಷಕರಲ್ಲಿ ನಾಟಕ ನೋಡುವ ಹೆಚ್ಚಿನ ಅಭಿರುಚಿಯನ್ನು ಮೂಡಿಸಿದ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲುತ್ತದೆ. ಹಲವಾರು ಕಷ್ಟನಷ್ಟಗಳಿಂದ ನಡೆದು ಬಂದಿರುವ ರಂಗಸಂಪದ ತಂಡ ಇಂದು ಕರ್ನಾಟಕದಾದ್ಯಂತ ರಂಗಾಸಕ್ತರ ಪ್ರೀತಿಗೆ ಪಾತ್ರವಾಗಿದೆ. ಪ್ರೇಕ್ಷಕರು ನಾಟಕ ನೋಡುವುದರೊಂದಿಗೆ ಧನಸಹಾಯವನ್ನು ನೀಡುವುದು ಅಷ್ಟೇ ಅತ್ಯವಶ್ಯವಾಗಿದೆ. ಜನರು ಎಲ್ಲಾ ರೀತಿಯ ಸಹಾಯ ಹಸ್ತ ನೀಡಿದಲ್ಲಿ ರಂಗಸಂಪದವು ಇನ್ನೂ ಒಳ್ಳೊಳ್ಳೆ ನಾಟಕಗಳನ್ನು ತಮ್ಮ ಮುಂದಿಡುತ್ತದೆ” ಎಂದು ಹೇಳಿದರು. ನಿನಾಸಂ ತಂಡದವರಿಂದ ಜಾನಪೀಠ ಪ್ರಶಸ್ತಿ ವಿಜೇತ ಡಾ.ಚಂದ್ರಶೇಖರ ಕಂಬಾರ ರಚನೆಯ ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ ‘ಹುಲಿ ನೆರಳು’ ನಾಟಕ ಪ್ರದರ್ಶನಗೊಂಡಿತು. ರಂಗಸಂಪದಕ್ಕೆ ಧನಸಹಾಯ ನೀಡಿ ಪ್ರೋತ್ಸಾಹಿಸಿದ ಮಹನೀಯರನ್ನು ಗೌರವಿಸಲಾಯಿತು. ರಂಗಸಂಪದ ಅಧ್ಯಕ್ಷ…
ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕೇಂದ್ರದಲ್ಲಿ ತರಬೇತಿ ಪಡೆದ ಮಕ್ಕಳ ರಂಗ ಪ್ರವೇಶ ಕಾರ್ಯಕ್ರಮ ‘ರಂಗಾರ್ಪಣ’ ಹಾಗೂ ಮೇಳಕ್ಕೆ ಪಾದಾರ್ಪಣೆ ಮಾಡುತ್ತಿರುವ ಕಲಾವಿದರಿಗೆ ಅಭಿನಂದನಾ ಕಾರ್ಯಕ್ರಮ ದಿನಾಂಕ 10-12-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕೇಂದ್ರದಿಂದ ಮೇಳಕ್ಕೆ ಪಾದಾರ್ಪಣೆ ಮಾಡುತ್ತಿರುವ ನೀಲಾವರ ಮೇಳದ ಪ್ರದಾನ ಭಾಗವತ ನವೀನ್ ಕೋಟ, ಅಮೃತೇಶ್ವರಿ ಮೇಳದ ಚಂಡೆವಾದಕ ರಾಹುಲ್ ಕುಂದರ್ ಕೋಡಿ, ಸೌಕೂರು ಮೇಳದ ಚಂಡೆವಾದಕ ವಿಘ್ನೇಶ್ ಆಚಾರ್ ಹಾಗೂ ಮೇಗರವಳ್ಳಿ ಮೇಳದ ಸಂಗೀತಗಾರ ಸತೀಶ್ ಉಳ್ಳೂರು ಇವರನ್ನು ಅಮೃತೇಶ್ವರಿ ಮೇಳದ ಯಜಮಾನರಾದ ಆನಂದ ಸಿ. ಕುಂದರ್ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು “ಕರಾವಳಿಯಲ್ಲಿ ಸಮಾಜದ ಸಂಸ್ಕೃತಿ ಉಳಿಯುವಲ್ಲಿ ಬಹುದೊಡ್ಡ ಪಾಲು ಕೊಟ್ಟದ್ದು ಯಕ್ಷಗಾನ. ಮಕ್ಕಳಲ್ಲಿ ಸಂಸ್ಕೃತಿಯ ಬೆಳಕು ಚೆಲ್ಲಿ ಸುಂದರ ಸಮಾಜವನ್ನು ರೂಪಿಸುವ ಕಾರ್ಯ ಕರಾವಳಿ ಭಾಗದಲ್ಲಿ ಮುಂಚೂಣಿಯಲ್ಲಿದೆ. ನಿರಂತರ ಬೇರೆ ಬೇರೆ ಕಲಾ ವಿಭಾಗದಲ್ಲಿ ತೊಡಗಿಸಿಕೊಂಡ ಸಂಸ್ಥೆಯ ಸಾಧನೆ ಶ್ಲಾಘನೀಯ.…
ಉರ್ವಸ್ಟೋರ್ : ಕೀರ್ತಿಶೇಷ ಕುಂಬ್ಳೆ ಸುಂದರರಾವ್ ಸಂಸ್ಕರಣಾ ವೇದಿಕೆ ವತಿಯಿಂದ ಉರ್ವಸ್ಟೋರಿನ ದೇವಾಂಗ ಸಭಾಭವನದಲ್ಲಿ ದಿನಾಂಕ 10-12-2023ರಂದು ‘ಕುಂಬ್ಳೆ ಸುಂದರರಾವ್ ಸಂಸ್ಮರಣಾ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ಹಾಗೂ ಅಭಿನಂದನಾ ಭಾಷಣ ಮಾಡಿದ ಉಡುಪಿಯ ಯಕ್ಷಗಾನ ಕಲಾ ರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ “ಯಕ್ಷಗಾನದ ಮಾತುಗಾರಿಕೆಗೆ ಹೊಸಭಾಷ್ಯ ನೀಡಿದವರ ಪೈಕಿ ಕುಂಬ್ಳೆ ಸುಂದರ ರಾವ್ ಅವರ ಹೆಸರು ಅಜರಾಮರ. ಸಂವಾದ ಸೌಂದರ್ಯ, ಭಾಷಾ ಸೌಂದರ್ಯ, ಭಾವನಾತ್ಮಕ ಮಾತುಗಾರಿಕೆಯ ಅವರು ಶ್ರೇಷ್ಠಸಾಧಕ. ನಿರರ್ಗಳ ಮಾತು ಕುಂಬ್ಳೆ ಸುಂದರರಾವ್ ಅವರ ಶಕ್ತಿ. ಈ ಕಾರಣಕ್ಕಾಗಿಯೇ ಅವರು ಹಿಂದೂ ಸಂಘಟನೆಗಳ ಪರಿಣಾಮಕಾರಿ ಸಂವಹನಕಾರರಾಗಿಯೂ ಕಾರ್ಯ ನಿರ್ವಹಿಸಿದ್ದರು. ಯಕ್ಷಗಾನ ಆಟ-ಕೂಟ ಮತ್ತು ಸಾಮಾಜಿಕ ಕೈಂಕರ್ಯಗಳಲ್ಲಿ ಪೌರಾಣಿಕ ಸಂದೇಶಗಳನ್ನು ಜನತೆಗೆ ತಲುಪಿಸಿದ ಕುಂಬ್ಳೆ ಸುಂದರರಾಯರ ಕೊಡುಗೆ ಅದ್ವಿತೀಯ. ಪಾರ್ತಿಸುಬ್ಬನ ಬಳಿಕ ಕುಂಬಳೆಯ ಮಣ್ಣಿಗೆ ಮಾನ್ಯತೆಯ ಕೀರ್ತಿ ತಂದಿತ್ತ ಅವರು ಇಡೀ ಸೀಮೆಯ ಅಭಿಮಾನದ ಸಂಕೇತ” ಎಂದು ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ…
ಕಿನ್ನಿಗೋಳಿ : ಖಿಲ್ರಿಯಾ ಜುಮ್ಮಾ ಮಸೀದಿಯ ಸುವರ್ಣ ಮಹೋತ್ಸವದ ಅಂಗವಾಗಿ ಖಿಲ್ರಿಯಾ ಜುಮ್ಮಾ ಮಸೀದಿ ಮತ್ತು ಕಿನ್ನಿಗೋಳಿ ತಾಳಿಪ್ಪಾಡಿಯ ಶಾಂತಿನಗರದ ಕೆ.ಜೆ.ಎಂ. ಸುವರ್ಣ ಮಹೋತ್ಸವ ಸಮಿತಿ ಇದರ ವತಿಯಿಂದ ಮಸೀದಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬ್ಯಾರಿ ಮತ್ತು ಕನ್ನಡ ಭಾಷಾ ‘ಕವಿಗೋಷ್ಠಿ’ ಮತ್ತು ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಯು ದಿನಾಂಕ 26-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಮುಸ್ಲಿಂ ಲೇಖಕರ ಸಂಘ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಬಿ.ಎ. ಮಹಮ್ಮದಾಲಿ ಉದ್ಘಾಟಿಸಿ ಮಾತನಾಡಿ “ಸಮುದಾಯದಲ್ಲಿ ಹಲವು ಬರಹಗಾರರು, ಕವಿಗಳು ಇದ್ದು ಅವರಿಗೆ ಪ್ರೋತ್ಸಾಹದ ಅಗತ್ಯವಿದೆ. ಮಸೀದಿಗಳು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು” ಎಂದು ಹೇಳಿದರು. ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆ ವಹಿಸಿದ್ದರು. ಹುಸೈನ್ ಕಾಟಿಪಳ್ಳ, ಶರೀಫ್ ನಿರ್ಮುಂಜೆ, ಮೊಹಮ್ಮದ್ ಮನ್ಸೂರ್ ಮೂಲ್ಕಿ, ಮುಆದ್ ಜಿ.ಎಂ. ಇವರುಗಳು ಬ್ಯಾರಿ ಹಾಗೂ ಕನ್ನಡ ಭಾಷೆಯಲ್ಲಿ ಕವಿತೆ ವಾಚಿಸಿದರು. ಕೆ.ಜೆ.ಎಂ. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಟಿ.ಎಚ್. ಮಯ್ಯದ್ದಿ, ಕೆ.ಜೆ.ಎಂ. ಅಧ್ಯಕ್ಷ ಜೆ.ಎಚ್. ಅಬ್ದುಲ್ ಜಲೀಲ್, ಅಸ್ಗರ್…
ಕುಶಾಲನಗರ : ಕುಶಾಲನಗರ ಸಮೀಪದ ಹೆಬ್ಬಾಲೆ ಬನಶಂಕರಿ ಹಬ್ಬದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಲೆ ಘಟಕದ ವತಿಯಿಂದ ಆಯೋಜಿಸಿದ್ದ ‘ಕವಿಗೋಷ್ಠಿ’ಯು ಬನಶಂಕರಿ ದೇವಸ್ಥಾನ ಆವರಣದಲ್ಲಿ ದಿನಾಂಕ 10-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಉದ್ಘಾಟಿಸಿ ಮಾತನಾಡಿ “ಕವನ ಓದುವ ಜೊತೆಗೆ ಕೇಳುಗರ ಸಂಕಟವನ್ನು ಕವನ ವಾಚಿಸುವ ಕವಿಗಳು ಅರಿಯಬೇಕು. ಈಗಲೇ ಕವಿಗೋಷ್ಠಿಗಳಿಗೆ ಸಾರ್ವಜನಿಕರು ಬರುವುದು ಕಡಿಮೆ. ಅಂತಹುದರಲ್ಲಿ ಕವಿಗಳು ತಮಗೆ ಇಷ್ಟ ಬಂದ ಹಾಗೆ ಬರೆದು ಜನರಲ್ಲಿ ಸಾಹಿತ್ಯ ಆಸಕ್ತಿಯನ್ನು ಮತ್ತಷ್ಟು ಕಡಿಮೆ ಮಾಡಬಾರದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿದ್ದ ಸೋಮವಾರಪೇಟೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, “ಗ್ರಾಮೀಣ ಭಾಗದಲ್ಲಿ ಇಂತಹ ಕವಿಗೋಷ್ಠಿ ನಡೆಸುವ ಮೂಲಕ ಕನ್ನಡ ಭಾಷೆಯ ಗೌರವವನ್ನು ಹೆಚ್ಚಿಸಲಾಗುತ್ತಿದೆ. ಕೊಡಗಿನಲ್ಲಿ ಮಹಿಳಾ ಬರಹಗಾರರ ಸಂಖ್ಯೆ ತುಂಬಾ ಕಡಿಮೆಯಿತ್ತು ಎನ್ನುತ್ತಿದ್ದರು. ಆದರೆ ಇವತ್ತು ಮಹಿಳೆಯರೇ ಹೆಚ್ಚು ಇರುವುದು ಸಂತಸ ತಂದಿದೆ. ಕೊಡಗು ನಿಸರ್ಗಕ್ಕೆ, ವೀರರ ನಾಡು, ಕಾವೇರಿ ನದಿ,…
ಕಟೀಲು : ಕಟೀಲು ಯಕ್ಷಗಾನ ಮೇಳದ ಕಲಾವಿದ ವಾಟೆಪಡ್ಪು ವಿಷ್ಣು ಶರ್ಮ ಅವರ ಅರ್ಥ ವಿವರಣೆಯ ‘ಸಮುದ್ರಮಥನ-ಮೈರಾವಣ’, ‘ಶ್ರೀ ಕೃಷ್ಣ ಪಾರಿಜಾತ- ವಸ್ತ್ರಾಪಹಾರ ದುಶ್ಯಾಸನ ವಧೆ’ ಹಾಗೂ ‘ಸತ್ಯಹರಿಶ್ಚಂದ್ರ ದಕ್ಷಾಧ್ವರ’ ಪ್ರಸಂಗಗಳ ಕೃತಿಗಳನ್ನು ದಿನಾಂಕ 07-12-2023ರಂದು ಕಟೀಲು ಮೇಳಗಳ ತಿರುಗಾಟ ಸಂದರ್ಭ ರಂಗಸ್ಥಳದಲ್ಲಿ ಬಿಡುಗಡೆಗೊಳಿಸಲಾಯಿತು. ಕೃತಿಗಳ ಪ್ರಾಯೋಜಕರಾದ ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಮುಂಬೈ ಉದ್ಯಮಿ ಭಾಸ್ಕರ ಆಳ್ವ, ಅರ್ಚಕರಾದ ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ ಮತ್ತು ಶ್ರೀಹರಿ ಆಸ್ರಣ್ಣ ಉಪಸ್ಥಿತರಿದ್ದರು. “ಕಳೆದ ನಾಲ್ಕು ದಶಕಗಳಿಂದ ಕಲಾವಿದರಾಗಿರುವ ವಿಷ್ಣುಶರ್ಮರು ವೇಷಧಾರಿಯಾಗಿ, ಅರ್ಥವಾದಿಯಾಗಿ ಪ್ರಸಂಗಗಳ ನಡೆಯನ್ನು ತಿಳಿದಿರುವ ಅನುಭವಿ. ಈ ಕೃತಿಗಳು ಹವ್ಯಾಸಿ ಕಲಾವಿದರಿಗೆ ಪ್ರಯೋಜನವಾಗಲಿವೆ” ಎಂದು ಸುಣ್ಣಂಬಳ ವಿಶ್ವೇಶ್ವರ ಭಟ್ ಹೇಳಿದರು. ಕಟೀಲು ಮೇಳದ ರಂಗಸ್ಥಳದಲ್ಲೇ ನನ್ನ ಕೃತಿಗಳು ಬಿಡುಗಡೆಯಾದದ್ದು ನನ್ನ ಭಾಗ್ಯ ಎಂದು ವಿಷ್ಣು ಶರ್ಮ ಹೇಳಿದರು.
ಬೆಂಗಳೂರು : ಆತ್ಮಾಲಯ ಅಕಾಡಮಿ ಬೆಂಗಳೂರು ಇದರ ಮುಖ್ಯಸ್ಥೆ ಡಾ.ಪದ್ಮಜ ಸುರೇಶ್ರವರ ನೇತೃತ್ವದಲ್ಲಿ ವಾರ್ಷಿಕವಾಗಿ ಪ್ರದಾನ ಮಾಡುವ 2023ರ ಶ್ರೀ ಶಾಂತ ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿಯನ್ನು ತೆಂಕು ತಿಟ್ಟು ಯಕ್ಷಗಾನದ ಖ್ಯಾತ ಕಲಾವಿದ, ಸಂಘಟಕ ಕೆ.ಎಚ್. ದಾಸಪ್ಪ ರೈ ಇವರಿಗೆ ದಿನಾಂಕ 09-12-2023ರಂದು ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮವು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕ ಯೂತ್ ಸೆಂಟ್ರಲ್ ಸಭಾಂಗಣದಲ್ಲಿ ಜರಗಿತು. ಈ ಪ್ರಶಸ್ತಿಯು ನಗದು ರೂ.30,000/- ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯರವರು ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು. ಈ ಹಿಂದೆ ವಿದ್ವಾನ್ ಕುದುಮಾರ್ ವೆಂಕಟ್ರಮಣ, ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಭಟ್, ಪೂಕಳ ಲಕ್ಷ್ಮೀನಾರಾಯಣ ಭಟ್, ಕುಂಬ್ಳೆ ಶ್ರೀಧರ ರಾವ್ ಅವರು ಸಂಗೀತ ಹಾಗೂ ಯಕ್ಷಗಾನದ ಕ್ಷೇತ್ರಗಳ ಸಾಧನೆಗಾಗಿ ಈ ಪ್ರಶಸ್ತಿ ಪಡೆದಿದ್ದಾರೆ. ಪುತ್ತೂರು ತಾಲೂಕಿನ ಈಶ್ವರ ಮಂಗಲದ ಕುತ್ಯಾಳ ಹೊಸಮನೆಯ ಮೂಲ ಮನೆತನ ಕೆ.ಎಚ್.…
ಬೈಂದೂರು : ಬೈಂದೂರು ತಾಲೂಕಿನ ಅರೆಹೊಳೆಯ ನಂದಗೋಕುಲ ರಂಗಶಾಲೆಯಲ್ಲಿ ಅರೆಹೊಳೆ ಪ್ರತಿಷ್ಠಾನ, ರಂಗ ಪಯಣ ಬೆಂಗಳೂರು, ಮಂದಾರ (ರಿ.) ಬೈಕಾಡಿ ಮತ್ತು ಜನಪ್ರತಿನಿಧಿ ಕುಂದಾಪುರ ಇವರು ಆಯೋಜಿಸಿದ ಕನಸು ಕಾರ್ತಿಕ್ ನೆನಪಿನಲ್ಲಿ ‘ಅರೆಹೊಳೆ ನಾಟಕೋತ್ಸವ’ವು ದಿನಾಂಕ 03-12-2023ರಿಂದ 05-12-2023ರವರೆಗೆ ನಡೆಯಿತು. ಈ ನಾಟಕೋತ್ಸವದಲ್ಲಿ ಖ್ಯಾತ ರೇಡಿಯೋ ನಿರೂಪಕಿ, ಲೇಖಕಿ ಆರ್.ಜೆ. ನಯನ “ಯಾವ ಊರಿನಲ್ಲಿ ಸಂಸ್ಕೃತಿ ಬೆಳೆಯುತ್ತದೋ ಆ ಊರು ಅಭಿವೃದ್ಧಿಯಾಗುತ್ತದೆ, ಸಂಸ್ಕೃತಿಯನ್ನು ನಾಶ ಮಾಡಿದ ಊರು ಅಥವಾ ಜನಾಂಗ ನಶಿಸುತ್ತದೆ” ಎಂದು ಹೇಳಿದರು. ಕನಸು ಕಾರ್ತಿಕ್ ನೆನಪಿನಲ್ಲಿ ಆಯೋಜಿಸಿದ್ದ ಅರೆಹೊಳೆ ನಾಟಕೋತ್ಸವದ ಮೊದಲ ದಿನ, ಕಳೆದ ವರ್ಷ ನಿಧನರಾದ ಯುವ ರಂಗಕರ್ಮಿ, ರಂಗಕಲಾವಿದ ಕನಸು ಕಾರ್ತಿಕ್ ನೆನಪಿನ ‘ಯುವರಂಗ ಪುರಸ್ಕಾರ’ವನ್ನು ಕಲಾವಿದೆ ಲಿಖಿತಾ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತಾಡಿದ ಲಿಖಿತಾ ಶೆಟ್ಟಿ “ಕನಸು ಕಾರ್ತಿಕ್ ಮುಖ್ಯವಾಗಿ ಹಾಸ್ಯ ಕ್ಷೇತ್ರದಲ್ಲಿ ಆಸಕ್ತರಾಗಿದ್ದು ಬೇರೆಯವರನ್ನು ಪ್ರೇರೇಪಿಸಿ ಪ್ರೋತ್ಸಾಹಿಸುತ್ತಿದ್ದುದ್ದನ್ನು ನೆನೆಸಿಕೊಂಡರು. ಕನಸು ಕಾರ್ತಿಕ್ ಕಲ್ಪನೆಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ…
ಬೆಂಗಳೂರು : ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 08-12-2023ರಂದು ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡುತ್ತಾ, “ಬಡತನದ ಬೇಗುದಿಯಲ್ಲಿ ಬೆಂದು ಬಂಗಾರವಾಗಿ, ಸಮಾಜದಲ್ಲಿಯ ಮೌಢ್ಯವನ್ನು ದೂರಮಾಡುವುದರ ಜೊತೆಗೆ ಜೀವನದ ವಾಸ್ತವಿಕತೆಯನ್ನು ಮಾರ್ಮಿಕವಾಗಿ ತಿಳಿಸಿಕೊಟ್ಟವರು ಡಾ. ಸಿದ್ದಲಿಂಗಯ್ಯನವರು. ಕವಿ, ಸಾಹಿತಿಗಳನ್ನು ಜಾತಿ ಧರ್ಮಕ್ಕೆ ಸೀಮಿತಗೊಳಿಸಬಾರದು. ಬದಲಿಗೆ ಸಾಹಿತ್ಯದಿಂದಲೇ ಅವರು ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರನ್ನು ಗೌರವಿಸುವ ಮೂಲಕ ಸಾಹಿತ್ಯಕ್ಕೆ ಸಾಹಿತ್ಯವೇ ಸಾಟಿ ಎನ್ನುವ ತತ್ವವನ್ನು ಹೊಂದಿದೆ. ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಡಾ. ಸಿದ್ದಲಿಂಗಯ್ಯ ಅವರನ್ನು ದಲಿತ ಕವಿ ಎಂದೇ ಗುರುತಿಸಿದ್ದರು. ಅದರ ಜೊತೆಯಲ್ಲಿ ಬಹುಮುಖ ಪ್ರತಿಭೆಯ ಸಿದ್ದಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಸಾಹಿತ್ಯವನ್ನು ರಚಿಸಿದ್ದು ಮಾತ್ರವಲ್ಲದೆ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ…