Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ದಿನಾಂಕ 01 ಆಗಸ್ಟ್ 2025 ಶುಕ್ರವಾರದಂದು ಗಡಿನಾಡಿನ ಧೀರೆ ದಿ. ತೊಟ್ಟೆತ್ತೋಡಿ ಪ್ರೇಮ ಕೆ. ಭಟ್ ಇವರಿಗೆ ನುಡಿನಮನ, ಪುಷ್ಪ ನಮನ ಹಾಗೂ ಸಂಗೀತ ಸಮರ್ಪಣೆಯ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮ ಜರುಗಿತು. ಮಂಗಳೂರಿನ ಮಂಗಳಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ. ಗಣಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ರಾಜಾರಾಮ ಮೀಯಪದವು, ಕ.ಸಾ.ಪ. ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ, ಡಾ. ಚಂದ್ರಶೇಖರ್ ನುಡಿನಮನ ಸಲ್ಲಿಸಿದರು. ಕವಯಿತ್ರಿ ಪ್ರಮೀಳಾ ಚುಳ್ಳಿಕ್ಕಾನ ಅವರು ಪ್ರೇಮಾ ಕೆ. ಭಟ್ಟರ ಬಗ್ಗೆ ಬರೆದ ಕವನಗಳನ್ನು ಹಾಗೂ ಡಾ. ಎಂ.ಎಸ್. ಮಹೇಶ್ ಹಾಗೂ ಕೆ.ಆರ್. ರಾಘವೇಂದ್ರ ಆಚಾರ್ಯ ಹಾಡಿದರು. ನಂತರ ಸಂಸ್ಮರಣಾ ಸಂಗೀತ ಕಛೇರಿಯನ್ನು ಮೈಸೂರಿನ ವಿದ್ವಾನ್ ಎನ್.ಆರ್. ಪ್ರಶಾಂತ್ ನಡೆಸಿಕೊಟ್ಟರು. ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು. ಡಾ. ಉದಯಶಂಕರ್ ಸ್ವಾಗತಿಸಿ, ಸಂಸ್ಥೆಯ ನಿರ್ದೇಶಕಿ ಉಮಾಶಂಕರಿ ವಂದಿಸಿದರು.
ರಾಮನಗರ : ಚುಟುಕು ಸಾಹಿತ್ಯ ಪರಿಷತ್ತು ರಾಮನಗರ ಹಾಗೂ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿಯ ಸಹಯೋಗದಲ್ಲಿ ದಿನಾಂಕ 30 ಆಗಸ್ಟ್ 2025ರ ಶನಿವಾರದಂದು ರಾಮನಗರದ ನ್ಯೂ ಎಕ್ಸ್ ಪರ್ಟ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ‘ಚುಟುಕು ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷರಾಗಿ ಸಾಹಿತಿಗಳು, ಕಲಾವಿದರು ಹಾಗೂ ಪೊಲೀಸ್ ಅಧಿಕಾರಿಗಳಾದ ಡಾ. ಶೈಲೇಶ್ ಕಾಕೋಳು ಇವರನ್ನು ಎರಡು ಸಂಸ್ಥೆ ಹಾಗೂ ಹಿರಿಯರು ಆಶಯದಂತೆ ಅವರ ಗಣನೀಯ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಇವರಿಗೆ ಎರಡು ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನು ಅವರ ರಾಮನಗರದ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ವಕೀಲರಾದ ಶ್ರೀ ಅಂಬರೀಷ್, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಎಮ್. ರಮೇಶ ಕಮತಗಿ, ನಿವೃತ್ತ ಉಪನ್ಯಾಸಕರಾದ ಪೂರ್ಣಚಂದ್ರ, ಪ್ರೊ. ರಮೇಶ ಹೊಸದೊಡ್ಡಿ, ಚುಟುಕು ಕವಿ ಜಿ. ರಘುನಾಥ್, ವಕೀಲರಾದ ಹರೀಶ್, ಶ್ರೀಮತಿ ಅರ್ಪಿತಾ ಇತರರು ಉಪಸ್ಥಿತರಿದ್ದರು.
ಮಧೂರು : ಉಳಿಯ ದನ್ವಂತರಿ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 03 ಆಗಸ್ಟ್ 2025 ಭಾನುವಾರದಂದು ‘ಗುರುದಕ್ಷಿಣೆ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರು ಶ್ರೀ ವಾಸುದೇವ ಕಲ್ಲೂರಾಯ ಮಧೂರು ಮತ್ತು ಶ್ರೀ ರವಿಶಂಕರ ಮಧೂರು ಹಾಗೂ ಮದ್ದಳೆಯಲ್ಲಿ ಶ್ರೀ ಮುರಳಿಮಾಧವ ಮಧೂರು ಮತ್ತು ಶ್ರೀ ಗೋಪಾಲ ಕೃಷ್ಣ ನಾವಡ ಮಧೂರು ಇವರುಗಳು ಸಹಕರಿಸಿದರು. ಮುಮ್ಮೇಳದಲ್ಲಿ ದ್ರೋಣ 1: ಶ್ರೀ ವಿಷ್ಣು ಭಟ್ ಕಕ್ಕೆಪ್ಪಾಡಿ ಮಧೂರು ಮತ್ತು ದ್ರೋಣ 2: ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಏಕಲವ್ಯ: ನರಸಿಂಹ ಬಲ್ಲಾಳ್, ಧ್ರುಪದ ರಾಜ 1: ಶ್ರೀ ಸುದರಕೃಷ್ಣ ಗಟ್ಟಿ ಕಾಸರಗೋಡು ಮತ್ತು ಧ್ರುಪದ ರಾಜ 2: ಶ್ರೀ ಮಯೂರ ಆಸ್ರ ಉಳಿಯ, ಅರ್ಜುನ 1: ಗೋಪಾಲ ಅಡಿಗ ಕೂಡ್ಲು ಮತ್ತು ಅರ್ಜುನ 2 ಶ್ರೀಮತಿ ಸರಸ್ವತಿ ಟೀಚರ್ ಕೂಡ್ಲು, ಕೌಸವಿ : ಶ್ರೀಮತಿ ಧನ್ಯ ಮುರಳಿ ಕೃಷ್ಣ ಆಸ್ರ ಉಳಿಯ…
ಕೋಟ : ಪ್ರತಿಷ್ಠಿತ ಯಕ್ಷ ಕಲಾಸಂಸ್ಥೆಯಾದ ಕೋಟ ಯಕ್ಷ ಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ಇದರ ನೂತನ ಅಧ್ಯಕ್ಷರಾಗಿ ಗಿರೀಶ್ ಗಾಣಿಗ ಬೆಟ್ಲಕ್ಕಿ ಇವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀನಾಥ ಉರಾಳ, ಕಾರ್ಯದರ್ಶಿಯಾಗಿ ವಿಘ್ನೇಶ್ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ಅನೂಪ ಉರಾಳ, ಕಾರ್ಯಾಧ್ಯಕ್ಷರಾಗಿ ಹರೀಶ್ ದೇವಾಡಿಗ, ಕೋಶಾಧಿಕಾರಿಯಾಗಿ ಕಾರ್ತಿಕ ಆಚಾರ್ಯ ಇವರುಗಳು ಆಯ್ಕೆಯಾದರು. ಈ ನೂತನ ಆಡಳಿತ ಮಂಡಳಿಯ ಸಮಿತಿ ರಚನಾ ಪ್ರಕ್ರಿಯೆಯಲ್ಲಿ ಸ್ಥಾಪಕಾಧ್ಯಕ್ಷ ಹರೀಶ್ ಭಂಡಾರಿ, ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ಹಾಗೂ ಹಿರಿ, ಕಿರಿಯ ಸದಸ್ಯರು ಉಪಸ್ಥಿತರಿದ್ದರು.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಇದರ ಆಶ್ರಯದಲ್ಲಿ ನಿವೃತ್ತ ಶಿಕ್ಷಕ, ಕವಿ ವಿ.ಜಿ.ಎಸ್.ಎನ್. ಭಟ್ ಇವರ ‘ಗುಬ್ಬಚ್ಚಿ ಗೂಡು’ ಚುಟುಕು ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 04 ಆಗಸ್ಟ್ 2025ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಲಾ ಕಾಲೇಜಿನಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃತಿ ಲೋಕಾರ್ಪಣೆಗೊಳಿಸಿದ ಹೆಸರಾಂತ ವೈದ್ಯ ಸಾಹಿತಿ ಡಾ. ಮುರಲೀಮೋಹನ್ ಚೂಂತಾರು ಮಾತನಾಡಿ “ಹೇಗೆ ವೈದ್ಯರ ಚುಚ್ಚು ಮದ್ದು ರೋಗಗಳನ್ನು ವಾಸಿ ಮಾಡುವುದೋ ಹಾಗೆಯೇ ಸಮಾಜದಲ್ಲಿರುವ ಕುಂದು ಕೊರತೆಗಳೆಂಬ ರೋಗಗಳಿಗೆ ಕವಿಗಳ ಚುಟುಕುಗಳು ಚುಚ್ಚು ಮದ್ದಿನಂತೆ ಕೆಲಸ ಮಾಡುತ್ತವೆ. ಅವು ಸಮಾಜವನ್ನು ತಿದ್ದುವ, ಎಚ್ಚರಿಸುವ, ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತವೆ. ಕೃತಿಕಾರರು ತಮ್ಮ ಸುತ್ತ ಮುತ್ತಲಿನ ವಿಷಯಗಳನ್ನೇ ಚುಟುಕಾಗಿಸಿ ಇಂತಹ ಕಾರ್ಯವನ್ನು ಮಾಡಿರುವುದು ಅಭಿನಂದನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಮಾತನಾಡಿ “ನಿವೃತ್ತ ಜೀವನದಲ್ಲಿ ಸಾಹಿತ್ಯದ ಪ್ರವೃತ್ತಿ ಸಂತಸಮಯ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಕಾರ್ಯ ಚಟುವಟಿಕೆಗಳಲ್ಲಿ ಪುಸ್ತಕ ಪ್ರಕಟಣೆ ಬಹಳ ಮುಖ್ಯವಾದದ್ದು. ಇದುವರೆಗೂ 1,800ಕ್ಕೂ ಹೆಚ್ಚು ಪುಸ್ತಕಗಳನ್ನು ಪರಿಷತ್ತು ಪ್ರಕಟಿಸಿದ್ದು, ಅದು ಒಂದು ರೀತಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು. ಪರಿಷತ್ತು ಪ್ರಕಟಿಸುವ ಪುಸ್ತಕಗಳು ಎಂದರೆ ಹೂರಣ ಮತ್ತು ಮುದ್ರಣಗಳೆರಡರೆಲ್ಲಿಯೂ ಶ್ರೇಷ್ಠ ಗುಣಮಟ್ಟವನ್ನು ಹೊಂದಿರುತ್ತದೆ. ಕನ್ನಡಿಗರಿಗೆ ಈ ಕೃತಿಗಳನ್ನು ತಲುಪಿಸುವ ಉದ್ದೇಶದಿಂದ ವರ್ಷದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಮತ್ತು ಕನ್ನಡ ರಾಜ್ಯೋತ್ಸವಗಳ ಸಂದರ್ಭದಲ್ಲಿ ನಾಲ್ಕು ತಿಂಗಳುಗಳ ಕಾಲ ವಿಶೇಷ ರಿಯಾಯತಿ ಮಾರಾಟವನ್ನು ಕನ್ನಡ ಸಾಹಿತ್ಯ ಪರಿಷತ್ತು ಅದಮ್ಯ ಪುಸ್ತಕ ಪ್ರೇಮಿ ಗಳಗನಾಥರ ಹೆಸರಿನ ತನ್ನ ‘ಪುಸ್ತಕ ಮಳಿಗೆ’ಯಲ್ಲಿ ಏರ್ಪಡಿಸುತ್ತದೆ. ಅದರಂತೆ 79ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 2025ರ ಆಗಸ್ಟ್ ತಿಂಗಳಿಡೀ ‘ವಿಶೇಷ ರಿಯಾಯತಿ ಮಾರಾಟ’ವನ್ನು ನಡೆಸಲಿದ್ದು ಶೇ.10ರಿಂದ ಶೇ.75ರವರೆಗೆ ವಿಶೇಷ ರಿಯಾಯಿತಿಯನ್ನು ಪರಿಷತ್ತಿನ ವಿವಿಧ ಪ್ರಕಟಣೆಗಳ ಮೇಲೆ ಈ ಸಂದರ್ಭದಲ್ಲಿ ನೀಡಲಾಗುವುದು. ಪರಿಷತ್ತಿನ ಕಾರ್ಯ ನಿರ್ವಹಣೆಯ ದಿನಗಳಲ್ಲಿ…
ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ಸಹಜ ರಂಗ 2025’ ಕಾಲೇಜು ವಿದ್ಯಾರ್ಥಿಗಳಿಗೆ ‘ರಂಗ ತರಬೇತಿ ಶಿಬಿರ’ವನ್ನು ದಿನಾಂಕ 15 ಆಗಸ್ಟ್ 2025ರಿಂದ 18 ಸೆಪ್ಟೆಂಬರ್ 2025ರವರೆಗೆ ಪ್ರತಿದಿನ ಸಂಜೆ 4-45ರಿಂದ 8-30 ಗಂಟೆವರೆಗೆ ಮೈಸೂರಿನ ಮಾನಸಗಂಗೋತ್ರಿ ಗಾಂಧಿಭವನ ಆವರಣದಲ್ಲಿ ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಕಾರದೊಂದಿಗೆ ನಡೆಸುವ ಈ ಶಿಬಿರದಲ್ಲಿ 40 ಶಿಬಿರಾರ್ಥಿಗಳಿಗೆ ಅವಕಾಶವಿದ್ದು, ಅರ್ಜಿ ಸಲ್ಲಿಸಲು 13 ಆಗಸ್ಟ್ 2025 ಕಡೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 0821-2544990, 96110 74424, 99802 73167, 89517 55267, 90364 64631 ಸಂಖ್ಯೆಯನ್ನು ಸಂಪರ್ಕಿಸಿರಿ.
ಧಾರವಾಡ : ರಂಗಾಯಣ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ದಿನಾಂಕ 02 ಆಗಸ್ಟ್ 2025ರಂದು ಶರ್ವಿಲ್ ಪಬ್ಲಿಷರ್ಸ್ ಆಯೋಜಿಸಿದ್ದ ಶ್ರೀಮತಿ ವಿಜಯಲಕ್ಷ್ಮಿ ಎಸ್. ಜಯಮಂಗಲ ಇವರ ‘ದಿವ್ಯದೃಷ್ಟಿಯ ಗಾಂಧಾರಿ’ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದ ಡಾ. ಶ್ರೀಶಾಚಾರ್ಯ ನಾಮಾವಳಿ “ಲೌಕಿಕ ಬದುಕಿಗೆ ಹತ್ತಿರವಾಗಿರುವ ಮಹಾಭಾರತ ಮಹಾಕಾವ್ಯ ಜೀವನದ ಉನ್ನತ ಮೌಲ್ಯಗಳನ್ನು ಅನಾವರಣಗೊಳಿಸುತ್ತದೆ, ಅಂತರಂಗದ ಕಣ್ಣು ತೆರೆಸಿ, ಹೊಸ ದೃಷ್ಟಿಕೋನ ಒದಗಿಸುತ್ತದೆ. ಮಹಾಭಾರತದ ಅತ್ಯಂತ ವಿಶಿಷ್ಟ ಪಾತ್ರ ಗಾಂಧಾರಿಯದ್ದು. ಕಣ್ಣಿದ್ದು, ಪತಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಿಯಾದರೂ, ತನ್ನ ಅಂತರಂಗದ ದೃಷ್ಟಿಯ ಮೂಲಕ ಮೌಲ್ಯಗಳ ಪ್ರತೀಕವಾಗಿ ಕಥೆಯುದ್ದಕ್ಕೂ ಹರಡಿಕೊಳ್ಳುತ್ತಾಳೆ, ಆವರಿಸಿಕೊಳ್ಳುತ್ತಾಳೆ” ಎಂದು ಅಭಿಪ್ರಾಯಪಟ್ಟರು. ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಕೃಷ್ಣ ಕಟ್ಟಿ “ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ ಎನ್ನುವುದನ್ನು ಮಹಾಭಾರತ ಮಹಾಕಾವ್ಯ ಅತ್ಯಂತ ಪರಿಣಾಮಕಾರಿಯಾಗಿ ಅನಾವರಣಗೊಳಿಸುತ್ತದೆ. ಪ್ರಸ್ತುತ ಕೃತಿಯ ನಿರೂಪಣೆ, ಕಥನಶೈಲಿ ಹೊಸರೀತಿಯಿಂದ ಗಮನ ಸೆಳೆಯುತ್ತದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರ್ಷ ಡಂಬಳ ಮಾತನಾಡಿ…
ಮಂಗಳೂರು : ವಿಪ್ರ ವೇದಿಕೆ ಕೋಡಿಕಲ್ (ರಿ.) ಮಂಗಳೂರು ಇವರ ವತಿಯಿಂದ ಆಯೋಜಿಸಿದ ದಶಮ ಸಂಭ್ರಮದ ಮೂರನೇ ಸರಣಿ ಕಾರ್ಯಕ್ರಮದಂಗವಾಗಿ ದಿನಾಂಕ 03 ಆಗಸ್ಟ್ 2025ರಂದು ಏರ್ಪಡಿಸಿದ್ದ ವಿವಿಧ ರಂಗವಲ್ಲಿಗಳ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಕಲಾವಿದೆ ಶ್ರೀಮತಿ ವೀಣಾ ಐತಾಳ್ ಬದುಕಿನ ಲವಲವಿಕೆಗಾಗಿ ಯಾವುದಾದರೊಂದು ಹವ್ಯಾಸವನ್ನು ಕರಗತ ಮಾಡಿಕೊಳ್ಳುವುದು ಇಂದಿನ ತುರ್ತು ಯುಗದಲ್ಲಿ ಅತೀ ಅಗತ್ಯವಾಗಿದೆ. ಯಾವುದೋ ಹಂತದಲ್ಲಿ ಒಂಟಿತನ ಕಾಡಿದಾಗ ಅವುಗಳೇ ನಮಗೆ ಪಥದರ್ಶನ ಮಾಡುತ್ತವೆ. ನಮ್ಮನ್ನು ತುಂಬು ಉತ್ಸಾಹದಿಂದ ಬದುಕುವಂತೆ ಪ್ರಚೋದಿಸುವುದೇ ಈ ಕಲೆಗಳು. ವಿಪ್ರವೇದಿಕೆ ಹಮ್ಮಿಕೊಂಡಿರುವ ವಿವಿಧ ರಂಗೋಲಿಗಳು, ಹೂಕಟ್ಟುವ ಸ್ಪರ್ಧೆಗಳು ಅವರಿಗೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ. ತಮ್ಮನ್ನು ತಾವು ವಿಕಸಿತ ಮನಸ್ಸಿನಲ್ಲಿ ಇರುವಂತೆಯೂ ಮಾಡುತ್ತವೆ. ಹಾಗಾಗಿ, ಹೆಚ್ಚು ಹೆಚ್ಚು ಮಹಿಳೆಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ” ಎಂದು ಹೇಳಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವೇದಿಕೆಯ ವತಿಯಿಂದ ಬಹುಮಾನ ವಿತರಿಸಲಾಯಿತು. ವೇದಿಕೆಯ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವೀಣಾ…
ಕಾಸರಗೋಡು : ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಎಡನೀರು ಸ್ವಾಮೀಜೀಸ್ ಪ್ರೌಢ ಶಾಲೆಯಲ್ಲಿ ದಿನಾಂಕ 02 ಆಗಸ್ಟ್ 2025ರಂದು ವಿದ್ಯಾರ್ಥಿಗಳಿಗೆ ನಡೆದ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ 4ನೇ ಶಿಬಿರ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಕೋಶಾಧಿಕಾರಿ ಪ್ರೊ. ಅನಂತ ಪದ್ಮನಾಭ ರಾವ್ ಮಾತನಾಡಿ “ಮಕ್ಕಳು ತಮ್ಮ ಹಿರಿಯರ ಮಾತಿಗೆ ಬೆಲೆ ಕೊಡಬೇಕು. ಅವರ ಶ್ರಮದಿಂದ ಈ ಸಾಹಿತ್ಯ ಬಂದಿದೆ. ಅವರ ಸಾಹಿತ್ಯ ಕೃಷಿಯನ್ನು ನಾವು ಬೆಳೆಸಬೇಕು. ಕನ್ನಡ ಭಾಷೆಯ ಮಕ್ಕಳು ಕನ್ನಡ ಸಾಹಿತ್ಯದ ರಕ್ಷಕರಾಗಬೇಕು” ಎಂದು ಹೇಳಿದರು. ಶಿಬಿರವನ್ನು ಉದ್ಘಾಟಿಸಿದ ಎಡನೀರು ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯರು ಮಾತನಾಡಿ “ನಮ್ಮ ಹಿರಿಯರು ಕಾಸರಗೋಡಿನಲ್ಲಿ ದೊಡ್ಡ ಮಟ್ಟದಲ್ಲಿ ಕನ್ನಡ ಸೇವೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಕನ್ನಡದ ಕಲರವ ಹೆಚ್ಚಬೇಕು. ಕನ್ನಡಿಗರು ಜಿಲ್ಲೆಯಲ್ಲಿ ಕನ್ನಡ ರಕ್ಷಣೆಯನ್ನು ಜವಾಬ್ದಾರಿಯಾಗಿ ಸ್ವೀಕರಿಸಬೇಕು” ಎಂದು ಹೇಳಿದರು. ಸ್ವಾಮೀಜೀಸ್ ಹೈಯರ್ ಸೆಕೆಂಡರಿ…