Author: roovari

ಮಂಗಳೂರು : ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ದ.ಕ. ಆಶ್ರಯದಲ್ಲಿ ಜಾನಪದ ಕಡಲೋತ್ಸವ, ಜಾನಪದ ಪ್ರದರ್ಶನ, ಆಹಾರ ಮೇಳ ಇದರ ಪ್ರಯುಕ್ತ ಕರಾವಳಿ ಕರ್ನಾಟಕದ ಜಾನಪದ ಸಂಸ್ಕೃತಿ, ಬದುಕು, ಕಲೆ, ಅಚಾರ, ವಿಚಾರ ಪ್ರತಿಬಿಂಬಿಸುವ ವಿಷಯಾಧಾರಿತ ‘ಜಾನಪದ ಸ್ಪರ್ಧಾಕೂಟ’ವು ದಿನಾಂಕ 11-12-2023ರಂದು ಬೆಳಿಗ್ಗೆ 8ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಸ್ಪರ್ಧಾ ವಿಷಯ : ಕರಾವಳಿ ಕರ್ನಾಟಕದ ಜಾನಪದ ಸಂಸ್ಕೃತಿ, ಬದುಕು, ಕಲೆ, ಅಚಾರ, ವಿಚಾರ ಪ್ರತಿಬಿಂಬಿಸುವ ವಿಷಯಾಧಾರಿತ. ನೋಂದಾವಣೆ ಕಡೇ ದಿನಾಂಕ 06-12-2023ರಂದು ನಿಯಮಗಳು : 1. ಈ ಸ್ಪರ್ಧೆಯು ನಿಗದಿತ ತಂಡಗಳ ನಡುವೆ ನಡೆಯಲಿದೆ. 2. ಮೊದಲು ನೊಂದಾಯಿಸಿದವರಿಗೆ ಮೊದಲ ಪ್ರಾಶಸ್ತ್ಯ. 3. ಪ್ರತಿಯೊಂದು ತಂಡಕ್ಕೆ ನಿರೂಪಣೆ ಸೇರಿ 20 ನಿಮಿಷಗಳ ಕಾಲಾವಕಾಶಗಳನ್ನು ನೀಡಲಾಗುವುದು. 4. 18 ನಿಮಿಷದ ಪ್ರದರ್ಶನ ಆದ ಕೂಡಲೇ ತಂಡಕ್ಕೆ ಸೂಚನೆ ನೀಡಲಾಗುವುದು. 5. ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನುಒಳಗೊಂಡಿರುವ ಒಂದು ಹಾಡು, ಒಂದು ನೃತ್ಯ ಕಡ್ಡಾಯವಾಗಿರಬೇಕು. 6. ತಂಡದಲ್ಲಿ ಕನಿಷ್ಠ 10 ಜನ,…

Read More

ಕುಂದಾಪುರ : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯು ಇದರ ವಾರ್ಷಿಕೋತ್ಸವದ ಪ್ರಯುಕ್ತ ಆನ್ಲೈನ್ ಯಕ್ಷಗಾನ ಗೊಂಬೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಸ್ಪರ್ಧೆಯ ನಿಯಮಗಳು: * ಸ್ಪರ್ಧೆಯು 18 ವರ್ಷದೊಳಗಿನ ಹಾಗೂ 18 ವರ್ಷ ಮೇಲ್ಪಟ್ಟು ಎರಡು ವಿಭಾಗದಲ್ಲಿ ನಡೆಯುತ್ತದೆ. * 18 ವರ್ಷದೊಳಗಿನ ವಿಭಾಗದಲ್ಲಿ ಸ್ಪರ್ಧಿಸಲು ಜನ್ಮ ದಿನಾಂಕವನ್ನು ಒಳಗೊ೦ಡ ದಾಖಲೆಯನ್ನು ನೀಡಬೇಕು. * ಬಿಡಿಸಿದ ಚಿತ್ರದ ಛಾಯಾ ಚಿತ್ರವನ್ನು ವಾಟ್ಸಪ್ ಮಾಡಿ, ಆನಂತರ ಬಿಡಿಸಿದ ಚಿತ್ರವನ್ನು ಅಂಚೆ ಮೂಲಕ ಕಳುಹಿಸಬೇಕು. * ನೀವು ಚಿತ್ರ ಬಿಡಿಸುವ ಸಂದರ್ಭದ ವಿವಿಧ ಹಂತಗಳ ಫೋಟೋಗಳ PDF ಮಾಡಿ ಕಳುಹಿಸಬೇಕು. * ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪ್ರಶಂಸನಾ ಪತ್ರ ಹಾಗೂ ನಗದನ್ನು ಅಕಾಡೆಮಿಯ ವಾರ್ಷಿಕೋತ್ಸವದಂದು ನೀಡಲಾಗುವುದು. * ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರೂ ದಿನಾಂಕ 28-01-2024ರಂದು ನಡೆಯುವ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಂಸನಾ ಪತ್ರವನ್ನು ಸ್ವೀಕರಿಸುವುದು. * ಸ್ಪರ್ಧೆಗೆ ನೀಡಿದ ಚಿತ್ರವನ್ನು ಹಿಂದಿರುಗಿಸಲಾಗುವುದಿಲ್ಲ. • ಆಯೋಜಕರ ತೀರ್ಮಾನವೇ ಅಂತಿಮ. ಇಲ್ಲಿ ಕೊಟ್ಟಿರುವ ಯಕ್ಷಗಾನ…

Read More

ಸುರತ್ಕಲ್: ಶ್ರೀ ನಾಟ್ಯಾಂಜಲಿ ಕಲಾ ಅಕಾಡಮಿ ಸುರತ್ಕಲ್, ಖಂಡಿಗೆ, ಚೇಳ್ಳಾರು ಮತ್ತು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಪ್ರಸ್ತುತಪಡಿಸುವ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ 21ನೇ ಸಂಗೀತ ಕಛೇರಿ ‘ಮಂಜುನಾದ’ ದಿನಾಂಕ 10-12-2023ರ ಭಾನುವಾರ ಸಂಜೆ ಘಂಟೆ 5.25 ರಿಂದ ಖಂಡಿಗೆ, ಚೇಳ್ಳಾರು ರಸ್ತೆಯಲ್ಲಿರುವ ನಾಟ್ಯಾಂಜಲಿ ಕಲಾಮಂದಿರದಲ್ಲಿ ನಡೆಯಲಿದೆ. ಶಾಂತಲಾ ನಾಟ್ಯಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ್ ಕುಮಾರ್ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಎಂ ನಾರಾಯಣ, ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ) ಮತ್ತು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಇದರ ಗೌರವ್ಯಾಧ್ಯಕ್ಷರಾದ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹಾಗೂ ಮಣಿ ಕೃಷ್ಣಸ್ವಾಮಿ ಅಕಾಡೆಮಿ(ರಿ) ಇದರ ಅಧ್ಯಕ್ಷರಾದ ಕ್ಯಾ. ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ. ಬಳಿಕ ನಡೆಯಲಿರುವ ಸಂಗೀತ ಕಛೇರಿಯಲ್ಲಿ ಬೆಂಗಳೂರಿನ ಅದಿತಿ ಪ್ರಹ್ಲಾದ್ ಹಾಗೂ ಸ್ಮೃತಿ ಭಾಸ್ಕರ್, ಕಿನ್ನಿಗೋಳಿಯ ಆಶ್ಮೀಜಾ ಉಡುಪ ಮತ್ತು ಮಂಗಳೂರಿನ ಮೇಧಾ ಉಡುಪ ಹಾಡುಗಾರಿಕೆ ನಡೆಸಲಿದ್ದು, ಇವರಿಗೆ…

Read More

ಮೂದಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ 29 ನೇ ವರ್ಷದ ಆಳ್ವಾಸ್ ವಿರಾಸತ್ ಕಾರ್ಯಕ್ರಮವು ದಿನಾಂಕ 14-12-2023 ರಿಂದ 17-12-2023ರ ವರೆಗೆ ಮೂದಬಿದಿರೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ದಿನಾಂಕ 14-12-2023 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಗೌರವಾನ್ವಿತ ರಾಜ್ಯಪಾಲರಾದ ಡಾ. ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ತಂಡಗಳ 3000ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ‘ಭವ್ಯ ಸಾಂಸ್ಕೃತಿಕ ಮೆರವಣಿಗೆ’ ಮತ್ತು ವೇದಘೋಷಗಳು, ಭಜನ್‌ಗಳು, ಪುಷ್ಪಪಲ್ಲಕ್ಕಿಗಳು ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ ವಿನಾಯಕ, ಸರಸ್ಕೃತಿ, ಶ್ರೀ ಲಕ್ಷ್ಮೀ, ಹನುಮಂತ, ಶ್ರೀರಾಮ, ಶ್ರೀಕೃಷ್ಣಾದಿ ಆರೂಢ ದೇವರ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ. ದಿನಾಂಕ 15-12-2023 ರಂದು ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರಾದ ಬೆನ್ನಿ ದಯಾಲ್ ಇವರಿಂದ ‘ಗಾನ ವೈಭವ’ ಬಳಿಕ ಆಳ್ವಾಸ್…

Read More

ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಹಾಗೂ ಮಾಜಿ ಶಾಸಕ ಕುಂಬ್ಳೆ ಸುಂದರರಾವ್ ಅವರ ಸಂಸ್ಮರಣಾ ಕಾರ್ಯಕ್ರಮ ದಿನಾಂಕ 10-12-2023 ರಂದು ಸಂಜೆ ಘಂಟೆ 4.00ಕ್ಕೆ ನಗರದ ಉರ್ವಸ್ಟೋರಿನಲ್ಲಿರುವ ದೇವಾಂಗ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಬಗ್ಗೆ ವಿವರ ನೀಡಿದ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣಪ್ರಾಂತ ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಮೇರು ಕಲಾವಿದ ಕೆ. ಗೋವಿಂದ ಭಟ್ ಇವರಿಗೆ ಕುಂಬ್ಳೆ ಸುಂದರ ರಾವ್ ಸಂಸ್ಕರಣಾ ಪ್ರಶಸ್ತಿ ಪ್ರದಾನದೊಂದಿಗೆ ಗೌರವಧನ 25,000 ರೂಪಾಯಿ ನೀಡಿ ಗೌರವಿಸಲಾಗುವುದು ಎಂದರು. ಉದ್ಯಮಿ ಎಂ. ಮುರಳೀದರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಉಡುಪಿಯ ಯಕ್ಷಗಾನ ಕಲಾ ರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ ಸಂಸ್ಕರಣಾ ಹಾಗೂ ಅಭಿನಂದನಾ ಭಾಷಣ ಮಾಡಲಿರುವರು. ಸಂಜೆ ಘಂಟೆ 4.00ರಿಂದ ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳಿಂದ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವಶ್ರೀ ಬಲಿಪ…

Read More

ಕುಂಬಳೆ : ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಸಂಘಟಕ, ವಿಶ್ರಾಂತ ಅಧ್ಯಾಪಕ ವಿ.ಬಿ. ಕುಳಮರ್ವ ಇವರ 70ನೇ ವರ್ಷಾಚರಣೆಯ ಅಂಗವಾಗಿ ‘ವಿ.ಬಿ. ಕುಳಮರ್ವ-70’ ಸಾಹಿತೋತ್ಸವ ಕಾರ್ಯಕ್ರಮವು ದಿನಾಂಕ 10-12-2023ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9.30ಕ್ಕೆ ವಿ.ಬಿ. ಕುಳಮರ್ವರ ಸ್ವಗೃಹವಾದ ಕುಂಬಳೆ ನಾರಾಯಣ ಮಂಗಳದ ಶ್ರೀನಿಧಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀ ವಿ.ಬಿ. ಕುಳಮರ್ವ ಮತ್ತು ಶ್ರೀಮತಿ ಲಲಿತಾಲಕ್ಷ್ಮೀ ದಂಪತಿಯರು ಉದ್ಘಾಟನೆ ಮಾಡಲಿದ್ದು, ‘ಗಡಿನಾಡ ಸಾಹಿತ್ಯ ಶ್ರೀನಿಧಿ – ವಿ.ಬಿ. ಕುಳಮರ್ವ’ ಕೃತಿ ಬಿಡುಗಡೆ, ಗುರು ನಮನ, ಸನ್ಮಾನ ಮತ್ತು ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು 70 ಕವಿ ಮನಸ್ಸುಗಳ ಕವಿಗೋಷ್ಠಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೊ. ಪಿ.ಎನ್. ಮೂಡಿತ್ತಾಯ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶಿವರಾಮ ಕಾಸರಗೋಡು, ದ.ಕ. ಜಿಲ್ಲಾ…

Read More

ಬೆಂಗಳೂರು : ‘ಪದ’ ಬೆಂಗಳೂರು ಆಯೋಜಿಸುವ ‘ಶಿಶಿರ ರಂಗೋತ್ಸವ’ದಲ್ಲಿ ಮಹಿಳಾ ಏಕವ್ಯಕ್ತಿ ನಾಟಕಗಳ ಮೂರು ಪ್ರದರ್ಶನಗಳು ದಿನಾಂಕ 10-12-2023ರ ಭಾನುವಾರದಂದು ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ನಯನ ರಂಗಮಂದಿರದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯಲಿದೆ. ಬೆಳಿಗ್ಗೆ 10.30 ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ರಂಗಕಲಾವಿದೆಯಾದ ಡಾ. ಲಕ್ಷ್ಮೀ ಚಂದ್ರಶೇಖರ್, ಲೇಖಕರು ಮತ್ತು ಕವಿಯತ್ರಿಯಾದ ವಸುಂಧರ, ಅಧಿಕಾರಿ ಕರ್ನಾಟಕ ಆಡಳಿತ ಸೇವೆ ಹಾಗೂ ರಂಗ ನಿರ್ದೇಶಕಿಯಾದ ಡಾ. ಸುಷ್ಮ ಎಸ್.ವಿ. ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮಹಿಳಾ ಏಕವ್ಯಕ್ತಿ ನಾಟಕಗಳಾದ ‘ಅಧಿನಾಯಕಿ’, ‘ತಾಯಿಯಾಗುವುದೆಂದರೆ’ ಹಾಗೂ ‘ಸಕುಬಾಯಿ’ ಪ್ರದರ್ಶನಗೊಳ್ಳಲಿದೆ. ಬೆಳಿಗ್ಗೆ ಘಂಟೆ 11.30 ರಿಂದ ಎಂ.ಎಸ್. ಲಕ್ಷ್ಮೀ ಕಾರಂತ ಅಭಿನಯಿಸುವ ‘ಅಧಿನಾಯಕಿ’ ನಾಟಕ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಬೇಲೂರು ರಘುನಂದನ್ ಅವರದ್ದು. ವೈಷ್ಣವ ರಾವ್ ಬಿ. ಎಸ್. ಸಂಗೀತ ನಿರ್ದೇಶನ ಮತ್ತು ಗಾಯನ ಮಾಡಲಿದ್ದು, ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ರವಿಶಂಕರ್ ಬೆಳಕು ಅವರದ್ದು. ಅಧಿನಾಯಕಿ…

Read More

ಕೇರಳ : ದೇವ್ ದಕ್ಷ ಕಲಾಕ್ಷೇತ್ರ, ಪುಲ್ಪಲ್ಲಿ ನೃತ್ಯ ಸಂಸ್ಥೆಯ ಮುಖ್ಯಸ್ಥರಾದ ನೃತ್ಯ ಗುರು ಶ್ರೀಮತಿ ರೆಸ್ಮಿ ಬಾಬು ಇವರು ದಿನಾಂಕ 10-12-2023ರ ಭಾನುವಾರದಂದು ಒಂದು ದಿನದ ‘ಭರತನಾಟ್ಯ ಕಾರ್ಯಾಗಾರ’ವನ್ನು ಹಮ್ಮಿಕೊಂಡಿದ್ದಾರೆ. ಡಿಸೆಂಬರ್ 12 ಮತ್ತು 13ರಂದು ಕೇರಳ ನೃತ್ಯ ಕಲಾವಿದರ ಒಕ್ಕೂಟ ಮತ್ತು ದೇವ್ ದಕ್ಷ ಕಲಾಕ್ಷೇತ್ರದ ಜಂಟಿ ನೇತೃತ್ವದಲ್ಲಿ ಎರಡು ದಿನಗಳ ಅವಧಿಯ ‘ನಟ್ಟುವಾಂಗಂ ಕಾರ್ಯಾಗಾರ’ವು ನಡೆಯಲಿದೆ. ಈ ಎರಡೂ ಕಾರ್ಯಾಗಾರಗಳಲ್ಲಿ ಸೃಜನಶೀಲ ಯುವ ವಿದ್ವಾಂಸ ಹಾಗೂ ಪ್ರತಿಭಾವಂತರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.

Read More

ಸಾಗರ : ನಾಟ್ಯ ತರಂಗ ಟ್ರಸ್ಟ್ (ರಿ.) ಸಾಗರ, ಇದರ ವತಿಯಿಂದ ‘ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ 2023’ವು ದಿನಾಂಕ 09-12-2023ರಿಂದ 15-12-2023ರವರೆಗೆ ಪ್ರತೀ ದಿನ ಸಂಜೆ 5.30ಕ್ಕೆ ಸಾಗರ ಶ್ರೀನಗರದ ನೃತ್ಯ ಭಾಸ್ಕರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಸಾಂಸ್ಕೃತಿಕ ಸಾರಥಿ ಪ್ರಶಸ್ತಿ’ ಪ್ರದಾನ ಹಾಗೂ ನಾಟ್ಯ ತರಂಗ ನೃತ್ಯಾಭ್ಯಾಸಿಗಳಿಂದ ‘ನೃತ್ಯಾಂಕುರ’ ಪ್ರದರ್ಶನವಿದೆ. ದಿನಾಂಕ 09-12-2023ರಂದು ಸಾಗರ ಹೊಸನಗರದ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಇವರಿಂದ ಉದ್ಘಾಟನೆಗೊಳ್ಳಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರ ನಗರ ಸಭೆ ಸದಸ್ಯರಾದ ಶ್ರೀ ಗಣೇಶ್ ಪ್ರಸಾದ್ ವಹಿಸಲಿರುವರು. ಸಂಜೆ 6ರಿಂದ ಮುಂಬೈಯ ವೈಭವ ಆರೇಕರ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ದಿನಾಂಕ 10-12-2023ರಂದು ಅಂತರಾಷ್ಟ್ರೀಯ ನೃತ್ಯ ಕಲಾವಿದರು, ಪದ್ಮಾಭೂಷಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಪದ್ಮಾ ಸುಬ್ರಮಣ್ಯಂ ಚೆನ್ನೈ ಇವರ ಘನ ಉಪಸಿತ್ಥಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಿವ ಮೊಗ್ಗದ ವಿದ್ವಾನ್ ನಾರಾಯಣ ಭಟ್ ಮತ್ತು ಚೆನ್ನೈಯ ಡಾ. ಗಾಯತ್ರಿ ಕಣ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ‘ಭರತ…

Read More

ಬೆಂಗಳೂರು: ಹಿರಿಯ ನಾಟ್ಯಗುರು ವಿದ್ವಾನ್ ಪುಲಿಕೇಶಿ ಕಸ್ತೂರಿ ಅವರ ನುರಿತ ಗರಡಿಯಲ್ಲಿ ರೂಹು ತಳೆದ ಕಲಾಶಿಲ್ಪ ಕು. ಜೆ. ಜಸ್ವಂತ್ ಉದಯೋನ್ಮುಖ ಭರವಸೆಯ ನೃತ್ಯಕಲಾವಿದ. ಕಳೆದ 12 ವರ್ಷಗಳಿಂದ ನಿಷ್ಠೆಯಿಂದ ನೃತ್ಯ ಕಲಿಯುತ್ತಿರುವ ಜಷ್ವಂತ್, ಅಷ್ಟೇ ಆಸಕ್ತಿಯಿಂದ ಮೃದಂಗವಾದನವನ್ನೂ ಅಭ್ಯಾಸ ಮಾಡುತ್ತಿರುವ ಬಹುಮುಖ ಪ್ರತಿಭೆ. ಶ್ರೀ ರಾಜೇಂದ್ರನ್ ಮತ್ತು ಜಯಕುಮಾರಿ ದಂಪತಿಗಳ ಪುತ್ರನಾದ ಇವರು ಈಗಾಗಲೇ ‘ಗೆಜ್ಜೆಪೂಜೆ’ಯನ್ನು ನೆರವೇರಿಸಿಕೊಂಡಿದ್ದು, ನಾಡಿನಾದ್ಯಂತ ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. ಓದಿನಲ್ಲೂ ಸಮಾನ ಆಸಕ್ತಿ ಹೊಂದಿರುವ ಜಷ್ವಂತ್ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿ. ಇದೀಗ ಇವರು ಕಲಾರಸಿಕರ ಸಮ್ಮುಖ ತನ್ನ ನೃತ್ಯ ನೈಪುಣ್ಯವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ದಿನಾಂಕ 09-12-2023ನೇ ಶನಿವಾರ ಸಂಜೆ 5 ಗಂಟೆಗೆ, ವೈಯಾಲಿಕಾವಲ್ಲಿನಲ್ಲಿರುವ ‘ಶ್ರೀ ಕೃಷ್ಣದೇವರಾಯ ರಂಗಮಂದಿರ’ದಲ್ಲಿ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾನೆ. ಈ ಪ್ರತಿಭಾನ್ವಿತ ಕಲಾವಿದ ಜಷ್ವಂತರ ಸುಮನೋಹರ ನೃತ್ಯವಲ್ಲರಿಯನ್ನು ವೀಕ್ಷಿಸಲು ಎಲ್ಲರಿಗೂ ಸುಸ್ವಾಗತ. ಜಷ್ವಂತ್ ತನ್ನ 9ನೆಯ ವಯಸ್ಸಿನಿಂದಲೇ ಭರತನಾಟ್ಯ ಮತ್ತು ಗುರು ಜಿ.ಎಸ್. ನಾಗರಾಜರ ಬಳಿ ಮೃದಂಗ ಕಲಿಯುತ್ತಿದ್ದು, ಕರ್ನಾಟಕ ಸರ್ಕಾರ ನಡೆಸುವ…

Read More