Subscribe to Updates
Get the latest creative news from FooBar about art, design and business.
Author: roovari
ಕುಂದಾಪುರ: “ಮಲ್ಯಾಡಿ ಯಕ್ಷೋತ್ಸವ” ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಹಲವು ಜನರ what’s up ಸ್ಟೇಟಸ್ ನಲ್ಲಿ ರಾರಾಜಿಸುತ್ತಿರುವ ಯಕ್ಷಗಾನದ ಪೋಸ್ಟರ್. ಪ್ರಶಾಂತ ಮಲ್ಯಾಡಿ – ಇಂದು ಯಕ್ಷವಲಯದಲ್ಲಿ ಚಿರಪರಿಚಿತ ಹೆಸರು. ಮಲ್ಯಾಡಿ ಅವರ ಕ್ಯಾಮರಾ ಕಣ್ಣುಗಳು ಅದೆಷ್ಟೊ ವೇಷಗಳನ್ನು ರಂಗಸ್ಥಳದ ಹೊರಗೆ ನಿಂತು ಸೆರೆಹಿಡಿದಿವೆ ಹಾಗೂ ೨ ವರ್ಷಗಳಿಂದ ಮಲ್ಯಾಡಿ ಲೈವ್ ಎಂಬ ವಾಹಿನಿಯಿಂದ ಅನೇಕ ಯಕ್ಷಗಾನವನ್ನು ಲೈವ್ ಮೂಲಕ ನೀಡಿ ಯಕ್ಷಗಾನದ ಕಂಪನ್ನು ಪ್ರೇಕ್ಷಕರಿಗೆ ಇನ್ನೂ ಹತ್ತಿರದಿಂದ ನೋಡುವ ಹಾಗೆ ಮಾಡಿದ ಕೀರ್ತಿ ಪ್ರಶಾಂತ ಮಲ್ಯಾಡಿ ಅವರಿಗೆ ಸಲ್ಲುತ್ತದೆ. 2015ರಲ್ಲಿ ಪೆರ್ಡೂರು ಮೇಳದ ಯಕ್ಷಗಾನವನ್ನು ಪ್ರಥಮ ಬಾರಿಗೆ ಸಂಘಟನೆ ಮಾಡಿ, 2017ರಲ್ಲಿ ಸಾಲಿಗ್ರಾಮ ಮೇಳ ಹಾಗೂ ತೆಂಕು ಬಡಗಿನ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಸಂಘಟನೆ ಮಾಡಿ, ಇದೀಗ ತೃತೀಯ ಬಾರಿಗೆ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪೌರಾಣಿಕ ಯಕ್ಷಗಾನವನ್ನು ಕಲಾರಸಿಕರಿಗೆ ಒಂದು ಸುಂದರ ಯಕ್ಷ ರಾತ್ರಿಯನ್ನು ಸವಿಯಲು ಮತ್ತೆ ನಿಮ್ಮ ಮುಂದೆ ಬಂದಿದ್ದಾರೆ.…
ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನ ಯಲ್.ಸಿ.ಆರ್.ಐ. ರಂಗಮಂದಿರದಲ್ಲಿ ಪಾಂಡಿಚೇರಿಯ ಆದಿಶಕ್ತಿ ಜಗತ್ಪ್ರಸಿದ್ಧ ರಂಗತಂಡದ ‘ಭೂಮಿ’(ಇಂಗ್ಲೀಷ್) ನಾಟಕವು ದಿನಾಂಕ 08-12-2023 ಶುಕ್ರವಾರ ಸಂಜೆ 7.00ಕ್ಕೆ ಸರಿಯಾಗಿ ನಡೆಯಲಿದೆ. ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನೇತೃತ್ವದ ಜೊತೆಯಲ್ಲಿ ಕಾಲೇಜಿನ ಕನ್ನಡ ವಿಭಾಗ, ಅರೆಹೊಳೆ ಪ್ರತಿಷ್ಠಾನ ಮತ್ತು ಅಸ್ಥಿತ್ವ ಮಂಗಳೂರು ಸಂಸ್ಥೆಗಳು ಒಂದಾಗಿ ಸೇರಿಕೊಂಡಿವೆ. ದೇಶದ ಶ್ರೇಷ್ಠ ಸೃಜನಶೀಲ ರಂಗಚಿಂತಕಿ, ರಂಗಶೋಧಕಿ ಮತ್ತು ರಂಗನಿರ್ದೇಶಕಿ ವೀಣಾ ಪಾಣಿ ಚಾವ್ಲಾ ಅವರು ಪಾಂಡಿಚೇರಿಯಲ್ಲಿ ಬೆಳೆಸಿದ ಪ್ರಖ್ಯಾತ ರಂಗಸಂಸ್ಥೆ ಆದಿಶಕ್ತಿ. ಬಾಲಿ, ಗಣಪತಿ, ಬೃಹನ್ನಳ ಮೊದಲಾದ ಈ ತಂಡದ ನಾಟಕಗಳು ದೇಶ ವಿದೇಶಗಳಲ್ಲಿ ಮಹತ್ವದ ರಂಗಪ್ರಯೋಗಗಳಾಗಿ ರಂಗಾಸಕ್ತರನ್ನು ಅಚ್ಚರಿಗೊಳಿಸಿವೆ. ವೀಣಾಪಾಣಿ ಚಾವ್ಲಾ ಅವರ ಗುರುತನದಲ್ಲಿ ಸುದೀರ್ಘ ವರ್ಷಗಳಲ್ಲಿ ಪಳಗಿದ ಪ್ರಬುದ್ಧ ಕಲಾವಿದರ ತಂಡವೇ ಆದಿಶಕ್ತಿಯ ಭದ್ರಬುನಾದಿಯಾಗಿದೆ. ನಟನೆಯ ಕ್ರಮ, ರಂಗವಿನ್ಯಾಸ, ಹೊಸಬಗೆಯಲ್ಲಿ ಪ್ರೇಕ್ಷಕನಿಗೆ ಚಿಂತನೆಗಳನ್ನು ಉಣಬಡಿಸುವ ಬಗೆ, ವಿನೂತನ ರಂಗಕಲ್ಪನೆ, ಪ್ರಚಲಿತ ಕಥಾವಸ್ತುವಿಗೆ ಕೊಡುವ ಹೊಸ ರಂಗಸ್ಪರ್ಶ ಇತ್ಯಾದಿಗಳಲ್ಲಿ ಆದಿಶಕ್ತಿಯು ದೇಶವಿದೇಶಗಳ ರಂಗಚಿಂತಕರ ಗಮನ…
ಕಾಸರಗೋಡು: ಕಾಸರಗೋಡು ಸಾಂಸ್ಕೃತಿಕ -ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿ ಮತ್ತು ಅದರ ಸಹ ಘಟಕಗಳಾದ ನಾರಿ ಚಿನ್ನಾರಿ, ಸ್ವರ ಚಿನ್ನಾರಿ ಜೊತೆಗೆ ಕಾಸರಗೋಡಿನ ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ 2021ನೇ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ ಪ್ರಶಸ್ತಿಗೆ ಭಾಜನರಾದ ಸುಬ್ರಹ್ಮಣ್ಯ ನಾರಾಯಣ ಬಾಡೂರು (ಬಾನಾಸು) ಅವರಿಗೆ ಹುಟ್ಟೂರ ಗೌರವ ಪ್ರಶಸ್ತಿ ಕಾರ್ಯಕ್ರಮವು ದಿನಾಂಕ 01-12-2023 ರಂದು ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಿತು. ಹುಟ್ಟೂರ ಗೌರವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಮಾತನಾಡಿ “ಕಾಸರಗೋಡಿನ ಕನ್ನಡ ಪರ ಸಂಘಟನೆಗಳು ಕೈ ಜೋಡಿಸಿದರೆ ಕಾಸರಗೋಡಿನ ಕನ್ನಡಿಗರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು. ಸುಬ್ರಹ್ಮಣ್ಯ ಬಾಡೂರು ಅವರ ರಾಷ್ಟ್ರ ಮಟ್ಟದ ಸಾಧನೆ ಕಾಸರಗೋಡಿನ ಕನ್ನಡಿಗರಿಗೆಲ್ಲ ಕೀರ್ತಿ ತಂದಿದೆ.” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ನಟಿಯಾದ ಶಾಸಕಿ ಉಮಾಶ್ರೀ ಮಾತನಾಡಿ…
ಮಂಗಳೂರು: ಸಂಗೀತ ವಿದ್ಯಾನಿಲಯದ 30ನೇ ವಾರ್ಷಿಕೋತ್ಸವದ ಪ್ರಯುಕ್ತ ‘ಸಂಗೀತೋತ್ಸವ’ವು ದಿನಾಂಕ 03-12-2023ರಂದು ಡಾನ್ ಬೊಸ್ಕೋ ಹಾಲ್ ಮತ್ತು ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಇದರ 88ನೇ ವಾರ್ಷಿಕೋತ್ಸವದ ಪ್ರಯುಕ್ತ ‘ನೃತ್ಯೋತ್ಸವ’ವು ದಿನಾಂಕ 10-12-2023ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರಸ್ತುತಗೊಳ್ಳಲಿದೆ. ದಿನಾಂಕ 03-12-2023ರಂದು ಗಂಟೆ 2.30ಕ್ಕೆ ವಿದುಷಿ ಶ್ರೀಮತಿ ಉಷಾ ಪ್ರವೀಣ್ ಮತ್ತು ಶ್ರೀಮತಿ ನಿಶ್ವೀತಾ ಶರಣ್ ಇವರ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಮೃದಂಗದಲ್ಲಿ ಮಂಗಳೂರಿನ ವಿದ್ವಾನ್ ಶ್ರೀ ಮನೋಹರ್ ರಾವ್ ಮತ್ತು ವಯೋಲಿನ್ ನಲ್ಲಿ ಉಡುಪಿಯ ವಿದ್ವಾನ್ ಶ್ರೀಧರ್ ಅಚಾರ್ ಪಾಡಿಗಾರ ಸಾಥ್ ನೀಡಲಿದ್ದಾರೆ. ಗಂಟೆ 5ಕ್ಕೆ ಮೈಸೂರಿನ ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಮತ್ತು ವಿದುಷಿ ನಿತ್ಯಶ್ರೀ ಆರ್. ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ವಿದ್ವಾನ್ ಕೆ.ಎಚ್. ರವಿಕುಮಾರ್ ಮೃದಂಗದಲ್ಲಿ ಮತ್ತು ಕಾಸರಗೋಡಿನ ವಿದ್ವಾನ್ ಗಣರಾಜ ಕಾರ್ಲೆ ವಯೋಲಿನ್ ಸಾಥ್ ನೀಡಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ಇದರ ನಿರ್ದೇಶಕರಾದ ಪ್ರೊ.…
ಮಂಗಳೂರು : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ ಇದರ ವತಿಯಿಂದ ರಜತಪರ್ವ ಸರಣಿ – ತಾಳಮದ್ದಳೆ ಸಪ್ತಾಹ’ವು ದಿನಾಂಕ 03-12-2023ರಿಂದ 09-12-2023ರವರೆಗೆ ಪ್ರತಿದಿನ ಸಂಜೆ 4.45ರಿಂದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿರುವ ಜಲಜಾಕ್ಷಿ ವಾಸುದೇವ ಭಟ್ ವೇದಿಕೆ (ಅನಂತ ಭಟ್ಟರ ಮನೆ)ಯಲ್ಲಿ ನಡೆಯಲಿದೆ. ದಿನಾಂಕ 03-12-2023ರಂದು ‘ಹನುಮಾರ್ಜುನ’, ದಿನಾಂಕ 04-12-2023ರಂದು ‘ವಾಮನ ಚರಿತ್ರೆ’, ದಿನಾಂಕ 05-12-2023ರಂದು ‘ಗುರುದಕ್ಷಿಣೆ’, ದಿನಾಂಕ 06-12-2023ರಂದು ‘ಶಲ್ಯ ಸಾರಥ್ಯ’, ದಿನಾಂಕ 07-12-2023ರಂದು ‘ಮಾಗಧ ವಧೆ’, ದಿನಾಂಕ 08-12-2023ರಂದು ‘ಸೀತಾಪಹಾರ’ ಮತ್ತು ದಿನಾಂಕ 09-12-2023ರಂದು ‘ಕೃಷ್ಣ ಪರಂಧಾಮ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಗಳು ನಡೆಯಲಿದೆ.
ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಘ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇದರ ಸಹಯೋಗದಲ್ಲಿ ಸಾಹಿತ್ಯ ಪ್ರೇಮಿ, ಸಾಹಿತ್ಯ ಪೋಷಕ ಮತ್ತು ಶಿಕ್ಷಣ ತಜ್ಞ ಡಾ. ಬಿ. ಯಶೋವರ್ಮ ಸಂಸ್ಮರಣೆ ಯಶೋಭಿವ್ಯಕ್ತಿ ಕಾರ್ಯಕ್ರಮ ದಿನಾಂಕ 05-12-2023ರಂದು ಪೂರ್ವಾಹ್ನ 10 ಗಂಟೆಗೆ ಮಂಗಳೂರು ವಿ.ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ವಹಿಸಲಿದ್ದು, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಇದರ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಇವರು ಉದ್ಘಾಟನೆ ಮಾಡಲಿರುವರು. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ನಿರಂಜನ ವಾನಳ್ಳಿ ಇವರು ಸಂಸ್ಮರಣ ನುಡಿ ಮತ್ತು ವಿಶೇಷೋಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಶ್ರೀ ವಿಲಾಸ್ ನಾಯಕ್ ಇವರಿಂದ ವಿಶೇಷ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ…
ಮೈಸೂರು : ಥಿಯೇಟರ್ ತತ್ಕಾಲ್ ಮತ್ತು ಭಿನ್ನಷಡ್ಜ ಸಹಯೋಗದಲ್ಲಿ ಎರಡು ದಿನದ ಸ್ತಾನಿಸ್ಲಾವಸ್ಕಿಯ ವಾಸ್ತವವಾದಿ ಅಭಿನಯ ಕಾರ್ಯಾಗಾರವನ್ನು ದಿನಾಂಕ 02-12-2023 ಮತ್ತು 03-12-2023ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಕಲಾಮಂದಿರ ಆವರಣದ ಶ್ರೀರಂಗ ಮತ್ತು ಕಿರುರಂಗ ಮಂದಿರಗಳಲ್ಲಿ ಈ ಕಮ್ಮಟ ನಡೆಯಲಿದ್ದು, ಕರ್ನಾಟಕದ ವಿವಿಧೆಡೆಯಿಂದ ಸುಮಾರು ಮೂವತ್ತು ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ. ಹಿರಿಯ ರಂಗಭೂಮಿ ಶಿಕ್ಷಕ ಮತ್ತು ನಿರ್ದೇಶಕರಾದ ಶ್ರೀಯುತ ಬಿ.ಆರ್. ವೆಂಕಟರಮಣ ಐತಾಳರು ಈ ಕಮ್ಮಟದ ನಿರ್ದೇಶಕರಾಗಿದ್ದು, ಶ್ರೀಧರ ಹೆಗ್ಗೋಡು, ದಿಗ್ವಿಜಯ ಮತ್ತು ಥಿಯೇಟರ್ ತತ್ಕಾಲಿನ ಅನುಭವೀ ನಟರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಿದ್ದಾರೆ. ದಿನಾಂಕ 02-12-2023ರಂದು ಸಂಜೆ ಶ್ರೀರಂಗ ರಂಗಮಂದಿರದಲ್ಲಿ ಅರಿವು ರಂಗ ಅರ್ಪಿಸುವ ರಿಚರ್ಡ್ ಫೇಯ್ ಮನ್ ಬದುಕನ್ನು ಆಧರಿಸಿದ QED ನಾಟಕದ ಪ್ರದರ್ಶನವಿರುತ್ತದೆ. ದಿನಾಂಕ 03-12-2023ರಂದು ಡಿಸೆಂಬರ್ 3ರ ಬೆಳಿಗ್ಗೆ ಕಿರುರಂಗ ಮಂದಿರದಲ್ಲಿ 10ರಿಂದ 2ರವರೆಗೆ ‘ಪಾತ್ರ ಪ್ರವೇಶ’ ಪುಸ್ತಕದಲ್ಲಿ ಸ್ತಾನಿಸ್ಥಾವಸ್ಕಿ ವಿವರಿಸಿರುವ ದೈಹಿಕ ಪಾತ್ರ ಚಿತ್ರಣ, ದೇಹವನ್ನು ಅಭಿವ್ಯಕ್ತಿಪೂರ್ಣ ಮಾಡುವುದು, ಚಲನೆ ಮೃದುತ್ವ, ಹಾಡು ಮತ್ತು…
ಉತ್ತರ ಕನ್ನಡ ಜಿಲ್ಲೆಯು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಲ್ಲಿ ಒಬ್ಬರಾದ ವಿಷ್ಣು ಗೋವಿಂದ ಭಟ್ಟರು (02-12-1923ರಿಂದ 06-04-1991) ಹೊನ್ನಾವರ ಜಿಲ್ಲೆಯ ಕಡತೋಕದಲ್ಲಿ ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಕೆಲವು ವರ್ಷಗಳವರೆಗೆ ಪ್ರೌಢಶಾಲೆಯ ಶಿಕ್ಷಕರಾಗಿ ದುಡಿದ ಬಳಿಕ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದರು. ಅರಣ್ಯರೋದನ, ಕಾವ್ಯವೇದನೆ, ತುಂಟನ ಪದಗಳು, ಕಿಷ್ಕಿಂಧೆ, ಆತ್ಮಗೀತೆ (ಕವನ ಸಂಕಲನಗಳು), ಪೆದ್ದಂ ಕತೆಗಳು, ದಿವಸ, ಬುರುಕಿ (ಕಥಾ ಸಂಕಲನಗಳು), ಸವಿನೆನೆಪು (ಲೇಖನಗಳು), ಸಹ್ಯಾದ್ರಿ (ಜೀವನಚರಿತ್ರೆ), ಖಾದಿ ಗ್ರಾಮೋದ್ಯೋಗ (ಅನುವಾದ) ಮುಂತಾದ ಕೃತಿಗಳನ್ನು ರಚಿಸಿದ ಇವರು ‘ಆತ್ಮಗೀತೆ’ ಕವನ ಸಂಕಲನಕ್ಕಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡರು. ತಮ್ಮ ಇಪ್ಪತ್ತಮೂರನೇ ಹರೆಯದಲ್ಲಿ ‘ಪಲಾಯನ’ ಎಂಬ ಸಂಕಲನದ ಮೂಲಕ ಕನ್ನಡ ಕಾವ್ಯಲೋಕಕ್ಕೆ ಕಾಲಿರಿಸಿದ ಇವರು ಬೇಂದ್ರೆ, ಕುವೆಂಪು, ಪು.ತಿ.ನ., ಕೆ.ಎಸ್. ನರಸಿಂಹಸ್ವಾಮಿಯವರ ಪ್ರಭಾವಕ್ಕೆ ಒಳಗಾಗದೆ ತಮ್ಮದೇ ಹಾದಿಯಲ್ಲಿ ನಡೆದರು. ‘ಸಿದ್ಧ ಸರಕಿನ ಪಾತ್ರ ಕೈಕೊಳ್ಳಲೊಲ್ಲೆ; ಹೇಗೆ ಬೇಕೋ ಹಾಗೆ ತಿರುಗಾಡಿ ಒಂದು…
ಕಾಸರಗೋಡು : ರಂಗಚಿನ್ನಾರಿ (ರಿ) ಇದರ ಸಂಗೀತ ಘಟಕ ಸ್ವರಚಿನ್ನಾರಿಯು ತನ್ನ ಎರಡನೇ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 28-11-2023ನೇ ಮಂಗಳವಾರ ಸಂಜೆ 5 ಗಂಟೆಗೆ ಕರಂದಕ್ಕಾಡ್ ಪದ್ಮಗಿರಿ ಕಲಾ ಕುಟೀರದಲ್ಲಿ ‘ಕನಕ ಸ್ಮರಣೆ’ ಕನಕದಾಸರ ಗೀತೆಗಳ ಸಂಗೀತ ರಸಸಂಜೆ ಏರ್ಪಡಿಸಿತು. ಕಾರ್ಯಕ್ರಮವನ್ನು ಖ್ಯಾತ ವಯಲಿನಿಸ್ಟ್ ಶ್ರೀ ಪ್ರಭಾಕರ ಕುಂಜಾರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ತಮ್ಮ ಹೃದಯಂತರಾಳದ ಶುಭ ಹಾರೈಕೆಗಳನ್ನು ನುಡಿದರು. ಮುಖ್ಯ ಅತಿಥಿಯಾಗಿ ದಾಸಸಾಹಿತ್ಯ ಪ್ರತಿಪಾದಕ ಮಧ್ವಾಧೀಶ ವಿಠ್ಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರು ಕನಕದಾಸರ ಹುಟ್ಟು, ಇತಿಹಾಸ, ಮತ್ತು ಅವರು ಬರೆದ ಸಾಹಿತ್ಯಗಳ ಹಿಂದೆ ಇದ್ದ ಅವರ ಜೀವನದ ಅನುಭವಗಳು ಮತ್ತು ಅದರ ಮೇಲಿನ ಭಕ್ತಿಯ ಬಗ್ಗೆ ಮಾತನಾಡಿದರು. ಸ್ವತಃ ಭಗವಂತನೇ ಪದಗಳಲ್ಲಿ ಕುಳಿತು ಬರೆಸಿದ ಸಾಹಿತ್ಯ ದಾಸಸಾಹಿತ್ಯ ಎಂದೂ ಅವರು ಹೇಳಿದರು. ಮತ್ತೊಬ್ಬ ಅತಿಥಿಯಾಗಿ ಹರಿದಾಸ ಸಂಕೀರ್ತನಾಕಾರ ದಯಾನಂದ ಹೊಸದುರ್ಗ ಉಪಸ್ಥಿತರಿದ್ದು, ನಿತ್ಯ ಜೀವನದಲ್ಲಿ ದಾಸರಪದಗಳ ಮೌಲ್ಯಗಳ ಮಹತ್ವ ಮತ್ತು ಅಂತಹ ದಾಸಶ್ರೇಷ್ಠರನ್ನು ಭಜಿಸುವುದು ಉತ್ತಮ…
ಕುಂದಾಪುರ: ಒಂದು ಬಣ್ಣಬಣ್ಣದ ವೇದಿಕೆಯ ಮೇಲೆ ತೆರೆದುಕೊಳ್ಳುವ ಪೌರಾಣಿಕ ಕಥನ, ಇನ್ನೊಂದು ಬದುಕಿನ ವಾಸ್ತವ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಭಾಗದ ಯಕ್ಷಗಾನದ ಕಲಾವಿದರಿಗೆ ಇದೇ ಬದುಕು. ತುಳುನಾಡಿನಲ್ಲಿ ‘ಪತ್ತನಾಜೆ’ (ಹಬ್ಬಗಳ ಋತುವಿನ ಕೊನೆಯದಿನ) ಬಂತೆಂದರೆ ಯಕ್ಷಗಾನ ಪ್ರದರ್ಶನಗಳಿಗೆ ತೆರೆಬೀಳುತ್ತದೆ. ಮುಂದೆ ಪ್ರದರ್ಶನಗಳು ಆರಂಭವಾಗುವುದು ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ತಿಂಗಳಲ್ಲಿ. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ತಿಂಗಳಲ್ಲಿ ಯಕ್ಷಗಾನ ಪ್ರದರ್ಶನ ಆರಂಭವಾದಾಗ ನನಗೆ ಪ್ರಥಮವಾಗಿ ನೆನಪು ಆಗುವುದು ಕುಂದಾಪುರದಲ್ಲಿ ನಡೆಯುವ ಗಜೇಂದ್ರ ಆಚಾರ್ ಕೋಣಿ ಸಂಘಟನೆಯಲ್ಲಿ ನಡೆಯುವ “ಯಕ್ಷ ರಾತ್ರಿ”. ಯಕ್ಷಗಾನ ಸಂಘಟನೆ ಅಂದ ಕೂಡಲೆ ಹಲವಾರು ಜನ ಮೊದಲ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಹಾಗೆ ಮೊದಲ ಸಾಲಿನಲ್ಲಿ ಗುರುತಿಸಬಹುದಾದ ಹೆಸರು “ಗಜೇಂದ್ರ ಆಚಾರ್ ಕೋಣಿ”. ಪ್ರತಿ ವರ್ಷ ಕುಂದಾಪುರದಲ್ಲಿ ಪೆರ್ಡೂರು ಮೇಳಕ್ಕೆ ಮೊದಲ ಅವಕಾಶ ಕಲ್ಪಿಸಿಕೊಟ್ಟು ಮೇಳದ ಹೊಸ ಪ್ರಸಂಗದ ಪ್ರದರ್ಶನ ಹಾಗೂ ತಿರುಗಾಟಕ್ಕೆ ಒಂದು ವೇದಿಕೆ ನಿರ್ಮಿಸಿಕೊಡುವ ಸಂಘಟಕ. ಯಕ್ಷಗಾನದ ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುವುದು,…