Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ‘ಹಿರಿಯ ಕವಿ ಮನೆ ಭೇಟಿ’ ಸರಣಿ ಕಾರ್ಯಕ್ರಮದನ್ವಯ ಈ ಬಾರಿ ಕನ್ನಡದ ದೈನಿಕಗಳಾದ ನವ ಭಾರತ, ಉದಯವಾಣಿ ಮತ್ತು ಹೊಸದಿಗಂತ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಕನ್ನಡ ಮತ್ತು ತುಳು ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ರತ್ನ ಕುಮಾರ್ ಎಂ. ಇವರ ಮನೆಗೆ ದಿನಾಂಕ 14 ಮೇ 2025ರಂದು ಭೇಟಿ ನೀಡಿ ಅವರನ್ನು ಹಾರ, ಶಾಲು, ಪೇಟ ಹಾಗೂ ಹಣ್ಣು ಹಂಪಲುಗಳನ್ನು ಸಮರ್ಪಿಸಿ, ಸನ್ಮಾನಿಸಿ, ಪುಸ್ತಕ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿದರು. ಕ.ಸಾ.ಪ. ಕೇಂದ್ರ ಮಾರ್ಗದರ್ಶನ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂಂತಾರು ಪ್ರಸ್ತಾವಿಸಿ, ಸ್ವಾಗತಿಸಿದರು. ರತ್ನಕುಮಾರ್ ಇವರ ಬದುಕು ಬರಹಗಳ ಪರಿಚಯವನ್ನು ಗೌರವ ಕಾರ್ಯದರ್ಶಿಗಳಾದ ಗಣೇಶ್ ಪ್ರಸಾದಜೀ ಇವರು ಮಾಡಿಕೊಟ್ಟರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನ…
ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ದಿನಾಂಕ 08 ಜೂನ್ 2025ರಂದು ಕಯ್ಯಾರ ಕಿಂಞಣ್ಣ ರೈ ಜನ್ಮದಿನೋತ್ಸವ ಸಂಭ್ರಮ -2025 ನಡೆಯಲಿದೆ. ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕವಿಗೋಷ್ಠಿ ಜರುಗಲಿದೆ. ಈ ಸಂದರ್ಭದಲ್ಲಿ ನಡೆಯುವ ಕಯ್ಯಾರ ಕಾವ್ಯ ಸಂಭ್ರಮ -2025ರಲ್ಲಿ ಕಯ್ಯಾರರ ಕುರಿತ ಸ್ವರಚಿತ ಕವನವಾಚನಕ್ಕೆ ಅವಕಾಶವಿದೆ. ಆಸಕ್ತರು ತಮ್ಮ ಹೆಸರನ್ನು ದಿನಾಂಕ 31 ಮೇ 2025ರ ಮೊದಲು ನೋಂದಾಯಿಸಬೇಕು ಎಂದು ಕಾಸರಗೋಡು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿರಾಜ್ ಅಡೂರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ 9447490344 ಸಂಖ್ಯೆಯನ್ನು ಸಂಪರ್ಕಿಸಿರಿ.
ಖ್ಯಾತ ಗಡಿನಾಡ ಲೇಖಕಿ (ಕಾಸರಗೋಡು) ವಿಜಯಲಕ್ಷ್ಮಿ ಶಾನುಭೋಗ್ ಅವರ ಎಂಟನೆಯ ಕೃತಿ ಇತ್ತೀಚೆಗೆ ಪೈವಳಿಕೆ ಸಮೀಪದ ಬಾಯಿಕಟ್ಟೆ ಅಯ್ಯಪ್ಪ ಸಭಾಮಂದಿರದಲ್ಲಿ ಬಿಡುಗಡೆಯಾದ ‘ವ್ಯೂಹ’ ಎನ್ನುವ ಕಥಾಸಂಕಲನ. ಇದು ಹದಿನೈದು ಮನೋಜ್ಞ ಕಥೆಗಳನ್ನು ಒಳಗೊಂಡಿದೆ. ಸುತ್ತಮುತ್ತಲ ಸಾಮಾಜಿಕ ಬದುಕಿನಲ್ಲಿ ತಾವು ಕಂಡ ವೈವಿಧ್ಯಮಯ ವಸ್ತುಗಳನ್ನಾಧರಿಸಿ ವಿವಿಧ ರಚನಾತಂತ್ರಗಳನ್ನು ಬಳಸಿ ವಿಜಯಲಕ್ಷ್ಮಿಯವರು ಈ ಕಥೆಗಳನ್ನು ಸುಂದರವಾಗಿ ಹೆಣೆದಿದ್ದಾರೆ. ಇಲ್ಲಿನ ಕಥೆಗಳನ್ನು ಮುಖ್ಯವಾಗಿ ಸ್ತ್ರೀಶೋಷಣೆ, ಪರಂಪರೆ ಮತ್ತು ಆಧುನಿಕತೆಗಳ ನಡುವಣ ಮುಖಾಮುಖಿ, ಭಾರತೀಯ ಸಂಸ್ಕೃತಿಯ ಬಗೆಗಿನ ಅಭಿಮಾನ ಮುಂತಾಗಿ ವಿಂಗಡಿಸಬಹುದು. ವ್ಯೂಹ ಎಂಬ ಕಥೆಯಲ್ಲಿ ಕಥಾನಾಯಕ ವಿಧವೆಯನ್ನು ಪ್ರೀತಿಸಿ ಮದುವೆಯಾಗ ಬಯಸುತ್ತಾನೆ. ಆದರೆ ಸಂಪ್ರದಾಯಸ್ಥ ಹಿರಿಯರು ಅದನ್ನು ವಿರೋಧಿಸುತ್ತಾರೆ. ಪರಿಣಾಮವಾಗಿ ಕಥಾನಾಯಕ ಮನೆ ಬಿಟ್ಟು ಹೋಗಿ ಸನ್ಯಾಸಿಯಾಗುತ್ತಾನೆ ಮತ್ತು ಹೆಣ್ಣು ಅತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ‘ಮಾತೆಲ್ಲ ಮುಗಿದ ಮೇಲೆ’ ಕಥೆಯಲ್ಲಿ ಕಥಾನಾಯಕ ಚಿಕ್ಕವನಿದ್ದಾಗ ಊರಿನಲ್ಲಿ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸಿ ಅವಳನ್ನು ಮದುವೆಯಾಗುತ್ತೇನೆಂದು ಮಾತು ಕೊಟ್ಟಿರುತ್ತಾನೆ. ಆದರೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿ ಊರು ಬಿಟ್ಟು ಹೋದ ಮೇಲೆ…
ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಕ್ಕಳ ಕಥಾ ರಚನೆ ಕಾರ್ಯಾಗಾರ ನಡೆಯಲಿದೆ. ದಿನಾಂಕ 30 ಮೇ 2025ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯುವ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಅರೆಭಾಷಾ ಕತೆಗಾರ ಡಾ. ಪುನೀತ್ ರಾಘವೇಂದ್ರ ಕುಂಟುಕಾಡು ಹಾಗೂ ಚಿತ್ರಕಲಾ ಶಿಕ್ಷಕ, ತರಬೇತುದಾರ ಪ್ರಸನ್ನ ಐವರ್ನಾಡು ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಹನ್ನೆರಡರಿಂದ ಹದಿನೆಂಟು ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು, ಉಚಿತ ತರಬೇತಿಯಾಗಿದ್ದು ಆಸಕ್ತ ಮೂವತ್ತು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಭಾಗವಹಿಸಿದ ಮಕ್ಕಳಿಗೆ ಆಕಾಡೆಮಿಯ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ. ಕಥಾ ಕಾರ್ಯಾಗಾರದಲ್ಲಿ ಅರೆಭಾಷೆಯಲ್ಲಿ ಕಥೆ ಬರೆಯುವ ಶೈಲಿ, ಓದುವ ಶೈಲಿ, ಕಥೆಯ ಹುಡುಕಾಟ, ಕಥೆಯ ಪಾತ್ರಗಳು, ನೀತಿ, ಜೊತೆಗೆ ಕಥೆಗೆ ಸಂಬಂಧಪಟ್ಟ ಚಿತ್ರಗಳ ಮೂಲಕ ಒಂದು ದಿನದ ಕಾರ್ಯಾಗಾರ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ತಿಳಿಸಿದ್ದಾರೆ. ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ,…
ಮಂಗಳೂರು : ಕರ್ಣಾಟಕ ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತಿಯಾಗಿದ್ದ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧಕ ನಂದಳಿಕೆ ಬಾಲಚಂದ್ರ ರಾವ್ (72) ಅವರು ದಿನಾಂಕ 14 ಮೇ 2025ರಂದು ಮಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಕವಿ ಮುದ್ದಣನ ಹುಟ್ಟೂರಾದ ಕಾರ್ಕಳ ನಂದಳಿಕೆಯಲ್ಲಿ ಮುದ್ದಣ ಸ್ಮಾರಕ ಮಿತ್ರಮಂಡಲಿ ಸ್ಥಾಪನೆ ಮಾಡಿ ಅದರ ಮೂಲಕ ಕವಿ ಮುದ್ದಣನನ್ನು ಶಾಶ್ವತವಾಗಿ ನೆನಪಿಸುವ ಹಲವು ಕಾರ್ಯಕ್ರಮಗಳನ್ನು ನಡೆಸಿದ್ದರು. ಕವಿ ಮುದ್ದಣನ ಸಮಗ್ರ ಕಾವ್ಯ ಸಂಪುಟ ಬಿಡುಗಡೆ, ಮುದ್ದಣ ಮನೋರಮೆಯರ ಸಂಭಾಷಣೆಯ ಡಿವಿಡಿ, ಹುಟ್ಟೂರಿನಲ್ಲಿ ಮುದ್ದಣನ ನೆನಪಿನ ಗ್ರಂಥಾಲಯ, ಮುದ್ದಣ ಸ್ಮಾರಕ, ಮುದ್ದಣನ ಯಕ್ಷಗಾನ ಸಂಪುಟಗಳು, ಪ್ರತೀ ವರ್ಷ ಕವಿ ಮುದ್ದಣ ದಿನಾಚರಣೆಯನ್ನು ಆಯೋಜಿಸುತ್ತಿದ್ದರು. ಮುದ್ದಣನ ಹೆಸರಿನಲ್ಲಿ ಅಂಚೆ ಚೀಟಿ, ನಾಣ್ಯ ಬಿಡುಗಡೆ, ನೂರಾರು ಸಾಹಿತ್ಯಕ ಕಾರ್ಯಕ್ರಮಗಳು, ಮುದ್ದಣ ಸ್ಮಾರಕ ಪ್ರಶಸ್ತಿ ಪೀಠ ಸ್ಥಾಪನೆ ಮಾಡಿದ್ದರು. ಮಂಗಳೂರು ವಿ.ವಿ.ಯಲ್ಲಿ ಕವಿಯ ನೆನಪಿನ ಅಧ್ಯಯನ ಪೀಠಕ್ಕಾಗಿ ಶ್ರಮಿಸಿದ್ದರು. ಕವಿ ಮುದ್ದಣನ ಕೃತಿಗಳನ್ನು ಮರುಮುದ್ರಿಸುವುದು, ಯಕ್ಷಗಾನ ಕೃತಿಗಳನ್ನು ಪ್ರಸ್ತುತಪಡಿಸುವುದು ಹಾಗೂ ದೃಶ್ಯ-ಶ್ರಾವ್ಯ…
ಬೆಂಗಳೂರು : ಭಾಗವತರು ಸಾಂಸ್ಕೃತಿಕ ಸಂಘಟನೆ ಇದರ ವತಿಯಿಂದ ಬಿ.ಬಿ. ಕಾರಂತ 90 ನೆನಪಿನ ನಾಟಕೋತ್ಸವದ ಪ್ರಯುಕ್ತ ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 19 ಮೇ 2025ರಂದು ಸಂಜೆ ಗಂಟೆ 7-10ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಂಗರೂಪ ಕರಣಂ ಪವನ್ ಪ್ರಸಾದ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕು ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಹೇಶ್ ಎಸ್.ಪಿ., ಹನು ರಾಮಸಂಜೀವ, ನಾಗಶ್ರೀ ಪುಟ್ಟರಾಜು, ಸುಶಾಂತ್ ರಾಜ್ ಆರಾಧ್ಯ, ಋತ್ವಿಕ್ ಕೆ.ಸಿ., ಅಂಬಿಕಾ ಶೆಟ್ಟಿ, ಅಜಯ್ ಕುಮಾರ್, ಸಂಜೀವಿನಿ, ಚಂದನ್ ರಾಮಚಂದ್ರೇಗೌಡ, ಶ್ರೀನಾಥ್ ಎನ್., ಪ್ರವೀಣ್ ಭಟ್, ಚರಣ್ ಗೌಡ, ದಿಲೀಪ್ ಮಹದೇವ್, ಭರಣಿ ವಿನಾಯಕ್, ಲೇಖನ, ಹರ್ಷಿತಾ, ಯಶಸ್ವಿನಿ, ಮನ್ವಿತ್ ವಿನಯ್ ಕುಮಾರ್ ರಂಗದ ಮೇಲೆ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ…
‘ನೀಲು ಮಾತು ಮೀರಿದ ಮಿಂಚು’ ಈ ಕೃತಿಯಲ್ಲಿ ಎಸ್.ಎಫ್. ಯೋಗಪ್ಪನವರ್ ಇವರು ಲಂಕೇಶ್ ರ ಎಲ್ಲ ನೀಲು ಕಾವ್ಯಗಳನ್ನು ಅಭ್ಯಾಸ ಮಾಡಿ ಬರೆದಿದ್ದಾರೆ. ಓದು, ಪ್ರಾಮಾಣಿಕತೆ, ಸ್ಪಷ್ಟ ನಿಲುವುಗಳು ಎಂಥ ವ್ಯಕ್ತಿಯನ್ನು ರೂಪಿಸಬಲ್ಲವು ಎನ್ನುವುದಕ್ಕೆ ಲಂಕೇಶ್ ಸಾಕ್ಷಿಯಾಗಿದ್ದರು. ಅವರ ಪ್ರತಿಭೆ ಉರಿವ ನಿಷ್ಟುರತೆಯಲ್ಲಿ ರೂಪಗೊಂಡಿತ್ತು. ಜಾಗೃತಾವಸ್ಥೆ ನುರಿತ ಬೇಟೆಗಾರನ ಕಣ್ಣುಗಳಂತಿತ್ತು. ಅನುಕಂಪ ಬುದ್ದನ ಚಂದ್ರ ನೆಲೆ ನಿಂತ ಸೂಚನೆ ಕೊಟ್ಟಿತ್ತು. ಕನ್ನಡದ ಹೆಸರಾಂತ ಚಿಂತಕ ಡಿ.ಆರ್. ನಾಗರಾಜ ‘ಲಂಕೇಶ್ ಶತಮಾನದ ಪ್ರತಿಭೆ’ ಎಂದು ಕರೆದು ಆಖೈರುಗೊಳಿಸಿ ಹೋಗಿದ್ದಾರೆ. ಲಂಕೇಶ್ ಪ್ರಜ್ಞೆ ಮತ್ತು ಭಾಷೆಯ ಅಭ್ಯಾಸಕ್ಕೆ ನಡೆದಷ್ಟು ಹಾದಿ ಇದೆ. ಸಾವಿಗೆ ಮುಖಾಮುಖಿಯಾದ ಸೃಜನಶೀಲತೆಗೆ ಎಲ್ಲಾ ದಿಕ್ಕುಗಳು ಹಾದಿಯಾಗುತ್ತವೆ. ಲಂಕೇಶ್ ವಿಭಿನ್ನ ವಿಷಯಗಳ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಪ್ರಕೃತಿಯ ಚಿತ್ತದಂತೆ ಅಲ್ಲಿ ಎಲ್ಲ ಲೀಲೆಗಳೂ ಒಳಗೊಂಡಿವೆ. ನೀಲುವಿನಲ್ಲಿ ಗ್ರಾಮ ಹಾಗೂ ನಗರ ಪ್ರಜ್ಞೆಗಳು ಹಾಸುಹೊಕ್ಕಾಗಿವೆ. ಆಕೆಯ ಗ್ರಾಮ ಪ್ರಜ್ಞೆ ಬುಡಕಟ್ಟು ಸಂವೇದನೆಗಳ ಉಗ್ರಾಣದಂತಿದೆ. ಅಲ್ಲಿಯ ಪ್ರಾಮಾಣಿಕತೆ ಕಣ್ಣುಕುಕ್ಕಿಸುತ್ತದೆ. ನಗರದ ನೀಚತನ, ಪಾಪ, ಶೋಷಣೆಗಳನ್ನು…
ಮಂಗಳೂರು : ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇದರ ಪಂಚಮ ಯಾನದಲ್ಲಿ ಪ್ರಪ್ರಥಮ ಬಾರಿಗೆ ದಿನಾಂಕ 17 ಮೇ 2025ರಿಂದ 22 ಮೇ 2025ರವರೆಗೆ ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ನಿರ್ದೇಶನದಲ್ಲಿ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ದಿನಾಂಕ 17 ಮೇ 2025ರಂದು ಸಂಜೆ 3-00 ಗಂಟೆಗೆ ದಾಸರಹಳ್ಳಿ ಶ್ರೀ ಸೌಂದರ್ಯ ವೆಂಕಟರಮಣ ದೇವಸ್ಥಾನದಲ್ಲಿ ‘ಶ್ರೀ ಹರಿ ಲೀಲಾಮೃತ’, ದಿನಾಂಕ 18 ಮೇ 2025ರಂದು ಸಂಜೆ 4-00 ಗಂಟೆಗೆ ಕೊಡಿಗೆಹಳ್ಳಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ಕುಮಾರ ವಿಜಯ’, ದಿನಾಂಕ 19 ಮೇ 2025ರಂದು ಸಂಜೆ 5-00 ಗಂಟೆಗೆ ಯಲಹಂಕ ರಮಣಶ್ರೀ ಲೇಔಟ್ ನಲ್ಲಿ ‘ಶ್ರೀ ದೇವಿ ಮಹಾತ್ಮೆ’, ದಿನಾಂಕ 20 ಮೇ 2025ರಂದು ಸಂಜೆ 5-00 ಗಂಟೆಗೆ ಮಾಚೋಹಳ್ಳಿ ಶ್ರೀ ವಾಣಿ ಶಾಲೆಯಲ್ಲಿ ‘ಅಯೋಧ್ಯಾ ದೀಪ’, ದಿನಾಂಕ 21 ಮೇ 2025ರಂದು ಸಂಜೆ 5-00 ಗಂಟೆಗೆ ಮಾಚೋಹಳ್ಳಿ…
ಮಡಿಕೇರಿ : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 20 ದಿನಗಳ ರಂಗ ತರಬೇತಿ ಶಿಬಿರ ನಡೆಯಲಿದೆ. ರಂಗ ಶಿಬಿರದಲ್ಲಿ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಿಂದ ಮುಖ್ಯವಾಗಿ ಅಭಿನಯ, ಮಾತುಗಾರಿಕೆ, ರಂಗ ವ್ಯಾಯಾಮ, ಸ್ವರಸಂಸ್ಕಾರ, ರಂಗ ಸಜ್ಜಿಕೆ, ವಸ್ತ್ರ ವಿನ್ಯಾಸ, ಸಂಗೀತ, ಬೆಳಕಿನ ಸಂಯೋಜನೆ, ಮೇಕಪ್ ಮಾತ್ರವಲ್ಲದೆ ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಕಲಿಕೆಯ ಜೊತೆಗೆ ಪ್ರಸಿದ್ಧ ಅರೆಭಾಷೆ ನಾಟಕದ ಅಭ್ಯಾಸವೂ ಒಳಗೊಂಡಿದೆ. ಶಿಬಿರದಲ್ಲಿ ಸಿದ್ಧಗೊಂಡ ನಾಟಕದ ಪ್ರದರ್ಶನವನ್ನು ರಾಜ್ಯದ ಮುಖ್ಯ ನಗರಗಳಲ್ಲಿ ಅಕಾಡೆಮಿಯು ಏರ್ಪಡಿಸಲಿದೆ. ಶಿಬಿರದಲ್ಲಿ ಭಾಗವಹಿಸಲು ಕೇವಲ 20 ಮಂದಿ ಕಲಾವಿದರಿಗೆ ಮಾತ್ರ ಅವಕಾಶವಿದ್ದು 16ರಿಂದ 35 ವರ್ಷದೊಳಗಿನ ಪುರುಷ/ ಮಹಿಳಾ ಕಲಾವಿದರು ಭಾಗವಹಿಸಬಹುದು. ಆಸಕ್ತರು ದಿನಾಂಕ 30 ಮೇ 2025ರ ಒಳಗೆ ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಸ್ವವಿವರಗಳೊಂದಿಗೆ ಅರೆಭಾಷೆ ರಂಗ ಶಿಬಿರ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಈ ವಿಳಾಸಕ್ಕೆ ಸಲ್ಲಿಸಬೇಕು. ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ. ಅರ್ಜಿ ನೋಂದಾಯಿಸಿದ ಕಲಾವಿದರಿಗೆ ಸಂದರ್ಶನ…
ಜರ್ಮನಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಯೂರೋಪ್ ಘಟಕವು ದಿನಾಂಕ 10 ಮೇ 2025ರಂದು ಜರ್ಮನಿಯ ಅಲ್ಸ್ಬಾಕ್ನಲ್ಲಿ ‘ಭಾರತ್ ಕಲಾ ವೈಭವ’ ಸಾಂಸ್ಕೃತಿಕ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತು. ಭಾರತೀಯ ಕಲೆಗಳಿಗೆ ಯೂರೋಪ್ನಲ್ಲಿ ವೈಭವಮಯ ವೇದಿಕೆ ನೀಡಿದ ಈ ಸಾಂಸ್ಕೃತಿಕ ಉತ್ಸವವು ನಮ್ಮ ಫೌಂಡೇಶನ್ನಿನ ಹೆಮ್ಮೆಗುರಿಯಾಗಿದ್ದು, ಇದು ಭಾರತದ ಕಲೆಗಳು ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನು ಯೂರೋಪಿನ ಮನಸ್ಸಿನಲ್ಲಿ ಉಳಿಸುವ ಪ್ರಯತ್ನವಾಗಿತ್ತು. ಈ ಕಾರ್ಯಕ್ರಮದಲ್ಲಿ ಯುರೋಪ್ನ ವಿವಿಧ ಭಾಗಗಳಿಂದ 60ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು, 350ಕ್ಕೂ ಹೆಚ್ಚು ಪ್ರೇಕ್ಷಕರಿಗೆ – ಭಾರತೀಯರು ಮತ್ತು ಸ್ಥಳೀಯರು – ಭಾರತೀಯ ಸಂಸ್ಕೃತಿಯ ವಿಶಿಷ್ಟತೆಯನ್ನು ಪ್ರಸ್ತುತಪಡಿಸಿದರು. ಅಲ್ಸ್ಬಾಕ್ ಮೇಯರ್ ಶ್ರೀ ಸೆಬಾಸ್ಟಿಯನ್ ಬುಬೆನ್ಜರ್ ನಮ್ಮ ಈ ಪ್ರಯತ್ನಕ್ಕೆ ಪ್ರಸ್ತುತತೆಯನ್ನು ನೀಡಿದ್ದು, ಫೌಂಡೇಶನ್ನ ಕಾರ್ಯಚಟುವಟಿಕೆಗಳನ್ನು ಮನೋಜ್ಞವಾಗಿ ಪ್ರಶಂಸಿಸಿದರು. ತಮಿಳುನಾಡಿನ ಕಾವಡಿ ಅಟ್ಟಂ, ರಾಜಸ್ಥಾನದ ಘೂಮರ್, ಕೇರಳದ ಮೋಹಿನಿಯಟ್ಟಂ, ಅಸ್ಸಾಂನ ಸತ್ರಿಯಾ ಮತ್ತು ಕರ್ನಾಟಕದ ಕೋಲಾಟ ಮೊದಲಾದ ನೃತ್ಯ ಪ್ರಕಾರಗಳು. ಯಕ್ಷಗಾನ ಬ್ಯಾಲೆ – ‘ಮಾಯಾಮೃಗ’ ವಿಶೇಷವಾಗಿ ಮಕ್ಕಳಿಂದ…