Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ʻನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿʼ, ʻಪಂಕಜಶ್ರೀ ಸಾಹಿತ್ಯ ದತ್ತಿʼ, ʻಸತ್ಯವತಿ ವಿಜಯರಾಘವ ಚಾರಿಟೇಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿʼ ಹಾಗೂ ʻಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿʼ ಪ್ರಶಸ್ತಿಗಳ ಪ್ರದಾನ ಸಮಾರಂಭವು ದಿನಾಂಕ 06-08-2023ರಂದು ಪರಿಷತ್ತಿನ ಶ್ರೀ ಕೃಷ್ಣರಾಜ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ನಿರಂಜನ ವಾನಳ್ಳಿ ಅವರು “ದೇಶ ಕಟ್ಟುವಲ್ಲಿ ನಾಯಕರ ಪಾತ್ರ ಮುಖ್ಯವಲ್ಲ, ಬದಲಿಗೆ ನೆಲ ಮೂಲ ಸಂಸ್ಕೃತಿಯನ್ನು ಕಾಯುವ ಸಾಮಾನ್ಯ ಜನರ ಪಾತ್ರ ಮುಖ್ಯವಾದದು. ಆದರೆ ಸಾಮಾನ್ಯ ಜನರ ಕೊಡುಗೆಗಳನ್ನು ದಾಖಲಿಸುವವರು ಮರೆತು ಬಿಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಸದ್ದಿಲ್ಲದೇ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವವರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕ್ರಾಂತಿಕಾರಕ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಮಾಡುತ್ತದೆ.” ಎಂದು ಹೆಮ್ಮೆ ವ್ಯಕ್ತ ಪಡಿಸಿದರು. ಪ್ರಶಸ್ತಿ ಪ್ರದಾನ ಮಾಡಿ…
ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಸ್ಕ್ರತಿ ಪ್ರತಿಷ್ಠಾನ ಬೆಂಗಳೂರು ಆರ್ಟ್ ಪೌಂಡೇಶನ್ ಮತ್ತು ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಕಾಡುವ ಕಿರಂ ಕಾರ್ಯಕ್ರಮವು ದಿನಾಂಕ 07-08-2023ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಅಗ್ರಹಾರ ಕೃಷ್ಣಮೂರ್ತಿಯವರು “ಕೀ.ರಂ ನಿಜವಾದ ನಾಡೋಜರಾಗಿದ್ದರು. ಅವರು ಸಾಹಿತ್ಯದ ಜೊತೆ ಇತರ ಶಿಸ್ತುಗಳನ್ನು ಮೇಳೈಸಿ ಆನಂದಿಸುವುದನ್ನು ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದರು” ಎಂದರು. ಹಿರಿಯ ಸಾಹಿತಿ ಪ್ರೋ.ಎಚ್.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. 2023ನೇ ಸಾಲಿನ ಕಿರಂ ನಾಗರಾಜ ಪ್ರಶಸ್ತಿಯನ್ನು ಹಿರಿಯ ವಿಚಾರವಾದಿಗಳಾದ ಪ್ರೊ. ನರೇಂದ್ರ ನಾಯಕ್, ಹಿರಿಯ ಚಿತ್ರಕಲಾವಿದರಾದ ಸಿ.ಎಸ್.ನಿರ್ಮಲಕುಮಾರಿ, ಹಿರಿಯ ಸಾಹಿತಿಗಳಾದ ಸುಬ್ಬು ಹೊಲೆಯಾರ್, ಆರ್.ಜಿ.ಹಳ್ಳಿ ನಾಗರಾಜ, ನಾಗತಿಹಳ್ಳಿ ರಮೇಶ್ ಮತ್ತು ಸಾಹಿತ್ಯ ಪರಿಚಾರಕರಾದ ಡಾ.ನಾಗೇಶ್ ದಸೂಡಿ ಇವರುಗಳಿಗೆ ಪ್ರದಾನ ಮಾಡಲಾಯಿತು. ಶಂಕರ ಸಿಹಿಮೊಗೆ ಮತ್ತು ಸೂರ್ಯಕೀರ್ತಿ ಸಂಪಾದಕತ್ವದ ‘ಕಿ.ರಂ. ಹೊಸ ಕವಿತೆ-2023’ ಮತ್ತು ಇಂಗ್ಲಿಷ್ ಕೃತಿಯೊಂದನ್ನು ಹಿರಿಯ ಚಿತ್ರ ಕಲಾವಿದರಾದ ಎಂ.ಎಸ್.ಮೂರ್ತಿ ಬಿಡುಗಡೆಗೊಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್,…
ಬೆಂಗಳೂರು : ವಲಸಿಗರ ಸ್ವರ್ಗದಂತಿರುವ ಬೆಂಗಳೂರು ಮಹಾನಗರಕ್ಕೆ ಕರಾವಳಿ ಹಾಗೂ ಮಲೆನಾಡಿನಿಂದ ಬಂದ ತರುಣ ಜನಾಂಗದವರು ಯಕ್ಷಗಾನ ಕಲೆಯ ಮೇಲೆ ತಮಗಿರುವ ಅತೀವ ಪ್ರೀತಿಯನ್ನು ಬಿಡಲಾರದೆ, ಹವ್ಯಾಸಿ ಸಂಘಗಳನ್ನು ಕಟ್ಟಿಕೊಂಡು, ಯಕ್ಷಗಾನವನ್ನು ಗುರುಮುಖೇನ ಕಲಿತು ಪ್ರದರ್ಶನ ಮಾಡುತ್ತಿರುವುದು ಇತ್ತೀಚಿನ ಆಶಾದಾಯಕ ಬೆಳವಣಿಗೆಯಾಗಿದೆ. ಹೀಗೆ ಕೆಲವು ಉತ್ಸಾಹಿ ತರುಣರು ಹದಿನಾಲ್ಕು ವರ್ಷಗಳ ಹಿಂದೆ ಯಕ್ಷ ಸಿಂಚನ ಟ್ರಸ್ಟ್ ಎಂಬ ಸಂಸ್ಥೆಯನ್ನು ಕಟ್ಟಿ, ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು, ತಮ್ಮ ವಿಶೇಷತೆಯನ್ನು ಮೆರೆಯುತ್ತಿದ್ದಾರೆ. ಕೇವಲ ಪ್ರಶಸ್ತಿ ಪ್ರದಾನ , ಯಕ್ಷಗಾನ ಪ್ರದರ್ಶನಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಪ್ರಸಂಗ ರಚನಾ ಸ್ಪರ್ಧೆ, ಪ್ರಸಂಗ ರಚನಾ ತರಬೇತಿ ಕಮ್ಮಟ, ಯಕ್ಷ ರಸಪ್ರಶ್ನೆ ಕಾರ್ಯಕ್ರಮ, ಸಾರ್ಥಕ ಸಾಧಕ ಪ್ರಶಸ್ತಿ ವಿತರಣೆ ಮುಂತಾದ ವಿನೂತನ ಕಾರ್ಯಕ್ರಮಗಳನ್ನು ನಡೆಸುವ ಮೂಲ ತಮ್ಮ ಅಸ್ತಿತ್ವವನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮೂಡಿಸಿದ್ದಾರೆ. ಇತ್ತೀಚೆಗೆ ಅವರ 14ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಸಾರ್ಥಕ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಸಂಪನ್ನವಾಗಿತ್ತು. ದಿನಾಂಕ 6-8-2023ರಂದು ಬೆಂಗಳೂರಿನ ಉದಯಭಾನು…
ಅಂಗವಿಕಲತೆಯಿದ್ದರೂ ಕೂಡ ಸ್ವಾಭಿಮಾನದ ಬದುಕಿಗಾಗಿ ಕಲೆಯನ್ನೇ ಜೀವನೋಪಾಯವಾಗಿಸಿಕೊಂಡು ನಡೆಯಲು ಅಸಾಧ್ಯವಾದ ಕಾಲುಗಳ ಮೇಲೆ ಮದ್ದಳೆಯನ್ನು ಇಟ್ಟು ಬದುಕು ಕಟ್ಟಿಕೊಂಡ ವಿಜಯ ನಾಯ್ಕರ ಬದುಕಿನ ಹೋರಾಟ ಬಹು ರೋಚಕ. ಉಡುಪಿಯ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆ ಆನಂದ ನಾಯ್ಕ ಹಾಗೂ ಬೇಬಿ ಇವರ ಮಗನಾಗಿ 12.04.1985ರಂದು ಜನನ. ಪ್ರಸ್ತುತ ಹೆಗ್ಗುಂಜೆ ಗ್ರಾಮದ ನೀರ್ಜೆಡ್ಡುನಲ್ಲಿ ವಾಸ. 10ನೇ ತರಗತಿವರೆಗೆ ವಿದ್ಯಾಭ್ಯಾಸ. ಯಕ್ಷಗಾನದಲ್ಲಿ ಇರುವ ಆಸಕ್ತಿಯೇ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಎನ್.ಜಿ ಹೆಗಡೆ ಇವರ ಯಕ್ಷಗಾನ ಗುರುಗಳು. ಕೆ.ಪಿ ಹೆಗಡೆ, ಗೋಪಾಲ ಗಾಣಿಗ ಹೆರಂಜಾಲು, ನಾಗೇಶ್ ಕುಲಾಲ್, ರಾಘವೇಂದ್ರ ಮುದ್ದುಮನೆ ನೆಚ್ಚಿನ ಭಾಗವತರು. ರಾಮಕೃಷ್ಣ ಮಂದಾರ್ತಿ, ಶಿವಾನಂದ ಕೋಟ ಇವರ ನೆಚ್ಚಿನ ಚೆಂಡೆ ವಾದಕರು. ಎನ್.ಜಿ ಹೆಗಡೆ, ಪರಮೇಶ್ವರ ಭಂಡಾರಿ, ಸುನೀಲ್ ಭಂಡಾರಿ ನೆಚ್ಚಿನ ಮದ್ದಲೆ ವಾದಕರು. ದೇವಿ ಮಹಾತ್ಮೆ, ಚಂದ್ರಹಾಸ ಚರಿತ್ರೆ, ಶನೀಶ್ವರ ಮಹಾತ್ಮೆ ಹಾಗೂ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಯಕ್ಷಗಾನದ ಇಂದಿನ ಸ್ಥಿತಿಗತಿ ಹಾಗೂ ಪ್ರೇಕ್ಷಕರ ಬಗ್ಗೆ…
ಬೆಂಗಳೂರು : ಗಿರಿನಗರ ಸಂಗೀತಸಭಾ ಪ್ರಸ್ತುತಪಡಿಸುವ ಕರ್ನಾಟಿಕ್ ಶಾಸ್ತ್ರೀಯ ವೀಣಾ ಕಚೇರಿಯು ದಿನಾಂಕ 12-08-2023ರಂದು ಬೆಂಗಳೂರಿನ ಗಿರಿನಗರದ ಶ್ರೀ ಶಾರದ ದೇವಸ್ಥಾನದ ಮೇಲ್ಭಾಗದಲ್ಲಿರುವ ಶಂಕರ ಸೇವಾ ಟ್ರಸ್ಟಿನಲ್ಲಿ ನಡೆಯಲಿದೆ. ಪದ್ಮಭೂಷಣ ಟಿ.ವಿ ಗೋಪಾಲಕೃಷ್ಣ ಇವರ ಶಿಷ್ಯೆ ಹಾಗೂ ‘ಎ ಶ್ರೇಣಿ’ಯ ವೀಣಾವಾದನ ಕಲಾವಿದೆಯಾದ ಮೈಸೂರಿನ ವಿದುಷಿ ಡಾ.ಸಹನಾ ಎಸ್.ವಿ. ಇವರು ವೀಣಾವಾದನ ನಡೆಸಿ ಕೊಡಲಿದ್ದು, ಮೃದಂಗದಲ್ಲಿ ಗಾನ ಕಲಾಶ್ರೀ ವಿದ್ವಾನ್ ಅನೂರ್ ಅನಂತಕೃಷ್ಣ ಶರ್ಮ ಹಾಗೂ ಘಟಂನಲ್ಲಿ ವಿದ್ವಾನ್ ರಂಗನಾಥ್ ಚಕ್ರವರ್ತಿ ಸಹಕರಿಸಲಿದ್ದಾರೆ.
ಚೆಟ್ಟಂಗಡ ರವಿ ಸುಬ್ಬಯ್ಯ ಇವರು ಶ್ರೀಮಂಗಲ ನಾಡು ವೆಸ್ಟ್ ನೆಮ್ಮಲೆ ಗ್ರಾಮದ ಸಿ.ಎ. ಸುಬ್ಬಯ್ಯ,ಬೊಳ್ಳಮ್ಮ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಟಿ.ಶೆಟ್ಟಿಗೇರಿ, ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಣವನ್ನು ಶ್ರೀಮಂಗಲ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಬಳಿಕ ಉತ್ತರ ಪ್ರದೇಶದ ಬಂದಲ್ಕಾಂಡ್ ವಿಶ್ವವಿದ್ಯಾಲಯದ ಮೂಲಕ ಪತ್ರಿಕೋದ್ಯಮ ಪದವಿಯನ್ನು ಪಡೆದವರು. 1994ರಿಂದ ಪೂರ್ಣಾವಧಿ ಪತ್ರಕರ್ತರಾಗಿ ವೃತ್ತಿ ಜೀವನ ಪ್ರಾರಂಭಿಸಿದವರು. ಕಳೆದ 15 ವರ್ಷಗಳಿಂದ ವಿಜಯ ಕರ್ನಾಟಕ ಪತ್ರಿಕೆ ವರದಿಗಾರರಾಗಿ ಶ್ರೀಮಂಗಲ ವಿಭಾಗದಲ್ಲಿ ಪತ್ರಿಕೆಯ ಬೇಡಿಕೆ ಹೆಚ್ಚಾಗುವರೆ ಕಾರಣಕರ್ತರಾಗಿದ್ದಾರೆ. ಇಪ್ಪತ್ತು ವರ್ಷಗಳಿಂದ ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ಸಂದರ್ಶಕ,ಸುದ್ದಿ ಸಮಾಚಾರ ವಾಚಕ, ಕಲಾವಿದರಾಗಿದ್ದರು. ಈಗ್ಗೆ 5 ವರ್ಷಗಳಿಂದ ಉದ್ಘೋಷಕರಾಗಿ ದುಡಿಯುತ್ತಿದ್ದಾರೆ. ಕಾರ್ಯಕ್ರಮ ನಿರೂಪಣೆ, ಕ್ರೀಡಾ ವೀಕ್ಷಕ ವಿವರಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಸಂಯೋಜಕರಾಗಿ ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷರಾಗಿರುವ ಇವರು ಆ…
ಉಡುಪಿ : ಶ್ರೀ ಜಲವಳ್ಳಿ ವಿದ್ಯಾಧರ ರಾವ್ ಅಭಿಮಾನಿ ಬಳಗ ಉಡುಪಿ ವತಿಯಿಂದ ಅಜ್ಜರಕಾಡು ಪುರಭವನದಲ್ಲಿ ‘ಜಲವಳ್ಳಿ ಯಕ್ಷಯಾನ-30’ ಜಲವಳ್ಳಿಯವರ ಸಾರ್ಥಕ ಮೂರು ದಶಕಗಳ ಯಕ್ಷಗಾನ ಕಲಾಸೇವೆಯ ಸಂಭ್ರಮ, ಸಮ್ಮಾನ ಹಾಗೂ ಯಕ್ಷಗಾನ ಪ್ರದರ್ಶನಗಳ ಕಾರ್ಯಕ್ರಮವು ದಿನಾಂಕ 06-08-2023ರಂದು ನಡೆಯಿತು. ಇದೇ ಸಂದರ್ಭದಲ್ಲಿ ಜಲವಳ್ಳಿ ವಿದ್ಯಾಧರ ರಾವ್ ಅವರನ್ನು ಸಮ್ಮಾನಿಸಲಾಯಿತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶ್ರೀ ಕೆ. ಜಯಪ್ರಕಾಶ ಹೆಗ್ಡೆ ಉದ್ಘಾಟನೆ ನೆರವೇರಿಸಿ “ಯಕ್ಷಗಾನ ಕಲೆ ಸ್ವಚ್ಛ ಕನ್ನಡ ಭಾಷೆ ಉಳಿವಿಗೆ ಪೂರಕವಾಗಿದ್ದು, ಕಲಾವಿದನಿಗೆ ಭಾಷೆಯ ಮೇಲಿದ್ದ ಹಿಡಿತ ಅಸಾಧಾರಣ. ಆಧುನಿಕ ಭರಾಟೆಯಲ್ಲಿ ಯಕ್ಷಗಾನ ಕಲೆ ನಶಿಸಿ ಹೋಗುತ್ತಿದೆ ಎನ್ನುವ ಭೀತಿಯ ಹೊತ್ತಿಗೆ ಯುವ ಸಮುದಾಯ ಹಿರಿಯ ಮಾರ್ಗದರ್ಶನದೊಂದಿಗೆ ಈ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ” ಎಂದರು. ಜಲವಳ್ಳಿ ವಿದ್ಯಾಧರ ರಾವ್ ಕಲಾ ಸೇವೆಯನ್ನು ಕೊಂಡಾಡಿದರು. ಶಾಸಕರಾದ ಶ್ರೀ ಯಶಪಾಲ ಎ. ಸುವರ್ಣ ಜಲವಳ್ಳಿ ವಿದ್ಯಾಧರ ರಾವ್ ಅವರ ಯಕ್ಷಗಾನ ಕಲಾ ಸೇವೆಯನ್ನು ಶ್ಲಾಘಿಸಿ, ಅಭಿನಂದಿಸಿದರು. ವಿದ್ವಾನ್ ದತ್ತಮೂರ್ತಿ…
ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಪ್ರೊ. ಕೆ.ಪಿ. ರಾವ್ ಅಭಿನಂದನಾ ಸಮಿತಿ ವತಿಯಿಂದ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 06-08-2023ರಂದು ನಡೆದ ವಿದ್ವಾಂಸ ಪ್ರೊ. ಕೆ.ಪಿ. ರಾವ್ ಇವರಿಗೆ ಅಭಿನಂದನ ಕಾರ್ಯಕ್ರಮದಲ್ಲಿ ಅವರನ್ನು ವಾದ್ಯ ಘೋಷದೊಂದಿಗೆ ಹೂ ಹಾರ, ಅಭಿನಂದನೆ ಪತ್ರ, ಬಾಳೆಗೊನೆ, ಎಳನೀರು, ಹೂವು-ಹಣ್ಣು, ಅಕ್ಕಿಮುಡಿ ಸೇರಿದಂತೆ ವಿವಿಧ ಸುವಸ್ತುಗಳನ್ನು ನೀಡಿ ವಿಶಿಷ್ಟ ರೀತಿಯಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ಅವರು ಮಾತನಾಡುತ್ತಾ “ದೇವರು ಮತ್ತು ಭಾಷೆ ಕಣ್ಣಿಗೆ ಕಾಣುವುದಿಲ್ಲ. ಹಿಡಿತಕ್ಕೆ ಸಿಗುವುದಿಲ್ಲ. ಆದರೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಶಕ್ತಿ ಭಾಷೆ ಮತ್ತು ದೇವರಿಗಿದೆ. ಪ್ರಾಣಿ ಸಂಕುಲ ಭಾಷೆ ಕಲಿಯುವುದು ಮೊದಲಿಗೆ ತಾಯಿಯಿಂದ ಪರಸ್ಪರ ಅರ್ಥಮಾಡಿಕೊಳ್ಳಲು ಇರುವ ಮಾಧ್ಯಮ ಭಾಷೆ. ಎಲ್ಲರನ್ನು ಒಳಗೊಳ್ಳುವಂತಹ ಶಕ್ತಿ ಭಾಷೆಗಿದೆ” ಎಂದು ಹೇಳಿದರು. ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ, “ತನ್ಮಯತೆ ಇಲ್ಲದ ಚಿಂತನಶೀಲತೆಯಿಂದಲೂ ಏನೂ ಪ್ರಯೋಜನವಿಲ್ಲ. ಅದೇ ರೀತಿ ಚಿಂತನಶೀಲತೆ…
ಮಂಗಳೂರು : ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದರಾದ ಬೆಂಗಳೂರಿನ ಪಾರ್ಶ್ವನಾಥ ಉಪಾಧ್ಯೆ, ಶೃತಿ ಗೋಪಾಲ್ ಮತ್ತು ಆದಿತ್ಯ ಪಿ.ವಿ. ಇವರಿಂದ ‘ನಾಗಮಂಡಲ’ ವಿಶೇಷ ನೃತ್ಯ ರೂಪಕ ಪ್ರಸ್ತುತಿ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ದಿನಾಂಕ 06-08-2023ರಂದು ನಡೆಯಿತು. ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗನ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಎನ್.ಎಂ.ಪಿ.ಎ.ನ ಡೆಪ್ಯುಟಿ ಚೇರ್ಮನ್ ಕೆ.ಜಿ.ನಾಥನ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಮಹೇಶ್ ಕುಮಾರ್, ಕಲಾ ಪೋಷಕರಾದ ಸತೀಶ್ ಚಂದ್ರ ಭಂಡಾರಿಯವರು ಉದ್ಘಾಟಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ, ಗುರುಗಳಾದ ವಿದುಷಿ ಶಾರದಾಮಣಿ ಶೇಖರ್, ಶ್ರೀಲತಾ ನಾಗರಾಜ್, ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ ರಾಧಿಕಾ ಶೆಟ್ಟಿ ಉಪಸ್ಥಿತರಿದ್ದರು. ಗಿರೀಶ ಕಾರ್ನಾಡ್ ರಚಿಸಿದ ‘ನಾಗಮಂಡಲ’ ಜಾನಪದ ಕಥೆಯ ತಿರುಳಿನ ಈ ಕತೆಯನ್ನು ಪುಣ್ಯ ಡ್ಯಾನ್ಸ್ ಕಂಪೆನಿ ಕಲಾವಿದರು ಶಾಸ್ತ್ರೀಯ ನೃತ್ಯಕ್ಕೇ ಅಳವಡಿಸಿ ಪ್ರಸ್ತುತಗೊಳಿಸಿರುವುದು ವಿಭಿನ್ನವಾಗಿತ್ತು. ಇಲ್ಲಿ ಗೀಗಿ ಪದ ಹಾಡುವ ಜನಪದರೇ ನಿರೂಪಕರಾಗಿ, ಕತೆಯನ್ನು ಹೇಳುತ್ತಾ, ಹೊಸದಾಗಿ ಮದುವೆಯಾದ…
ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಪ್ರಸ್ತುತಪಡಿಸುವ ‘ರಾಮಾಯಣ ಮಾಸಾಚರಣೆ’ ಕಾರ್ಯಕ್ರಮವು ದಿನಾಂಕ 11-08-2023 ರಿಂದ 17-08-2023ರವರೆಗೆ ಕಾಸರಗೋಡಿನ ಸಿರಿಬಾಗಿಲಿನಲ್ಲಿರುವ ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಅಗೋಸ್ತು ತಿಂಗಳ 11ನೇ ತಾರೀಕಿನಿಂದ 17ರವರೆಗೆ ಪ್ರತೀದಿನ ಸಂಜೆ ಘಂಟೆ 7.00ರಿಂದ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ‘ರಾಮನಾಮ ಜಪಯಜ್ಞ’ ಪ್ರವಚನ ಕಾರ್ಯಕ್ರಮವು ನಡೆಯಲಿರುವುದು. ದಿನಾಂಕ 11-08-2023ರ ಶುಕ್ರವಾರ ಮಧ್ಯಾಹ್ನ ಘಂಟೆ 2.30ರಿಂದ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ‘ಪಟ್ಟಾಭಿಷೇಕ’ ನಡೆಯಲಿದ್ದು, ಸಂಜೆ ಘಂಟೆ 6.00ರಿಂದ ಬೆದ್ರಡ್ಕದ ಶ್ರೀ ಅಯ್ಯಪ್ಪ ಮಹಿಳಾ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. 12-08-2023ರ ಶನಿವಾರ ಮಧ್ಯಾಹ್ನ ಘಂಟೆ 2.30ರಿಂದ ಮಂಗಳೂರಿನ ಶ್ರೀಹರಿ ಯಕ್ಷ ಬಳಗ ಇವರಿಂದ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಘಂಟೆ 6.00ರಿಂದ ಬೆದ್ರಡ್ಕದ ಸನಾತನ ಬಾಲಗೋಕುಲ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. 13-08-2023ರ ಭಾನುವಾರ ಮಧ್ಯಾಹ್ನ ಘಂಟೆ 2.30ರಿಂದ ಮಂಗಳೂರಿನ ಸರಯೂ ಯಕ್ಷ ಬಾಲ ವೃಂದ ಕೋಡಿಕಲ್ ಇವರಿಂದ ‘ಪಂಚವಟಿ’…