Author: roovari

ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ಸಹಜ ರಂಗ 2025’ ಕಾಲೇಜು ವಿದ್ಯಾರ್ಥಿಗಳಿಗೆ ‘ರಂಗ ತರಬೇತಿ ಶಿಬಿರ’ವು ದಿನಾಂಕ 17 ಆಗಸ್ಟ್ 2025ರಂದು ಮೈಸೂರಿನ ಮಾನಸಗಂಗೋತ್ರಿ ಗಾಂಧಿಭವನ ಆವರಣದಲ್ಲಿ ಉದ್ಘಾಟನೆಗೊಂಡಿತು. ಈ ಶಿಬಿರದ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯನವರು ನೆರವೇರಿಸಿ “ರಂಗಭೂಮಿ ವರ್ತಮಾನದ ಕನ್ನಡಿಯಾಗಿ, ಸಮಾಜದಲ್ಲಿ ಪ್ರಶ್ನಿಸುವ ಮನೋಭಾವನೆಗಳನ್ನು ಬೆಳೆಸಬೇಕು” ಎಂದು ಅಭಿಪ್ರಾಯಪಟ್ಟರು. ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಸ್. ನರೇಂದ್ರ ಕುಮಾರ್ ಮಾತನಾಡಿ “ಸಂವಿಧಾನದ ಮೌಲ್ಯಗಳು ಹಾಗೂ ಆಶಯಗಳನ್ನು ಜನಸಾಮಾನ್ಯರಿಗೂ ತಲುಪಿಸುವ ಕಾರ್ಯ ಹೆಚ್ಚಾಗಿ ನಡೆಯಬೇಕು. ಸಂವಿಧಾನ ಹೇಳಿದ ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ಮುಂದಿನ ತಲೆಮಾರಿಗೆ ಬಿತ್ತಲಿ” ಎಂದು ಹಾರೈಸಿದರು. ಡಾ. ಎಂ.ಡಿ. ಸುದರ್ಶನ್ ಮಾತನಾಡಿ “ನಿರಂತರ ರಂಗಭೂಮಿಯ ನಿಜವಾದ ಉದ್ದೇಶಗಳಿಗೆ ತಕ್ಕಂತೆ ಚಟುವಟಿಕೆಗಳನ್ನು ನಡೆಸುತ್ತಿದೆ. ಸಮಾಜಕ್ಕೆ ಅಗತ್ಯವಾದ ವಿಚಾರಗಳನ್ನು ಧಾಟಿಸುತ್ತಿದೆ” ಎಂದು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳೇ ರೂಪಿಸಿದ ಅಭಿಮುಖ…

Read More

ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ಸಂಯೋಜನೆಯಲ್ಲಿ ನಡೆದ ಜಗತ್ತಿಗೆ ಭಾರತದ ಆಧ್ಯಾತ್ಮಿಕ ಚಿಂತನೆಯನ್ನು ಪರಿಚಯಿಸಿದ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರ ಕುರಿತಾದ ಚಿಂತನೆಗಳ ಉಪನ್ಯಾಸ ಮಾಲಿಕೆ ದಿನಾಂಕಲ 12 ಆಗಸ್ಟ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಭಾರತೀಯ ಸೇನಾಧಿಕಾರಿ ಬೆಳ್ಳಾಲ ಗೋಪಿನಾಥ್ ರಾವ್ ಮಾತನಾಡಿ “ಧಾವಂತದ ಜಗತ್ತು ನಿಮಗಾಗಿ ಕಾಯುವುದಿಲ್ಲ. ಕಷ್ಟಗಳನ್ನು ಅನುಭವಿಸಿದಾಗ ಗೆಲುವು ಸಾಧಿಸುವುದು ಸುಲಭ. ಜೀವದ ಭಯ ಇಲ್ಲದೆ ಗುರಿ ಇಟ್ಟುಕೊಂಡು ಕೆಲಸ ಮಾಡಿ. ದೇಶ ಮೊದಲು ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ದೇಶದ ಅಭಿವೃದ್ಧಿ ಸಾಧ್ಯ. ಸ್ವಾಮಿ ವಿವೇಕಾನಂದರ ಚಿಂತನೆಗಳ ಕಿಡಿ ನಿಮ್ಮಲ್ಲಿ ಹುಟ್ಟಿಕೊಂಡಾಗ ಬದುಕು ಉಜ್ವಲವಾಗುತ್ತದೆ” ಎಂದರು. ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ. ಎನ್. ಮಾತನಾಡಿ, “ಸ್ವಾಮಿ ವಿವೇಕಾನಂದರ ಚಿಂತನೆಗಳು, ನಡೆದು ಬಂದ ಹಾದಿ ಶತಮಾನಗಳವರೆಗೂ…

Read More

ಮಂಗಳೂರು : ಕಲೆ ಮತ್ತು ಸಾಹಿತ್ಯಕ್ಕೆ ಸಮರ್ಪಿತವಾದ ರಾಷ್ಟ್ರೀಯ ಸಂಸ್ಥೆ ‘ಸಂಸ್ಕಾರ ಭಾರತೀ’ ಮಂಗಳೂರು ನಗರ ಇದರ ವತಿಯಿಂದ ‘ನಟರಾಜ ಪೂಜನ್’ ಕಾರ್ಯಕ್ರಮವನ್ನು ದಿನಾಂಕ 19 ಆಗಸ್ಟ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಬಲ್ಲಾಳ್ ಬಾಗ್ ಇಲ್ಲಿರುವ ಸನಾತನ ನಾಟ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ಇದರ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ ಇವರು ವಹಿಸಲಿದ್ದು, ಉಡುಪಿಯ ಕಲಾ ಚಿಂತಕರಾದ ಪ್ರೊ. ಎಂ.ಎಲ್. ಸಾಮಗ ಇವರು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಶ್ರೀವಿದ್ಯಾ ಇವರ ಶಿಷ್ಯೆ ಕುಮಾರಿ ರೆಮೋನಾ ಎವಟ್ ಪಿರೇರಾ ಇವರಿಗೆ ಅಭಿನಂದನೆ ಮಾಡಲಾಗುವುದು. ಕರ್ಣಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆ ಕುಮಾರಿ ಶ್ರೀಕರಿ ಮತ್ತು ಗುರು ಪ್ರತಿಮಾ ಶ್ರೀಧರ್ ಇವರ ಶಿಷ್ಯೆ ವಿದುಷಿ ಪ್ರಕ್ಷೀಲ ಜೈನ್ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಭಾಷೆಗೆ ಸಾಂವಿಧಾನಿಕವಾಗಿ ಮಾನ್ಯತೆ ದೊರೆತ ನೆನಪಿಗಾಗಿ ಪ್ರತಿ ವರ್ಷವೂ ಆಗಸ್ಟ್ 20ರಂದು ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ಅದೇ ರೀತಿ ಈ ವರ್ಷ ದಿನಾಂಕ 20 ಆಗಸ್ಟ್ 2025ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಾಂಡ್ ಸೊಭಾಣ್ (ರಿ.) ಸಹಯೋಗದಲ್ಲಿ ಮಂಗಳೂರಿನ ಶಕ್ತಿನಗರದ ಕಲಾಂಗಣ್ ನಲ್ಲಿ ಶಾಲಾ ಕಾಲೇಜುಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ವೈಭವಯುತವಾಗಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಆಚರಿಸುತ್ತಿದೆ. ಬೆಳಿಗ್ಗೆ 9-00 ಗಂಟೆಗೆ ಧ್ವಜಾರೋಹಣದ ಮೂಲಕ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ನೆರವೇರುತ್ತದೆ. ಮಾಜಿ ಕಾರ್ಪೋರೇಟರ್ ಹಾಗೂ ಕೊಂಕಣಿ ಕಾರ್ಯಕರ್ತರಾದ ಶ್ರೀ ರಂಗನಾಥ ಸಿ. ಕಿಣಿಯವರು ಮುಖ್ಯ ಅತಿಥಿಗಳಾಗಿ, ಮಾಂಡ್ ಸೊಭಾಣ್ (ರಿ.) ಸಂಸ್ಥೆಯ ಅಧ್ಯಕ್ಷರಾದ ಶ್ರೀ ಲುವಿಸ್ ಜೆ. ಪಿಂಟೊ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 10-00 ಗಂಟೆಯಿಂದ ಸಂಜೆ…

Read More

ಬೆಂಗಳೂರು : ಪ್ರವರ ಥಿಯೇಟರ್ ಇದರ 12ನೇ ವಾರ್ಷಿಕೋತ್ಸವ ಪ್ರಯುಕ್ತ ಕಾಜಾಣ ಪ್ರಸ್ತುತ ಪಡಿಸುವ ನಾಟಕ ಪ್ರದರ್ಶನವನ್ನು ದಿನಾಂಕ 23 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ. ಡಾ. ಎಸ್.ಎಲ್.ಎನ್. ಸ್ವಾಮಿ ಇವರ ರಚನೆ, ವಿನ್ಯಾಸ ಸಂಗೀತ ಮತ್ತು ನಿರ್ದೇಶನದಲ್ಲಿ ಪೌರಾಣಿಕ ದೃಶ್ಯ ಪ್ರಪಂಚದ ವಿಶಿಷ್ಟ ಅನಾವರಣ ಗೋಕುಲ ಸಹೃದಯನ ಅಸಾಮಾನ್ಯ ದೃಶ್ಯ ಸಂಪುಟ ಏಕವ್ಯಕ್ತಿ ಪೌರಾಣಿಕ ರಂಗ ಪ್ರಯೋಗ ‘ಪಂಚಗವ್ಯ’ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9880339669 ಮತ್ತು 8431803866 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಉಡುಪಿಯ ರಾಗ ಧನ (ರಿ.) ಸಂಸ್ಥೆಯ ರಾಗರತ್ನಮಾಲಿಕೆ ಸರಣಿ ಸಂಗೀತ ಕಾರ್ಯಕ್ರಮದ 39ನೆಯ ಸಂಗೀತ ಕಛೇರಿ ದಿನಾಂಕ 22 ಜುಲೈ 2025ರಂದು ಬ್ರಹ್ಮಾವರ ತಾಲೂಕಿನ ಕುಂಜಾಲು ಶ್ರೀರಾಮಮಂದಿರದ ಸಭಾಂಗಣದಲ್ಲಿ ಇಬ್ಬರು ಯುವ ಪ್ರತಿಭೆಗಳಿಂದ ಸಂಪನ್ನಗೊಂಡಿತು. ಇಬ್ಬರೂ ಶಾಸ್ತ್ರೀಯ ಸಂಗೀತದ ಆಧಾರಮೌಲ್ಯಗಳನ್ನು ಕಾದುಕೊಂಡು, ಅದರಲ್ಲಿ ತಂತಮ್ಮ ಮನೋಧರ್ಮಕ್ಕೆ ಅನುಗುಣವಾಗಿ ಕೆಲವು ಹೊಸ ಕಲ್ಪನೆಗಳನ್ನು ಅಳವಡಿಸುವ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದರು. ಉದ್ಘಾಟನಾ ಪೂರ್ವ ಕಛೇರಿಯನ್ನು ನೀಡಿದ ತರುಣ ಕಾರ್ತಿಕ್ ಶ್ಯಾಮ್ ಮುಂಡೋಳುಮೂಲೆ. ಗಂಭೀರವಾದ ಶಾರೀರ, ಅಪಾರವಾದ ಆತ್ಮವಿಶ್ವಾಸ, ನಿರಂತರ ಸಾಧನೆಯಿಂದ ರೂಡಿಸಿಕೊಳ್ಳಲಾದ ‘ಅ’ಕಾರಗಳು, ಸ್ವರಗಳ ಖಚಿತತೆ, ಅದಮ್ಯ ಉತ್ಸಾಹ…. 70ರ ದಶಕದ ವಿದ್ವಾಂಸರುಗಳನ್ನು ನೆನಪಿಸಿದವು. ಶಂಕರಾಭರಣದ ಅಟತಾಳ ವರ್ಣದ ನಂತರ ಶ್ರೀರಂಜನಿ (ಗಜವದನಾ) ರಚನೆಯು ಮೂಡಿಬಂತು. ಮುಂದಿನ ವಸಂತ (ಸೀತಮ್ಮ ಮಾಯಮ) ಅಂತೆಯೇ ಪ್ರಧಾನ ರಾಗವಾಗಿದ್ದ ವರಾಳಿ (ಮಾಮವ ಮೀನಾಕ್ಷಿ) ಈ ಎರಡೂ ಕೃತಿಗಳೂ ತಂತಮ್ಮ ನೆಲೆಯಲ್ಲಿ, ತ್ವರಿತಗತಿಯ ಬಿರ್ಕಾಗಳೊಂದಿಗೆ ನೀಡಲಾದ ರಾಗಾಲಾಪನೆ, ಚುರುಕಾದ ಕೃತಿನಿರೂಪಣೆ, ನೆರವಲ್, ಮುಕ್ತಾಯಗಳಿಂದಲೇ ತುಂಬಿದ್ದ ತುಂಬಿದ್ದ ಸ್ವರ ಪ್ರಸ್ತಾರಗಳಿಂದ…

Read More

ಮುಂಬಯಿ : ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಿನಾಂಕ 10 ಆಗಸ್ಟ್ 2025ರಂದು ಮುಂಬೈಯ ಕಲ್ಯಾಣ್ ಶಹಾಡ್ ಪಾಟೀದಾರ್ ಸಭಾಂಗಣದಲ್ಲಿ ಜರಗಿದ ‘ಶ್ರೀದೇವಿ ಬನಶಂಕರಿ’ ಯಕ್ಷಗಾನ ಪ್ರದರ್ಶನ ಸಂದರ್ಭ ಏರ್ಪಡಿಸಿದ್ದ ಕಲಾವಿದರ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಂಬಯಿ ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷರಾದ ಡಾ. ದಿವಾಕರ ಶೆಟ್ಟಿ ಇಂದ್ರಾಳಿ “ಕರ್ಮಭೂಮಿ ಮುಂಬೈಗೆ ಆಗಮಿಸಿದ್ದರೂ ಜನ್ಮ ಭೂಮಿಯ ಆಚಾರ ವಿಚಾರಗಳನ್ನು ಮರೆಯಬಾರದು. ಮಾತೃಭಾಷೆಯ ಮೇಲೆ ಪ್ರೀತಿ ಇರಬೇಕು; ಆಗ ಮಾತ್ರ ಇಂತಹ ಕಲೆ ಜೀವಂತವಾಗಿರಲು ಸಾಧ್ಯ. ಯಕ್ಷಗಾನದಿಂದ ಸಂಸ್ಕಾರ ಸಂಸ್ಕೃತಿಯನ್ನು ಕಲಿಯಲು ಮತ್ತು ಉಳಿಸಲು ಸಾಧ್ಯ. ತುಳುನಾಡಲ್ಲಿ ತುಳು ಸಿನಿಮಾಗಳು ಓಡದಿದ್ದರೂ ಮುಂಬೈಯಲ್ಲಿ ಹೌಸ್ ಫುಲ್ ಆಗುತ್ತದೆ, ಕಾರಣ ನಾವು ಕಲೆ ಮತ್ತು ಕಲಾವಿದರಿಗೆ ನೀಡುವ ಗೌರವ ಅದು” ಎಂದು ಅಭಿಪ್ರಾಯಪಟ್ಟರು. ಗೌರವ ಸ್ವೀಕರಿಸಿ ಮಾತನಾಡಿದ ಕಲಾವಿದ ಸಂಜೀವ ಶೆಟ್ಟಿ ಅರೆಹೊಳೆ “ಕಲೆ ಉಳಿಯಬೇಕಾದರೆ…

Read More

ಉಡುಪಿ : ವಿಭೂತಿ ಆರ್ಟ್ ಗ್ಯಾಲರಿ ಮತ್ತು ಚಿತ್ರಕಲಾ ಮಂದಿರ ಕಲಾಶಾಲೆ ಇದರ ವತಿಯಿಂದ ‘ಸಂಗಮ’ ಸಮೂಹ ಕಲಾ ಪ್ರದರ್ಶನವನ್ನು ದಿನಾಂಕ 23 ಆಗಸ್ಟ್ 2025ರಂದು ಪೂರ್ವಾಹ್ನ 10-30 ಗಂಟೆಗೆ ಚಿತ್ರಕಲಾ ಮಂದಿರ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ. ಅನ್ನಪೂರ್ಣ ಕಾಮತ್, ಜನಾರ್ದನ ಹಾವಂಜೆ, ಕಾಂತಿ ಪ್ರಭು, ಪ್ರವೀಣ್ ಮಲ್ಲಾರ್, ಪುರಂದರ ಎಸ್. ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್, ಸುಚೇಂದ್ರ ಕಾರ್ಲ, ಶ್ರೀನಿವಾಸ ಆಚಾರ್ಯ, ಸೂರಜ್ ಕುಮಾರ್ ವಿದ್ಯಾ ಎಲ್ಲೂ ರ್, ಯಶೋಧ ಎಸ್. ಸನಿಲ್ ಮೊದಲಾದ ಕಲಾವಿದರು ಭಾಗವಹಿಸಲಿದ್ದಾರೆ.

Read More

Iravati Karve, known in the literary world for her valuable masterwork ‘Yugantha’ a rethinking on the major characters of Mahabharatha, is a mesmerizing character in the intellectual arena because of her astounding knowledge of not only Sociology and Anthropology, but a variety of other subjects too. Her alluring personality has been effectively delineated in her recently published biography. ‘Iru’ written on joint effort by Urmila Deshpande (her granddaughter) and Thiango Pinto Barbosa. The book consists of two parts (16 chapters) giving an authentic account of Irawati Karve’s birth, growth, education, higher studies, career and her literary works. The Prologue makes…

Read More

ಕಟೀಲು : ಯುಎಇ -ಮಧ್ಯಪ್ರಾಚ್ಯದ ಏಕೈಕ ಮತ್ತು ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರ ‘ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ’ ಇದರ ದಶಮಾನೋತ್ಸವ ಸಡಗರದ ಪ್ರಯುಕ್ತ ಕೇಂದ್ರದ ಕಲಿಕಾ ವಿದ್ಯಾರ್ಥಿಗಳಿಂದ ಶ್ರೀಕ್ಷೇತ್ರ ಕಟೀಲಿನ ರಥಬೀದಿಯ ಸರಸ್ವತಿ ಸದನದಲ್ಲಿ ದಿನಾಂಕ 10 ಆಗಸ್ಟ್ 2025ರಂದು ಹಮ್ಮಿಕೊಂಡ ‘ಯಕ್ಷಗಾನಾರ್ಚಣೆ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಕರ್ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ “ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಯುಎಇಯಲ್ಲಿ ನೆಲೆಸಿರುವ ಕನ್ನಡಿಗರು, ತುಳುವರು ಅಲ್ಲಿಯೇ ಯಕ್ಷಗಾನ ಅಭ್ಯಾಸ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಈ ಕಲೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ಯಕ್ಷಗಾನಕ್ಕೆ ಮಾನವ ಹೃದಯವಲ್ಲದೆ ದೇಶ-ದೇಶಗಳನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ಸಂಸ್ಥೆ ಸಾಬೀತು ಪಡಿಸಿದೆ. ದುಬಾಯಿಯಲ್ಲಿ ಮಕ್ಕಳು, ಹಿರಿಯರು ಬೇಧಭಾವವಿಲ್ಲದೆ ಯಕ್ಷಗಾನವನ್ನು ಕಲಿತು ಯಶಸ್ವಿಯಾಗಿ ಪ್ರದರ್ಶನ ಮಾಡುತ್ತಿದ್ದಾರೆ. ಇದೊಂದು ಸಾಂಸ್ಕೃತಿಕ ಬೆರಗು. ಮಕ್ಕಳು, ಮಹಿಳೆಯರು ಯಕ್ಷಗಾನ ಕಲಿತರೆ ಕಲೆ ಉಳಿಯುತ್ತದೆ, ಬೆಳೆಯುತ್ತದೆ.…

Read More