Author: roovari

ಪುತ್ತೂರು : ನಾಡಿನ ಹೆಸರಾಂತ ಸಾಹಿತಿ ಎಸ್. ಎಲ್ ಭೈರಪ್ಪ ಇವರ ನಿಧನದ ಹಿನ್ನೆಲೆಯಲ್ಲಿ ಇವರಿಗೆ ದಿನಾಂಕ 27 ಸೆಪ್ಟೆಂಬರ್ 2025ರಂದು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನುಡಿನಮನವನ್ನು ಸಲ್ಲಿಸಲಾಯಿತು. ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ. ಮಾತನಾಡಿ “ಕನ್ನಡ ಸಾಹಿತ್ಯ ಲೋಕದ ಧೀಮಂತ ಸಾಹಿತಿ ಹಾಗೂ ಭಾರತೀಯ ಪರಂಪರೆಯ ಧೋರಣೆಗಳನ್ನು ನಾಡಿನಾದ್ಯಂತ ಬೆಳಗಿದ ‘ಸರಸ್ವತಿ ಸಮ್ಮಾನ್’ ಹಾಗೂ ‘ಪದ್ಮಭೂಷಣ’ ಪುರಸ್ಕೃತ ಸಾಹಿತಿಗಳಾದ ಡಾ. ಎಸ್. ಎಲ್. ಭೈರಪ್ಪನವರ ಅಗಲುವಿಕೆ ಕನ್ನಡ ನಾಡಿಗೆ ಭರಿಸಲಾಗದ ನಷ್ಟ” ಎಂದು ನುಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.

Read More

ಬೆಂಗಳೂರು : ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ದಿನಾಂಕ 29 ಸೆಪ್ಟೆಂಬರ್ 2025ರ ಸೋಮವಾರದಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಒಕ್ಕಲಿ ಎಂಬ ಹಳ್ಳಿಯಲ್ಲಿ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ ಮತ್ತು ಕಲ್ಪನಾದೇವಿ ದಂಪತಿಗಳ ಸುಪುತ್ರರಾಗಿ 1965 ಜೂನ್ 13ರಂದು ಜನಿಸಿದರು. ನಾಟಕದಲ್ಲಿ ಅತಿಯಾದ ಆಸಕ್ತಿ ಇದ್ದ ಇವರಿಗೆ ಹೆಗ್ಗೋಡಿನ ‘ನೀನಾಸಮ್’ ನಾಟಕ ಸಂಸ್ಥೆಯಿಂದ ಪಡೆದ ಡಿಪ್ಲೋಮಾ ಪದವಿ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ದೊರೆತ ನಾಟಕ ರಚನೆ ಮತ್ತು ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿಯು ಇವರ ಆಸಕ್ತಿಯನ್ನು ಕೆರಳಿಸಿ, ಆ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿತು. ರಾಜ್ಯದಾದ್ಯಂತ ಸಂಚರಿಸಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ ಖ್ಯಾತಿ ಇವರದು. ‘ಅಂಧ ಯುಗ’, ‘ಇನ್ಸ್ಪೆಕ್ಟರ್ ಜನರಲ್’, ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’, ‘ಬಾಡಿಗೆ ಮನೆ’, ‘ಪುಷ್ಪ ರಾಣಿ’, ‘ಗಲಿವರನ್ನು ಯಾತ್ರೆ’, ‘ಬೆಪ್ಪು ತಕ್ಕಡಿ ಬೋಳೇಶಂಕರ’, ‘ತುಂಟಮಕ್ಕಳ ತಂಟೆ’, ‘ಕುಂಟಾ ಕುಂಟ ಕುರವತ್ತಿ’ ಇತ್ಯಾದಿ ಸೇರಿದಂತೆ ಒಟ್ಟು ಅರವತ್ತಕ್ಕೂ ಹೆಚ್ಚು…

Read More

ಮೈಸೂರು : ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು ಮತ್ತು ರಂಗಾಯಣ ಮೈಸೂರು ಇವರ ವತಿಯಿಂದ ‘ನವರಾತ್ರಿ ರಂಗ ಉತ್ಸವ’ ದಿನಾಂಕ 01 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ರಂಗಾಯಣದ ಭೂಮಿಗೀತದಲ್ಲಿ ಹಮ್ಮಿಕೊಳ್ಳಲಾಗಿದೆ. ನಿರಂತರ ಫೌಂಡೇಶನ್ (ರಿ.) ಮೈಸೂರು ಅಭಿನಯಿಸುವ ‘ಜನ ಗಣ ಮನ’ ಸಂವಿಧಾನ ಮತ್ತು ಶಿಕ್ಷಣದ ಆಶಯದ ನಾಟಕ ಸುಗುಣ ಎಂ.ಎಂ. ಇವರ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ. ದೇವಕಿ ಧರ್ಮಿಷ್ಠೆ ರಚನೆಯ ಈ ನಾಟಕಕ್ಕೆ ನವೀನ್ ಸಜ್ಜು ಹಾಗೂ ಕಿರಣ್ ಬಿ.ಕೆ. ಸಂಗೀತ ನೀಡಿದ್ದು, ಜೀವನ್ ಕುಮಾರ್ ಬಿ. ಹೆಗ್ಗೋಡು ಇವರು ವಿನ್ಯಾಸ ಮತ್ತು ಬೆಳಕು, ಧನುಷ್ ಎಸ್. ಸಹ ನಿರ್ದೇಶನ ಮಾಡಿರುತ್ತಾರೆ. ಇಂದು ಶಿಕ್ಷಣ ಕ್ಷೇತ್ರವು ವ್ಯಾಪಾರೀಕರಣ ಮತ್ತು ಕಾರ್ಪೋರೇಟಿಕರಣದ ಬಲೆಗೆ ಸಿಲುಕಿರುವುದು ದುರಂತವಾದರೂ ನಾವೆಲ್ಲರೂ ಒಪ್ಪಿರುವ ವಾಸ್ತವ. ಮೂಲಭೂತ ಶಿಕ್ಷಣವೇ ಇನ್ನೂ ಲಕ್ಷಾಂತರ ಮಕ್ಕಳಿಗೆ ಅಸಾಧ್ಯ ಕನಸಾಗಿ ಉಳಿದಿರುವ ಸಂದರ್ಭದಲ್ಲಿ, ಶಿಕ್ಷಣವನ್ನು ಹಕ್ಕು ಎಂದು ನೋಡುವ ಬದಲು ಸರಕು-ಸೇವೆಯಂತೆ ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುವಾಗಿ ಪರಿವರ್ತಿಸಲಾಗುತ್ತಿದೆ. ಶಿಕ್ಷಣದ ಹೃದಯದಲ್ಲಿ…

Read More

ಸೊಗಸಾದ ಅಷ್ಟೇ ಕಲಾತ್ಮಕವಾಗಿದ್ದ ರಂಗಸಜ್ಜಿಕೆ, ಅಪೂರ್ವ ದೇವಾಲಯದ ಆವರಣದಲ್ಲಿ ಬಹು ಭಕ್ತಿಯಿಂದ ದೈವೀಕ ನರ್ತನ ಅರ್ಪಿಸಿದ ಉದಯೋನ್ಮುಖ ನೃತ್ಯ ಕಲಾವಿದೆ ವಿಸ್ಮಯ ಸುಧೀರಳ ಸೌಮ್ಯ ನರ್ತನ ನೆರೆದಿದ್ದ ಕಲಾರಸಿಕರ ಮೆಚ್ಚುಗೆಯ ಕರತಾಡನ ಪಡೆಯಿತು. ನೃತ್ಯಕ್ಕೆ ಹೇಳಿ ಮಾಡಿಸಿದ ಮೈಮಾಟ- ಅಭಿವ್ಯಕ್ತಿ ಸೂಸುವ ಮುಖಭಾವ ಹೊಂದಿದ್ದ ಬಾಲಕಿ ಕುಮಾರಿ ವಿಸ್ಮಯ ಇತ್ತೀಚೆಗೆ ಕೋರಮಂಗಲದ ‘ಪ್ರಭಾತ್ ಕಲಾದ್ವಾರಕ’ ಮಂದಿರದಲ್ಲಿ ತನ್ನ ಭರತನಾಟ್ಯದ ರಂಗಪ್ರವೇಶವನ್ನು ಯಶಸ್ವಿಯಾಗಿ ನೆರವೇರಿಸಿಕೊಂಡಳು. ಅಭಿನಯಕ್ಕೆ ಹೆಸರಾದ ‘ಆವಾಹನಂ’ ನೃತ್ಯಶಾಲೆಯ ವಿದುಷಿ ದೀಪಾ ಮನೋಹರ ಇವರ ನೆಚ್ಚಿನ ಶಿಷ್ಯೆಯಾದ ಇವಳು ಅಂದು ‘ಮಾರ್ಗಂ’ ಸಂಪ್ರದಾಯದ ಕೃತಿಗಳನ್ನು ಬಹು ಅಚ್ಚುಕಟ್ಟಾಗಿ ನಿರೂಪಿಸಿದ್ದು ವಿಶೇಷವಾಗಿತ್ತು. ವಿಸ್ಮಯಳ ದೈವೀಕ ನೃತ್ಯ ಕೃತಿಗಳ ಪ್ರದರ್ಶನಕ್ಕೆ ಪೂರಕವಾಗಿದ್ದ ದೇವಾಲಯದ ಮನಮೋಹಕ ರಂಗಸಜ್ಜಿಕೆ, ಪರಿಸರ, ದೀಪಗಳ ವಿನ್ಯಾಸ, ಸುಮಧುರ ಸಂಗೀತದ ಸಾಂಗತ್ಯ ನೀಡಿದ ವಾದ್ಯಮೇಳ- ಗುರು ದೀಪಾ ಮನೋಹರ್ ಅವರ ಸುಸ್ಪಷ್ಟ-ಖಚಿತ ನಟುವಾಂಗದಿಂದ ದಿವ್ಯ ಪರಿಸರ ರೂಪಿತವಾಗಿತ್ತು. ಶುಭಾರಂಭಕ್ಕೆ ವಿಸ್ಮಯ, ಪಾರಂಪರಿಕ ಕೃತಿಯಾದ ಗಂಭೀರ ನಾಟರಾಗದ ತಿಶ್ರ ತ್ರಿಪುಟ ತಾಳದ ‘ಮಲ್ಲಾರಿ’ಯನ್ನು…

Read More

ಬೆಂಗಳೂರು : ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ (ನೋಂ) ಪ್ರದರ್ಶಕ ಕಲಾವಿಭಾಗ ಅರ್ಪಿಸುವ ‘ಶತಾಬ್ದಿ ನಾದ ನೈವೇದ್ಯ’ ಕಾರ್ಯಕ್ರಮವನ್ನು ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರು ಬಸವನ ಗುಡಿಯಲ್ಲಿರುವ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿ ಆಡಿಟೋರಿಯಂನಲ್ಲಿ ಆಯೋಜಸಲಾಗಿದೆ. ಮಧುರ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಧ್ಯೇಯಗೀತೆ ಪ್ರಸ್ತುತಗೊಳ್ಳಲಿದ್ದು, ಗಾಯನದಲ್ಲಿ ನ. ನಾಗರಾಜ, ರಾಜೀವ್ ಅಗಲಿ, ಹರ್ಷ ಕೌಂಡಿನ್ಯಾ, ರಾಜೇಶ್ ಕುಮಾರ್ ಬಿ.ಎಸ್., ಡಾ. ಪದ್ಮಿನಿ ಎಲ್.ಓಕ್., ರಜನಿ ಬಿ.ಸಿ., ಲಕ್ಷ್ಮಿ ವಿಜಯ್, ಚಾಂದನಿ ಗರ್ತಿಕೆರೆ, ಸುನಯನ ಇವರುಗಳು ಭಾಗವಹಿಸಲಿದ್ದು, ತಬಲಾದಲ್ಲಿ ಮಧುಸೂದನ್ ಮತ್ತು ಸುದತ್ತ, ಸಿತಾರ್ ಸುಬ್ರಹ್ಮಣ್ಯ ಹೆಗಡೆ, ಕೊಳಲು ಗಣೇಶ್ ಕೆ.ಎಸ್., ಕೀಬೋರ್ಡ್ ಉಮೇಶ್ ಸೃಷ್ಟಿ, ರಿದಮ್ ಪ್ಯಾಡ್ ಶ್ರೀನಿವಾಸ್ ಸೃಷ್ಟಿ ಹಾಗೂ ಗಿಟಾರ್ ವಿನಯ್ ಇವರುಗಳು ವಾದ್ಯ ಸಹಕಾರ ನೀಡಲಿದ್ದಾರೆ.

Read More

ದಾವಣಗೆರೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳು ಮತ್ತು ಯುವ ಜನರ ಕಲಾಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ ನೈಪುಣ್ಯ ವೃದ್ದಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವ ಸ್ಪರ್ಧೆ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ. ಬಾಲ ಪ್ರತಿಭೆ (8ರಿಂದ 14 ವರ್ಷವಯೋಮಾನ), ಕಿಶೋರ ಪ್ರತಿಭೆ (14ರಿಂದ 18 ವರ್ಷವಯೋಮಾನ), ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಜಾನಪದ ಗೀತೆ, ಹಿಂದೂಸ್ತಾನಿ/ಕರ್ನಾಟಕ ವಾದ್ಯ ಸಂಗೀತ, ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಭಾಗವಹಿಸಬಹುದು. ಯುವ ಪ್ರತಿಭೆ (18 ರಿಂದ 30 ವರ್ಷ ವಯೋಮಾನ) : ನನ್ನ ನೆಚ್ಚಿನ ಸಾಹಿತಿ, ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಹಿಂದೂಸ್ತಾನಿ/ಕರ್ನಾಟಕ ವಾದ್ಯ ಸಂಗೀತ, ನಾಟಕ- 10ರಿಂದ 18 ತಂಡದ ಸದಸ್ಯರು ಭಾಗವಹಿಸಬಹುದು. ಸ್ಪರ್ಧಿಗಳು ಸ್ವ ವಿವರದ ಅರ್ಜಿ ಸಲ್ಲಿಸಲು ದಿನಾಂಕ 10 ಅಕ್ಟೋಬರ್ 2025 ಕೊನೆಯ ದಿನವಾಗಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ವಿವರವನ್ನು ಸಹಾಯಕ…

Read More

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಯಕ್ಷರಂಗ ಪುತ್ತೂರು ಇವರ ವತಿಯಿಂದ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ (ರಿ.) ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗ ಇವರ ಸಹಭಾಗಿತ್ವದೊಂದಿಗೆ ‘ಯಕ್ಷಗಾನ ತಾಳಮದ್ದಲೆ’ಯನ್ನು ದಿನಾಂಕ 02 ಅಕ್ಟೋಬರ್ 2025ರಂದು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9-30 ಗಂಟೆಗೆ ಸೇರಾಜೆ ಸೀತಾರಾಮ ಭಟ್ಟ ವಿರಚಿತ ಹವ್ಯಕ ಪೌರಾಣಿಕ ಕಥಾನಕ ‘ಭೂಮಿಂಜಯನ ಬೊಬ್ಬೆ’, 12-30 ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 2-00 ಗಂಟೆಗೆ ಕವಿ ಗಣೇಶ್ ಕೊಲೆಕ್ಕಾಡಿ ವಿರಚಿತ ಪೌರಾಣಿಕ ಕಥಾನಕ ‘ಶನೀಶ್ವರ ಮಹಾತ್ಮೆ’ ಯಕ್ಷಗಾನ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ.

Read More

ಮಂಗಳೂರು : ಶ್ರೀದೇವಿ ನೃತ್ಯ ಕೇಂದ್ರ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಹೊಸ ಶಾಖೆಯು ದಿನಾಂಕ 01 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಕೋಟೆಕಣಿ ರೋಡಿನಲ್ಲಿರುವ ವೀಕೇ ಪಾರ್ಕ್ ಅಪಾರ್ಟ್ಮೆಂಟಿನಲ್ಲಿ ಉದ್ಘಾಟನೆಗೊಳ್ಳಲಿದೆ. ಶಾಂತಲಾ ಪ್ರಶಸ್ತಿ ಪುರಸ್ಕೃತ ಜಯಲಕ್ಷ್ಮಿ ಆಳ್ವ ಇವರ ಶಿಷ್ಯೆ ವಿದುಷಿ ಸಾತ್ವಿಕಾ ರೈ ಇವರಿಂದ ನೃತ್ಯ ತರಬೇತಿ ನೀಡಲಿದ್ದು, ಅದೇ ದಿನ ಭರತನಾಟ್ಯ ತರಗತಿಯು ಪ್ರಾರಂಭಗೊಳ್ಳಲಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗೆ 9740540679 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಕುಶಾಲನಗರ : ಖ್ಯಾತ ಕಾದಂಬರಿಕಾರರೂ ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರೂ ಆದ ಎಸ್.ಎಲ್. ಭೈರಪ್ಪ ಅವರ ಅಗಲುವಿಕೆಯ ಕುರಿತು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಿರಿ ಬಳಗದ ವತಿಯಿಂದ ಕುಶಾಲನಗರ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಜಂಟಿಯಾಗಿ ದಿನಾಂಕ 26 ಸೆಪ್ಟೆಂಬರ್ 2025ರಂದು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಾಹಿತ್ಯಾಭಿಮಾನಿಗಳು ಕಂಬನಿ ಮಿಡಿದರು. ಕಾದಂಬರಿಕಾರ ಭೈರಪ್ಪರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಕಾಲ ಮೌನಾಚರಣೆ ನಡೆಸಿ ನುಡಿನಮನ ಸಲ್ಲಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ “ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದ ಎಸ್.ಎಲ್. ಭೈರಪ್ಪ ತಮ್ಮ ಕಾದಂಬರಿ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದ, ಅವರ ಕೃತಿಗಳು ಹಲವಾರು ಭಾಷೆಗಳಿಗೆ ಅನುವಾದವಾಗಿರುವುದು ಅವರ ಸಾಹಿತ್ಯ ಶಕ್ತಿಗೆ ಸಾಕ್ಷಿಯಾಗಿದೆ” ಎಂದರು. ಜಿಲ್ಲಾ ಕ.ಸಾ.ಪ. ಸಮಿತಿಯ ಸದಸ್ಯ ಎಂ.ಎನ್. ವೆಂಕಟನಾಯಕ್ ಮಾತನಾಡಿ “ವಂಶವೃಕ್ಷ, ದಾಟು, ತಂತು ಮುಂತಾದ ಪ್ರಮುಖ ಕಾದಂಬರಿಗಳ…

Read More

ಉದ್ಯಾವರ : ಶ್ರೀ ಗಣೇಶ ಕಲಾಮಂದಿರ (ರಿ.) ಉದ್ಯಾವರ, ಸಾರ್ವಜನಿಕ ಶ್ರೀ ಶಾರದೋತ್ಸವದ ಸಮಿತಿ ಉದ್ಯಾವರ ಆಶ್ರಯದಲ್ಲಿ ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇವರು ಪ್ರಸ್ತುತ ಪಡಿಸುವ ‘ಕಾಲಚಕ್ರ’ ನಾಟಕ ಪ್ರದರ್ಶನವನ್ನು ದಿನಾಂಕ 30 ಸೆಪ್ಟೆಂಬರ್ 2025ರಂದು ರಾತ್ರಿ 9-00 ಗಂಟೆಗೆ ಉದ್ಯಾವರ ಶಾರದೋತ್ಸವದ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರದೀಪ್ ಚಂದ್ರ ಕುತ್ಪಾಡಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಶ್ರೀಪಾದ ಹೆಗಡೆ ಇವರ ಸಹ ನಿರ್ದೇಶನದಲ್ಲಿ ಪ್ರಸ್ತುತ ಗೊಳ್ಳುವ ಈ ನಾಟಕಕ್ಕೆ ಗೀತೆ ರಚನೆ ಮತ್ತು ಸಂಗೀತ ನಿರ್ದೇಶನ ಗೀತಂ ಗಿರೀಶ್, ಬೆಳಕು ನಿತಿನ್ ಪೆರಂಪಳ್ಳಿ ನೀಡಿರುತ್ತಾರೆ. ‘ಕಾಲಚಕ್ರ’ ನಮ್ಮ ನಿಮ್ಮ ಮಧ್ಯೆ ಇರುವ ಹಿರಿಜೀವಗಳು-ಕಿರಿಜೀವಗಳೇ ಈ ನಾಟಕದ ಪಾತ್ರ. ಮನೆ ಮನದ ಕಥೆ ಇಲ್ಲಿನ ವಸ್ತು. ಕಾಲಾಂತರದಲ್ಲಿ ತಲೆಮಾರುಗಳ ಮಧ್ಯೆ ಬೆಸೆಯುವ ಮೌಲ್ಯಗಳು, ಬದುಕಿನ ವಿವಿಧ ಸ್ತರದಲ್ಲಿ ಕಾಣುವ ಅನಿವಾರ್ಯತೆ, ಮರುಕಳಿಸುವ ನೆನಪುಗಳು, ನಂಬುಗೆ – ನಡವಳಿಕೆಯ ತಾಕಲಾಟ, ಪ್ರತಿಯೊಬ್ಬರಿಗೂ ನಿಚ್ಚಳವಾಗಿ ಬಂದೇ ಬರುವ ಪ್ರೀತಿಯ…

Read More