Author: roovari

ಮಂಗಳೂರು : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 278ನೇ ಕಾರ್ಯಕ್ರಮವು ದಿನಾಂಕ 02 ಫೆಬ್ರವರಿ2025 ರಂದು ಸಂಜೆ ಘಂಟೆ 6.30ರಿಂದ ಶಕ್ತಿನಗರದ ಕಲಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಸೂಪರ್ ಸಿಂಗರ್ ಸೀಜನ್ -5 ಇದರ ವಿಜೇತೆ ಯುವ ಗಾಯಕಿ ರಿಶಲ್ ಮೆಲ್ಬಾ ಕ್ರಾಸ್ತಾ ಚಾಲನೆ ನೀಡಲಿದ್ದು, ಅಂದು ‘ಸುರ್ ಸೊಭಾಣ್’ ಗಾಯನ ತರಬೇತಿ ಶಾಲೆಯ 70 ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲಿದ್ದಾರೆ. ಮಾಂಡ್ ಸೊಭಾಣ್ ಗಾಯನ ಮಂಡಳಿ ‘ಸುಮೇಳ್’ ನೇತೃತ್ವದಲ್ಲಿ ‘ಸುರ್ ಸೊಭಾಣ್’ ತರಗತಿಗಳು ಕಳೆದ ಆಗಸ್ಟ್ ನಿಂದ ಆರಂಭವಾಗಿದ್ದವು. ಹಿಂದೂಸ್ತಾನಿ ಗಾಯನದಲ್ಲಿ ಪದವಿ ಪಡೆದು ಕೊಂಕಣಿ ಗಾಯನ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿರುವ ಶಿಲ್ಪಾ ತೇಜಸ್ವಿನಿ ಕುಟಿನ್ಹಾ ಇವರು ಪ್ರಧಾನ ತರಬೇತುದಾರರಾಗಿ ಕೊಂಕಣಿ ಗಾಯನದಲ್ಲಿ ಶಾಸ್ತ್ರೀಯ ಶಿಸ್ತು ಹಾಗೂ ಸ್ವರ, ಧ್ವನಿ ನಿಯಂತ್ರಣ, ಹಾಡುಗಾರಿಕೆಯ ತಂತ್ರಗಳನ್ನು ವಿದ್ಯುಕ್ತವಾಗಿ ವಿದ್ಯಾರ್ಥಿಗಳಿಗೆ ಕಲಿಸಿದ್ದಾರೆ. ಹಿಂದೂಸ್ತಾನಿ ಗಾಯನ ಪ್ರಕಾರದ ಮೂಲಭೂತ ಅಂಶಗಳಾದ ಅಲಂಕಾರ, ಆರೋಹ, ಅವರೋಹ, ತಾಟ್, ತಾಲ್ ಮತ್ತು ರಾಗಗಳಾದ ಭೂಪ್, ಬೃಂದಾವನಿ, ಸಾರಂಗ್,…

Read More

ಮಂಗಳೂರು : ರಂಗ ಸಂಗಾತಿ ಮಂಗಳೂರು ಇವರ ಆಶ್ರಯದಲ್ಲಿ ಪುಸ್ತಕ ಪ್ರೇಮಿಗಳ ದಿನದಂದು ‘ಚಿತ್ರರಚನಾ ಸ್ಪರ್ಧೆ’ಯನ್ನು ದಿನಾಂಕ 14 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 08 ಫೆಬ್ರವರಿ 2025 ನೋಂದಾವಣೆಗೆ ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 91 9686917406 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಡಿಕೇರಿ : ಮಡಿಕೇರಿ ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಕೆ.ಜಯಲಕ್ಷ್ಮೀ ಇವರ ‘ಮತ್ತೆ ವಸಂತ’ ಕಥಾ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 26 ಜನವರಿ 2025 ರಂದು ಮಡಿಕೇರಿಯ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಮಡಿಕೇರಿ ಆಕಾಶವಾಣಿ ಕೇಂದ್ರದ ಹಿರಿಯ ಉದ್ಘೋಷಕ ಹಾಗೂ ಸಾಹಿತಿಗಳಾದ ಸುಬ್ರಾಯ ಸಂವಾಜೆ ಮಾತನಾಡಿ “ಇವತ್ತು ಬರೆದು ನಾಳೆ ಅಳಿದು ಹೋಗುವ ಕೃತಿಗಳನ್ನು ಬರೆಯದಿರಿ. ಅಧ್ಯಯನ ಉಸಿರಾಗಿ ಆಳವಾದ ಮತ್ತು ವಿಸ್ತ್ರತವಾದ ಓದನ್ನು ಮೈಗೂಡಿಸಿಕೊಂಡು ಹೆಚ್ಚಿನ ಕಾಲ ಮನದಲ್ಲಿ ಉಳಿಯುವ ಕೃತಿ ರಚನೆಯತ್ತ ಲೇಖಕರು ಗಮನ ಹರಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕನ್ನಡದಲ್ಲಿ, ಕೃತಿರಚನೆಯ ಕೆಲನ ವ್ಯಾಪಕವಾಗಿ ನಡೆಯುತ್ತಿರುವ ಉತ್ತಮ ಬೆಳವಣಿಗೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದರೂ ಅವರಲ್ಲಿ ಕೊಡಗಿನವರು ಯಾರೂ ಇಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ. ಪಿ. ರಮೇಶ್…

Read More

ಕುಶಾಲನಗರ : ಕುಶಾಲನಗರದ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಸ್ಮರಣೆ’ ಕಾರ್ಯಕ್ರಮವನ್ನು ದಿನಾಂಕ 28 ಜನವರಿ 2025ರಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಕಣಿವೆ ಭಾರಧ್ವಜ್ “ಮೈಸೂರು ಮಲ್ಲಿಗೆ ಹೂವಿನ ಪರಿಮಳದಷ್ಟೇ ಸೊಗಸಾಗಿದ್ದವು ಕೆ.ಎಸ್. ನರಸಿಂಹಸ್ವಾಮಿ ಬರೆದ ದಾಂಪತ್ಯ ಗೀತೆಗಳು. ಕೆ.ಎಸ್. ನರಸಿಂಹಸ್ವಾಮಿ ಬರೆದಂತಹ ಗೀತೆಗಳು ಇಂದಿಗೂ ಹಾಗೂ ಎಂದೆಂದಿಗೂ ಕೇಳುಗರ ಮನವನ್ನು ತಣಿಸುತ್ತವೆ. ತಮ್ಮ ಪತ್ನಿಯ ಕುರಿತ ಬರೆದಂತಹ ಕವನಗಳಲ್ಲಿ ಸಾರ್ಥಕ ದಾಂಪತ್ಯ ಜೀವನದ ಸೊಗಸು ಅಡಗಿದೆ. ಬದುಕಿನಲ್ಲಿ ಬಡತನವಿದ್ದರೂ ಕೂಡ ಯಾವುದನ್ನೂ ಲೆಕ್ಕಿಸದೇ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮೇರುಕವಿಯಾಗಿ ನಮ್ಮೊಡನೆ ಇದ್ದಾರೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಧಾನ ನುಡಿಗಳನ್ನಾಡಿದ ಕುಶಾಲನಗರದ ನಿವೃತ್ತ ಶಿಕ್ಷಕ ಉ.ರಾ. ನಾಗೇಶ್, “ಕೆ.ಎಸ್. ನರಸಿಂಹಸ್ವಾಮಿ ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಕವಿ. ಬದುಕಿನಲ್ಲಿ ಬಡತನವಿದ್ದರೂ ಕೂಡ ತಮ್ಮತನ ಬಿಡಲಾಗದ ಕೆ.ಎಸ್.ನ. ತಮ್ಮ ಕಲ್ಪನಾ ಲೋಕದಲ್ಲಿ…

Read More

ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಇದರ ಉದ್ಘಾಟನಾ ಸಮಾರಂಭವನ್ನು ದಿನಾಂಕ 02 ಫೆಬ್ರವರಿ 2025ರಂದು ಅಪರಾಹ್ನ 2-30 ಗಂಟೆಗೆ ನುಳ್ಳಿಪ್ಪಾಡಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದ ‘ದಿ. ಬಿ. ಕೃಷ್ಣ ಪೈ ಬದಿಯಡ್ಕ ವೇದಿಕೆ’ಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಘಟಕದ ಪದಗ್ರಹಣ ಮತ್ತು ಕಾಸರಗೋಡು ಜಿಲ್ಲಾ ಘಟಕದ ಪ್ರಥಮ ಕವಿಗೋಷ್ಠಿ ನಡೆಯಲಿದೆ. ಹಿರಿಯ ಕವಿ ಸಾಹಿತಿಗಳಾದ ಶ್ರೀ ವಿ. ಬಿ. ಕುಳಮರ್ವ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಕವಿ ಸಾಹಿತಿ ಡಾ. ರಮಾನಂದ ಬನಾರಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಕಾಸರಗೋಡು ಜಿಲ್ಲಾ ಘಟಕದ ಪ್ರಥಮ ಕವಿಗೋಷ್ಠಿಯು ಕವಿ, ಸಾಹಿತಿಗಳಾದ ಶ್ರೀ ವಿರಾಜ್ ಅಡೂರು ಇವರ ಅಧ್ಯಕ್ಷತೆ ನಡೆಯಲಿದ್ದು, ಕೆ. ನರಸಿಂಹ ಭಟ್ ಏತಡ್ಕ, ಪ್ರಭಾವತಿ ಕೆದಿಲಾಯ ಪುಂಡೂರು, ಶಾರದಾ ಮೊಳೆಯಾರ್ ಎಡನೀರು, ಸುಶೀಲಾ ಪದ್ಯಾಣ, ಪ್ರಮೀಳಾ ಚುಳ್ಳಿಕ್ಕಾನ, ನಿರ್ಮಲಾ ಶೇಷಪ್ಪ ಖಂಡಿಗೆ, ಶಶಿಕಲಾ ಟೀಚರ್…

Read More

ಕರಾವಳಿ ಕರ್ನಾಟಕದ ಮನೋಹರವಾದ ಕಲಾಪ್ರಕಾರ ಒಂದನ್ನು ನೋರವಾಗಿ ನೋಡಿ ಆಸ್ವಾದಿಸುವ ಸದವಕಾಶವು ಕಳೆದ 26 ಜನವರಿ 2025ರ ಭಾನುವಾರದಂದು ಒದಗಿ ಬಂದಿತು. ಮೈಸೂರು ಅಸೋಸಿಯೋಷನ್, ಮಾತಂಗ ಮತು ಕನ್ನಡ ವಿಭಾಗ, ಮಂಬಯಿ ವಿಶ್ವವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರು ಅಸೋಸಿಯೋಷನ್ ‘ಬಂಗಾರ ಹಬ್ಬ 2025’ರ ಅಂಗವಾಗಿ ನಡೆದ ‘ಕೃಷ್ಣ ಸಂಧಾನ’ವೆಂಬ ತಾಳಮದದ್ದಳೆಯ ಪ್ರಸಂಗವದು. ಅರ್ಥದಾರಿಗಳಾಗಿ ಕೃಷ್ಣನ ಭೂಮಿಕೆಯನ್ನು ಡಾ. ಎಂ. ಪ್ರಭಾಕರ್ ಜೋಶಿಯವರು ಮತ್ತು ಕೌರವನ ಭೂಮಿಕೆಯನ್ನು ಶ್ರೀ ಪ್ರಕಾಶ್ ಪಣಿಯೂರು ನಿರ್ವಸಿದರು. ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರ ಸಿರಿಕಂಠದಲ್ಲಿ ಭಾಗವತಿಕೆ ನೆರವೇರಿತು. ಉತ್ತರ ಕರ್ನಾಟಕದ ಕಲಬುರ್ಗಿಯಲ್ಲಿ ಹುಟ್ಟಿ ಬೆಳೆದ ನಾನು ಕರಾವಳಿ ಕರ್ನಾಟಕದ ಈ ಕಲಾ ಪ್ರಭೇಧಗಳ ಹೆಸರುಗಳನ್ನು ಕೇಳಿ ತಿಳಿದಿದ್ದೇನೇ ಹೊರತು ಪ್ರತ್ಯಕ್ಷವಾಗಿ ನೋಡಿ ಅವುಗಳ ಸಬಗನ್ನು ಆಸ್ವಾದಿಸಿರಲಿಲ್ಲ. ಭಾನುವಾರದ ಕಾರ್ಯಕ್ರಮವು ನನಗೆ ಹೊಸ ಜಗತ್ತೊಂದನ್ನು ಪರಿಚಯಿಸಿತು. ಯಾವ ಹೆಚ್ಚಿನ ರಂಗ ಸಜ್ಜಿಕೆಯಿಲ್ಲ, ವೇಷಭೂಷಣಗಳ ಅಬ್ಬರವಿಲ್ಲ, ಇಬ್ಬರೇ ಪಾತ್ರಧಾರಿಗಳ ನಡುವೆ ನಡೆದ ಈ ‘ಕೃಷ್ಣ ಸಂಧಾನ’ದ ಪ್ರಕರಣವು ಪ್ರೇಕ್ಷಕರನ್ನು ನಿಜಕ್ಕೂ ದ್ವಾಪರಯುಗದ…

Read More

ಮಂಗಳೂರು : ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ ಮತ್ತು ಕನ್ನಡ ವೈದ್ಯ ಬರಹ ಗಾರರ ಸಮಿತಿ ವತಿಯಿಂದ ಕಥಾ ಕಮ್ಮಟ ಕಾರ್ಯಾಗಾರ ಆನ್ ಲೈನ್ ಕಾರ್ಯಕ್ರಮವು ದಿನಾಂಕ 09 ಫೆಬ್ರವರಿ 2025ರಂದು ಮುಂಜಾನೆ 11-00 ಗಂಟೆಗೆ ನಡೆಯಲಿದೆ. ಬೆಳಗಾವಿ ಮ.ನ.ರ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನಿರ್ಮಲಾ ಬಟ್ಟಲ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಕಥಾವಸ್ತುವಿನ ಆಯ್ಕೆ, ಕಥೆಯಲ್ಲಿ ಬಳಸುವ ಭಾಷಾ ಶೈಲಿ, ಕಥೆಯ ಆರಂಭ ಮತ್ತು ಅಂತ್ಯ ಮತ್ತು ಕಥೆ ಬರೆಯಲು ಪೂರ್ವ ತಯಾರಿ ಇವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ತರಬೇತಿ ಪೂರ್ವ ಚಟುವಟಿಕೆಗಳನ್ನು ದಿನಾಂಕ 01ರಿಂದ 08 ಫೆಬ್ರವರಿ 2025ರವರೆಗೆ ಹಮ್ಮಿಕೊಳ್ಳಲಾಗಿದೆ. ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31 ಜನವರಿ 2025 ಆಗಿರುತ್ತದೆ.

Read More

ಕೋಟ : ಬೆಂಗಳೂರಿನ ಪ್ರಸಿದ್ದ ಯಕ್ಷಗಾನ ತಂಡವಾದ ಯಕ್ಷದೇಗುಲ ತಂಡದವರ ಪರಿಕಲ್ಪನೆಯಲ್ಲಿ ‘ಯಕ್ಷಗಾನ ಪ್ರಾತ್ಯಕ್ಷಿಕೆ’ ದಿನಾಂಕ 14 ಫೆಬ್ರವರಿ 2025ರಂದು ಸಂಜೆ 6-00 ಗಂಟೆಗೆ ದೊಂಬ್ಲೂರು ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರಿನಲ್ಲಿ ನಡೆಯಲಿದೆ. ವಾಚಿಕ, ಅಂಗಿಕ, ಸಾತ್ವಿಕ, ಆಹಾರ್ಯಗಳನ್ನೊಳಗೊಂಡ ಪರಿಪೂರ್ಣ ಕಲೆಯೆನಿಸಿರುವ ಯಕ್ಷಗಾನದ ಮೂಲ ಸತ್ತ್ವವನ್ನು ಹೊಸ ತಲೆಮಾರಿನವರಿಗೆ ತಿಳಿಸುವ ಸಲುವಾಗಿ ನಮ್ಮ ಸಂಸ್ಥೆಯು ‘ಯಕ್ಷಾಂತರಂಗ’ವನ್ನು ಪರಿಚಯಿಸುವ ವಿನೂತನ ಪ್ರಯತ್ನಕ್ಕೆ ನಾಂದಿ ಹಾಡಿದೆ. ಹೆಜ್ಜೆಗಾರಿಕೆ, ಪದಾಭಿನಯ, ಬಣ್ಣದ ವೇಷದ ಮುಖ ವರ್ಣಿಕೆ, ಅಟ್ಟೆ ಕ್ಯಾದಿಗೆ ಮುಂದಲೆ ಕಟ್ಟುವ ಕ್ರಮ, ವಸ್ತ್ರ ವಿನ್ಯಾಸಗಳ ಕುರಿತು ಮಾಹಿತಿ ಮತ್ತು ಪೌರಾಣಿಕ ಪ್ರಸಂಗಗಳ ಕೆಲವು ಸನ್ನಿವೇಷಗಳ ಪ್ರಸ್ತುತಿಯನ್ನು ಪ್ರಾತ್ಯಕ್ಷಿಕೆ ಒಳಗೊಂಡಿದೆ. ಈಗಾಗಲೇ ಉಡುಪಿ ಜಿಲ್ಲೆ, ಮೈಸೂರಿನಲ್ಲಿ ಹಲವಾರು ಪ್ರಾತ್ಯಕ್ಷಿಕೆ ನೀಡಿರುತ್ತೇವೆ.

Read More

ಪಾಂಬೂರು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು ‘ರಂಗೋತ್ಸವ – 2025’ ನಾಟಕ ಪ್ರದರ್ಶನವನ್ನು ದಿನಾಂಕ 10 ಫೆಬ್ರವರಿ 2025ರಿಂದ 16 ಫೆಬ್ರವರಿ 2025ರವರೆಗೆ ಪಾಂಬೂರು ರಂಗಪರಿಚಯದಲ್ಲಿ ಹಮ್ಮಿಕೊಂಡಿದೆ. ದಿನಾಂಕ 10 ಫೆಬ್ರವರಿ 2025ರಂದು ಸಂಜೆ ಗಂಟೆ 6-15ಕ್ಕೆ ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ರಂಗಾಯಣ ಪ್ರಸ್ತುತ ಪಡಿಸುವ ಕನ್ನಡ ನಾಟಕ ‘ಮೈ ಫ್ಯಾಮಿಲಿ’, ದಿನಾಂಕ 11 ಫೆಬ್ರವರಿ 2025ರಂದು ಸಂಜೆ ಗಂಟೆ 6-30ಕ್ಕೆ ವಿದ್ದು ಉಚ್ಚಿಲ್ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಉಡುಪಿಯ ಸುಮನಸಾ ಕೊಡವೂರು ತಂಡದವರು ಪ್ರಸ್ತುತ ಪಡಿಸುವ ತುಳು ನಾಟಕ ‘ಈದಿ’, ದಿನಾಂಕ 12 ಫೆಬ್ರವರಿ 2025ರಂದು ಸಂಜೆ ಗಂಟೆ 6-30ಕ್ಕೆ ಸ್ವೀಡಲ್ ಡಿ’ಸೋಜಾ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಪಯ್ಣ್’ ಕೊಂಕಣಿ ನಾಟಕವನ್ನು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರ ಮತ್ತು ಅಸ್ತಿತ್ವ (ರಿ.) ಇವರು ಪ್ರದರ್ಶನ…

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಪ್ರಸ್ತುತ ಪಡಿಸುವ ಆನ್ಲೈನ್ ಸಂಗೀತ ಕಾರ್ಯಾಗಾರವು ದಿನಾಂಕ 08, 09, 15 ಮತ್ತು 16 ಫೆಬ್ರುವರಿ 2025ರಂದು ಬೆಳಿಗ್ಗೆ 7-00 ಗಂಟೆಗೆ ವಿದುಷಿ ಶುಭಾ ಸಂತೋಷ್ ಇವರಿಂದ ನಡೆಯಲಿದೆ. ವೀಣೆಯಲ್ಲಿ ಜನಪ್ರಿಯ ದಾಸರ ಪದಗಳ ಜೊತೆಗೆ ವೀಣಾ ವಾದನ, ಅಭ್ಯಾಸ ತಂತ್ರ ಮತ್ತು ಮನೋಧರ್ಮಗಳನ್ನು ಕಳಿಸಿಕೊಡಲಾಗುವುದು. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ +91 7411916098 ವಿಭು ರಾವ್ ಇವರನ್ನು ಸಂಪರ್ಕಿಸಬಹುದು.

Read More