Author: roovari

ಕಾರ್ಕಳ : ಕನ್ನಡ ಸಂಘ ಕಾಂತಾವರ ಇದರ ಐವತ್ತರ ಸಂಭ್ರಮ ಮೊದಲ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 01 ನವೆಂಬರ್ 2025ರಂದು ಬೆಳಿಗ್ಗೆ 9-30 ಗಂಟೆಗೆ ಕಾಂತಾವರದ ರಥಬೀದಿಯಲ್ಲಿರುವ ‘ಕನ್ನಡ ಭವನ’ದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ವಹಿಸಲಿದ್ದು, ಸುವರ್ಣ ಸಂಭ್ರಮ ಸಮಿತಿಯ ಗೌರವ ಕಾರ್ಯದರ್ಶಿಯಾದ ಕಮಲಾಕ್ಷ ಕಾಮತ್ ಇವರು ಉದ್ಘಾಟನೆ ಮಾಡಲಿದ್ದಾರೆ. ಉಡುಪಿಯ ಸಂಸ್ಕೃತಿ ವಿಶ್ವಪ್ರತಿಷ್ಠಾನದ ಅಧ್ಯಕ್ಷರಾದ ಯು. ವಿಶ್ವನಾಥ ಶೆಣೈ ಇವರು ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ ಹೊತ್ತಗೆಗಳನ್ನು ಹಾಗೂ ಸುವರ್ಣ ಸಂಭ್ರಮ ಸಮಿತಿಯ ಗೌರವ ಕಾರ್ಯಾಧ್ಯಕ್ಷರಾದ ಕೆ. ಶ್ರೀಪತಿ ಭಟ್ ಇವರು ‘ಆನೆ ಕಾಲಿಗೆ ಅಂಕುಶ – ಸಂಯೋಜಿತ ಚಿಕಿತ್ಸೆಯ ಹರಿಕಾರ ಡಾ. ನರಹರಿ ಮತ್ತು ಐಎಡಿ’ ಬಿಡುಗಡಗೊಳಿಸಲಿದ್ದಾರೆ. ಅಪರಾಹ್ನ 3-00 ಗಂಟೆಗೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Read More

ಮಂಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿ ಮಿಲಾನ್‌ನ ಇಟಲಿಯ ಇನ್ಸಿಟ್ಯೂಟ್ ಲಿಯೋನಿ ಶಾಲೆಯ ವಿದ್ಯಾರ್ಥಿಗಳ ನಿಯೋಗ ದಿನಾಂಕ 26 ಅಕ್ಟೋಬರ್ 2025ರಂದು ಭೇಟಿ ನೀಡಿತು. ಶಾಲೆಯ ಪ್ರಿನ್ಸಿಪಾಲ್ ಫಾ. ರೋಹನ್ ಡಿ. ಅಲ್ವೇಡಾ ಎಸ್.ಜೆ. ನಿಯೋಗದ ಸದಸ್ಯರನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಭರತನಾಟ್ಯ ಕಲಾವಿದೆ ಅಕ್ಷತಾ ಬೈಕಾಡಿ ಭರತನಾಟ್ಯ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು. ಈ ತಂಡದಲ್ಲಿ ಶಿಕ್ಷಕ ಸಂಯೋಜಕಿ ಬೆರ್ನಡೆಟ್ ವಾಕ್ಷೆ ಮತ್ತು ವಿದ್ಯಾರ್ಥಿಗಳು ಜತೆಗಿದ್ದರು. ಶಾಲೆಯಲ್ಲಿ ಒಂದು ವಾರದ ಸಾಂಸ್ಕೃತಿಕ ವಿನಿಮಯಕ್ಕಾಗಿ ನಾನಾ ಚಟುವಟಿಕೆ ರೂಪಿಸಿವೆ. ವಿನಿಮಯ ಕಾರ್ಯಕ್ರಮ ಈಗ ಮೂರನೇ ವರ್ಷಕ್ಕೂ ಮುಂದುವರಿಯುತ್ತಿದ್ದು, ಜಾಗತಿಕ ಅಧ್ಯಯನ, ಸಂಸ್ಕೃತಿಯ ಅರಿವು ಮತ್ತು ಸ್ನೇಹವನ್ನು ಬೆಳೆಸುವಲ್ಲಿ ಸಹಾಯಕವಾಗುತ್ತಿದೆ.

Read More

ಮಂಗಳೂರು : ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಈ ಬಾರಿ ನಡೆಸುವ 13ನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – ತ್ರಯೋದಶ ಸರಣಿ’ಯು ದಿನಾಂಕ 23ರಿಂದ 29ರ ನವೆಂಬರ್ 2025ರಂದು ಜರಗಲಿದೆ. ನಿರಂತರ ಏಳು ದಿನಗಳ ಕಾರ್ಯಕ್ರಮವನ್ನು ನಗರದ ವಿಶ್ವವಿದ್ಯಾಲಯ ಕಾಲೇಜು ರವೀಂದ್ರ ಕಲಾ ಭವನದಲ್ಲಿ ಏರ್ಪಡಿಸಲಾಗಿದೆ. ಸಂಘಟನಾ ಪರ್ವ ಎಂಬ ಹೆಸರಿನ ಸಪ್ತಾಹದಲ್ಲಿ ಜಿಲ್ಲೆಯ ವಿವಿಧ ತಂಡಗಳಿಂದ ತಾಳಮದ್ದಳೆ ಕ್ಷೇತ್ರಕ್ಕೆ ಅಪರೂಪವೆನಿಸಿದ ಕೆಲವು ಯಕ್ಷಗಾನ ಪ್ರಸಂಗಗಳು ಪ್ರಸ್ತುತಿಗೊಳ್ಳಲಿವೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ದಿನಾಂಕ 29 ಅಕ್ಟೋಬರ್ 2025ರಂದು ಕದ್ರಿ ದೇವಳದ ವಠಾರದಲ್ಲಿ ಜರಗಿದ ಯಕ್ಷಾಂಗಣದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಿನಾಂಕ 23 ನವಂಬರ್ 2025ರಂದು ಆದಿತ್ಯವಾರ ಅಪರಾಹ್ನ…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಶೇಷ ಕಾರ್ಯಪಡೆ ಮಂಗಳೂರು ವತಿಯಿಂದ ವಿಶೇಷ ಕಾರ್ಯಪಡೆ ಸಿಬ್ಬಂದಿಗೆ ಆಯೋಜಿಸಲಾಗಿರುವ 20 ದಿನಗಳ ತುಳು ಕಲಿಕಾ ಶಿಬಿರ ಮತ್ತು ಸಂಸ್ಕೃತಿ ಪರಿಚಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ದಿನಾಂಕ 28 ಅಕ್ಟೋಬರ್ 2025ರಂದು ಪೊಲೀಸ್‌ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರ ಪೊಲೀಸ್‌ ಆಯುಕ್ತ ಮತ್ತು ವಿಶೇಷ ಕಾರ್ಯಪಡೆಯ ಡಿ. ಐ. ಜಿ. ಪಿ. ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ ಕರ್ತವ್ಯ ನಿರ್ವಹಿಸುವ ಸ್ಥಳದ ಸ್ಥಳೀಯ ಭಾಷೆ ಕಲಿತಾಗ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಇದು ಕರ್ತವ್ಯ ನಿರ್ವಹಣೆಗೂ ಸಾಕಷ್ಟು ನೆರವಾಗಲಿದೆ. ದ.ಕ ಮತ್ತು ಉಡುಪಿ ಭಾಗದಲ್ಲಿ ಸ್ಥಳೀಯ ಭಾಷೆಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಹಾಗಾಗಿ ಇಲ್ಲಿಗೆ ಕರ್ತವ್ಯಕ್ಕೆ ಬರುವ ಪೊಲೀಸರಿಗೆ ಕೆಲವೊಂದು ಸಮಸ್ಯೆಯಾಗುತ್ತದೆ. ನಾವು ನಮ್ಮವರು ಎನ್ನುವ ಭಾವನೆ ಬರುವುದಿಲ್ಲ. ಸ್ಥಳೀಯರು ಕೂಡಾ ನಮ್ಮವರು ಎಂದು ಒಪ್ಪಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಭಾಷೆಯನ್ನು ಕಲಿಯುವುದರಿಂದ ಸಂಸ್ಕೃತಿಯ ಪರಿಚಯವೂ ಆಗಿ, ನಾವೂ…

Read More

ಪೆರಿಯ : ಬೇಕಲ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ಐದನೇಯ ದೀಪಾವಳಿ ಸಂಗೀತೋತ್ಸವವು ಖ್ಯಾತ ಕೊಳಲು ವಾದಕಿ ಶಾಂತಲಾ ಸುಬ್ರಮಣ್ಯಂ ಇವರಿಂದ ದೀಪಾಲಂಕೃತದಿಂದ ಪ್ರಕಾಶಿತವಾದ ನಂದಿ ಮಂಟಪದಲ್ಲಿ ದಿನಾಂಕ 29 ಅಕ್ಟೋಬರ್ 2025ರಂದು ಮಂದಾರಿ ರಾಗದ ವರ್ಣದೊಂದಿಗೆ ಸಂಗೀತ ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು. ಸುಧಾ ಧನ್ಯಾಸಿ, ಆರಭಿ, ನವರಸ ಕಾನದ, ಚಂದ್ರ ಜ್ಯೋತಿ, ಕಲ್ಯಾಣ ವಸಂತ ರಾಗಗಳನ್ನು ಹಾಡಲಾಯಿತು. ಸಂಗೀತೋತ್ಸವದ ಹತ್ತನೇ ದಿನದಂದು, ಕರ್ನಾಟಕ ಸಹೋದರರು ಪಶುಪತಿ ರಾಗಕ್ಕೆ ಹೊಂದಿಸಲಾದ ಥಾನಂ ಪಲ್ಲವಿ ರಾಗವನ್ನು ಪ್ರದರ್ಶಿಸಿದರು, ಇದು ಬಹಳಷ್ಟು ಗಮನ ಸೆಳೆಯಿತು. ಶ್ಯಾಮಿಲಿಯವರ ಸಂಗೀತ ಕಛೇರಿಯೊಂದಿಗೆ ಆರಂಭವಾಯಿತು. ನಂತರ ಚಿತ್ರವೀಣಾ ಗಣೇಶ್ ಇವರಿಂದ ಚಿತ್ರವೀಣಾ ಕಛೇರಿ, ಎಂ.ಎ. ಕೃಷ್ಣಸ್ವಾಮಿ, ಅನಂತ ಬಾಲಸುಬ್ರಮಣ್ಯಂ, ಅನಂತ ಲಕ್ಷ್ಮಿಯವರಿಂದ ಪಿಟೀಲು ತ್ರಿಮೂರ್ತಿಗಳು, ಅಂಜಲಿ ಶ್ರೀರಾಮ್, ಧಾತ್ರಿಕುಮಾರ್, ವಿರುವಿಣಿ ಸಂತೋಷ್ ಮತ್ತು ಜಯಕೃಷ್ಣ ನುಣ್ಣಿ ಇವರಿಂದ ಸಂಗೀತ ಕಛೇರಿ, ಶ್ರುತಿ ಸಾಗರ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ದೀಪಾವಳಿ ಸಂಗೀತೋತ್ಸವದ ಹನ್ನೊಂದನೇ ದಿನ ಗೋಶಾಲಾ ನಂದಿ ಮಂಟಪದಲ್ಲಿ ವಿದ್ಯಾ ಕಲ್ಯಾಣರಾಮನ್…

Read More

ಅಂದು ರವೀಂದ್ರ ಕಲಾಕ್ಷೇತ್ರದ ವಿಶಾಲರಂಗದ ಮೇಲಣ ಕಲಾತ್ಮಕ ರಂಗಸಜ್ಜಿಕೆಯ ದೈವೀಕ ವಾತಾವರಣದಲ್ಲಿ, ಗಂಧರ್ವಲೋಕದ ಕನ್ನಿಕೆಯಂತೆ ಅಪೂರ್ವ ನರ್ತನಗೈಯ್ಯುತ್ತಿದ್ದ ನೃತ್ಯಕಲಾವಿದೆ ವೃದ್ಧಿ ಕಲಾಭಿಮಾನಿಗಳ ಹೃದಯದಲ್ಲಿ ಒಂದು ವಿಶೇಷ ಅನುಭೂತಿಯನ್ನು ಉಂಟುಮಾಡಿದಳು. ನೃತ್ಯ ಕಲಾವಿದೆಯ ಜೀವನದಲ್ಲಿ ‘ರಂಗಪ್ರವೇಶ’ ಎನ್ನುವುದೊಂದು ಚಿರಸ್ಮರಣೀಯವಾದ ಸುವರ್ಣದಿನ. ಭರತನಾಟ್ಯ ಗುರು ಡಾ. ಸತ್ಯವತಿ ರಾಮನ್ ಇವರಿಂದ ಉತ್ತಮ ನಾಟ್ಯಶಿಕ್ಷಣ ಪಡೆದ ಅವರ ನೆಚ್ಚಿನ ಶಿಷ್ಯೆಯಾಗಿ, ಅಂದು ವೃದ್ಧಿ ತುಂಬಿದ ಸಭಾಸದನದ ಕಲಾಭಿಮಾನಿಗಳ ಸಮ್ಮುಖ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿದ್ದಳು. ಆ ಪ್ರಶಸ್ತ ದಿನ- ಪಳಗಿದ ನರ್ತಕಿಯಂತೆ ಲೀಲಾಜಾಲವಾಗಿ ನರ್ತಿಸುತ್ತಿದ್ದ ‘ವೃದ್ಧಿ ಕಾಮತ’ಳ ಮನಮೋಹಕ ಭಾವ-ಭಂಗಿಗಳ ನಾಟ್ಯ, ನೆರೆದ ಕಲಾರಸಿಕರನ್ನು ವಿಸ್ಮಯಗೊಳಿಸಿತ್ತು. ಕಲಾವಿದೆಯ ಆತ್ಮವಿಶ್ವಾಸದ ಅಂಗಶುದ್ಧ ಭಾವಪೂರ್ಣ ನರ್ತನ, ಆದಿಯಿಂದ ಅಂತ್ಯದವರೆಗೂ, ಒಂದೇ ಸಮನೆ ಅವಳು ಕಾಯ್ದುಕೊಂಡ ಚೈತನ್ಯಪೂರ್ಣತೆಯಿಂದ ಮೆರಗು ಪಡೆಯಿತು. ‘ಮಾರ್ಗಂ’ ಸಂಪ್ರದಾಯದಂತೆ ಕಲಾವಿದೆ ಬಹು ಅಚ್ಚುಕಟ್ಟಾಗಿ, ನುರಿತ ಹೆಜ್ಜೆಗಳಲ್ಲಿ ನಿರಾಯಾಸವಾಗಿ, ಸೊಗಸಾದ ಅಭಿನಯ ನೀಡಿ ಮನಕಾನಂದ ನೀಡಿದಳು. ಪ್ರಪ್ರಥಮವಾಗಿ ಕಲಾವಿದೆ, ಅಷ್ಟದಿಕ್ಪಾಲಕರುಗಳಿಗೆ, ಗುರು- ಹಿರಿಯರಿಗೆ ಮನಸಾ ವಂದಿಸಿ, ನೃತ್ತ ನಮನಗಳಲ್ಲಿ…

Read More

ಮಂಗಳೂರು : ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಇಲ್ಲಿ ನಾಟ್ಯಾಚಾರ್ಯ ಮೋಹನ ಕುಮಾರ್ ನವತ್ಯುತ್ಸವ ಸರಣಿ 22ನೇ ನೃತ್ಯ ಮಾಲಿಕೆಯು ದಿನಾಂಕ 29 ಅಕ್ಟೋಬರ್ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಾಟ್ಯನಿಲಯಂ ಮಂಜೇಶ್ವರ ಇದರ ನೃತ್ಯ ಗುರು ವಿದ್ವಾನ್ ಬಾಲಕೃಷ್ಣ ಮಂಜೇಶ್ವರ “ಭರತನಾಟ್ಯವು ಕೇವಲ ಮನರಂಜನೆಗಾಗಿ ಮಾತ್ರ ಸೀಮಿತವಲ್ಲ. ಮನುಷ್ಯನ ಮನಸ್ಸಿನ, ಆತ್ಮಶುದ್ಧಿಗಾಗಿ ದೇವತಾ ಸ್ವರೂಪಿ ಕಲೆಯಾಗಿದ್ದು ಸಮಾಜದಲ್ಲಿ ಗೌರವಯುತವಾದ ಮನುಷ್ಯನಿಗೆ ಗೌರವ ಸಿಕ್ಕುವ ಕಲೆ ಭರತನಾಟ್ಯ. ಗುರು ಶಿಷ್ಯ ಪರಂಪರೆ ಇಂದು ಕಾಣಸಿಗುವುದು ಇಲ್ಲೆ. ಗುರುವಿನ ಮಾರ್ಗದರ್ಶನದಲ್ಲಿ ನೃತ್ಯ ಅಭ್ಯಾಸ ಮಾಡಿದಾಗ ಮಾತ್ರ ಅದೇ ಶಾಶ್ವತ” ಎಂದು ನುಡಿದರು. ಗುರುಗಳಾದ ಉಳ್ಳಾಲ್ ಮೋಹನ ಕುಮಾರ್ ಶುಭ ಹಾರೈಸಿದರು. ವಿದುಷಿ ರಾಜಶ್ರೀ ಉಳ್ಳಾಲ್ ಧನ್ಯವಾದ ನೀಡಿ, ಗುರು ಶ್ರೀಧರ ಹೊಳ್ಳ ನಿರೂಪಿಸಿದರು. ಮಾಸ್ಟರ್ ಪ್ರದ್ಯುಮ್ನ ಇವರು ಮನೋಜ್ಞವಾದ ನೃತ್ಯ ಪ್ರದರ್ಶನ ನೀಡಿದರು. ವಿದ್ವಾನ್ ಚಂದ್ರಶೇಖರ ನಾವಡ, ವಿದುಷಿ ಪ್ರತಿಮಾ ಶ್ರೀಧರ್, ಡಾ. ಅಶ್ವಿನ್, ಶಾಲಿನಿ, ಶಾಲಿನಿ ಬಾಲಕೃಷ್ಣ, ವಿದುಷಿ…

Read More

ಮುಂಬೈ : ಅರುಣೋದಯ ಕಲಾ ನಿಕೇತನ್ ಪ್ರಸ್ತುತ ಪಡಿಸುವ ‘ಸುವರ್ಣ ಮಹೋತ್ಸವಂ’ ಸಂಗೀತ ಮತ್ತು ನೃತ್ಯೋತ್ಸವವನ್ನು ದಿನಾಂಕ 02 ನವೆಂಬರ್ 2025ರಂದು ಸಂಜೆ 3-00 ಗಂಟೆಗೆ ಮಹಾರಾಷ್ಟ್ರ ಮುಂಬೈಯ ವೀರ ಸಾವರ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗುರು ಎಂ.ಎನ್. ಸುವರ್ಣ ಇವರ ಆಶೀರ್ವಾದದೊಂದಿಗೆ ನಡೆಯುವ ಸುವರ್ಣ ನೃತ್ಯೋತ್ಸವದಲ್ಲಿ ಮುಂಬೈಯ ತ್ಯಾಗೇಶ ಅಕಾಡೆಮಿಯ ಗುರು ದಕ್ಷಿಣಮೂರ್ತಿ, ಸ್ವರಾತ್ಮಿಕ ಸಂಗೀತ ಶಾಲೆಯ ಗುರು ವಿಷ್ಣುದಾಸ್ ಎನ್. ಮತ್ತು ಶ್ರೀ ಷಣ್ಮುಖಾನಂದ ಸಂಗೀತ ವಿದ್ಯಾಲಯದ ಗುರು ರೂಪಾ ಪದ್ಮನಾಭನ್ ಇವರುಗಳು ಸಂಗೀತ ಉತ್ಸವವನ್ನು ನಡೆಸಿಕೊಡಲಿದ್ದು ಹಾಗೂ ನೃತ್ಯ ಉತ್ಸವದಲ್ಲಿ ಅರುಣೋದಯ ಕಲಾ ನಿಕೇತನ್ ಇದರ ಗುರು ಮೀನಾಕ್ಷಿ ಶ್ರೀಯಾನ್ ಇವರ ಶಿಷ್ಯಂದಿರಿಂದ ಭರತನಾಟ್ಯ, ಗುರು ನಿಧಿ ಪ್ರಭು ಇವರ ನಾದ ನಿಧಿ ತಂಡದವರಿಂದ ಕಥಕ್, ಮುಂಬೈಯ ಸರ್ಫೋಜಿರಾಜೇಶ್ ಭರತ ಕಾಲೇಜ್ ಆಫ್ ಫೈನ್ ಆರ್ಟ್ಸ್ ಆ್ಯಂಡ್ ಕಲ್ಚರ್ ಇದರ ಗುರು ಸಂಧ್ಯಾ ಪುರೇಚಾ ಇವರ ಶಿಷ್ಯಂದಿರಿಂದ ಭರತನಾಟ್ಯ, ವೈಷ್ಣೋವಿ ಕಲಾ ಕ್ಷೇತ್ರದ ಗುರು ಆಶಾ ನಂಬಿಯಾರ್ ಇವರಿಂದ…

Read More

ಗದಗ : ಡಾ. ವ್ಹಿ.ಬಿ. ಹಿರೇಮಠರ ಮಹಾವೇದಿಕೆ, ಡಾ. ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ (ರಿ.) ಗದಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಹಾಗೂ ಅಶ್ವಿನಿ ಪ್ರಕಾಶನ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ‘ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಹಾಗೂ ಕೃತಿಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 02 ನವೆಂಬರ್ 2025ರಂದು ಮುಂಜಾನೆ 10-00 ಗಂಟೆಗೆ ಗದಗ ಜಿಲ್ಲಾ ಕ್ರೀಡಾಂಗಣದ ಹತ್ತಿರ ಕೆ.ಎಸ್.ಎಸ್. ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ. 70ನೇ ಕನ್ನಡ ರಾಜ್ಯೋತ್ಸವ, ಅಶ್ವಿನಿ ಪ್ರಕಾಶನದ 4ನೇ ಸಾಹಿತ್ಯ ಸಮ್ಮೇಳನ ಹಾಗೂ ಕೃತಿಗಳ ಬಿಡುಗಡೆ, ಡಾ. ವ್ಹಿ.ಬಿ. ಹಿರೇಮಠರ ಸದ್ಭಾವನಾ ಪ್ರಶಸ್ತಿ, ಅಧ್ಯಾತ್ಮಿಕ ಪೋಷಕ ರತ್ನ ಪ್ರಶಸ್ತಿ, ವಿವೇಕ ಚಿಂತಾಮಣಿ ಸಾಹಿತ್ಯ ರತ್ನ ಪ್ರಶಸ್ತಿ, ಶ್ರೀ ಗುರು ಪಂಚಾಕ್ಷರಿ ಗವಾಯಿಗಳವರ ಸಂಗೀತ ರತ್ನ ಪ್ರಶಸ್ತಿ, ಶ್ರೀ ಗುರು ಹಾನಗಲ್‌ ಗುರುಕುಮಾರೇಶ ಪ್ರಶಸ್ತಿ, ರಾಷ್ಟ್ರ ನಿರ್ಮಾತೃ ಶಿಕ್ಷಕ ರತ್ನ ಪ್ರಶಸ್ತಿ, ಡಾ. ಶ್ರೀ ತೋಂಟದಾರ್ಯ ಸಿದ್ದಲಿಂಗ ಮಹಾಮಹಿಮಾ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರ ಕವಚ ಧೀರ…

Read More

ಕಾಸರಗೋಡು : ಒಂದು ವಿಶಿಷ್ಟ ಕಾಲಘಟ್ಟದ ಸಾಂಸ್ಕೃತಿಕ- ಸಾಹಿತ್ಯಕ ಮತ್ತು ಭಾಷಾ ಸಂಬಂಧಿ ಅಗತ್ಯಗಳನ್ನು ಮನಗಂಡು ದುಡಿಯುವ ಕೆಲವರು ಚರಿತ್ರೆಯ ಭಾಗವಾಗುತ್ತಾರೆ. ಅಂಥವರನ್ನು ಆ ಪರಿಸರ ಮರೆಯುವುದಿಲ್ಲ. 1943ರಲ್ಲಿ ನೀರ್ಚಾಲಿನಲ್ಲಿ ಜನ್ಮವೆತ್ತಿ ಅಂದಿನ ಪ್ರತಿಕೂಲ ದಿನಮಾನದಲ್ಲಿಯೂ ವಿದ್ಯಾಸಂಪನ್ನನಾಗಿ ಕಾಸರಗೋಡಿಗೇ ಮೊದಲನೆಯದಾದ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲನಾಗಿ ಜೊತೆಗೆ ಕವಿ ಸಾಹಿತಿ ವಿಮರ್ಶಕನಾಗಿ ಹೀಗೆ ವಿವಿಧ ರಂಗಗಳಲ್ಲಿ ಮಾದರಿ ವ್ಯಕ್ತಿತ್ವವೆನಿಸಿ ತನ್ನ 52ನೇ ವಯಸ್ಸಿಗೆ ವಿದಾಯ ಹೇಳಿದ ದಿ. ಗಂಗಾಧರ ಭಟ್ ಎಂದಿಗೂ ಸ್ಮರಣಾರ್ಹರು. ಕಾಸರಗೋಡು ರಂಗ ಚಿನ್ನಾರಿ ಸಂಸ್ಥೆ ದಿನಾಂಕ 28 ಅಕ್ಟೋಬರ್ 2025ರಂದು ಆಯೋಜಿಸಿದ ಸಂಸ್ಮರಣ ಕಾರ್ಯಕ್ರಮದಲ್ಲಿ ಸ್ವಾಗತ ಹೇಳಿದ ಚಿನ್ನಾ, ಕಾಸರಗೋಡು ಹಿರಿಯ ವಿಶ್ರಾಂತ ಶಿಕ್ಷಕ, ಸಣ್ಣಕತೆಗಾರ, ಸಾಹಿತಿ ವೈ. ಸತ್ಯನಾರಾಯಣ ಹಾಗೂ ಪಿ.ಎನ್. ಮೂಡಿತ್ತಾಯರು ಕಾಸರಗೋಡು ಕನ್ನಡಿಗರ ಸ್ಮರಣೆಯಲ್ಲಿ ಎಂದಿಗೂ ಅಳಿಯಬಾರದ ಧೀಮಂತನ ಬಗ್ಗೆ ನೆನಪಿಸಿಕೊಂಡರು.  ಇಂಗ್ಲೀಷ್ ಎಂ.ಎ. ಓದಿದ ಗಂಗಾಧರ ಭಟ್ ಕಾಸರಗೋಡು ಕನ್ನಡಿಗರ ಸಮ್ಮೇಳನ ಹಾಗೂ 1978ರ ಅದ್ದೂರಿ ಯುವಜನ ಸಮ್ಮೇಳನಗಳಲ್ಲಿ ಕಾರ್ಯದರ್ಶಿಯಾಗಿ ದುಡಿದವರು. ಉದಯವಾಣಿಯಲ್ಲಿ…

Read More