Author: roovari

ಬೆಂಗಳೂರು : ಕಲಾ ಗಂಗೋತ್ರಿ ಅಭಿನಯಿಸುವ ‘ಮತ್ತೆ ಮುಖ್ಯಮಂತ್ರಿ’ ಎಂಬ ಹೊಸ ರಾಜಕೀಯ ನಾಟಕವು ದಿನಾಂಕ 12 ಸೆಪ್ಟೆಂಬರ್ 2024ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದ ರಂಗ ಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರಧಾನ ಪಾತ್ರದಲ್ಲಿ ಡಾ. ಮುಖ್ಯಮಂತ್ರಿ ಚಂದ್ರು ಅಭಿನಯಿಸಲಿದ್ದು, ಡಾ. ಕೆ.ವೈ. ನಾರಾಯಣ ಸ್ವಾಮಿ ರಚನೆ ಮತ್ತು ಡಾ. ಬಿ.ಎ. ರಾಜಾರಾಂ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9972398931 ಶ್ರೀನಿವಾಸ ಕೈವಾರ ಇವರನ್ನು ಸಂಪರ್ಕಿಸಿರಿ.

Read More

ಮೂಡುಬಿದಿರೆ : ಆಳ್ವಾಸ್ ರಂಗತಂಡಕ್ಕೆ (ರೆಪರ್ಟರಿಗೆ) ರಂಗ ಶಿಕ್ಷಣ ಪದವಿ ಪಡೆದಿರುವ 20ರಿಂದ 35 ವರ್ಷ ವಯೋಮಿತಿಯ ನಟ ನಟಿಯರು ಬೇಕಾಗಿದ್ದಾರೆ. ಅಕ್ಟೋಬರ್ 2024ರಿಂದ ಫೆಬ್ರವರಿ 2025ರವರೆಗೆ (5 ತಿಂಗಳು) ರೆಪರ್ಟರಿ ಅವಧಿಯಾಗಿದ್ದು, ಉತ್ತಮ ಊಟ, ವಸತಿ ಜೊತೆಗೆ ಗರಿಷ್ಠ ತಿಂಗಳ ವೇತನ ನೀಡಲಾಗುವುದು. ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಅಭಿನಯಿಸಿದ ನಾಟಕಗಳ ಫೋಟೋಗಳೊಂದಿಗೆ ಸ್ವ-ವಿವರವನ್ನು ಕೂಡಲೇ ಕಳುಹಿಸುವುದು. ಅರ್ಜಿ ತಲುಪಲು ಕೊನೆಯ ದಿನಾಂಕ 20 ಸೆಪ್ಟೆಂಬರ್ 2024. ಅರ್ಜಿ ಕಳುಹಿಸುವ ವಿಳಾಸ ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ -574227 ಅಥವಾ [email protected] ಮೈಲ್ ಮಾಡಿರಿ. ಹೆಚ್ಚಿನ ಮಾಹಿತಿಗಾಗಿ 9448215946 ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜೀವನ್ ರಾಂ ಸುಳ್ಯ ಇವರನ್ನು ಸಂಪರ್ಕಿಸಬಹುದು.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ದಿನಕರ ದೇಸಾಯಿಯವರ 115ನೆಯ ಹುಟ್ಟು ಹಬ್ಬದ ಕಾರ್ಯಕ್ರಮವು ದಿನಾಂಕ 10 ಸೆಪ್ಟೆಂಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ ‘ಚುಟಕ ಬ್ರಹ್ಮ’ ಎಂದೇ ಪ್ರಖ್ಯಾತರಾದ ದಿನಕರ ದೇಸಾಯಿಯವರು ಮಹತ್ವದ ಸಾಹಿತಿ ಮಾತ್ರವಲ್ಲದೆ, ಡಾ. ಶಿವರಾಮ ಕಾರಂತರು ಗುರುತಿಸಿರುವಂತೆ ಏಕವ್ಯಕ್ತಿ ಸೈನ್ಯವಾಗಿ ಉತ್ತರ ಕರ್ನಾಟಕದ ಜನರ ಏಳಿಗೆಗಾಗಿ ದುಡಿದ ಮಹಾನ್ ಧೀಮಂತ ನಾಯಕ. ಸರಳವಾಗಿ ಕಂಡರೂ ಗಹನವಾದ ಜೀವನ ದರ್ಶನವನ್ನು ನೀಡುವುದು ಅವರ ಚುಟುಕಗಳ ವಿಶೇಷ. ಶಾಲಾ ಶಿಕ್ಷಕನ ಮಗನಾಗಿ ಜನಿಸಿದ ದೇಸಾಯಿ ಮುಂದೆ ಬಡವರ ಪಾಲಿಗೆ ಬಂಧುವಾದರು. ಮನೆ, ಮಠ ಇಲ್ಲದೆ ತುತ್ತು ಕೂಳಿಗೂ ಕಷ್ಟಪಡುತ್ತಿದ್ದ ಜನರಿಗೆ ಆಸರೆಯಾದರು. ಪ್ರಸಿದ್ಧ ಬರಹಗಾರರಾದರು. ದಿನಕರರು 1936ರಲ್ಲಿ ಮುಂಬೈನ ಹಡಗು ಕಾರ್ಮಿಕರ ಸಂಘಟನೆಯ ನೇತೃತ್ವ ವಹಿಸಿದ್ದರು. ಅಂಕೋಲದಲ್ಲಿ ‘ಜನಸೇವಕ’ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದು, ಪ್ರಸಿದ್ಧ ಬರಹಗಾರರಾದ ಗೌರೀಶ್ ಕಾಯ್ಕಿಣಿ ಇವರು ಬಹಳ ವರ್ಷ…

Read More

ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ 58ನೇ ಶ್ರೀ ಗಣೇಶೋತ್ಸವ ಪ್ರಯುಕ್ತ ದಿನಾಂಕ 09 ಸೆಪ್ಟೆಂಬರ್ 2024ನೇ ಸೋಮವಾರ ಶ್ರೀ ದೇವಳದ ವಠಾರದಲ್ಲಿ ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸಮರ ಸೌಗಂಧಿಕಾ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ ಮತ್ತು ಭವ್ಯ ಶ್ರೀ ಕುಲ್ಕುಂದ, ಚೆಂಡೆ, ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್, ಜಯಪ್ರಕಾಶ್ ನಾಕೂರು ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್ (ಧರ್ಮರಾಯ), ಪ್ರೇಮಲತಾ ರಾವ್ (ವೇದವ್ಯಾಸ), ಶುಭಾ ಜೆ.ಸಿ. ಅಡಿಗ (ಭೀಮ), ಜಯಂತಿ ಹೆಬ್ಬಾರ್ (ಹನೂಮಂತ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ), ಹರಿಣಾಕ್ಷಿ ಜೆ. ಶೆಟ್ಟಿ (ಕುಬೇರ), ಶಾರದಾ ಅರಸ್ (ಅರ್ಜುನ), ಭಾರತಿ ರೈ ಅರಿಯಡ್ಕ (ವನಪಾಲಕ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಸಮಿತಿ ಸದಸ್ಯ ಅಶೋಕ್ ಕುಂಬ್ಳೆ ವಂದಿಸಿದರು. ರಂಗನಾಥ ರಾವ್ ಸಹಕರಿಸಿದರು. ಗಣೇಶೋತ್ಸವ ಸಮಿತಿಯ…

Read More

ಧಾರವಾಡ: ಗಿರಡ್ಡಿ ಗೋವಿಂದ ರಾಜ ಪ್ರತಿಷ್ಠಾನ ನೀಡುವ ಡಾ. ಗಿರಡ್ಡಿ ಗೋವಿಂದ ರಾಜ ವಿಮರ್ಶಾ ಪ್ರಶಸ್ತಿಗೆ ಪ್ರೊ. ರಾಜೇಂದ್ರ ಚೆನ್ನಿ ಇವರ ‘ಸಾಂಸ್ಕೃತಿಕ ರಾಜಕೀಯ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು ರೂಪಾಯಿ 25 ಸಾವಿರ ನಗದು ಬಹುಮಾನ, ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿಯನ್ನು ದಿನಾಂಕ 22 ಸೆಪ್ಟೆಂಬರ್ 2024ರಂದು ರಂಗಾಯಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.

Read More

ಹೂವಿನ ಹಡಗಲಿ : ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ.) ಹೂವಿನ ಹಡಗಲಿ ಇದರ ವತಿಯಿಂದ ‘ಗಾನ ಕೋಗಿಲೆ’ ರಾಷ್ಟ್ರಮಟ್ಟದ ಪ್ರಶಸ್ತಿಗೆ ಹಾಡುಗಳನ್ನು ಆಹ್ವಾನಿಸಲಾಗುತ್ತಿದೆ. 2025ರಲ್ಲಿ ನಡೆಯುವ 5ನೇ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಗಾನ ಕೋಗಿಲೆ ಪ್ರಶಸ್ತಿಗಾಗಿ ತಾವು ಹಾಡಿ ವೀಡಿಯೋ ಮಾಡಿದ ನಾಲ್ಕು ಹಾಡುಗಳನ್ನು ಕಳುಹಿಸಿ. 1. ಭಾವಗೀತೆ (ಕನ್ನಡ ಅಥವಾ ಹಿಂದಿ) 2. ಜಾನಪದ ಗೀತೆ (ಕನ್ನಡ ಅಥವಾ ಹಿಂದಿ) 3. ಚಲನಚಿತ್ರ ಗೀತೆ (ಕನ್ನಡ ಅಥವಾ ಹಿಂದಿ) 4. ರಂಗಗೀತೆ (ಕನ್ನಡ ಅಥವಾ ಹಿಂದಿ) ಈ ಮೇಲಿನಂತೆ ಹಾಡಿ ನಾಲ್ಕು ವೀಡಿಯೋಗಳನ್ನು 9902992912 ಈ ನಂಬರಿಗೆ ಕಳುಹಿಸಿ. ಆಡಿಯೋ ವೀಡಿಯೋ ಸ್ಪಷ್ಟವಾಗಿ ಇರಲಿ. ಯಾವುದೇ ವಯೋಮಾನದವರು ಇರಬಹುದು. ಕರೋಕೆ ಮತ್ತು ಸ್ವಂತವಾದ್ಯ ಬಳಸಬಹುದು. ನಾಲ್ಕು ಹಾಡುಗಳನ್ನು ಕಳುಹಿಸಲು ಕೊನೆಯ ದಿನಾಂಕ 30 ಅಕ್ಟೋಬರ್ 2024.

Read More

ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ), ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ (ರಿ.) ಮಂಗಳೂರು, ಅರೆಹೊಳೆ ಪ್ರತಿಷ್ಠಾನ ಮತ್ತು ಜೆ.ಸಿ.ಐ. ಮಂಗಳೂರು ಲಾಲ್ ಬಾಗ್ ಇವರ ಸಹಭಾಗಿತ್ವದಲ್ಲಿ ‘ರಾಷ್ಟ್ರೀಯ ಬಹುಭಾಷಾ ರಂಗೋತ್ಸವ -2024’ವನ್ನು ದಿನಾಂಕ 14-09-2024ರಿಂದ 17-09-2024ರವರೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇಲ್ಲಿ ಆಯೋಜಿಸಲಾಗಿದೆ. ದಿನಾಂಕ 14 ಸೆಪ್ಟೆಂಬರ್ 2024ರಂದು ಮೈಸೂರಿನ ಅನುಭೂತಿ ತಂಡದವರಿಂದ ‘ದೀಪಧಾರಿಣಿ’ ಕೊಂಕಣಿ ನಾಟಕ, ದಿನಾಂಕ 15 ಸೆಪ್ಟೆಂಬರ್ 2024ರಂದು ಉಡುಪಿಯ ನೃತ್ಯನಿಕೇತನ ಕೊಡವೂರು (ರಿ.) ಇವರಿಂದ ಕನ್ನಡ ನಾಟಕ ‘ನೃತ್ಯಗಾಥಾ’, ದಿನಾಂಕ 16 ಸೆಪ್ಟೆಂಬರ್ 2024ರಂದು ಪಾಂಡಿಚೇರಿಯ ಆದಿಶಕ್ತಿ ತಂಡದವರಿಂದ ‘ಉರ್ಮಿಳಾ’ ಇಂಗ್ಲೀಷ್ ನಾಟಕ ಮತ್ತು ದಿನಾಂಕ 17 ಸೆಪ್ಟೆಂಬರ್ 2024ರಂದು ಮೈಸೂರಿನ ನಿರ್ದಿಗಂತ ತಂಡದವರಿಂದ ‘ಮರ ಮತ್ತು ಮನುಷ್ಯ’ (ಪಪೆಟ್ ಶೋ) ಹಾಗೂ ‘ಬ್ಲಾಕ್ ಬಲೂನ್’ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.

Read More

ಹಂಗಾರಕಟ್ಟೆ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇವರ ಸಹಯೋಗದೊಂದಿಗೆ ಎರಡು ದಿನಗಳ ‘ಯಕ್ಷಗಾನ ಬಣ್ಣಗಾರಿಕೆ ಮತ್ತು ವೇಷಗಾರಿಕೆ ಕಾರ್ಯಾಗಾರ’ವನ್ನು ದಿನಾಂಕ 14-09-2024 ಮತ್ತು 15-09-2024ರಂದು ಬೆಳಗ್ಗೆ 10-00 ಗಂಟೆಗೆ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 14 ಸೆಪ್ಟೆಂಬರ್ 2024ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಮಾಹೆಯ ಸಹ ಕುಲಪತಿಗಳಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಶ್ರೀ ಗಣೇಶ ಚೇರ್ಕಾಡಿ, ಶ್ರೀ ಗಣೇಶ ಜನ್ನಾಡಿ, ಶ್ರೀ ಮಿಥುನ್ ಬ್ರಹ್ಮಾವರ, ಶ್ರೀ ವೈಕುಂಠ ಹೇರ್ಳೆ, ಶ್ರೀ ಅಶೋಕ್ ಆಚಾರ್, ಶ್ರೀ ಕೂರಾಡಿ ರಾಮ ಬಾಯರಿ, ಶ್ರೀಕಾಂತ ವಡ್ಡರ್ಸ್, ಶ್ರೀ ಸೀತಾರಾಮ ಸೋಮಯಾಜಿ ಶ್ರೀ ವಿಭವನ್ ಗುಂಡ್ಕಿ ಇವರುಗಳು ಕಾರ್ಯಾಗಾರದಲ್ಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆ ಮತ್ತು ವೇಷಗಾರಿಕೆಯನ್ನು ಕಲಿಸಿಕೊಡುವ ಸಂಪನ್ಮೂಲ ವ್ಯಕ್ತಿಗಳು. ದಿನಾಂಕ 15 ಸೆಪ್ಟೆಂಬರ್…

Read More

ಬೆಂಗಳೂರು: ಸಾಹಿತಿ ಎಂ. ವಿ. ಸೀತಾರಾಮಯ್ಯ(ರಾಘವ) ಮತ್ತು ಪೂರ್ಣಚಂದ್ರ ತೇಜಸ್ವಿ ಇವರ ಜನ್ಮದಿನಾಚಾರಣೆಯನ್ನು ದಿನಾಂಕ 09 ಸೆಪ್ಟೆಂಬರ್ 2024 ರಂದು ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿ “ಕನ್ನಡ ಸಾಹಿತ್ಯಕ್ಕೆ ಎಂ. ವಿ. ಸೀ. ಭದ್ರ ಬುನಾದಿ ಹಾಕಿದರೆ ತೇಜಸ್ವಿ ಘನತೆಯನ್ನು ನೀಡಿದರು. ತೇಜಸ್ವಿಯವರು ಕಥೆಗಾರರಾಗಿ ಪಡೆದ ಪ್ರಸಿದ್ಧಿಯ ಜೊತೆಗೆ, ಕೃಷಿ ಕ್ಷೇತ್ರದಲ್ಲಿ ಕಾಲಿಟ್ಟು ಪರಿಸರ ಜ್ಞಾನದ ಬಗ್ಗೆ ಅನನ್ಯ ಕಾಳಜಿ ತೋರಿದವರು. ಕನ್ನಡದಲ್ಲಿ ಬಿ. ಎ. ಆನರ್ಸ್ ಮತ್ತು ಎಂ. ಎ. ಪದವಿಗಳನ್ನು ಪಡೆದ ನಂತರ ಸ್ವತಂತ್ರ ಪ್ರವೃತ್ತಿಯ ಅವರು ಅಧ್ಯಾಪಕರಾಗಲು ಇಚ್ಛಿಸದೆ ಚಿಕ್ಕಮಗಳೂರಿನ ಮೂಡಿಗೆರೆಯ ಪರಿಸರದ ಕೃಷಿ ತೋಟದಲ್ಲಿ ಆಸಕ್ತಿ ತಳೆದು ನೆಲೆಸಿದರು.‘ಸ್ವಗತ ಲಹರಿ ಮತ್ತು ಇತರ ಕವನಗಳು’ ಕವಿತೆಗಳ ಸಂಗ್ರಹವಾದರೆ, ‘ಹುಲಿಯೂರಿನ ಸರಹದ್ದು’, ‘ಅಬಚೂರಿನ ಪೋಸ್ಟಾಫೀಸು’, ‘ಕಿರಗೂರಿನ ಗಯ್ಯಾಳಿಗಳು’,  ‘ಏರೋಪ್ಲೇನ್ ಚಿಟ್ಟೆ’,  ‘ಮಿಸ್ಸಿಂಗ್ ಲಿಂಕ್’,  ‘ಮಿಲೇನಿಯಂ ಸರಣಿ’,  ‘ಪರಿಸರದ ಕತೆ’ ಇವು…

Read More

ಧಾರವಾಡ : ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ, ಸಂತೋಷ ಲಾಡ ಫೌಂಡೇಶನ್ ಹಾಗೂ ಶರ್ವಿಲ್ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಯುವಲೇಖಕ ಶ್ರೀ ಕರಣ್ ಲಾಡ ಇವರ ‘ಗ್ಲಿಚ್ ಇನ್ ದ ಸಿಮುಲೇಶನ್’ ಗ್ರಂಥದ ಕನ್ನಡ ಅನುವಾದ ‘ಪ್ರತ್ಯನುಕರಣೆಯ ನ್ಯೂನತೆಗಳು’ ಎಂಬ ಕೃತಿಯ ಬಿಡುಗಡೆ ಸಮಾರಂಭವನ್ನು ದಿನಾಂಕ 11 ಸೆಪ್ಟೆಂಬರ್ 2024ರ ಬುಧವಾರ ಬೆಳಿಗ್ಗೆ 11-00 ಗಂಟೆಗೆ ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದ ಆವರಣದಲ್ಲಿರುವ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ದಿವ್ಯಸನ್ನಿಧಾನವನ್ನು ಪರಮಪೂಜ್ಯ ಶ್ರೀ ತೋಂಟದ ನಿಜಗುಣಪ್ರಭು ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು, ಪುಸ್ತಕವನ್ನು ಡಾ. ವೀರಣ್ಣ ರಾಜೂರ ಇವರು ಬಿಡುಗಡೆಗೊಳಿಸಲಿದ್ದಾರೆ. ಪುಸ್ತಕ ಪರಿಚಯವನ್ನು ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಪಿ. ರಮೇಶ ಇವರು ನಿರ್ವಹಿಸಲಿದ್ದು, ಮೂಲ ಲೇಖಕ ಶ್ರೀ ಕರಣ್ ಲಾಡ ಇವರೊಂದಿಗೆ ಅನುವಾದಕರಾದ ಡಾ. ವಿನಾಯಕ ನಾಯಕ ಮತ್ತು ಡಾ. ಲೋಹಿತ ನಾಯ್ಕರ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂತೋಷ ಲಾಡ ಫೌಂಡೇಶನ್ ಸಂಸ್ಥಾಪಕರಾದ ಮಾನ್ಯಶ್ರೀ ಸಂತೋಷ ಲಾಡ ವಹಿಸಿಕೊಳ್ಳಲಿದ್ದಾರೆ.…

Read More