Author: roovari

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಗಮಕಕಲಾ ಪರಿಷತ್ತು ಹಮ್ಮಿಕೊಂಡಿರುವ ಮನೆ ಮನೆ ಗಮಕ ಕಾರ್ಯಕ್ರಮದಲ್ಲಿ ಮಿಥುನ ಮಾಸದ ಗಮಕ ವಾಚನ- ವ್ಯಾಖ್ಯಾನವು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸಂಕಷ್ಟ ಚತುರ್ಥಿ ಪ್ರಯುಕ್ತ 14ಜುಲೈ 2025ರಂದು ರವೀಂದ್ರ ಶೆಟ್ಟಿ ಬಳಂಜ ಇವರ ಪ್ರಾಯೋಜಕತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಕವಿಯು ರಚಿಸಿದ ಗದುಗಿನ ಭಾರತದ ಸಭಾ ಪರ್ವದಲ್ಲಿನ ‘ಶಿಶುಪಾಲ ಮೋಕ್ಷ’ ಎಂಬ ಕಾವ್ಯ ಭಾಗವನ್ನು ಪ್ರಸ್ತುತಪಡಿಸಲಾಯಿತು. ವಾಚನದಲ್ಲಿ ಗಮಕಿ ಮಧೂರು ವಿಷ್ಣು ಪ್ರಸಾದ ಕಲ್ಲುರಾಯ ಗೇರುಕಟ್ಟೆ ಮತ್ತು ವ್ಯಾಖ್ಯಾನದಲ್ಲಿ ಎಸ್‌. ಡಿ. ಎಮ್. ಕಾಲೇಜ್ ಉಜಿರೆ ಇಲ್ಲಿನ ಪ್ರಾಧ್ಯಾಪಕರಾದ ಡಾ. ದಿವಾ ಕೊಕ್ಕಡ ಪಾಲ್ಗೊಂಡು ಸಹಕರಿಸಿದರು. ಪರಿಷತ್ತಿನ ಅಧ್ಯಕ್ಷರಾದ ರಾಮಕೃಷ್ಣ ಭಟ್ ಉಜಿರೆ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮೇಧಾ ಅಶೋಕ ಭಟ್ ವಂದಿಸಿದರು. ಎಸ್. ಡಿ. ಎಮ್. ವಸತಿ ಪ. ಪೂ. ಕಾಲೇಜಿನ ಪ್ರಾಚಾರ್ಯ ಸುನಿಲ್ ಪಂಡಿತ್, ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಧರ ಭಟ್, ಸುವರ್ಣಕುಮಾರಿ ಕಲ್ಲೂರಾಯ, ಹಿರಿಯರಾದ ಗುರುನಾಥ ಪ್ರಭು, ರಮೇಶ್…

Read More

ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಂಪಾದಕತ್ವದ ಅಮೃತ ಪ್ರಕಾಶ ಪತ್ರಿಕೆಯ 12ನೇಯ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ದಿನಾಂಕ 21 ಜುಲೈ 2025ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ಮಾತನಾಡಿ “ಪತ್ರಿಕೆ ನಡೆಸುವುದು ಸುಲಭ ಕೆಲಸವಲ್ಲ ಅದಕೆ ಕಠಿಣ ಪರಿಶ್ರಮ ಅಗತ್ಯ. ಪತ್ರಿಕೆಯ ಜೊತೆಗೆ ಸಾಹಿತ್ಯಪರ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ” ಎಂದು ಅಮೃತ ಪ್ರಕಾಶ ಪತ್ರಿಕೆಗೆ ಶುಭ ಹಾರೈಸಿದರು. ಅಮೃತ ಪ್ರಕಾಶ ಪತ್ರಿಕೆಯ 12ನೇಯ ವರುಷದ ವಿಶೇಷ ಸಂಚಿಕೆ ಬಿಡುಗಡೆಯನ್ನು ಹೊಸದಿಗಂತ ಪತ್ರಿಕೆಯ ಸಂಪಾದಕರು ಹಾಗೂ ಮುಖ್ಯ ಕಾರ್ಯನಿರ್ವಾಧಿಕಾರಿ ಪಿ.ಎಸ್. ಪ್ರಕಾಶ್ ರವರು ಬಿಡುಗಡೆ ಮಾಡಿ “ಉತ್ತಮ ಗುಣಮಟ್ಟದ ಪತ್ರಿಕೆಯನ್ನು ನಡೆಸುತ್ತಾ ಸಮಾಜಕ್ಕೆ ತನ್ನಿ0ದ ಆಗುವ ಕೊಡುಗೆ ನೀಡಿತಾ ಬಂದಿದ್ದಾರೆ. ಇವರ ಕಾರ್ಯ ಶ್ಲಾಘನೀಯ” ಎಂದರು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ…

Read More

ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘ ನೀಡುವ ಸಿರಿಗನ್ನಡಂ ಗೆಲ್ಲೆ ರಾ. ಹ. ದೇಶಪಾಂಡೆ ಪ್ರಶಸ್ತಿಗೆ ಹಾವೇರಿಯ ‘ಗೆಳೆಯರ ಬಳಗ’ ಹಾಗೂ ಕನ್ನಡ ಪ್ರಪಂಚ ಪಾಟೀಲ ಪುಟ್ಟಪ್ಪ ಪ್ರಶಸ್ತಿಗೆ ಪತ್ರಕರ್ತ ಶಾ.ಮಂ. ಕೃಷ್ಣರಾಯ ಆಯ್ಕೆಯಾಗಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ ರೂಪಾಯಿ 50 ಸಾವಿರ ನಗದು, ಫಲಕ ಒಳಗೊಂಡಿವೆ. ಕನ್ನಡ ಪ್ರಪಂಚ ಪಾಟೀಲ ಪುಟ್ಟಪ್ಪ ಪ್ರಶಸ್ತಿಯನ್ನು 26 ಜುಲೈ 2025ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

Read More

ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ವತಿಯಿಂದ ಆಟಿ ಕಾರ್ಯಕ್ರಮವು ದಿನಾಂಕ 27 ಜುಲೈ 2025ನೇ ರವಿವಾರ ಬೆಳಿಗ್ಗೆ 10-30 ಗಂಟೆಗೆ ಬಲ್ಲಾಳ್ ಭಾಗ್ ನಲ್ಲಿರುವ ‘ಪತ್ತುಮುಡಿ’ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀಮತಿ ಸುಮಲತಾ ಎನ್. ಸುವರ್ಣ ಇವರು ಉದ್ಘಾಟಿಸಿದ್ದು, ಮಂಗಳೂರು ದಕ್ಷಿಣ ವಿಧಾನ ಸಭಾ ಶಾಸಕ ವೇದವ್ಯಾಸ ಕಾಮತರು ‘ಬಂಗಾರ ಪಿಂಗಾರ’ ಎಂಬ ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸಲಿದ್ದಾರೆ. ತುಳು ಕೂಟ (ರಿ.) ಕುಡ್ಲ ಇದರ ಅಧ್ಯಕ್ಷರಾದ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಇವರು ಅಧ್ಯಕ್ಷತೆ ವಹಿಸಲಿದ್ದು, ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟರು, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಪದ್ಮರಾಜ್ ಆರ್., ಸೂರ್ಯನಾರಾಯಣ ರಾವ್ ಪತ್ತುಮುಡಿ, ಜಾನಪದ ವಿದ್ಯಾಂಸ ಮುದ್ದು ಮೂಡುಬೆಳ್ಳೆಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಈರ್ವರು ಪ್ರತಿಭೆಗಳನ್ನು ಗೌರವಿಸಲಾಗುತ್ತದೆ ಎಂದು ಕುಡ್ಲ ತುಳುಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಹಾಗೂ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ತಿಳಿಸಿದ್ದಾರೆ.

Read More

ಮಂಗಳೂರು : ಬಿಜೈಯಲ್ಲಿರುವ ನೃತ್ಯಾಂಗನ್ ಸಂಸ್ಥೆಯು ದಿನಾಂಕ 27 ಜುಲೈ 2025ರಂದು ಸಾಯಂಕಾಲ 5-30 ಗಂಟೆಗೆ ಮಂಗಳೂರಿನ ಡೊಂಗರಕೇರಿ ಕೆನರಾ ಸ್ಕೂಲ್ ಕ್ಯಾಂಪಸ್ ಭುವನೇಂದ್ರ ಸಭಾಂಗಣದಲ್ಲಿ ‘ಅಂಕುರಾ 2025’ ಭರತನಾಟ್ಯ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವನ್ನು ಪುತ್ತೂರಿನ ನಾಟ್ಯರಂಗದ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರು ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಲಿವರು. ಅಂಕುರಾ 2025ರ ಪ್ರಯುಕ್ತ ಉದಯೋನ್ಮುಖ ಕಲಾವಿದರಾದ ತನ್ಮಯಿ ಚಂದ್ರಶೇಖರ್ (ಬೆಂಗಳೂರು), ನೀತಾರಾ ನಾಯರ್ (ದುಬೈ), ಕೃಷ್ಣಭದ್ರಾ ನಂಬೂತಿರಿ (ಮುಂಬೈ) ಇವರು ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಪಡಿಸುವರು. ಅನುಷ್ಕಾ ಶೆಟ್ಟಿ ಹಾಗು ಶರ್ವಾಣಿ ಭಟ್ (ಮಂಗಳೂರು) ಇವರು ಯುಗಳ ಭರತನಾಟ್ಯ ಪ್ರಸ್ತುತಪಡಿಸುವರು.

Read More

ಉಡುಪಿ : ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಉಡುಪಿ, ಯಕ್ಷಗಾನ ಕೇಂದ್ರ ಇಂದ್ರಾಳಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಮತ್ತು ಉಜ್ವಲ್ ಡೆವಲಪರ್ಸ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 19 ಜುಲೈ 2025ರಂದು ಉಡುಪಿ ಅಜ್ಜರಕಾಡು ಪುರಭವನದಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಸ್ಮಾರಕ ‘ಯಕ್ಷ ಸಾಧಕ’ ಪ್ರಶಸ್ತಿಯನ್ನು ಪ್ರಸಿದ್ಧ ಯಕ್ಷಗಾನ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಇವರಿಗೆ ಪ್ರದಾನಿಸಿ ಮಾತನಾಡಿದ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ “ಯಕ್ಷಗಾನ ಕಲೆಯ ಬಗ್ಗೆ ಯುವ ಜನಾಂಗಕ್ಕೆ ಆಸಕ್ತಿ ಮೂಡಿಸುವ ಮೂಲಕ ಕಲೆಯನ್ನು ಉಳಿಸಿ, ಬೆಳೆಸಬೇಕಾದ ಅಗತ್ಯವಿದೆ. ಗುರು ವೀರಭದ್ರ ನಾಯಕ್ ಇವರು ಯಕ್ಷಗಾನ ಕ್ಷೇತ್ರದ ದೊಡ್ಡ ಸಾಧಕ, ಶ್ರೇಷ್ಟ ಕಲಾವಿದೆ. ಅವರ ಹೆಸರಿನ ಈ ಪ್ರಶಸ್ತಿಯನ್ನು ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಲವಳ್ಳಿ ವಿದ್ಯಾಧರ ರಾವ್ ಇವರಿಗೆ ನೀಡುತ್ತಿರುವುದು ಬಹಳ…

Read More

ತೀರ್ಥಹಳ್ಳಿ : ಅನ್ನಪೂರ್ಣ ಪ್ರಕಾಶನ ಸಿರಿಗೇರಿ ಇವರ ಆಶ್ರಯದಲ್ಲಿ ಕ.ಸಾ.ಪ. ತೀರ್ಥಹಳ್ಳಿ ತಾಲೂಕು ಘಟಕ ಸಹಯೋಗದಲ್ಲಿ ದಿನಾಂಕ 20 ಜುಲೈ 2025ರಂದು ತೀರ್ಥಹಳ್ಳಿಯ ಬಾಳೇಬೈಲಿನಲ್ಲಿರುವ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಶ್ರೀಮತಿ ವೀಣಾ ಆರ್. ಕಾರಂತ್ ಇವರು ಬರೆದಿರುವ ‘ಕಪಟರು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಮಾರಂಭದಲ್ಲಿ ತೀರ್ಥಹಳ್ಳಿ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಟಿ.ಕೆ. ರಮೇಶ್ ಶೆಟ್ಟಿ, ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಚಂದ್ರಹಾಸ ಹಿರೇಮಳಲಿ, ಲೇಖಕ ಪ್ರಕಾಶಕ ಸಿರಿಗೇರಿ ಯರಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಸಯ್ಯದ್ ಮಲೀಕ್ ಆರಂಭ ಗೀತೆ ಹಾಡಿದರು. ಯರಿಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ನಿರಂಜನ ಕಾರ್ಯಕ್ರಮ ನಿರೂಪಿಸಿ, ಲೇಖಕ ಜಿ.ಕೆ. ಸತೀಶ್ ವಂದಿಸಿದರು.

Read More

ಮೂಡಬಿದೆರೆ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಐ. ಸಿ. ವೈ. ಎಮ್. ಹೊಸ್ಪೆಟ್‌ ಘಟಕ ಇವರ ಸಹಯೋಗದಲ್ಲಿ ಆಯೋಜಿಸಿದ ಕೊಂಕಣಿ ಸಾಹಿತ್ಯ ಕಾರ್ಯಗಾರವು ದಿನಾಂಕ 20 ಜುಲೈ 2025ರಂದು ಮೂಡುಬಿದರೆಯ ಹೊಸ್ಪೆಟ್‌ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಗಾರದ ಆರಂಭದಲ್ಲಿ ಹೊಸ್ಪೆಟ್‌ ಚರ್ಚ್ ಇದರ ಧರ್ಮಗುರುಗಳಾದ ಅ. ವಂ. ಗ್ರೆಗೊರಿ ಡಿ’ಸೋಜ ಮಾತನಾಡಿ “ಅಕಾಡೆಮಿಯು ಇಂತಹ ಕಾರ್ಯಗಾರವನ್ನು ಹಮ್ಮಿಕೊಳ್ಳುವ ಮೂಲಕ ಹೊಸ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದೆ. ಭಾಗವಹಿಸಿದವರಲ್ಲಿ ಸಾಹಿತಿಗಳು ಹುಟ್ಟಿಕೊಳ್ಳಲಿ” ಎಂದು ಹೇಳಿ ಶುಭ ಹಾರೈಸಿದರು. ಕಾರ್ಯಗಾರದಲ್ಲಿ ಶ್ರೀಮತಿ ಫೆಲ್ಸಿ ಲೋಬೊ ದೆರೆಬೈಲ್‌ ಇವರು ಕವನ ಬರೆಯುವ ಬಗ್ಗೆ ತರಬೇತಿ ನೀಡಿದರು. ಕಾರ್ಯಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳ ತಂಡಗಳನ್ನು ಮಾಡಿ ಕವನವನ್ನು ರಚಿಸಲು ಅವಕಾಶ ಮಾಡಿಕೊಟ್ಟರು. ರೊನಿ ಕ್ರಾಸ್ತಾ ಕೆಲರಾಯ್‌ ಹಾಗೂ ವಿನೋದ್‌ ಪಿಂಟೊ ತಾಕೊಡೆ ಸಹಾಯ ಮಾಡಿದರು. ಕಾರ್ಯಗಾರದ ಶಿಬಿರಾರ್ಥಿಗಳು ಹುಮ್ಮಸ್ಸಿನಿಂದ, ಸುಂದರವಾದ ಕವಿತೆಗಳನ್ನು ರಚಿಸಿ, ಕಾರ್ಯಗಾರದಲ್ಲಿ ಪ್ರಸ್ತುತಪಡಿಸಿದರು. ಶ್ರೀ ರೊನಿ ಕ್ರಾಸ್ತಾ, ಕೆಲರಾಯ್‌ ಇವರು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಬಗ್ಗೆ,…

Read More

ಬಂಟ್ವಾಳ : ಏರ್ಯ ಆಳ್ವ ಫೌಂಡೇಶನ್’ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ‘ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ’ದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಮಿನಿಕಥೆ’ ರಚನಾ ಸ್ಪರ್ಧೆ ಹಾಗೂ ಕವನ ಸ್ಪರ್ಧೆ ಆಯೋಜಿಸಲಾಗಿದೆ. ‘ಮಿನಿಕಥೆ’ 100 ಪದಗಳ ಒಳಗಿನ ಸ್ವರಚಿತ ಕಥೆಯಾಗಿರಬೇಕು. ಕವನ ಸ್ಪರ್ಧೆಯು ಮೂರು ವಿಭಾಗದಲ್ಲಿ ನಡೆಯಲಿದ್ದು, ಪ್ರಾಥಮಿಕ ವಿಭಾಗದಲ್ಲಿ ‘ಬಾಲ್ಯ’ , ಪ್ರೌಢ ವಿಭಾಗದಲ್ಲಿ ‘ಪ್ರಕೃತಿ’ ಹಾಗೂ ಕಾಲೇಜು ವಿಭಾಗದಲ್ಲಿ ಭಾಗವಹಿಸುವ ಸ್ಪರ್ಧಿಗಳು ‘ಕಾಮನ ಬಿಲ್ಲು’ ವಿಷಯದಲ್ಲಿ ಕವನಗಳನ್ನು ರಚಿಸಿ ದಿನಾಂಕ 24 ಜುಲೈ 2025ರ ಒಳಗಾಗಿ ಶ್ರೀ ದಾಮೋದರ ಮಸ್ತರ್ ಏರ್ಯ ಇವರ ಮೊಬೈಲ್ – 9449645537 ಸಂಖ್ಯೆಗೆ ವಾಟ್ಸ್ಆಪ್ ಸಂದೇಶ ಮುಖಾಂತರ ಕಳುಹಿಸಿಕೊಡಬಹುದು.

Read More

ಉಡುಪಿ  : ಯಕ್ಷಗಾನ ಗುರು, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾರಂಗ ವಡ್ಡರ್ಸೆ ಇವರು ದಿನಾಂಕ 10 ಜುಲೈ 2025ರ ಗುರುಪೂರ್ಣಿಮೆಯಂದು ಗುರುವಂದನೆಯ ಮೂಲಕ ಗೌರವಿಸಿದರು. ವಡ್ಡರ್ಸೆ ಕಲಾರಂಗ ದ ನೂತನ ಅಧ್ಯಕ್ಷರಾದ ಗುರುಪ್ರಸಾದ ಐತಾಳ್, ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಇವರು ಗುರುಪೂರ್ಣಿಮೆಯ ಈ ಗುರುವಂದನೆಯ ಕಾರ್ಯಕ್ರಮ ಸಂಯೋಜಿಸಿ ಮೊಗೆಬೆಟ್ಟು ಅವರ ಸ್ವಗೃಹದಲ್ಲಿ ತಮ್ಮ ತಂಡದ ಮೂಲಕ ಗೌರವಿಸಿದರು. ವಡ್ಡರ್ಸೆ ಕಲಾರಂಗದ ನಿಕಟಪೂರ್ವ ಅಧ್ಯಕ್ಷ ಸಚಿನ್ ಶೆಟ್ಟಿ ಹಾಗೂ ಶ್ರೀಕಾಂತ್ ಭಟ್, ಸತೀಶ್ ವಡ್ಡರ್ಸೆ, ಮೋಹಿತ್, ಶಿವರಂಜನ್ ಮೊದಲಾದವರು ಉಪಸ್ಥಿತರಿದ್ದರು.

Read More